Article Image

ಶ್ರೀ ಸಮ್ಮೇದ ಶಿಖರ್ಜಿಗೆ 150 ದರ್ಶನ ಮಾಡಿದ ಭವ್ಯ ಜೀವಿ ನಂಜುಂಡಪ್ಪ ಕೋಟಿ

Article Image

ಶ್ರೀ ಸಮ್ಮೇದ ಶಿಖರ್ಜಿಗೆ 150 ದರ್ಶನ ಮಾಡಿದ ಭವ್ಯ ಜೀವಿ ನಂಜುಂಡಪ್ಪ ಕೋಟಿ

ಶ್ರೀ ಸಮ್ಮೇದ್ ಶಿಖರ್ಜಿ ವರ್ತಮಾನದ 20 ತೀರ್ಥಂಕರರ ಮತ್ತು ಅಸಂಖ್ಯ ಕೇವಲಿಗಳ ನಿರ್ವಾಣ ಭೂಮಿಯಾಗಿದೆ. ಇಂತಹ ತಪೋ ಭೂಮಿಯನ್ನು ದರ್ಶನ ಮಾಡಲು ಜನ್ಮಜನ್ಮಗಳ ಪುಣ್ಯ ಬೇಕಾಗುತ್ತದೆ. ಭವ್ಯ ಜೀವಿಗಳು ಶಿಖರ್ಜಿ ದರ್ಶನ ಮಾಡಲು ಹಾತೊರೆಯುತ್ತಾರೆ. ಬಾರಿ ಬಾರಿ ದರ್ಶನ ಮಾಡಲು ಜೀವ ಹಾತೊರೆಯುತ್ತದೆ. ಸಮ್ಮೇದ ಶಿಖರ್ಜಿಯು ಜಾರ್ಖಂಡ್ ರಾಜ್ಯದಲ್ಲಿದೆ. ಇಂತಹ ಭವ್ಯ ಕ್ಷೇತ್ರವನ್ನು ನಂಜುಂಡಪ್ಪ ಕೋಟಿಯವರು 150 ಸಲ ಮಾಡಿದ್ದಾರೆ. ಇದರಲ್ಲೇನು ವಿಶೇಷ ಹಲವು ಜನ ಹಲವು ಬಾರಿ ದರ್ಶನ ಮಾಡಿದ್ದಾರೆ ಎಂದು ನೀವು ಅಂದುಕೊಳ್ಳುತ್ತೀದ್ದಿರಲ್ವಾ... ಇಲ್ಲೇ ಒಂದು ಗಮನಾರ್ಹ ವಿಚಾರವಿದೆ. ಅದೇನೆಂದರೆ ನಂಜುಂಡಪ್ಪ ಕೋಟಿಯವರು ಜೈನರಲ್ಲ ಅನ್ಯ ಧರ್ಮೀಯರು. ನಂಜುಂಡಪ್ಪ ಕೋಟಿಯವರು ಹಾವೇರಿಯ ಸವಣೂರಿನವರು. ಇವರು ಈವರೆಗೆ 150 ಸಲ ಶಿಖರ್ಜಿ ದರ್ಶನ ಮಾಡಿದ್ದಾರೆ. ಬಸ್ಸು , ರೈಲು, ವಿಮಾನದ ಮೂಲಕ ಅಷ್ಟೇ ಅಲ್ಲ 5 ಸಲ ಪಾದಯಾತ್ರೆಯ ಮೂಲಕವೂ ಶಿಖರ್ಜಿ ಯಾತ್ರೆ ಮಾಡಿದ್ದಾರೆ. 12 ಬಾರಿ ಶಿಖರ್ಜಿ ಪ್ರತಿಕ್ರಮಣ ಮಾಡಿದ್ದಾರೆ. ಕೇವಲ ಶಿಖರ್ಜಿ ಮಾತ್ರವಲ್ಲದೇ ಗಿರಿನಾರ್, ಶ್ರವಣಬೆಳಗೊಳ ಮುಂತಾದ ಕ್ಷೇತ್ರಗಳ ದರ್ಶನವನ್ನೂ ಮಾಡಿದ್ದಾರೆ. ಕೇವಲ ಶಿಖರ್ಜಿ ದರ್ಶನ ಮಾತ್ರ ಅಲ್ಲ ಇವರು ಸ್ವಾಧ್ಯಾಯ ಪ್ರಿಯರೂ ಕೂಡ ಹೌದು. ಇವರೇ ಸ್ವತಃ ಸ್ವಾಧ್ಯಾಯ ಮಾಡುತ್ತಾರೆ / ಮಾಡಿಸುತ್ತಾರೆ. ಸಂಪೂರ್ಣ ಸಸ್ಯಾಹಾರಿಯಾಗಿರುವ ಇವರು ಭಗವಾನ್ ಬಾಹುಬಲಿಯ ಸಂದೇಶ ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ ಎಂಬ ತತ್ವವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದೇನೆ ಅನ್ನುತ್ತಾರೆ. ಜೈನ ಧರ್ಮದ ಒಂದು ಮಹೋನ್ನತೆಯೆಂದರೆ ನಾಮ ಜೈನರಾಗದೇ ಆಚರಣೆಯಲ್ಲಿ ಜೈನತ್ವವನ್ನು ಅಳವಡಿಸಿಕೊಂಡರೆ ಅವನೇ ನಿಜವಾದ ಜೈನ ಎನ್ನುತ್ತದೆ. ನಂಜುಡಪ್ಪ ಕೋಟಿಯವರಿಗೆ ಶುಭಾಶಯಗಳು. ತಮ್ಮ ಶುಭ ಭಾವನೆ ಉದ್ದೀಪನವಾಗಿ ಮೋಕ್ಷ ಮಾರ್ಗ ಮಗದಷ್ಟೂ ಪ್ರಶಸ್ತವಾಗಲಿ. ನಿರಂಜನ್ ಜೈನ್ ಕುದ್ಯಾಡಿ

ರಕ್ಷಾಬಂಧನದ ಸಂದೇಶ

Article Image

ರಕ್ಷಾಬಂಧನದ ಸಂದೇಶ

ರಕ್ಷಾ ಬಂಧನವನ್ನು ಪ್ರತಿ ವರ್ಷ ಶ್ರಾವಣ ನೂಲು ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಭಾವನೆಗಳಿಗೆ ಸಂಬಂಧಿಸಿದ ಹಬ್ಬ 'ರಕ್ಷಾ ಬಂಧನ' ಭಾವನೆಗಳಿಗೆ ಸಂಬಂಧಿಸಿದ ಹಬ್ಬ. ಅಂದು ಬೆಳಿಗ್ಗೆಯೇ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಹೊಸ ಬಟ್ಟೆ ಧರಿಸಿ, ಅಣ್ಣ – ತಂಗಿಯರ ಸಂಬಂಧ ಉತ್ತಮವಾಗಿರಲೆಂದು ಬೇಡಿ, ತನ್ನ ಅಣ್ಣನಿಗೆ ತಿಲಕವಿಟ್ಟು ಆರತಿ ಮಾಡಿ, ಆತನ ಮಣಿಕಟ್ಟಿಗೆ ರಾಖಿ ಕಟ್ಟಿ ನಮಸ್ಕರಿಸಿ ಆಶೀರ್ವಾದವನ್ನು ತಂಗಿ ಸ್ವೀಕರಿಸುತ್ತಾಳೆ. ಅಣ್ಣನೂ ಸಹ ಅದಕ್ಕೆ ಪ್ರತಿಯಾಗಿ ಉಡುಗೊರೆ ನೀಡುತ್ತಾನೆ. ಆದರೆ ಇವೆಲ್ಲಾ ಪೂಜಾ ಕ್ರಮಗಳನ್ನು ಹಬ್ಬದಂದು ಮಾತ್ರ ಮಾಡುವ ಆಚರಣೆಯಾಗಿದೆ. ಅಣ್ಣನಿಂದ ರಕ್ಷಣೆಯ ಭರವಸೆ ಬಹುಷಃ ಯಾವಾಗ ಮನೆ ಮಗಳು ಮದುವೆಯಾಗಿ ತವರು ಮನೆಯಿಂದ ಗಂಡನ ಮನೆಗೆ ಸೇರಿದಳೋ ಅಂದಿನಿಂದಲೇ ಆಕೆಗೆ ಹೆಚ್ಚಿನ ರಕ್ಷಣೆಯ ಅಗತ್ಯವಿರುತ್ತದೆ. ಹೆಣ್ಣಿನ ಮೇಲೆ ಹಲವು ರೀತಿಯ ಶೋಷಣೆ ಹಾಗೂ ಕಿರುಕುಳದಿಂದಾಗಿ ಆಕೆ ತನ್ನ ಗಂಡನ ಮನೆ ತೊರೆದು ತವರಿಗೆ ಬರುತ್ತಾಳೆ. ಏಕೆಂದರೆ ತವರಿನಲ್ಲಿ ತನಗೆ. ರಕ್ಷಣೆ ಹಾಗೂ ಸಹಕಾರ ದೊರೆಯುತ್ತದೆಂಬ ನಂಬಿಕೆಯಿಂದ, ಹಾಗೆಯೇ ಎಲ್ಲಿ ತನ್ನ ತಂಗಿ. ಪುನಃ ಗಂಡನ ಮನೆಗೆ ಹೋದರೆ ಸಂಕಷ್ಟಕ್ಕೆ ಸಿಲುಕುತ್ತಾಳೋ ಎಂಬ ಭಯದಿಂದ ಇಂದಿಗೂ ಮದುವೆಯಾದ ಹೆಣ್ಣು ಮಗಳು ತನ್ನ ತವರಿನಲ್ಲೇ ಉಳಿದಿರುವ ಸಂಖ್ಯೆಯೂ ಅದೆಷ್ಟೇ ಇಂತಹ ಸಂದರ್ಭದಲ್ಲಿ ಅಣ್ಣ ಧೈರ್ಯ ಹೇಳಿ ಪುನಃ ತಂಗಿಯನ್ನು ಕರೆದುಕೊಂಡು ಹೋಗಿ ಗಂಡನ ಮನೆಯಲ್ಲಿ ಬಿಟ್ಟಾಗ ತನ್ನ ರಕ್ಷಣೆಗೆ ಹಾಗೂ ಸಹಾಯಕ್ಕೆ ಸದಾ ತನ್ನ ತವರು ಇದ್ದೇ ಇರುತ್ತದೆ ಎಂಬ ದೃಢ ವಿಶ್ವಾಸವನ್ನು ವ್ಯಕ್ತಪಡಿಸುತ್ತಾಳೆ. ಇದೇ ನಿಜವಾದ ರಕ್ಷಾ ಬಂಧನ. ಸದಾ ಕಾಲ ಸಹೋದರ ಏಳಿಗೆ ಬಯಸುವ ಸಹೋದರಿ ಸಹೋದರರ ಭ್ರಾತೃತ್ವ ಸಾರುವ ಈ ರಕ್ಷಾ ಬಂಧನ ಹಬ್ಬದ ಹಿನ್ನೆಲೆ, ಐತಿಹಾಸಿಕ ಹಾಗೂ ಪೌರಾಣಿಕ ಕಥೆ, ಏಕೆ ರಕ್ಷಾ ಬಂಧನ ಆಚರಿಸುತ್ತಾರೆ ಎಂದು ಮುಂದೆ ತಿಳಿಯೋಣ: ಜೈನ ಧರ್ಮದಲ್ಲಿ ನೂಲು ಹುಣ್ಣಿಮೆಯನ್ನು ಯಾವಾಗಲೂ ಜನಿವಾರ ಧರಿಸುತ್ತಾರೆ. 8ನೇಯ ವರ್ಷದಲ್ಲಿ ವೃತ ಸ್ವೀಕಾರ ಪಡೆದ ಮೇಲೆ ಜೈನ ಶ್ರಾವಕರೆಲ್ಲರೂ ಜನಿವಾರ ಧರಿಸುವುದು ಕಡ್ಡಾಯವಾಗಿದೆ. ಅದರಲ್ಲೂ ಭಗವಂತನ ಅಭಿಷೇಕಾದಿ ಜೈನ ಧಾರ್ಮಿಕ ಪೂಜಾ ಕಾರ್ಯಗಳಲ್ಲಿ ಜನಿವಾರ ಇರುವುದು ಕಡ್ಡಾಯವಾಗಿದೆ. ಹೀಗಿರುವಾಗ ರತ್ನತ್ರಯ ಸೂತ್ರ / ಜನಿವಾರ ಏನನ್ನು ಸೂಚಿಸುತ್ತದೆ ? ಜನಿವಾರದಲ್ಲಿ ಮೂರು ಪ್ರಧಾನ ಎಳೆಗಳು ಇರುತ್ತದೆ ಪ್ರತಿಯೂಂದು ಎಳೆಗಳಲ್ಲಿಯೂ ಒಂಬತ್ತು ನೂಲಿನ ಎಳೆಗಳಿರುತ್ತವೆ. ಹೀಗೆ ಮೂರು ಪ್ರಾಧಾನ ಎಳೆಗಳಲ್ಲಿ ಒಂಬತ್ತು ಎಳೆಗಳಂತೆ ಒಟ್ಟು ಇಪ್ಪತ್ತೇಳು ಎಳೆಗಳಿರುತ್ತವೆ. ಅವುಗಳನ್ನು ಒಂದು ಗುಂಪಿನಲ್ಲಿ ಜೋಡಿಸಲಾಗುತ್ತದೆ ಅದನ್ನು ಬ್ರಹ್ಮಗಂಟು ಎನ್ನುತ್ತಾರೆ. ಮೂರು ಪ್ರಧಾನ ಎಳೆಗಳು:- ಸಮ್ಯಖ್ ದರ್ಶನ, ಸಮ್ಮಖ್ ಜ್ಞಾನ, ಸಮ್ಯಖ್ ಚಾರಿತ್ರಗಳ ಸೂಚಕವಾಗಿದೆ. "ಸತ್ಯ, ಪ್ರಾಮಾಣಿಕತೆ ಮತ್ತು ಪರಿಶುದ್ಧತೆಗಳಿಂದ ಕೂಡಿದ ಸರಿಯಾದ ನಂಬಿಕೆ ಯೋಗ್ಯವಾದ ಜ್ಞಾನ ಯೋಗ್ಯವಾದ ಕರ್ಮ(ಕ್ರಿಯೆ) ಇವುಗಳನ್ನೇ ರತ್ನತ್ರಯಗಳೆಂದಿದ್ದಾರೆ. ಇದರ ಧೃಡ ನಿರ್ಧಾರ ಸೂಚಕವಾಗಿ ನಾವು ಮೂರು ಎಳೆ ಜನಿವಾರ ಧರಿಸುತ್ತೇವೆ. ಇದು ಸದಾ ರತ್ನತ್ರಯಗಳನ್ನು ಎಚ್ಚರಿಸುವ ಸಾಧನವೂ ಆಗಿದೆ. ಇನ್ನು ಆ ಪ್ರಧಾನ ಮೂರು ಎಳೆಗಳ ಪ್ರತಿಯೊಂದು ಎಳೆಗಳಲ್ಲಿಯೂ ತಲಾ ಒಂಬತ್ತರಂತೆ ಇಪ್ಪತ್ತೇಳು ಎಳೆಗಳನ್ನು ಒಳಗೊಂಡಿರುತ್ತದೆ. ಅದು ಜೈನ ಧರ್ಮದ ವಿಶಿಷ್ಟವಾದ ಇಪ್ಪತ್ತೇಳು ತತ್ವಗಳನ್ನು ಸೂಚಿಸುತ್ತದೆ. 27ತತ್ವಗಳು:- 9ದ್ರವ್ಯಗಳು+7ತತ್ವಗಳು+5ಪದಾರ್ಥಗಳು+5ಅಸ್ತಿಕಾಯಗಳು ಹೀಗೆ ಒಟ್ಟಾಗಿರುವ 27ತತ್ವಗಳನ್ನೇ ಜನಿವಾರದ ಎಳೆಗಳು ಸಂಕೇತಿಸುತ್ತವೆ. ಆ ಎಳೆಗಳನ್ನು ಒಂದು ಗಂಟುಗಳಿಂದ ಜೋಡಿಸಲಾಗುತ್ತದೆ ಬ್ರಹ್ಮ ಎಂದರೆ ಆತ್ಮ/ಜ್ಞಾನಗಳ ಧಾರಣೆ ಮಾಡಿ ಆ ಮೂಲಕ ಪವಿತ್ರವಾದ ಮುಕ್ತಿಯನ್ನು ಪ್ರಾಪ್ತಿ ಮಾಡಿಕೂಳ್ಳುತ್ತೇನೆ ಎಂಬುದರ ಸೂಚಕ ಜನಿವಾರದಲ್ಲಿದೆ. "ಆರು ದ್ರವ್ಯ:-ಜೀವ, ಅಜೀವ, ಧರ್ಮ, ಅಧರ್ಮ, ಆಕಾಶ ಮತ್ತು ಕಾಲ" ಏಳು ತತ್ವಗಳು:- ಜೀವ, ಅಜೀವ, ಅಸ್ರವ, ಬಂಧ, ಸಂವರ, ನಿರ್ಜರ ಮತ್ತು ಮೋಕ್ಷ". ಒಂಬತ್ತು ಪದಾರ್ಥಗಳು:-ಜೀವ, ಅಜೀವ, ಅಸ್ರವ, ಬಂಧ, ಸಂವರ, ನಿರ್ಜರ, ಮೋಕ್ಷ ಮತ್ತು ಪಾಪ-ಪುಣ್ಯಗಳು ಐದು ಅಸ್ತಿಕಾಯಗಳು:- ಜೀವ, ಪದ್ಗುಲ, ಧರ್ಮ, ಅಧರ್ಮ ಮತ್ತು ಆಕಾಶ "ಹೀಗೆ 27ತತ್ವ ಮತ್ತು ರತ್ನತ್ರಯಗಳನ್ನು ನಾವು ನಂಬಿ ತಿಳಿದು ಆಚರಿಸುತ್ತೇವೆ ಎಂಬುದರ ಸಂಕೇತವೇ ಜನಿವಾರ ಧಾರಣೆ." ಸ್ತ್ರಿಯರು ಜನಿವಾರವನ್ನು ವರ್ಷಕ್ಕೊಮ್ಮೆ ನೂಲು ಹುಣ್ಣಿಮೆಯ(ಶ್ರವಣ ಮಾಸದ ಹುಣ್ಣಿಮೆ) ದಿನ ಮಾತ್ರ ಧರಿಸುವ ಕ್ರಿಯೆ ಕೆಲವು ಕಡೆ ಇದೆ. ಆಗಾಗ್ಗೆ ಸೂತಕಾದಿ ಮೈಲಿಗೆಗೆ ಒಳಗಾಗುವುದರಿಂದ ಜನಿವಾರ ಅಪವಿತ್ರವಾಗುತ್ತದೆ ಎಂದು ಅದಕ್ಕೆ ತಮ್ಮ ಪತ್ನಿಯ ಬದಲಾಗಿ ಪತಿಯೇ ತಮ್ಮ ಮೂರು ಎಳೆ ಜನಿವಾರದೂಂದಿಗೆ ಇನ್ನೊಂದು ಮೂರು ಎಳೆಯ ಜನಿವಾರವನ್ನು ಧರಿಸುತ್ತಾರೆ. ಹಾಗಾಗೇ ಅವಿವಾಹಿತ ಮೂರು ಎಳೆ ವಿವಾಹಿತ ಅರು ಎಳೆಯ ಜನಿವಾರ ಧರಿಸುವ ರೂಡಿ ಇದೆ. "ಪ್ರತಿವರ್ಷ ಶ್ರವಣ ನಕ್ಷತ್ರವನ್ನೊಳಗೊಂಡ ಶ್ರಾವಣ ಮಾಸದ ಹುಣ್ಣಿಮೆಯ ಶ್ರವಣ ನಕ್ಷತ್ರದಲ್ಲಿ ಹೊಸ ಜನಿವಾರ ಧರಿಸುವ ಕ್ರಮವಿದೆ. ಹಾಗೆಯೇ ಸೂತಕಾದಿ ಇನ್ನಿತರ ಮೈಲಿಗೆಯಾದ ಸಂದರ್ಭದಲ್ಲಿ ಪರಿಶುದ್ಧರಾದ ಮೇಲೆ ಹೊಸ ಜನಿವಾರ ಧರಿಸಿದ ಹಳೆಯ ಜನಿವಾರ ತೆಗೆಯುವ ಕ್ರಮವಿದೆ. "ಜನಿವಾರ ದೇಹ ಶೃಂಗಾರಕ್ಕಾಗಿ ಅಲ್ಲ. ಮನಸ್ಸಿನಲ್ಲಿ ರತ್ನತ್ರಯ ಮತ್ತು 27ತತ್ವಗಳನ್ನು ಸದಾ ಜಾಗೃತಗೊಳಿಸಿ ಆತ್ಮ ಶೃಂಗಾರವನ್ನು ಪ್ರೇರಿಪಿಸುವ ಒಂದು ಧರ್ಮ ಸಾಧನವಾಗಿದೆ. ಅದನ್ನು ಸದಾ ಪವಿತ್ರತೆಯಿಂದ ಕಾಪಾಡಿಕೊಳ್ಳಬೇಕು. ಭಾರತೀಯ ಪುರಾಣಗಳಲ್ಲಿ ಅತ್ಯಂತ ಜನಪ್ರಿಯವಾದ ಕಥೆಯೆಂದರೆ ಶ್ರೀಕೃಷ್ಣ ಮತ್ತು ದ್ರೌಪದಿ. 'ಪಂಚ ಪಾಂಡವರ ಪತ್ನಿ'. ಕಥೆಯ ಪ್ರಕಾರ, ಮಕರ ಸಂಕ್ರಾಂತಿಯಂದು ಕಬ್ಬನ್ನು ಕತ್ತರಿಸುವಾಗ ಕೃಷ್ಣ ತನ್ನ ಕಿರುಬೆರಳನ್ನು ಕತ್ತರಿಸಿಕೊಂಡ. ರುಕ್ಮಿಣಿ ತಕ್ಷಣವೇ ಅದಕ್ಕೆ ಔಷಧ ತರಲು ಸಹಾಯಕರನ್ನು ಕಳುಹಿಸಿದಳು. ಅಷ್ಟರಲ್ಲಿ ಇಡೀ ಘಟನೆಯನ್ನು ವೀಕ್ಷಿಸುತ್ತಿದ್ದ ದ್ರೌಪದಿ ರಕ್ತಸ್ರಾವವನ್ನು ತಡೆಯಲು ಅವಳ ಸೀರೆಯನ್ನು ಸ್ವಲ್ಪ ಕತ್ತರಿಸಿ ಕೃಷ್ಣನ ಬೆರಳನ್ನು ಕಟ್ಟಿದಳು. ಪ್ರತಿಯಾಗಿ, ಅಗತ್ಯವಿದ್ದಾಗ ಅವಳಿಗೆ ಸಹಾಯ ಮಾಡುವುದಾಗಿ ಕೃಷ್ಣ ಭರವಸೆ ನೀಡಿದನು. ಇದಕ್ಕೆ ಅನುಗುಣವಾಗಿ ದ್ರೌಪದಿಯ ಅನಿಯಂತ್ರಿತ ವಸ್ತ್ರಾಪಹರಣದ ಸಮಯದಲ್ಲಿ ಕೃಷ್ಣನು ನೀಡಿದ ಸಹಾಯದ ಹಿಂದಿನ ಕಥೆಯೆಂದರೆ, ಕೃಷ್ಣನು ಬಂದು ಅವಳ ಸೀರೆಗೆ ಅಂತ್ಯವಿಲ್ಲದಂತೆ ಮಾಡಿದನು, ಅವಳಿಗೆ ಅತ್ಯಂತ ಅಗತ್ಯವಿದ್ದಾಗ ಅವಳ ರಕ್ಷಣೆಯನ್ನು ನೀಡುವ ಮೂಲಕ ಅವಳಿಗೆ ಆಗಬೇಕಿದ್ದ ಮುಜುಗರವನ್ನುಂಟು ತಡೆದನು. ಇನ್ನೊಂದು ಚಾರಿತ್ರಿಕ ಕಥೆಯ ಪ್ರಕಾರ, ಅಲೆಕ್ಸಾಂಡರ್ ದಿ ಗ್ರೇಟ್ ಭಾರತವನ್ನು 326 BC ಯಲ್ಲಿ ಆಕ್ರಮಣ ಮಾಡಿದಾಗ, ಅವನ ಪತ್ನಿ ರೊಕ್ಸಾನಾ ವಿರೋಧಿ ಬಣದ ನಾಯಕ ಪೋರಸ್‌ಗೆ ಪವಿತ್ರವಾದ ದಾರವನ್ನು ಕಳುಹಿಸಿದಳು ಮತ್ತು ಯುದ್ಧಭೂಮಿಯಲ್ಲಿ ತನ್ನ ಗಂಡನಿಗೆ ಹಾನಿಯಾಗದಂತೆ ಕೇಳಿಕೊಂಡಳು. ವಿನಂತಿಯನ್ನು ಗೌರವಿಸಿ, ಅವನು ಅಲೆಕ್ಸಾಂಡರ್ ಅನ್ನು ಎದುರಿಸಿದಾಗ, ಪೋರಸ್‌ ಅವನು ಅಲೆಕ್ಸಾಂಡರ್ ನನ್ನು ಕೊಲ್ಲಲು ನಿರಾಕರಿಸುತ್ತಾನೆ. ಅಂತಿಮವಾಗಿ, ಪೋರಸ್ ಹೈಡಸ್ಪೆಸ್ ನದಿಯ ಯುದ್ಧವನ್ನು ಕಳೆದುಕೊಳ್ಳುತ್ತಾನೆ ಆದರೆ ಅಲೆಕ್ಸಾಂಡರ್ ನನ್ನು ಗೌರವವನ್ನು ಪಡೆಯುತ್ತಾನೆ. ಹೀಗೆ ಈ ಹಬ್ಬವನ್ನು ಹಿಂದು ಮುಸ್ಲಿಂ ಕ್ರಿಶ್ಚಿಯನ್ ಭೇದ ಭಾವವಿಲ್ಲದೆ ಆಚರಣೆಯನ್ನು ಮಾಡುತ್ತಿದ್ದರು. ಭೇದ ಭಾವವಿಲ್ಲದೆ ಸಮಾಜದ ನಿರ್ಮಾಣ ಮಾಡುವ ಕೆಲಸದಲ್ಲಿ ರಾಷ್ಟ್ರೀಯ ಸ್ವಯಂ ಸಂಘವು ಕೂಡ ಹೌದು. ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಇದು ಸಂಘದ ಚಾರಿತ್ರ್ಯ ನಿರ್ಮಾಣದ ಕೆಲಸದಲ್ಲಿ ಸಂಘದ ಪಾತ್ರ ಬಹುಮುಖ್ಯ ಪಾತ್ರವನ್ನು ವಹಿಸಿದೆ. ಹಾಗಾಗಿ ಇಲ್ಲಿ ಪುರುಷರು ರಾಕಿಯನ್ನು ಪುರುಷರಿಗೆ ಕಟ್ಟುವ ಪದ್ಧತಿಯುಂಟು, ಇದನ್ನು ಹಿಂದೂ ಧರ್ಮದ ಜಾಗೃತಿಯನ್ನು, ಭದ್ರತೆಯನ್ನು ಹಾಗೂ ಎಲ್ಲರಲ್ಲೂ ಪ್ರೀತಿ ವಿಶ್ವಾಸ ನಂಬಿಕೆಯನ್ನು ಉಂಟು ಮಾಡಲು ಪಣತೊಟ್ಟ ರಕ್ಷಾಬಂಧನವಾಗಿದೆ. ಹಿಂದುತ್ವದ ಕಿಚ್ಚನ್ನು ಬಡೆದೆಬ್ಬಿಸುವ, ಹೃದಯ ಹೃದಯಗಳ ಪ್ರೇಮ ಬೆಸೆಯುವ ಭಾರತ ವಿಶ್ವ ಗುರುವನ್ನಾಗಿಸುವುದು ಅದನ್ನು ನನಸಾಗುವ ನಿರೀಕ್ಷೆಯನ್ನು ಹೊಂದಿ ಕೇಸರಿಯ ಶ್ರೀ ರಕ್ಷಣೆ ಮತ್ತು ಅನಾವರತ ತೊಡುವ ದೇಶ ರಕ್ಷಣೆಯನ್ನು ಮಾಡೋಣ ಎಲ್ಲರಿಗೂ ರಕ್ಷಾಬಂಧನದ ಶುಭಾಶಯಗಳು. ಪೌರಾಣಿಕ ಹಿನ್ನೆಲೆ: ರಕ್ಷಾಬಂಧನದ ಹಿನ್ನೆಲೆಯನ್ನು ಹುಡುಕುತ್ತಾ ಹೋದಾಗ ಹಲವು ಸ್ವಾರಸ್ಯಕರ ಪೌರಾಣಿಕ ಪ್ರಸಂಗಗಳು ಎದುರಾಗುತ್ತವೆ. ಜನಪ್ರಿಯ ಕಥನದ ಪ್ರಕಾರ, ಶ್ರೀಕೃಷ್ಣನ ಬೆರಳಿಗೆ ಗಾಯವಾದಾಗ ದ್ರೌಪದಿ ತನ್ನ ಸೀರೆಯ ಅಂಚನ್ನು ಹರಿದು ಅವರ ಬೆರಳಿಗೆ ಕಟ್ಟುತ್ತಾಳೆ. ಮುಂದೆ ದ್ರೌಪದಿಗೆ ಸಂಕಷ್ಟ ಎದುರಾದಾಗ ಕೃಷ್ಣನು ಆಕೆಯ ರಕ್ಷಣೆಗೆ ನಿಂತ ಪ್ರಸಂಗವನ್ನು ರಕ್ಷಾಬಂಧನದ ಭಾವನೆಗೆ ಸಂಬಂಧಿಸಿ ನೋಡಲಾಗುತ್ತದೆ. ಅದೇ ರೀತಿ, ದೇವಾಸುರ ಸಂಗ್ರಾಮದ ಸಂದರ್ಭದಲ್ಲಿ ಇಂದ್ರಾಣಿಯು (ಶಚಿದೇವಿ) ಇಂದ್ರನಿಗೆ ರಕ್ಷಾಸೂತ್ರ ಕಟ್ಟಿದ ಕಥೆಯೂ ಪೌರಾಣಿಕ ಪರಂಪರೆಯಲ್ಲಿ ಉಲ್ಲೇಖವಾಗುತ್ತದೆ. ಯಮ-ಯಮುನೆಯರ ಬಾಂಧವ್ಯದ ಕಥೆ ಹಾಗೂ ಬಲಿ ಚಕ್ರವರ್ತಿಗೆ ಲಕ್ಷ್ಮೀದೇವಿಯು ರಕ್ಷಾಬಂಧನ ಮಾಡಿ ವಿಷ್ಣುವನ್ನು ಮರಳಿ ಪಡೆದ ಪ್ರಸಂಗವೂ ಈ ಹಬ್ಬದೊಂದಿಗೆ ಸಂಬಂಧಿಸಿ ಹೇಳಲಾಗುತ್ತದೆ. ಈ ಕಥನಗಳ ಐತಿಹಾಸಿಕತೆಯ ಕುರಿತು ವಿಭಿನ್ನ ಅಭಿಪ್ರಾಯಗಳಿದ್ದರೂ, ಅವುಗಳಲ್ಲಿ ವ್ಯಕ್ತವಾಗುವ ರಕ್ಷಣೆ, ಪ್ರೀತಿ, ಕರ್ತವ್ಯ ಮತ್ತು ಬಾಂಧವ್ಯದ ಮೌಲ್ಯಗಳು ರಕ್ಷಾಬಂಧನದ ಸಾಂಸ್ಕೃತಿಕ ಅರ್ಥವನ್ನು ಗಾಢಗೊಳಿಸಿವೆ. ಸಾಮಾಜಿಕ ಮತ್ತು ಐತಿಹಾಸಿಕ ಆಯಾಮ: ರಕ್ಷಾಬಂಧನವು ಕೇವಲ ಕುಟುಂಬದ ಆಚರಣೆಯಾಗಿರದೆ, ಕಾಲಕ್ರಮೇಣ ಸಾಮಾಜಿಕ ಏಕತೆ ಮತ್ತು ಪರಸ್ಪರ ಬಾಂಧವ್ಯದ ಸಂಕೇತವಾಗಿಯೂ ರೂಪುಗೊಂಡಿದೆ. 1905ರ ಬಂಗಾಳ ವಿಭಜನೆಯ ಸಂದರ್ಭದಲ್ಲಿ ರವೀಂದ್ರನಾಥ ಠಾಕೂರರು ಹಿಂದೂ-ಮುಸ್ಲಿಂ ಐಕ್ಯತೆಯ ಸಂದೇಶವನ್ನು ಸಾರಲು ರಕ್ಷಾಸೂತ್ರ ಕಟ್ಟುವ ಆಚರಣೆಗೆ ಪ್ರೋತ್ಸಾಹ ನೀಡಿದರು. ವಿಭಜನೆಯ ವಿರುದ್ಧ ಜನರಲ್ಲಿ ಒಗ್ಗಟ್ಟಿನ ಭಾವನೆ ಮೂಡಿಸುವ ಪ್ರಯತ್ನವಾಗಿ ಈ ಆಚರಣೆಯನ್ನು ಬಳಸಿಕೊಂಡದ್ದು, ರಕ್ಷಾಬಂಧನದ ಸಾಮಾಜಿಕ ವ್ಯಾಪ್ತಿಯನ್ನು ತೋರಿಸುವ ಪ್ರಮುಖ ಉದಾಹರಣೆಯಾಗಿದೆ. ಉತ್ತರ ಭಾರತವು ಇತಿಹಾಸದ ವಿವಿಧ ಹಂತಗಳಲ್ಲಿ ವಿದೇಶಿ ಆಕ್ರಮಣಗಳಿಗೆ ಒಳಗಾದ ಹಿನ್ನೆಲೆಯಲ್ಲಿ, ಮಹಿಳೆಯರ ಸುರಕ್ಷತೆ ಮತ್ತು ಸಾಮಾಜಿಕ ರಕ್ಷಣೆಯ ಸಂಕೇತವಾಗಿ ಸಹೋದರತ್ವದ ಬಾಂಧವ್ಯವನ್ನು ಬಲಪಡಿಸುವ ಆಚರಣೆಗಳು ಬೆಳೆಯಲು ಕಾರಣವಾಗಿರಬಹುದು. ರಾಜಪೂತ ಮತ್ತು ಮರಾಠಾ ಸಂಸ್ಥಾನಗಳಲ್ಲಿಯೂ ರಕ್ಷಾಬಂಧನಕ್ಕೆ ಸಾಮಾಜಿಕ ಹಾಗೂ ರಾಜಕೀಯ ಮಹತ್ವವಿದ್ದುದಾಗಿ ವಿವಿಧ ಐತಿಹಾಸಿಕ ಕಥನಗಳು ಸೂಚಿಸುತ್ತವೆ. ದಕ್ಷಿಣ ಭಾರತದ ವಿಭಿನ್ನ ಆಚರಣೆಗಳು: ರಕ್ಷಾಬಂಧನದ ಆಚರಣೆ ಭಾರತದ ಎಲ್ಲ ಪ್ರದೇಶಗಳಲ್ಲೂ ಒಂದೇ ರೀತಿಯಲ್ಲಿಲ್ಲ. ದಕ್ಷಿಣ ಭಾರತದಲ್ಲಿ ಸಹೋದರ-ಸಹೋದರಿಯರ ಬಾಂಧವ್ಯವನ್ನು ಪ್ರತಿಬಿಂಬಿಸುವ ಹಲವು ಸ್ಥಳೀಯ ಆಚರಣೆಗಳು ಈಗಾಗಲೇ ಪ್ರಚಲಿತದಲ್ಲಿವೆ. ಕರ್ನಾಟಕದ ಕೆಲವು ಭಾಗಗಳಲ್ಲಿ ನಾಗರಚೌತಿ-ಪಂಚಮಿಯ ಸಂದರ್ಭದಲ್ಲಿ ನಡೆಯುವ ‘ಅಕ್ಕನ-ತದಿಗೆ’ಯಲ್ಲಿ ಸಹೋದರನು ಸಹೋದರಿಯ ಮನೆಗೆ ತೆರಳಿ ಔತಣ ಸ್ವೀಕರಿಸುವ ಸಂಪ್ರದಾಯವಿದೆ. ಕಾರ್ತಿಕ ಮಾಸದ ದೀಪಾವಳಿ ಸಂದರ್ಭದಲ್ಲಿ ಬಲಿಪಾಡ್ಯದ ಮರುದಿನ ಆಚರಿಸಲಾಗುವ ‘ಭಾವನ ಬಿದಿಗೆ’ಯೂ ಸಹೋದರ-ಸಹೋದರಿಯರ ಬಾಂಧವ್ಯಕ್ಕೆ ಸಂಬಂಧಿಸಿದ ಮತ್ತೊಂದು ಆಚರಣೆಯಾಗಿದೆ. ಇಂತಹ ಸ್ಥಳೀಯ ಹಬ್ಬಗಳು ಮತ್ತು ಆಚರಣೆಗಳ ಪ್ರಾಬಲ್ಯದಿಂದಾಗಿ ರಕ್ಷಾಬಂಧನದ ಆಚರಣೆ ದಕ್ಷಿಣ ಭಾರತದಲ್ಲಿ ಉತ್ತರ ಭಾರತದಷ್ಟೊಂದು ವ್ಯಾಪಕವಾಗಿಲ್ಲ. ಶ್ರಾವಣ ಪೂರ್ಣಿಮೆಯಂದು ನಡೆಯುವ ‘ಉಪಾಕರ್ಮ’ ಅಥವಾ ‘ನೂಲಹುಣ್ಣಿಮೆ’ಗೂ ದಕ್ಷಿಣ ಭಾರತದಲ್ಲಿ ವಿಶೇಷ ಧಾರ್ಮಿಕ ಮಹತ್ವವಿದೆ. ಸಂಘಟನೆಗಳ ಆಚರಣೆ: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ತನ್ನ ಪ್ರಮುಖ ಉತ್ಸವಗಳಲ್ಲಿ ರಕ್ಷಾಬಂಧನವನ್ನು ಸೇರಿಸಿಕೊಂಡು ಆಚರಿಸುತ್ತ ಬಂದಿದೆ. ಸ್ವಯಂಸೇವಕರು ಭಗವಾಧ್ವಜಕ್ಕೆ ರಕ್ಷಾಸೂತ್ರ ಅರ್ಪಿಸಿ, ನಂತರ ಪರಸ್ಪರ ರಾಖಿ ಕಟ್ಟಿಕೊಳ್ಳುವ ಮೂಲಕ ಸಾಮಾಜಿಕ ಸಾಮರಸ್ಯ, ರಾಷ್ಟ್ರನಿಷ್ಠೆ ಮತ್ತು ಭ್ರಾತೃತ್ವದ ಸಂಕಲ್ಪವನ್ನು ವ್ಯಕ್ತಪಡಿಸುತ್ತಾರೆ. ‘ಹಿಂದೂ ಸಮಾಜ ಒಂದೇ ಕುಟುಂಬ’ ಎಂಬ ಭಾವನೆಯನ್ನು ಬಲಪಡಿಸುವುದು ಈ ಆಚರಣೆಯ ಉದ್ದೇಶಗಳಲ್ಲಿ ಒಂದಾಗಿದೆ. ಹಿಂದೂ ಜಾಗರಣ ವೇದಿಕೆ, ಭಜರಂಗದ

ದಶಲಕ್ಷಣ ಮಹಾಪರ್ವ ಆಚರಣೆ

Article Image

ದಶಲಕ್ಷಣ ಮಹಾಪರ್ವ ಆಚರಣೆ

ಹುಬ್ಬಳ್ಳಿ: ಅಲ್ಪ ಸಂಖ್ಯಾತ ಜೈನ ಸೇವಾ ಸಂಘ, ನವನಗರ ಶ್ರೀ ಬಹುರೂಪಿಣಿ ಮಹಿಳಾ ಮಂಡಳ ನವನಗರ ಹಾಗೂ ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಟ್ರಸ್ಟ್, ಹುಬ್ಬಳ್ಳಿ-ಧಾರವಾಡ ಇವುಗಳ ಸಂಯುಕ್ತ ಆಶ್ರಯದಲ್ಲಿ ದಶಲಕ್ಷಣ ಮಹಾಪರ್ವ ಆಚರಣೆಯು ದಿನಾಂಕ 16-09-2026 ರಿಂದ 26-9-2026 ರ ವರೆಗೆ ಪ್ರತಿದಿನ ಸಂಜೆ 6.00 ಗಂಟೆಗೆ ನವಗ್ರಹ ಸಭಾ ಭವನ, ಭ. ಮುನಿಸುವೃತ ಜೈನ ಮಂದಿರ, ಮಹಾವೀರ ಸರ್ಕಲ್‌, ಪಂಚಾಕ್ಷರಿ ನಗರ, ನವನಗರ, ಹುಬ್ಬಳ್ಳಿ ಇಲ್ಲಿ ನಡೆಯಲಿದೆ.

ಅಥಣಿಯಲ್ಲಿ ಭವ್ಯ ಶಾಂತಿ ಕಳಸ ರಥಯಾತ್ರೆಗೆ ನಾಂದಣಿ ಭಟ್ಟಾರಕರಿಂದ ಚಾಲನೆ

Article Image

ಅಥಣಿಯಲ್ಲಿ ಭವ್ಯ ಶಾಂತಿ ಕಳಸ ರಥಯಾತ್ರೆಗೆ ನಾಂದಣಿ ಭಟ್ಟಾರಕರಿಂದ ಚಾಲನೆ

ಬೆಳಗಾವಿ: ದಿಗಂಬರ ಜೈನ ಪರಂಪರೆಯ ಪುನರುಜ್ಜೀವಕ, 20ನೇ ಶತಮಾನದ ಪ್ರಥಮಾಚಾರ್ಯ ಪ.ಪೂ. ಚಾರಿತ್ರ ಚಕ್ರವರ್ತಿ ಆಚಾರ್ಯ 108 ಶ್ರೀ ಶಾಂತಿಸಾಗರ ಮಹಾರಾಜರ 71ನೇ ಪುಣ್ಯತಿಥಿ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಭವ್ಯ ಶಾಂತಿ ಕಳಸ ರಥಯಾತ್ರೆಗೆ ಅಥಣಿ ನಗರದ ಶ್ರೀ ಶಿವಯೋಗಿ (ಹಲ್ಯಾಳ) ಸರ್ಕಲ್ ನಲ್ಲಿ ನಾಂದಣಿ ಸಂಸ್ಥಾನ ಮಠದ ಪ.ಪೂ. ಜಗದ್ಗುರು ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿಗಳವರು, ವಿಧಿವತ್ತಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿಯವರು, "ಆಚಾರ್ಯ ಶಾಂತಿಸಾಗರರು ಕೇವಲ ಒಬ್ಬ ಮುನಿಯಲ್ಲ, ಒಂದು ಯುಗ. ಅವರು ತೋರಿದ ತ್ಯಾಗ, ಸಂಯಮದ ಹಾದಿಯಲ್ಲೇ ಇಂದಿನ ಸಮಾಜಕ್ಕೆ ಶಾಂತಿ ಇದೆ. ಈ ಶಾಂತಿ ಕಳಸ ರಥವು ಕೇವಲ ರಥವಲ್ಲ, ಅದು ಶಾಂತಿ, ಕರುಣೆ ಮತ್ತು ಅಹಿಂಸೆಯ ಸಂದೇಶವನ್ನು ಮನೆ ಮನೆಗೆ ತಲುಪಿಸುವ ಸಂಕಲ್ಪ. ಅಥಣಿಯ ಶ್ರಾವಕರ ಭಕ್ತಿ ಅತ್ಯಂತ ಶ್ಲಾಘನೀಯ" ಎಂದು ನುಡಿದರು. ಶಾಂತಿ ಕಲಶದ ಸವಾಲವನ್ನು ಜಿನನಗೌಡ ಪಾಟೀಲ್, ಮತ್ತು ಭಾರಮೂ ಪಾಟೀಲ ದಮಾತಿಗಳು ಪಡೆದಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಇಂಜಿನೀಯರ್ ಅರುಣ ಯಲಗುದ್ರಿ, ಸಾತಗೌಡ ಅಥಣಿ, ನಾಗರಾಜ್ ಘೋಂಗಡಿ, ಪ್ರಫುಲ್ ಪಡನಾಡ, ರಾಜು ಕರ್ಪೂರಶೆಟ್ಟಿ, ಅಶೋಕ ಪಡನಾಡ, ಪ್ರಶಾಂತ ಇಜಾರೆ, ಮಹಾವೀರ ಜಕನೂರ, ಸಂತೋಷ ಬೊಮ್ಮಣ್ಣವರ, ನಿತಿನ ಘೊಂಗಡಿ, ಚಕ್ರವರ್ತಿ ಕಿನಿಂಗೆ ಸೇರಿದಂತೆ ಶ್ರಾವಕ-ಶ್ರಾವಕಿಯರು ಭಾಗವಹಿಸಿದ್ದರು. ಆಚಾರ್ಯ ಶ್ರೀ ಶಾಂತಿಸಾಗರ ಮಹಾರಾಜರ ಕುರಿತು: ಆಚಾರ್ಯ ಶ್ರೀ ಶಾಂತಿಸಾಗರ ಮಹಾರಾಜರು 1872ರಲ್ಲಿ ಬೆಳಗಾವಿ ಜಿಲ್ಲೆಯ ಭೋಜ ಗ್ರಾಮದಲ್ಲಿ ಜನಿಸಿದರು. ಸುಮಾರು 700 ವರ್ಷಗಳ ಕಾಲ ನಿಂತು ಹೋಗಿದ್ದ ದಿಗಂಬರ ಮುನಿ ಪರಂಪರೆಯನ್ನು 20ನೇ ಶತಮಾನದಲ್ಲಿ ಪುನಃ ಆರಂಭಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಹಿಂಸೆ, ಅಪರಿಗ್ರಹ ಮತ್ತು ಅನೇಕಾಂತವಾದದ ತತ್ವಗಳನ್ನು ತಮ್ಮ ಕಟ್ಟುನಿಟ್ಟಿನ ತಪಸ್ಸಿನ ಮೂಲಕ ಜಗತ್ತಿಗೆ ಸಾರಿದ ಇವರು, 18-09-1955 ರಂದು ಮಹಾರಾಷ್ಟ್ರದ ಕುಂಥಲಗಿರಿಯಲ್ಲಿ ಸಲ್ಲೇಖನ ವ್ರತದ ಮೂಲಕ ಸಮಾಧಿ ಹೊಂದಿದರು. ಇವರ ಪುಣ್ಯತಿಥಿ ಮಹೋತ್ಸವವು ದಿ.13-09-2026 ರಂದು ನಾಂದಣಿಯಲ್ಲಿ ನಡೆಯಲಿದೆ.

ಎಕ್ಸಲೆಂಟ್: ಹಿಂದಿ ಉತ್ಸವ ಕಾರ್ಯಕ್ರಮ

Article Image

ಎಕ್ಸಲೆಂಟ್: ಹಿಂದಿ ಉತ್ಸವ ಕಾರ್ಯಕ್ರಮ

ಮೂಡುಬಿದಿರೆ: ಭಾಷೆ ಮನುಷ್ಯನ ಭಾವನೆಗಳಿಗೆ ಧ್ವನಿ ನೀಡುವ ಸಾಧನ ಮಾತ್ರವಲ್ಲ; ಅದು ಹೃದಯದಿಂದ ಹೃದಯಕ್ಕೆ ಸಾಗುವ ಸೇತುವೆ. ವೈವಿಧ್ಯಮಯ ಸಂಸ್ಕೃತಿ, ಆಚಾರ-ವಿಚಾರ ಹಾಗೂ ಭಾಷೆಗಳ ನಡುವೆ ಸೌಹಾರ್ದದ ಕೊಂಡಿಯಾಗಿ ಹಿಂದಿ ಭಾಷೆ ಮಹತ್ತರ ಪಾತ್ರ ವಹಿಸುತ್ತಿದೆ ಎಂದು ಸಂಪನ್ಮೂಲ ವ್ಯಕ್ತಿ ಉಜಿರೆ ಎಸ್‌ಡಿಎಮ್ ಕಾಲೇಜಿನ ಹಿಂದಿ ಉಪನ್ಯಾಸಕಿ ಪ್ಲೇವಿಯಾ ಪಾಲ್ ಹೇಳಿದರು. ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಹಿಂದಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಹಿಂದಿ ಭಾಷೆ ತನ್ನದೇ ಆದ ಪ್ರಭಾವ ಮತ್ತು ಮಹತ್ವವನ್ನು ಹೊಂದಿದೆ. ಜಾಗತೀಕರಣದ ಸಂದರ್ಭದಲ್ಲಿ ಹಿಂದಿ ಭಾಷೆ ಜಗತ್ತಿನ ವಿವಿಧ ಭಾಗಗಳಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಹಿಂದಿ ಸಾಹಿತ್ಯದ ಶ್ರೀಮಂತಿಕೆಯನ್ನು ಪ್ರಸ್ತಾಪಿಸಿದ ಅವರು, ಸಂತ ಕಬೀರ ಹಾಗೂ ಗೋಸ್ವಾಮಿ ತುಳಸಿದಾಸರ ದೋಹೆಗಳು ಕೇವಲ ಕಾವ್ಯಸಾಲುಗಳಲ್ಲ; ಅವು ಬದುಕಿನ ಸತ್ಯ, ಮಾನವೀಯ ಮೌಲ್ಯ, ನೀತಿ ಮತ್ತು ಆತ್ಮ ಜಾಗೃತಿಯ ಸಂದೇಶಗಳನ್ನು ಒಳಗೊಂಡ ಜೀವನದರ್ಶನಗಳಾಗಿವೆ. ಸರಳ ಪದಗಳಲ್ಲಿ ಆಳವಾದ ಅರ್ಥವನ್ನು ಕಟ್ಟಿಕೊಡುವ ಈ ದೋಹೆಗಳು ಇಂದಿನ ಯುವಜನತೆಯ ಬದುಕಿಗೂ ದಾರಿದೀಪವಾಗಬಲ್ಲವು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಅಂಚೆ ತಂತಿ ಮತ್ತು ಬ್ಯಾಂಕುಗಳಲ್ಲಿ ರಕ್ಷಣಾ ಸೇವೆಗಳಲ್ಲಿ ಹಿಂದಿ ಭಾಷೆ ಅನಿವಾರ್ಯ ಹಾಗೂ ಅಗತ್ಯ. ಅದು ಮನವನ್ನು ಮುಟ್ಟುವ ಭಾಷೆ ಎಂದರು. ಎಕ್ಸಲೆಂಟ್ ಕಾಲೇಜಿನ ಹಿಂದಿ ಉಪನ್ಯಾಸಕಿ ದಿವ್ಯಲಕ್ಷ್ಮೀ ರೈ ಅತಿಥಿ ಪರಿಚಯ ಹಾಗೂ ಪ್ರಾಸ್ತವಿಕ ನುಡಿಗಳ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪಪ್ರಾಂಶುಪಾಲ ಸುನದ್ ರಾಜ್ ಜೈನ್, ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್ ಹಾಗೂ ಶುಭ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ವಿದ್ಯಾರ್ಥಿಗಳು ಕವ್ವಾಲಿ, ಹಿಂದಿ ಗೀತೆ, ಗಜಲ್ ಹಾಗೂ ಮನಮೋಹಕ ಹಿಂದಿ ನೃತ್ಯಗಳನ್ನು ಪ್ರಸ್ತುತಪಡಿಸಿದರು. ಸಂಗೀತ, ಸಾಹಿತ್ಯ ಮತ್ತು ನೃತ್ಯದ ಸಮ್ಮಿಲನದ ಮೂಲಕ ವಿದ್ಯಾರ್ಥಿಗಳು ಹಿಂದಿ ಭಾಷೆಯ ವೈವಿಧ್ಯಮಯ ಸೌಂದರ್ಯವನ್ನು ಅನಾವರಣಗೊಳಿಸಿದರು. ಅವರ ಕಲಾತ್ಮಕ ಪ್ರದರ್ಶನಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಯಿತು. ಹಿತಾರ್ಥ್ ಕಡಬ ಕಾರ್ಯಕ್ರಮ ನಿರೂಪಿಸಿದರು. ಕೀರ್ತನ್ ಕುಮಾರ್ ಸ್ವಾಗತಿಸಿದರು. ಅನುಷಾ ವಂದನಾರ್ಪಣೆ ಸಲ್ಲಿಸಿದರು. ಹಿಂದಿ ಅಧ್ಯಾಪಕರಾದ ಸೌಮ್ಯ ಹಾಗೂ ರಮ್ಯ ಉಪಸ್ಥಿತರಿದ್ದರು.

ನೆಲ್ಲಿಕಾರು: ಪೂಜಾ ಕಾರ್ಯಕ್ರಮ

Article Image

ನೆಲ್ಲಿಕಾರು: ಪೂಜಾ ಕಾರ್ಯಕ್ರಮ

ಅತಿಶಯ ಶ್ರೀ ಕ್ಷೇತ್ರ ನೆಲ್ಲಿಕಾರು ಭಗವಾನ್ ಶ್ರೀ ಅನಂತನಾಥ ಸ್ವಾಮಿ ಮತ್ತು ಬ್ರಹ್ಮಯಕ್ಷ ದೇವರ ಸನ್ನಿಧಿಯಲ್ಲಿ ಶ್ರಾವಣ ಮಾಸದ, ಗುರುವಾರದ ವಿಶೇಷ ಪೂಜೆಯ ಪ್ರಯುಕ್ತ ಲಕ್ಷ ಹೂವಿನ ಪೂಜೆ ಮತ್ತು ಆರಾಧನೆಯು ದಿನಾಂಕ 3-09-2026 ಸಮಯ ಮಧ್ಯಾಹ್ನ: 12.00 ಗಂಟೆಗೆ ಜರುಗಲಿದೆ.

ಸ್ವ। ಶ್ಯಾಮಲಾದೇವಿ ಸ್ಮರಣಾರ್ಥ ಜೈನ ವಿದ್ಯಾರ್ಥಿ ವೇತನ

Article Image

ಸ್ವ। ಶ್ಯಾಮಲಾದೇವಿ ಸ್ಮರಣಾರ್ಥ ಜೈನ ವಿದ್ಯಾರ್ಥಿ ವೇತನ

ಮಹಾವೀರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಪ್ರತಿವರ್ಷದಂತೆ ಈ ಸಾಲಿನಲ್ಲೂ ಅರ್ಹ ಜೈನ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ 'ಪ್ರತಿಭಾ ಪುರಸ್ಕಾರ' ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ 'ವಿಶೇಷ ವಿದ್ಯಾರ್ಥಿ ವೇತನ' ನೀಡಲಾಗುವುದು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಖಾಯಂ ನಿವಾಸಿಗಳಾಗಿರಬೇಕು. ಪ್ರಸ್ತುತ ಪಿ.ಯು.ಸಿ, ಡಿಪ್ಲೋಮ, ಪದವಿ, ಸ್ನಾತಕೋತ್ತರ ಅಥವಾ ಉನ್ನತ ಶಿಕ್ಷಣದಲ್ಲಿ ವಿದ್ಯಾಭ್ಯಾಸ ಮಾಡುತ್ತಿರಬೇಕು. ಅರ್ಜಿ ಜೊತೆಗೆ ಶೈಕ್ಷಣಿಕ ದಾಖಲೆಗಳ ಪ್ರತಿಗಳು, ಮೊಬೈಲ್ ಸಂಖ್ಯೆ, ಇ- ಮೇಲ್, ಅರ್ಜಿದಾರರ ಭಾವಚಿತ್ರ ಲಗತ್ತಿಸಬೇಕು. ಅರ್ಜಿ ಸಲ್ಲಿಸುವ ವಿಧಾನ: ಭರ್ತಿ ಮಾಡಿದ ಅರ್ಜಿಯನ್ನು mccs.schlr@gmail.com ಗೆ ಇ-ಮೇಲ್ ಮಾಡಿ ಅಥವಾ ಸಮೀಪದ ನಮ್ಮ ಶಾಖೆಗೆ ಸಲ್ಲಿಸಿ. ಅಂತಿಮ ದಿನಾಂಕ: 07/09/2026. ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು 10/09/2026 ರಂದು ಸಂಜೆ 4:00 on www.mahaveerasociety.com ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ: ದಿನಾಂಕ: 13-09-2026 ಸಮಯ: ಬೆಳಿಗ್ಗೆ 10:30 ಗಂಟೆಗೆ ಸ್ಥಳ: 'ತಕ್ಷಿಲ', ಬಲ್ಲಾಳ್‌ ಭಾಗ್, ಮಂಗಳೂರು. ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಭಜನೆ, ಹಾಡು ಇತ್ಯಾದಿಗಳಲ್ಲಿ ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿಗಳು ನಿಮ್ಮ ವಿದ್ಯಾರ್ಥಿವೇತನ ಅರ್ಜಿಯಲ್ಲಿ ನಮೂದಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಜೈನ್ ದಿಗಂಬರ ವಧು-ವರರ ಸಮಾವೇಶ

Article Image

ಜೈನ್ ದಿಗಂಬರ ವಧು-ವರರ ಸಮಾವೇಶ

ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಪ್ರಪ್ರಥಮ ಬಾರಿಗೆ ಜೈನ ದಿಗಂಬರ ವಧು ವರರ ಸಮಾವೇಶವು ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ಸೆ.6 ರಂದು ನಡೆಯಲಿದೆ. ನೋಂದಣಿ ಶುಲ್ಕ: 1,000. ನೋಂದಣಿ ಮಾಡುವವರಿಗೆ ಸಿಗುವ ಸೌಲಭ್ಯಗಳು: * ಕಾರ್ಕಳ ರಾಜ್ಯಮಟ್ಟದ ಎರಡನೇ ಸಮಾವೇಶಕ್ಕೆ ಉಚಿತ ಪ್ರವೇಶ ತಕ್ಷಣ PDF ಪ್ರೊಫೈಲ್‌ಗಳ ವಿತರಣೆ * ವಾಟ್ಸಾಪ್ ಗ್ರೂಪ್ ಸೇರ್ಪಡೆ * ಒಂದು ವರ್ಷದ ಸೇವೆ ಮತ್ತು ಅಗತ್ಯ ಮಾಹಿತಿ ಲಭ್ಯ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಸಂಪತ್‌ ಜೈನ್ ಎಡಿಟ‌ರ್ ಚಿಗುರು ಪತ್ರಿಕೆ 9902782588, 7483902931

ಕಾರ್ಕಳ: ದಶಲಕ್ಷಣ ಪರ್ವ

Article Image

ಕಾರ್ಕಳ: ದಶಲಕ್ಷಣ ಪರ್ವ

ಶ್ರೀ ಬಾಹುಬಲಿ ಶ್ರಾವಿಕಾಶ್ರಮದಲ್ಲಿ ದಶಲಕ್ಷಣ ಪರ್ವವು ಶ್ರೀ ಜೈನಮಠದ ರಾಜಗುರು “ಧ್ಯಾನಯೋಗಿ” ಪರಮ ಪೂಜ್ಯ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಸಾನ್ನಿಧ್ಯದಲ್ಲಿ ದಿನಾಂಕ 16-9-2026 ರಿಂದ 26-9-2026ರವರೆಗೆ ಜರಗಲಿರುವುದು ಹಾಗೂ ಧಾರ್ಮಿಕ ಪಾಠ ಸ್ಪರ್ಧಾ ವಿಜೇತರಿಗೆ ಪ್ರಮಾಣ ಪತ್ರ ನೀಡಿ ಆಶೀರ್ವಚನ ನೀಡಲಿರುವರು. ಭರತ್ ರಾಜ್ ಜೈನ್ ಮೂಡಾರು ಧಾರ್ಮಿಕ ಚಿಂತಕರು ಇವರು ದಿನಾಂಕ 26-09-2026ನೇ ಶನಿವಾರ ಅಪರಾಹ್ನ ಗಂಟೆ-3.00ಕ್ಕೆ ಪರಮಪೂಜ್ಯ ಜರದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಶ್ರೀ ಜೈನ ಮಠ, ಶ್ರವಣಬೆಳಗೊಳ “ದತ್ತಿನಿಧಿ ಪ್ರಶಸ್ತಿ” ಪ್ರದಾನ ಮಾಡಿ, ಉಪನ್ಯಾಸ ನೀಡಲಿರುವರು. ಪ್ರತಿದಿವಸ ಸಾಯಂಕಾಲ ಗಂಟೆ 6-30ರಿಂದ ಪೂಜೆ, ಭಜನೆ, ಗಣ್ಯರಿಂದ ಪ್ರವಚನ ಇತ್ಯಾದಿ ಕಾರ್ಯಕ್ರಮಗಳು ಜರಗಲಿರುವುದು.

ಪ್ರತಿಷ್ಠಿತ ಜಿನಸಮ್ಮಿಲನ ಕಾರ್ಯಕ್ರಮ

Article Image

ಪ್ರತಿಷ್ಠಿತ ಜಿನಸಮ್ಮಿಲನ ಕಾರ್ಯಕ್ರಮ

ಸುಹಾಸ್ತಿ ಯುವ ಜೈನ್ ಮಿಲನ್, ಬೆಂಗಳೂರು ವತಿಯಿಂದ ಆಯೋಜಿಸಲಾಗುತ್ತಿರುವ ಪ್ರತಿಷ್ಠಿತ ಜಿನಸಮ್ಮಿಲನ ಕಾರ್ಯಕ್ರಮವು ಇದೇ ಬರುವ ಡಿಸೆಂಬರ್ 11, 12 & 13ರಂದು ಸಮ್ಮೇದ ಶಿಖರ್ಜಿಯಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಜಿನಸಮ್ಮಿಲನದ ವಿಶೇಷ ಲೋಗೋವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಲೋಕಾರ್ಪಣೆ ಮಾಡಿದರು. ಡಾ. ಹೆಗ್ಗಡೆಯವರು ಮುಂಬರುವ ಜಿನಸಮ್ಮಿಲನ ಕಾರ್ಯಕ್ರಮಕ್ಕೆ ಶುಭಹಾರೈಸಿ, ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಲಿ ಹಾಗೂ ಯುವಜನರಿಗೆ ಮತ್ತಷ್ಟು ಪ್ರೇರಣೆಯಾಗಲಿ ಎಂದು ಆಶೀರ್ವದಿಸಿದರು. ನಂತರ ಹೇಮಾವತಿ ವೀ. ಹೆಗ್ಗಡೆಯವರನ್ನು ಭೇಟಿ ಮಾಡಲಾಯಿತು. ಅವರು ಜಿನಸಮ್ಮಿಲನವು ಯಶಸ್ವಿಯಾಗಿ ನೆರವೇರಲಿ, ಯುವ ಜನರನ್ನು ಮತ್ತಷ್ಟು ಒಗ್ಗೂಡಿಸಿ ಸಮಾಜದಲ್ಲಿ ಸಕರಾತ್ಮಕ ಚಟುವಟಿಕೆಗಳಿಗೆ ಪ್ರೇರಣೆಯಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸುಹಾಸ್ತಿ ಯುವ ಜೈನ್ ಮಿಲನ್ ಅಧ್ಯಕ್ಷರಾದ ದರ್ಶನ್ ಜೈನ್ ಮಾರಲಗೋಡು, ಚಿತ್ತ ಜಿನೇಂದ್ರ, ಮಾಜಿ ಅಧ್ಯಕ್ಷರಾದ ಪುಟ್ಟುಸ್ವಾಮಿ, ಮಾಜಿ ಕಾರ್ಯದರ್ಶಿ ಅಭಿನಂದನ್ ಜೈನ್ ಬಿದರೂರು ಹಾಗೂ ಅಭಿಷೇಕ್ ಉಪಸ್ಥಿತರಿದ್ದರು.

ಕುಪ್ಪೆಪದವು: ಜೈನ್ ಮಿಲನ್ ವತಿಯಿಂದ ವಕೀಲೆ ಶ್ವೇತಾ ಜೈನ್ ರವರಿಗೆ ಗೌರವ

Article Image

ಕುಪ್ಪೆಪದವು: ಜೈನ್ ಮಿಲನ್ ವತಿಯಿಂದ ವಕೀಲೆ ಶ್ವೇತಾ ಜೈನ್ ರವರಿಗೆ ಗೌರವ

ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ನ್ಯಾಯ ಕ್ಷೇತ್ರದಲ್ಲಿನ ಸಾಧನೆಗಳಿಗಾಗಿ ವಕೀಲೆ ಶ್ವೇತ ಜೈನ್ ಅವರನ್ನು ಕುಪ್ಪೆಪದವು ಜೈನ್ ಮಿಲನ್ ವತಿಯಿಂದ ಸನ್ಮಾನಿಸಲಾಯಿತು. 2026-28ನೇ ಸಾಲಿಗೆ ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗದ ಜೊತೆ ಕಾರ್ಯದರ್ಶಿಯಾಗಿ ಪುನರ್ ಆಯ್ಕೆಯಾದ ಹಿನ್ನೆಲೆಯಲ್ಲಿ ಹಾಗೂ ಕುಪ್ಪೆಪದವು ಮತ್ತು ಬೆಳುವಾಯಿ ಜೈನ್ ಮಿಲನ್‌ಗೆ ನಿರ್ದೇಶಕರಾಗಿ ಹೆಚ್ಚುವರಿ ಜವಾಬ್ದಾರಿ ನೀಡಿದ ಸಂದರ್ಭದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗದ ಕಾರ್ಯದರ್ಶಿ ಸುಭಾಷ್ ಚಂದ್ರ ಜೈನ್, ಅಧ್ಯಕ್ಷ ಧೀರೇಶ್ ಜೈನ್, ಕಾರ್ಯದರ್ಶಿ ಜಿನೇಂದ್ರ ಇಂದ್ರ, ಭೋಜರಾಜ್ ಜೈನ್, ಅಜಿತ್ ಕುಮಾರ್ ಜೈನ್, ಸ್ವರ್ಣ ಲತಾ, ಪದ್ಮಪ್ರಸಾದ್ ಇಂದ್ರ ಹಾಗೂ ಉದಯಕುಮಾರ್ ಉಪಸ್ಥಿತರಿದ್ದರು.

ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು

Article Image

ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು

ಬೆಳಗಾವಿ:- ದಕ್ಷಿಣ ಭಾರತ ಜೈನ ಸಭೆಯ ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ್ ನಲ್ಲಿ ಪ್ರಥಮಾಚಾರ್ಯ ಶ್ರೀ 108 ಶಾಂತಿಸಾಗರ ಮಹಾರಾಜರ ಪುಣ್ಯತಿಥಿ ಹಾಗೂ ದಶಲಕ್ಷಣ ಪರ‍್ವನಿಮಿತ್ತ ಕೈ. ಶ್ರೀ ನೇಮಿನಾಥ ಕಲ್ಲಪ್ಪಾ ಇಂಚಲ ಮತ್ತು ಶ್ರೀಮತಿ ಸುಮಿತ್ರಾದೇವಿ ನೇಮಿನಾಥ ಇಂಚಲ ಸಾಂಸ್ಕೃತಿಕ ಸ್ಪರ್ಧೆಗಳು-2026ನ್ನು ಆಯೋಜಿಸಲಾಗಿದೆ. ಕಂಠಪಾಠ ಸ್ಪರ್ಧೆ: (5 ರಿಂದ 10 ವರ್ಷಗಳು) ವಿಷಯ: ಗೊಮ್ಮಟ ಸ್ತುಥಿ (ಥುದಿ) (ವಿಸಟ್ಟ ಕಂದೊಟ್ಟ) ಭಾಷಣ ಸ್ಪರ್ಧೆ: (11 ರಿಂದ 22 ವರ್ಷಗಳು) ವಿಷಯ: 1) ವರ್ಧಮಾನ (ಮಹಾವೀರ) ತೀರ್ಥಂಕರ ಚರಿತ್ರೆ 2) ವರ್ತಮಾನ ಕಾಲದ 24 ತೀರ್ಥಂಕರರ ಮೋಕ್ಷಸ್ಥಾನ (ಕೂಟ)ಗಳ ಹೆಸರು ಸಮಯ: 5 ನಿಮಿಷ (Five minutes) ಭಾಷಣ ಸ್ಪರ್ಧೆ: (23 ರಿಂದ 40 ವರ್ಷಗಳು) ವಿಷಯ: 1) “ರತ್ನತ್ರಯ”-ವಿಶ್ಲೇಷಣೆ ಸಮಯ: 5 ನಿಮಿಷ (Five minutes) ಸ್ಪರ್ಧೆಯ ದಿನಾಂಕ: 06-09-2026 ಸ್ಥಳ: “ಶಾಂತಿಸ್ಮಾರಕ”, ಮಾಣಿಕಬಾಗ ದಿಗಂಬರ ಜೈನ ಬೊರ್ಡಿಂಗ, ಪಿ.ಬಿ.ರಸ್ತೆ, ಬೆಳಗಾವಿ. ವಿ.ಸೂ: 1) ಸ್ಪರ್ಧೆಗೆ ಭಾಗವಹಿಸಲಿಚ್ಛಿಸುವ ಅಭ್ಯರ್ಥಿಗಳಿಗೆ ಹೆಸರು ನೋಂದಾಯಿಸಲು ಕೊನೆಯ ದಿನಾಂಕ 30-08-2026 2) ಸ್ಪರ್ಧೆಗೆ ಭಾಗವಹಿಸುವ ಅಭ್ಯರ್ಥಿಗಳು ನಿಮ್ಮ ಆಧಾರ ಕಾರ್ಡನ್ನು ತೆಗೆದುಕೊಂಡು ಬನ್ನಿರಿ. 3) ಬಹುಮಾನವನ್ನು ಅದೇ ದಿನ ಕೊಡಲಾಗುವುದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:- 7022691008, 9481106489, 8762640855, 8095939274, 9448013923

ಯಜ್ಞೋಪವಿತ ತಯಾರಿಸುವ ತರಬೇತಿ

Article Image

ಯಜ್ಞೋಪವಿತ ತಯಾರಿಸುವ ತರಬೇತಿ

ಶಿಶಿಲ: ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಬಸದಿ ಶ್ರೀ ಕ್ಷೇತ್ರ ಚಂದ್ರಪುರ ಹಾಗೂ ಭಗವಾನ್ 1008 ಶ್ರೀ ಅನಂತನಾಥ ಸ್ವಾಮಿ ಬಸದಿ ಇಚಿಲoಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಜೈನರಲ್ಲಿ ಸಮ್ಯಕ್ ದರ್ಶನ, ಜ್ಞಾನ, ಚಾರಿತ್ರಗಳೆಂಬ ರತ್ನತ್ರಯಗಳ ಸಂಕೇತವಾದ ಯಜ್ಞೋಪವಿತ (ಜನಿವಾರ) ತಯಾರಿಸುವ ತರಬೇತಿಯನ್ನು ಜಿನ ಮಂದಿರದಲ್ಲಿ ನೀಡಲಾಯಿತು. ಈ ಸಂದರ್ಭದಲ್ಲಿ ಡಾ. ಕೆ. ಜಯಕೀರ್ತಿ ಜೈನ್, ಧನ ಕೀರ್ತಿ ಶೆಟ್ಟಿ, ಮಹಾವೀರ್ ಜೈನ್, ಶುಭಕರ ಹೆಗ್ಡೆ, ವಿಜು ಜೈನ್, ಸಿ ಅಶೋಕ್ ಜೈನ್, ಪ್ರವೀಣ್, ರೋಷನ್, ಸುದೇಶ್ ಜೈನ್, ನಮನ್, ಸುವರ್ಣ ಲತಾ, ಜಯಶ್ರೀ, ಶ್ವೇತ, ಸುರಭಿ, ಸುನಿತಾ ದೇವಿ, ಪ್ರತಿಮಾ, ಶಕುಂತಲಾ ಜೈನ್, ಸೂರಜ್, ಪುರೋಹಿತರು ಹಾಗೂ ಆಡಳಿತ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಶ್ರಾವಕ-ಶ್ರಾವಕಿಯರು ಭಾಗವಹಿಸಿದ್ದರು.

ಬಿದರೂರು ಜೈನ ಬಸದಿಯಲ್ಲಿ ವಿಶೇಷ ಪೂಜೆ, ಅಭಿಷೇಕ

Article Image

ಬಿದರೂರು ಜೈನ ಬಸದಿಯಲ್ಲಿ ವಿಶೇಷ ಪೂಜೆ, ಅಭಿಷೇಕ

ಸಾಗರ/ಕಾರ್ಗಲ್‌: ಇತಿಹಾಸ ಪ್ರಸಿದ್ಧ ಬಿದರೂರು ಜೈನ ಬಸದಿಯಲ್ಲಿ ಶ್ರಾವಣ ಶುಕ್ರವಾರದ ಅಂಗವಾಗಿ ಭಗವಾನ್ ವರ್ಧಮಾನ ಸ್ವಾಮಿ, ಕೂಷ್ಮಾಂಡಿನಿ ಮಾತೆ ಹಾಗೂ ಪದ್ಮಾವತಿ ಮತ್ತು ಸಿದ್ಧಯಿನಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಅರ್ಚಕರಾದ ಮೋಹನ ಕುಮಾರ ಇಂದ್ರರು, ವಿದ್ಯಾಧರ ಇಂದ್ರರು, ಛವಿಷಾ ಇಂದ್ರರ ನೇತೃತ್ವದಲ್ಲಿ ಕುಂಕುಮಾರ್ಚನೆ, ಅಷ್ಟ ವಿಧಾರ್ಚನೆಗಳು ಮತ್ತು ಮಹಾಮಂಗಳಾರತಿ ಪೂಜೆಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಶ್ರಾವಕ-ಶ್ರಾವಕಿಯರು ಭಾಗವಹಿಸಿದ್ದರು.

ಮುಕುಟಸಪ್ತಮಿ ಆಚರಣೆ

Article Image

ಮುಕುಟಸಪ್ತಮಿ ಆಚರಣೆ

ಹುಬ್ಬಳ್ಳಿ: ಛಬ್ಬಿ ಗ್ರಾಮದ ಭಗವಾನ್ ಶ್ರೀ 1008 ಶಾಂತಿನಾಥ ತೀರ್ಥಂಕರ ಜಿನ ಮಂದಿರದಲ್ಲಿ ಸ್ಥಳೀಯ ಸಮಸ್ತ ಜೈನ್ ಸಮಾಜದ ವತಿಯಿಂದ ಮುಕುಟಸಪ್ತಮಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ನಿರ್ವಾಣ ಲಾಡು ಸಮರ್ಪಣೆ ಕಾರ್ಯಕ್ರಮದಲ್ಲಿ ಪಾವನ ಸಾನಿಧ್ಯವನ್ನು ಪರಮ ಪೂಜ್ಯ ಡಾ 108 ಶ್ರೀ ಬಾಲಾಚಾರ್ಯ ಸಿದ್ಧಸೇನ ಮುನಿ ಮಹಾರಾಜರು ವಹಿಸಿದ್ದರು. ಪಾರಿಶ್ವನಾಥ ತೀರ್ಥಂಕರರ ಮೋಕ್ಷ ಹೊಂದಿದ ಪವಿತ್ರ ದಿನ, ತನ್ನಿಮಿತ್ತ ಜಿನ ಮಂದಿರದಲ್ಲಿ ಪಂಚಾಮೃತ ಅಭಿಷೇಕ ಮಹಾ ಶಾಂತಿ ಮಂತ್ರ ನಂತರ ಸಭಾ ಮಂಟಪದಲ್ಲಿ 150 ಮಕ್ಕಳಿಂದ ಪಾರಿಶ್ವನಾಥ ತೀರ್ಥಂಕರಿಗೆ ಅಭಿಷೇಕ ಪೂಜಾ ವಿಧಿವಿದಾನ ನಡೆದವು. ನಂತರ ಮಹಾವೀರ ಯುವಕ ಮಂಡಳದವರಿಂದ ಸಮ್ಮೇದ ಶಿಖರ್ಜಿಯಲ್ಲಿ ಇರುವ 24 ಕೂಟ (ಮಂದಿರ) ಸ್ತಬ್ದ ಚಿತ್ರ ರಚನೆ ಮಾಡಿ ತೀರ್ಥಂಕರರಿಗೆ ನಿರ್ವಾಣ ಲಾಡು ಸಮರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮುನಿಮಹಾರಾಜರು ಮಾನವ ಜನ್ಮ ಸಿಕ್ಕಿದು ಮಹಾಪುಣ್ಯ ಕಾರಣ ಎಲ್ಲರು ದೇವರ ದರ್ಶನ ಸ್ವಾಧ್ಯಾಯ ಜಪ ಮಾಡಬೇಕು. ಮುಕುಟ ಅಂದರೆ ಕಿರೀಟ ಇದ್ದಹಾಗೆ ಮೋಕ್ಷ ಮಾರ್ಗದ ಕಡೆ ಹೋಗುವ ಹಾಗೆ ಆದಕಾರಣ ತಾವುಗಳು ತನು ಮನ ಧನದಿಂದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಮರ್ಪಣಾ ಭಾವದಿಂದ ಭಾಗವಹಿಸಿ ಪುಣ್ಯವನ್ನು ಸಂಪಾದಿಸಿಕೊಳ್ಳಿ ಎಂದು ಪ್ರವಚನದಲ್ಲಿ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶ್ರಾವಕ ಶ್ರಾವಕಿಯರು ಭಾಗವಹಿಸಿದ್ದರು. ವರದಿ : ಎಸ್ ಆರ್ ಮಲ್ಲಸಮುದ್ರ

ಅಲ್ಪಸಂಖ್ಯಾತ ಜೈನ ಸೇವಾ ಸಂಘ- ಪದಾಧಿಕಾರಿಗಳ ಆಯ್ಕೆ

Article Image

ಅಲ್ಪಸಂಖ್ಯಾತ ಜೈನ ಸೇವಾ ಸಂಘ- ಪದಾಧಿಕಾರಿಗಳ ಆಯ್ಕೆ

ಅಲ್ಪಸಂಖ್ಯಾತ ಜೈನ ಸೇವಾ ಸಂಘ ನವನಗರ ಹುಬ್ಬಳ್ಳಿ ಇದರ 2026-27 ರಿಂದ ಮೂರು ವರ್ಷದ ಅವಧಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು . ಸಂರಕ್ಷಕರಾಗಿ ಬಿ.ಎ. ಪಾಟೀಲ, ಗೌರವಾಧ್ಯಕ್ಷರಾಗಿ ಜೆ.ಎ. ಪಾಟೀಲ ಇವರನ್ನು ನಾಮ ನಿರ್ದೇಶನ ಮಾಡಲಾಯಿತು. ಶಾಂತರಾಜ ಮಲ್ಲಸಮುದ್ರ ಇವರು ಅಧ್ಯಕ್ಷರಾಗಿ ಸತತ ಐದನೇ ಬಾರಿ ಮರು ಆಯ್ಕೆಯಾದರೆ, ಕಾರ್ಯಾಧ್ಯಕ್ಷರಾಗಿ ರವೀಂದ್ರ ಟಿ ರಾಯಪ್ಪನವರ, ಉಪಾಧ್ಯಕ್ಷರಾಗಿ ಅಜಿತ ಎ ಉಪಾಧ್ಯ, ಮಹಿಳಾ ಉಪಾಧ್ಯಕ್ಷರಾಗಿ ಶೋಭಾ ವರೂರ, ಗೌರವ ಕಾರ್ಯದರ್ಶಿಯಾಗಿ ದೇವೇಂದ್ರ ಆರ್ ಚೌದರಿ, ಸಹಕಾರ್ಯದರ್ಶಿಗಳಾಗಿ ಸಂತೋಷ ಹಂಡಗೆ ಮತ್ತು ಅಶೋಕ ಯೋಗಪ್ಪನವರ, ಖಜಾಂಚಿಯಾಗಿ ಯಲ್ಲಪ್ಪ ಆಂಬೊಜಿ ಆಯ್ಕೆಗೊಂಡರು. ಕಾರ್ಯಕಾರಿ ಮಂಡಳಿ ಸದಸ್ಯರಾಗಿ : * ಭೀಮಣ್ಣ ಎಸ್ ವರೂರ * ರತ್ನಾಕರ ಜೆ ಪಾಟೀಲ * ಬಾಹುಬಲಿ ಹೊಂಬಣ್ಣವರ * ಅಶೋಕ ಅಂಬಣ್ಣವರ * ಶ್ರೇಣಿಕ ಡಿ ತೆಲಗಡ್ಡಿ * ವಿಕ್ರಮ್ ಆರ್ ಮಲ್ಲಸಮುದ್ರ * ಶಿರಿಯಪ್ಪ ಟಿ ಪಂಡಿತ ಇವರುಗಳು ಅವಿರೋಧವಾಗಿ ಆಯ್ಕೆಯಾದರು. ಅಲ್ಪಸಂಖ್ಯಾತ ಜೈನ ಸೇವಾ ಸಂಘವು ಕಳೆದ 20 ವರ್ಷಗಳಿಂದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದು ನವನಗರದ ಭಗವಾನ ಮುನಿಸುವೃತ ಜಿನಮಂದಿರದ ಆಡಳಿತ ನಡೆಸುತ್ತಾ ಪೂಜಾ ವಿಧಾನಗಳನ್ನು ಆಯೋಜಿಸುವ ಮೂಲಕ ಆದ್ಯಾತ್ಮಿಕ ಪ್ರಭಾವನೆಯನ್ನು ಮಾಡುತ್ತಿದೆ. ವರದಿ : ರವೀಂದ್ರ ರಾಯಪ್ಪನವರ ಕಾರ್ಯಾಧ್ಯಕ್ಷರು

ವಿದ್ವಾನ್ ಚಂದ್ರಯ್ಯರಿಗೆ ಕಸಾಪದ ರಾಜ್ಯಮಟ್ಟದ ಚಾವುಂಡರಾಯ ಪ್ರಶಸ್ತಿ ಪ್ರದಾನ

Article Image

ವಿದ್ವಾನ್ ಚಂದ್ರಯ್ಯರಿಗೆ ಕಸಾಪದ ರಾಜ್ಯಮಟ್ಟದ ಚಾವುಂಡರಾಯ ಪ್ರಶಸ್ತಿ ಪ್ರದಾನ

ಮೂಡುಬಿದಿರೆ: ಸಾಹಿತ್ಯ ಸೇವೆಗೆ ವಯಸ್ಸಿನ ನಿರ್ಬಂಧವಿಲ್ಲ ಎನ್ನುವುದಕ್ಕೆ ಶತಾಯುಷಿ ವಿದ್ವಾನ್ ಚಂದ್ರಯ್ಯ ಅವರು ಚಾವುಂಡರಾಯ ದತ್ತಿ ಪ್ರಶಸ್ತಿಗೆ ಭಾಜನರಾಗಿರುವುದೇ ಸಾಕ್ಷಿ . ಈ ಮೂಲಕ ಕನ್ನಡ ಸಾಹಿತ್ಯ ಪರಿಷತ್ ತನ್ನ ಘನತೆ ಹೆಚ್ಚಿಸಿಕೊಂಡಂತಾಗಿದೆ ಎಂದು ರಾಜ್ಯ ಉಚ್ಛನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಪದ್ಮರಾಜ ನೇಮಿಚಂದ್ರ ದೇಸಾಯಿ ನುಡಿದರು. ಅವರು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶ್ರೀ ಕೃಷ್ಣ ರಾಜ ಪರಿಷತ್ತಿನ ಮಂದಿರದಲ್ಲಿ ಜರಗಿದ ಚಾವುಂಡರಾಯ ದತ್ತಿ ಹಾಗೂ ಡಾ. ಸಿದ್ಧಲಿಂಗಯ್ಯ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದೀಪ ಪ್ರಜ್ವಲನಗೊಳಿಸಿ ಉದ್ಘಾಟಿಸಿ ಮಾತನಾಡಿದರು. ದತ್ತಿ ಪ್ರಶಸ್ತಿ ಪ್ರದಾನ: ಪ್ರಾಚೀನ ಜೈನ ಸಾಹಿತ್ಯವನ್ನು ಆಧರಿಸಿ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕೃತಿ ರಚನೆಯ ಸಾಧನೆಗಾಗಿ 2024ನೇ ಸಾಲಿಗೆ ಹಿರಿಯ ಸಾಹಿತಿ ಶತಾಯುಷಿ ವಿದ್ವಾನ್ ಬಿ. ಚಂದ್ರಯ್ಯ ಅವರಿಗೆ 2025 ರ ಸಾಲಿಗೆ ವಿಜಯಪುರದ ಡಿ.ಎನ್. ಅಕ್ಕಿ ಅವರಿಗೆ ನಗದು ಗೌರವ ಸಹಿತ ರಾಜ್ಯ ಮಟ್ಟದ ಚಾವುಂಡರಾಯ ಪ್ರಶಸ್ತಿ ಪ್ರದಾನ ನಡೆಯಿತು. ಬೆಂಗಳೂರಿನ ಹಿರಿಯ ಸಾಹಿತಿ, ಸಂಶೋಧಕ ಡಾ. ಹೆಚ್.ಆರ್. ಸ್ವಾಮಿ ಅವರಿಗೆ ಡಾ. ಸಿದ್ಧಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾರ್ಥಕ ಭಾವ: ಚಂದ್ರಯ್ಯ ಜೀವನದ ನೂರನೇ ವಯಸ್ಸಿನಲ್ಲಿ ಸಾಹಿತ್ಯ ಸೇವೆಗಾಗಿ ಚಾವುಂಡರಾಯ ಪ್ರಶಸ್ತಿಯಂತಹ ಗೌರವ ಲಭಿಸಿರುವುದು ಸಾರ್ಥಕ ಭಾವ ತಂದಿದೆ ಎಂದು ಪ್ರಶಸ್ತಿ ಪುರಸ್ಕೃತ ವಿದ್ವಾನ್ ಚಂದ್ರಯ್ಯ ನುಡಿದರು. ಕನ್ನಡ ರಾಜ್ಯೋದಯದ ಸಂದರ್ಭ ಮಡಿಕೇರಿಯಲ್ಲಿ ಖಾದಿ ಕಮಿಶನ್ ಉದ್ಯೋಗಿಯಾಗಿದ್ದ ಸಂದರ್ಭ ಬರೆದ " ಉದಯವಾಯಿತು ಒಂದು ಗೂಡಿತು ಹರಿದ ಹಿರಿಮೆಯ ಕನ್ನಡ" ಎಂಬ ಆಶಯ ಗೀತೆಯನ್ನು ಹಾಡಿದ ಅವರು ತನಗೆ ದೊರೆತ ಈ ಗೌರವದಿಂದ ಸಂತಸಗೊಂಡಿದ್ದ ಪತ್ನಿ ಸರೋಜಿನಿ ಪ್ರಶಸ್ತಿ ಪ್ರದಾನದ ಮುನ್ನಾ ದಿನ ನಿಧನರಾಗಿದ್ದಾರೆ. ಆದರೆ ಗೀತೆಯ ನಿರ್ಲಿಪ್ತತೆಯೊಂದಿಗೆ ಪ್ರಶಸ್ತಿ ಸ್ವೀಕರಿಸಿ ಪತ್ನಿಯ ಆಶಯ ಪೂರೈಸಿದ ಸಂತಸ ಅನುಭವಿಸುತ್ತಿದ್ದೇನೆ ಎಂದರು. ಮುಖ್ಯ ಅತಿಥಿಯಾಗಿದ್ದ ಬೆಂ.ವಿ.ವಿ. ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಪ್ರೊ. ರಾಜಪ್ಪ ದಳವಾಯಿ ಪ್ರಶಸ್ತಿ ಪ್ರದಾನ ನೆರವೇರಿಸಿ ಮಾತನಾಡಿ ಅಜಲು ಪದ್ಧತಿ ನಿಷೇಧಿಸುವಲ್ಲಿ ಕಾರಣರಾದ ಸಿದ್ಧಲಿಂಗಯ್ಯ ಅವರ ಬದುಕೊಂದು ಸಾಹಸ ಗೀತೆ ಎಂದರು. ಗಮಕಿ ವಿದ್ವಾಂಸ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ ಅವರು ಸಮ್ಮಾನಿತರನ್ನು ಪರಿಚಯಿಸಿ ರತ್ನಾಕರವರ್ಣಿ ಸಾಂಗತ್ಯದಲ್ಲಿ ರಚಿಸಿದ ಭರತೇಶ ವೈಭವ ಕೃತಿಯನ್ನು ಭಾಮಿನಿ ಷಟ್ಪದಿಯಲ್ಲಿ ಕನ್ನಡ ಸಾಹಿತ್ಯಕ್ಕೆ ಭರತೇಶ ವೈಭವಾಮೃತವನ್ನಾಗಿ ನೀಡಿದ ಚಂದ್ರಯ್ಯ ಅವರ ಕೊಡುಗೆ ಅನನ್ಯ . ಇಳಿವಯಸ್ಸಿನಲ್ಲೂ ಅವರು ಮಾಡುತ್ತಿರುವ ಸಾಹಿತ್ಯ ಸೇವೆ ಮಾದರಿ ಎಂದರು. ದತ್ತಿ ದಾನಿಗಳಾದ ವಿಶ್ರಾಂತ ಪತ್ರಿಕಾ ಸಂಪಾದಕ, ಸಾಹಿತಿ ಡಾ. ಪದ್ಮರಾಜ ದಂಡಾವತಿ ಆಶಯದ ನುಡಿಗಳನ್ನಾಡಿ ಚಂದ್ರಯ್ಯ ಅವರನ್ನು ತಡವಾಗಿಯಾದರೂ ಗುರುತಿಸಿ ಗೌರವಿಸಲಾಗುತ್ತಿದೆ ಎಂದರು. ದತ್ತಿ ದಾನಿ ರಮಾಕುಮಾರಿ ಸಿದ್ದಲಿಂಗಯ್ಯ ಮಾತನಾಡಿ ಮಾನವ ಧರ್ಮ, ಮಾನವೀಯತೆಯ ಸಾಧಕರಿಗೆ ಸಿದ್ಧಲಿಂಗಯ್ಯ ದತ್ತಿ ಪ್ರಶಸ್ತಿ ನೀಡಿ ಗೌರವಿಸುವ ಆಶಯವನ್ನು ವಿವರಿಸಿದರು. ಪ್ರಶಸ್ತಿ ಪುರಸ್ಕೃತ ಸಾಧಕರಾದ ಡಿ.ಎನ್. ಅಕ್ಕಿ, ಡಾ. ಹೆಚ್.ಆರ್. ಸ್ವಾಮಿ ತಮ್ಮ ಅನಿಸಿಕೆ ಹಂಚಿಕೊಂಡರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪರಿಷತ್ ಆಡಳಿತಾಧಿಕಾರಿ ಕೆ.ಎ. ದಯಾನಂದ, (ಐ.ಎ.ಎಸ್.) ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಾಡಗೀತೆಯೊಂದಿಗೆ ಆರಂಭವಾದ ಸಮಾರಂಭದಲ್ಲಿ ಶಾಂತಕುಮಾರಿ ಕೆ.ಆರ್. ಸ್ವಾಗತಿಸಿ ಚಂದನ ವಾಹಿನಿಯ ಧನಂಜಯ ನಿರೂಪಿಸಿ ವಂದಿಸಿದರು. ಭಟ್ಟಾರಕ ಶ್ರೀ ಗೌರವಾಭಿನಂದನೆ: ವಿದ್ವಾನ್ ಬಿ. ಚಂದ್ರಯ್ಯ ಅವರು ಶಿಕ್ಷಕರಾಗಿ ಸೇವೆ ಸಲ್ಲಿಸಿದ ಮೂಡುಬಿದಿರೆಯ ಶ್ರೀ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ಜೈನ ಸಾಹಿತ್ಯ ರಂಗಕ್ಕೆ ಅನನ್ಯ ಕೊಡಗೆ ನೀಡಿ ಪ್ರತಿಷ್ಠಿತ ಚಾವುಂಡರಾಯ ಪ್ರಶಸ್ತಿಗೆ ಭಾಜನರಾದ ಚಂದ್ರಯ್ಯ ಅವರನ್ನು ಅಭಿನಂದಿಸಿದ್ದಾರೆ. ಪ್ರಶಸ್ತಿ ಪ್ರದಾನಕ್ಕೆ ವಾರದ ಮೊದಲೇ ಬೆಂಗಳೂರಿನ ಚಂದ್ರಯ್ಯ ಅವರ ನಿವಾಸಕ್ಕೆ ತೆರಳಿ ಸರೋಜಿನಿಚಂದ್ರಯ್ಯ ದಂಪತಿಯನ್ನು ಶ್ರೀಗಳವರು ಗೌರವಿಸಿದ್ದರು. ಇದೇ ವೇಳೆ ಶ್ರೀ ಮಠದ ವಿವೇಕಾಭ್ಯುದಯ ಮಾಸಿಕದ ಸಂಪಾದಕರಾಗಿ ದೀರ್ಘಾವಧಿಗೆ ಚಂದ್ರಯ್ಯ ಅವರು ಸಲ್ಲಿಸಿರುವ ಸೇವೆಯನ್ನೂ ಶ್ರೀಗಳವರು ಸ್ಮರಿಸಿಕೊಂಡಿದ್ದಾರೆ.

ಶಿರ್ಲಾಲು: ಆಹಾರೋತ್ಸವ ಮತ್ತು ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ

Article Image

ಶಿರ್ಲಾಲು: ಆಹಾರೋತ್ಸವ ಮತ್ತು ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ

ಭಾರತೀಯ ಜೈನ್ ಮಿಲನ್ ಶಿರ್ಲಾಲು ಮತ್ತು ಶ್ರೀ ಅನಂತಮತಿ ಮಹಿಳಾ ಸಂಘ ಶಿರ್ಲಾಲು ಇವರ ನೇತೃತ್ವದಲ್ಲಿ ಆಹಾರೋತ್ಸವ 2026 ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುನಿಲ್ ಕುಮಾರ್ ಜೈನ್ ಮತ್ತು ಮಲ್ಲಿಕಾ ಜಯಪಾಲ್ ಜೈನ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾರತೀಯ ಭಾರತೀಯ ಜೈನ್ ಮಿಲನ್ ವಲಯ - 8, ನಿರ್ದೇಶಕರು ಪ್ರಭಾತ್ ಕುಮಾರ್ ಜೈನ್ ಕಾರ್ಕಳ, ಅನಂತರಾಜ್ ಪೂವಣಿ. ಸನತ್ ಕುಮಾರ್ ಜೈನ್, ನಮಿರಾಜ ಜೈನ್, ನಿರಂಜನ ಕಡಂಬ, ಶಾಂತಿರಾಜ್ ಜೈನ್, ಸುದರ್ಶನ್ ಜೈನ್, ಶ್ರೀಕಾಂತ ಇಂದ್ರ, ವಿನಂತಿ ಆರ್ ಪೂವಣಿ ಭಾಗವಹಿಸಿದ್ದರು. ಶೀತಲ್ ಕುಮಾರ್ ಜೈನ್ ಸ್ವಾಗತಿಸಿದರು. ನೀತು ರತ್ನರಾಜ ಜೈನ್ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಪ್ರಜ್ವಲ್ ಜೈನ್ ನೆರವೇರಿಸಿದರು.

ಮೋಕ್ಷ ಕಲ್ಯಾಣ ಮಹೋತ್ವವ

Article Image

ಮೋಕ್ಷ ಕಲ್ಯಾಣ ಮಹೋತ್ವವ

ವಿಜಯಪುರ, ಮಹೇಂದ್ರಗಿರಿಯಲ್ಲಿರುವ ಭಗವಾನ್ ಶ್ರೀ 1008 ಸಹಸ್ರಪಣಿ ಪಾರ್ಶ್ವನಾಥ ದಿಗಂಬರ ಜೈನ ಬಸದಿಯಲ್ಲಿ ಭಗವಾನ್ ಶ್ರೀ 1008 ಪಾರ್ಶ್ವನಾಥ ತೀರ್ಥಂಕರರ ಮೋಕ್ಷ ಕಲ್ಯಾಣ ಮಹೋತ್ವವ - ಮುಕುಟ ಸಪ್ತಮಿ ಕಾರ್ಯಕ್ರಮವು ಪ.ಪೂ. ಸಪ್ತಭಂಗ ವ್ಯಾಖ್ಯಾತಾ, ವಾತ್ಸಲ್ಯಮೂರ್ತಿ ಪಟ್ಟಾಚಾರ್ಯ ಶ್ರೀ ತನ್ಮಯ ಸಾಗರ ಮಹಾರಾಜರ ಪಾವನ ಸಾನ್ನಿಧ್ಯದಲ್ಲಿ ಮತ್ತು ಶ್ರೀ ಕ್ಷೇತ್ರ ಶ್ರವಣಬೆಳಗೂಳ ದಿಗಂಬರ ಜೈನ ಮಠದ ಪ.ಪೂ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ವಿಧಿ - ವಿಧಾನಗಳು ನೆರವೇರಲಿರುವುದು

ನಾರಾವಿ: ಉಚಿತ ನೇತ್ರ ತಪಾಸಣಾ ಶಿಬಿರ

Article Image

ನಾರಾವಿ: ಉಚಿತ ನೇತ್ರ ತಪಾಸಣಾ ಶಿಬಿರ

ನಾರಾವಿ ಮಾಗಣೆ ಭ। ಧರ್ಮನಾಥ ಸ್ವಾಮಿ ಬಸದಿಯ ಶ್ರೀ ಅನಂತನೋಂಪಿಯ ವ್ರತಧಾರಿಗಳ ಮುಂದಾಳತ್ವದಲ್ಲಿ 15ನೇ ವರ್ಷದ ಶ್ರೀ ಅನಂತನೋಂಪಿ ಆರಾಧನಾ ಪ್ರಯುಕ್ತ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಸ್ಟ್ ಆಸ್ಪತ್ರೆ ಮಂಗಳೂರು - ಮೂಡಬಿದ್ರೆ ಮತ್ತು ನವಜ್ಯೋತಿ ಚಾರಿಟೇಬಲ್ ಟ್ರಸ್ಟ್ ಡಾ| ಪಿ. ದಯಾನಂದ ಪೈ ಮತ್ತು ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ (ರಿ.), ಸೆಂಚೂರಿ ಗ್ರೂಪ್, ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಅಂಧತ್ವ ನಿವರಣಾ ವಿಭಾಗ) ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವು ದಿನಾಂಕ 23-08-2026ನೇ ರವಿವಾರದಂದು ಧರ್ಮಶ್ರೀ ಸಭಾಭವನದಲ್ಲಿ ಬೆಳಿಗ್ಗೆ ಗಂ. 9-00ರಿಂದ ಮಧ್ಯಾಹ್ನ ಗಂ. 1-00ರವರೆಗೆ ನಡೆಯಲಿದೆ. ಶಿಖರದ ವಿಶೇಷತೆ: ಶಿಬಿರದಲ್ಲಿ ಕಣ್ಣಿನ ಸಂಪೂರ್ಣ ತಪಾಸಣೆ ನಡೆಸಲಾಗುವುದು. ಅಗತ್ಯವುಳ್ಳವರಿಗೆ ಉಚಿತವಾಗಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಯಶಸ್ವಿನಿ, ಸಂಪೂರ್ಣ ಸುರಕ್ಷಾ, E.S.I. ಮತ್ತು ಎಲ್ಲಾ ನಗದು ರಹಿತ ಯೋಜನೆಗಳು ಲಭ್ಯ. ತಮ್ಮ ಕಣ್ಣಿನ ಹಾಗೂ ಇತರ ಆರೋಗ್ಯ ಸಮಸ್ಯೆಯನ್ನು ತಪಾಸಣಾ ಸಮಯದಲ್ಲಿ ವೈದ್ಯರಿಗೆ ತಿಳಿಸತಕ್ಕದ್ದು. ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದವರಿಗೆ ಗೊತ್ತುಪಡಿಸಿದ ದಿನಾಂಕದಂದು ಮಂಗಳೂರು ಪ್ರಸಾದ್ ನೇತ್ರಾಲಯ ಕಣ್ಣಿನ ಆಸ್ಪತ್ರೆಗೆ ವಾಹನದಲ್ಲಿ ಕರೆದುಕೊಂಡು ಹೋಗಿ ಉಚಿತ ಶಸ್ತ್ರಚಿಕಿತ್ಸೆ ಮಾಡಿಸಿ ವಾಪಾಸು ಕರೆದು ತಂದು ಬಿಡಲಾಗುವುದು. ಅಗತ್ಯವುಳ್ಳವರಿಗೆ ರಿಯಾಯಿತಿ ದರದಲ್ಲಿ ಕನ್ನಡಕವನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ. ಶಿಶುಪಾಲ್ ಜೈನ್-9449449967, ಅಶೋಕ್ ಕುಮಾರ್ - 6361293020, ಜಯವರ್ಮ ಜೈನ್- 9902213650, ಹರ್ಷೇಂದ್ರ ಕುಮಾರ್ - 9901862308, ಶೀತಲ್ ಕುಮಾರ್- 9901296744, ಯಶೋಧರ ಜೈನ್- 9900902239 ಮಧುಕರ್ ಕನ್ನಾರ್, ಸಾರ್ವಜನಿಕ ಸಂಪರ್ಕ ಅಧಿಕಾರಿ, ಪ್ರಸಾದ್ ನೇತ್ರಾಲಯ ಉಡುಪಿ- 9844761421 ವಿಶೇಷ ಸೂಚನೆ :- ಹೆಸರು ನೋಂದಾವಣೆಯು ಬೆಳಗ್ಗೆ ಗಂ. 8-45ಕ್ಕೆ ಆರಂಭವಾಗುತ್ತದೆ. 15 ನಿಮಿಷ ಮುಂಚಿತವಾಗಿ ಆಗಮಿಸುವುದು.

ಕೀರ್ತಿ ಸನ್ಮಾನ ಕಾರ್ಯಕ್ರಮ

Article Image

ಕೀರ್ತಿ ಸನ್ಮಾನ ಕಾರ್ಯಕ್ರಮ

ಚಾಮರಾಜನಗರ: ಶ್ರೀ ಕ್ಷೇತ್ರ ಕನಕಗಿರಿಯ ಮೂಲನಾಯಕ ಭಗವಾನ್ ಶ್ರೀ 1008 ವಿಜಯಪಾರ್ಶ್ವನಾಥ ಭಗವಾನರ ಮೋಕ್ಷ ಕಲ್ಯಾಣ ಮಹೋತ್ಸವ (ಮುಕುಟ ಸಪ್ತಮೀ)ಯ ಪ್ರಯುಕ್ತ ಈ ಬಾರಿಯ ಶೈಕ್ಷಣಿಕ ವಿಭಾಗದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ 95% ಗಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಸಾಧಕರನ್ನು ಪರಮಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ದಿನಾಂಕ 21-08-2026 ರಂದು ನಡೆಯಲಿರುವ ಮುಕುಟ ಸಪ್ತಮೀ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಆಶೀರ್ವಾದಿಸಲಿದ್ದಾರೆ. ಆದ್ದರಿಂದ 95% ಗಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯ ಪ್ರತಿಯನ್ನು ಹಾಗೂ ಸಂಪರ್ಕ ಸಂಖ್ಯೆಯನ್ನು ಕೆಳಗಿನ ಮೊಬೈಲ್ ಸಂಖ್ಯೆಗೆ ವಾಟ್ಸ್ಆಪ್ ಮೂಲಕ ಕಳುಹಿಸಿಕೊಡಲು ವಿನಂತಿ. ಅದನ್ನು ಪರಿಶೀಲಿಸಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸಂಪರ್ಕಿಸಲಾಗುವುದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಶ್ರೀ ಜೈನ ಮಠ, ಶ್ರೀ ಕ್ಷೇತ್ರ ಕನಕಗಿರಿ-7892973503

ಜೈನ್ ಮಿಲನ್ ಮಾಸಿಕ ಸಭೆ

Article Image

ಜೈನ್ ಮಿಲನ್ ಮಾಸಿಕ ಸಭೆ

ಕಾರ್ಕಳ: ಭಾರತೀಯ ಜೈನ್ ಮಿಲನ್ ಇದರ ಆಗಸ್ಟ್ ತಿಂಗಳ ಮಾಸಿಕ ಸಭೆಯು ತ್ಯಾಗಿ ಭವನದಲ್ಲಿ ಏಲಾಚಾರ್ಯ 108 ಪ್ರಸಂಗ ಸಾಗರ ಮಹಾರಾಜರ ಮತ್ತು ಸ್ವಸ್ತಿಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಇವರ ಪಾವನ ಸಾನ್ನಿಧ್ಯದೊಂದಿಗೆ ನೆರವೇರಿತು. ಅತಿಥಿಗಳಾಗಿ ಆಗಮಿಸಿದ ವಲಯ 8 ರ ನಿರ್ದೇಶಕರಾದ ಶ್ವೇತಾ ಜೈನ್ ವಕೀಲರು, ಮೂಡಬಿದ್ರೆ ಇವರು ಮುನಿಧರ್ಮ ಮತ್ತು ಶ್ರಾವಕ ಧರ್ಮದ ಬಗ್ಗೆ ಮಾತನಾಡುತ್ತಾ ಮುನಿ ಪರಂಪರೆ ಶ್ರೇಷ್ಠವಾದದ್ದು, ಶ್ರಾವಕರಾದವರು ಮುನಿಗಳ ಸೇವೆಯಲ್ಲಿ ತೊಡಗಿ ಪುಣ್ಯ ಸಂಪಾದನೆ ಮಾಡಬೇಕು ಎಂದು ಹೇಳಿದರು. ನಂತರ ನೂತನ ವಲಯ ನಿರ್ದೇಶಕರಾದ ಎನ್ ಪ್ರಭಾತ್ ಕುಮಾರ್ ಇವರಿಗೆ ಅಧ್ಯಕ್ಷರು ಶಾಲು ಹೊದಿಸಿ ಗೌರವಿಸಿದರು. ಆಗಸ್ಟ್ ತಿಂಗಳಲ್ಲಿ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದವರಿಗೆ ಶುಭಾಶಯ ಕೋರಲಾಯಿತು. ಅಶೋಕ್ ಎಚ್ ಎಂ ಇವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ನಂತರ ಮುನಿ ಮಹಾರಾಜರಿಗೆ ಮತ್ತು ಸ್ವಾಮೀಜಿಯವರಿಗೆ ಪಾದ ಪೂಜೆಯೊಂದಿಗೆ ಜಿನಾವಾಣಿಯನ್ನು ಸಮರ್ಪಿಸಲಾಯಿತು. ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ಪಂಚಮ ಕಾಲದಲ್ಲಿ ನಿರ್ಗ್ರಂಥ ಮುನಿಗಳು ನಮ್ಮ ಊರಿಗೆ ಬಂದು ಚಾತುರ್ಮಾಸ ಮಾಡುವುದು ಸೌಭಾಗ್ಯವೇ ಸರಿ. ತಾವೆಲ್ಲ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಬೇಕೆಂದು ಕರೆ ನೀಡಿದರು. ನಂತರ ಪರಮಪೂಜ್ಯ ಪ್ರಸಂಗ ಸಾಗರ ಮುನಿ ಮಹಾರಾಜರ ಧಾರ್ಮಿಕ ಪ್ರವಚನ ನಡೆಯಿತು. ವೀಕ್ಷಿತ ಏ ಜೈನ್ ಹಾಗೂ ರಿಧಿ ಜೈನ್ ಪ್ರಾರ್ಥಿಸಿದರು. ಕಾರ್ಯದರ್ಶಿಯಾದ ವಸಂತ್ ಕುಮಾರ್ ಬಂಗ ರವರು ಸ್ವಾಗತಿಸಿದರು.

ವೇಣೂರು: ಕರಾವಳಿ ಮಿಲನೋತ್ಸವ

Article Image

ವೇಣೂರು: ಕರಾವಳಿ ಮಿಲನೋತ್ಸವ

ಉಜಿರೆ: ಜೈನರು ಅಲ್ಪಸಂಖ್ಯಾತರಾದರೂ, ಸತ್ಯ, ಧರ್ಮ ಮತ್ತು ಅಹಿಂಸೆಯ ಪರಿಪಾಲನೆಯೊಂದಿಗೆ ದಕ್ಷನಾಯಕತ್ವ, ಆದರ್ಶ ಆಹಾರ-ವಿಹಾರ, ಆಚಾರ-ವಿಚಾರಗಳೊಂದಿಗೆ ಉತ್ತಮ ಜೀವನಶೈಲಿ, ಎಲ್ಲರೊಂದಿಗೂ ಪ್ರೀತಿ-ವಿಶ್ವಾಸದಿಂದ ಹೃದಯ ಶ್ರೀಮಂತಿಕೆಯೊಂದಿಗೆ ಮುಕ್ತವಾಗಿ ಬೆರೆತು, ಸಾಮಾಜಿಕ ಬದ್ಧತೆ ಮತ್ತು ಸೇವಾಕಳಕಳಿಂದಾಗಿ ಉತ್ತಮ ಸ್ಥಾನ-ಮಾನ ಹೊಂದಿದ್ದಾರೆ. ಎಲ್ಲರಿಂದಲೂ ಗೌರವ, ಅಭಿಮಾನಕ್ಕೆ ಪಾತ್ರರಾಗಿದ್ದಾರೆ ಎಂದು ಭಾರತೀಯ ಜೈನ್‌ಮಿಲನ್ ವಲಯ-8ರ ಉಪಾಧ್ಯಕ್ಷರಾದ ಸುದರ್ಶನ್ ಜೈನ್ ಬಂಟ್ವಾಳ ಹೇಳಿದರು. ಅವರು ಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜಿನಲ್ಲಿ ಬೆಳ್ತಂಗಡಿ ಜೈನ್‌ಮಿಲನ್ ಆಶ್ರಯದಲ್ಲಿ ಆಯೋಜಿಸಿದ ಮಾಸಿಕ ಸಭೆ ಮತ್ತು ಆಹಾರೋತ್ಸವ ಉದ್ಘಾಟಿಸಿ ಜೈನ ಸಮುದಾಯದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಕೃತಿಯ ಮಡಿಲಲ್ಲಿ ಹೇರಳವಾಗಿ ದೊರಕುವ ನೆಲ್ಲಿಕಾಯಿ, ಕೆಸು, ನುಗ್ಗೆ, ಹರಿವೆಸೊಪ್ಪು, ಮಾವು ಮೊದಲಾದ ಪೌಷ್ಠಿಕ ವಸ್ತುಗಳ ಬಳಕೆ ಮತ್ತು ಮಹತ್ವದ ಬಗ್ಗೆ ಅರಿವು, ಜಾಗೃತಿ, ಮೂಡಿಸುವುದೇ ಆಹಾರೋತ್ಸವದ ಉದ್ದೇಶವಾಗಿದೆ ಎಂದು ಹೇಳಿದರು. ಅಂತಾರಾಷ್ಟ್ರೀಯ ಸೇವಾಸಂಸ್ಥೆಯಾದ ಭಾರತೀಯ ಜೈನ್‌ಮಿಲನ್ ಆಶ್ರಯದಲ್ಲಿ ಅಲ್ಲಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜಿನಭಜನಾ ಸ್ಪರ್ಧೆ ಆಯೋಜಿಸಿ ಸಮಾಜದ ಸಂಘಟನೆಯೊಂದಿಗೆ. ಪರಸ್ಪರ ಪ್ರೀತಿ-ವಿಶ್ವಾಸ ಬೆಳೆಯುತ್ತಿದೆ. 2027ರ ಫೆಬ್ರವರಿಯಲ್ಲಿ ಕಾರ್ಕಳದಲ್ಲಿ ಜರುಗಲಿರುವ ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಫೆ. 13 ಮತ್ತು 14 ರಂದು ರಾಜ್ಯಮಟ್ಟದ ಜಿನಭಜನಾ ಸ್ಪರ್ಧೆ ನಡೆಯಲಿದೆ ಎಂದು ಅವರು ಪ್ರಕಟಿಸಿದರು. ಇದೇ ಅಕ್ಟೋಬರ್ 25ರಂದು ವೇಣೂರಿನಲ್ಲಿ “ಕರಾವಳಿ ಮಿಲನೋತ್ಸವ” ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೈನ ಸಮಾಜದ ಸಂಘಟನೆ ಮತ್ತು ಬಲವರ್ಧನೆಗಾಗಿ ಸದಸ್ಯತ್ವ ಅಭಿಯಾನ ಆರಂಭಿಸಿದ್ದು ಎಲ್ಲರೂ ಸಕ್ರಿಯ ಸಹಕಾರ ನೀಡಬೇಕೆಂದು ಅವರು ಕೋರಿದರು. ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ. ಪ್ರಮೋದ್ ಕುಮಾರ್ ಮಾತನಾಡಿ ಜೈನ್‌ಮಿಲನ್ ಸದಸ್ಯರು ಸಮಾಜಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಹಕರಿಸಬೇಕೆಂದು ಕೋರಿದರು. ಭಾರತೀಯ ಜೈನ್‌ಮಿಲನ್ ವಲಯ -8ರ ನಿರ್ದೇಶಕ ಬಿ. ಸೋಮಶೇಖರ ಶೆಟ್ಟಿ ಶುಭಾಶಂಸನೆ ಮಾಡಿ ಸ್ಥಳೀಯ ಜೈನ್‌ಮಿಲನ್‌ಗಳ ಮೂಲಕ ಆಯಾ ಊರಿನಲ್ಲಿ ಎಲ್ಲರೂ ಸ್ವಯಂಪ್ರೇರಿತರಾಗಿ ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸಬೇಕೆಂದು ಸಲಹೆ ನೀಡಿದರು. ಕಕ್ಕಿಂಜೆಯ ಪಾಕಶಾಸ್ತ್ರ ಪ್ರವೀಣರಾದ ಅಶೋಕ ಕುಮಾರ್ ಜೈನ್ ಅವರನ್ನು ಗೌರವಿಸಲಾಯಿತು. ಅರ್ಪಣಾ ರವೀಶ್ ವರದಿ ಸಾದರಪಡಿಸಿದರು. ಬೆಳ್ತಂಗಡಿ ಜೈನ್‌ಮಿಲನ್ ಅಧ್ಯಕ್ಷ ಡಾ. ಸನ್ಮತಿಕುಮಾರ್ ಸ್ವಾಗತಿಸಿದರು. ಎಸ್.ಡಿ.ಎಂ. ಪ್ರೌಢಶಾಲೆಯ ಶಿಕ್ಷಕ ರವೀಶ್ ಕುಮಾರ್ ಧನ್ಯವಾದವಿತ್ತರು. ಸಂಪತ್‌ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಸಾಮೂಹಿಕ ಪಂಚನಮಸ್ಕಾರ ಮಂತ್ರ ಪಠಣದೊಂದಿಗೆ ಕಾರ್ಯಕ್ರಮ ಆರಂಭಿಸಿ, ಕೊನೆಯಲ್ಲಿ ಶಾಂತಿಮಂತ್ರ ಪಠಣದೊಂದಿಗೆ ಸಮಾಪನಗೊಳಿಸಲಾಯಿತು.

ಜೈನ ಸಾಹಿತ್ಯ ಸಿರಿ ಕಾರ್ಯಕ್ರಮ

Article Image

ಜೈನ ಸಾಹಿತ್ಯ ಸಿರಿ ಕಾರ್ಯಕ್ರಮ

ಬೆಂಗಳೂರು, ಆ.9- ರಾಮಾಯಣ ಕಾವ್ಯ ಭಾರತೀಯರಿಗೆ ಮಹತ್ವದ ಸಾಹಿತ್ಯ ಪರಂಪರೆಯಾಗಿದ್ದು, ಜೈನರಾಮಾಯಣವು ವೈದಿಕ ರಾಮಾಯಣಕ್ಕಿಂತ ಭಿನ್ನವಾದ ದೃಷ್ಟಿಕೋನವನ್ನು ಹೊಂದಿದೆ ಎಂದು ಪ್ರೊ. ಜಿ. ಅಶ್ವತ್ಥನಾರಾಯಣ ಹೇಳಿದರು. ಜೈನ ಮಿಲನ್ ಸೆಂಟ್ರಲ್ ಬೆಂಗಳೂರು ಹಾಗೂ ಜಯನಗರದ ಶ್ರೀಚಕ್ರೇಶ್ವರಿ ಮಹಿಳಾ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದ ಜೈನ ಸಾಹಿತ್ಯ ಸಿರಿ ಕಾರ್ಯಕ್ರಮದಲ್ಲಿ ಪ್ರೊ. ಜೀವಂಧರಕುಮಾರ ಹೋತಪೇಟಿ ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿರುವ ಆಧ್ಯಾತ್ಮ ಯೋಗಿ ರಾಮ್‌ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಜೈನ ರಾಮಾಯಣಗಳಲ್ಲಿ ಪ್ರತಿನಾಯಕ ರಾವಣನನ್ನು ನೋಡುವ ವಿಭಿನ್ನ ದೃಷ್ಟಿಕೋನ ದೊರೆಯುತ್ತದೆ. ಶಾಸ್ತ್ರ ಮತ್ತು ಕಾವ್ಯವನ್ನು ಒಳಗೊಂಡಿರುವ ಆಧ್ಯಾತ್ಮಯೋಗಿ ರಾಮ ಕೃತಿಯ ಪುಟಪುಟಗಳಲ್ಲೂ ಜೈನಧರ್ಮದ ಶಾಸ್ತ್ರದ ತಿಳಿವಳಿಕೆ ಕಾಣಬಹುದು. ಮೂಲ ಕೃತಿಕಾರ ರವಿಶೇಷಣರು ರಚಿಸಿರುವ 18 ಸಾವಿರ ಶ್ಲೋಕಗಳ ಕೃತಿಯನ್ನು ಪ್ರೊ. ಜೀವಂಧರಕುಮಾರ ಹೋತಪೇಟೆ ಅಪೂರ್ವವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ ಎಂದು ಹೇಳಿದರು. ಪ್ರೊ. ಜೀವಂಧರಕುಮಾರ ಮಾತನಾಡಿ, ಪ್ರತಿಯೊಬ್ಬ ಮನುಷ್ಯನೂ ತನ್ನ ಭವಿಷ್ಯದ ರೂವಾರಿಯಾಗಿದ್ದು, ಮಾನವ ಆತ್ಮ ಪರಮಾತ್ಮನಾಗುವ ಸಾಧ್ಯತೆ ಹೊಂದಿದೆ. ಸಂಸಾರ ಬಂಧನದಿಂದ ಮುಕ್ತರಾಗಲು ಮನುಷ್ಯ ಪ್ರಯತ್ನಿಸಬೇಕು ಎಂದರು. ಅನಿತಾ ಸುರೇಂದ್ರ ಕುಮಾರ ಮಾತನಾಡಿ, ಜೈನ ಸಾಹಿತ್ಯ ಸಿರಿ ಮೂಲಕ ಜನಸಾಮಾನ್ಯರಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುತ್ತಿದೆ ಎಂದರು. ಡಾ. ನಲ್ಲೂರು ಪ್ರಸಾದ್‌, ಮಮತ ಕಾಂತರಾಜ್, ನಾಗಶ್ರೀ ಮುಪ್ಪಾನೆ, ಡಾ. ಪದ್ಮನಿ ನಾಗರಾಜು, ಬ್ರಾಹ್ಮಲ ಮದನಕುಮಾರ, ದೀಪಾಂಜಲಿ ಗೌರಾಜ್ ಉಪಸ್ಥಿತರಿದ್ದರು. ದಿಶಾ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು.

ಬೆಳ್ತಂಗಡಿ: ಅರ್ಜಿ ಆಹ್ವಾನ

Article Image

ಬೆಳ್ತಂಗಡಿ: ಅರ್ಜಿ ಆಹ್ವಾನ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜೈನ ಧರ್ಮಿಯ ವಿದ್ಯಾರ್ಥಿಗಳಿಗೆ ಕೆಲ್ಲಗುತ್ತು ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಮೆಮೋರಿಯಲ್ ಟ್ರಸ್ಟ್ (ರಿ) ಬೆಳ್ತಂಗಡಿ ಹಾಗೂ ಶ್ರಾವಕ/ ಶ್ರಾವಿಕೆಯರ ಸಹಕಾರದಿಂದ ವಿದ್ಯಾರ್ಥಿ ಪ್ರೋತ್ಸಾಹ ಧನವನ್ನು ಕಳೆದ ಹಲವಾರು ವರ್ಷಗಳಿಂದ ನೀಡುತ್ತಾ ಬರಲಾಗುತ್ತಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಉತ್ತೇಜನವನ್ನು ನೀಡಲಾಗುತ್ತಿದೆ. ಅದೇ ರೀತಿ 2026-27 ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಜೈನ ಧರ್ಮೀಯ ವಿದ್ಯಾರ್ಥಿಗಳನ್ನು 2026ರ ಸೆಪ್ಟೆಂಬರ್ 21ರಂದು ಶ್ರೀ ಕ್ಷೇತ್ರ ಹೊಂಬುಜ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಡಾ. ಶ್ರೀಮದ್ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ವಿದ್ಯಾರ್ಥಿ ಪ್ರೋತ್ಸಾಹ ಧನವನ್ನು ನೀಡಿ ಪ್ರೋತ್ಸಾಹಿಸಲಾಗುವುದು. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಗಿಂತ ಮೇಲ್ಪಟ್ಟು ಪಿಯುಸಿ, ಪದವಿ, ಐಟಿಐ, ಪಾಲಿಟೆಕ್ನಿಕ್, ಬಿಬಿಎಂ, ಇಂಜಿನಿಯರಿಂಗ್, ವೈದ್ಯಕೀಯ ಇನ್ನಿತರ ವ್ಯಾಸಂಗವನ್ನು ಮುಂದುವರಿಸುತ್ತಿರುವ ವಿದ್ಯಾರ್ಥಿಗಳು ಮಾತ್ರ ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರದ ಕಚೇರಿಯಲ್ಲಿ ಪಡೆದುಕೊಳ್ಳುವುದು ಮತ್ತು ಅರ್ಜಿಯೊಂದಿಗೆ ಪ್ರಸ್ತುತ ಕಲಿಯುತ್ತಿರುವ ಸಂಸ್ಥೆಯಿಂದ ವ್ಯಾಸಂಗ ಪ್ರಮಾಣ ಪತ್ರ ಹಾಗೂ ಕಳೆದ ವರ್ಷ ಕಲಿತು ಉತ್ತೀರ್ಣರಾದ ಬಗ್ಗೆ ಅಂಕಪಟ್ಟಿಯ ಯಥಾಪ್ರತಿ, ವಿದ್ಯಾರ್ಥಿಯ ಖಾಯಂ ವಿಳಾಸ, ವಿದ್ಯಾರ್ಥಿಯ ಆಧಾರ್ ಪ್ರತಿ, ಸಂಪರ್ಕ ಸಂಖ್ಯೆ, ತಂದೆ ಮತ್ತು ತಾಯಿಯ ಹೆಸರು ನಮೂದಿಸಿ ಅವರಿಬ್ಬರಲ್ಲಿ ಒಬ್ಬರ ಸಹಿಯನ್ನು ಕಡ್ಡಾಯವಾಗಿ ಮಾಡಿ ಆಗಸ್ಟ್ 31ರ ಒಳಗೆ ಕೆ. ಜಯವರ್ಮರಾಜ ಬಳ್ಳಾಲ್, ಮ್ಯಾನೇಜಿಂಗ್ ಟ್ರಸ್ಟಿ, ಕೆಲಗುತ್ತು ಸಬ್ರಬ್ಯೆಲು ದಿ. ಕಿನ್ಯಮ್ಮ ಯಾನೆ ಗುಣವತಿಯಮ್ಮ ಮೆಮೋರಿಯಲ್ ಟ್ರಸ್ಟ್ ,(ರಿ), ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರ, ಜೈನ್ ಪೇಟೆ, ಬೆಳ್ತಂಗಡಿ-574214 ದಕ್ಷಿಣ ಕನ್ನಡ ಈ ವಿಳಾಸಕ್ಕೆ ತಲುಪುವಂತೆ ಕಳುಹಿಸತಕ್ಕದ್ದು. ಅದೇ ರೀತಿ ಉಭಯ ಜಿಲ್ಲೆಗಳಲ್ಲಿ ಕ್ಯಾನ್ಸರ್, ಕಿಡ್ನಿ, ಹೃದಯ ಸಂಬಂಧಿ ಇನ್ನಿತರ ತೀವ್ರತರದ ಕಾಯಿಲೆಗಳಿಂದ ಬಳಲುತ್ತಿರುವ ಸಮಾಜದ ಅರ್ಹ ಬಂಧುಗಳು ಕೂಡ ಈ ಬಗ್ಗೆ ಈ ಮೇಲಿನ ವಿಳಾಸದಾರರನ್ನು ಸಂಪರ್ಕಿಸಿದಲ್ಲಿ ಪರಿಶೀಲಿಸಿ ಅಗತ್ಯ ನೆರವು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9448180439 ಈ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಮ್ಯಾನೇಜಿಂಗ್ ಟ್ರಸ್ಟಿ ಕೆ. ಜಯವರ್ಮರಾಜ ಬಳ್ಳಾಲ್ ರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

ಸಂಪತ್ತು ಶ್ರಾವಣ ಶುಕ್ರವಾರ ವಿಶೇಷ ಪೂಜೆ

Article Image

ಸಂಪತ್ತು ಶ್ರಾವಣ ಶುಕ್ರವಾರ ವಿಶೇಷ ಪೂಜೆ

ನಾರಾವಿ ಮಾಗಣೆ ಭ| 1008 ಶ್ರೀ ಧರ್ಮನಾಥ ಸ್ವಾಮಿ ಸನ್ನಿಧಿಯಲ್ಲಿ ಕಾರ್ಕಳ ಶ್ರೀ ಜೈನಮಠದ ಪೂಜ್ಯ ರಾಜಗುರು, ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಗಳವರ ಶುಭಾಶೀರ್ವಾದಗಳೊಂದಿಗೆ ಶ್ರಾವಣ (ಸೋಣ) ತಿಂಗಳ ಸಂಪತ್ತು ಶ್ರಾವಣ ಶುಕ್ರವಾರದ ವಿಶೇಷ ಪೂಜೆಯು ದಿನಾಂಕ 21/08/2026 ರಿಂದ 11/09/2026 ರ ಪರ್ಯಂತ ಜರಗಲಿರುವುದು. ವಿ.ಸೂ: ಶ್ರಾವಣ ಶುಕ್ರವಾರದಂದು ಪ್ರತಿ ದಿನ ಬೆಳಗ್ಗೆ ಗಂಟೆ 9-00ರಿಂದ ಧಾರ್ಮಿಕ ಪೂಜಾ ಕಾರ್ಯಕ್ರಮ ಮತ್ತು ಮಹಾಮಾತೆ ಶ್ರೀ ಪದ್ಮಾವತೀ ಅಮ್ಮನವರ ಸಹಸ್ರನಾಮ ಕುಂಕುಮಾರ್ಚನೆ ನಡೆಯಲಿರುವುದು. ಕುಂಕುಮಾರ್ಚನೆ ಮಾಡಲು ಇಚ್ಛೆ ಉಳ್ಳವರು 10 ನಿಮಿಷ ಮುಂಚಿತವಾಗಿ ಬರುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ: ಶ್ರೀ ಶಾಂತಿರಾಜ ಮುದ್ಯ, ವ್ಯವಸ್ಥಾಪಕರು ಮೊ: 9902469108, ಶ್ರೀ ಹರ್ಷಿತ್ ಇಂದ್ರ, ಪುರೋಹಿತರು ಮೊ: 9901630039

ಚಾತುರ್ಮಾಸ ಮಂಗಳ ಕಳಸ ಸ್ಥಾಪನೆ

Article Image

ಚಾತುರ್ಮಾಸ ಮಂಗಳ ಕಳಸ ಸ್ಥಾಪನೆ

ಸಾಲಿಗ್ರಾಮ: ಪ. ಪೂಜ್ಯ ಸಂತಶಿರೋಮಣಿ ಆಚಾರ್ಯಶ್ರೀ 108 ವಿದ್ಯಾಸಾಗರಜೀ ಮಹಾರಾಜರ ಶಿಷ್ಯರಾದ ಹಾಗೂ ನೂತನ ಪ. ಪೂಜ್ಯ ಆಚಾರ್ಯ ಶ್ರೀ 108 ಸಮಯ ಸಾಗರಜೀ ಮಹಾರಾಜರ ಅಜ್ಞಾನುವರ್ತಿ ಶಿಷ್ಯರಾದ ಪ. ಪೂಜ್ಯ ಮುನಿಶ್ರೀ 108 ಪಾಯಸಾಗರಜೀ ಮಹಾರಾಜರ ರವರ ಪಾವನ ವರ್ಷಾಯೋಗದ ಚಾತುರ್ಮಾಸ ಮಂಗಳ ಕಳಸ ಸ್ಥಾಪನೆ ಕಾರ್ಯಕ್ರಮವು ದಿನಾಂಕ 9/8/2026 ರಂದು ನಡೆಯಲಿರುವುದು. ವಿ.ಸೂ: ಪ್ರತಿ ದಿನ ತ್ಯಾಗಿ ನಿವಾಸದಲ್ಲಿ ಬೆಳಗ್ಗೆ 6:00 ಗಂಟೆಗೆ ಭಗವಂತರಿಗೆ ಅಭಿಷೇಕ ಮತ್ತು ಪೂಜೆ ಸಂಜೆ 05:45 ಗಂಟೆಗೆ ಭಕ್ತಿ. ಆರತಿ ಮತ್ತು ಪ್ರವಚನ ನೆರವೇರಲಿದೆ.

ವಿಶ್ವ ಸ್ತನ್ಯಪಾನ ಸಪ್ತಾಹ 2026

Article Image

ವಿಶ್ವ ಸ್ತನ್ಯಪಾನ ಸಪ್ತಾಹ 2026

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸ್ತನ್ಯಪಾನದ ಮಹತ್ವ: ಎಸ್‌ಡಿಎಂನ “ಮಾತೃಸ್ಪರ್ಶ” ಮಾದರಿ ಪ್ರತಿ ವರ್ಷ ಆಗಸ್ಟ್ 1 ರಿಂದ 7ರವರೆಗೆ ವಿಶ್ವದಾದ್ಯಂತ ವಿಶ್ವ ಸ್ತನ್ಯಪಾನ ಸಪ್ತಾಹ (World Breastfeeding Week) ಆಚರಿಸಲಾಗುತ್ತದೆ. ಈ ಆಚರಣೆಯ ಉದ್ದೇಶ ತಾಯಿಯ ಹಾಲಿನ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ತಾಯಂದಿರಿಗೆ ಬೆಂಬಲ ನೀಡುವುದು ಹಾಗೂ ಪ್ರತಿಯೊಂದು ಮಗುವಿಗೂ ಜೀವನದ ಅತ್ಯುತ್ತಮ ಆರಂಭವನ್ನು ಕಲ್ಪಿಸುವುದಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಯುನಿಸೆಫ್ (UNICEF) ಜನನದ ಮೊದಲ ಒಂದು ಗಂಟೆಯೊಳಗೆ ಸ್ತನ್ಯಪಾನ ಆರಂಭಿಸಲು, ಮೊದಲ ಆರು ತಿಂಗಳು ಮಗುವಿಗೆ ಕೇವಲ ತಾಯಿಯ ಹಾಲನ್ನೇ ನೀಡಲು ಹಾಗೂ ನಂತರ ಸೂಕ್ತ ಪೂರಕ ಆಹಾರದೊಂದಿಗೆ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಸ್ತನ್ಯಪಾನ ಮುಂದುವರಿಸಲು ಶಿಫಾರಸು ಮಾಡಿವೆ. ತಾಯಿಯ ಹಾಲು ಮಗುವಿನ ಮೊದಲ ಲಸಿಕೆ ಎಂಬುದು ವೈದ್ಯಕೀಯವಾಗಿ ಸಾಬೀತಾಗಿದೆ. ಇದು ಮಗುವಿಗೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಒದಗಿಸುವುದರ ಜೊತೆಗೆ ಸೋಂಕುಗಳಿಂದ ರಕ್ಷಿಸುತ್ತದೆ, ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗಿದೆ ಮತ್ತು ಭವಿಷ್ಯದಲ್ಲಿ ಮಧುಮೇಹ, ಸ್ಥೂಲಕಾಯ ಹಾಗೂ ಹಲವು ದೀರ್ಘಕಾಲೀನ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಅದೇ ರೀತಿ ತಾಯಂದಿರಲ್ಲಿ ಹೆರಿಗೆಯ ನಂತರದ ರಕ್ತಸ್ರಾವ ಕಡಿಮೆಯಾಗಲು, ಗರ್ಭಾಶಯ ಶೀಘ್ರವಾಗಿ ತನ್ನ ಸಹಜ ಸ್ಥಿತಿಗೆ ಮರಳಲು ಹಾಗೂ ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್‌ನ ಅಪಾಯ ಕಡಿಮೆಯಾಗಲು ಸಹಕಾರಿಯಾಗಿದೆ. ಇಂದಿನ ಸಮಾಜದಲ್ಲಿ ಉದ್ಯೋಗ, ಕುಟುಂಬದ ಬದಲಾದ ಜೀವನಶೈಲಿ, ತಪ್ಪು ಕಲ್ಪನೆಗಳು, ಸರಿಯಾದ ಮಾರ್ಗದರ್ಶನದ ಕೊರತೆ ಹಾಗೂ ಹೆರಿಗೆಯ ನಂತರ ಸಮರ್ಪಕ ಸಮಾಲೋಚನೆಯ ಅಭಾವದಿಂದ ಅನೇಕ ತಾಯಂದಿರು ಸ್ತನ್ಯಪಾನದಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದಾರೆ. ವಿಶೇಷವಾಗಿ ಮೊದಲ ಬಾರಿ ತಾಯಿಯಾಗುವ ಮಹಿಳೆಯರಿಗೆ ಮಗುವನ್ನು ಸರಿಯಾಗಿ ಹಾಲುಣಿಸಲು ಹಿಡಿಯುವುದು (Latching), ಮಗುವಿಗೆ ಸಾಕಷ್ಟು ಹಾಲು ಸಾಕಾಗುತ್ತಿಲ್ಲ ಎಂಬ ಆತಂಕ, ಸ್ತನದ ತೊಟ್ಟುಗಳ ನೋವಿನ ಸಮಸ್ಯೆ ಹಾಗೂ ಅವಧಿಪೂರ್ವ ಶಿಶುಗಳಿಗೆ ಹಾಲುಣಿಸುವ ತೊಂದರೆಗಳು ಸಾಮಾನ್ಯವಾಗಿವೆ. ಈ ಸವಾಲುಗಳನ್ನು ಮನಗಂಡು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಧಾರವಾಡದಲ್ಲಿ “ಮಾತೃಸ್ಪರ್ಶ” (Maatru Sparsha) – Breastfeeding Support and Latching Counselling Unit ಎಂಬ ವಿನೂತನ ಸೇವೆಯನ್ನು ಪ್ರಾರಂಭಿಸಲಾಗಿದೆ. ಈ ಘಟಕವು ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ, ಮಕ್ಕಳ ವಿಭಾಗ ಹಾಗೂ ಎಸ್.ಡಿ.ಎಂ. ನರ್ಸಿಂಗ್ ವಿಜ್ಞಾನಗಳ ಸಂಸ್ಥೆಯ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತಾಯಂದಿರಿಗೆ ವೈಜ್ಞಾನಿಕ ಹಾಗೂ ಪ್ರಾಯೋಗಿಕ ಸ್ತನ್ಯಪಾನ ಮಾರ್ಗದರ್ಶನವನ್ನು ಉಚಿತವಾಗಿ ಒದಗಿಸುತ್ತಿದೆ. “ಮಾತೃಸ್ಪರ್ಶ” ಘಟಕದ ಪ್ರಮುಖ ಸೇವೆಗಳು: 1. ಹೆರಿಗೆಯ ನಂತರ ಮೊದಲ ಗಂಟೆಯಲ್ಲಿಯೇ ಸ್ತನ್ಯಪಾನ ಆರಂಭಿಸಲು ನೆರವು. 2. ಸರಿಯಾದ ಲ್ಯಾಚಿಂಗ್ (Latch) ಮತ್ತು ಸ್ತನ್ಯಪಾನ ಭಂಗಿಗಳ ಪ್ರದರ್ಶನ. 3. ಮೊದಲ ಬಾರಿಗೆ ತಾಯಿಯಾದ ಮಹಿಳೆಯರಿಗೆ ವೈಯಕ್ತಿಕ ಸಮಾಲೋಚನೆ. 4. ಕಡಿಮೆ ತೂಕದ ಹಾಗೂ ಅವಧಿಪೂರ್ವ ಶಿಶುಗಳ ತಾಯಂದಿರಿಗೆ ವಿಶೇಷ ಮಾರ್ಗದರ್ಶನ. 5. ಹಾಲಿನ ಕೊರತೆ, ಸ್ತನದ ಉಬ್ಬರ, ತೊಟ್ಟು ನೋವು ಮುಂತಾದ ಸಮಸ್ಯೆಗಳ ನಿರ್ವಹಣೆ. 6. ಕುಟುಂಬ ಸದಸ್ಯರಿಗೆ ಸ್ತನ್ಯಪಾನದ ಬಗ್ಗೆ ಅರಿವು ಮತ್ತು ಬೆಂಬಲದ ಮಹತ್ವ ತಿಳಿಸುವುದು. 7. ಮಗುವಿನ ಬೆಳವಣಿಗೆಯನ್ನು ಅನುಸರಿಸಿ ನಿರಂತರ ಸಲಹೆ ಮತ್ತು ಫಾಲೋ-ಅಪ್ ಸೇವೆ. ವಿಶೇಷವಾಗಿ ಸೀಳು ತುಟಿ ಮತ್ತು ಸೀಳು ಅಂಗುಳ (Cleft Lip and Palate) ಹೊಂದಿರುವ ಮಕ್ಕಳ ತಾಯಂದಿರಿಗೂ ವಿಶೇಷ ಸ್ತನ್ಯಪಾನ ಮಾರ್ಗದರ್ಶನವನ್ನು ಈ ಘಟಕದ ಮೂಲಕ ನೀಡಲಾಗುತ್ತಿದ್ದು, ಬಹುಶಿಸ್ತೀಯ (Multidisciplinary) ಆರೋಗ್ಯ ಸೇವೆಯ ಉತ್ತಮ ಮಾದರಿಯಾಗಿ ಇದು ಬೆಳೆಯುತ್ತಿದೆ. “ಮಾತೃಸ್ಪರ್ಶ” ಘಟಕದ ಮೂಲಕ ಇದುವರೆಗೆ ಅನೇಕ ತಾಯಂದಿರು ಆತ್ಮವಿಶ್ವಾಸದಿಂದ ಮಗುವಿಗೆ ಯಶಸ್ವಿಯಾಗಿ ಸ್ತನ್ಯಪಾನ ಮಾಡುತ್ತಿದ್ದು, ಆಸ್ಪತ್ರೆಯಲ್ಲಿ ಜನಿಸಿದ ಶಿಶುಗಳಲ್ಲಿ ಆರಂಭಿಕ ಸ್ತನ್ಯಪಾನದ ಪ್ರಮಾಣವನ್ನು ಹೆಚ್ಚಿಸಲು ಈ ಸೇವೆ ಮಹತ್ವದ ಪಾತ್ರ ವಹಿಸಿದೆ. ವೈದ್ಯರು, ಶುಶ್ರೂಷಕರು ಹಾಗೂ ಸ್ತನ್ಯಪಾನ ಸಲಹೆಗಾರರು ಒಗ್ಗೂಡಿ ಕಾರ್ಯನಿರ್ವಹಿಸುವ ಈ ಮಾದರಿ ತಾಯಿ ಮತ್ತು ಮಗುವಿನ ಆರೋಗ್ಯ ಸುಧಾರಣೆಗೆ ಹೊಸ ದಾರಿಯನ್ನು ತೆರೆದಿದೆ. ಸ್ತನ್ಯಪಾನವು ಕೇವಲ ತಾಯಿ ಮತ್ತು ಮಗುವಿನ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವುದಷ್ಟೇ ಅಲ್ಲ, ಕುಟುಂಬದ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ. ಪರಿಸರ ಸ್ನೇಹಿಯಾಗಿದೆ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿಯಾಗಿದೆ. ಆದ್ದರಿಂದ ಪ್ರತಿಯೊಬ್ಬ ತಾಯಿ, ಕುಟುಂಬ ಹಾಗೂ ಸಮಾಜ ಸ್ತನ್ಯಪಾನವನ್ನು ಬೆಂಬಲಿಸುವುದು ಕಾಲದ ಅಗತ್ಯವಾಗಿದೆ. ವಿಶ್ವ ಸ್ತನ್ಯಪಾನ ಸಪ್ತಾಹದ ಸಂದರ್ಭದಲ್ಲಿ, ಪ್ರತಿಯೊಬ್ಬ ಆರೋಗ್ಯ ವೃತ್ತಿಪರರು, ಕುಟುಂಬ ಸದಸ್ಯರು ಹಾಗೂ ಸಮಾಜದ ಎಲ್ಲರೂ “ಪ್ರತಿ ಮಗುವಿಗೂ ತಾಯಿಯ ಹಾಲು – ಪ್ರತಿಯೊಂದು ತಾಯಿಗೂ ನಮ್ಮ ಬೆಂಬಲ” ಎಂಬ ಸಂಕಲ್ಪದೊಂದಿಗೆ ಮುಂದೆ ಬರಬೇಕಾಗಿದೆ. ಆರೋಗ್ಯವಂತ ತಾಯಿ, ಆರೋಗ್ಯವಂತ ಮಗು ಮತ್ತು ಆರೋಗ್ಯವಂತ ರಾಷ್ಟ್ರ ನಿರ್ಮಾಣದತ್ತ “ಮಾತೃಸ್ಪರ್ಶ”ದಂತಹ ಉಪಕ್ರಮಗಳು ದೇಶದಾದ್ಯಂತ ವಿಸ್ತರಿಸಲಿ. ಡಾ. ರಂಗಪ್ಪ ಎಸ್. ಅಶಿ ಪ್ರಾಧ್ಯಾಪಕರು ಹಾಗೂ ಉಪಪ್ರಾಂಶುಪಾಲರು ಎಸ್.ಡಿ.ಎಂ. ನರ್ಸಿಂಗ್ ವಿಜ್ಞಾನಗಳ ಸಂಸ್ಥೆ, ಎಸ್.ಡಿ.ಎಂ. ವಿಶ್ವವಿದ್ಯಾಲಯ, ಧಾರವಾಡ.

ಮಂಗಳೂರು: ಆಟಿಡೊಂಜಿ ದಿನ ಕಾರ್ಯಕ್ರಮ

Article Image

ಮಂಗಳೂರು: ಆಟಿಡೊಂಜಿ ದಿನ ಕಾರ್ಯಕ್ರಮ

ದಿನಾಂಕ 02.08.2026ರಂದು ವೀರರಾಣಿ ಅಬ್ಬಕ್ಕ ಜೈನ ಮಹಿಳಾ ಸಂಘ ಇದರ 'ಆಟಿಡೊಂಜಿ ದಿನ' ಅತ್ಯಂತ ಯಶಸ್ವಿಯಾಗಿ ಎಸ್‌.ಡಿ.ಎಂ.ಲಾ ಕಾಲೇಜು ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು, ಮಹಿಳಾ ಸಂಘದ ಅಧ್ಯಕ್ಷರಾದ ಸುಮನ ಪೂವಣಿ ವಹಿಸಿದ್ದರು. ಪ್ರಸನ್ನ ವಿನಯ ಕುಮಾರ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸದಸ್ಯೆಯರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸಂಘದ ಕಾರ್ಯದರ್ಶಿಗಳಾದ ಶಿಲ್ಪಾ ಸಂದೀಪ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು. ಸುಮಾರು 65ಕ್ಕೂ ಮಿಕ್ಕಿ ಖಾದ್ಯಗಳನ್ನು ಮಹಿಳೆಯರು ಮನೆಯಲ್ಲಿ ತಯಾರಿಸಿ ತಂದಿದ್ದರು.

ಮುಡಾರು: ವಿಶೇಷ ಪೂಜಾ ಕಾರ್ಯಕ್ರಮಗಳು

Article Image

ಮುಡಾರು: ವಿಶೇಷ ಪೂಜಾ ಕಾರ್ಯಕ್ರಮಗಳು

ಉಡುಪಿ ಜಿಲ್ಲೆ, ಕಾರ್ಕಳ ತಾಲೂಕಿನ, ಬಜಗೋಳಿ, ಮುಡಾರು ಅಪ್ಪಾಯಿ ಬಸದಿ ಶ್ರೀ ಅನಂತನಾಥ ಸ್ವಾಮಿ ಹಾಗೂ ಶ್ರೀ ಪದ್ಮಾವತೀ ದೇವೀ ಸನ್ನಿಧಿಯಲ್ಲಿ ಶ್ರಾವಣ ಸಿಂಹ (ಸೋಣ) ಮಾಸದ ಪ್ರತಿ ಶುಕ್ರವಾರ ವಿಶೇಷ ಪೂಜೆ, ಸಾಮೂಹಿಕ ಅನಂತನೋಂಪಿ ವಿಧಾನ ಮತ್ತು ನವರಾತ್ರಿಯ ಶುಭದಿನಗಳಂದು ವಿಶೇಷ ಪೂಜಾ ಕಾರ್ಯಕ್ರಮಗಳು ಕಾರ್ಕಳ ಶ್ರೀ ಜೈನಮಠದ ಪರಮ ಪೂಜ್ಯ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ನೇತೃತ್ವ ಹಾಗೂ ಪಾವನ ಸಾನಿಧ್ಯದಲ್ಲಿ ಆ. 21ರಿಂದ ಸೆ. 11ರವರೆಗೆ ನೆರವೇರಲಿರುವುದು. ದಿನಾಂಕ 24-09-2026 ರಿಂದ ದಿನಾಂಕ 26-09-2026ರ ತನಕ ಶ್ರೀ ಅನಂತನೋಂಪಿ ವಿಧಾನ ನಡೆಯಲಿದೆ.

First Previous

Showing 1 of 23 pages

Next Last