Article Image

ಮಹಾಮಸ್ತಕಾಭಿಷೇಕದ 6ನೇ ದಿನ - ಫೆ. 27 : ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು

Article Image

ಮಹಾಮಸ್ತಕಾಭಿಷೇಕದ 6ನೇ ದಿನ - ಫೆ. 27 : ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು

ವೇಣೂರು ಭ| ಶ್ರೀ ಬಾಹುಬಲಿಯ ಮಹಾಮಸ್ತಕಾಭಿಷೇಕದ 6 ದಿನದ ಸೇವಾಕೃರ್ತಗಳಾದ ಎಂ. ಅನಂತ ಕುಮಾರ್ ಸಹೋದರರು ಮತ್ತು ಸಹೋದರಿಯರು ಹಾಗೂ ಕೆ. ಹೇಮರಾಜ್ ಜೈನ್ ಬೆಳ್ಳಿಬೀಡು ಅವರಿಂದ ಬೆಳಿಗ್ಗೆ 9.30ಕ್ಕೆ ಕಲ್ಲುಬಸದಿಯ ಪಾಂಡುಕಶಿಲೆಯಲ್ಲಿ ಜನ್ಮಾಭಿಷೇಕ ಕಲ್ಯಾಣ ನೆರವೇರಲಿದ್ದು, ನಿತ್ಯವಿಧಿ ಸಹಿತ ಬೆಳಗ್ಗೆ 9.35ರ ಮೇಷ ಲಗ್ನದಲ್ಲಿ ಶ್ರೀ ಜಿನ ಬಾಲಕನ ಜನ್ಮ ಕಲ್ಯಾಣ, ಅಷ್ಟದಿಕ್ಷು ಧಾಮ ಸಂಪ್ರೋಕ್ಷಣೆ, ಚತುರ್ದಿಕ್ಷು ಹೋಮ, ಪಾಂಡುಕಾಶಿಲೋಪರಿ ಜನ್ಮಾಭಿಷೇಕ ಕಲ್ಯಾಣ, ಅಗ್ರೋದಕ ಮೆರವಣಿಗೆ ನಡೆದು ಸಂಜೆ ಗಂಟೆ 6ರಿಂದ ನಾಮಕರಣ, ಬಾಲಲೀಲೋತ್ಸವದ ಬಳಿಕ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ 216 ಕಲಶಗಳಿಂದ ಮಹಾಮಸ್ತಕಾಭಿಷೇಕ, ಮಹಾಪೂಜೆ, ಮಹಾಮಂಗಳಾರತಿ ಜರಗಲಿದೆ. ಭರತೇಶ ಸಮುದಾಯ ಭವನದಲ್ಲಿ ಅಪರಾಹ್ನ 3.00 ಗಂಟೆಗೆ ಯುಗಳ ಮುನಿಶ್ರೀಗಳಾದ ಪ.ಪೂ. 108 ಶ್ರೀ ಅಮೋಘಕೀರ್ತಿ ಮಹಾರಾಜರು ಮತ್ತು ಪ.ಪೂ. 108 ಶ್ರೀ ಅಮರಕೀರ್ತಿ ಮಹಾರಾಜರುಗಳ ಪಾವನ ಸಾನ್ನಿಧ್ಯದಲ್ಲಿ ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಮಹಾಸ್ವಾಮೀಜಿಗಳವರು, ಕಾರ್ಕಳ ಜೈನ ಮಠದ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು, ಶ್ರೀ ಕ್ಷೇತ್ರ ನಾಂದಣಿ ಜೈನ ಮಠದ ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಧಾರ್ಮಿಕ ಸಭೆ ಜರಗಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಮುಖ್ಯಮಂತ್ರಿ ಡಾ.ಎಂ. ವೀರಪ್ಪ ಮೊಯಿಲಿರವರು ವಹಿಸಲಿರುವರು. ಕಾರ್ಯಕ್ರಮದಲ್ಲಿ ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು, ಮಾಜಿ ಸಚಿವ ರಮಾನಾಥ ರೈ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ್ ಎಂ., ಮೂಡುಬಿದಿರೆ ಎಂ.ಸಿ.ಎಸ್. ಬ್ಯಾಂಕ್‌ನ ಸಿ.ಇ.ಒ., ಚಂದ್ರಶೇಖರ ಉಪಸ್ಥಿತರಿರುವರು. ಧಾರವಾಡದ ವಿಶ್ರಾಂತ ಕುಲಸಚಿವರಾದ ಡಾ. ಶಾಂತಿನಾಥ ದಿಬ್ಬದ ಅವರು "ಆದಿಪುರಾಣದಲ್ಲಿ ಜೀವನ ದರ್ಶನ" ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿರುವರು. ಮುಖ್ಯ ವೇದಿಕೆಯಲ್ಲಿ ರಾತ್ರಿ 8.00ರಿಂದ ಧಾರವಾಡದ ವಿಶ್ವಾಂಬರಿ ನೃತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ (ರಿ) ಇವರಿಂದ ವಿರಾಗಿ ಬಾಹುಬಲಿ ನೃತ್ಯ ರೂಪಕ, ವಸ್ತು ಪ್ರದರ್ಶನ ವೇದಿಕೆಯಲ್ಲಿ ರಾತ್ರಿ 7.00ರಿಂದ ಶ್ರುತಿ ಕಾಂತಾಜೆ ಮತ್ತು ಬಳಗದವರಿಂದ ಭಕ್ತಿ ಸಂಗೀತ ಬಳಿಕ ರಾತ್ರಿ 8.30ರಿಂದ ವೇಣೂರು ಐಸಿರಿ ಕಲಾವಿದರು ಇವರಿಂದ "ಮುತ್ತು ಮನಿಪುಜೆ" ತುಳು ಹಾಸ್ಯಮಯ ನಾಟಕ ನಡೆಯಲಿದೆ.

ಫೆ. 25 : ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ನಡೆದ 4ನೇ ದಿನದ ಮಹಾಮಸ್ತಕಾಭಿಷೇಕ

Article Image

ಫೆ. 25 : ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ನಡೆದ 4ನೇ ದಿನದ ಮಹಾಮಸ್ತಕಾಭಿಷೇಕ

ವೇಣೂರು ಭ| ಶ್ರೀ ಬಾಹುಬಲಿಯ ಮಹಾಮಸ್ತಕಾಭಿಷೇಕದ 4 ದಿನವಾದ ಫೆ. 25ರಂದು ಬೆಳಿಗ್ಗೆ ಯುಗಳ ಮುನಿ ಮಹಾರಾಜರ ದೀಕ್ಷಾ ಮಹೋತ್ಸವದ ರಜತ ಸಂಭ್ರಮದ ಪ್ರಯುಕ್ತ ಬೆಳಿಗ್ಗೆ 108 ಕಲಶಗಳಿಂದ ಸ್ವಾಮಿಗೆ ಮಹಾಮಸ್ತಕಾಭಿಷೇಕ ಜರಗಿತು. ಈ ಮಹಾಮಸ್ತಕಾಭಿಷೇಕವನ್ನು ವೀಕ್ಷಿಸಲು ಭಕ್ತಾದಿಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. 4ನೇ ದಿನದ ಸೇವಾಕರ್ತರಾದ ಪೆರಿಂಜೆ ಪಡ್ಯೋಡಿಗುತ್ತು ಜೀವಂಧರ ಕುಮಾರ್‌, ಪತ್ನಿ ಸುಲೋಚನ ಮತ್ತು ಮಕ್ಕಳು ಹಾಗೂ ಮನೆಯವರ ನೇತೃತ್ವದಲ್ಲಿ ಬೆಳಿಗ್ಗೆ ಪಂಚ ಕುಂಭ ವಿನ್ಯಾಸಯುಕ್ತ ಗ್ರಹಯಜ್ಞ ವಿಧಾನ, ಜಲಾಗ್ನಿ ಹೋಮ, ಬೃಹತ್‌ ಶಾಂತಿ ಯಂತ್ರಾರಾಧನೆ, ಅಗ್ರೋದಕ ಮೆರವಣಿಗೆ, ಸಂಜೆ ಭ| ಬಾಹುಬಲಿ ಸ್ವಾಮಿಗೆ 108 ಕಲಶಗಳಿಂದ ಮಹಾಮಸ್ತಕಾಭಿಷೇಕ, ಮಹಾಪೂಜೆ, ಮಹಾಮಂಗಳಾರತಿ ನೆರವೇರಿತು. ಹೀಗೆ 4ನೇ ದಿನ ಹಗಲು ಮತ್ತು ರಾತ್ರಿಗಳಲ್ಲಿ ನಡೆದ ಮಹಾಮಸ್ತಕಾಭಿಷೇಕಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸಾಕ್ಷಿಯಾದರು.

ಮಹಾಮಸ್ತಕಾಭಿಷೇಕದ 5ನೇ ದಿನ - ಫೆ. 26 : ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು

Article Image

ಮಹಾಮಸ್ತಕಾಭಿಷೇಕದ 5ನೇ ದಿನ - ಫೆ. 26 : ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು

ವೇಣೂರು ಭ| ಶ್ರೀ ಬಾಹುಬಲಿಯ ಮಹಾಮಸ್ತಕಾಭಿಷೇಕದ 5 ದಿನದ ಸೇವಾಕರ್ತರಾದ ಮೂಡುಬಿದಿರೆ ಎಕ್ಸಲೆಂಟ್‌ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್‌ ಜೈನ್‌ ಮತ್ತು ಕಾರ್ಯದರ್ಶಿ ರಶ್ಮಿತಾ ಜೈನ್‌ ಹಾಗೂ ಕುಟುಂಬಸ್ಥರ ವತಿಯಿಂದ ಬೃಹತ್‌ ಯಾಗಮಂಡಲ ಯಂತ್ರಾರಾಧನೆ, ಮಂಟಪ ಪ್ರತಿಷ್ಠೆ, ವೇದಿ ಪ್ರತಿಷ್ಠೆ ಬಳಿಕ ಅಗ್ರೋದಕ ಮೆರವಣಿಗೆ, ಸಂಜೆ ಜಲಯಾತ್ರಾ ಮಹೋತ್ಸವ, ಗರ್ಭಾವತರಣಾ ಕಲ್ಯಾಣ , ರಾತ್ರಿ ಭಗವಾನ್‌ ಬಾಹುಬಲಿ ಸ್ವಾಮಿಗೆ 216 ಕಲಶಗಳಿಂದ ಮಹಾಮಸ್ತಕಾಭಿಷೇಕ, ಮಹಾಪೂಜೆ, ಮಹಾಮಂಗಳಾರತಿ ಜರಗಲಿದೆ. ಭರತೇಶ ಸಮುದಾಯ ಭವನದ ಮುಖ್ಯವೇದಿಕೆಯಲ್ಲಿ ಬೆಳಿಗ್ಗೆ ವೇಣೂರು, ನಾರಾವಿ, ಬೆಳುವಾಯಿ ಜೈನ್‌ ಮಿಲನ್‌ ಸದಸ್ಯರಿಂದ ಜಿನ ಭಜನೆ ನಡೆಯಲಿದ್ದು, ಅಪರಾಹ್ನ ಯುಗಳ ಮುನಿಗಳಾದ ಅಮೋಘಕೀರ್ತಿ ಹಾಗೂ ಅಮರಕೀರ್ತಿ ಮಹಾರಾಜರು, ಮೂಡುಬಿದಿರೆಯ ಡಾ| ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಮಹಾಸ್ವಾಮೀಜಿಗಳವರು, ಕನಕಗಿರಿ ಜೈನ ಮಠದ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು, ಕಂಬದಹಳ್ಳಿ ಜೈನ ಮಠದ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ಪಾವನ ಸಾನಿಧ್ಯದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಲಿದೆ. ಈ ಕಾರ್ಯಕ್ರಮದಲ್ಲಿ ಮೈಸೂರು ಮಹಾಸಂಸ್ಥಾನದ ಮಹಾರಾಜರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ವಿ.ಪ. ಸದಸ್ಯ ಭೋಜೇಗೌಡ, ಬೆಂಗಳೂರಿನ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್, ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ. ರಿಷ್ಯಂತ್, ಸೇವಾಕರ್ತರಾದ ಯುವರಾಜ್ ಜೈನ್, ರಶ್ಮಿತಾ ಜೈನ್ ಉಪಸ್ಥಿತರಿರುವರು. ಜಮಖಂಡಿಯ ನಿವೃತ್ತ ಪ್ರಾಧ್ಯಾಪಕ ಡಾ| ಬಿ.ಪಿ. ನ್ಯಾಮಗೌಡ ಅವರು ಜೈನ ಸಂಸ್ಕೃತಿಗೆ ಜೈನ ಆಚಾರ್ಯರು ಹಾಗೂ ಜೈನ ಅರಸು ಮನೆತನಗಳ ಕೊಡುಗೆ ಈ ವಿಷಯದಲ್ಲಿ ಉಪನ್ಯಾಸ ನೀಡಲಿದ್ದಾರೆ. ಬಳಿಕ ಮುಖ್ಯ ವೇದಿಕೆಯಲ್ಲಿ ಸಂಜೆ 6.30ರಿಂದ ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಕಲಾವಿದರಿಂದ ಭ| ಶ್ರೀ ಶಾಂತಿನಾಥ ಭಗವಾನರ ಗರ್ಭಾವತರಣ ಕಲ್ಯಾಣ ಧಾರ್ಮಿಕ ವಿಧಿ ನಡೆಯಲಿದೆ. ರಾತ್ರಿ 8.30ರಿಂದ ಜ್ಞಾನ ಐತಾಳ ನೇತೃತ್ವದಲ್ಲಿ ಹೆಜ್ಜೆನಾದ ನೃತ್ಯ-ಸಂಗೀತ ವೈವಿಧ್ಯ, ವಸ್ತು ಪ್ರದರ್ಶನ ವೇದಿಕೆಯಲ್ಲಿ ಡಾ. ದರ್ಶನಾ ಜೈನ್ ಸಾಂಗ್ಲಿ ಇವರಿಂದ ಭರತನಾಟ್ಯ, ಸುಮಾ ಕೋಟ ಮತ್ತು ಬಳಗದವರಿಂದ ಭಕ್ತಿ-ಭಾವ-ಸಂಗೀತ, ವೇಣೂರು ಸೇವಾ ಶರಧಿ ವಿಶ್ವಶ್ಥ ಮಂಡಳಿ (ರಿ.) ಇವರ ಸಂಯೋಜನೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಫೆ. 25: ಮಹಾಮಸ್ತಕಾಭಿಷೇಕದ 4ನೇ ದಿನದ ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

Article Image

ಫೆ. 25: ಮಹಾಮಸ್ತಕಾಭಿಷೇಕದ 4ನೇ ದಿನದ ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

"ಅಧಿಕಾರ, ಶ್ರೀಮಂತಿಕೆಯಿಂದ ಹೊರತಾದ ಜೀವನ ಶ್ರೇಷ್ಠ ಕ್ಷಣಗಳಿವೆ ಎಂಬುದಕ್ಕೆ ಮಹಾಚಕ್ರವರ್ತಿ ಬಾಹುಬಲಿಯ ತ್ಯಾಗವೇ ಸಾಕ್ಷಿ. ದೈವಾರಾಧನೆ ಮೂಲಕ ಸಾಮಾಜಿಕ ಏಕತೆಯನ್ನು ಸಾರಿದ ಸಮುದಾಯ ಜೈನರದು. ಎಲ್ಲಾ ಕ್ಷೇತ್ರದಲ್ಲೂ ಜಿಲ್ಲೆಗೆ ಅತೀ ಹೆಚ್ಚಿನ ಕೊಡುಗೆಯನ್ನು ಜೈನ ಸಮುದಾಯ ನೀಡಿದೆ" ಎಂದು ಸಂಸದ ನಳಿನ್ ಕುಮಾರ್ ಕಟೀಲ್ ವೇಣೂರಿನ‌ ಭ| ಬಾಹುಬಲಿ ಮಸ್ತಕಾಭಿಷೇಕದ ನಾಲ್ಕನೇ ದಿನವಾದ ರವಿವಾರ(ಫೆ. 25)ದಂದು ಭರತೇಶ ಸಮುದಾಯ ಭವನದಲ್ಲಿ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲೋಕಸಭಾ ನಿಧಿಯಿಂದ ಕ್ಷೇತ್ರದ ಅಭಿವೃದ್ಧಿಗೆ 20 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಈ ಮೂಲಕ ಬಾಹುಬಲಿಯ ಸಂದೇಶವನ್ನು ರಾಜಕೀಯ ಜೀವನಕ್ಕೂ ಅಳವಡಿಸುವ ಕಾರ್ಯವಾಗಲಿ ಎಂದು ಆಶಯ ವ್ಯಕ್ತಪಡಿಸಿದರು. ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಜಗತ್ತಿಗೆ ಅಹಿಂಸೆಯ ಸಂದೇಶ ಸಾರಿದ ಶ್ರೇಷ್ಠ ಧರ್ಮ ಜೈನ ಧರ್ಮ ಎಂದು ಹೇಳಿದರು. ನಂತರ ಸ್ವರ್ಣಲತಾ ನೆಲ್ಲಿಕಾರು ಬರೆದಿರುವ ರಾಜೇಶ್ ಭಟ್ ಸಂಗೀತ ಸಂಯೋಜನೆಯಲ್ಲಿ ವೃತಿಕ್ ಜೈನ್ ಪಡ್ಯೋಡಿಗುತ್ತು ಧ್ವನಿಯಲ್ಲಿ ಮೂಡಿ ಬಂದ "ವೇಣುಪುರದಿ ಭುಜಬಲೀಶನೇ" ಎಂಬ ಹಾಡಿನ ಸಿ.ಡಿ. ಬಿಡುಗಡೆ ಮಾಡಲಾಯಿತು. ವಿಶ್ರಾಂತ ಪ್ರಾಂಶುಪಾಲ ತುಮಕೂರಿನ ಡಾ| ಎಸ್.ಪಿ. ಪದ್ಮಪ್ರಸಾದ್ ಅವರು ವಿಶೇಷ ಉಪನ್ಯಾಸ ನೀಡಿದರು. ಸೇವಾಕರ್ತರಾದ ಪೆರಿಂಜೆ ಪಡ್ಯೋಡಿಗುತ್ತು ಜೀವಂಧರ್ ಕುಮಾರ್ ಮತ್ತು ಸುಲೋಚನಾ ಅವರನ್ನು ಮಹಾಮಸ್ತಕಾಭಿಷೇಕ ಸಮಿತಿಯ ವತಿಯಿಂದ ಕಾ‌ರ್ಯಾಧ್ಯಕ್ಷ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು ಸಮ್ಮಾನಿಸಿದರು. ಶಾಸಕರಾದ ಹರೀಶ್ ಪೂಂಜ, ಕೆ. ಪ್ರತಾಪಸಿಂಹ ನಾಯಕ್, ಕೆ. ಹರೀಶ್‌ ಕುಮಾರ್, ಮಂಜುನಾಥ ಭಂಡಾರಿ, ಸಮಿತಿ ಪ್ರ. ಕಾರ್ಯದರ್ಶಿ ವಿ. ಪ್ರವೀಣ್ ಕುಮಾರ್ ಇಂದ್ರ, ಕೋಶಾಧಿಕಾರಿ ಪಿ. ಜಯರಾಜ್ ಕಂಬಳಿ, ನೋಡಲ್ ಅಧಿಕಾರಿ ಮಾಣಿಕ್ಯ ಎಂ., ವಿಕಾಸ್ ಜೈನ್, ರಮ್ಯಾ ವಿಕಾಸ್ ಮತ್ತು ವಿಶ್ವಾಸ್ ಜೈನ್, ಶುಭರೇಖಾ ವಿಶ್ವಾಸ್ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು. ದಿನದ ಸೇವಾಕರ್ತರಾದ ಪೆರಿಂಜೆ ಪಡ್ಯೋಡಿಗುತ್ತು ಜೀವಂಧರ್ ಕುಮಾರ್ ಸ್ವಾಗತಿಸಿದರು. ಶಿಕ್ಷಕ ನವೀನ್ ಕುಮಾರ್ ವಂದಿಸಿದರು. ಪ್ರಾಂಶುಪಾಲ ಡಾ| ಪ್ರಭಾತ್ ಬಲ್ನಾಡ್ ನಿರೂಪಿಸಿದರು. ಮುಖ್ಯವೇದಿಕೆಯಲ್ಲಿ ಬೆಳಿಗ್ಗೆ ಮೂಡುಬಿದಿರೆ, ಕಾರ್ಕಳ, ಕೆರ್ವಾಶೆ ಜೈನ್ ಮಿಲನ್ ಸದಸ್ಯರಿಂದ ಜಿನಭಜನೆ ಜರುಗಿತು. ರಾತ್ರಿ ಬೆಂಗಳೂರಿನ ಶಂಕರ್ ಶಾನಬೋಗ್ ಮತ್ತು ಬಳಗದವರಿಂದ ಭಕ್ತಿ, ಭಾವ, ಜನಪದಗೀತೆಗಳ ಸಂಯೋಜನೆಯ ಭಕ್ತಿರಸಾಮೃತವು ಜನರನ್ನು ಭಾವನ ಲೋಕಕ್ಕೆ ಕೊಂಡೊಯ್ಯಿತು. ವಸ್ತುಪ್ರದರ್ಶನ ವೇದಿಕೆಯಲ್ಲಿ ರಾತ್ರಿ ಮೂಡುಬಿದಿರೆಯ ಕು| ಅನನ್ಯಾ ರಂಜನಿ ಇವರಿಂದ ಭರತನಾಟ್ಯ ಬಳಿಕ ವೇಣೂರಿನ ಪ್ರತಿಭೆಗಳಿಂದ ನೃತ್ಯ ವೈವಿಧ್ಯ ಹಾಗೂ ವೇಣೂರಿನ ಬಾಹುಬಲಿ ಕಲಾ ತಂಡ ಇವರಿಂದ ತ್ಯಾಗವೀರ ಬಾಹುಬಲಿ ಯಕ್ಷಗಾನ ಪ್ರಸಂಗವು ನಡೆಯಿತು. ಈ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಮನಸೂರೆಗೊಂಡಿತು.

ಫೆ. 25 ವೇಣೂರು ಮಹಾಮಸ್ತಕಾಭಿಷೇಕ : ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು

Article Image

ಫೆ. 25 ವೇಣೂರು ಮಹಾಮಸ್ತಕಾಭಿಷೇಕ : ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು

ವೇಣೂರು ಮಹಾಮಸ್ತಕಾಭಿಷೇಕ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಮೂಡುಬಿದಿರೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ, ತಮಿಳುನಾಡು ತಿರುಮಲೈ ಸ್ವಸ್ತಿಶ್ರೀ ಧವಲಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಶ್ರೀಕ್ಷೇತ್ರ ಸ್ವಾದಿ ದಿಗಂಬರ ಜೈನಮಠ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಯವರ ಪಾವನ ಸಾನ್ನಿಧ್ಯ ಇರಲಿದ್ದು, ಮಾಜಿ ಮುಖ್ಯಮಂತ್ರಿ ಬಿ. ಬಸವರಾಜ ಬೊಮ್ಮಾಯಿ, ಸಚಿವ ಎನ್.ಎಸ್. ಬೋಸರಾಜ್, ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಎಸ್. ಸಿ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರಾದ ಡಾ| ಎಂ.ಎನ್. ರಾಜೇಂದ್ರ ಕುಮಾರ್, ದ.ಕ.ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಆನಂದ್ ಕೆ., ದಿನದ ಸೇವಾಕರ್ತರಾದ ಜೀವಂಧರ್ ಕುಮಾರ್ ಉಪಸ್ಥಿತರಿರುವರು. ಡಾ| ಎಸ್.ಪಿ. ಪದ್ಮಪ್ರಸಾದ್ ಅವರಿಂದ ವಿಶೇಷ ಉಪನ್ಯಾಸವೂ ಇರಲಿದೆ. ರಾತ್ರಿ 7.30ಕ್ಕೆ ಮುಖ್ಯವೇದಿಕೆಯಲ್ಲಿ ಶಂಕರ್ ಶಾನಭೋಗ್ ಮತ್ತು ಬಳಗದಿಂದ ಭಕ್ತಿರಸಾಮೃತ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಸ್ತುಪ್ರದರ್ಶನ ವೇದಿಕೆಯಲ್ಲಿ ರಾತ್ರಿ 7ರಿಂದ 7.30ರ ವರೆಗೆ ಅನನ್ಯಾ ರಂಜನಿ, ಮೂಡುಬಿದಿರೆ ಅವರಿಂದ ಭರತನಾಟ್ಯ, 7.30ರಿಂದ 11ರ ವರೆಗೆ ಬಾಹುಬಲಿ ಕಲಾ ತಂಡ ವೇಣೂರು ಆದರಿಂದ ನೃತ್ಯ ವೈವಿಧ್ಯ ಹಾಗೂ ತ್ಯಾಗವೀರ ಬಾಹುಬಲಿ ಎಂಬ ಯಕ್ಷಗಾನ ಕಾರ್ಯಕ್ರಮಗಳು ಜರಗಲಿದೆ.

ವೇಣೂರು ಭಗವಾನ್ ಬಾಹುಬಲಿಗೆ ಮೂರನೇ ದಿನದ ಮಹಾಮಸ್ತಕಾಭಿಷೇಕ

Article Image

ವೇಣೂರು ಭಗವಾನ್ ಬಾಹುಬಲಿಗೆ ಮೂರನೇ ದಿನದ ಮಹಾಮಸ್ತಕಾಭಿಷೇಕ

ವೇಣೂರು,ಫೆ.24: ಉಪಾಧಿಗಳಿಂದ ಬಾಹುಬಲಿಯ ವ್ಯಕ್ತಿತ್ವದ ಸತ್ಯ ತಿಳಿಯಬಹುದು. ಈ ಭೂಮಿಯಲ್ಲಿ ನೈತಿಕತೆ ಎಂಬುದು ಶಾಶ್ವತವಾಗಿರಬೇಕು ಎಂಬ ಸಂದೇಶ ಬಾಹುಬಲಿಯದ್ದು. ಹಾಗಾಗಿ ಈ ಭೂಮಿಯಲ್ಲಿ ಅಹಿಂಸೆಯನ್ನು ಪಾಲಿಸಿದವರು ಮಹಾವೀರನ ಸರ್ವೋದಯ ಪರಿಪಾಲಕರು ಎಂದು ಹೊಂಬುಜ ಜೈನ ಮಠದ ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಮಹಾಸ್ವಾಮೀಜಿಗಳವರು ನುಡಿದರು. “ವೇಣೂರು ಫಲ್ಗುಣಿ ತಟದಲ್ಲಿ ವಿರಾಜಮಾನನಾದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಸ್ತಕಾಭಿಷೇಕದ ಮೂರನೇ ದಿನವಾದ ಫೆ. 24ರಂದು ಭರತೇಶ ಸಭಾಭವನದಲ್ಲಿ ಯುಗಳ ಮುನಿಗಳ ದಿವ್ಯ ಉಪಸ್ಥಿತಿಯಲ್ಲಿ ಆಯೋಜಿಸಿದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳವರು ಮಾತನಾಡಿ, ಜೈನಧರ್ಮ ಶ್ರೇಷ್ಠ ವಿಶ್ವಧರ್ಮವಾಗಿದ್ದು ಅದರ ಎಲ್ಲ ತತ್ವಸಿದ್ಧಾಂತಗಳು ವೈಜ್ಞಾನಿಕವಾಗಿಯೂ ಸತ್ಯ ಮತ್ತು ಪರಿಪೂರ್ಣ ಎಂದು ಖಚಿತವಾಗಿದೆ ಎಂದರು. ಪತ್ರಕರ್ತ ಅಜಿತ್ ಹನುಮಕ್ಕನವರ್ ಜಿನಸಿದ್ಧಾಂತದ ಶ್ರೇಷ್ಠತೆ-ಅನೇಕಾಂತವಾದ ವಿಚಾರವಾಗಿ ಮಾತನಾಡಿ, ತ್ಯಾಗವನ್ನು ಮತ್ತು ತ್ಯಾಗಿಗಳನ್ನು ಸದಾಕಾಲ ಪೂಜಿಸಿದ ನಾಡು ನಮ್ಮದು ವಿಶ್ವದಲ್ಲಿ ಹುಟ್ಟಿದ ಅನೇಕ ಭೋಗಿಗಳಿದ್ದರೂ ಪೂಜನೀಯರಾದದ್ದು ತ್ಯಾಗಿಗಳು ಮಾತ್ರ ಎಂದರು. ಏರ್ ಇಂಡಿಯಾದಲ್ಲಿ ಪೈಲೆಟ್ ಆಗಿ ನೇಮಕಗೊಂಡ ವೇಣೂರಿನ ದಿ| ಬಿ.ಪಿ. ಇಂದ್ರರ ಮೊಮ್ಮಗಳು ಅನನ್ಯಾ ಜೈನ್ ಅವರನ್ನು ಸಮಿತಿ ಪರವಾಗಿ ಡಿ. ಹರ್ಷೇಂದ್ರ ಕುಮಾರ್ ಗೌರವಿಸಿದರು. ಬೆಳಗಾವಿಯ ಪೊಲೀಸ್ ವರಿಷ್ಠಾಧಿಕಾರಿ ಜಿನೇಂದ್ರ ಕಣಗಾವಿ, ಹಿರಿಯ ವಕೀಲ ಪಿ.ಪಿ. ಹೆಗ್ಡೆ, ಎಚ್.ಪಿ.ಸಿ.ಎಲ್.ನ ನವೀನ್ ಕುಮಾರ್, ಶಾಸಕ ಹರೀಶ ಪೂಂಜ ಶುಭಾಶಂಸನೆ ಮಾಡಿದರು. ಕಾರ್ಯಾಧ್ಯಕ್ಷ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲ ಮತ್ತು ಪ್ರಧಾನ ಕಾರ್ಯದರ್ಶಿ ವಿ. ಪ್ರವೀಣ ಕುಮಾರ್ ಇಂದ್ರ, ಕೋಶಾಧಿಕಾರಿ ಪಿ. ಜಯರಾಜ್ ಕಂಬಳಿ, ಸೇವಾಕರ್ತರಾದ ಸುನಂದದೇವಿ ಬಿ.ಪಿ. ಇಂದ್ರ ಉಪಸ್ಥಿತರಿದ್ದರು. ಡಾ| ಶಾಂತಿಪ್ರಸಾದ್ ಸ್ವಾಗತಿಸಿದರು. ಶಾಲಿನಿ ನಿರಂಜನ್ ವಂದಿಸಿದರು. ನವಿತಾ ಜೈನ್ ನಿರ್ವಹಿಸಿದರು. ಮುಖ್ಯ ವೇದಿಕೆಯಲ್ಲಿ ಬೆಳಿಗ್ಗೆ ಪರುಷಶ್ರೀ ಜಿನಭಜನ ತಂಡ ಪರುಷಗುಡ್ಡೆ, ಕುಪ್ಪೆಪದವು, ರೆಂಜಾಳ ಜೈನ್ ಮಿಲನ್ ಸದಸ್ಯರಿಂದ ಜಿನಭಜನೆ ನಡೆಯಿತು. ಸಂಜೆ ಮುಖ್ಯ ವೇದಿಕೆಯಲ್ಲಿ ಅಜಯ್ ವಾರಿಯರ್ ಅವರಿಂದ ಸಂಗೀತಯಾನ, ವಸ್ತುಪ್ರದರ್ಶನ ವೇದಿಕೆಯಲ್ಲಿ ಭರತನಾಟ್ಯ, ನೃತ್ಯ ಸಂಗಮ ಪ್ರದರ್ಶನಗೊಂಡಿತು. ದಿನದ ಸೇವಾಕರ್ತರಾದ ಸುನಂದದೇವಿ ಬಿ.ಪಿ. ಇಂದ್ರ, ಮಕ್ಕಳು ಮತ್ತು ಕುಟುಂಬಸ್ಥರಿಂದ ಬಾಹುಬಲಿ ಸ್ವಾಮಿಗೆ ಸಂಜೆ 108 ಕಲಶಗಳಿಂದ ಮಹಾಮಸ್ತಕಾಭಿಷೇಕ, ಮಹಾಪೂಜೆ ನೆರವೇರಿತು. ಇದಕ್ಕೂ ಮುನ್ನ ಪೂಜಾವಿಧಾನ ನಡೆದು ಅಗ್ರೋದಕ ಮೆರವಣಿಗೆ ಭವ್ಯವಾಗಿ ನೆರವೇರಿತು.

ವೇಣೂರು : ಜೀರ್ಣೋದ್ಧಾರಗೊಳಿಸಿದ ತ್ಯಾಗಿಭವನ ಉದ್ಘಾಟನೆ

Article Image

ವೇಣೂರು : ಜೀರ್ಣೋದ್ಧಾರಗೊಳಿಸಿದ ತ್ಯಾಗಿಭವನ ಉದ್ಘಾಟನೆ

ವೇಣೂರು, ಫೆ. 24: ಸುಮಾರು 4 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡ ವೇಣೂರು ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ತ್ಯಾಗಿಭವನದ ಉದ್ಘಾಟನೆಯು ಪರಮಪೂಜ್ಯ ಯುಗಳ ಮುನಿಶ್ರೀಗಳಿಂದ ನೆರವೇರಿತು. ಈ ಸಂದರ್ಭ ಹೊಂಬುಜ ಮಠಾಧೀಶರಾದ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಗಳವರು, ಮೂಡುಬಿದಿರೆ ಶ್ರೀ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳವರು, ಕ್ಷೇತ್ರದ ಸ್ಥಾಪಕ ವಂಶೀಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು, ತೀರ್ಥಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ವಿ. ಪ್ರವೀಣ್ ಕುಮಾರ್ ಇಂದ್ರ, ಕಾಮಗಾರಿಯ ದಾನಿಗಳಾದ ಪೆರಿಂಜೆ ರಾಜ್ಯಗುತ್ತು ದೇವಕುಮಾರ್ ಕಂಬಳಿ ಮತ್ತು ಕುಟುಂಬಸ್ಥರು ಹಾಗೂ ಮಹಾಮಸ್ತಕಾಭಿಷೇಕ ಸಮಿತಿ ಸ್ವಯಂಸೇವಕರು ಮತ್ತು ಶ್ರಾವಕರು ಉಪಸ್ಥಿತರಿದ್ದರು.

ಫೆ. 25 : 4ನೇ ದಿನವಾದ ಇಂದು ದಿನವಿಡೀ ಮಹಾಮಸ್ತಕಾಭಿಷೇಕ

Article Image

ಫೆ. 25 : 4ನೇ ದಿನವಾದ ಇಂದು ದಿನವಿಡೀ ಮಹಾಮಸ್ತಕಾಭಿಷೇಕ

ವೇಣೂರು ಭಗವಾನ್‌ ಶ್ರೀ ಬಾಹುಬಲಿಯ ಮಹಾಮಸ್ತಕಾಭಿಷೇಕದ 4ನೇ ದಿನವಾದ ಇಂದು (ಫೆ. 25) ಮಧ್ಯಾಹ್ನ 1ರಿಂದ 2.30ರ ವರೆಗೆ ಯುಗಳ ಮುನಿಗಳಾದ ಪೂಜ್ಯ ೧೦೮ ಶ್ರೀ ಅಮೋಘಕೀರ್ತಿ ಮಹಾರಾಜರು ಹಾಗೂ ೧೦೮ ಶ್ರೀ ಅಮರಕೀರ್ತಿ ಮಹಾರಾಜರ ರಜತ ದೀಕ್ಷಾ ಜಯಂತಿ ಸಮಾರಂಭ ನೆರವೇರಲಿದ್ದು, ಈ ಪ್ರಯುಕ್ತ ಮುಂಜಾನೆಯಿಂದಲೇ ಮಹಾಮಸ್ತಕಾಭಿಷೇಕ ಪ್ರಾರಂಭವಾಗಿದ್ದು, ಮಹಾಪೂಜೆ, ಮಹಾಮಂಗಳಾರತಿಯೊಂದಿಗೆ ಸಂಪನ್ನಗೊಳ್ಳಲಿದೆ. ಈ ದಿನದ ಸಂಜೆಯ ಮಹಾಮಸ್ತಕಾಭಿಷೇಕದ ಸೇವಾಕರ್ತರು ಪೆರಿಂಜೆ ಪಡ್ಯೋಡಿಗುತ್ತು ಜೀವಂಧರ ಕುಮಾರ್ ಮತ್ತು ಕುಟುಂಬದವರಾಗಿದ್ದು, ಬೆಳಗ್ಗೆ 8ರಿಂದ ಪಂಚಕುಂಭ ವಿನ್ಯಾಸಯುಕ್ತ ಗ್ರಹಯಜ್ಞ ವಿಧಾನ, ಜಲಾಗ್ನಿ ಹೋಮ, ಅಪರಾಹ್ನ 2ರಿಂದ ಬೃಹತ್ ಶಾಂತಿ ಯಂತ್ರಾರಾಧನಾ ವಿಧಾನ, ಆಗ್ರೋದಕ ಮೆರವಣಿಗೆ, ಸಂಜೆ 4ರಿಂದ ಶ್ರೀ ಬಾಹುಬಲಿ ಸ್ವಾಮಿಗೆ 108 ಕಲಶಗಳಿಂದ ಮಹಾಮಸ್ತಕಾಭಿಷೇಕ ಮಹಾಪೂಜೆ, ನೆರವೇರಲಿದೆ. ಹೀಗೆ ಈ ದಿನ ದಿನವೀಡಿ ಮಹಾಮಸ್ತಕಾಭಿಷೇಕದ ಸಂಭ್ರಮವನ್ನು ಭಕ್ತರು ಕಣ್ತುಂಬಿಕೊಳ್ಳಬಹುದು.

ಭ|| ಶ್ರೀ ಬಾಹುಬಲಿಗೆ ಮಹಾಮಸ್ತಕಾಭಿಷೇಕ

Article Image

ಭ|| ಶ್ರೀ ಬಾಹುಬಲಿಗೆ ಮಹಾಮಸ್ತಕಾಭಿಷೇಕ

ಬೆಳ್ತಂಗಡಿ, ಫೆ. 23: ವೇಣೂರು ವಿರಾಟ್ ವಿರಾಗಿಗೆ ಗುರುವಾರದಿಂದ ಮಹಾಮಸ್ತಕಾಭಿಷೇಕ ಆರಂಭವಾಗುತ್ತಲೆ ಫಲ್ಗುಣಿ ತಟದೆತ್ತರ ಬಾಹುಬಲಿ ಸ್ವಾಮೀಕಿ ಜೈ ಘೋಷ ಮೊಳಗಿದೆ. ರಾಜ್ಯದಲ್ಲಿರುವ ಪ್ರಮುಖ ನಾಲ್ಕು ಬಾಹುಬಲಿ ಮೂರ್ತಿಗಳ ಪೈಕಿ ಮೂರು ಮೂರ್ತಿಗಳು ಅವಿಭಜಿತ ದ.ಕ. ಜಿಲ್ಲೆಯಲ್ಲಿದ್ದರೆ, ಅತಿ ಎತ್ತರದ ಮೂರ್ತಿ ಶ್ರವಣಬೆಳಗೊಳದಲ್ಲಿದೆ. ಕಾರ್ಕಳದಲ್ಲಿ 42 ಅಡಿ, ಧರ್ಮಸ್ಥಳದಲ್ಲಿ 39 ಅಡಿ ಎತ್ತರದ ಬಾಹುಬಲಿ ಮೂರ್ತಿಗಳಿವೆ. ವೇಣೂರಿನಲ್ಲಿ ಅಜಿಲ ಮನೆತನದವರು ಸ್ಥಾಪಿಸಿದ 35 ಅಡಿ ಎತ್ತರದ ನಗುಮೊಗದ ಹಸನ್ಮುಖಿ ಗೊಮ್ಮಟನಿಗೆ ಮಹಾ ಮಸ್ತಕಾಭಿಷೇಕವನ್ನು ಕಂಡಾಗ ಯುಗಮುನಿಗಳ ಸಾನ್ನಿಧ್ಯದಲ್ಲಿ ಯುಗದಾಚೆಗಿನ ಮಹೋನ್ನತ ಜೈನ ಪರಂಪರೆಯ ಶ್ರೇಷ್ಠತೆ ಸಾರಿದೆ. ಭ|| ಶ್ರೀ ಬಾಹುಬಲಿಗೆ ಜಲಾಭಿಷೇಕದಿಂದ ಮೊದಲ್ಗೊಂಡು ಏಳನೀರು, ಇಕ್ಷುರಸ, ಕ್ಷೇರಾಭಿಷೇಕ, ಕಲ್ಕಚೂರ್ಣ, ಅರಶಿನ, ಚತುಷ್ಕೋಣ ಕಲಶ, ಕಷಾಯ, ಗಂಧಮ, ಚಂದನ, ಅಷ್ಠಗಂಧ, ಪುಷ್ಪವೃಷ್ಟಿಗೊಳಿಸಿ ಮಹಾ ಮಂಗಳಾರತಿಯೊಂದಿಗೆ ಮಹಾಕಲಶವನ್ನು ಶಾಂತಿ ಮಂತ್ರದೊಂದಿಗೆ ಪೂರ್ಣಕುಂಭ ಅಭಿಷೇಕವೇ ಮಹಾಮಸ್ತಕಾಭಿಷೇಕದ ವಿಶೇಷ ಕ್ಷಣವಿದು. ವಸ್ತು ಪ್ರದರ್ಶನ ಮಳಿಗೆ ಮಜ್ಜನದ ಇನ್ನೊಂದು ಪ್ರಮುಖ ಆಕರ್ಷಣೆ ಕೇಂದ್ರವೆಂದರೆ ವಸ್ತುಪ್ರದರ್ಶನ ಮಳಿಗೆಯಾಗಿದೆ. ಒಟ್ಟು 200ಕ್ಕೂ ಅಧಿಕ ಸ್ಟಾಲ್‌ಗಳು ಬಂದಿದ್ದು, ಅದರಲ್ಲೂ ವಸ್ತುಪ್ರದರ್ಶನದಲ್ಲಿ 110 ಸ್ಟಾಲ್‌ಗಳು, 10 ಸರಕಾರದ ಅಂದರೆ ಅರಣ್ಯ ಇಲಾಖೆ, ವಾರ್ತಾ ಇಲಾಖೆ, ಕೃಷಿ, ತೋಟಗಾರಿಕೆ, ನಂದಿನಿ ಸೇರಿದಂತೆ ಮಳಿಗೆಗಗಳು ರಚನೆಯಾಗಿದೆ. ಬೆಳಗ್ಗೆ8ರಿಂದ ರಾತ್ರಿ 11 ಗಂಟೆವರೆಗೆ ಪ್ರತಿದಿನ ವಸ್ತುಪ್ರದರ್ಶನ ವೇದಿಕೆಯಲ್ಲಿ ಸಾಂಸ್ಕೃತಿಕ ವೈಭವ ಇದೆ. ಬೆಟ್ಟದ 2 ಕಿ.ಮೀ. ವ್ಯಾಪ್ತಿಯಲ್ಲಿ ನೀಲನಕಾಶೆ ಮಜ್ಜನದ ಹಿನ್ನೆಲೆ ಜಿಲ್ಲಾಡಳಿತದಿಂದ ಈಗಾಗಲೆ ಬೆಟ್ಟದ 2 ಕಿ.ಮೀ. ವ್ಯಾಪ್ತಿಗೊಳ ಪಟ್ಟಂತೆ ನೀಲನಕಾಶೆ ಸಿದ್ಧಪಡಿಸಲಾಗಿದೆ. ಪ್ರಮುಖವಾಗಿ ಬಾಹುಬಲಿ ಬೆಟ್ಟ ಆಸ್ಪತ್ರೆ, ಪಾರ್ಕಿಂಗ್, ವಸ್ತುಪ್ರದರ್ಶನ ಮಳಿಗೆ, ಅನ್ನಛತ್ರ, ವಸತಿಗೃಹ ಸಹಿತ ಬರುವ ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳ ಮಾಹಿತಿ ನೀಡಲಾಗಿದೆ. ನಾಲ್ಕು ಕಡೆಗಳಲ್ಲಿ ವಸತಿಗೃಹ ಸ್ವಯಂಸೇವಕರಿಗೆ, ಪೊಲೀಸರಿಗೆ, ಮೀಸಲು ಪಡೆ ಸೇರಿದಂತೆ ಸ್ವಯಂ ಸೇವಕ ಸಮಿತಿ, ಪೂಜಾ ಸಮಿತಿ, ಮೆರವಣಿಗೆಯ ತಂಡಗಳಿಗೆ ನಿಟ್ಟಡೆ, ವೇಣೂರು ಐಟಿಐ, ಹುಂಬೆಟ್ಟು ಶಾಲೆ, ವಿದ್ಯೋದಯ, ಕುಂಭಶ್ರೀ, ಸರಕಾರಿ ಪ್ರೌಢ ಶಾಲೆಗಳಲ್ಲಿ ಸುಮಾರು 500 ಮಂದಿಗೆ ಉಳಿದುಕೊಳ್ಳಲು ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ವಿಐಪಿ ಸೇರಿದಂತೆ ವಿವಿಐಪಿ ಯಾತ್ರಿಕರಿಗೆ ವೇಣೂರು, ಕಾರ್ಕಳ, ಬೆಳ್ತಂಗಡಿಯಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ದಿನದ 24 ತಾಸು ಆಸ್ಪತ್ರೆ ಸೇವೆ ಬರುವ ಯಾತ್ರಿಕರ ಆರೋಗ್ಯ ಕ್ಷೇಮಕ್ಕಾಗಿ ವೇಣೂರು ಪ್ರಾ.ಆರೋಗ್ಯ ಕೇಂದ್ರ, ಬಾಹುಬಲಿ ಬೆಟ್ಟದ ಮುಂಭಾಗ ಎಸ್.ಡಿ.ಎಂ. ಆಸ್ಪತ್ರೆಯಿಂದ ಉಳಿದಂತೆ ದಿನವೊಂದರಂತೆ ಮಂಗಳೂರಿನ ಪ್ರಖ್ಯಾತ ಆಸ್ಪತ್ರೆಗಳು ಆರೋಗ್ಯ ಸೇವೆ ಒದಗಿಸುತ್ತಿದೆ. ಜತೆಗೆ ತುರ್ತು ಸೇವೆಗೆಂದು 4 ಮತ್ತು 108 ಆ್ಯಂಬುಲೆನ್ಸ್ ನಿಯೋಜಿಸಲಾಗಿದೆ. ಪಾರ್ಕಿಂಗ್ ವ್ಯವಸ್ಥೆ: ವೇಣೂರು ಐಟಿಐ ಸಮೀಪ, ಕಲ್ಲಬಸದಿ, ಬೆಟ್ಟದ ಸುತ್ತ ವಿಐಪಿ, ವಿವಿಐಪಿ, ಮಾರ್ಗದ ಬದಿ, ಬೆಟ್ಟದ ಕೆಳಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಐಟಿಐನ 150 ವಿದ್ಯಾರ್ಥಿಗಳು, 100 ಗೃಹರಕ್ಷಕ, 200 ಪೊಲೀಸರು 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 75 ಸಿಸಿ ಕಣ್ಣಾವಲು: ಬರುವ ಭಕ್ತರ ಸುರಕ್ಷತೆಗಾಗಿ ಒಟ್ಟು 75 ಕಿಒಗಳಲ್ಲಿ ಸಿಸಿ ಕೆಮರಾ ಅಳವಡಿಸಲಾಗಿದೆ. ಒಂದು ಪೊಲೀಸ್ ಕಂಟ್ರೋಲ್ ರೂಂ ಎಲ್ಲವನ್ನು ನಿಯಂತ್ರಿಸುವ ಬೆಟ್ಟದ ಮುಂಭಾಗ ವಾಚ್ ಜತೆಗೆ ಟವರ್ ಅಳವಡಿಸಲಾಗಿದೆ. ಡಿವೈಎಸ್‌ಪಿ, 8 ಮಂದಿ ವೃತ್ತ ನಿರೀಕ್ಷಕರು, ಎಲ್ಲ ಠಾಣೆ ಎಸ್.ಐ.ಗಳು ಜತೆಗಿದ್ದು ಭಕ್ತರ ಸುರಕ್ಷತೆಗೆ ಬೇಕಾದ ಅಗತ್ಯ ಕ್ರಮ ಕೈಗೊಂಡಿದ್ದಾರೆ. ದಿನವೊಂದರಂತೆ ಮೂಲಕ ಪುಷ್ಪವೃಷ್ಟಿ: ಶುಕ್ರವಾರ ಬಾಹುಬಲಿ ಮಸ್ತಕಾಭಿಷೇಕ ಸಂದರ್ಭದಲ್ಲಿ ಸೇವಾಕರ್ತೃಗಳಾದ ವೇಣೂರಿನ ಪ್ರವೀಣ್ ಕುಮಾರ್ ಇಂದ್ರ ಮತ್ತು ಅಶ್ವಿನಿಕುಮಾರಿ ಹಾಗೂ ಮಕ್ಕಳಾದ ಸತ್ಯಪ್ರಸಾದ್, ಸತ್ಯಶ್ರೀ, ಸತ್ಯಪ್ರಭಾ ಮತ್ತು ವಿಶ್ವನ್ ಹಾಗೂ ಕುಟುಂಬಸ್ಥರ ವತಿಯಿಂದ ಹೆಲಿಕಾಪ್ಟರ್‌ಮೂಲಕ ಪುಷ್ಪವೃಷ್ಟಿ ಮಾಡಲಾಯಿತು. ಸೇವಾಕರ್ತರ ವತಿಯಿಂದ ವಿವಿಧ ಧಾರ್ಮಿಕ ವಿಧಿ- ವಿಧಾನಗಳು ನಡೆದವು.

ವೇಣೂರು : ಮೂಡುಬಿದಿರೆ ಶ್ರೀಗಳ ಉಪಸ್ಥಿತಿಯಲ್ಲಿ ಸಮಾಲೋಚನಾ ಸಭೆ

Article Image

ವೇಣೂರು : ಮೂಡುಬಿದಿರೆ ಶ್ರೀಗಳ ಉಪಸ್ಥಿತಿಯಲ್ಲಿ ಸಮಾಲೋಚನಾ ಸಭೆ

ವೇಣೂರು: ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ವೈಭವದ ಮಹಾಮಸ್ತಕಾಭಿಷೇಕಕ್ಕೆ ಇನ್ನು ಕೆಲವೇ ದಿನಗಳ ಅಂತರ. ಫೆ. 17ರಂದು ಮೂಡುಬಿದಿರೆ ಶ್ರೀ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀತಿ೯ ಭಟ್ಟಾರಕ ಪಂಡಿತಾಚಾಯ೯ವಯ೯ ಮಹಾಸ್ವಾಮೀಜಿಗಳವರ ದಿವ್ಯ ಉಪಸ್ಥಿತಿಯಲ್ಲಿ ಮಹಾಮಸ್ತಕಾಭಿಷೇಕದ ಪೂವ೯ಸಿದ್ಧತೆಯ ಕುರಿತು ಸಮಾಲೋಚನಾ ಸಭೆಯು ಯಾತ್ರಿ ನಿವಾಸದಲ್ಲಿ ನಡೆಯಿತು. ಪೂಜ್ಯ ಸ್ವಾಮೀಜಿಯವರು ಮಹಾಮಸ್ತಕಾಭಿಷೇಕದ ಧಾಮಿ೯ಕ ವಿಧಿ-ವಿಧಾನವು ಯಾವುದೇ ಅಡೆತಡೆಗಳಿಲ್ಲದೆ ಸಾಂಗವಾಗಿ ನೆರವೇರಲಿ ಎಂದು ಆಶಿಸಿದರು. ಅಭಿಷೇಕ ಸಮಿತಿ, ಪೂಜಾ ಸಮಿತಿ, ಆಹಾರ ಸಮಿತಿ, ಮಹಿಳಾ ಸಮಿತಿ ಹಾಗೂ ಸೇವಾಕರ್ತೃಗಳ ಜೊತೆ ಸಮಾಲೋಚನೆ ನಡೆಸಿ ಎಲ್ಲಾ ಸಮಿತಿಗಳಿಗೆ ಮಾಗ೯ದಶ೯ನ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಮಸ್ತಕಾಭಿಷೇಕ ಸಮಿತಿಯ ಕಾಯಾ೯ಧ್ಯಕ್ಷರಾದ ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಹಾಮಸ್ತಕಾಭಿಷೇಕಕ್ಕೆ ದ್ಯವ್ಯಗಳನ್ನು ಸೇವೆಯಾಗಿ ನೀಡಿದ ತುಮಕೂರಿನ ಉದ್ಯಮಿ ರಾಜೇಂದ್ರ ಕುಮಾರ್‌ ಅವರನ್ನು ಪೂಜ್ಯ ಶ್ರೀಗಳು ಮತ್ತು ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು ಗೌರವಿಸಿದರು. ಈ ಸಂದಭ೯ದಲ್ಲಿ ನೋಡಲ್ ಅಧಿಕಾರಿ ಮಾಣಿಕ್ಯ ಎಂ., ಮಸ್ತಕಾಭಿಷೇಕ ಸಮಿತಿಯ ಕೋಶಾಧಿಕಾರಿ ಜಯರಾಜ್ ಕಂಬಳಿ, ಮಸ್ತಕಾಭಿಷೇಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಇಂದ್ರ ಮತ್ತಿತರರು ಉಪಸ್ಥಿತರಿದ್ದರು. ಕಾಯ೯ದಶಿ೯ ಮಹಾವೀರ್ ಜೈನ್ ಮೂಡುಕೋಡಿ ಗುತ್ತು ಕಾರ್ಯಕ್ರಮ ನಿರೂಪಿಸಿದರು.

ಆಚಾರ್ಯ ಶ್ರೀ ವಿದ್ಯಾಸಾಗರ ಮುನಿಮಹಾರಾಜರ ಸಮಾಧಿಮರಣ

Article Image

ಆಚಾರ್ಯ ಶ್ರೀ ವಿದ್ಯಾಸಾಗರ ಮುನಿಮಹಾರಾಜರ ಸಮಾಧಿಮರಣ

ಚತ್ತೀಸ್‌ಗಢದ, ಚಂದ್ರಗಿರಿತೀರ್ಥ ಡೊಂಗರಗಢದಲ್ಲಿ ಆಧ್ಯಾತ್ಮ ಕವಿ, ಲೇಖಕ, ವಿಮರ್ಶಕ, ಪ್ರಾಥಃಸ್ಮರಣೀಯ ದಿಗಂಬರ ಜೈನ ಸರೋವರದ ರಾಜಹಂಸ, ಈ ಶತಮಾನದ ಶ್ರೇಷ್ಠ ತಪಸ್ವಿ ಸಂತಶಿರೋಮಣಿ ಆಚಾರ್ಯ ಶ್ರೀ ವಿದ್ಯಾಸಾಗರ ಮುನಿಮಹಾರಾಜರು ಇಂದು(ಫೆ.18) ಬೆಳಗಿನಜಾವ 2.30ಕ್ಕೆ ಸಮಾಧಿಮರಣ ಹೊಂದಿದರು. ಕರ್ನಾಟಕದ ಬೆಳಗಾವಿ ಜಿಲ್ಲೆಯ ಸದಲಗಾ ಗ್ರಾಮದಲ್ಲಿ ಶ್ರೀಮತಿದೇವಿ ಹಾಗೂ ಮಲ್ಲಪ್ಪಾಜಿಯವರ ಸುಪುತ್ರರಾಗಿ ಜನಿಸಿ ಆಚಾರ್ಯ ದೇಷಭೂಷಣ ಮಹಾರಾಜರಿಂದ ಪ್ರಭಾವಿತರಾಗಿ ಜೈನ ಮುನಿಯಾದರು. ಕಾಲಕ್ರಮೇಣ ಇವರ ತಂದೆ-ತಾಯಿ, ಇಬ್ಬರು ಸಹೋದರರು ಹಾಗೂ ಇಬ್ಬರು ಸಹೋದರಿಯರು ಕೂಡ ಜೈನ ದೀಕ್ಷೆಪಡೆದು ಜಿನನ ಮಾರ್ಗವನ್ನು ಹಿಡಿದು ನಡೆದರು. ಆಚಾರ್ಯರೊಟ್ಟಿಗೆ ಸದಾಕಾಲ ಸಾವಿರಕ್ಕೂ ಹೆಚ್ಚು ಅವರ ಶಿಷ್ಯರು ದೇಶದಾದ್ಯಂತ ವಿಹಾರ ಮಾಡಿ ಜಿನಧರ್ಮದ ಪ್ರಸಾರ ಹಾಗೂ ಧರ್ಮಜ್ಞಾನವನ್ನು ಪ್ರಸರಿಸಿದರು ಆಚಾರ್ಯರ ‘ಮೂಕ ಮಾಟಿ’ ಎಂಬ ಗ್ರಂಥವು ಜಗತ್ತಿನ ಎಲ್ಲ ಭಾಷೆಗಳಲ್ಲಿ ಪ್ರಕಟಿತವಾಗಿದ್ದು ಅದರೊಟ್ಟಿಗೆ ‘ತೋತಾ ಕ್ಯೂ ರೋತಾ’ ಹಾಗೂ ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ.

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ.): 2023-24ನೇ ಸಾಲಿನ ಸ್ವಯಂ ಉದ್ಯೋಗ ಯೋಜನೆ

Article Image

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ.): 2023-24ನೇ ಸಾಲಿನ ಸ್ವಯಂ ಉದ್ಯೋಗ ಯೋಜನೆ

2023-24ನೇ ಸಾಲಿನ ಸ್ವಯಂ ಉದ್ಯೋಗ ಯೋಜನೆಯಡಿಯಲ್ಲಿ ಅಲ್ಪಸಂಖ್ಯಾತರ ಸಮುದಾಯದ ಜನರಿಗೆ ವ್ಯಾಪಾರ, ಸಣ್ಣ ಪ್ರಮಾಣದ ಗುಡಿ ಕೈಗಾರಿಕೆ, ಸೇವಾ ಕ್ಷೇತ್ರ, ಕೃಷಿ ಆಧಾರಿತ ಚಟುವಟಿಕೆಗಳು ಮುಂತಾದವುಗಳನ್ನು ಪ್ರಾರಂಭಿಸಲು ಸಾಲ ಮತ್ತು ಸಹಾಯಧನ ಒದಗಿಸಲಾಗುವುದು. ಘಟಕ ವೆಚ್ಚದ ಶೇ. 33% ಅಥವಾ ಗರಿಷ್ಠ ಮಿತಿ ರೂ. 1 ಲಕ್ಷದ ಸಹಾಯಧನ ನೀಡಲಾಗುವುದು. ಅರ್ಹತೆಗಳು : 1. ಅರ್ಜಿದಾರರು ಸರ್ಕಾರಿ ಆದೇಶದಲ್ಲಿ ವಿವರಿಸಿದಂತೆ ಧಾರ್ಮಿಕ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರಾಗಿರಬೇಕು. 2. ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. 3. ಅರ್ಜಿದಾರರ ವಯಸ್ಸು 18 ರಿಂದ 55 ವರ್ಷ ಒಳಗಿರಬೇಕು. 4 ಎಲ್ಲಾ ಮೂಲಗಳಿಂದ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದಲ್ಲಿ ರೂ. 81,000/- ಹಾಗೂ ನಗರ ಪ್ರದೇಶದಲ್ಲಿ ರೂ. 1,03,000/- ಮಿತಿಯಲ್ಲಿರಬೇಕು 5. ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಕೇಂದ್ರ/ರಾಜ್ಯ ಸರ್ಕಾರಿ/ಪಿಎಸ್‌ಯು ಉದ್ಯೋಗಿಯಾಗಿರಬಾರದು. 6. ಅರ್ಜಿದಾರರು ಕೆ.ಎಂ.ಟಿ.ಸಿ.ಯಲ್ಲಿ ಸುಸ್ತಿದಾರರಾಗಿರಬಾರದು. ದಾಖಲಾತಿಗಳು : 1. ಜಾತಿ ಮತ್ತು ಆದಾಯ ಪ್ರಮಾಣಪತ್ರ 2. ಆಧಾರ್ ಕಾರ್ಡ್ 3. ಬ್ಯಾಂಕ್ ಪಾಸ್ ಬುಕ್ 4. ಯೋಜನಾ ವರದಿ 5. ಫೋಟೊ-2 6. ಸ್ವಯಂ ಘೋಷಣಾ ಪತ್ರ. ಅರ್ಜಿ ಸಲ್ಲಿಸಲು ವೆಬ್‌ಸೈಟ್ ಲಿಂಕ್: https://kmdconline.karnataka.gov.in ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆ. 29 ಆಗಿರುತ್ತದೆ.

ಸುಲ್ಕೇರಿ: ಭಗವಾನ್‌ ನೇಮಿನಾಥ ಬಸದಿಯಲ್ಲಿ ಮಂಡಲ ಪೂಜಾ ಮಹೋತ್ಸವ

Article Image

ಸುಲ್ಕೇರಿ: ಭಗವಾನ್‌ ನೇಮಿನಾಥ ಬಸದಿಯಲ್ಲಿ ಮಂಡಲ ಪೂಜಾ ಮಹೋತ್ಸವ

ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಭಗವಾನ್ ೧೦೦೮ ಶ್ರೀ ನೇಮಿನಾಥ ಸ್ವಾಮಿ ಬಸದಿಯ ಮಂಡಲ ಪೂಜಾ ಮಹೋತ್ಸವವು ಕಾರ್ಕಳ ದಾನಶಾಲಾ ಶ್ರೀ ಜೈನಮಠದ ಪರಮಪೂಜ್ಯ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ಪಾವನ ಸಾನ್ನಿಧ್ಯದಲ್ಲಿ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಫೆ. 17ರಂದು ಜೈನ ಆಗಮೋಕ್ತ ವಿಧಿ-ವಿಧಾನಗಳೊಂದಿಗೆ ಜರಗಲಿದೆ ಎಂದು ಆಡಳಿತ ಮೊಕ್ತೇಸರರಾದ ನಾವರಗುತ್ತು ಎನ್. ರವಿರಾಜ ಹೆಗ್ಡೆರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ವೇಣೂರು ಭ. ಬಾಹುಬಲಿ ಕ್ಷೇತ್ರಕ್ಕೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಭೇಟಿ

Article Image

ವೇಣೂರು ಭ. ಬಾಹುಬಲಿ ಕ್ಷೇತ್ರಕ್ಕೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಭೇಟಿ

ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿರುವ ವೇಣೂರು ಭಗವಾನ್ ಶ್ರೀ ಬಾಹುಬಲಿಯ ಮಹಾಮಸ್ತಕಾಭಿಷೇಕಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಫೆ. 14ರಂದು ಮಹಾಮಸ್ತಕಾಭಿಷೇಕ ಸಮಿತಿ ಹಾಗೂ ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಅಧ್ಯಕ್ಷರೂ ಆಗಿರುವ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಬಾಹುಬಲಿ ಕ್ಷೇತ್ರಕ್ಕೆ ಆಗಮಿಸಿ, ವಸ್ತುಪ್ರದರ್ಶನ, ಆಹಾರ, ಮಹಾಮಸ್ತಕಾಭಿಷೇಕ ವೀಕ್ಷಣೆಗೆ ನಿರ್ಮಿಸಿರುವ ಗ್ಯಾಲರಿಗಳ ಪೂರ್ವ ತಯಾರಿ ಕಾಮಗಾರಿಗಳ ಬಗ್ಗೆ ವಿವಿಧ ಸಮಿತಿಗಳ ಸಂಚಾಲಕರೊ೦ದಿಗೆ ಚರ್ಚಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಬಳಿಕ ಅಟ್ಟಳಿಗೆ ವೀಕ್ಷಿಸಿ, ಕ್ಷೇತ್ರದಲ್ಲಿ ಆಗಿರುವ ಕಾಮಗಾರಿಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷರಾದ ಅಳದಂಗಡಿ ಅರಮನೆಯ ತಿಮ್ಮಣ್ಡರಸರಾದ ಡಾ| ಪದ್ಮಪ್ರಸಾದ್ ಅಜಿಲರು ಇದುವರೆಗಿನ ಕಾಮಗಾರಿಗಳು ಮತ್ತು ಸರಕಾರದ ಅನುದಾನಗಳ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಮಹಾಮಸ್ತಕಾಭಿಷೇಕ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿ. ಪ್ರವೀಣ್ ಕುಮಾ‌ರ್ ಇಂದ್ರ ಇದುವರೆಗಿನ ಖರ್ಚು ವೆಚ್ಚಗಳು, ಆಗಲಿರುವ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಮಾಜಿ ಸಚಿವ ಹಾಗೂ ಮಹಾಮಸ್ತಕಾಭಿಷೇಕ ಸಮಿತಿಯ ಉಪಾಧ್ಯಕ್ಷರಾದ ಕೆ. ಅಭಯಚಂದ್ರ ಜೈನ್, ಕಾರ್ಯನಿರ್ವಾಹಕ ಅಭಿಯಂತರರಾದ ಶಿವಪ್ರಸಾದ್‌ ಅಜಿಲ, ಜಿಲ್ಲಾ ನೋಡಲ್ ಅಧಿಕಾರಿ ಮಾಣಿಕ್ಯ ಎಂ., ಸಮನ್ವಯ ಅಧಿಕಾರಿ ಡಾ. ಕೆ. ಜಯಕೀತಿ೯ ಜೈನ್ ಧಮ೯ಸ್ಥಳ, ಮಹಾವೀರ ಅಜ್ರಿ ಧರ್ಮಸ್ಥಳ, ಪಡೋಡಿಗುತ್ತು ಎ. ಜೀವಂಧ‌ರ್ ಕುಮಾರ್, ಅಭಿಜಿತ್‌ ಎಂ., ಸುಭಾಶ್ಚಂದ್ರ ಜೈನ್ ಕೆಲ್ಲಪುತ್ತಿಗೆ, ಬಿ. ರತ್ನವರ್ಮ ಇಂದ್ರ, ನವೀನ್‌ಚಂದ್‌ ಬಲ್ಲಾಳ್, ಎಂ. ವಿಜಯರಾಜ್‌ ಅಧಿಕಾರಿ, ಡಾ| ಶಾಂತಿಪ್ರಸಾದ್, ಡಾ| ಕೆ. ಆರ್‌. ಪ್ರಸಾದ್‌, ವಿಕಾಸ್‌ ಜೈನ್, ತೀಥ೯ಕ್ಷೇತ್ರದ ಕಾಯ೯ಕಾರಿ ಸಮಿತಿ ಸದಸ್ಯರು ಮತ್ತು ಶ್ರೀ ಬಾಹುಬಲಿ ಯುವಜನ ಸಂಘದ ಸದಸ್ಯರು, ವೇಣೂರು ಜೈನ್‌ ಮಿಲನ್ ಸದಸ್ಯರು, ಬ್ರಾಹ್ಮಿ ಮಹಿಳಾ ಸಂಘದ ಸದಸ್ಯರು, ಕಲ್ಲು ಬಸದಿ ಬ್ರಿಗೇಡಿಯರ್ಸ್‌ ಸದಸ್ಯರು ಹಾಗೂ ಮಹಾಮಸ್ತಕಾಭಿಷೇಕ ಮಹೋತ್ಸವದ ವಿವಿಧ ಸಮಿತಿಗಳ ಸಂಚಾಲಕರು, ಸಂಯೋಜಕರು ಉಪಸ್ಥಿತರಿದ್ದರು. ಸಮಿತಿ ಕಾಯ೯ದಶಿ೯ ಮಹಾವೀರ ಜೈನ್ ಮೂಡುಕೋಡಿಗುತ್ತು ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ವರಂಗ: ವಾರ್ಷಿಕ ಮಹಾರಥಯಾತ್ರಾ ಮಹೋತ್ಸವ

Article Image

ವರಂಗ: ವಾರ್ಷಿಕ ಮಹಾರಥಯಾತ್ರಾ ಮಹೋತ್ಸವ

ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಅತಿಶಯ ಶ್ರೀ ಕ್ಷೇತ್ರ ವರಂಗದಲ್ಲಿ ಪರಂಪರಾನುಗತವಾಗಿ ನೆರವೇರಿಸಿಕೊಂಡು ಬಂದಿರುವ ಭಗವಾನ್ ಶ್ರೀ ೧೦೦೮ ನೇಮಿನಾಥ ಸ್ವಾಮಿ ಮತ್ತು ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರ ವಾರ್ಷಿಕ ರಥಯಾತ್ರಾ ಮಹೋತ್ಸವವು ಹೊಂಬುಜ ಜೈನ ಮಠದ ಪ.ಪೂ. ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ ಮತ್ತು ದಿವ್ಯ ನೇತೃತ್ವದಲ್ಲಿ ಫೆ.24ರಿಂದ ಮೊದಲ್ಗೊಂಡು ಫೆ.28ರವರೆಗೆ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.

ವೇಣೂರು ಬಾಹುಬಲಿ ಕ್ಷೇತ್ರಕ್ಕೆ SP ರಿಷ್ಯಂತ್ ಕುಮಾರ್ ಮತ್ತು ವಿವಿಧ ಅಧಿಕಾರಿಗಳ ಭೇಟಿ

Article Image

ವೇಣೂರು ಬಾಹುಬಲಿ ಕ್ಷೇತ್ರಕ್ಕೆ SP ರಿಷ್ಯಂತ್ ಕುಮಾರ್ ಮತ್ತು ವಿವಿಧ ಅಧಿಕಾರಿಗಳ ಭೇಟಿ

ವೇಣೂರು ಭಗವಾನ್ ಬಾಹುಬಲಿ ಸ್ವಾಮಿ ಬೆಟ್ಟಕ್ಕೆ ಇಂದು (ಫೆ. 13) SP ರಿಷ್ಯಂತ್ ಕುಮಾರ್ ಅವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಜೊತೆಗೆ ಇದ್ದು, ಮಹಾಮಸ್ತಕಾಭಿಷೇಕದ ಸಮಯದಲ್ಲಿನ ಪಾರ್ಕಿಂಗ್‌ ವ್ಯವಸ್ಥೆ, ತುರ್ತು ಸೇವಾ ಕಛೇರಿಗಳು, ವಸ್ತು ಪ್ರದರ್ಶನ ಮಳಿಗೆಗಳ ಬಗ್ಗೆ ಮಸ್ತಕಾಭಿಷೇಕ ಮಹೋತ್ಸವ ಸಮಿತಿಯ ಪದಾಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಪುತ್ತೂರು ವಿಭಾಗದ ಸಹಾಯಕ ಕಮಿಷನರ್‌ ಜುಬಿನ್‌ ಮೊಹಾಪಾತ್ರ, ಬಂಟ್ವಾಳ ಡಿ.ವೈ.ಎಸ್.ಪಿ. ಎಸ್.‌ ವಿಜಯ ಪ್ರಸಾದ್‌, ಬೆಳ್ತಂಗಡಿ ತಹಶೀಲ್ದಾರ್‌ ಪೃಥ್ವಿ ಸಾನಿಕಂ, ಜಿಲ್ಲಾ ನೋಡಲ್‌ ಅಧಿಕಾರಿ ಮಾಣಿಕ್ಯ ಎಂ., ಬೆಳ್ತಂಗಡಿ ತಾಲೂಕು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕುಸುಮಾಧರ, ವೇಣೂರು ಗ್ರಾಮ ಪಂಚಾಯತ್‌ ಅಧ್ಯಕ್ಷ ನೇಮಯ್ಯ ಕುಲಾಲ್‌, ವೇಣೂರು ಪೊಲೀಸ್‌ ಉಪನಿರೀಕ್ಷಕರಾದ ಶ್ರೀಶೈಲ, ಕಂದಾಯ ಇಲಾಖೆಯ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ, ಪಂಚಾಯತ್‌ರಾಜ್‌ ಮತ್ತು ಇಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳು, ಮಹಾಮಸ್ತಕಾಭಿಷೇಕ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿ. ಪ್ರವೀಣ್‌ ಕುಮಾರ್‌ ಇಂದ್ರ, ಕಾರ್ಯದರ್ಶಿ ಕೆ. ಪ್ರವೀಣ್‌ ಅಜ್ರಿ, ಪಾರ್ಕಿಂಗ್‌ ಸಮಿತಿಯ ಸಂಚಾಲಕ ಮನ್ಮಥರಾಜ್‌ ಕಾಜವ ಪೆರಿಯಾರುಗುತ್ತು, ಸಹಾಯಕ ನೋಡಲ್‌ ಅಧಿಕಾರಿ ಕೆ. ಜಯಕೀರ್ತಿ ಜೈನ್‌, ಚಂದ್ರಪ್ರಭ ಜೈನ್‌ ಉಪಸ್ಥಿತರಿದ್ದರು. ರಾಷ್ಟ್ರೀಯ ಹೆದ್ದಾರಿಯ ಕಾರ್ಯನಿರ್ವಾಹಕ ಅಭಿಯಂತರರಾದ ಶಿವಪ್ರಸಾದ್‌ ಅಜಿಲ ಅವರು ಸ್ವಾಗತಿಸಿ, ಮಹಾವೀರ ಜೈನ್‌ ಮೂಡುಕೋಡಿ ಇವರು ವಂದಿಸಿದರು.

ಮಹಾಮಸ್ತಕಾಭಿಷೇಕ-2024 : ಪೂರ್ವ ತಯಾರಿ ಸಭೆ

Article Image

ಮಹಾಮಸ್ತಕಾಭಿಷೇಕ-2024 : ಪೂರ್ವ ತಯಾರಿ ಸಭೆ

ವೇಣೂರು ಭಗವಾನ್‌ ಬಾಹುಬಲಿ ಮಹಾಮಸ್ತಕಾಭಿಷೇಕದ ವಿವಿಧ ಸಮಿತಿಗಳ ಪೂರ್ವ ತಯಾರಿ ಸಭೆಯು ಇಲ್ಲಿಯ ಶ್ರೀ ಬಾಹುಬಲಿ ಸಭಾಭವನದಲ್ಲಿ ಫೆ. 13ರಂದು ಜರಗಿತು. ಸಭೆಯ ಅಧ್ಯಕ್ಷತೆಯನ್ನು ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷರಾದ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್‌ ಅಜಿಲರು ವಹಿಸಿದ್ದರು. ಸಮಿತಿಯ ಪ್ರಧಾನ ಸಂಚಾಲಕರಾದ ಶ್ರೀಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್‌ರವರು ಮಾತನಾಡಿ, ಮಹಾಮಸ್ತಕಾಭಿಷೇಕದ ಎಲ್ಲಾ ಕೆಲಸಗಳು ಯಶಸ್ವಿಯಾಗಿ ನೆರವೇರಬೇಕಾದರೆ ಎಲ್ಲ ಸಮಿತಿಯವರು ಜವಾಬ್ದಾರಿಯುತವಾಗಿ ತಮ್ಮ ತಮ್ಮ ಕಾರ್ಯಗಳನ್ನು ನೆರವೇರಿಸಬೇಕೆಂದರು. ಮಹಾಮಸ್ತಕಾಭಿಷೇಕಕ್ಕೆ ಇನ್ನು ಕೇವಲ 1 ವಾರ ಉಳಿದಿದ್ದು, ಎಲ್ಲಾ ಉಪಸಮಿತಿಗಳು ಇತರ ಸಮಿತಿಗಳೊಂದಿಗೆ ಸಮನ್ವಯ ಸಾಧಿಸಿ, ಮಹಾಮಸ್ತಕಾಭಿಷೇಕದ ಯಶಸ್ವಿಗೆ ಸಹಕರಿಸಬೇಕೆಂದು ತಿಳಿಸಿದರು. ಎಲ್ಲಾ ಸಮಿತಿಗಳ ಸಂಚಾಲಕ, ಸಂಯೋಜಕರುಗಳು ಸಮಿತಿಗಳ ಕಾರ್ಯಚಟುವಟಿಕೆಗಳ ಮಾಹಿತಿ ನೀಡಿದರು. ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಕಾರ್ಯಕಾರಿಣಿ ಸದಸ್ಯರು, ಮಹಾಮಸ್ತಕಾಭಿಷೇಕದ ಕೋರ್‌ ಕಮಿಟಿ ಸದಸ್ಯರು, ಸೇವಾಕರ್ತೃಗಳು, ಸಮಿತಿ ಉಪಾಧ್ಯಕ್ಷರುಗಳು, ಕಾರ್ಯದರ್ಶಿಗಳು, ಸದಸ್ಯರುಗಳು ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಕೋಶಾಧಿಕಾರಿ ಪಿ. ಜಯರಾಜ ಕಂಬಳಿ ಉಪಸ್ಥಿತರಿದ್ದರು. ಮಹಾಮಸ್ತಕಾಭಿಷೇಕ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿ. ಪ್ರವೀಣ್‌ ಕುಮಾರ್‌ ಇಂದ್ರ ಸ್ವಾಗತಿಸಿದರು. ಸಮಿತಿ ಕಾರ್ಯದರ್ಶಿ ಮಹಾವೀರ ಜೈನ್‌ ಮೂಡುಕೋಡಿ ನಿರೂಪಿಸಿ, ವಂದಿಸಿದರು.

ಬಾವಂತಬೆಟ್ಟು ನಿರಂಜನ್ ಜೈನ್ ನಿಧನ

Article Image

ಬಾವಂತಬೆಟ್ಟು ನಿರಂಜನ್ ಜೈನ್ ನಿಧನ

ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದ ಬಾವಂತಬೆಟ್ಟು ನಿವಾಸಿ, ಹಿರಿಯ ಸಹಕಾರಿ ಧುರೀಣ, ಸಜ್ಜನ ರಾಜಕಾರಣಿ ನಿರಂಜನ್ ಜೈನ್ ಬಾವಂತಬೆಟ್ಟು (75 ವ.)ರವರು ಇಂದು (ಫೆ. 12) ನಿಧನರಾಗಿದ್ದಾರೆ. ಇವರು 1973ರಿಂದ ಸಹಕಾರಿ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಕಣಿಯೂರು ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರಿ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಸುಮಾರು 38 ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ. ಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರು ಪತ್ನಿ ಅರುಣ, ಮಕ್ಕಳಾದ ಪವಿತ್ರ, ಚೈತ್ರ ಹಾಗೂ ಅಪಾರ ಬಂಧು-ವರ್ಗದವರನ್ನು ಅಗಲಿದ್ದಾರೆ

ಫೆ. 13: ಶ್ರೀ ಅತಿಶಯ ಕ್ಷೇತ್ರ ಪರುಷಗುಡ್ಡೆ ಬಸದಿಯ ವಾರ್ಷಿಕೋತ್ಸವ

Article Image

ಫೆ. 13: ಶ್ರೀ ಅತಿಶಯ ಕ್ಷೇತ್ರ ಪರುಷಗುಡ್ಡೆ ಬಸದಿಯ ವಾರ್ಷಿಕೋತ್ಸವ

ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮದ ಶ್ರೀ ಅತಿಶಯ ಕ್ಷೇತ್ರ ಪರುಷಗುಡ್ಡೆ ಬಸದಿಯ ಭಗವಾನ್ ಶ್ರೀ ಶಾಂತಿನಾಥ ತೀರ್ಥಂಕರರ ಮತ್ತು ಭಗವಾನ್ ಶ್ರೀ ಪಾರ್ಶ್ವನಾಥ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವದ ಹಾಗೂ ಶ್ರೀ ಪದ್ಮಾವತಿ ಅಮ್ಮನವರ ಬಿಂಬ ಪ್ರತಿಷ್ಠಾ ಮಹೋತ್ಸವದ ವಾರ್ಷಿಕೋತ್ಸವ ಸಮಾರಂಭವು ಮೂಡುಬಿದಿರೆ ಶ್ರೀ ಜೈನ ಮಠದ ಪರಮಪೂಜ್ಯ ಭಾರತಭೂಷಣ ಸ್ವಸ್ತಿಶ್ರೀ ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯದಲ್ಲಿ ಮತ್ತು ಮಾರ್ಗದರ್ಶನದಲ್ಲಿ, ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಫೆ. 13ರಂದು ಜರಗಲಿರುವುದು.

ಹಿಂದೂ ಮಂದಿರಗಳು ಪಿಕ್ ನಿಕ್ ಸ್ಪಾಟ್‌ ಅಲ್ಲ : ಕೋರ್ಟ್ ತೀರ್ಪು - ಹಾಗಾದರೆ ಜೈನರ ಸಮ್ಮೇದಗಿರಿಗೆ ಪ್ರವಾಸಿಗರ ಪ್ರವೇಶ ಯ

Article Image

ಹಿಂದೂ ಮಂದಿರಗಳು ಪಿಕ್ ನಿಕ್ ಸ್ಪಾಟ್‌ ಅಲ್ಲ : ಕೋರ್ಟ್ ತೀರ್ಪು - ಹಾಗಾದರೆ ಜೈನರ ಸಮ್ಮೇದಗಿರಿಗೆ ಪ್ರವಾಸಿಗರ ಪ್ರವೇಶ ಯ

ಹಿಂದೂ ಮಂದಿರಗಳು ಪಿಕ್‌ನಿಕ್ ಸ್ಪಾಟ್‌ ಅಲ್ಲ. ಕೇವಲ ಹಿಂದೂ ಭಕ್ತರಿಗೆ ಪ್ರವೇಶ ನೀಡಬೇಕೆಂದು ನ್ಯಾಯಾಲಯ ಆದೇಶ ನೀಡಿರುವುದು ಸ್ವಾಗತಾರ್ಹ. ಹಿಂದೂಗಳ ಪವಿತ್ರ ಭಾವನೆಗೆ ಬೆಲೆ ಸಿಕ್ಕಿರುವುದು ಸಂತೋಷ. ಆದರೆ ಈ ನೀತಿ ಎಲ್ಲರಿಗೂ ಅನ್ವಯವಾಗಬೇಕು. ಜೈನರ ಮಂದಿರಗಳ ದರ್ಶನಕ್ಕೆ ಒಂದು ಸೀಮಿತ ನಿಯಮಗಳೊಂದಿಗೆ ಜೈನೇತರರಿಗೂ ಅನುಮತಿ ನೀಡಬಹುದು. ಯಾಕೆಂದರೆ ಜೈನರ ಮಂದಿರಗಳು ಸಮವಸರಣದ ಪ್ರತೀಕವಾಗಿದೆ. ಸಮವಸರಣಕ್ಕೆ ಸರ್ವ ಜೀವಿಗಳಿಗೂ ಪ್ರವೇಶಕ್ಕೆ ಅವಕಾಶ ಇತ್ತು. ಅದೇ ಮಾದರಿಯಲ್ಲಿ ಎಲ್ಲರಿಗೂ ಅಂದರೆ ಭಕ್ತರಿಗೆ ಪ್ರವೇಶ ನೀಡಬಹುದು. ಜೈನ ದರ್ಶನವು ಸಕಲ ಜೀವಿಗಳಿಗೆ ಮುಕ್ತವಾಗಿದೆ. ಆದರೆ ಕೆಲವೊಂದು ಕಟ್ಟುಪಾಡುಗಳು ಇರುತ್ತವೆ. ಇದು ಜೈನರಿಗೂ, ಜೈನೇತರರಿಗೂ ಕಡ್ಡಾಯವಾಗಿ ಇದೆ. ಆದರೆ ಪ್ರವಾಸೋದ್ಯಮದ ನೆಪ ನೀಡಿ ಪ್ರವಾಸಿಗರಿಗೆ ಜೈನ ಮಂದಿರಗಳ ಪ್ರವೇಶ ನೀಡಿರುವುದು ಯಾವ ನ್ಯಾಯವಾಗಿದೆ. ಜೈನರ ಪರಮ ಪವಿತ್ರ ತೀರ್ಥಕ್ಷೇತ್ರ ಜಾರ್ಖಂಡ್ ರಾಜ್ಯದ ಸಮ್ಮೇದ ಶಿಖರ್ಜಿಗೆ ಪ್ರವಾಸಿಗರಿಗೆ ಯಾವ ನಿಯಮಾವಳಿಗಳ ಮೂಲಕ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಜೈನರ ಅದೆಷ್ಟೋ ಜಿನಮಂದಿರಗಳಿಗೆ ಪ್ರವಾಸಿಗರಿಗೆ ದರ್ಶನಕ್ಕೆ ಅವಕಾಶ ನೀಡಿರುವುದು ಯಾವ ಕಾನೂನು ಸ್ವಾಮಿ. ಜೈನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತ ಕೃತ್ಯಗಳನ್ನು ಪ್ರವಾಸಿಗರು ಎಸಗುತ್ತಿದ್ದಾರೆ. ಇದು ಸರಕಾರದ ಕಣ್ಣಿಗೆ ಕಾಣುವುದಿಲ್ಲವೇ. ಒಬ್ಬರಿಗೊಂದು ನ್ಯಾಯ, ಇನ್ನೊಬ್ಬರಿಗೆ ಇನ್ನೊಂದು ನ್ಯಾಯದ ತಾರತಮ್ಯವನ್ನು ಎಸಗುವ ಈ ನಾಡಿನ ಆಡಳಿತಕ್ಕೆ, ಕಾನೂನಿಗೆ ಅರಿವಾಗಿಲ್ಲವೇ...? ಅಥವಾ ಜಾಣ ಕುರುಡೇ...? ದೇಶದ ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತರಾಗಿರುವ ಜೈನರ ಧಾರ್ಮಿಕ ಭಾವನೆಗಳನ್ನು ಓಟು ಬ್ಯಾಂಕ್ ರಾಜಕಾರಣದ ಕಾರಣಕ್ಕಾಗಿ ಪರಿಗಣನೆಗೆ ತೆಗೆದುಕೊಳ್ಳದ ನೀಚ ಪ್ರವೃತ್ತಿಯನ್ನು ಜೈನರು ಗಂಭೀರವಾಗಿ ಪರಿಗಣಿಸಲೇಬೇಕು. ಜೈನರು ಒಗ್ಗಟ್ಟಾಗಿ ಭಾರತದ ಸಂವಿಧಾನದ ಅಡಿಯಲ್ಲಿ ಮೂಲಭೂತ ಹಕ್ಕುಗಳನ್ನು ರಕ್ಷಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಇಲ್ಲದೇ ಹೋದಲ್ಲಿ ಜೈನರ ಧಾರ್ಮಿಕ ಭಾವನೆಗಳ ಜೊತೆ ಆಟವಾಡುವ ರಾಜಕೀಯ ಕೊನೆಯಾಗುವುದಿಲ್ಲ. -ನಿರಂಜನ್ ಜೈನ್ ಕುದ್ಯಾಡಿ

ವೇಣೂರು ಮಹಾಮಸ್ತಕಾಭಿಷೇಕ : ಅಟ್ಟಳಿಗೆ ಪ್ರವೇಶಕ್ಕೆ ಅವಕಾಶ

Article Image

ವೇಣೂರು ಮಹಾಮಸ್ತಕಾಭಿಷೇಕ : ಅಟ್ಟಳಿಗೆ ಪ್ರವೇಶಕ್ಕೆ ಅವಕಾಶ

12 ವರುಷಗಳಿಗೊಮ್ಮೆ ಜರಗುವ ಭಗವಾನ್ ಬಾಹುಬಲಿ ಮೂರ್ತಿಯ ಮಹಾಮಸ್ತಕಾಭಿಷೇಕಕ್ಕೆ ನಿರ್ಮಾಣವಾಗಿರುವ ಅಟ್ಟಳಿಗೆಯನ್ನು ಹತ್ತುವುದು, ದೇವರನ್ನು ಅತೀ ಹತ್ತಿರದಿಂದ ವೀಕ್ಷಿಸುವುದು, ಎತ್ತರದಿಂದ ಪ್ರಕೃತಿಯನ್ನು ನೋಡುವುದು ‌ಅಂದರೆ ಏನೋ ಸಂಭ್ರಮ. ಈ ಸೌಂದರ್ಯ ವೀಕ್ಷಿಸಲು ಭಕ್ತರು ಈಗಾಗಲೇ ವೇಣೂರಿನ ಬಾಹುಬಲಿ ಕ್ಷೇತ್ರಕ್ಕೆ ಆಗಮಿಸುತ್ತಿದ್ದು, ಅಟ್ಟಳಿಗೆ ಪ್ರವೇಶಿಸಲು ನಿಗದಿತ ಶುಲ್ಕದೊಂದಿಗೆ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಅವಕಾಶವಿರುತ್ತದೆ. ಅಟ್ಟಳಿಗೆಯಲ್ಲಿ ಮೊಬೈಲ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮೂರ್ತಿಯನ್ನು ಮುಟ್ಟದೆ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಮಸ್ತಕಾಭಿಷೇಕ ಮಹೋತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಡಾ| ಎನ್. ಸಾಹಿತ್ ಜೈನ್ ರಾಜ್ಯ ಮಟ್ಟದಲ್ಲಿ 3ನೇ ರ‍್ಯಾಂಕ್

Article Image

ಡಾ| ಎನ್. ಸಾಹಿತ್ ಜೈನ್ ರಾಜ್ಯ ಮಟ್ಟದಲ್ಲಿ 3ನೇ ರ‍್ಯಾಂಕ್

2023ನೇ ಜುಲೈ ತಿಂಗಳಲ್ಲಿ ಬೆಂಗಳೂರಿನ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾನಿಲಯ ನಡೆಸಿದ ವೈದ್ಯಕೀಯ ಸ್ನಾತಕೋತ್ತರ ಪರೀಕ್ಷೆಯಲ್ಲಿ ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಡಾ| ಎನ್. ಸಾಹಿತ್ ಜೈನ್ ರಾಜ್ಯಮಟ್ಟದಲ್ಲಿ 3ನೇ ರ‍್ಯಾಂಕ್ ಗಳಿಸಿರುತ್ತಾರೆ. ಇವರು ಕಾರ್ಕಳ ತಾಲೂಕಿನ ನಲ್ಕೆದಬೆಟ್ಟುಗುತ್ತು, ಜಿನಪ್ರಸಾದ ನಿಲಯದ ಎನ್. ಅರವಿಂದ ಕುಮಾರ್ ಜೈನ್ ಮತ್ತು ಪದ್ಮಕಾಂತಿ ದಂಪತಿಗಳ ಪುತ್ರ .

ಧಾರವಾಡ : ವೇಣೂರು ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಆಹ್ವಾನ

Article Image

ಧಾರವಾಡ : ವೇಣೂರು ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಆಹ್ವಾನ

ಧಾರವಾಡ/ಸತ್ತೂರು: ವೇಣೂರಿನ ಮಹಾಮಸ್ತಕಾಭಿಷೇಕ ಸಮಿತಿಯ ಪದಾಧಿಕಾರಿಗಳು ಇಲ್ಲಿಯ ಎಸ್.ಡಿ.ಎಂ. ಮಹಾವಿದ್ಯಾಲಯದ ಉಪಕುಲಪತಿಗಳಾದ ಡಾ| ನಿರಂಜನ್ ಕುಮಾರ್ ಮತ್ತು ಪದ್ಮಲತಾ ನಿರಂಜನ್ ಕುಮಾರ್ ಧಾರವಾಡ ಇವರನ್ನು ಭೇಟಿ ಮಾಡಿ, ಅವರಿಗೆ ಮಹಾಮಸ್ತಕಾಭಿಷೇಕದ ಶ್ರೀಮುಖ ಪತ್ರಿಕೆಯನ್ನು ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಆ ಸಂದರ್ಭದಲ್ಲಿ ಎಸ್.ಡಿ.ಎಂ. ಸೊಸೈಟಿಯ ಕಾರ್ಯದರ್ಶಿಗಳಾದ ವಿ. ಜೀವಂಧರ್ ಕುಮಾರ್, ಮಸ್ತಕಾಭಿಷೇಕ ಸಮಿತಿಯ ಕೋಶಾಧಿಕಾರಿ ಜಯರಾಜ್ ಕಂಬ್ಳಿ, ಕಾರ್ಯದರ್ಶಿಗಳಾದ ಮಹಾವೀರ ಜೈನ್ ಮೂಡುಕೋಡಿ ಮತ್ತು ಕೆ. ಪ್ರವೀಣ್ ಅಜ್ರಿ ಹಾಗೂ ಪ್ರಸ್ತುಥ್ ಕುಂಡದಬೆಟ್ಟು ಉಪಸ್ಥಿತರಿದ್ದರು.

ಫೆ. 10-15 : ಮೂಡುಬಿದಿರೆಯಲ್ಲಿ ಮಕ್ಕಿಮನೆ ಕಲಾವೃಂದ ಬಳಗ ಸೇರಿದಂತೆ ವಿವಿಧ ತಂಡಗಳ ಸಾಂಸ್ಕೃತಿಕ ವೈಭವ

Article Image

ಫೆ. 10-15 : ಮೂಡುಬಿದಿರೆಯಲ್ಲಿ ಮಕ್ಕಿಮನೆ ಕಲಾವೃಂದ ಬಳಗ ಸೇರಿದಂತೆ ವಿವಿಧ ತಂಡಗಳ ಸಾಂಸ್ಕೃತಿಕ ವೈಭವ

ಮೂಡುಬಿದಿರೆ ಜೈನ್ ಪೇಟೆಯ ಇತಿಹಾಸ ಪ್ರಸಿದ್ಧ ಹೀರೆ ಅಮ್ಮನವರ ಬಸದಿ ಧಾಮ ಸಂಪ್ರೋಕ್ಷಣಾ ಪೂರ್ವಕ ಜಿನಬಿಂಬ ಪ್ರತಿಷ್ಠಾ ಮಹೋತ್ಸವ ಮತ್ತು ವಾರ್ಷಿಕ ರಥೋತ್ಸವು ಫೆ. 10 ರಿಂದ 16ರ ತನಕ ಜರುಗಲಿದ್ದು, ಫೆ. 10ರಂದು ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಂಗಳೂರಿನ ಮಕ್ಕಿಮನೆ ಕಲಾವೃಂದದಿಂದ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ. ಫೆ. 11ರಂದು ಕಾವ್ಯ ವಾಚನ-ವ್ಯಾಖ್ಯಾನ ವೈಭವ (ಪ್ರಸಂಗ : ಭ| ಶ್ರೀ ಶಾಂತಿನಾಥ ಚರಿತೆ), ಫೆ. 12ರಂದು ಜೈನ ಅಂತ್ಯಾಕ್ಷರಿ, ಫೆ. 13ರಂದು ಮುನಿರಾಜ ರೆಂಜಾಳ ಅವರ ಪರಿಕಲ್ಪನೆಯಲ್ಲಿ "ಚಾವಡಿ ಚಿಂತನೆ" ಮತ್ತು ಸಪ್ತವರ್ಣ ಬೆಳುವಾಯಿ ಇವರ ತಂಡದವರಿಂದ "ನಾಟ್ಯ ವೈಭವ, ಫೆ. 14ರಂದು "ಅಭಯಮತಿ, ಅಭಯರುಚಿ" ರೂಪಕ ಕಾರ್ಯಕ್ರಮ, ಫೆ. 15ರಂದು ಯಕ್ಷಗಾನ ಶೈಲಿಯಲ್ಲಿ ಕಾವ್ಯ ವಾಚನ ಪ್ರವಚನ ವೈಭವ (ಪ್ರಸಂಗ : ಶ್ರೀ ಪದ್ಮಾವತಿ ದೇವಿ ಚರಿತೆ) ಕಾರ್ಯಕ್ರಮಗಳು ನಡೆಯಲಿದೆ.

ವೇಣೂರು ಭ| ಬಾಹುಬಲಿ ಮಹಾಮಸ್ತಕಾಭಿಷೇಕ: ಬೆಳ್ತಂಗಡಿಯಲ್ಲಿ ಅಧಿಕಾರಿಗಳೊಂದಿಗೆ ಎಸಿ ಸಭೆ

Article Image

ವೇಣೂರು ಭ| ಬಾಹುಬಲಿ ಮಹಾಮಸ್ತಕಾಭಿಷೇಕ: ಬೆಳ್ತಂಗಡಿಯಲ್ಲಿ ಅಧಿಕಾರಿಗಳೊಂದಿಗೆ ಎಸಿ ಸಭೆ

ಫೆ. 22ರಿಂದ ಮಾ. 1ರ ತನಕ ನಡೆಯಲಿರುವ ವೇಣೂರಿನ ಭ| ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಯಶಸ್ಸಿಗಾಗಿ ಪೂರ್ವಸಿದ್ಧತೆ ಸಭೆಯು ಬೆಳ್ತಂಗಡಿಯ ಆಡಳಿತ ಸೌಧದಲ್ಲಿ ಪುತ್ತೂರಿನ ಸಹಾಯಕ ಕಮಿಷನರ್ ಜುಬಿನ್ ಮೊಹಾಪಾತ್ರ ಅವರ ಅಧ್ಯಕ್ಷತೆಯಲ್ಲಿ ಫೆ. 7ರಂದು ನಡೆಯಿತು. ಸಭೆಯನ್ನು ಮುನ್ನಡೆಸಿದ ಸಹಾಯಕ ಕಮಿಷನರ್ ಎಲ್ಲ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರಲ್ಲದೆ, ಅಧಿಕಾರಿಗಳ ಜವಾಬ್ದಾರಿಗಳನ್ನು ಮನವರಿಕೆ ಮಾಡಿದರು. ಸಂಬಂಧಿತ ಎಲ್ಲ ಇಲಾಖೆಗಳ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗೆ ಸಂಬಂಧಿಸಿದಂತೆ ನೋಡಲ್ ಅಧಿಕಾರಿಗಳನ್ನು ನೇಮಿಸಿ, ಅವರ ಹೆಸರು ಮತ್ತು ಮೊಬೈಲ್ ನಂಬರನ್ನು ತಾಲೂಕು ತಹಶೀಲ್ದಾರರಿಗೆ ನೀಡುವಂತೆ ಸೂಚಿಸಿದರು. ಮಹಾಮಸ್ತಕಾಭಿಷೇಕದ ಸಂದರ್ಭ ಬಾಹುಬಲಿ ಬೆಟ್ಟದಲ್ಲಿ ಇಲಾಖಾ ಅಧಿಕಾರಿಗಳಿಗಾಗಿ ಪ್ರತ್ಯೇಕ ಮಾಹಿತಿ ಕೇಂದ್ರ ತೆರೆಯುವಂತೆ ಸೂಚಿಸಿದರು. ಒಟ್ಟಿನಲ್ಲಿ ಮಹಾಮಸ್ತಕಾಭಿಷೇಕದ ಯಶಸ್ಸಿಗೆ ಸರಕಾರದ ಕಡೆಯಿಂದ ಸರ್ವರೀತಿಯ ಸಹಕಾರ ನೀಡಲು ಹಾಗೂ ಎಲ್ಲೂ ಯಾವುದೇ ಪ್ರಮಾದವಾಗದಂತೆ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಿದರು. ಸಭೆಯಲ್ಲಿ ಮಹಾಮಸ್ತಕಾಭಿಷೇಕದ ಸರಕಾರದ ಪರವಾಗಿ ನೋಡಲ್ ಅಧಿಕಾರಿ ಮಾಣಿಕ್ಯ ಎಂ., ಸಹಾಯಕ ನೋಡಲ್ ಅಧಿಕಾರಿ ಡಾ| ಜಯಕೀರ್ತಿ ಜೈನ್, ಬೆಳ್ತಂಗಡಿಯ ತಹಶೀಲ್ದಾರ್ ಪೃಥ್ವಿ ಸಾನಿಕಂ, ಬೆಳ್ತಂಗಡಿ ತಾಲೂಕು ಪಂಚಾಯತ್ ಪ್ರಭಾರ ಕಾರ್ಯ ನಿರ್ವಹಣಾಧಿಕಾರಿ ಭವಾನಿ ಶಂಕರ್ ಎನ್., ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಪ್ರಸಾದ್ ಅಜಿಲ, ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷರಾದ ಅಳದಂಗಡಿ ಅರಮನೆಯ ಡಾ| ಪದ್ಮಪ್ರಸಾದ್ ಅಜಿಲ, ಪ್ರಧಾನ ಕಾರ್ಯದರ್ಶಿಗಳಾದ ಪ್ರವೀಣ್ ಕುಮಾರ್ ಇಂದ್ರ ಉಪಸ್ಥಿತರಿದ್ದು ಅಗತ್ಯ ಸಲಹೆ-ಸೂಚನೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ನಿತಿನ್, ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಶಿವಕುಮಾರ್, ಆರೋಗ್ಯ ಇಲಾಖೆ ತಾಲೂಕು ವೈದ್ಯಾಧಿಕಾರಿ ಡಾ| ಪ್ರಕಾಶ್, ಪೊಲೀಸ್ ಇಲಾಖೆಯ ಸಬ್ ಇನ್ಸ್‌ಪೆಕ್ಟರ್ ಶ್ರೀಶೈಲ, ಅಗ್ನಿಶಾಮಕದಳ ಇಲಾಖೆಯ ಪ್ರಭಾರ ಅಧಿಕಾರಿ ನೀಲಯ್ಯ ಗೌಡ, ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿ ಉದಯ ಶೆಟ್ಟಿ‌, ಎಪಿಎಂಸಿ ಕಾರ್ಯದರ್ಶಿ ರವೀಂದ್ರ, ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕ್ಲಮೆಂಟ್ ಬೆಂಜಮಿನ್, ವೇಣೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಪಾಟೀಲ್, ವೇಣೂರು ಕಂದಾಯ ನಿರೀಕ್ಷಕ ಕುಮಾರ ಸ್ವಾಮಿ, ತಾ.ಪಂ. ಕಚೇರಿ ವ್ಯವಸ್ಥಾಪಕ ಪ್ರಶಾಂತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಪ್ರಿಯಾ ಆಗ್ನೆಸ್ ಸಹಿತ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಫೆ. 10-16: ಮೂಡುಬಿದಿರೆ ಅಮ್ಮನವರ ಬಸದಿ ಧಾಮ ಸಂಪ್ರೋಕ್ಷಣಾ ಪೂರ್ವಕ ಜಿನಬಿಂಬ ಪ್ರತಿಷ್ಠಾ ಮಹೋತ್ಸವ

Article Image

ಫೆ. 10-16: ಮೂಡುಬಿದಿರೆ ಅಮ್ಮನವರ ಬಸದಿ ಧಾಮ ಸಂಪ್ರೋಕ್ಷಣಾ ಪೂರ್ವಕ ಜಿನಬಿಂಬ ಪ್ರತಿಷ್ಠಾ ಮಹೋತ್ಸವ

ಜೈನಕಾಶಿ ಎಂದೇ ಪ್ರಸಿದ್ಧವಾಗಿರುವ ಮೂಡುಬಿದಿರೆಯ ಹದಿನೆಂಟು ಬಸದಿಗಳಲ್ಲಿ ಒಂದಾದ ಭ| ಶ್ರೀ ಶಾಂತಿನಾಥ ಸ್ವಾಮಿ ಮೂಲ ನಾಯಕನಾಗಿರುವ, ಶ್ರೀ ಹಿರೇ ಅಮ್ಮನವರ ಬಸದಿಯ ಹಾಗೂ ಧ್ವಜಸ್ತಂಭದ ಜೀರ್ಣೋದ್ಧಾರದ ಕಾರ್ಯಕ್ರಮಗಳು 28 ಜನವರಿ 2023ರಂದು ಪ್ರಾರಂಭವಾಗಿ, ಇದೀಗ ಸಂಪೂರ್ಣವಾಗಿ ಮುಕ್ತಾಯಗೊಂಡು ಪುನಃ ಪ್ರತಿಷ್ಠಾ ಮಹೋತ್ಸವದ ಪುಣ್ಯ ಕಾರ್ಯಕ್ಕೆ ಸಿದ್ಧವಾಗಿದೆ. ಯುಗಳ ಮುನಿಗಳಾದ ಪರಮಪೂಜ್ಯ ೧೦೮ ಶ್ರೀ ಅಮೋಘಕೀರ್ತಿ ಮುನಿಮಹಾರಾಜರು ಹಾಗೂ ಪರಮಪೂಜ್ಯ ೧೦೮ ಶ್ರೀ ಅಮರಕೀರ್ತಿ ಮುನಿಮಹಾರಾಜರ ಪಾವನ ಸಾನ್ನಿಧ್ಯದಲ್ಲಿ, ಮೂಡುಬಿದಿರೆ ಶ್ರೀ ಜೈನ ಮಠದ ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ ಹಾಗೂ ದಿವ್ಯ ನೇತೃತ್ವದಲ್ಲಿ ಹಾಗೂ ನಾಡಿನ ಸಮಸ್ತ ಭಟ್ಟಾರಕರ ದಿವ್ಯ ಸಾನ್ನಿಧ್ಯದಲ್ಲಿ ಧಾಮ ಸಂಪ್ರೋಕ್ಷಣಾ ಪೂರ್ವಕ ಜಿನಬಿಂಬ ಪ್ರತಿಷ್ಠಾ ಮಹೋತ್ಸವ ಮತ್ತು ವಾರ್ಷಿಕ ರಥೋತ್ಸವ ಕಾರ್ಯಕ್ರಮವು ಫೆ. 10ರಿಂದ ಫೆ. 16ರ ವರೆಗೆ ಜೈನ ಆಗಮೋಕ್ತ ವಿಧಿ-ವಿಧಾನಗಳೊಂದಿಗೆ ಸಂಪನ್ನಗೊಳ್ಳಲಿರುವುದು.

ಬೆಳಗಾವಿಯ ಧರ್ಮನಗರಿ ಶಮನೇವಾಡಿಯಲ್ಲಿ ಜೈನ ಸಮ್ಮೇಳನ

Article Image

ಬೆಳಗಾವಿಯ ಧರ್ಮನಗರಿ ಶಮನೇವಾಡಿಯಲ್ಲಿ ಜೈನ ಸಮ್ಮೇಳನ

ಬೆಳಗಾವಿಯ ಧರ್ಮನಗರಿ ಶಮನೇವಾಡಿಯಲ್ಲಿ ಪರಮ ಪೂಜ್ಯ ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರನಂದಿ ಮುನಿಮಹಾರಾಜರ 33ನೆಯ ದೀಕ್ಷಾ ಜಯಂತಿ ನಿಮಿತ್ತ ಇಂದು ಮಧ್ಯಾಹ್ನ 2:00 ಗಂಟೆಗೆ ಬೃಹತ್ ಜೈನ ಸಮ್ಮೇಳನ ನಡೆಯಲಿದೆ. ಜೈನ ಸಮ್ಮೇಳನದ ಉದ್ದೇಶ: ಸರಕಾರವು ಜೈನ ನಿಗಮ ಮಂಡಳಿಯನ್ನು ಸ್ಥಾಪಿಸಬೇಕು, ಮಹಾನಗರಗಳಲ್ಲಿ ಜೈನ್ ಹಾಸ್ಟೆಲ್‌ಗಳ ಸ್ಥಾಪನೆ ಆಗಬೇಕು, ಪ್ರತಿ ಜಿಲ್ಲೆಗಳಲ್ಲಿ ಬಡಜನರ ಉಚಿತ ಚಿಕಿತ್ಸೆಗಾಗಿ ಆಸ್ಪತ್ರೆಗಳ ಸ್ಥಾಪನೆ ಆಗಬೇಕು, ಜೈನ ಸಾಧುಗಳ ಸುರಕ್ಷತೆ ಆಗಬೇಕು, ಜೈನ ಬಡ ವಿದ್ಯಾರ್ಥಿಗಳಿಗೆ ನಿಶುಲ್ಕ (ಉಚಿತ) ವಿದ್ಯಾರ್ಜನೆ ಆಗಬೇಕು, ಪ್ರತಿ ಹಳ್ಳಿ ಹಳ್ಳಿಗೆ ಮುನಿ ನಿವಾಸ ಹಾಗೂ ಮಂಗಲ ಕಾರ್ಯಾಲಯಗಳು ನಿರ್ಮಾಣವಾಗಬೇಕು, ಕರ್ನಾಟಕ ಜೈನ ಸಂಸ್ಕೃತಿಯ ಸಂರಕ್ಷಣೆ ಆಗಬೇಕು. ಸಾಂಸ್ಕೃತಿಕ ಕಾರ್ಯಕ್ರಮ: ಇಂದು ಸಂಜೆ ನಟರಾಜ ಎಂಟಟೈನರ್ಸ್ ಅರ್ಪಿಸುವ ವಿಶ್ವ ಪ್ರಸಿದ್ದ ಕನ್ನಡ ಸಂಗೀತಗಾರ ರಾಜೇಶ್ ಕೃಷ್ಣನ್ ಇವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ವೇಣೂರು: ಎಸ್.ಡಿ.ಎಂ. ಐಟಿಐ ವಿದ್ಯಾರ್ಥಿಗಳಿಂದ ಸ್ವಚ‍್ಛತಾ ಕಾರ್ಯಕ್ರಮ

Article Image

ವೇಣೂರು: ಎಸ್.ಡಿ.ಎಂ. ಐಟಿಐ ವಿದ್ಯಾರ್ಥಿಗಳಿಂದ ಸ್ವಚ‍್ಛತಾ ಕಾರ್ಯಕ್ರಮ

ಬೆಳ್ತಂಗಡಿ ತಾಲೂಕು, ವೇಣೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐಟಿಐ ಸಂಸ್ಥೆಯ ವತಿಯಿಂದ ವೇಣೂರು ಬಾಹುಬಲಿ ಬೆಟ್ಟದ ಪ್ರಾಂಗಣ ಸುತ್ತ ಸ್ವಚ್ಚತೆಗೊಳಿಸುವ ಕಾಯ೯ಕ್ರಮವನ್ನು ಇಂದು (ಫೆ. 3) ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಒಟ್ಟು 80 ಮಂದಿ ವಿದ್ಯಾರ್ಥಿಗಳೊಂದಿಗೆ, ತರಬೇತಿ ಅಧಿಕಾರಿಗಳು ಭಾಗವಹಿಸಿದ್ದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ ಶಾಂತಿ ಪ್ರಸಾದ್‌ ಹೆಗ್ಡೆ ಅವರು ಆಯ್ಕೆ

Article Image

ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ ಶಾಂತಿ ಪ್ರಸಾದ್‌ ಹೆಗ್ಡೆ ಅವರು ಆಯ್ಕೆ

ದ.ಕ. ಜಿಲ್ಲೆಯಲ್ಲಿ ಹೆಸರುವಾಸಿಯಾಗಿ, ಮೂಡಬಿದ್ರೆಯಲ್ಲಿ ವಕೀಲ ವೃತ್ತಿಯನ್ನು ಮಾಡುತ್ತ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಶಾಂತಿ ಪ್ರಸಾದ್ ಹೆಗ್ಡೆಯವರು ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ. ಇವರು ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಪ್ರಸಿದ್ಧ ಹಿರಿಯ ನ್ಯಾಯವಾದಿ ಪದ್ಮಪ್ರಸಾದ್ ಹೆಗ್ಡೆ (ಪಿ.ಪಿ. ಹೆಗ್ಡೆ)ಯವರ ಸಹೋದರರಾಗಿರುತ್ತಾರೆ.

ಅಂಕೋಲ, ಶಿರಗುಂಜಿ : ಭ. ಶ್ರೀ ಪಾರ್ಶ್ವನಾಥ ತೀರ್ಥಂಕರರ ಜನ್ಮ ಕಲ್ಯಾಣ ಮಹೋತ್ಸವ ಮತ್ತು ವಾರ್ಷಿಕ ಪೂಜಾ ಮಹೋತ್ಸವ

Article Image

ಅಂಕೋಲ, ಶಿರಗುಂಜಿ : ಭ. ಶ್ರೀ ಪಾರ್ಶ್ವನಾಥ ತೀರ್ಥಂಕರರ ಜನ್ಮ ಕಲ್ಯಾಣ ಮಹೋತ್ಸವ ಮತ್ತು ವಾರ್ಷಿಕ ಪೂಜಾ ಮಹೋತ್ಸವ

ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರಗುಂಜಿಯ ಶ್ರೀ ಪಾರ್ಶ್ವನಾಥ ಹಾಗೂ ಶ್ರೀ ಜೋಡಿ ಪದ್ಮಾವತಿ ನಾಗರವಳ್ಳಿ ಕ್ಷೇತ್ರದಲ್ಲಿ ಭ|| ೧೦೦೮ ಶ್ರೀ ಪಾರ್ಶ್ವನಾಥ ತೀರ್ಥಂಕರರ ಜನ್ಮ ಕಲ್ಯಾಣ ಮಹೋತ್ಸವ ಮತ್ತು 12ನೇ ವಾರ್ಷಿಕ ಪೂಜಾ ಮಹೋತ್ಸವವು ಶ್ರೀ ಕ್ಷೇತ್ರ ಸ್ವಾದಿ ದಿಗಂಬರ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಜಗದ್ಗುರು ಅಕಲಂಕ ಕೇಸರಿ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಹಾಗೂ ಶ್ರೀ ಕ್ಷೇತ್ರ ಹೊಂಬುಜ ದಿಗಂಬರ ಜೈನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೆಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನಿಧ್ಯ ಹಾಗೂ ದಿವ್ಯ ನೇತೃತ್ವದಲ್ಲಿ ದಿನಾಂಕ 05-02-2024 ಮತ್ತು 06-02-2024ರ ರಂದು ನಡೆಯಲಿದೆ.

First Previous

Showing 7 of 8 pages

Next Last