Wed, May 14, 2025

Wed, May 14, 2025

ವೈದ್ಯರಿಂದ ಸಮಾಲೋಚನೆ ಹಾಗೂ ಉಚಿತ ಶಿಬಿರ

Article Image

ವೈದ್ಯರಿಂದ ಸಮಾಲೋಚನೆ ಹಾಗೂ ಉಚಿತ ಶಿಬಿರ

ತುಮಕೂರು: ಚಿಕ್ಕಪೇಟೆಯ ಶ್ರೀ ದಿಗಂಬರ ಜೈನ ಶ್ರೀ ಪಾರ್ಶ್ವನಾಥ ಸ್ವಾಮಿ ಜಿನ ಮಂದಿರ ಹೃದಯ ಸಂಬಂಧಿತ ರೋಗದ ಬಗ್ಗೆ ವೈದ್ಯರಿಂದ ಸಮಾಲೋಚನೆ ಹಾಗೂ ಉಚಿತ ಶಿಬಿರವು 27.04.2025ನೇ ಭಾನುವಾರ ಜೈನ ಭವನದಲ್ಲಿ ಯಶಸ್ವಿಯಾಗಿ ನಡೆಯಿತು. ಟಸ್ಟ್ ವೆಲ್ ಹಾಸ್ಪಿಟಲ್ ವತಿಯಿಂದ ಡಾಕ್ಟರ್ ಅಮಿತ್ ಕುಮಾರ್ ಎಂ. ಒಸ್ವಾಲ್ ರವರು ಯುವಕರಲ್ಲಿ ಹೆಚ್ಚುತ್ತಿರುವ ಹೃದಯ ಕಾಯಿಲೆಯ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಮುನ್ನೆಚ್ಚರಿಕೆಯನ್ನು ನೀಡಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಉಚಿತವಾಗಿ ಮಧುಮೇಹ,ರಕ್ತದೊತ್ತಡ, ಹಾಗೂ ಇಸಿಜಿ ಪರೀಕ್ಷೆಗಳನ್ನು ಮಾಡಲಾಯಿತು. ಉಚಿತ ವೈದ್ಯಕೀಯ ಶಿಬಿರವನ್ನು ಮಾಡಿಕೊಟ್ಟ ಟ್ರಸ್ಟ್ ಆಸ್ಪತ್ರೆಯ ಡಾ. ಅಮಿತ್ ಕುಮಾರ್ ಎಂ ಒಸ್ಪಾಲ್ ರವರು ಮತ್ತು ಅವರ ತಂಡಕ್ಕೆ ಜೈನ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.

ತುಮಕೂರು: ವೈಭವದ ಭಗವಾನ್ ಶ್ರೀ ಮಹಾವೀರ ತೀರ್ಥಂಕರ ಜಯಂತಿ ಆಚರಣೆ

Article Image

ತುಮಕೂರು: ವೈಭವದ ಭಗವಾನ್ ಶ್ರೀ ಮಹಾವೀರ ತೀರ್ಥಂಕರ ಜಯಂತಿ ಆಚರಣೆ

ಶಾಂತಿ ಮತ್ತು ಅಹಿಂಸೆಯ ಪ್ರತಿಪಾದಕ ಭಗವಾನ್ ಮಹಾವೀರರ 2624 ನೆಯ ಜನ್ಮ ಜಯಂತಿಯನ್ನು ತುಮಕೂರು ದಿಗಂಬರ ಜೈನ ಶ್ರೀ ಪಾರ್ಶ್ವನಾಥ ಜಿನ ಮಂದಿರ ಸಮಿತಿಯ ವತಿಯಿಂದ ವೈಭವದಿಂದ ಆಚರಿಸಲಾಯಿತು. ಶ್ರೀ ಕ್ಷೇತ್ರ ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಲಕ್ಷ್ಮಿ ಸೇನಾ ಭಟ್ಟಾರಕ ಮಹಾಸ್ವಾಮೀಜಿಗಳವರ ಮಾರ್ಗದರ್ಶನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪೂಜೆ, ಅಭಿಷೇಕ, ಆರಾಧನೆಗಳು ನಡೆದವು. ನಂತರ ನಗರದ ಚಿಕ್ಕಪೇಟೆಯ ಶ್ರೀ ಪಾರ್ಶ್ವನಾಥ ಜಿನ ಮಂದಿರದ ತ್ರಿಲೋಕ್ ಭವನದಿಂದ ಮೆರವಣಿಗೆ ಸಾಗಿದ ಭಕ್ತರು, ಗ್ರಾಮ ದೇವತೆ ವೃತ್ತ, ಚಿಕ್ಕಪೇಟೆ ವೃತ್ತ, ಚಿಕ್ಕಪೇಟೆಯ ಮುಖ್ಯರಸ್ತೆ, ಕೋಟೆ ಆಂಜನೇಯ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ, ಎಂ.ಜಿ. ರಸ್ತೆ, ಬಿ.ಎಚ್. ರಸ್ತೆಯ ಮೂಲಕ ಸಾಗಿ ಜೈನ ಭವನದಲ್ಲಿ ಸಮಾವೇಶಗೊಂಡರು. ತುಮಕೂರು ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಸಭೆಯನ್ನ ಉದ್ದೇಶಿಸಿ ಮಾತನಾಡಿ ಭಗವಾನ್ ಶ್ರೀ ಮಹಾವೀರರ ತತ್ವ ಆದರ್ಶಗಳನ್ನ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಶಾಂತಿ, ಅಹಿಂಸೆಗೆ ಸಹಕರಿಸಬೇಕೆಂದರು. ಸವಿತಾ, ಸುಭೋದ್ ಕುಮಾರ್ ಜೈನ್ ಇಂದ್ರ ಇಂದ್ರಾಣಿಯರಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮಹಾವೀರ ಜಯಂತಿ ಅಂಗವಾಗಿ ನಗರದ ಸುರೇಶ್ ಬಾಂಡ್ ಟೀ ವತಿಯಿಂದ ಹಾಗೂ ಜೈನ ಸಮಾಜದ ವತಿಯಿಂದ ಜಿಲ್ಲಾ ಆಸ್ಪತ್ರೆ ರೋಗಿಗಳಿಗೆ ಹಣ್ಣು- ಹಂಪಲುಗಳನ್ನು ವಿತರಿಸಲಾಯಿತು. ಪಿ.ಯು.ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಶ್ರೀ ಪಾರ್ಶ್ವನಾಥ ಜಿನಮಂದಿರ ಸಮಿತಿಯ ಅಧ್ಯಕ್ಷ ಟಿ. ಡಿ. ಬಾಹುಬಲಿ ಬಾಬು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಮಂದರಗಿರಿ ಯಾತ್ರಾ ಸಂಘದ ಅಧ್ಯಕ್ಷ ಕೆ.ಪಿ. ವೀರೇಂದ್ರ, ಡೈರಿ ರಾಜೇಂದ್ರ ಪ್ರಸಾದ್, ಟಿ.ಜೆ. ನಾಗರಾಜ್, ಎ. ಆರ್. ಬ್ರಹ್ಮಪ್ರಕಾಶ್, ಜ್ವಾಲಾಮಾಲಿನಿ, (ಎಂ.ಎಲ್.ಎ. ಮಾಲಮ್ಮ)ಮಂಜುಳಾ ಚಂದ್ರಪ್ರಭ, ಎಸ್‌.ವಿ. ಜಿನೇಶ್, ಬಿ .ಎಸ್ ಪಾರ್ಶ್ವನಾಥ, ವಿನಯ್ ಸೇರಿದ್ದಂತೆ ಶ್ರೀ ಪಾರ್ಶ್ವನಾಥ ಜಿನ ಮಂದಿರ ಸಮಿತಿಯ ಸದಸ್ಯರುಗಳು, ವಿವಿಧ ಜೈನ ಸಂಘಟನೆಗಳ ಪದಾಧಿಕಾರಿಗಳು, ಜೈನ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ಶ್ರಾವಕ-ಶ್ರಾವಕಿಯರು ಭಾಗವಹಿಸಿದ್ದರು. ಜೆ. ರoಗನಾಥ - ತುಮಕೂರು.

ತುಮಕೂರು: ಉಚಿತ ಬೇಸಿಗೆ ಶಿಬಿರ

Article Image

ತುಮಕೂರು: ಉಚಿತ ಬೇಸಿಗೆ ಶಿಬಿರ

ತುಮಕೂರು: ಇಲ್ಲಿಯ ಶ್ರೀ ಪದ್ಮಾಂಬ ಜೈನ ಮಹಿಳಾ ಸಮಾಜವು ಹಲವಾರು ವರ್ಷಗಳಿಂದ ಬೇಸಿಗೆ ಶಿಬಿರ ಏರ್ಪಡಿಸುತ್ತಿದ್ದು, ಈ ವರ್ಷವು ಸಹ ಉಚಿತ ಬೇಸಿಗೆ ಶಿಬಿರ ಆಯೋಜಿಸಿರುತ್ತಾರೆ ರಜಾ ದಿನಗಳಲ್ಲಿ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡುವ ಸದುದ್ದೇಶದಿಂದ ಈ ಸಂಸ್ಕಾರ ಶಿಬಿರದಲ್ಲಿ ನಿರ್ಯಾಪಕ ಮುನಿಗಳಾದ ಪರಮ ಪೂಜ್ಯ 108 ನಿಯಮಸಾಗರ ಮಹಾರಾಜರಿಂದ ತರಬೇತಿ ಹೊಂದಿ, ಅನೇಕ ಧಾರ್ಮಿಕ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿರುವ ಬೆಳಗಾವಿಯ ಸಂಪನ್ಮೂಲ ವ್ಯಕ್ತಿ ಸುಮನ್‌ಪತ್ರಾವಳಿಯವರು 5 ದಿನಗಳ ಕಾಲ ಮಕ್ಕಳ ಜೊತೆಯಲ್ಲಿದ್ದು ಅವರುಗಳ ಶ್ರೇಯೋಭಿವೃದ್ಧಿಗೆ ತಮ್ಮ ಅಮೂಲ್ಯ ಸಮಯವನ್ನು ಮೀಸಲಿಡುವರು. ಇದರೊಂದಿಗೆ ಚಿತ್ರಕಲೆ, ಆಟೋಟ, ನಾಟಕ ವಿವಿಧ ಮನೋರಂಜನೆಯಿಂದಲೂ ಸಹ ಹಲವು ಸಂಪನ್ಮೂಲ ವ್ಯಕ್ತಿಗಳು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವರು. ಈ ವರ್ಷ ದಿನಾಂಕ: 11/04/2025 ರಿಂದ 20/04/2025ರ ವರೆಗೆ 10 ದಿನಗಳ ಶಿಬಿರದಲ್ಲಿ ಉಚಿತ ಊಟ, ವಸತಿ ಸೌಕರ್ಯ ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಕವಿತಾ ಅತ್ತಿಮಬ್ಬೆ ವಿದ್ಯಾಮಂದಿರ, ಚಿಕ್ಕಪೇಟೆ, ತುಮಕೂರು. ಮೊ. 8618408638

ಮೈಸೂರು: ಬೇಸಿಗೆ ಧಾರ್ಮಿಕ ಶಿಬಿರ

Article Image

ಮೈಸೂರು: ಬೇಸಿಗೆ ಧಾರ್ಮಿಕ ಶಿಬಿರ

ಮೈಸೂರು ಜಿಲ್ಲೆ, ಸರಗೂರು ತಾಲೂಕಿನ ಶ್ರೀಕ್ಷೇತ್ರ ಕನಕಗಿರಿ, ದಿಗಂಬರ ಜೈನ ಮಠದ ಪೀಠಾಧ್ಯಕ್ಷರಾದ ಪ.ಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಆಶೀರ್ವಾದ, ಪ್ರೇರಣೆ ಹಾಗೂ ಮಾರ್ಗದರ್ಶನದಲ್ಲಿ, ಭಾರತೀಯ ಜೈನ್ ಮಿಲನ್, ಮೈಸೂರು ವಿಭಾಗದ ನಿರ್ದೇಶಕರಾದ ಸರಗೂರಿನ ಎಸ್‌. ಎಸ್. ಸೋಮಪ್ರಭರವರು, ಅವರ ಸ್ವಗೃಹ "ಕನಕಾದ್ರಿ" ಯಲ್ಲಿ ಹಿಂದಿನ ವರ್ಷಗಳಂತೆ ಯಥಾಪ್ರಕಾರವಾಗಿ ಮಕ್ಕಳಿಗೆ ಬೇಸಿಗೆ ಧಾರ್ಮಿಕ ಶಿಬಿರವನ್ನು ಆಯೋಜಿಸಿದ್ದಾರೆ. ಬೇಸಿಗೆ ರಜೆಯ ಸಂದರ್ಭದಲ್ಲಿ ಮಕ್ಕಳು ಉತ್ತಮ ಸಂಸ್ಕಾರ ಪಡೆಯಲು ಈ ಧಾರ್ಮಿಕ ಶಿಬಿರ ಅತ್ಯಂತ ಉಪಯುಕ್ತವಾಗಿದೆ. ದಿ:01-04-2025 ರ ಮಂಗಳವಾರದಿಂದ 8.ದಿನಗಳ ಕಾಲ ಈ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ ಅನುಭವಿ ಹಾಗೂ ಪ್ರಬುದ್ಧ ವಿದ್ವಾಂಸರು, ಉಪನ್ಯಾಸಕರುಗಳು, ಪಂಡಿತರುಗಳಿಂದ ಮಕ್ಕಳ ಅಭಿರುಚಿಗೆ ತಕ್ಕಂತೆ, ಅತ್ಯಂತ ಸರಳವಾಗಿ ಹಾಗೂ ಆಕರ್ಷಣೀಯವಾಗಿ ಧಾರ್ಮಿಕ ಪಾಠ ಪ್ರವಚನಗಳ ಜೊತೆಗೆ ಮನರಂಜನಾತ್ಮಕ ಹಾಗೂ ಭಕ್ತಿರಸ ಪ್ರಧಾನವಾದ ಭಕಿಗೀತೆಗಳು, ರೂಪಕಗಳು, ಕಥೆಗಳು, ಇತ್ಯಾದಿ ಜ್ಞಾನವರ್ಧನೆಯ ಪೂರಕ ಅಂಶಗಳು ಸಂಪನ್ಮೂಲ ವ್ಯಕ್ತಿಗಳಿಂದ ಕಲಿಕೆಯಾಗಲಿದೆ. ಶಿಬಿರದ ಉದ್ಘಾಟನೆ ದಿ:: 01-04-2025ರ ಮಂಗಳವಾರ ಬೆಳಿಗ್ಗೆ 9-30 ಕ್ಕೆ ಶುಭಾಶೀರ್ವಾದ, ಮಾರ್ಗದರ್ಶನ: ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಶ್ರೀಕ್ಷೇತ್ರ ಕನಕಗಿರಿ. ಗೌರವ ಉಪಸ್ಥಿತಿ : ಶ್ರೀ ಬಾಹುಬಲಿ ಬಯ್ಯಾಜಿ ತ್ಯಾಗಿಗಳು/ಬಾಲ ಬ್ರಹ್ಮಚಾರಿಗಳು,ಆಚಾರ್ಯಶ್ರೀ 108 ವಿದ್ಯಾಸಾಗರ ಮಹಾರಾಜರ ಶಿಷ್ಯರು, 5ನೇ ಪ್ರತಿಮಾಧಾರಿಗಳು. ಮುಖ್ಯ ಅತಿಥಿಗಳು: ಶೀಲಾ ಅನಂತರಾಜ್,ಮೈಸೂರು. ಗೌರವ ಉಪಾಧ್ಯಕ್ಷರು, ಭಾರತೀಯ ಜೈನ್ ಮಿಲನ್, ಕರ್ನಾಟಕ ರಾಜ್ಯ. ಬ್ರಹ್ಮದೇವಯ್ಯ ಜೈನ ಸಮಾಜದ ಹಿರಿಯ ಮುಖಂಡರು ಸರಗೂರು. ಪ್ರಥಮ ದಿನದ ಬೆಳಗ್ಗೆ ಅವಧಿ: ಪಾಠ ಪ್ರವಚನಗಳ ಬೋಧನೆ: ಮೈಸೂರು ವಿಶ್ವವಿದ್ಯಾನಿಲಯದ ಜೈನ ಶಾಸ್ತ್ರ ಮತ್ತು ಪ್ರಾಕೃತ ವಿಭಾಗದ ಉಪನ್ಯಾಸಕರಾದ ಡಾ. ಅರುಣಾಪ್ರಕಾಶ್ ರವರು ನಡೆಸಿಕೊಡಲಿದ್ದಾರೆ. ಮಧ್ಯಾಹ್ನದ ಅವಧಿ: ಶ್ರೀ ಬಾಹುಬಲಿ ಬಯ್ಯಾಜಿ ರವರಿಂದ, 5.ನೇ ತರಗತಿಯಿಂದ ಪಿ.ಯೂ.ಸಿ ತನಕ ಓದುತ್ತಿರುವ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಬಹುದಾಗಿದೆ. ಶಿಬಿರ ಪ್ರತಿದಿನ ಬೆಳಿಗ್ಗೆ10-00 ಗಂಟೆಗೆ ಪ್ರಾರಂಭವಾಗಿ ಸಂಜೆ 4-00 ಗಂಟೆಗೆ ಮುಕ್ತಾಯವಾಗುತ್ತದೆ. ಮಕ್ಕಳಿಗೆ ಲೇಖನ ಸಾಮಗ್ರಿಗಳ ಜೊತೆಗೆ ಬಹುಮಾನಗಳನ್ನು ನೀಡಲಾಗುತ್ತದೆ. ಪಾಲಕರು/ಪೋಷಕರು ಮಕ್ಕಳನ್ನು ಬೆಳಿಗ್ಗೆ 9-30 ಗಂಟೆಗೆ ಶಿಬಿರಕ್ಕೆ ಕರೆತಂದು ಬಿಟ್ಟು, ಸಂಜೆ 4-00 ಗಂಟೆ ನಂತರ ಕರೆದುಕೊಂಡು ಹೋಗುವ ಜವಾಬ್ದಾರಿ ಅವರಿಗೆ ಸೇರಿರುತ್ತದೆ. ಶಿಬಿರದಲ್ಲಿ ಮಕ್ಕಳಿಗೆ ಬೆಳಿಗ್ಗೆ 11-00 ಗಂಟೆಗೆ ಕಾಫಿ/ ಟೀ/ ಬಿಸ್ಕತ್ತು, ಮಧ್ಯಾಹ್ನ ಊಟದ ವ್ಯವಸ್ಥೆ, ಸಂಜೆ ಸ್ನಾಕ್ಸ್ ವ್ಯವಸ್ಥೆ ಮಾಡಲಾಗಿದೆ. ಸರಗೂರು ಹಾಗೂ ಹೆಚ್.ಡಿ.ಕೋಟೆ ತಾ. ವ್ಯಾಪ್ತಿಯ ಗ್ರಾಮಾಂತರದ ಮಕ್ಕಳುಗಳು ಈ ಸದಾವಕಾಶವನ್ನು ಬಳಸಿಕೊಳ್ಳಬೇಕೆಂದು ಎಸ್‌. ಎಸ್. ಸೋಮಪ್ರಭರವರು ತಿಳಿಸಿರುತ್ತಾರೆ. .ರಜಾ-ಮಜಾ ಜೊತೆಗೆ ಉತ್ತಮ ಸಂಸ್ಕಾರ, ಜ್ಞಾನಾರ್ಜನೆಯ, ಸದಭಿರುಚಿಯ ಬಾಲ್ಯದ ಶಿಕ್ಷಣ ಮಕ್ಕಳ ಪ್ರತಿಭಾ ಅನಾವರಣಕ್ಕೆ ಪೂರಕವಾಗಲಿದೆ ಈ ಧಾರ್ಮಿಕ ಶಿಬಿರದಲ್ಲಿ ಭಾಗವಹಿಸಲು ಹಾಗೂ ಹೆಚ್ಚಿನ ಮಾಹಿತಿಗೆ ಈ ಕೆಳಕಂಡವರನ್ನು ಸಂಪರ್ಕಿಸಲು ಕೋರಿದೆ. ಎಸ್.ಎಸ್. ಸೋಮಪ್ರಭ, ಸರಗೂರು: ಮೊ: 94487 93649 ಸಿ.ಎಸ್. ನಾಗರಾಜು, ಚಕ್ಕೂರು: ಮೊ: 94489 58024 ಜಿ. ಬಿ.ಚಂದ್ರಪ್ರಕಾಶ್, ಗುಜ್ಜಪ್ಪನಹುಂಡಿ: ಮೊ: 99452 59709

ಬಂಟ್ವಾಳ: 33ನೇ ವರ್ಧಂತ್ಯುತ್ಸವ

Article Image

ಬಂಟ್ವಾಳ: 33ನೇ ವರ್ಧಂತ್ಯುತ್ಸವ

ಬಂಟ್ವಾಳ ತಾಲೂಕಿನ ಅತಿಶಯ ಶ್ರೀ ಕ್ಷೇತ್ರ ಅಜ್ಜಿಬೆಟ್ಟು ಬಸದಿ ಭಗವಾನ್ ಶ್ರೀ ಆದಿನಾಥ ತೀರ್ಥಂಕರರ ಜಿಂಬ ಪ್ರತಿಷ್ಠಾ ಮಹೋತ್ಸವದ 33ನೇ ವರ್ಧಂತ್ಯುತ್ಸವವು ಕಾರ್ಕಳ ಶ್ರೀ ಜೈನ ಮಠದ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ಪಾವನ ಸಾನಿಧ್ಯದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ 02-04-2025ನೇ ಬುಧವಾರ ಜರಗಲಿರುವುದು.

ಬೆಂಗಳೂರು: ಕರ್ನಾಟಕ ಜೈನ ಅಸೋಸಿಯೇಷನ್ ವತಿಯಿಂದ ನಡೆದ ಸಮಸ್ತ ಕರ್ನಾಟಕ ಜೈನ ಸಮುದಾಯ ಸಭೆ

Article Image

ಬೆಂಗಳೂರು: ಕರ್ನಾಟಕ ಜೈನ ಅಸೋಸಿಯೇಷನ್ ವತಿಯಿಂದ ನಡೆದ ಸಮಸ್ತ ಕರ್ನಾಟಕ ಜೈನ ಸಮುದಾಯ ಸಭೆ

ರಾಜ್ಯದಲ್ಲಿ ಜೈನ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರ್ಕಾರ ಬದ್ಧವಾಗಿದ್ದು ಶೀಘ್ರದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕರ್ನಾಟಕ ಅಲ್ಪಸಂಖ್ಯಾತರ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು. ಅವರಿಂದು ಇಲ್ಲಿನ ಕರ್ನಾಟಕ ಜೈನ ಅಸೋಸಿಯೇಷನ್ ವತಿಯಿಂದ ನಡೆದ ಸಮಸ್ತ ಕರ್ನಾಟಕ ಜೈನ ಸಮುದಾಯ ಸಭೆಯಲ್ಲಿ ಸಮುದಾಯದ ಪರವಾಗಿ ಮನವಿ ಪತ್ರ ಸ್ವೀಕರಿಸಿ ಮಾತನಾಡಿದರು. ರಾಜ್ಯದ 44 ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಗಳಲ್ಲಿ ಪ್ರತಿ ಜಿಲ್ಲೆಯಲ್ಲಿ ಒಂದು ಅಥವಾ ಜೈನ ಜನಸಂಖ್ಯೆಗೆ ಅನುಗುಣವಾಗಿ ಜೈನರಿಗೆ ಪ್ರತ್ಯೇಕ ವಿದ್ಯಾರ್ಥಿ ನಿಲಯ ಮೀಸಲಿಡಬೇಕು, ಇಲ್ಲಿಯವರೆಗೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಸ್ಥಾನ ಜೈನ ಸಮಾಜಕ್ಕೆ ಸಿಕ್ಕಿಲ್ಲ ನಿಗಮದಲ್ಲಿ ಜೈನ ನಿರ್ದೇಶಕರು ಆಗಿಲ್ಲ ಸರ್ಕಾರ ಜೈನ ಶಿಕ್ಷಣ ಸಂಸ್ಥೆಗಳಲ್ಲಿ ಮೊಟ್ಟೆ ಕೊಡುವ ನಿರ್ಧಾರ ಸರ್ಕಾರ ಹಿಂತೆಗೆದ್ದುಕೊಳ್ಳಬೇಕೆಂದು ಪತ್ರದಲ್ಲಿ ತಿಳಿಸಲಾಗಿದೆ ಎಂದರು. ಮಾಜಿ ಮುಖ್ಯಮಂತ್ರಿ ಹಾಗೂ ಅಥಣಿ ಕ್ಷೇತ್ರದ ಶಾಸಕ ಲಕ್ಷ್ಮಣ್ ಸವದಿ ಮಾತನಾಡಿ ವರೂರು ಶ್ರೀ ಕ್ಷೇತ್ರದ ಗುಣದರ ನoದಿ ಮಹಾರಾಜರು ಸರ್ಕಾರ ಮೂರು ಬೇಡಿಕೆಗಳ ಈಡೇರಿಕೆಗೆ ತಿಳಿಸಿದ್ದು , ಈ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಪ್ರತ್ಯೇಕ ಹಾಸ್ಟೆಲ್‌ಗಳನ್ನು ನಿರ್ಮಿಸಲು ತಿಳಿಸಿದ್ದು, ಈ ಕಾರ್ಯಕ್ಕೆ ಸಚಿವರು ಉತ್ಸುಕರಾಗಿದ್ದಾರೆ ಎಂದರು. ಬೇರೆ ಸರ್ಕಾರಗಳಿಂದ ಉತ್ತರ ಸಿಗುತ್ತಿತ್ತು ಆದರೆ ಕಾರ್ಯಗತವಾಗುತ್ತಿರಲಿಲ್ಲ ಆದರೆ ಸಚಿವರಾದ ಜಮೀರ್ ಅಹಮದ್ ರವರಿಂದ ಇಂದು ಕಾರ್ಯಾಗತವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಕೂಅಧಿವೇಶನಕ್ಕೆ ಮುನ್ನ ಒಂದು ಪ್ರಾಯೋಗಿಕ ಶಾಲೆ ಜೈನರಿಗಾಗಿ ನಿರ್ಮಿಸಲು ತಿಳಿಸಲಾಗಿತ್ತು ಆದರೆ ಪ್ರಾಯೋಗಿಕವಾಗಿ ಎರಡು ಶಾಲೆಗಳನ್ನು ಸರ್ಕಾರ ಮಂಜೂರು ಮಾಡಿದೆ ಎಂದರು. ಕರ್ನಾಟಕ ಜೈನ್ ಅಸೋಸಿಯೇಷನ್ ಅಧ್ಯಕ್ಷ ಎಸ್. ಜಿತೇಂದ್ರ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಕಂಬದಹಳ್ಳಿ ಜೈನಮಠದ ಸ್ವಸ್ತಿಶ್ರೀ ಬಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳವರು ಪಾವನ ಸಾನ್ನಿಧ್ಯ ಆಶೀರ್ವಚನ ನೀಡಿದರು. ಪುರೋಹಿತ ರತ್ನ ದಿವ್ಯ ಪಂಡಿತ್ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಯೋಜನಾ ಹಾಗೂ ಸಂಖ್ಯೆಕ ಸಚಿವರಾದ ಡಿ. ಸುಧಾಕರ್, ಮಾಜಿ ಸಚಿವ ವೀರ್ ಕುಮಾರ್ ಪಾಟೀಲ್, ಕರ್ನಾಟಕ ಜೈನ್ ಅಸೋಸಿಯೇಷನ್ ಪದಾಧಿಕಾರಿಗಳಾದ ರಾಜಕೀರ್ತಿ ಕಲಾ ಗೌಡ, ಶೀತಲ್ ಗೌಡ ಪಾಟೀಲ್, ಆಶಾ ಪ್ರಭು, ಡಾ ನೀರಜಾ ನಾಗೇಂದ್ರ ಕುಮಾರ್, ಧರಣಿಂದ್ರ ಕುಮಾರ್ ಪ್ರಶಾಂತ್, ಎಂ. ಎಂ. ಜಿನೇಂದ್ರ, ಶೀತಲ ಕುಮಾರ್, ಮಾಳ ಹರ್ಷೇಂದ್ರ ಜೈನ್, ವಿ ಜೇ. ಬ್ರಹ್ಮಯ್ಯ, ಪದ್ಮಶ್ರೀ, ಪದ್ಮಿನಿ, ಅಜಿತ್ ಕುಮಾರ್, ಮಹಾವೀರ್, ಸ್ವರೂಪ್, ಜಿನೇಂದ್ರ, ಅನಿಲ್ ಕುಮಾರ್, ಕೋಮಲ ಬ್ರಹ್ಮದೇವಯ್ಯ, ಪ್ರಕಾಶ್ ಜೆ. ಪಿ. ರಾಜೇಶ್, ಅಶೋಕ್ ಕುಮಾರ್ ಸೇರಿದoತೆ ಕರ್ನಾಟಕದ ವಿವಿಧ ಭಾಗಗಳಿಂದ ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಭಾಗವಹಿಸಿದ್ದರು. ಕರ್ನಾಟಕ ಜೈನ್ ಅಸೋಸಿಯೇಷನ್ ಸಹಕಾರ್ಯದರ್ಶಿ, ರತ್ನತ್ರಯ ಕ್ರಿಯೇಷನ್ ಡಾ. ನೀರಜಾ ನಾಗೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು .

ಪಂಚಾಮೃತ ಅಭಿಷೇಕ ಹಾಗೂ ಮಸ್ತಕಾಭಿಷೇಕ ಮತ್ತು ಮಹಾ ಶಾಂತಿಮಂತ್ರ ಪಠಣ

Article Image

ಪಂಚಾಮೃತ ಅಭಿಷೇಕ ಹಾಗೂ ಮಸ್ತಕಾಭಿಷೇಕ ಮತ್ತು ಮಹಾ ಶಾಂತಿಮಂತ್ರ ಪಠಣ

ಹುಕ್ಕೇರಿ ತಾಲೂಕಿನ ಶಿಂಧಿಹಟ್ಟಿಯಲ್ಲಿರುವ ಶ್ರೀ ಮದ್ದೇವಾಧಿದೇವ ಭ| ಶ್ರೀ ೧೦೦೮ ಮುನಿಸುವೃತನಾಥ ತೀರ್ಥಂಕರ ಜಿನಮಂದಿರದಲ್ಲಿ ಪಂಚಾಮೃತ ಅಭಿಷೇಕ ಹಾಗೂ ಮಸ್ತಕಾಭಿಷೇಕ ಮತ್ತು ಮಹಾ ಶಾಂತಿಮಂತ್ರ ಪಠಣ, ಶ್ರೀ ಜ್ವಾಲಮಾಲಿನಿ ದೇವಿ ಹಾಗೂ ಶ್ರೀ ಪದ್ಮಾವತಿ ದೇವಿಯವರ ಪೂಜಾ, ಶೃಂಗಾರ, ಉಡಿತುಂಬುವ ಕಾರ್ಯಕ್ರಮವು ಪ. ಪೂ. ಆಚಾರ್ಯ ಶ್ರೀ ೧೦೮ ಜಿನಸೇನ ಮಹಾರಾಜರು ಹಾಗೂ ಪ. ಪೂ. ೧೦೮ ಸಂಯಮ ಸಾಗರ ಮುನಿಮಹಾರಾಜರುಗಳ ಮಂಗಳ ಆಶೀರ್ವಾದಗಳೊಂದಿಗೆ ಮತ್ತು ನಾಂದಣಿ ಶ್ರೀ ಜೈನ ಮಠದ ಪ. ಪೂ. ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು, ಕೊಲ್ಹಾಪುರ ಶ್ರೀ ಜೈನ ಮಠದ ಪ. ಪೂ. ಸ್ವಸ್ತಿಶ್ರೀ ಲಕ್ಷ್ಮೀಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ದಿವ್ಯಸಾನ್ನಿಧ್ಯದಲ್ಲಿ ಮಾ. 29ರಂದು ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಮಂಡ್ಯ: ಮೂಲ ನಕ್ಷತ್ರ ಪೂಜಾ ಮಹೋತ್ಸವ

Article Image

ಮಂಡ್ಯ: ಮೂಲ ನಕ್ಷತ್ರ ಪೂಜಾ ಮಹೋತ್ಸವ

ಮಂಡ್ಯ: ಶ್ರೀ ಅತಿಶಯ ಕ್ಷೇತ್ರವಾದ ಶ್ರೀ ರಂಗಪಟ್ಟಣ ಕಾವೇರಿ ನದಿಯ ದ್ವೀಪದಲ್ಲಿರುವ ಭ| ಶ್ರೀ ೧೦೦೮ ಆದಿನಾಥ ತೀರ್ಥಂಕರರ ಬಸದಿಯಲ್ಲಿ ಶ್ರೀ ಮೂಲ ನಕ್ಷತ್ರ ಪೂಜಾ ಮಹೋತ್ಸವ, ಶ್ರೀ 1008 ವೃಷಭ ತೀರ್ಥಂಕರರಿಗೆ ಮಹಾಭಿಷೇಕ ಪೂಜೆ 8-30 ಗಂಟೆಗೆ ಹಾಗೂ ಧರಣೇಂದ್ರ ಪದ್ಮಾವತಿ ಅಮ್ಮನವರಿಗೆ ವಿಶೇಷ ಅಭಿಷೇಕ ಪೂಜೆ, ಲಕ್ಷ ಹೂವಿನ ಅಲಂಕಾರ ಪೂಜೆ ಮತ್ತು ಮಧ್ಯಾಹ್ನ 12-00 ಗಂಟೆಗೆ ಪಲ್ಲಕ್ಕಿ ಉತ್ಸವ ಹಾಗೂ ಮಹಾ ಮಂಗಳಾರತಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಮಾ. 22ರಂದು ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಬೆಂಗಳೂರಿನ ಯಲಹಂಕದಲ್ಲಿ ನೂತನ ಜೈನ್ ಮಿಲನ್ ಶಾಖೆ ಪ್ರಾರಂಭ

Article Image

ಬೆಂಗಳೂರಿನ ಯಲಹಂಕದಲ್ಲಿ ನೂತನ ಜೈನ್ ಮಿಲನ್ ಶಾಖೆ ಪ್ರಾರಂಭ

ಬೆಂಗಳೂರು ಭಾರತೀಯ ಜೈನ್ ಮಿಲನ್ ವಲಯ ಎಂಟರ ಅಡಿಯಲ್ಲಿ ನೂತನವಾಗಿ ಬೆಂಗಳೂರಿನ ಯಲಹಂಕದಲ್ಲಿ ಜೈನ್ ಮಿಲನ್ ಶಾಖೆ ಪ್ರಾರಂಭಿಸಲಾಗಿದೆ. ಯಲಹಂಕ ಜೈನ್ ಮಿಲನ್ ಶಾಖೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಂಬದಹಳ್ಳಿ ಜೈನಮಠದ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮಿಜಿಗಳವರು ಪಾವನ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಧ್ಯಕ್ಷರಾದ ಧರ್ಮಸ್ಥಳ ಸುರೇಂದ್ರ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಬ್ಬಕ್ಕ ರಾಣಿ ಪ್ರಶಸ್ತಿ ಪುರಸ್ಕೃತರು, ಬೆಂಗಳೂರು ತ್ಯಾಗಿ ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರು ಆದ ಅನಿತಾ ಸುರೇಂದ್ರ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಉಪಾಧ್ಯಕ್ಷರು, ರತ್ಮಾತ್ರಯ ಧಾರವಾಹಿಯ ನಿರ್ದೇಶಕರಾದ ಡಾ. ನೀರಜಾ ನಾಗೇಂದ್ರ ಕುಮಾರ್ ಉಪನ್ಯಾಸ ನೀಡಿದರು. ಪ್ರೇಮ ಸುಖಾನಂದ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು ಕಾರ್ಯಕ್ರಮದಲ್ಲಿ ಭಾರತೀಯ ಜೈನ್ ಮಿಲನ್ ವಲಯ 8 ರ ಪ್ರದೀಪ್, ಶ್ಯಾಮಲಾ ಪ್ರಸಾದ್, ವಿಲಾಸ್ ಪಾಸಣ್ಣನವರ್, ಪಿ.ಚರಣ್, ವೃಷಭರಾಜು, ರೇಷ್ಮಾ, ಚಂದ್ರನಾಥ ಟ್ರಸ್ಟ್ ಭೀಮಣ್ಣ ಕೋಟೆ, ಜೈನ್ ಮಿಲನ್ ವಲಯ 8 ರ ಜoಟಿ ಕಾರ್ಯದರ್ಶಿ ಸುಖಾನಂದ, ಇನ್ನಿತರರು ಭಾಗವಹಿಸಿದ್ದರು.

ಶ್ರೀ ಕ್ಷೇತ್ರ ದೇವಗಿರಿ: ಮಾನಸ್ತಂಭೋಪರಿ ಚತುರ್ಮುಖ ಜಿನಬಿಂಬದ ಪ್ರತಿಷ್ಠಾ ಮಹೋತ್ಸವ

Article Image

ಶ್ರೀ ಕ್ಷೇತ್ರ ದೇವಗಿರಿ: ಮಾನಸ್ತಂಭೋಪರಿ ಚತುರ್ಮುಖ ಜಿನಬಿಂಬದ ಪ್ರತಿಷ್ಠಾ ಮಹೋತ್ಸವ

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೊರನಾಡು ಚಿಕ್ಕನಕೊಡಿಗೆ ದೇವಗಿರಿ ಕ್ಷೇತ್ರದ ಭಗವಾನ್ ಶ್ರೀ ೧೦೦೮ ಪಾರ್ಶ್ವನಾಥ ತೀರ್ಥಂಕರರ ಮತ್ತು ಚತುರ್ವಿಂಶತಿ ತೀರ್ಥಂಕರರ ಭವ್ಯ ಸಮವಸರಣದ ಮುಂಭಾಗದಲ್ಲಿ ನೂತನ ಮಾನಸ್ತಂಭೋಪರಿ ಚತುರ್ಮುಖ ಜಿನಬಿಂಬದ ಪ್ರತಿಷ್ಠಾ ಮಹೋತ್ಸವವು ಕಾರ್ಕಳ ಶ್ರೀ ಜೈನಮಠದ ಪ.ಪೂ. ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಮಂಗಳ ಆಶೀರ್ವಾದ ಮತ್ತು ದಿವ್ಯ ನೇತೃತ್ವದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ದಿನಾಂಕ : 15-3-2025ನೇ ಶನಿವಾರದಿಂದ ಮೊದಲ್ಗೊಂಡು ದಿನಾಂಕ : 17-03-2025ನೇ ಸೋಮವಾರದ ಪರ್ಯಂತ ಆಗಮೋಕ್ತ ವಿಧಿ-ವಿಧಾನಗಳೊಂದಿಗೆ ಪ್ರತಿಷ್ಠಾಪನಾ ಪೂರ್ವಕವಾಗಿ ಜರುಗಲಿದೆ. ಧಾರ್ಮಿಕ ವಿಧಿ-ವಿಧಾನಗಳು: ದಿನಾಂಕ : 15-03-2025ನೇ ಶನಿವಾರ ಬೆಳಿಗ್ಗೆ ಗಂಟೆ 7-45ರಿಂದ ನಿತ್ಯವಿಧಿ ಸಹಿತ ಇಂದ್ರ ಪ್ರತಿಷ್ಠೆ, ಬೆಳಿಗ್ಗೆ 8-55ರ ಮೇಷ ಲಗ್ನ ಸುಮುಹೂರ್ತದಲ್ಲಿ ತೋರಣ ಮುಹೂರ್ತ, ವಿಮಾನಶುದ್ಧಿ ವಿಧಾನ, ದಿವಾಗಂಟೆ 11-45ರ ವೃಷಭ ಲಗ್ನದಲ್ಲಿ ಮುಖವಸ್ತ್ರ ಉದ್ಘಾಟನೆ, ಅಪರಾಹ್ನ ಗಂಟೆ 2-00ರಿಂದ ನಾಂದಿಮಂಗಲ ವಿಧಾನ, ವಾಸ್ತುಪೂಜಾ ವಿಧಾನ, ನವಗ್ರಹ ಮಹಾಶಾಂತಿ ವಿಧಾನ, ದಿಕ್ಪಾಲಕ ಬಲಿ, ಸಂಜೆ ಗಂಟೆ 4-15ರ ಕರ್ಕಾಟಕ ಲಗ್ನದಲ್ಲಿ ಶ್ರೀ ಕ್ಷೇತ್ರಪಾಲ ಸ್ವಾಮಿ ಪ್ರತಿಷ್ಠೆ, ಸಂಜೆ ಗಂಟೆ 5-25ರ ಸಿಂಹಲಗ್ನದಲ್ಲಿ ನಾಗಾರಾಧನಾ ಪೂರ್ವಕ ನಾಗಪ್ರತಿಷ್ಠೆ, ನವಕಲಶ ಅಭಿಷೇಕ, ಮಹಾಮಂಗಳಾರತಿ. ಸಾಂಸ್ಕೃತಿಕ ಕಾರ್ಯಕ್ರಮಗಳು: ಸಂಜೆ ಗಂಟೆ 7-00ರಿಂದ ಮಲೆನಾಡು ಪ್ರಾಂತ್ಯದ ಆಯ್ದ ಜಿನಭಜನಾ ತಂಡಗಳಿಂದ “ಜಿನಗಾನ ಪ್ರಸ್ತುತಿ” ದಿನಾಂಕ : 16-03-2025ನೇ ಭಾನುವಾರ ಬೆಳಿಗ್ಗೆ ನಿತ್ಯವಿಧಿ ಸಹಿತ ಗಂಟೆ 8-30ರಿಂದ ೮೧ ಕಲಶಗಳಿಂದ ಮಾನಸ್ತಂಭ ನವಪದ ಶುದ್ಧಿ ವಿಧಾನ, ಮಾನಸ್ತಂಭದ ಆವರಣದಲ್ಲಿ ವಾಸ್ತುಪೂಜಾ ವಿಧಾನ, ನವಗ್ರಹ ಮಹಾಶಾಂತಿ ವಿಧಾನ, ದಿಕ್ಪಾಲಕ ಬಲಿ, ಬೆಳಿಗ್ಗೆ ಗಂಟೆ 9-00ರಿಂದ ಸಾಮೂಹಿಕ ವೃತೋಪದೇಶ, ಬೆಳಿಗ್ಗೆ ಗಂಟೆ 10-00ರಿಂದ ವೃಷಭಾದಿ ಚತುರ್ವಿಂಶತಿ ತೀರ್ಥಂಕರರಿಗೆ ಮಹಾಭಿಷೇಕ, ಮಧ್ಯಾಹ್ನ ಗಂಟೆ 2-00ರಿಂದ ಚತುರ್ವಿಂಶತಿ ತೀರ್ಥಂಕರರ ಆರಾಧನೆ. ಸಂಜೆ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಗೆ 24 ಕಲಶ ಅಭಿಷೇಕ, ಮಹಾಮಂಗಳಾರತಿ. ಸಾಂಸ್ಕೃತಿಕ ಕಾರ್ಯಕ್ರಮಗಳು: ಸಂಜೆ ಗಂಟೆ 6-00ರಿಂದ ಸುದೇಶ್ ಜೈನ್ ಮತ್ತು ಬಳಗ, ಮಕ್ಕಿಮನೆ ಕಲಾವೃಂದ, ಮಂಗಳೂರು ಇವರ ಸಂಯೋಜನೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ವೈಭವ - ಪ್ರಸಿದ್ಧ ಜಿನಭಜನಾ ತಂಡಗಳಿಂದ ಜಿನಗಾನ ಪ್ರಸ್ತುತಿ ದಿನಾಂಕ : 17-03-2025ನೇ ಸೋಮವಾರ ನಿತ್ಯವಿಧಿಯೊಂದಿಗೆ ಗಂಧಯಂತ್ರಾರಾಧನಾ ಸಹಿತ ದಿವಾಗಂಟೆ 10-25ರಿಂದ 10-35ರ ಸುಮುಹೂರ್ತದಲ್ಲಿ ಚತುರ್ಮುಖ ಜಿನಬಿಂಬ ಶುದ್ದಿ, ಮಂತ್ರನ್ಯಾಸಪೂರ್ವಕ ನಯನೋನ್ಮಿಲನ, ದಿವಾಗಂಟೆ 11-15ರಿಂದ 11-45ರ ವೃಷಭ ಲಗ್ನ ಸುಮುಹೂರ್ತದಲ್ಲಿ ಮಾನಸ್ತಂಭೋಪರಿ ಶ್ರೀ ಜಿನಬಿಂಬ ಪ್ರತಿಷ್ಠಾಪನೆ, ಅಭಿಷೇಕ, ಮಧ್ಯಾಹ್ನ 12-25ರ ಅಭಿಜಿನ್ ಮುಹೂರ್ತದಲ್ಲಿ ಶ್ರೀ ಪದ್ಮಾವತಿ ದೇವಿ ಆರಾಧನಾಪೂರ್ವಕ ಪ್ರತಿಷ್ಠೆ, ಮಧ್ಯಾಹ್ನ ಗಂಟೆ 2-00ರಿಂದ ಮಾನಸ್ತಂಭೋಪರಿ ಜಿನಬಿಂಬಗಳಿಗೆ ೧೦೮ ಕಲಶಗಳ ಮಹಾಭಿಷೇಕ, ಸಮವಸರಣದಲ್ಲಿ ಕಲಿಕುಂಡ ಯಂತ್ರಾರಾಧನೆ, ೨೪ ಕಲಶಗಳ ಅಭಿಷೇಕ, ರಾತ್ರಿ 7-30ರಿಂದ ಸರ್ವಾಷ್ಣಯಕ್ಷ ಉತ್ಸವ, ಗುರುಗಳ ಪಾದಪೂಜೆ, ಕಂಕಣ ವಿಸರ್ಜನೆ, ತೋರಣ ವಿಸರ್ಜನೆ. ಧಾರ್ಮಿಕ ಸಭಾ ಕಾರ್ಯಕ್ರಮ: ಸಂಜೆ 6-00ರಿಂದ ಪೂಜ್ಯ ಭಟ್ಟಾರಕ ಶ್ರೀಗಳಿಂದ ಮಂಗಲ ಪ್ರವಚನ, ಸನ್ಮಾನ ಸಮಾರಂಭ.

ಕಂಬದಹಳ್ಳಿಯಲ್ಲಿ ಜಿನರಾತ್ರಿ ನಿಮಿತ್ತ ಅಖಂಡ ಣಮೋಕಾರ ಮಂತ್ರ ಪಠಣ

Article Image

ಕಂಬದಹಳ್ಳಿಯಲ್ಲಿ ಜಿನರಾತ್ರಿ ನಿಮಿತ್ತ ಅಖಂಡ ಣಮೋಕಾರ ಮಂತ್ರ ಪಠಣ

ಕಂಬದಹಳ್ಳಿ: ಭ| ಶ್ರೀ ಆದಿನಾಥ ತೀರ್ಥಂಕರರ ಮೋಕ್ಷ ಕಲ್ಯಾಣ ನಿಮಿತ್ತ ಜಿನರಾತ್ರಿಯಂದು ಕಂಬದಹಳ್ಳಿಯಲ್ಲಿ ಪ. ಪೂ. ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯದಲ್ಲಿ ಇಪ್ಪತ್ತ ನಾಲ್ಕು ಗಂಟೆಗಳ ಕಾಲ ಅಖಂಡ ಣಮೋಕಾರ ಮಂತ್ರ ಪಠಣ ಜರಗಿತು.

ಬೆಂಗಳೂರು : ಜಿನಸಮ್ಮಿಲನ ಸೀಸನ್‌ -09 ಕಬಡ್ಡಿ ಪಂದ್ಯಾಟ

Article Image

ಬೆಂಗಳೂರು : ಜಿನಸಮ್ಮಿಲನ ಸೀಸನ್‌ -09 ಕಬಡ್ಡಿ ಪಂದ್ಯಾಟ

ಬೆಂಗಳೂರಿನ ಸುಹಾಸ್ತಿ ಜೈನ್‌ ಮಿಲನ್‌ನ ಪ್ರತಿಷ್ಠಿತ ಹೆಮ್ಮೆಯ ಕಾರ್ಯಕ್ರಮ ಜಿನಸಮ್ಮಿಲನ-2025 ಸೀಸನ್-09‌ ಪ್ರತಿವರ್ಷದಂತೆ ಈ ವರ್ಷವೂ ಹಲವು ಕ್ರೀಡೆ ಹಾಗೂ ಇನ್ನಿತರ ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮಕ್ಕೆ ನೋಂದಾಯಿಸಿಕೊಳ್ಳಲು ಲಿಂಕ್: https://forms.gle/SkmFayT6oLUS1iso6 ಪರಮ ಪೂಜ್ಯ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಹಮ್ಮಿಕೊಂಡಿದ್ದು. “ರಾಜರ್ಷಿ ಚಿನ್ನದ ಹೆಜ್ಜೆ” ಎಂಬ ಶೀರ್ಷಿಕೆಯಲ್ಲಿ ಪರ್ಯಾಯ ಫಲಕವನ್ನು ನೀಡುತಿದ್ದೇವೆ. ಏ. 06ರಂದು ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟವನ್ನು ಹಮ್ಮಿಕೊಳ್ಳಲಾಗಿದೆ. ಕ್ರೀಡಾ ನಿಯಮಗಳು ಮತ್ತು ಸೂಚನೆ: * ತಂಡದಲ್ಲಿ 7 + 3 ಆಟಗಾರರಿಗೆ ಅವಕಾಶವಿದ್ದು ಕೊನೆಯ ಸಮಯದಲ್ಲಿ ಆಟಗಾರರ ಬದಲಾವಣೆಗೆ ಯಾವುದೇ ಅವಕಾಶ ಇರುವುದಿಲ್ಲ. * ಪಂದ್ಯಗಳನ್ನು ಅಗ್ ಮಾದರಿಯಲ್ಲಿ ಪಂದ್ಯಗಳನ್ನು ಮತ್ತು ಸುಸಜ್ಜಿತ ಮ್ಯಾಟ್ ಗಳಲ್ಲಿ ಅಡಿಸಲಾಗುವುದು. * ಪಂದ್ಯಗಳ ವಿಜೇತರಿಗೆ ಪ್ರಥಮ, ದ್ವಿತೀಯ, ತ್ರಿತೀಯ ಮತ್ತು ಚತುರ್ಥ ಬಹುಮಾನ ಮತ್ತು ಆಕರ್ಷಕ ಟ್ರೋಫಿಗಳನ್ನು ನೀಡಲಾಗುವುದು. * ಉತ್ತಮ ರೈಡರ್, ಡಿಫೆಂಡರ್ ಮತ್ತು ಅಲೌಂಡರ್ ಗಳಿಗೆ ಅಕರ್ಷಕ ಟ್ರೋಫಿಗಳನ್ನು ನೀಡಲಾಗುವುದು. * ಒಂದು ತಂಡದಲ್ಲಿ ಆಡಿದ ಆಟಗಾರರು ಬೇರೆ ತಂಡದಲ್ಲಿ ಅಡುವಂತಿಲ್ಲ. * ಅಸಭ್ಯವಾಗಿ ವರ್ತಿಸಿದ ತಂಡವನ್ನು ಪಂದ್ಯಾವಳಿಯಿಂದ ಹೊರಗಿಡಲಾಗುವುದು * ನಿರ್ಣಾಯಕರು ಹಾಗೂ ಆಯೋಜಕರ ತೀರ್ಮಾನವೇ ಅಂತಿಮ. * ತಂಡಗಳ ಸೇರ್ಪಡೆ ನಿಗದಿತ ದಿನಾಂಕ 30-03-2025 ರ ಒಳಗೆ ನೋಂದಾಯಿಸಿಕೊಳ್ಳಬೇಕು. * ತಂಡಗಳಿಗೆ ಪ್ರವೇಶ ಶುಲ್ಕ ತಲಾ 2000/- ರೂಗಳು ಆಗಿರುತ್ತದೆ. ಸ್ಥಳ : ಪೇರೆಂಟ್ಸ್ ಅಸೋಸಿಯೇಷನ್ ಕಾಲೇಜು ರಾಜಾಜನಗರ, ಬೆಂಗಳೂರು ಸಂಯೋಜಕರು: ಮಹಾವೀರ್ ಬಿ ಜೆ ಜೈನ್, ದಿಲೀಪ್ ಜೈನ್, ರೋಹಿತ್‌ ಜೈನ್, ಅಭಿನಂದನ್ ಜೈನ್ ಬಿದರೂರು, ಸುಧೀರ್ ಜೈನ್ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 9611403305, 9483691093

ಬೆಂಗಳೂರು : ಜಿನಸಮ್ಮಿಲನ ಸೀಸನ್‌ -09 ಆಶು ಭಾಷಣ ಸ್ಪರ್ಧೆ

Article Image

ಬೆಂಗಳೂರು : ಜಿನಸಮ್ಮಿಲನ ಸೀಸನ್‌ -09 ಆಶು ಭಾಷಣ ಸ್ಪರ್ಧೆ

ಬೆಂಗಳೂರಿನ ಸುಹಾಸ್ತಿ ಜೈನ್‌ ಮಿಲನ್‌ನ ಪ್ರತಿಷ್ಠಿತ ಹೆಮ್ಮೆಯ ಕಾರ್ಯಕ್ರಮ ಜಿನಸಮ್ಮಿಲನ-2025 ಸೀಸನ್-09‌ ಪ್ರತಿವರ್ಷದಂತೆ ಈ ವರ್ಷವೂ ಹಲವು ಕ್ರೀಡೆ ಹಾಗೂ ಇನ್ನಿತರ ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮಕ್ಕೆ ನೋಂದಾಯಿಸಿಕೊಳ್ಳಲು ಲಿಂಕ್: https://forms.gle/SkmFayT6oLUS1iso6 ಏ. 06ರಂದು ಬೆಂಗಳೂರು : ಜಿನಸಮ್ಮಿಲನ ಸೀಸನ್‌ -09 ಆಶು ಭಾಷಣ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಯ ಸಾಮಾನ್ಯ ನಿಯಮಗಳು: * ಕನಿಷ್ಠ ನಿಮಿಷ ಹಾಗೂ ಗರಿಷ್ಠ 5 ನಿಮಿಷಗಳ ಸಮಯಾವಕಾಶ ನೀಡಲಾಗುವುದು. * 4 ನಿಮಿಷವಾದಾಗ ಒಂದು ಎಚ್ಚರಿಕೆಯ ಬೆಲ್ ನೀಡಲಾಗುವುದು. * ಭಾಷಣವು ಕನ್ನಡದಲ್ಲಿ ಮಾತ್ರ ಇರಬೇಕು * ಸ್ಪರ್ಧೆಯಲ್ಲಿ ಭಾಗವಹಿಸುವವರು ನೊಂದಾಯಿಸಲು ಕೊನೆಯ ದಿನಾಂಕ: 30-03-2025 ಸ್ಥಳ : ಸೇರೆಂಟ್ಸ್ ಅಸೋಸಿಯೇಷನ್ ಕಾಲೇಜು ರಾಜಾಜನಗರ, ಬೆಂಗಳೂರು, ಸಂಯೋಜಕರು: ಮಂಜಯ್ಯ ಜೈನ್ ಮಳ್ಳೋಡಿ, ಪುಟ್ಟಸ್ವಾಮಿ ಜೈನ್, ಉದಂಕ ಜೈನ್, ಸಂತೋಷ ಬಿ.ವಿ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: 9611555108, 9480565905

ಸರಗೂರು:ಅಷ್ಟಾಹ್ನಿಕ ಪೂಜೆ

Article Image

ಸರಗೂರು:ಅಷ್ಟಾಹ್ನಿಕ ಪೂಜೆ

ಮೈಸೂರು ಜಿಲ್ಲೆ, ಸರಗೂರು ಪಟ್ಟಣದ ಬಸದಿಯಲ್ಲಿ ಶ್ರೀ ನಂದೀಶ್ವರ ಅಷ್ಟಾಹ್ನಿಕ ಪರ್ವದ ಮೊದಲ ದಿನದ ಅಂಗವಾಗಿ ವಿಶೇಷ ಪೂಜೆ, ಅಭಿಷೇಕ, ಆರಾಧನೆಗಳು ನಡೆದವು. ಸಮಾಜದ ಮುಖಂಡರಾದ ಸೋಮಪ್ರಭ ಸೇರಿದಂತೆ ಜೈನ ಸಮಾಜದ ಮುಖಂಡರುಗಳು, ವಿವಿಧ ಜೈನ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಜೈನ ಮಹಿಳಾ ಸಂಘಟನೆಗಳು ಮುಖಂಡರುಗಳು, ಶ್ರಾವಕ-ಶ್ರಾವಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. -ಜೆ ರಂಗನಾಥ ತುಮಕೂರು

ಬೆಂಗಳೂರು : ಜಿನಸಮ್ಮಿಲನ ಸೀಸನ್‌ -09 ವಾಲಿಬಾಲ್‌ ಪಂದ್ಯಾಟ

Article Image

ಬೆಂಗಳೂರು : ಜಿನಸಮ್ಮಿಲನ ಸೀಸನ್‌ -09 ವಾಲಿಬಾಲ್‌ ಪಂದ್ಯಾಟ

ಬೆಂಗಳೂರಿನ ಸುಹಾಸ್ತಿ ಜೈನ್‌ ಮಿಲನ್‌ನ ಪ್ರತಿಷ್ಠಿತ ಹೆಮ್ಮೆಯ ಕಾರ್ಯಕ್ರಮ ಜಿನಸಮ್ಮಿಲನ-2025 ಸೀಸನ್-09‌ ಪ್ರತಿವರ್ಷದಂತೆ ಈ ವರ್ಷವೂ ಹಲವು ಕ್ರೀಡೆ ಹಾಗೂ ಇನ್ನಿತರ ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮಕ್ಕೆ ನೋಂದಾಯಿಸಿಕೊಳ್ಳಲು ಲಿಂಕ್: https://forms.gle/SkmFayT6oLUS1iso6 ಏ. 06ರಂದು ರಾಜ್ಯಮಟ್ಟದ ವಾಲಿಬಾಲ್ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಯ ನಿಯಮಗಳು : * ಪ್ರತಿ ತಂಡದಲ್ಲಿ ಆರು ಜನ ಆಟಗಾರರು ಹಾಗೂ ಮೂರು ಜನ ಆಟಗಾರರು ಪರ್ಯಾಯ ಆಟಗಾರರಾಗಿ ಅಟವಾಡಲು ಅವಕಾಶವಿರುತ್ತದೆ. * ಒಬ್ಬ ಆಟಗಾರನಿಗೆ ಒಂದು ತಂಡದಲ್ಲಿ ಮಾತ್ರ ಆಡಲು ಅವಕಾಶವಿರುತ್ತದೆ. * ನಿರ್ಣಾಯಕರ ಮತ್ತು ಆಯೋಜಕರ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ. * ತಂಡದ ಹೆಸರನ್ನು ನೋಂದಾಯಿಸಲು ಕೊನೆಯ ದಿನಾಂಕ 30 ಮಾರ್ಚ್ 2025 ಆಗಿರುತ್ತದೆ. * ವಿಜೇತ ತಂಡಗಳಿಗೆ ವಿಶೇಷ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ಏರುತ್ತದೆ. * ಒಂದು ತಂಡಕ್ಕೆ ಪ್ರವೇಶ ಶುಲ್ಕ 1000/- ರೂ ಆಗಿರುತ್ತದೆ. ಸ್ಥಳ : ಸೇರೆಂಟ್ಸ್ ಅಸೋಸಿಯೇಷನ್ ಕಾಲೇಜು ರಾಜಾಜನಗರ, ಬೆಂಗಳೂರು, ಸಂಯೋಜಕರು: ದರ್ಶನ್ ಜೈನ್ ಮಾರಲಗೋಡು, ಅಮೃತ ಜೈನ್ ಬಿದರೂರು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : ಸೋಹನ್ ಜೈನ್, ಸಂತೋಷ್ ಡಿ ಜೈನ್ 9035943205 94807 22321

ಬೆಂಗಳೂರು : ಜಿನಸಮ್ಮಿಲನ ಸೀಸನ್‌ -09 ರಂಗೋಲಿ ಪಂದ್ಯಾಟ

Article Image

ಬೆಂಗಳೂರು : ಜಿನಸಮ್ಮಿಲನ ಸೀಸನ್‌ -09 ರಂಗೋಲಿ ಪಂದ್ಯಾಟ

ಬೆಂಗಳೂರಿನ ಸುಹಾಸ್ತಿ ಜೈನ್‌ ಮಿಲನ್‌ನ ಪ್ರತಿಷ್ಠಿತ ಹೆಮ್ಮೆಯ ಕಾರ್ಯಕ್ರಮ ಜಿನಸಮ್ಮಿಲನ-2025 ಸೀಸನ್-09‌ ಪ್ರತಿವರ್ಷದಂತೆ ಈ ವರ್ಷವೂ ಹಲವು ಕ್ರೀಡೆ ಹಾಗೂ ಇನ್ನಿತರ ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮಕ್ಕೆ ನೋಂದಾಯಿಸಿಕೊಳ್ಳಲು ಲಿಂಕ್: https://forms.gle/SkmFayT6oLUS1iso6 ಜೈನ ಮಹಿಳೆಯರಿಗೆ ಏ. 06ರಂದು ರಾಜ್ಯಮಟ್ಟದ ರಂಗೋಲಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಯ ನಿಯಮಗಳು : * ಸ್ಪರ್ಧೆಯಲ್ಲಿ ಭಾಗವಹಿಸುವವರು ಸಮಯಕ್ಕೆ ಸರಿಯಾಗಿ ಸ್ಥಳದಲ್ಲಿ ಹಾಜರಿರಬೇಕು. * ರಂಗೋಲಿ ಸ್ಪರ್ಧೆಯ ಕಾಲಾವಧಿ ಒಂದು ಗಂಟೆ. * ರಂಗೋಲಿಯು ಜೈನ ಧರ್ಮದ ಸಂದೇಶವನ್ನು ಸಾರುವ ಅಂಶಗಳನ್ನು ಹೊಂದಿರಬೇಕು. * ಸ್ಪರ್ಧಿಗಳು ತಮ್ಮ ಹೆಸರನ್ನು ಗೂಗಲ್ ಅಂಕ್ ಅಥವಾ ಅಯೋಜಕರಲ್ಲಿ ನೊಂದಾಯಿಸಬೇಕು. * ರಂಗೋಲಿ ಜಡಿಸುವವರು ನಿಗದಿಪಡಿಸಿದ 3 X 3 ಅಡಿ ಜಾಗದಲ್ಲೆ ಜಡಿಸಬೇಕು. * ರಂಗೋಲಿ ಬಿಡಿಸಲು ಬೇಕಾದ ವಸ್ತುಗಳನ್ನು ಸ್ಪರ್ಧಿಗಳೇ ತರತಕ್ಕದ್ದು. * ತೀರ್ಪುಗಾರರ ಆಯ್ಕೆಯ ಅನುಸಾರ ಪ್ರಥಮ, ದ್ವಿತೀಯ, ಮತ್ತು ತೃತೀಯ ಫಲಿತಾಂಶ ಘೋಷಿಸಲಾಗುವುದು. * ತರಕಾಲ, ಹೂವು, ಹರಳು ಮತ್ತು ಕಾಳು ಬೆಳೆ ಸೇರಿದಂತೆ ವಿಶೇಷ ವಸ್ತುಗಳನ್ನು ಸೌಂದರ್ಯಕ್ಕಾಗಿ ಬಳಸಬಹುದು. * ಸ್ಪರ್ಧೆಯಲ್ಲಿ ಭಾಗವಹಿಸುವವರು ನೊಂದಾಯಿಸಲು ಕೊನೆಯ ದಿನಾಂಕ: 30-03-2025 ಸ್ಥಳ : ಸೇರೆಂಟ್ಸ್ ಅಸೋಸಿಯೇಷನ್ ಕಾಲೇಜು ರಾಜಾಜಿನಗರ, ಬೆಂಗಳೂರು, ಸಂಯೋಜಕರು: ಪೂಜಾ ದರ್ಶನ್ ಜೈನ್, ಸಂಗೀತ ವಜ್ರ ಕುಮಾರ್, ಸಂಧ್ಯಾ ಉದಂಕ ಜೈನ್, ಪ್ರಜ್ವಲ್ ಜೈನ್ ಜೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: 7406434903 7892973503

ಬೆಂಗಳೂರು : ಜಿನಸಮ್ಮಿಲನ ಸೀಸನ್‌ -09 ಚಿತ್ರಕಲೆ ಸ್ಪರ್ಧೆ

Article Image

ಬೆಂಗಳೂರು : ಜಿನಸಮ್ಮಿಲನ ಸೀಸನ್‌ -09 ಚಿತ್ರಕಲೆ ಸ್ಪರ್ಧೆ

ಬೆಂಗಳೂರಿನ ಸುಹಾಸ್ತಿ ಜೈನ್‌ ಮಿಲನ್‌ನ ಪ್ರತಿಷ್ಠಿತ ಹೆಮ್ಮೆಯ ಕಾರ್ಯಕ್ರಮ ಜಿನಸಮ್ಮಿಲನ-2025 ಸೀಸನ್-09‌ ಪ್ರತಿವರ್ಷದಂತೆ ಈ ವರ್ಷವೂ ಹಲವು ಕ್ರೀಡೆ ಹಾಗೂ ಇನ್ನಿತರ ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮಕ್ಕೆ ನೋಂದಾಯಿಸಿಕೊಳ್ಳಲು ಲಿಂಕ್: https://forms.gle/SkmFayT6oLUS1iso6 ಏ. 06ರಂದು ರಾಜ್ಯಮಟ್ಟದ ಚಿತ್ರಕಲೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ನಿಯಮಗಳು : * ಚಿತ್ರಕಲೆಯು 4 ವಿಭಾಗಗಳಲ್ಲಿ ಇರುತ್ತದೆ (ಚಿಣ್ಣರ, ಬಾಲ್ಯ, ಕಿಶೋರ & ಯುವ) ಚಿಣ್ಣರ 1 ರಿಂದ 4 ನೇ ತರಗತಿ, ಬಾಲ್ಯ 5 ರಿಂದ 7 ನೇ ತರಗತಿ, ಕಿಶೋರ 8 ರಿಂದ 10 ನೇ ತರಗತಿ & ಯುವ PUC ನಂತರ. * ಸ್ಪರ್ಧಿಗಳು ತಮ್ಮ ಹೆಸರನ್ನು ಗೂಗಲ್ ಅಂಕ್ ಮೂಲಕ ನೋಂದಾಯಿಸಬೇಕಾಗಿ ವಿನಂತಿ. * ಚಿತ್ರ ಕಲೆಯು ಜೈನ ಧರ್ಮದ ಬಗ್ಗೆ ಇರಬೇಕು ಹಾಗೂ ಚಿತ್ರ ಬಿಡಿಸಲು ಕಾಲಾವಕಾಶ 1 ಗಂಟೆ. * ಚಿತ್ರಕಲೆಯು ಕ್ರೆಯಾನ್ಸ್, ಸ್ಟೇಟ್ಟೆನ್ & ವಾಟರ್ ಕಲರ್ ಯಾವುದಾದರೂ ಮಾಡಬಹುದು. * A3 ಡ್ರಾಯಿಂಗ್ ಶೀಟ್ ನಲ್ಲಿ ಚಿತ್ರವನ್ನು ಬಿಡಿಸಬೇಕು ಮತ್ತು ಶೀಟನ್ನು ಸ್ಥಳದಲ್ಲಿಯೇ ಒದಗಿಸಲಾಗುತ್ತದೆ. * ಚಿಣ್ಣರ ವಿಭಾಗಕ್ಕೆ ಚಿತ್ರವನ್ನು ಕೊಡಲಾಗುತ್ತದೆ, ಕಲಲಿಂಗ್ ಮಾಡಬೇಕು. * ತೀರ್ಪುಗಾರರ ಆಯ್ಕೆಯ ಅನುಸಾರ ಫಲಿತಾಂಶವನ್ನು ಘೋಷಿಸಲಾಗುತ್ತದೆ. * ಸ್ಪರ್ಧಾಳುಗಳು ನೋಂದಾಯಿಸಲು ಕೊನೆಯ ದಿನಾಂಕ: 30-03-2025. ಸ್ಥಳ : ಪೇರೆಂಟ್ಸ್ ಅಸೋಸಿಯೇಷನ್ ಕಾಲೇಜು ರಾಜಾಜಿನಗರ, ಬೆಂಗಳೂರು, ಸಂಯೋಜಕರು: ಸಂದೇಶ್ ಜೈನ್, ತೇಜಪ್ಪ ಜೈನ್, ಅಭಿಷೇಕ್ ಜೈನ್, ರಚನಾ ಜಿನೇಂದ್ರ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 8105077689 9483596608

“ಕರ್ನಾಟಕದ ಪ್ರಾಣೋಪಾಸಕ” ಆಲೂರು ವೆಂಕಟರಾವ ಅವರ 61ನೇ ಪುಣ್ಯಸ್ಮರಣೆ ಕಾರ್ಯಕ್ರಮ

Article Image

“ಕರ್ನಾಟಕದ ಪ್ರಾಣೋಪಾಸಕ” ಆಲೂರು ವೆಂಕಟರಾವ ಅವರ 61ನೇ ಪುಣ್ಯಸ್ಮರಣೆ ಕಾರ್ಯಕ್ರಮ

ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಅವರ 61ನೇ ಪುಣ್ಯಸ್ಮರಣೆ ಕಾರ್ಯಕ್ರಮ ಇಂದು (ಫೆ. 25)ನಗರದ ಆಲೂರು ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಸರಳ, ಸುಂದರವಾಗಿ ಸಂಪನ್ನಗೊಂಡಿತು. ಕಾರ್ಯಕ್ರಮದ ಮೊದಲು ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಪ್ರೇಸ್‌ ಇನ್ಫಾರ್ಮೇಶನ ಬ್ಯೂರೊ ಭಾರತ ಸರ್ಕಾರದ ನಿವೃತ್ತ ಪ್ರಿನ್ಸಿಪಲ್ ಡಿ. ಜಿ.ಮನೀಶ ದೇಸಾಯಿಯವರು ಹಾಗೂ ಇತರ ಗಣ್ಯರು ಭವನದ ಆವರಣದೊಳಗಿರುವ ಆಲೂರು ವೆಂಕಟರಾವ ಅವರ ಕಂಚಿನ ಪುತ್ಥಳಿಗೆ ಮಾಲಾರ್ಪಣೆ ಮತ್ತು ಪುಷ್ಪಾರ್ಪಣೆ ಮಾಡಿ ನಮನ ಸಲ್ಲಿಸಿದರು. ಮನೀಶ ದೇಸಾಯಿಯವರು ಮಾತನಾಡಿ ಕನ್ನಡದ ಮೂಲ ಕೃಷಿಕ ಆಲೂರು ವೆಂಕಟರಾವ ಅವರ ಹೆಸರಿನ ಮಾತ್ರದಿಂದಲೇ ಪುಳಕಿತಗೊಂಡ ಆ ಕಾಲದ ವಿದ್ಯಾರ್ಥಿಗಳಾದ ನಾವು ಅವರನ್ನು ನೋಡಿರದಿದ್ದರು. ಅವರ ಕನ್ನಡದ ಕಾವ್ಯಗಳಿಂದ ಪ್ರೇರಿತರಾಗಿ ಸಾಧನೆಕೇರಿಯಲ್ಲಿ ಸರ್‌ಕ್ಯೂಲೇಟಿಂಗ್‌ ಲೈಬ್ರರಿ ಪ್ರಾರಂಭಿಸಿ ಅಲ್ಲಿ ಕರ್ನಾಟಕ ಗತವೈಭವ, ಲೋಕಮಾನ್ಯ ತಿಲಕರ ಕನ್ನಡ ಗೀತಾರಹಸ್ಯ ಕನ್ನಡ ಅನುವಾದ ಹಾಗೂ ಇನ್ನಿತರ ಮಹತ್ವದ ಕನ್ನಡ ಕೃತಿಗಳನ್ನು ಸಂಗ್ರಹಿಸಿ ವಿತರಿಸಿದ್ದು ಇಂದಿಗೂ ನನ್ನ ನೆನಪಿನಲ್ಲಿದೆ ಎಂದು ಆಲೂರರ ಕನ್ನಡ ಕಟ್ಟುವ ಕಾರ್ಯಗಳನ್ನು ಸ್ಮರಿಸಿಕೊಂಡರು. ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಪ್ರಾಧ್ಯಾಪಕ, ಸಾಹಿತಿ, ಡಾ. ಜಿನದತ್ತ ಹಡಗಲಿಯವರು ಮಾತನಾಡಿ, ಒಂದು ಕಾಲಕ್ಕೆ ವೈಭವಯುತ ಸಾಮ್ರಾಜ್ಯವೆಂದೇ ಗುರುತಿಸಿಕೊಂಡಿದ್ದ ವಿಜಯನಗರದ ಹಂಪಿಯ ಭಗ್ನಾವಶೇಷಗಳು, ಪಳೆಯುಳಿಕೆಗಳು ತಮ್ಮ ಹೃದಯವನ್ನು ಕಲಕಿ ಬಿಟ್ಟಾಗ ತೀವ್ರ ಹತಾಶೆಯನ್ನುಭವಿಸಿದ ಆಲೂರರು ಆ ದಿನವನ್ನು ತಮ್ಮ ಜೀವನದಲ್ಲಿ ಕ್ರಾಂತಿ ಮಾಡಿದ ದಿನವೆಂದೇ ಭಾವಿಸುತ್ತಾರೆ. ಆ ಕ್ಷಣದಿಂದ ವಿಜಯನಗರದ ಪುನರುತ್ಥಾನ, ಕನ್ನಡ ಕರ್ನಾಟಕತ್ವ, ಕರ್ನಾಟಕ ಏಕೀಕರಣಗಳ ಹೊಸ ಹೊಳಪುಗಳನ್ನು ಕಂಡು ಅವುಗಳ ಸಾಕ್ಷಾತ್ಕಾರವಾಗಿ ಪಣತೊಡುತ್ತಾರೆ. ವಂಗಭಂಗ ಚಳುವಳಿಯ ಕಾವು ಇವರನ್ನು ತಟ್ಟಿ ಮತ್ತಷ್ಟು ದು:ಖವಾಗಿ ನಿಸ್ವಾರ್ಥ ಭಾವನೆಯಿಂದ ಈ ನಾಡು ನನ್ನ ಮನೆ, ಈ ದೇಶ ನನ್ನ ಕುಟುಂಬವೆಂಬ ಸೂತ್ರವನ್ನು ಮೂಲವಾಗಿಸಿಕೊಂಡು ತಮ್ಮ ಹೊರಾಟಕ್ಕೆ ಶ್ರೀಕಾರ ಹಾಕುತ್ತಾರೆ. ಕನಾಟಕ ವಿದ್ಯಾವರ್ಧಕ ಸಂಘ, ವಾಗ್ಬೂಷಣ ಪತ್ರಿಕೆಯ ಸಂಪಾದಕತ್ವ ಮುಂತಾದವುಗಳಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಾರೆ, ಧಾರವಾಡದಲ್ಲಿ 1907ರಲ್ಲಿ ಮೊದಲಬಾರಿ ಕನ್ನಡ ಗ್ರಂಥಕರ್ತರ ಸಮ್ಮೇಳನ ನಡೆಸುತ್ತಾರೆ ಇದರ ಮುಂದುವರಿಕೆಯಾಗಿ ಜರುಗಿದ 3ನೇಯ ಸಮ್ಮೇಳನವು ಈ ನಾಡಿನ ಪ್ರತಿಷ್ಠಿತ ಸಂಸ್ಥೆ “ಕನ್ನಡ ಸಾಹಿತ್ಯ ಪರಿಷತ್ತಿನ" ಹುಟ್ಟಿಗೆ ನಾಂದಿಯಾಗುತ್ತದೆ. ಕರ್ನಾಟಕ ಗತವೈಭವ, ಕರ್ನಾಟಕ ವೀರರತ್ನಗಳಂತಹ ಪುಸ್ತಕಗಳನ್ನು ಪ್ರಕಟಿಸಿ ಮಲಗಿದ ಕನ್ನಡಿಗರತ್ತ ಚಾಟಿ ಬೀಸುತ್ತಾರೆ. ಆಲೂರರ ಇಂಥ ಕ್ರಾಂತಿಕಾರಿ ಹೆಜ್ಜೆಗಳನ್ನು ಸರಿಯಾಗಿಯೇ ಗುರುತಿಸಿದ ವರಕವಿ ಬೇಂದ್ರೆ ಅಲೂರರನ್ನು “ಕರ್ನಾಟಕ ಪ್ರಾಣೋಪಾಸಕ"ರೆಂದು ಹೆಮ್ಮೆಯಿಂದ ಕೊಂಡಾಡುತ್ತಾರೆ. ಹೀಗೆ ಆಲೂರುರೆಂದರೆ ಅದೊಂದು ಕನ್ನಡ ಗುಡಿಯ ಗೋಪೂರವಾಗಿದ್ದು ಕನ್ನಡಗಿರಲ್ಲರ ಪ್ರಾತ: ಸ್ಮರಣೀಯರಾಗಿದ್ದಾರೆ ಎಂದು ಡಾ. ಜಿನದತ್ತ ಹಡಗಲಿಯವರು ಆಲೂರರ ಸಾಧನೆಗಳನ್ನು ಸ್ಮರಿಸಿಕೊಂಡರು. ಟ್ರಸ್ಟ್ ಅಧ್ಯಕ್ಷ ಡಾ. ಪ್ರಮೋದ ಗಾಯಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ. ಎಚ್. ಎ ಕಾಖಂಡಕಿ, ಕವಿ ನರಸಿಂಹ ಪರಾಂಜಪೆ, ಎಸ್.ಎಮ್ ದೇಶಪಾಂಡೆ, ಎಮ್. ಎಮ್ ಚಿಕ್ಕಮಠ, ರಮೇಶ ಪರ್ವತಿಕರ, ಅನಿಲ ಕಾಖಂಡಕಿ, ಮುರಳಿ ಹುಯಿಲಗೋಳ, ಭಾರತಿ ದೇಸಾಯಿ, ಶ್ರೀಕಾಂತ ದೇಸಾಯಿ ಮುಂತಾದವರು ಉಪಸ್ಥಿತರಿದ್ದರು. ಗೀತಾ ಆಲೂರ ಪ್ರಾರ್ಥಿಸಿದರು. ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಟ್ರಸ್ಟಿ ಡಾ. ದೀಪಕ ಆಲೂರ ಕಾರ್ಯಕ್ರಮ ನಿರೂಪಿಸಿದರು, ಶ್ರೀನಿವಾಸ ವಾಡಪ್ಪಿ ವಂದಿಸಿದರು.

ಪಂಚಕಲ್ಯಾಣ ಮಹೋತ್ಸವ

Article Image

ಪಂಚಕಲ್ಯಾಣ ಮಹೋತ್ಸವ

ಸಾಗರ ತಾಲೂಕಿನ ಸುಳ್ಳಳ್ಳಿ ಅಂಚೆ, ಆವಿಗೆಯಲ್ಲಿ ಭಗವಾನ್ ಶ್ರೀ 1008 ಚಂದ್ರನಾಥ ಸ್ವಾಮಿಯ ಜಿನ - ಚೈತ್ಯಾಲಯವನ್ನು ನೂತನವಾಗಿ ನಿರ್ಮಿಸಿದ್ದು, ಇದರ ಪಂಚಕಲ್ಯಾಣ ಮಹೋತ್ಸವ ಮತ್ತು ಮಾನಸ್ತಂಭೋಪರಿ ನೂತನ ಬಿಂಬ ಪ್ರತಿಷ್ಠೆ ಹಾಗೂ ಶ್ರೀ ಜ್ವಾಲಾಮಾಲಿನಿ ಅಮ್ಮನವರ ಪ್ರತಿಷ್ಠಾ ಮಹೋತ್ಸವವು ಮೂಡುಬಿದಿರೆ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ, ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ಹಾಗೂ ಕನಕಗಿರಿ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು, ಕಂಬದಹಳ್ಳಿ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು, ಹೊಂಬುಜ ಶ್ರೀ ಜೈನ ಮಠದ ಪ.ಪೂ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಹಾಗೂ ನರಸಿಂಹರಾಜಪುರ ಶ್ರೀ ಜೈನ ಮಠದ ಪ.ಪೂ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಇವರುಗಳ ದಿವ್ಯ ಸಾನ್ನಿಧ್ಯದಲ್ಲಿ ಇಂದಿನಿಂದ (ಫೆ.17) ಪ್ರಾರಂಭಗೊಂಡು ದಿನಾಂಕ 21-02-2025ನೇ ಶುಕ್ರವಾರದವರೆಗೆ ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಸಂಪನ್ನಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

"ಮಾನವೀಯ ಮೌಲ್ಯಗಳು ಪಸರಿಸಬೇಕು : ಅನಿತಾ ಸುರೇಂದ್ರ ಕುಮಾರ್"

Article Image

"ಮಾನವೀಯ ಮೌಲ್ಯಗಳು ಪಸರಿಸಬೇಕು : ಅನಿತಾ ಸುರೇಂದ್ರ ಕುಮಾರ್"

ಬೆಂಗಳೂರು: ಮಾನವನಲ್ಲಿರುವ ಮಾನವೀಯ ಮೌಲ್ಯಗಳು ನಿಂತ ನೀರಾಗದೆ ಸದಾ ಹರಿಯುವ ನೀರಿನಂತೆ ಪಸರಿಸಬೇಕು ಇದರಿಂದ ಜನ ಮಾನವೀಯ ಮೌಲ್ಯಗಳು ರೂಡಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಭಾರತೀಯ ಜೈನ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರು ಹಾಗೂ ಬೆಂಗಳೂರು ತ್ಯಾಗಿ ಸೇವಾ ಸಮಿತಿ ಅಧ್ಯಕ್ಷರಾದ ಅನಿತಾ ಸುರೇಂದ್ರ ಕುಮಾರ್ ತಿಳಿಸಿದರು. ಅವರು ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥ ಕಲ್ಯಾಣ ಮಂದಿರದಲ್ಲಿ ನಡೆದ ಬೆಂಗಳೂರು ವಿಭಾಗೀಯ ಹೊಂಗಸಂದ್ರದ ಶ್ರೀ ಶಾಂತಿನಾಥ ಜೈನ್ ಮಿಲನ್ , ವಿಲ್ಸನ್ ಗಾರ್ಡನ್ ರತ್ನತ್ರೆಯ ಜೈನ್ ಮಿಲನ್ ಹಾಗೂ ಬನಶಂಕರಿ ಜೈನ್ ಮಿಲನ್ ಗಳ ಮಾಸಿಕ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾತನಾಡಿದರು. ಧಾರ್ಮಿಕವಾಗಿ ನಾವು ಹಿಂದೆ ಬಿದ್ದಿಲ್ಲ, ಇಂದು ಕರ್ಮ ಸಿದ್ದಾಂತದಿಂದ ಎಲ್ಲರೂ ಸೇರಿದ್ದೇವೆ ನಮ್ಮಲ್ಲಿರುವ ಸಿದ್ಧಾಂತ ತತ್ವ ನೀತಿಗಳು ಮಾನವೀಯ ಮೌಲ್ಯಗಳು ಇತರರಿಗೆ ತಿಳಿಯಬೇಕಿದೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಂಚಕಲ್ಯಾಣಗಳಲ್ಲಿ ಜಿನ ಭಜನೆಗೆ ಆದ್ಯತೆ ನೀಡಲಾಗುತ್ತಿದೆ. ಈ ಹಿಂದೆ ತಿರಸ್ಕರಕೊಂಡಿದ್ದ ಜಿನಭಜನೆಗೆ ಇಂದು ಹೆಚ್ಚಿನ ಬೇಡಿಕೆ ಬಂದಿದೆ , ಉತ್ತಮ ಗುಣಗಳನ್ನು ಪಸರಿಸಿದಾಗ ಸಮಾಜದಲ್ಲಿ ಉತ್ತಮ ಕರ್ಮಗಳಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು, ನಾವು ಮಾಡುವ ಕೆಲಸ ಶಾಶ್ವತವಾಗಿರಬೇಕು, ಸಮಾಜದ ಋಣ ತೀರಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು. ಧಾರ್ಮಿಕ ಉಪನ್ಯಾಸ ನೀಡಿದ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಉಪಾಧ್ಯಕ್ಷರು ಹಾಗೂ ಕರ್ನಾಟಕ ಜೈನ ಅಸೋಸಿಯೇಷನ್ ಸಹಕಾರ್ಯದರ್ಶಿಗಳಾದ ಡಾ. ನೀರಜಾ ನಾಗೇಂದ್ರ ಕುಮಾರ್ ಮಾತನಾಡಿ, ಮನಸ್ಸನ್ನು ನಿಗ್ರಹಿಸಲು ಧ್ಯಾನ ,ಯೋಗ ಅಗತ್ಯ. ಜೈನ ತತ್ವ ,ವಿದ್ಯೆಗಳು, ಕನ್ನಡದಲ್ಲಿ ಅನುವಾದವಾಗಿವೆ. ಧರ್ಮ ಬದುಕುವ ರೀತಿ ,ಇದರಿಂದ ಮೋಕ್ಷ ಪ್ರಾಪ್ತಿಯಾಗಲಿದೆ ಎಂದರು. ಅರ್ದ್ಯ ಧ್ಯಾನ , ರೋದ್ರ ಧ್ಯಾನ, ಧರ್ಮ ಧ್ಯಾನ, ಶುಕ್ಲ ಧ್ಯಾನ, ಇವು ಸೌಖ್ಯ ವಾಗಿದ್ದರೆ ಜೀವನದ ಪ್ರಸಂಗಗಳು ದುಃಖಕ್ಕೆ ದೂಡುತ್ತವೆ ,ಇಷ್ಟ -ಅನಿಷ್ಟಗಳನ್ನು ಮೀರಿ ಸಲ್ಲಬೇಕು ಎಂದರು. ಮಾನಸಿಕವಾಗಿ ಯಾವುದನ್ನು ಚಿಂತಿಸಬಾರದು ಎಂದವರು, ಹೆಚ್ಚು ಯೋಚನೆ ಮಾಡಬಾರದು. ಅನುಮಾನಾಸ್ಪದವಾಗಿ ಚಿಂತಿಸಬಾರದು ಎಂದರು, ಯಾವುದೇ ಕಾರ್ಯದಲ್ಲಿ ಚಿಂತನೆಗಳ ಅಗತ್ಯವಿಲ್ಲ, ನಿಧಾನವು ಇರಬಾರದು, ಮನಸ್ಸಿನಲ್ಲಿ ಯಾವುದೇ ಆಸೆ ಆಕಾಂಕ್ಷೆಗಳಿರಬಾರದು ಎಂದರು. ನಾವು ಹೆಚ್ಚು ಪ್ರೀತಿ ಮಾಡುವವರೇ ನಮಗೆ ಕಷ್ಟ ನೀಡುತ್ತಾರೆ, ಅತಿ ಪ್ರೀತಿಸಲ್ಲದು ಎಂದರು. ಕ್ರೂರ -ಕ್ರೌರ್ಯ ಭಾವನೆ ಹಿಂಸಾತ್ಮಕವಾದದ್ದು ಇದನ್ನು ನೋಡಿ ಕೆಲ ಜನ ಸಂತೋಷ ಪಡುತ್ತಾರೆ ,ನಾಲಿಗೆ ರುಚಿಗೆ ಪ್ರಾಣಿಗೆ ಹಿಂಸೆ ನೀಡಿ ಸಂತಸ ಅನುಭವಿಸುವವರು ಇದ್ದಾರೆ ಎಂದರು. ಕಳ್ಳತನದಿಂದ ಆನಂದ ಪಡುವವರಿದ್ದಾರೆ ಎಲ್ಲವೂ ಇದ್ದರೂ ಕಳ್ಳತನವನ್ನು ಹವ್ಯಾಸ ಮಾಡಿಕೊಂಡಿರುವವರು ಇದ್ದಾರೆ ,ಕೆಲ ಜನ ವಸ್ತುಗಳನ್ನು ಸಂಗ್ರಹಿಸಿ ಇಡುತ್ತಾರೆ ಬೇಡ ಎಂದರು ಖರೀದಿಸಿ ಸಂಗ್ರಹಿಸುತ್ತಾರೆ ಇದನ್ನು ಅನುಭವಿಸಲು ಸಮಯವಿರುವುದಿಲ್ಲ ಇದರಿಂದ ದುಶ್ಚಟಗಳಿಗೆ ಬಲಿಯಾಗಲಿದ್ದಾರೆ ಎಂದರು. ಎಲ್ಲಾ ಕಷ್ಟ ಮತ್ತು ನಷ್ಟಗಳ ನಿವಾರಣೆಗೆ ಧರ್ಮಧ್ಯಾನ ಅಗತ್ಯ ಎಂದರು. ಕೆಲ ಜನ ಆಟ, ಪಾಠ, ವಿನೋದ, ನೋಟ ಗಳಲ್ಲಿ ಕಾಲ ಕಳೆಯುತ್ತಾರೆ ,ವ್ಯಸನಗಳ ಮೂಲಕ ಕಾಲ ಕಳೆಯುತ್ತಾರೆ, ಕೆಲವರು ಕಲಹ ನಿದ್ರೆಗಳಿಂದ ಸಂತಸ ಪಡುತ್ತಾರೆ ಎಂದು ಅವರು, ಈ ವಿಚಾರಗಳಿಗೆ ಧರ್ಮದಲ್ಲಿ ಪರಿಹಾರವಿದೆ ಎಂದರು. ಧರ್ಮ ಧ್ಯಾನದಿಂದ ಶಾಂತಿ ದೊರೆಯಲಿದ್ದು ಯಾವುದೇ ವಿಚಾರವನ್ನು ಅರ್ಥ ಮಾಡಿಕೊಂಡು ನಡೆದಾಗ ಸ್ವಾಧ್ಯಾಯದಿಂದ ಸಾಧ್ಯವಾಗಲಿದೆ ಇದರಿಂದ ನಮಗೆ ಉಚ್ಚಗತಿಗಳು ಪ್ರಾಪ್ತಿಯಾಗಲಿವೆ ತೀರ್ಥಂಕರರ ದಿವ್ಯ ಧ್ಯಾನದಿಂದ ಎಲ್ಲವೂ ಲಿಪಿ ಬದ್ಧವಾಗಿ ದೊರೆಯಲಿದೆ ಎಂದರು. ಕುಟುಂಬವೇ ಮೋಹದ ಜಾಲದಲ್ಲಿ ಬಿದ್ದರೆ ಇಂತಹ ಅನಾಹುತಗಳ ಬಗ್ಗೆ ಚಿಂತನೆ ಅಗತ್ಯ ರಾಗ ದ್ವೇಷ ತರವಲ್ಲ ಎಂದರು. ಕಾಲ ಸಿದ್ದಾಂತ ಕರ್ಮ ಪ್ರಕೃತಿಗಳ ಬಗ್ಗೆ ತಿಳಿದಾಗ ನಿಜವಾದ ಜ್ಞಾನಿಯಾಗಲು ಸಾಧ್ಯ. ಶುಕ್ಲಜ್ಞಾನ ಮನಸ್ಸು ನಿರ್ಮಲವಾದಾಗ ಸಾಧ್ಯ ಇದರಿಂದ ಯಾವುದೇ ಕಷ್ಟಗಳು ಬರುವುದಿಲ್ಲ ಯೋಗಕ್ಕೆ ಇವೆಲ್ಲ ಸಹಕಾರಿಯಾಗಲಿವೆ ಎಂದರು. ಧಾರ್ಮಿಕ ಉಪನ್ಯಾಸ ನೀಡಿದ ಮದನ ಪಂಡಿತ್ ಮಾನವ ಮುನಿಗಳಿಗೆ ಆಹಾರ ಸ್ವಾಧ್ಯಾಯ ಮಾಡುವುದರಿಂದ ಸೌಮ್ಯ, ಶಾಂತಿ ,ಭಕ್ತಿ ಹೆಚ್ಚಾಗಲಿದೆ ಧ್ಯಾನ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗಲಿದೆ ಎಂದರು. ಭಾರತೀಯ ಜೈನ್ ಮಿಲನ್ ವಲಯ - 8 ರ ಕಾರ್ಯದರ್ಶಿ ವಿಲಾಸ್ ಪಾಸಣ್ಣನವರ್ ಮಾತನಾಡಿ ಇಂತಹ ವೇದಿಕೆಗಳನ್ನು ಸಂಘಗಳು ಬಳಸಿಕೊಂಡು ಸಂಘಟಿತರಾಗಬಹುದು ಯಾವುದೇ ವ್ಯಕ್ತಿ ಗಟ್ಟಿಯಾಗಿ ನಿಂತಾಗ ಜೀವನ ಸಾಧ್ಯವಾಗಲಿದೆ, ಸಿರಿವಂತರಾದ ಜೈನ ಧರ್ಮೀಯರು, ಜನಸಂಖ್ಯೆಯಲ್ಲಿ ಕ್ಷೀಣಿಸುತ್ತಿದ್ದು ಕನಿಷ್ಠ ಕುಟುಂಬಕ್ಕೆ ಮೂರು ಮಕ್ಕಳನ್ನು ಪಡೆದು ಜೈನ ಧರ್ಮ ಉಳಿಸಿ, ಬೆಳೆಸಿ, ಸಂಘಟಿತರಾಗಬೇಕೆಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ. ಭರತೇಶ್ ಜಗ ಶೆಟ್ಟಿ ಮಾತನಾಡಿ ನಮ್ಮ ಜನಸಂಖ್ಯೆ ಕುಂಠಿತವಾಗುತ್ತಿದ್ದು ,ಮುಂದಿನ ಪೀಳಿಗೆಗೆ ಬಗ್ಗೆ ಚಿಂತಿಸಬೇಕಿದೆ. ಧರ್ಮ, ಜನಸಂಖ್ಯೆಯ ಬೆಳವಣಿಗೆ ಪ್ರತಿ ಕುಟುಂಬ ಮೂರು ಮಕ್ಕಳ ಅಗತ್ಯವಿದೆ ಎಂದರು. ಪ್ರತಿ ಮಿಲನ್ ಗಳು ಸರಿಯಾದ ಮೀಟಿಂಗ್ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ಪ್ರತಿ ತಿಂಗಳು ವರದಿ ನೀಡುವಂತೆ ತಿಳಿಸಿದರು. ಪ್ರತಿ ಜೈನ್ ಮಿಲನ್ ಗೆ 25 ಜನರನ್ನು ನೇಮಿಸಿ ಹೆಚ್ಚು ಹೆಚ್ಚು ಮಿಲನ್ ಗಳನ್ನು ಪ್ರಾರಂಭಿಸುವಂತೆ ತಿಳಿಸಿದರು. ಮಿಲನ್ ನಿಂದ ಒಂದು ವರ್ಷ ಕಾರ್ಯಕ್ರಮಗಳ ಯೋಜನೆಯನ್ನ ಸಿದ್ಧಪಡಿಸಿಕೊಳ್ಳುವಂತೆ ಕರೆ ನೀಡಿದ ಅವರು ,ಯಾವುದಕ್ಕೂ ಸಮಯಪ್ರಜ್ಞೆ ಅಗತ್ಯ ಎಂದರು. ಸಭೆಯ ಪ್ರಾರಂಭದಲ್ಲಿ ಧ್ಯೇಯಗೀತೆ ಆಡಬೇಕು ಎಂದು ಸಲಹೆ ನೀಡಿದರು. ಸಾಮೂಹಿಕ ದೀಪ ಪ್ರಜ್ವಲನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿಜಯ್ ರವಿರಾಜ್ ಹಿಂದಿನ ಸಾಲಿನ ವರದಿ ಮಂಡಿಸಿದರು. ರಾಣಿ ಪ್ರಫುಲ್ಲ ರತ್ನತ್ರೆಯ ಜೈನ್ ಮಿಲನ ವರದಿ ಮಂಡಿಸಿದರು. ಅನಂತ ಕುಮಾರಿ ಮಕರ ಸಂಕ್ರಮಣದ ಬಗ್ಗೆ ತಿಳಿಸಿದರು. ಶ್ವೇತ ನವೀನ ರತ್ನತ್ರೆಯ ಜೈನ್ ಮಿಲನ ಬಗ್ಗೆ ವಾರ್ಷಿಕ ವರದಿ ಮಂಡಿಸಿದರು. ಇದೇ ಸಂದರ್ಭದಲ್ಲಿ ಮೂರು ಜೈನ್ ಮಿಲನ್ ಸದಸ್ಯರುಗಳು ಹುಟ್ಟುಹಬ್ಬ, ಮದುವೆ, ವಾರ್ಷಿಕೋತ್ಸವಗಳನ್ನು ಆಚರಿಸಿಕೊಂಡರು. ಕಾರ್ಯಕ್ರಮದಲ್ಲಿ ಕರ್ನಾಟಕ ಜೈನ್ ಅಸೋಸಿಯೇಷನ್ ಕಾರ್ಯಕಾರಿ ಸಮಿತಿ ಸದಸ್ಯರಾದ ಕಲಾವಿದ ಚಿತ್ತಾ. ಎಂ. ಜಿನೇಂದ್ರ, ಕೋಮಲ ಬ್ರಹ್ಮದೇವಯ್ಯ, ಡಾ.ನಾಗೇಂದ್ರ ಕುಮಾರ್, ಪ್ರೀತಮ್ ಹರ್ಷ, ಡಾ. ನವೀನ್ ಕುಮಾರ್ ಜೈನ್ ಇನ್ನಿತರರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕರ್ನಾಟಕ ಜೈನ್ ಅಸೋಸಿಯೇಷನ್ ಗೆ ಆಯ್ಕೆಯಾದ ಗಣ್ಯರನ್ನು ಸನ್ಮಾನಿಸಲಾಯಿತು. ಅವನಿ ಜೈನ್ ಪ್ರಾರ್ಥಿಸಿದರು. ಸುಧ ಸುರೇಶ್ ಸ್ವಾಗತಿಸಿದರು. ಸುಖಾನಂದ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೇಮಾ ಸುಖಾನಂದ ಕಾರ್ಯಕ್ರಮ ನಿರೂಪಿಸಿದರು. ವಾಣಿ ಭರತ್ ವಂದಿಸಿದರು. ವರದಿ - ಜೆ ರಂಗನಾಥ, ತುಮಕೂರು

ಧಾರ್ಮಿಕ ಚಿಂತಕರಾದ ನಿರಂಜನ್ ಜೈನ್ ಕುದ್ಯಾಡಿ ಅವರಿಗೆ ಸನ್ಮಾನ

Article Image

ಧಾರ್ಮಿಕ ಚಿಂತಕರಾದ ನಿರಂಜನ್ ಜೈನ್ ಕುದ್ಯಾಡಿ ಅವರಿಗೆ ಸನ್ಮಾನ

ಮೈಸೂರಿನ ಗೊಮ್ಮಟಗಿರಿಯಲ್ಲಿ ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಅಮೃತ ಮಹೋತ್ಸವ ಕಾರ‍್ಯಕ್ರಮದಲ್ಲಿ ಧಾರ್ಮಿಕ ಚಿಂತಕರಾದ ನಿರಂಜನ್ ಜೈನ್ ಕುದ್ಯಾಡಿ ಅವರನ್ನು ಹೊಂಬುಜ ಹಾಗೂ ಕನಕಗಿರಿ ಜೈನ ಮಠದ ಸ್ವಾಮೀಜಿಗಳು ಅಮೃತ ಮಹೋತ್ಸವದ ಪದಾಧಿಕಾರಿಗಳ ಜೊತೆ ಸನ್ಮಾನಿಸಿದರು.

ಹುಬ್ಬಳ್ಳಿ ಜೈನ ಬೋರ್ಡಿಂಗ್ ನಲ್ಲಿ ರತ್ನತ್ರಯ ವಿಧಾನ ಮತ್ತು ಮೃತ್ಯುಂಜಯ ಆರಾಧನಾ ಕಾರ್ಯಕ್ರಮ

Article Image

ಹುಬ್ಬಳ್ಳಿ ಜೈನ ಬೋರ್ಡಿಂಗ್ ನಲ್ಲಿ ರತ್ನತ್ರಯ ವಿಧಾನ ಮತ್ತು ಮೃತ್ಯುಂಜಯ ಆರಾಧನಾ ಕಾರ್ಯಕ್ರಮ

ಹುಬ್ಬಳ್ಳಿ ಜೈನ ಬೋರ್ಡಿಂಗ್ ನಲ್ಲಿ ಚಾತುರ್ಮಾಸ ಅನುಷ್ಠಾನದಲ್ಲಿರುವ ಪರಮ ಪೂಜ್ಯ ವಾತ್ಸಲ್ಯ ಮೂರ್ತಿ ಪುಣ್ಯಸಾಗರ್ ಮಹಾರಾಜರ ಸಾನಿಧ್ಯದಲ್ಲಿ ರವಿವಾರ ಜರುಗಿದ "ರತ್ನತ್ರಯ ವಿಧಾನ ಮತ್ತು ಮೃತ್ಯುಂಜಯ ಆರಾಧನಾ" ಕಾರ್ಯಕ್ರಮದಲ್ಲಿ ರಾಜ್ಯದ ಸಚಿವರಾದ ಸನ್ಮಾನ್ಯ ಡಿ. ಸುಧಾಕರ್ ಇವರು ಭಾಗಿಯಾಗಿ ಪೂಜ್ಯರ ಆಶೀರ್ವಾದ ಪಡೆದರು. ದಿಗಂಬರ ಜೈನ್ ಬೋರ್ಡಿಂಗ್ ವತಿಯಿಂದ ಅಧ್ಯಕ್ಷರಾದ ವಿದ್ಯಾದರ ಪಾಟೀಲ ಹಾಗೂ ಕಮಿಟಿ ಸದಸ್ಯರು ಸಚಿವರನ್ನು ಸನ್ಮಾನಿಸಿ ಜೈನ ಸಮುದಾಯದ ಬಹುದಿನಗಳ ಬೇಡಿಕೆಯಾದ "ಜೈನ್ ಅಭಿವೃದ್ಧಿ ನಿಗಮ" ಸ್ಥಾಪಿಸುವ ಕುರಿತು ಮನವಿ ಸಲ್ಲಿಸಿ ಆದಷ್ಟು ಬೇಗ ಅನುಷ್ಠಾನಗೊಳಿಸಲು ವಿನಂತಿಸಲಾಯಿತು. ಈ ಸಂದರ್ಭದಲ್ಲಿ ಆರ್ ಟಿ ತನ್ನಪ್ಪನವರ, ಜಿ ಜಿ ಲೋಬೋಗೋಳ, ಸುಭದ್ರಮ್ಮ ಮುತ್ತಿನ, ದೇವೇಂದ್ರಪ್ಪ ಕಾಗೆನವರ, ವಿಮಲ ಚಂದ ಸಂಗಮಿ, ಪ್ರಶಾಂತ್ ಬಿ ಶೆಟ್ಟಿ , ಸ್ಮಿತಾ ವಾಕಳೆ, ಮಹಾವೀರ ಮಣಕಟ್ಟಿ, ಮಹಾವೀರ ಕಂಚಗಾರ ಉದಯ್ ಧಡೋತಿ, ಪಂಕಜಾ ಸೂಜಿ, ಹಾಗೂ ಸಮಾಜದ ಶ್ರಾವಕ-ಶ್ರಾವಕಿಯರು ಹಾಜರಿದ್ದರು. ವರದಿ : ಎಸ್. ಆರ್. ಮಲ್ಲಸಮುದ್ರ

ಬೆಳ್ತಂಗಡಿ: ಭಾರತೀಯ ಜೈನ್ ಮಿಲನ್ ವಲಯ 8 ಸಭೆ

Article Image

ಬೆಳ್ತಂಗಡಿ: ಭಾರತೀಯ ಜೈನ್ ಮಿಲನ್ ವಲಯ 8 ಸಭೆ

ಬೆಳ್ತಂಗಡಿ: ಭಾರತೀಯ ಜೈನ್ ಮಿಲನ್ ವಲಯ 8-ಜಿನ ಭಜನಾ ಸೀಸನ್ 8 ಇದರ ಮಂಗಳೂರು ವಿಭಾಗದ ಜಿನ ಭಜನಾ ಸ್ಪರ್ಧೆ ಬೆಳ್ತಂಗಡಿ ಜೈನ್ ಮಿಲನ್ ವತಿಯಿಂದ, ಶ್ರೀ ಮಂಜುನಾಥ ಸ್ವಾಮಿ ಕಲಾ ಮಂಟಪ ಬೆಳ್ತಂಗಡಿಯಲ್ಲಿ ನವೆಂಬರ್ ತಿಂಗಳ 24 ಭಾನುವಾರ ಜರಗಲಿದೆ. ಡಿ, ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್ ಅವರ ಮಾರ್ಗದರ್ಶನದಂತೆ ಸಮಾಲೋಚನಾ ಸಭೆ ಉಜಿರೆಯಲ್ಲಿ ಜರಗಿತು. ವಲಯ ಉಪಾಧ್ಯಕ್ಷರಾದ ಸುದರ್ಶನ್ ಜೈನ್, ಸೋನಿಯಾ ಯಶೋವರ್ಮ, ಪೂರನ್ ವರ್ಮ, ವಿಭಾಗ ಕಾರ್ಯದರ್ಶಿ ಸುಭಾಶ್ಚಂದ್ರ, ವೇಣೂರು ತೀರ್ಥ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಪ್ರವೀಣ್ ಕುಮಾರ್, ವಲಯ ನಿರ್ದೇಶಕರಾದ ಬಿ.ಸೋಮಶೇಖರ್ ಶೆಟ್ಟಿ, ಪ್ರಮೋದ್ ಕುಮಾರ್, ರಾಜಶ್ರೀ ಸುದರ್ಶನ್ ಮತ್ತು ತ್ರಿಶಾಲ ಉದಯಕುಮಾರ್ ಮಲ್ಲ, ರಜತ ಪಿ. ಶೆಟ್ಟಿ,ಪೂರ್ವ ಅಧ್ಯಕ್ಷರು, ವೀರ ವೀರಾಂಗನೆಯರು ಭಾಗವಹಿಸಿದ್ದರು. ಸಭೆಯ ಅಧ್ಯಕ್ಷತೆಯನ್ನು ಡಾಕ್ಟರ್ ನವೀನ್ ಕುಮಾರ್ ಜೈನ್ ವಹಿಸಿದ್ದರು. ಕಾರ್ಯದರ್ಶಿ ಸಂಪತ್ ಕುಮಾರ್, ಖಜಾಂಜಿ ನಿಖಿತ್ ಕುಮಾರ್, ಧೀಮತಿ ಮಹಿಳಾ ಸಮಾಜದ ಸದಸ್ಯೆಯರು ಭಾಗವಹಿಸಿ ಕಾರ್ಯಕ್ರಮ ಯಶಸ್ಸಿನ ಬಗ್ಗೆ ಚರ್ಚಿಸಲಾಯಿತು. ಕಾರ್ಯಕ್ರಮದ ನಿರ್ವಹಣೆಗೆ ವಿವಿಧ ಸಮಿತಿಗಳನ್ನು ರಚಿಸಲಾಯಿತು ಶಾಂತಿ ಮಂತ್ರದೊಂದಿಗೆ ಸಭೆ ಮುಕ್ತಾಯಗೊಂಡಿತು.

ಸತ್ತೂರು, ಧಾರವಾಡ: ವಿಶ್ವ ಶರೀರ ರಚನಾಶಾಸ್ತ್ರ ದಿನ ಆಚರಣೆ

Article Image

ಸತ್ತೂರು, ಧಾರವಾಡ: ವಿಶ್ವ ಶರೀರ ರಚನಾಶಾಸ್ತ್ರ ದಿನ ಆಚರಣೆ

ಸತ್ತೂರು, ಧಾರವಾಡ: ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಶರೀರ ರಚನಾಶಾಸ್ತ್ರ ವಿಭಾಗದಿಂದ “ವಿಶ್ವ ಶರೀರ ರಚನಾಶಾಸ್ತ್ರ ದಿನ”ವನ್ನು ಅಕ್ಟೋಬರ್ 18, 2024 ರಂದು ಆಚರಿಸಲಾಯಿತು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ. ವೀರೇಶ ಕುಮಾರ ಶಿರೋಳ, ಹಿರಿಯ ಪ್ರಾಧ್ಯಾಪಕರು, ಶರೀರ ರಚನಾ ಶಾಸ್ತ್ರ ವಿಭಾಗ, ಜೆ.ಎನ್.ಎಂ.ಸಿ., ಬೆಳಗಾವಿ ಅವರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದು ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ: ತಮ್ಮ ಕಲಿಕೆಗೆ ಮಿಸಲಿಟ್ಟ ಶವವನ್ನು ತಮ್ಮ ಶಿಕ್ಷಕರೆಂದು ಪರಿಗಣಿಸಬೇಕು, ಏಕೆಂದರೆ ಅದು ಮಾನವ ದೇಹದ ಒಳನೋಟಗಳನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತದೆ. ದೇಹ ದಾನಿಗಳ ಅವರ ಉದಾತ್ತ ನಿರ್ಧಾರವನ್ನು ಗುರುತಿಸಿ ಗೌರವಿಸಬೇಕು. ವಿದ್ಯಾರ್ಥಿಗಳು ತಮ್ಮ ವೈದ್ಯಕೀಯ ವೃತ್ತಿಯನ್ನು ಆರಂಭದಿಂದಲೇ ಗಂಭೀರವಾಗಿ ಪರಿಗಣಿಸಬೇಕು. ವೈದ್ಯಕೀಯ ವಿದ್ಯಾರ್ಥಿಗಳ ಕಠಿಣ ಪರಿಶ್ರಮವು ಅವರನ್ನು ಉತ್ತಮ ವೃತ್ತಿಪರರನ್ನಾಗಿ ಮಾಡುತ್ತದೆ. ಈ ಸಂದರ್ಭದಲ್ಲಿ 3 ಹಿರಿಯ ಶರೀರ ರಚನಾ ಶಾಸ್ತ್ರಜ್ಞರಾದ ಡಾ. ವೀರೇಶ ಕುಮಾರ ಶಿರೋಳ, ಡಾ. ಎ. ವಿ. ಕುಲಕರ್ಣಿ ಮತ್ತು ಡಾ. ಎಸ್. ಕೆ. ದೇಶಪಾಂಡೆ ಅವರನ್ನು ಸನ್ಮಾನಿಸಲಾಯಿತು. ಶರೀರ ರಚನಾಶಾಸ್ತ್ರ ದಿನದ ಅಂಗವಾಗಿ ಶರೀರ ರಚನಾಶಾಸ್ತ್ರದ ಮಾದರಿ ಪ್ರದರ್ಶನ ಮತ್ತು ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್, ಸಹ ಉಪ ಕುಲತಿಗಳಾದ ವಿ. ಜೀವಂಧರ ಕುಮಾರ, ಕುಲಸಚಿವರಾದ ಡಾ. ಚಿದೇಂದ್ರ ಶೆಟ್ಟರ, ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ರತ್ನಮಾಲಾ ದೇಸಾಯಿ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ. ವೀಣಾ ಕುಲಕರ್ಣಿ, ಅತಿಥಿಗಳನ್ನು ಸ್ವಾಗತಿಸಿದರು. ಡಾ. ಸುರೇಶ ಮನಗುತ್ತಿ ಸನ್ಮಾನಿತರನ್ನು ಪರಿಚಯಿಸಿದರು. ಡಾ. ವಿನಯ ಕುಲಕರ್ಣಿ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ರೋಶನಿ ಸದಾಶಿವ ವಂದನಾರ್ಪಣೆ ಸಲ್ಲಿಸಿದರು.

ಶ್ರೀ ಬಾಹುಬಲಿ ಶ್ರಾವಿಕಾಶ್ರಮದಲ್ಲಿ ದಶ ಲಕ್ಷಣ ಮಹಾಪರ್ವದ ಆಚರಣೆ

Article Image

ಶ್ರೀ ಬಾಹುಬಲಿ ಶ್ರಾವಿಕಾಶ್ರಮದಲ್ಲಿ ದಶ ಲಕ್ಷಣ ಮಹಾಪರ್ವದ ಆಚರಣೆ

ಪ.ಪೂ.ಸ್ವಸ್ತಿ ಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು, ಶ್ರೀ ಜೈನ ಮಠ, ಕಾರ್ಕಳ, ಇವರ ಪಾವನ ಸಾನಿಧ್ಯ, ಪೂಜ್ಯ ಖಾವಂದರ ಆಶೀರ್ವಾದ ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರ ಮಾರ್ಗದರ್ಶನದಂತೆ ಶ್ರೀ ಬಾಹುಬಲಿ ಶ್ರಾವಿಕಾಶ್ರಮದಲ್ಲಿ ದಶಲಕ್ಷಣ ಮಹಾಪರ್ವವು ಹತ್ತು ದಿನಗಳ ಪರ್ಯಂತ ಅಷ್ಟವಿಧಾರ್ಚನೆ ಪೂಜಾವಿಧಿಗಳೊಂದಿಗೆ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಮಠದ ವ್ಯವಸ್ಥಾಪಕರಾದ ಧನಕೀರ್ತಿ ಕಡಂಬರು ಉಪಾಹಾರದ ವ್ಯವಸ್ಥೆಯನ್ನು ಮಾಡಿದ್ದಲ್ಲದೆ, ಶ್ರೀ ಬಾಹುಬಲಿ ಶ್ರಾವಿಕಾಶ್ರಮದ ಅಭಿವೃದ್ಧಿ ಕಾರ್ಯಗಳಿಗಾಗಿ ರೂ. ಒಂದು ಲಕ್ಷದ ಹನ್ನೊಂದು ಸಾವಿರದ ನೂರ ಹನ್ನೊಂದುದನ್ನು ದಾನವಾಗಿ ನೀಡಿದ್ದಾರೆ. ಇವರನ್ನು ಶ್ರೀ ಬಾಹುಬಲಿ ಶ್ರಾವಿಕಾಶ್ರಮದ ಆಡಳಿತ ಮಂಡಳಿಯ ಕಾರ್ಯದರ್ಶಿಯವರಾದ ಶಿಶುಪಾಲ ಪೂವಣಿಯವರು ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ಸನ್ಮಾನಿಸಿದರು. ಡಾ. ಭರತೇಶ್ ರವರು, ಊರಿನ ಸದ್ಧರ್ಮ ಬಂಧುಗಳು ಮತ್ತು ಆಡಳಿತ ಮಂಡಳಿಯ ಸದಸ್ಯರೆಲ್ಲಾ ಉಪಸ್ಥಿತರಿದ್ದರು.

ಮೈಸೂರು: ಜೈನಾಲಜಿ ಮತ್ತು ಪ್ರಾಕೃತ ವಿಭಾಗ ಮುಂದುವರಿಸುವಂತೆ ಆಗ್ರಹ

Article Image

ಮೈಸೂರು: ಜೈನಾಲಜಿ ಮತ್ತು ಪ್ರಾಕೃತ ವಿಭಾಗ ಮುಂದುವರಿಸುವಂತೆ ಆಗ್ರಹ

ಮೈಸೂರು ವಿಶ್ವವಿದ್ಯಾಲಯದಲ್ಲಿ ಜೈನಾಲಜಿ ಮತ್ತು ಪ್ರಾಕೃತ ವಿಭಾಗವನ್ನು ಮುಂದುವರಿಸುವಂತೆ ಆಗ್ರಹಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದ ಸುಪ್ರಿಯಾ ಹರ್ಷೇಂದ್ರ ಹೆಗಡೆ ನೇತೃತ್ವದಲ್ಲಿ ಇಂದು ಉಪಕುಲಪತಿ ಲೋಕನಾಥ್ ರವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಾಯಿತು. ನಿಯೋಗದಲ್ಲಿ ಜಯಶ್ರೀ, ಪದ್ಮಪ್ರಸಾದ್, ಭಾರತೀಯ ಜೈನ್ ಮಿಲನ್ ಅಧ್ಯಕ್ಷ ಯುವರಾಜ್ ಭಂಡಾರಿ, ಗೌರವ ಅಧ್ಯಕ್ಷರಾದ ಶೀಲಾ ಅನಂತರಾಜು, ಪ್ರಧಾನ ಕಾರ್ಯದರ್ಶಿ ರತ್ನರಾಜು, ಖಜಾಂಚಿ ಚಂದ್ರಶೇಖರ ಅರಿಗ, ಜಂಟಿ ಕಾರ್ಯದರ್ಶಿ ಪ್ರಶಾಂತ್, ಮೈಸೂರು ವಿಭಾಗದ ಉಪಾಧ್ಯಕ್ಷ ನಾಗರಾಜು, ಕಾರ್ಯದರ್ಶಿ ಚಂದ್ರು ಪ್ರಕಾಶ್, ಅರುಣಾಚಂದ್ರ ಪ್ರಕಾಶ್, ಪದ್ಮಶ್ರೀ ಮಹಿಳಾ ಸಮಾಜದ ಅಧ್ಯಕ್ಷರಾದ ಲತಾ ಸುದರ್ಶನ್, ಜಂಟಿ ಕಾರ್ಯದರ್ಶಿ ಸಿಂಧೂ ಅರುಣ್, ಕರ್ನಾಟಕ ಜೈನ ತೀರ್ಥಕ್ಷೇತ್ರ ಕಮಿಟಿ ಅಧ್ಯಕ್ಷ ವಿನೋದ್ ಬಾಕ್ಲಿವಾಲ, ಶ್ವೇತಾಂಬರ ಮೂರ್ತಿ ಪೂಜಕ್ ಸಂಘದ ಅಧ್ಯಕ್ಷ ಬೇರು ಲಾಲ್, ಟ್ರಸ್ಟಿಗಳಾದ ಹನ್ಸರಾಜ್, ದೇವಿ ಚಂದ, ಚಂಪಾಲಾಲ್, ಪ್ರೊ. ಶುಭಚಂದ್ರ ಭಾಗವಹಿಸಿದ್ದರು. ಜೆ.ರಂಗನಾಥ ತುಮಕೂರು

ರತ್ನತ್ರಯ ಜೈನ ಮಿಲನ್ ಮಾಸಿಕ ಸಭೆ

Article Image

ರತ್ನತ್ರಯ ಜೈನ ಮಿಲನ್ ಮಾಸಿಕ ಸಭೆ

ಬೆಂಗಳೂರು: ರತ್ನತ್ರಯ ಜೈನ ಮಿಲನ್ ಮಾಸಿಕ ಸಭೆಯು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲ್ಯಾಣ ಮಂಟಪ, ಬೆಂಗಳೂರಿನಲ್ಲಿ ಇತ್ತೀಚೆಗೆ ಜರುಗಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎ.ವಿ. ಪದ್ಮನಿಯವರು "ಲೇಶ್ಯಗಳ" ಬಗ್ಗೆ ಉಪನ್ಯಾಸ ನೀಡಿದರು. ಶೋಭಿತ ನವೀನ್ ಅವರು ಪರ್ವವಾಚನ ಮಾಡಿದರು. ಸುಗುಣರವರು ರತ್ನತ್ರಯ ಮಿಲನದ ಉದ್ದೇಶಗಳನ್ನು ತಿಳಿಸಿದರು. ಪದ್ಮಾ ಸೂರಿಯವರು. ವಿವಾಹ ವಾರ್ಷಿಕ ಹಾಗೂ ಹುಟ್ಟುಹಬ್ಬ ಆಚರಿಸಿಕೊಂಡ ರತ್ನತ್ರಯ ಮಿಲನ ಸದಸ್ಯರಿಗೆ ಶುಭ ಕೋರಿದರು. ಶೋಭಾ ಪಾಟೀಲ್, ತ್ರಿಕಾಲ ತೀರ್ಥಂಕರರ ಹೆಸರುಗಳನ್ನು ವಾಚಿಸಿದರು. ಮಹಾವೀರ ಕುಮಾರವರು ರತ್ನತ್ರಯ ಮಿಲನಿನ ನಡಾವಳಿಯನ್ನು ವಾಚಿಸಿದರು. ರಾಣಿ ಪ್ರಫುಲ್ಲ ಅವರು ಅತಿಥಿಗಳನ್ನು ಪರಿಚಯ ಮಾಡಿದರು. ಅನಂತಕುಮಾರಿಯವರು, ಅಗಲಿದ ಕಮಲಾ ಹಂಪನಾ ಅವರ ಕುರಿತಾದ ಸ್ವರಚಿತ ಕವನ ವಾಚನ ಮಾಡುವುದರ ಮುಖೇನ ಶ್ರದ್ಧಾಂಜಲಿ ಅರ್ಪಿಸಿದರು. ನವೀನ್ ಕುಮಾರ್ ಗುಬ್ಬಿಯವರು ಅಧ್ಯಕ್ಷರ ನುಡಿಗಳನ್ನಾಡಿದರು. ಚಂದನ ಸುರೇಂದ್ರ ಅವರು ಕಾರ್ಯಕ್ರಮದ ಆತಿಥ್ಯವನ್ನು ವಹಿಸಿಕೊಂಡಿದ್ದರು. ಚಂದನಾದೇವಿ ಅವರು ಪಾರ್ಥಿಸಿ, ಶಿಲ್ಪಾ ಸುರೇಂದ್ರ ಅವರು ಸ್ವಾಗತಿಸಿದರು, ಉಷಾ ಮಹಾವೀರ್ ಅವರು ವಂದಿಸಿದರು. ಅನಂತಕುಮಾರಿ ಅವರು ಕಾರ್ಯಕ್ರಮ ನಿರೂಪಿಸಿದರು.

ಸತ್ತೂರು, ಧಾರವಾಡ: ಡಾ. ಎಸ್.ಕೆ ಜೋಶಿ ಅವರಿಗೆ ಬಿಳ್ಕೋಡುಗೆ ಸಮಾರಂಭ

Article Image

ಸತ್ತೂರು, ಧಾರವಾಡ: ಡಾ. ಎಸ್.ಕೆ ಜೋಶಿ ಅವರಿಗೆ ಬಿಳ್ಕೋಡುಗೆ ಸಮಾರಂಭ

ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಹಿರಿಯ ರೇಡಿಯಾಲಜಿ ಪ್ರಾಧ್ಯಾಪಕರು ಮತ್ತು ಮಾಜಿ ಪ್ರಾಂಶುಪಾಲರು ಹಾಗೂ ವಿಶ್ವವಿದ್ಯಾಲಯದ ಸಹ ಉಪ ಕುಲಪತಿಗಳಾದ ಡಾ. ಎಸ್.ಕೆ ಜೋಶಿಯವರು ಸೇವಾ ನಿವೃತ್ತಿ ಹೊಂದಿದ ಸಂಧರ್ಭದಲ್ಲಿ ಇತ್ತೀಚಿಗೆ ಅವರನ್ನು ಬೀಳ್ಕೋಡಲಾಯಿತು. ಸುಮಾರು 21 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಹಾಗೂ ಸಹ ಉಪ ಕುಲಪತಿಗಳಾಗಿ ಅನನ್ಯ ಕೊಡುಗೆಯನ್ನು ನೀಡಿದ ಡಾ. ಎಸ್.ಕೆ ಜೋಶಿ ಅವರ ಸೇವೆಯನ್ನು ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ ಶ್ಲಾಘಿಸಿದರು ಮತ್ತು ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಬೆಳವಣಿಗೆಗೆ ಅವರ ಸೇವೆ ಅಪಾರ ಕೊಡುಗೆ ನೀಡಿದೆ ಎಂದು ಹೇಳಿದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್, ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ, ಸಹ ಉಪಕುಲಪತಿಗಳಾದ ವಿ. ಜೀವಂಧರ ಕುಮಾರ, ಹಣಕಾಸು ಅಧಿಕಾರಿಯಾದ ವಿ. ಜಿ. ಪ್ರಭು ಅವರು ಡಾ. ಎಸ್.ಕೆ ಜೋಶಿ ಅವರಿಗೆ ಸನ್ಮಾನ ಪತ್ರ, ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು. ಡಾ. ಎಸ್.ಕೆ ಜೋಶಿಯವರು ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ತಾವು ಎಸ್.ಡಿಎಂ. ಸಂಸ್ಥೆಗೆ ಸೇರುವಾಗ ಆಡಳಿತ ಮಂಡಳಿಯವರ ಮಾಡಿದ ಸಹಕಾರವನ್ನು ಸ್ಮರಿಸಿಕೊಂಡರು. ತಮ್ಮ ಸುದೀರ್ಘ 21 ವರ್ಷಗಳ ಸೇವೆಗೆ ಅನುವು ಮಾಡಿಕೊಟ್ಟ ಕುಲಪತಿಗಳು, ಉಪ ಕಲಪತಿಗಳು ಮತ್ತಿತರೆಲ್ಲರಿಗೂ ತಮ್ಮ ಕೃತಜ್ಞತೆಯನ್ನು ಹೇಳಿದರು. ತಾವು ಸಂಸ್ಥೆಯಿಂದ ನಿರ್ಗಮಿಸುತ್ತಿರುವ ಈ ಸಂದರ್ಭದಲ್ಲಿ ಎಸ್.ಡಿಎಂ. ಸಂಸ್ಥೆಗಳು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಅಂಗ ಸಂಸ್ಥೆಗಳ ಮುಖ್ಯಸ್ಥರುಗಳು, ವೈದ್ಯಕೀಯ ಅಧೀಕ್ಷಕರು, ಉಪ ವೈದ್ಯಕೀಯ ಅಧೀಕ್ಷಕರು, ಶೂಶ್ರುಷಕ ಅಧೀಕ್ಷಕರು ಮತ್ತು ವೈದ್ಯಕೀಯ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ರತ್ನಮಾಲಾ ದೇಸಾಯಿ ಮತ್ತು ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಡಾ. ನರೇಂದ್ರ ಶಾ ಅವರು ಡಾ. ಎಸ್.ಕೆ. ಜೋಶಿ ಅವರ ಸಮರ್ಪಣಾ ಸೇವೆ ಮತ್ತು ಅವರು ಕಾಲೇಜಿನಲ್ಲಿ ಅನುಸರಿಸಿದ ಶಿಸ್ತು ಬದ್ದತೆಯನ್ನು ಸ್ಮರಿಸಿದರು. ಉಪ ಕುಲಸಚಿವರಾದ ಡಾ. ಅಜಂತಾ ಜಿ.ಎಸ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ಡಾ. ವಿನುತಾ ಚಿಕ್ಕಮಠ್ ಕಾರ್ಯಕ್ರಮವನ್ನು ನಿರೂಪಿಸಿದರು. ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ಬಾಬಣ್ಣ ಶೆಟ್ಟಿಗಾರ್ ವಂದನಾರ್ಪಣೆ ಸಲ್ಲಿಸಿದರು.

ಮುನಿಶ್ರೀ ಪುಣ್ಯಸಾಗರ ಮಹಾರಾಜರ ಆಶೀರ್ವಾದ ಪಡೆದ ಧರ್ಮಸ್ಥಳದ ಹೆಗ್ಗಡೆ ಸಹೋದರರು

Article Image

ಮುನಿಶ್ರೀ ಪುಣ್ಯಸಾಗರ ಮಹಾರಾಜರ ಆಶೀರ್ವಾದ ಪಡೆದ ಧರ್ಮಸ್ಥಳದ ಹೆಗ್ಗಡೆ ಸಹೋದರರು

ಹುಬ್ಬಳ್ಳಿ ದಿಗಂಬರ ಜೈನ ಬೋರ್ಡಿಂಗಿನಲ್ಲಿ ಚಾತುರ್ಮಾಸ ನಿರತ ಮುನಿಶ್ರೀ ಪುಣ್ಯಸಾಗರ ಮಹಾರಾಜರ ದರ್ಶನಕ್ಕಾಗಿ ಧರ್ಮಸ್ಥಳ ಧರ್ಮಾಧಿಕಾರಿ ರಾಜರ್ಷಿ ಡಾ ವೀರೇಂದ್ರ ಹೆಗ್ಗಡೆ ಮತ್ತು ಶ್ರೀ ಸುರೇಂದ್ರ ಹೆಗಡೆಯವರು ಇಂದು ನಗರಕ್ಕೆ ಆಗಮಿಸಿ ಪೂಜ್ಯರಿಂದ ಆಶೀರ್ವಾದ ಪಡೆದರು. ಈ ಸಂಧರ್ಭದಲ್ಲಿ ಧಾರ್ಮಿಕ ಚರ್ಚೆಗಳನ್ನೂ ಮಾಡಿದ ಹೆಗ್ಗಡೆ ಸಹೋದರರು ಇಲ್ಲಿ ನಡೆದಿರುವ ವರ್ಷಾಯೋಗ ಧಾರ್ಮಿಕ ಪ್ರಭಾವನೆಗೆ ಪ್ರೇರಕವಾಗಿದೆ ಎಂದು ತಿಳಿಸಿ ಅತ್ಯಂತ ಹರ್ಷ ವ್ಯಕ್ತಪಡಿಸಿದರು. ಪೂಜ್ಯ ಶ್ರೀ ಹೆಗ್ಗಡೆ ಸಹೋದರರನ್ನು ದಿಗಂಬರ ಜೈನ ಬೋರ್ಡಿಂಗ ಆಡಳಿತಮಂಡಳಿ ಸದಸ್ಯರು ಸನ್ಮಾನಿಸಿ ಗೌರವಿಸಿದರು, ಈ ಸಂದರ್ಭದಲ್ಲಿ ದಿಗಂಬರ ಜೈನ ಬೋರ್ಡಿಂಗ ಅಧ್ಯಕ್ಷ ವಿದ್ಯಾಧರ್ ಪಾಟೀಲ, ಆರ್ ಟಿ ತವನಪ್ಪನವರ, ದೇವೇಂದ್ರಪ್ಪ ಕಾಗೇನವರ, ಜಿ ಜಿ ಲೋಗೋಳ, ವಿಮಲಚಂದ ಸಂಗಮಿ, ಪ್ರಶಾಂತ್ ಬಿಶೆಟ್ಟಿ, ಮಹಾವೀರ ಮಣಕಟ್ಟಿ, ಸಂತೋಷಕುಮಾರ ಮುರಗಿ ಪಾಟಿಲ, ಭರತ ಬೀಳಗಿ, ಮಹಿಳಾ ಅಧ್ಯಕ್ಷರಾದ ಸ್ಮಿತಾ ವಾಕಳೆ, ಎ ಎಸ್ ಪಾಟೀಲ, ಮನ್ಮತ ಕ್ಯಾಸಾ, ತ್ರಿಶಲಾ ಮಾಲಗತ್ತಿ ಮತ್ತು ಎಸ್ ಡಿ ಎಂನ ಕಾರ್ಯದರ್ಶಿ ಜೀವoದರಕುಮಾರ ಹಾಗೂ ಹಲವಾರು ಶ್ರಾವಕ ಶ್ರಾವಕಿಯರು ಉಪಸ್ಥಿತರಿದ್ದರು. ವರದಿ: ಎಸ್ ಆರ್ ಮಲ್ಲಸಮುದ್ರ

ಉಜಿರೆ: ಜೈನ್ ಮಿಲನ್ ಆಹಾರೋತ್ಸವ

Article Image

ಉಜಿರೆ: ಜೈನ್ ಮಿಲನ್ ಆಹಾರೋತ್ಸವ

ಭಾರತೀಯ ಜೈನ್ ಮಿಲನ್,ಬೆಳ್ತಂಗಡಿ ಹಾಗೂ ಧೀಮತಿ ಮಹಿಳಾ ಸಂಘ , ಉಜಿರೆ ಜಂಟಿ ಆಶ್ರಯದಲ್ಲಿ ನಡೆದ ಆಷಾಡ ಮಾಸದ ವಿಶೇಷ ಆಹಾರೋತ್ಸವ ಕಾರ್ಯಕ್ರಮ ಅರ್ಥ ಪೂರ್ಣವಾಗಿ ಜರಗಿತು, ಈ ಕಾರ್ಯಕ್ರಮವನ್ನು ಎರಡೂ ಸಂಸ್ಥೆಗಳ ಗೌರವ ಸಲಹೆಗಾರ ರಾಗಿರುವ ಸೋನಿಯಾ ಯಶೋವರ್ಮ ಅವರು ಚೆನ್ನೆ ಮಣೆ ಆಡುವ ಮೂಲಕ ಉದ್ಘಾಟಿಸಿ, ನಮ್ಮ ಸಂಸ್ಕೃತಿ, ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಈ ಕಾರ್ಯಕ್ರಮದ ಮೂಲಕ ಆಗುತ್ತಿದೆ, ಔಷಧೀಯ ಗುಣ ಇರುವ ಕಾಲ ಕಾಲಕ್ಕೆ ಹೊಂದುವ, ದೊರೆಯುವ ಪದಾರ್ಥ ವಸ್ತುಗಳನ್ನು ಉಪಯೋಗಿಸುವಂತೆ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಲಯ ನಿರ್ದೇಶಕರಾದ ಬಿ. ಪ್ರಮೋದ್ ಕುಮಾರ್, ಪ್ರಾಂಶುಪಾಲರು ಮಾತನಾಡಿ ವರ್ಷದ ಪ್ರತಿ ತಿಂಗಳಿಗೂ ಅದರದ್ದೇ ಆದ ಮಹತ್ವ ಇದೆ, ಆಷಾಡ ಮಾಸದ ವಿಶೇಷ ಗಳನ್ನು,ಮುಂದಿನ ಜನಾಂಗ ಅರಿತು ನಮ್ಮ ಪರಂಪರೆಯನ್ನು ಬೆಳೆಸಿಕೊಂಡು ಹೋಗಲು ಇಂತಹ ಕಾರ್ಯಕ್ರಮ ಅವಶ್ಯಕ ಎಂದು ತಿಳಿಸಿದರು. ಇನ್ನೋರ್ವ ವಲಯ ನಿರ್ದೇಶಕರಾದ B.ಸೋಮಶೇಖರ ಶೆಟ್ಟಿ ಅವರು ಮಾತನಾಡಿ, ಹಿಂದಿನ ಕಾಲದಲ್ಲಿ ಅನಿವಾರ್ಯವಾಗಿದ್ದ ಆಷಾಡ ಮಾಸದ ತಿಂಡಿ ತಿನಸುಗಳು ಇಂದು ಆಹಾರೋತ್ಸವವಾಗಿ ಆಚರಿಸಲ್ಪಡುತ್ತದೆ, ಆರೋಗ್ಯಕ್ಕೆ ಪೂರಕವಾದ ಆಹಾರ ಪದ್ಧತಿಯನ್ನು ನಾವು ಅನುಸರಿಸುವುದರಿಂದ ಅನೇಕ ಬಗೆಯ ಕಾಯಿಲೆಗಳಿಂದ ದೂರ ಇರಬಹುದು, ಇಂತಹ ಆಹಾರ ವಸ್ತುಗಳಲ್ಲಿ ಇರುವ ಆರೋಗ್ಯಪೂರಕ ಮಹತ್ವದ ಅರಿವು ಮೂಡಿಸಲು ಮತ್ತು ಹಿಂದಿನ ಕಾಲದ ಜನಜೀವನದ ಪರಿಚಯ ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಈ ಕಾರ್ಯ ಕ್ರಮ ಯಶಸ್ವಿ ಆದ ಬಗ್ಗೆ ಮತ್ತು ಅಪಾರ ಸಂಖ್ಯೆಯಲ್ಲಿ ಸೇರಿದ ಸದಸ್ಯರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಧೀಮತಿ ಮಹಿಳಾ ಸಮಾಜದ ಅಧ್ಯಕ್ಷೆ ರಜತ ಪಿ. ಶೆಟ್ಟಿ ಮಾತನಾಡಿ ಈ ಕಾರ್ಯ ಕ್ರಮವನ್ನು ವಿಶೇಷ ರೀತಿಯಲ್ಲಿ ಆಯೋಜಿಸಿದ ಹಿನ್ನಲೆಯನ್ನು ವಿವರಿಸಿದರು, ಪ್ರಕೃತಿಯಲ್ಲಿ ದೊರೆಯುವ ಆಹಾರ ಪದಾರ್ಥಗಳನ್ನು ಉಪಯೋಗಿಸುವಾಗ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರಿಸಿ ತಿಳಿಸಿದರು. ಜೈನ್ ಮಿಲನ್ ಅಧ್ಯಕ್ಷರಾದ ಡಾ, ನವೀನ್ ಕುಮಾರ್ ಜೈನ್ ಅವರು ಮಾತನಾಡಿ, ಆಹಾರ ಪದ್ಧತಿಯ ಹಿನ್ನೆಲೆಯನ್ನು ವೈಜ್ಞಾನಿಕವಾಗಿ ವಿವರಿಸಿ, ಉಪ್ಪಿನ ಕಾಯಿಯಂತಹ ವಸ್ತುಗಳನ್ನು ಪ್ಲಾಸ್ಟಿಕ್ ಡಬ್ಬಗಳಲ್ಲಿ ತುಂಬಿಸಿ ಇಟ್ಟು ಉಪಯೋಗಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ, ಆಹಾರ ಪದಾರ್ಥಗಳು ಮತ್ತು ಅದನ್ನು ತಯಾರಿಸುವ ಬಗ್ಗೆ ಸಂಗ್ರಹಿಸಿ ಇಡುವ ವಸ್ತುಗಳ ಬಗ್ಗೆ ವಿಶೇಷ ಮಾಹಿತಿಯನ್ನು ವೈಜ್ಞಾನಿಕ ಅಧ್ಯಯನ ಹಿನ್ನೆಲೆಯಲ್ಲಿ ವಿವರಿಸಿ ತಿಳಿಸಿದರು. ಈ ದಿನದ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಧೀಮತಿ ಮಹಿಳಾ ಸಮಾಜದ ಸರ್ವರಿಗೂ ಮಿಲನ್ ನ ಸರ್ವಸದಸ್ಯರಿಗೂ ಕೃತ್ತಜ್ಞತೆ ಸಲ್ಲಿಸಿದರು, ಧೀಮತಿ ಮಹಿಳಾ ಸಮಾಜದ ಕಾರ್ಯದರ್ಶಿ ಪ್ರಾಧ್ಯಾಪಕಿ ದಿವ್ಯ ಪ್ರಧಾನ್ ಪ್ರಾಸ್ತಾವಿಕ ಮಾತಿನೊಂದಿಗೆ ಸರ್ವರನ್ನೂ ಸ್ವಾಗತಿಸಿದರು. ಜೈನ್ ಮಿಲನ್ ಕಾರ್ಯದರ್ಶಿ ಸಂಪತ್ ಕುಮಾರ್ ಜೈನ್ ನಿರ್ವಹಿಸಿದ ಕಾರ್ಯಕ್ರಮದಲ್ಲಿ ನಿಖಿತ್ ಕುಮಾರ್ ವಂದಿಸಿದರು. ಸ್ಮಿತಾ ಪ್ರಶಾಂತ್ ಶಾಂತಿ ಮಂತ್ರ ಪಠಿಸಿದರು, ವಿಶೇಷ ಖಾದ್ಯಗಳನ್ನು ಅಳದಂಗಡಿಯ ಸುನಿಲ್ ಕುಮಾರ್ ಜೈನ್ ತಯಾರಿಸಿದ್ದು ಎಲ್ಲರ ಪ್ರಶಂಸೆಗೆ ಪಾತ್ರರಾದರು.

First Previous

Showing 1 of 2 pages

Next Last