Article Image

ಹೊಂಬುಜ ಶ್ರೀ ಜೈನ ಮಠದಲ್ಲಿ ಶ್ರೀಶರನ್ನವರಾತ್ರಿ ವಿಶೇಷ ಪೂಜಾ ಮಹೋತ್ಸವ

Article Image

ಹೊಂಬುಜ ಶ್ರೀ ಜೈನ ಮಠದಲ್ಲಿ ಶ್ರೀಶರನ್ನವರಾತ್ರಿ ವಿಶೇಷ ಪೂಜಾ ಮಹೋತ್ಸವ

ಶಿವಮೊಗ್ಗ: ಹೊಂಬುಜ ಶ್ರೀ ಜೈನ ಮಠದಲ್ಲಿ ಶ್ರೀಶರನ್ನವರಾತ್ರಿ ವಿಶೇಷ ಪೂಜಾ ಮಹೋತ್ಸವವು 22-09-2025 ರಿಂದ 02-10-2025 ಆಶ್ವಯುಜ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ವಿಜಯದಶಮಿಯವರೆಗೆ ಶಕ್ತಿ ದೇವಿಗೆ ವಿವಿಧ ಅಲಂಕಾರಗಳಿಂದ ವಿಶೇಷ ಪೂಜೆ ನೆರವೇರಲಿದೆ. 22-09-2025 ಸೋಮವಾರ ಘಟಸ್ಥಾಪನೆ: ಹೂವಿನ ಅಲಂಕಾರ 23-09-2025, ಮಂಗಳವಾರ ಭೈರವಿ ಪದ್ಮಾವತಿ ದರ್ಶನ 24-09-2025, ಬುಧವಾರ ಮುತ್ತಿನ ಅಲಂಕಾರ 25-09-2025, ಗುರುವಾರ ಹಣ್ಣಿನ ಅಲಂಕಾರ 26-09-2025, ಶುಕ್ರವಾರ (ಲಕ್ಷಹೂವಿನ ಪೂಜೆ) ಸುವರ್ಣ ಅಲಂಕಾರ 27-09-2025, ಶನಿವಾರ ಸೀರೆ ಅಲಂಕಾರ 28-09-2025, ಭಾನುವಾರ ಧಾನ್ಯಗಳ ಅಲಂಕಾರ 29-09-2025 ಸೋಮವಾರ (ಸರಸ್ವತಿ ಪೂಜೆ) ನವಿಲಿನ ಅಲಂಕಾರ 30-09-2025. ಮಂಗಳವಾರ (ಜೀವದಯಾಷ್ಟಮಿ) ಬಳೆ ಅಲಂಕಾರ 01-10-2025, ಬುಧವಾರ (ಆಯುಧ ಪೂಜೆ) ಸುವರ್ಣ ಅಲಂಕಾರ 02-10-2025, ಗುರುವಾರ (ವಿಜಯದಶಮಿ) ಸುವರ್ಣ ಅಲಂಕಾರ ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರ ಪಲ್ಲಕ್ಕಿ ಉತ್ಸವದೊಂದಿಗೆ ಬನ್ನಿ ಮಂಟಪದವರೆಗೆ ಸ್ಯಾಕ್ರೋಫೋನ್, ಚಂಡೆ, ಡೊಳ್ಳುಕುಣಿತ, ಸಕಲ ಮಂಗಲವಾದ್ಯಗಳೊಂದಿಗೆ ಸಾಲಾಂಕೃತ ಶೋಭಾಯಾತ್ರೆ ನಡೆಯಲಿದೆ.

ರಾಣಿ ಅಬ್ಬಕ್ಕನ 500ನೇ ಜನ್ಮ ಜಯಂತಿ ಸಂಸ್ಮರಣಾ ಸಮಾರಂಭ

Article Image

ರಾಣಿ ಅಬ್ಬಕ್ಕನ 500ನೇ ಜನ್ಮ ಜಯಂತಿ ಸಂಸ್ಮರಣಾ ಸಮಾರಂಭ

ಮಂಗಳೂರಿನ ಧವಳ ಕೋ-ಆಪರೇಟಿವ್‌ ಸೊಸೈಟ (ರಿ.), ಇದರ ಆಶ್ರಯದಲ್ಲಿ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ 300 ವರ್ಷಗಳ ಮೊದಲೇ ಸ್ವಾತಂತ್ರ್ಯದ ವೀರ ಕಹಳೆಯನ್ನು ಮೊಳಗಿಸಿ, ವಸಾಹತುಶಾಹಿಗಳ ಆಕ್ರಮಣವನ್ನು ನಾಲ್ಕು ದಶಕಗಳಕಾಲ ಹಿಮ್ಮೆಟ್ಟಿದ ಮೊಟ್ಟಮೊದಲ ಭಾರತೀಯ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ! ಅಚಲ ಧೈರ್ಯದ ಕಾರಣಕ್ಕೆ ಅವಳನ್ನು 'ಅಭಯ ರಾಣಿ' ರಾಣಿ ಅಬ್ಬಕ್ಕನ 500ನೇ ಜನ್ಮ ಜಯಂತಿ ಸಂಸ್ಮರಣಾ ಸಮಾರಂಭವು ಮಂಗಳೂರಿನ ಜೈನ್ ಬೋರ್ಡಿಂಗ್ ಸಿದ್ಧಾರ್ಥ ಸಭಾಭವನದಲ್ಲಿ ಸೆ. 21ರಂದು ಭಾನುವಾರ, ಸಂಜೆ 4.30ಕ್ಕೆ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಅತ್ಯಾಧುನಿಕ ನೇತ್ರ ಚಿಕಿತ್ಸೆ ಧಾರವಾಡದಲ್ಲಿ

Article Image

ಅತ್ಯಾಧುನಿಕ ನೇತ್ರ ಚಿಕಿತ್ಸೆ ಧಾರವಾಡದಲ್ಲಿ

ಎಸ್‌ಡಿಎಮ್ ವಿಶ್ವವಿದ್ಯಾಲಯ ಧಾರವಾಡದ, ಎಸ್‌ಡಿಎಮ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ನೇತ್ರ ಚಿಕಿತ್ಸಾ ವಿಭಾಗದಲ್ಲಿ 01.09.2025 ರಂದು ಅತ್ಯಾಧುನಿಕ ಕೋರ್ನಿಯಲ್ ಟೊಪೋಗ್ರಾಫಿ ಯಂತ್ರ ಹಾಗೂ ಸ್ಪೆಕ್ಯುಲರ್ ಮೈಕ್ರೋಸ್ಕೋಪ್ ಉಪಕರಣಗಳನ್ನು ಮಾನ್ಯ ಉಪ ಕುಲಪತಿಗಳಾದ ಹಾಗೂ ಪ್ರಸಿದ್ಧ ಪ್ಲಾಸ್ಟಿಕ್ ಸರ್ಜನ್ ಡಾ. ನಿರಂಜನ್ ಕುಮಾರ್ ಅವರು ಉದ್ಘಾಟಿಸಿದರು. ನೇತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಡಾ. ಅನುಪಮಾ ಎಸ್. ದೇಸಾಯಿ ಅವರು ಉಪಕರಣಗಳ ಉಪಯೋಗಗಳನ್ನು ವಿವರಿಸುತ್ತಾ ಕೋರ್ನಿಯಾ ಮೇಲ್ಮೆöÊ ನಿಖರ ನಕ್ಷೆ ತಯಾರಿಸಲು ನೆರವಾಗುತ್ತವೆ. ಕ್ಯಾರಟೊಕೋನಸ್, ಅಸ್ಟಿಗ್ಮಾಟಿಸಂ, ರೆಫ್ರಾಕ್ಟಿವ್ ಶಸ್ತ್ರಚಿಕಿತ್ಸೆ, ಡ್ರೈ ಐ ರೋಗಗಳ ತಪಾಸಣೆಗೆ ಸಹಾಯಕವಾಗುತ್ತವೆ” ಎಂದರು ತಿಳಿಸಿದರು. ಉಪಕುಲಪತಿಗಳಾದ ಡಾ. ನಿರಂಜನ್ ಕುಮಾರ ಮಾತನಾಡುತ್ತ ಈ ಸೌಲಭ್ಯದಿಂದ ಧಾರವಾಡ ಹಾಗೂ ಸುತ್ತಮುತ್ತಲಿನ ಜನತೆಗೆ ಜಾಗತಿಕ ಮಟ್ಟದ ನೇತ್ರ ಚಿಕಿತ್ಸಾ ಸೇವೆ ಲಭ್ಯವಾಗಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪದ್ಮಲತಾ ನಿರಂಜನ್, ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ, ಹಣಕಾಸು ಅಧಿಕಾರಿಗಳಾದ ವಿ.ಜಿ. ಪ್ರಭು, ಎಸ್.ಡಿ.ಎಮ್. ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಸಿ.ಎಮ್. ಶೆಟ್ಟರ್, ವೈದ್ಯಕೀಯ ಅಧೀಕ್ಷಕರಾದ ಡಾ. ಕಿರಣ್ ಹೆಗಡೆ, ಉಪ ವೈದ್ಯಕೀಯ ಅಧೀಕ್ಷಕರಾದ ಡಾ. ಮಗ್ದುಮ್ ಕಿಲ್ಲೇದಾರ್, ಪ್ರಾಂಶುಪಾಲರಾದ ಡಾ. ವಿಜಯ್ ಕುಲಕರ್ಣಿ, ಡಾ. ಶಂಕರಗೌಡಾ ಪಾಟೀಲ್ ಹಾಗೂ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವಧು ವರರ ಅನ್ವೇಷಣೆಯಲ್ಲಿದ್ದ ಜೈನರಿಗೆ ಸುವರ್ಣಾವಕಾಶ

Article Image

ವಧು ವರರ ಅನ್ವೇಷಣೆಯಲ್ಲಿದ್ದ ಜೈನರಿಗೆ ಸುವರ್ಣಾವಕಾಶ

ಬದಲಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ವರನಿಗೆ ವಧು, ವಧುವಿಗೆ ವರ ಸುಲಭವಾಗಿ ಸಿಕ್ಕು ಮದುವೆಯಾಗುವದು ತುಂಬಾ ಕಷ್ಟಸಾದ್ಯವಾಗಿದೆ. ಅದರಲ್ಲೂ ಮುಖ್ಯವಾಗಿ ಹುಡುಗರಿಗೆ ಹುಡುಗಿಯರು ಸಿಗದಿರುವದೇ ಗಂಭೀರವಾದ ಸಮಸ್ಯೆಯಾಗಿದೆ. ಈ ಸಮಸ್ಯೆ ಎಲ್ಲಾ ಸಮುದಾಯದಲ್ಲೂ ಇದೆ ಆದರೆ ಜೈನ ಸಮುದಾಯದಲ್ಲಿ ತುಸು ಹೆಚ್ಚು ಎಂದೇ ಹೇಳಬೇಕು ( ಇದಕ್ಕೆ ಹಲವಾರು ಕಾರಣಗಳಿವೆ ಇವುಗಳನ್ನು ವಿಶ್ಲೇಶಿಸುವದು ಬೇಡ ಇದು ಎಲ್ಲರಿಗೂ ಗೊತ್ತಿದ್ದ ಸಂಗತಿ ) ಈ ವಿಷಯವಾಗಿ ಮಕ್ಕಳ ಪಾಲಕರು ಕಷ್ಟಪಡುತ್ತಿದಾರೆ ಅಷ್ಟೇ ಅಲ್ಲ ತುಂಬಾ ನೊಂದುಕೊಳ್ಳುತ್ತಿದ್ದಾರೆ. ಈ ಸಮಸ್ಯೆ ಪರಿಹಾರ ಕಂಡುಕೊಳ್ಳಲು ಅನೇಕ ಮಾಹಿತಿ ಕೇಂದ್ರಗಳು, ಮೇಳಗಳು ಮತ್ತು ಮೆಟ್ರಿಮೊನಿ ಇತ್ಯಾದಿ ಸಂಸ್ಥೆಗಳು ಹುಟ್ಟಿಕೊಂಡಿವೆಯಾದರೂ ಅವೆಲ್ಲವೂ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. "ಇಂಥ ಸಮಸ್ಯೆ ಪರಿಹಾರಕ್ಕೆ ಕಂಕಣಬದ್ದವಾಗಿದೆ ಬೆಳಗಾವಿಯ ಮಾಣಿಕಬಾಗ ದಿಗಂಬರ ಜೈನ್ ಬೋರ್ಡಿಂಗ್ ಸಂಸ್ಥೆ" ಇವೆಲ್ಲವನ್ನೂ ಗಮನಿಸಿದ ದಕ್ಷಿಣ ಭಾರತ ಜೈನ ಸಭಾದ ಅಂಗ ಸಂಸ್ಥೆ ಬೆಳಗಾವಿಯ ಮಾಣಿಕಭಾಗ ದಿಗಂಬರ ಜೈನ ಬೋರ್ಡಿಂಗಿನ ಆಡಳಿತ ಮಂಡಳಿ ಶ್ರೀ ಕುಂತಿನಾಥ ಕಲಮನಿ ಇವರ ಸಾರಥ್ಯದಲ್ಲಿ ಕಳೆದ 17 ವರ್ಷಗಳಿಂದ ಮದುವೆಗಾಗಿ ಸೂಕ್ತ ವಧು ಅಥವಾ ವರರನ್ನು ಹುಡುಕುವ ಪ್ರಕ್ರಿಯೆಯ ಭಾಗವಾಗಿ ಜೈನ್ ವಧು-ವರ ಪರಿಚಯ ಸಮಾವೇಶವನ್ನು ಅತ್ಯಂತ ಪ್ರಾಮಾಣಿಕವಾಗಿ ಹಾಗೂ ಯಶಸ್ವಿಯಾಗಿ ನಡೆಸುತ್ತಾ ಬಂದಿದೆ ಇದು ಎಷ್ಟು ಅದ್ಭುತವಾದ ಕಾರ್ಯಮಾಡುತ್ತಿದೆ ಎಂದರೆ ಪರಸ್ಪರ ಹೊಂದಾಣಿಕೆಯಿಂದ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಮದುವೆಗಳು ಜರುಗಿವೆ ಹಾಗೂ ಅವರೆಲ್ಲ ಸುಖವಾಗಿ ಕೌಟುಂಬಿಕ ಜೀವನ ಸಾಗಿಸುತ್ತಾ ಈ ಸಂಸ್ಥೆಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಇದೀಗ ಈ ವರ್ಷದ 18 ನೇ ಜೈನ್ ವಧು-ವರ ಪರಿಚಯ ಸಮಾವೇಶ ಜರುಗಲಿದೆ. 17ನೇ ಸಮಾವೇಶದ ಭವ್ಯ ಯಶಸ್ಸಿನ ನಂತರ ಬಹಳಷ್ಟು ಶ್ರಾವಕ ಶ್ರಾವಿಕೆಯರ ಆಗ್ರಹ ಹಾಗೂ ವಿನಂತಿಯ ಮೇರೆಗೆ ಇದೀಗ 18ನೇ ಜೈನ್ ವಧು-ವರ ಪರಿಚಯ ಸಮಾವೇಶ ಮುಂಬರುವ ದಿನಾಂಕ 12-10-2025 ರಂದು ರವಿವಾರ ಬೆಳಗಾವಿಯ ಧರ್ಮನಾಥ ಭವನದಲ್ಲಿ ಬೆಳಿಗ್ಗೆ 9ರಿಂದ ಪ್ರಾರಂಭವಾಗಲಿದೆ. ನೋಂದಣಿ ಕಾರ್ಯ ಪ್ರಾರಂಭವಾಗಿದೆ: ಈ ಸಮಾವೇಶದಲ್ಲಿ ಭಾಗಿಯಾಗಲು ಹೆಚ್ಚಿನ ಸಂಖ್ಯೆಯ ಜನ ನೋಂದಣಿ ಮಾಡಿಸಿದ್ದಾರೆ. ಸಮಾವೇಶದ ಪ್ರಯೋಜನ ಪಡೆದುಕೊಳ್ಳಲು ತಾವೂ ರೂ 820/- ಶುಲ್ಕ ಪಾವತಿಸಿ ಆನ್‌ಲೈನ್ ನೋಂದಣಿ ಮಾಡಿಕೊಳ್ಳಬಹುದಾಗಿದೆ. www.mdjbbelagavi.in ನೋಂದಣಿಗೆ ಕೊನೆಯ ದಿನಾಂಕ: 30/09/2025 ಇರುತ್ತದೆ. ಇದರ ಪ್ರಯೋಜನ ಪಡೆದುಕೊಳ್ಳಲು ಜೈನ ಧರ್ಮ ಬಂಧುಗಳಿಗೆ ಇದೊಂದು ದೊಡ್ಡ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ: 70226 91008, 94804 48108 ಈ ಸಂಖ್ಯೆಯಿಂದ ಪಡೆದುಕೊಳ್ಳಬಹುದು. ವರದಿ : ಶಾಂತರಾಜ ಮಲ್ಲಸಮುದ್ರ

ಜೈನ ತತ್ವ-ಸಿದ್ಧಾಂತಗಳು ಸರ್ವಕಾಲಕ್ಕೂ ಪ್ರಸ್ತುತ : ಡಾ. ಅಪ್ಪಣ್ಣ ಹಂಜೆ

Article Image

ಜೈನ ತತ್ವ-ಸಿದ್ಧಾಂತಗಳು ಸರ್ವಕಾಲಕ್ಕೂ ಪ್ರಸ್ತುತ : ಡಾ. ಅಪ್ಪಣ್ಣ ಹಂಜೆ

ಜೈನ ಧರ್ಮವು ‘ಅಹಿಂಸಾ ಪರಮೋಧರ್ಮ’ ಎಂಬ ಧ್ಯೇಯ ವಾಕ್ಯದೊಂದಿಗೆ ಅಹಿಂಸೆ, ಅಪರಿಗ್ರಹ, ಅನೇಕಾಂತವಾದ ಮುಂತಾದ ಸಿದ್ಧಾಂತಗಳ ಮೂಲಕ ಇಂದಿಗೂ ವಿಶ್ವಹಿತವನ್ನು ಬಯಸುತ್ತ ಮುನ್ನಡೆದಿದ್ದು, ಜಗತ್ತಿನ ಎಲ್ಲ ಜೀವಿಗಳಿಗೂ ಬದುಕುವ ಸಮಾನವಾದ ಹಕ್ಕಿದೆ, ಎಲ್ಲ ಜೀವಿಗಳೂ ಇತರ ಎಲ್ಲ ಜೀವಿಗಳನ್ನು ಮನ್ನಿಸಬೇಕು, ಎಲ್ಲ ಜೀವಿಗಳೂ ಸೌಹಾರ್ದದಿಂದ ಬದುಕಬೇಕೆಂಬುದು ಈ ಧರ್ಮದ ಹೆಬ್ಬಯಕೆಯಾಗಿದೆ ಎಂದು ಡಾ. ಅಪ್ಪಣ್ಣ ಹಂಜೆ ಹೇಳಿದರು. ಅವರು ಗದಗ ಜಿಲ್ಲಾ ದಿಗಂಬರ ಜೈನ ಸಂಘವು ‘ದಶಲಕ್ಷಣ ಪರ್ವಾಚರಣೆ ಮತ್ತು ಸಮಾಜ ಸಂಪರ್ಕ ಸಭೆ’ ಕಾರ್ಯಕ್ರಮದ ನಿಮಿತ್ತ ಗದುಗಿನ ವಿದ್ಯಾದಾನ ಸಮಿತಿಯ ಬಾಲಕರ ಪ್ರೌಢ ಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಸಾಮೂಹಿಕ ಕ್ಷಮಾವಳಿ ಹಾಗೂ ಸಮಾರೋಪ ಸಮಾರಂಭ’ದಲ್ಲಿ ಉಪನ್ಯಾಸ ಮಾಡುತ್ತ, ಜೈನರು “ನಾನು ಲೋಕದ ಸಕಲ ಜೀವಿರಾಶಿಗಳನ್ನು ಕ್ಷಮಿಸುತ್ತೇನೆ, ಸಕಲ ಜೀವರಾಶಿಗಳೂ ನನ್ನನ್ನು ಕ್ಷಮಿಸಲಿ, ನಾನು ಎಲ್ಲ ಜೀವಿಗಳಲ್ಲಿ ಮೈತ್ರಿಯನ್ನು ಇರಿಸಿಕೊಳ್ಳಲು ಬಯಸುತ್ತೇನೆ, ಯಾವ ಜೀವಿಯಲ್ಲೂ ನನಗೆ ವೈರವಾಗಲಿ ಮತ್ಸರವಾಗಲಿ ಇಲ್ಲ” ಎಂಬ ಸೌಹಾರ್ದ ಮಂತ್ರವನ್ನು ಆರಂಭದಿಂದಲೂ ಅನುಸರಿಸುತ್ತ ಬಂದಿದ್ದು, ದಶಲಕ್ಷಣ ಪರ್ವವು ಒಂದು ಅರ್ಥದಲ್ಲಿ ಜೈನರಿಗೆ ವಿಧಿಸಲಾದ ನೀತಿ ಸಂಹಿತೆ, ಇದು ಜೈನರ ಬದುಕುವ ಕಲೆಯಾಗಿದೆ ಎಂದು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗಜೇಂದ್ರಗಡದ ಉದ್ಯಮಿ ಮತ್ತು ಭಗವಾನ ಮಹಾವೀರ ಜೈನ ಆಯುರ್ವೇದಿಕ ಮೆಡಿಕಲ್ ಕಾಲೇಜಿನ ಅಧ್ಯಕ್ಷ ಅಶೋಕಕುಮಾರ ಬಾಗಮಾರ ಅವರು ಜೈನ ಧರ್ಮವು ಅರಿವು, ವಿಚಾರ, ಆಚಾರಕ್ಕೆ ಒತ್ತು ಕೊಡುತ್ತ ಬಂದಿದ್ದು, ಇಂದು ಸಂಖ್ಯಾದೃಷ್ಟಿಯಿಂದ ಜೈನರು ಮತೀಯ ಅಲ್ಪಸಂಖ್ಯಾತರೆಂದು ಪರಿಗಣಿಸಲ್ಪಟ್ಟಿದ್ದರೂ ತತ್ವ-ಸಿದ್ಧಾಂತಗಳು ಮತ್ತು ಅರ್ಥಪೂರ್ಣ ಆಚರಣೆ-ಅನುಷ್ಠಾನಗಳ ದೃಷ್ಟಿಯಿಂದ ನಾಡಿನ ಪ್ರಜ್ಞಾವಂತರ ಪ್ರೀತಿಗೆ ಪಾತ್ರರಾಗಿದ್ದಾರೆಂದು ಹೇಳಿದರು. ಸಂಘದ ಅಧ್ಯಕ್ಷ ಪಿ.ಎ. ಕುಲಕರ್ಣಿ ಪ್ರಾಸ್ತಾವಿಕವಾಗಿ ಮತ್ತು ಅಧ್ಯಕ್ಷತೆ ವಹಿಸಿ ಮಾತನಾಡುತ್ತ ವಿದ್ಯಾದಾನ ಸಮಿತಿಯ ಅಧ್ಯಕ್ಷ ಡಿ.ಬಿ. ಹುಯಿಲಗೋಳ ಮತ್ತು ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ಅವರು ಗದುಗಿನ ದಿಗಂಬರ ಜೈನ ಸಮಾಜದ ಕಾರ್ಯಕ್ರಮಗಳ ಆಯೋಜನೆಗೆ ಕಳೆದ ಇಪ್ಪತ್ತೆರಡು ವರ್ಷಗಳಿಂದಲೂ ಶಾಲೆಯ ಸಭಾಂಗಣವನ್ನು ಯಾವುದೇ ಅಪೇಕ್ಷೆಯಿಲ್ಲದೆ ಕೊಡಮಾಡುತ್ತ ಬಂದಿದ್ದು, ಅವರ ‘ಅಭಯದಾನ’ಕ್ಕೆ ಜೈನ ಸಮಾಜವು ಯಾವತ್ತೂ ಋಣಿಯಾಗಿದ್ದು, ಸಾಧಕರ ಸನ್ಮಾನಕ್ಕೆ ಅವಶ್ಯವಿರುವ ಸಾಮಗ್ರಿಗಳನ್ನು ಗದುಗಿನ ಗಣ್ಯ ವ್ಯಾಪಾರಸ್ಥ ಸಂಜಯ ಬಾಗಮಾರ ಅವರು ಪ್ರತಿವರ್ಷ ದಾನಮಾಡುತ್ತ ಬಂದಿದ್ದು, ಅವರ ‘ಶಾಸ್ತ್ರದಾನ’ ಮೌಲ್ಯ ಸಮಾಜಕ್ಕೆ ಮಾದರಿಯಾಗಿದೆ. ಸಂಘಕ್ಕೆ ಗಣ್ಯ ವ್ಯಾಪಾರಸ್ಥರಾಗಿರುವ ಕುಷ್ಟಗಿಯ ಅಭಿನಂದನ ಗೋಗಿ ಮತ್ತು ಗಜೇಂದ್ರಗಡದ ಬಾಹುಬಲಿ ಹೂಲಿ ಅವರ ಉದಾರವಾದ ಮಾರ್ಗದರ್ಶನ, ಸೇವೆ ಸ್ಮರಣೀಯವಾಗಿದೆ. ಜಿಲ್ಲೆಯ ಸಮಸ್ತ ಜೈನ ಸಮಾಜದ ಸಹಾಯ-ಸಹಕಾರದಿಂದಲೇ ದಶಲಕ್ಷಣ ಪರ್ವದ ಆಚರಣೆ ಸಾಂಗವಾಗಿ ನಡೆಯುತ್ತ ಬಂದಿದೆ ಎಂದು ಹೇಳಿದರು. ಸಾಮೂಹಿಕ ಪಂಚ ನಮೋಕಾರ ಮಂತ್ರ ಪಠಣ, ಜ್ವಾಲಾಮಾಲಿನಿ ಸದರಣ್ಣವರ ಪ್ರಾರ್ಥನೆ, ಯಶವಂತ ಸಿದ್ದಣ್ಣವರ ಭಕ್ತಿಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಜಿಲ್ಲೆಯ ವಿದ್ಯಾರ್ಥಿಗಳು, ದಾನಿಗಳು ಮತ್ತು ಗಣ್ಯರನ್ನು ಸನ್ಮಾನಿಸಲಾಯಿತು. ಪ್ರಕಾಶ ಮುತ್ತಿನ ನಿರೂಪಣೆ ಮತ್ತು ಸಂಕಪ್ಪ ನಾವಳ್ಳಿ ವಂದನಾರ್ಪನೆಗೈದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳ ಮುನ್ನೂರಕ್ಕೂ ಹೆಚ್ಚು ಶ್ರಾವಕರು, ಶ್ರಾವಿಕೆಯರು ಭಾಗವಹಿಸಿದ್ದರು. ಎಲ್ಲರೂ ಸಾಮೂಹಿಕವಾಗಿ ಪರಸ್ಪರ ಕ್ಷಮೆ ಕೋರಿ, ಪಂಚ ನಮೋಕಾರ ಮಂತ್ರ ಪಠಣದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಿದರು.

ದಶಲಕ್ಷಣ ಪರ್ವಾಚರಣೆ ಮತ್ತು ಸಮಾಜ ಸಂಪರ್ಕ ಸಭೆ

Article Image

ದಶಲಕ್ಷಣ ಪರ್ವಾಚರಣೆ ಮತ್ತು ಸಮಾಜ ಸಂಪರ್ಕ ಸಭೆ

‘ಬ್ರಹ್ಮ’ವೆಂದರೆ ‘ಆತ್ಮ’ ಮತ್ತು ‘ಚರ್ಯ’ ಎಂದರೆ ‘ಪಾಲನೆ’ ಎಂದರ್ಥ. ಆತ್ಮನಲ್ಲಿ ಲೀನವಾಗಿ ಕಾಮಾದಿ ವಿಕಾರಗಳನ್ನು ತೊರೆದು ಆತ್ಮನ ನೈಜ ಗುಣಗಳನ್ನು ಅರಿತು ಆತ್ಮೋನ್ನತಿಯನ್ನು ಸಾಧಿಸುವುದೇ ಬ್ರಹ್ಮಚರ್ಯ ಧರ್ಮವಾಗಿದ್ದು, ಕಾರ್ಯ-ವಚನ ಆಲೋಚನೆಗಳಲ್ಲಿ ಬ್ರಹ್ಮಚರ್ಯ ಪಾಲನೆಯಿಂದ ಪರಿಶುದ್ಧ ಜೀವನ ನಡೆಸಲು ಸಾಧ್ಯವೆಂದು ವಸಂತಮಾಲಾ ದೇಸಾಯಿ ಹೇಳಿದರು. ಅವರು ಗದಗ ಜಿಲ್ಲಾ ದಿಗಂಬರ ಜೈನ ಸಂಘವು ‘ದಶಲಕ್ಷಣ ಪರ್ವಾಚರಣೆ ಮತ್ತು ಸಮಾಜ ಸಂಪರ್ಕ ಸಭೆ’ ನಿಮಿತ್ತ ಸಂಘದ ಕಾರ್ಯಾಲಯದಲ್ಲಿ ಮಹಿಳಾ ಮಂಡಳದ ಸಹಯೋಗದಲ್ಲಿ ಆಯೋಜಿಸಿದ್ದ ‘ಉತ್ತಮ ಬ್ರಹ್ಮಚರ್ಯ ಧರ್ಮ’ ಕುರಿತು ಉಪನ್ಯಾಸ ಮಾಡುತ್ತ, ಆತ್ಮವು ಪರಿಶುದ್ಧ, ಪ್ರಬುದ್ಧ, ಶಾಶ್ವತ, ಆನಂದಯಮವಾಗಿದ್ದು, ಆತ್ಮನ ನಿಜವಾದ ಗುಣವನ್ನು ತಿಳಿಯುವುದರಿಂದ ಬದುಕು ಸುಂದರವಾಗುತ್ತದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಶೋಭಕ್ಕ ಇಂಚಲ ಅವರು ಮಹಿಳೆಯನ್ನು ರಕ್ಷಿಸುವ ಅಭೇದ್ಯ ಬೇಲಿ ಅವಳ ಬ್ರಹ್ಮಚರ್ಯದ ಸದ್ಗುಣವಾಗಿದ್ದು, ಬೇರೆ ಯಾವುದೇ ಬೇಲಿಯೂ ಅವಳನ್ನು ರಕ್ಷಿಸಲು ಸಾಧ್ಯವಿಲ್ಲವೆಂದು ಹೇಳಿದರು. ಕಾರ್ಯಕ್ರಮದಲ್ಲಿ ಅಪ್ಪಣ್ಣ ಹಂಜೆ, ಪಿ.ಎ. ಕುಲಕರ್ಣಿ, ಯಶವಂತ ಸಿದ್ದಣ್ಣವರ, ಪ್ರಕಾಶ ಮುತ್ತಿನ, ಸಂಕಪ್ಪ ನಾವಳ್ಳಿ, ಸಂಜಯ ಪಾಂಡ್ರೆ, ಎಚ್.ಎ. ಕುಲಕರ್ಣಿ, ಸುಭಾಸ ಅಂಗಡಿ, ಪರಿಮಳಾ ಕುಲಕರ್ಣಿ, ಸಹನಾ ಹಂಜೆ, ಪದ್ಮಾವತಿ ತುಕೋಳ, ಸುಕನ್ಯಾ ಕುಲಕರ್ಣಿ, ಸುಪ್ರೀಯಾ ಪಾಂಡ್ರೆ ಸೇರಿದಂತೆ ಸ್ಥಳೀಯ ಶ್ರಾವಕರು, ಶ್ರಾವಿಕೆಯರು ಪಾಲ್ಗೊಂಡಿದ್ದರು. ಮಧುಮತಿ ಕಬ್ಬಿಣ ಭಕ್ತಿಗೀತೆ ಹಾಡಿದರು. ಸುಮನ ಮುತ್ತಿನ ನಿರೂಪಣೆ ಮತ್ತು ಸುಪ್ರೀಯಾ ನಾವಳ್ಳಿ ವಂದನಾರ್ಪಣೆಗೈದರು.

ಸತ್ತೂರು, ಧಾರವಾಡ: ಎಸ್.ಡಿ.ಎಂ. ವಿಶ್ವವಿದ್ಯಾಲಯವು 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ

Article Image

ಸತ್ತೂರು, ಧಾರವಾಡ: ಎಸ್.ಡಿ.ಎಂ. ವಿಶ್ವವಿದ್ಯಾಲಯವು 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ

ಸತ್ತೂರು, ಧಾರವಾಡ: ಎಸ್.ಡಿ.ಎಂ. ವಿಶ್ವವಿದ್ಯಾಲಯವು 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದಂತ ಮಹಾವಿದ್ಯಾಲಯದಲ್ಲಿ ಆಚರಿಸಲಾಯಿತು. ದಂತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಬಲರಾಮ್ ನಾಯ್ಕ ಮುಖ್ಯ ಅತಿಥಿಯವರಾಗಿ ಧ್ವಜಾರೋಹಣ ಮಾಡಿದರು. ಮುಖ್ಯ ಅತಿಥಿಯವರಾದ ಡಾ. ಬಲರಾಮ್ ನಾಯ್ಕ ಅವರು ಮಾತನಾಡುತ್ತಾ: ದೇಶಕ್ಕೆ ಸ್ವಾತಂತ್ರ್ಯದ ಉಡುಗೊರೆ ತಂದು ಕೊಟ್ಟು ಕ್ರಾಂತಿಕಾರಿ ಹೋರಾಟಗಾರರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಜೀವನದಲ್ಲಿ ಗೆಲವು ಸಾಧಿಸಬೇಕೆಂದ್ದಿದರೆ ಭಾರತ ಇತಿಹಾಸವನ್ನು ಮರೆಯಬಾರದು. ಭಾರತದ ಸಂಪತ್ಭರಿತ ಹಾಗೂ ಸಡೃಡ ಸಂಪ್ರಧಾಯವನ್ನು ನಾವೆಲ್ಲರು ಗೌರವಿಸಬೇಕು. ಸಡೃಡ ದೇಶ ನಿರ್ಮಾಣಕ್ಕೆ ಆಂತರಿಕ ದ್ವೇಷ, ಅಸೂಯೆಗಳಂತ ದೌರ್ಬಲ್ಯಗಳಿಂದ ಮುಕ್ತರಾಗಬೇಕು. ಬಲಾಡ್ಯ ದೇಶ ನಿರ್ಮಾಣ ಮತ್ತು ಜನರ ಸಮಸ್ಯೆಗಳಿಗೆ ಆಧುನಿಕ ಕೌಶಲ್ಯ ಮತ್ತು ಜ್ಞಾನದ ಅವಶ್ಯಕವಿದೆ. ನಾವು ವೃತ್ತಿಪರರು ನಿಷ್ಠೆಯಿಂದ ಸೇವೆ ಸಲ್ಲಿಸುವುದರ ಮೂಲಕ ದೇಶ ನಿರ್ಮಾಣದಲ್ಲಿ ಪಾಲ್ಗೊಳ್ಳಬಹುದು. ಇಂದಿನ ಯುವಜನರು ಸರಿಯಾದ ಮಾರ್ಗವನ್ನು ಅನುಸರಿಸದರೊಂದಿಗೆ ತಮ್ಮನ್ನು ದೇಶ ಸೇವೆಗೆ ಅರ್ಪಿಸಿಕೊಳ್ಳಬಹುದು. ಈ ಸಂದರ್ಭದಲ್ಲಿ ಅಂಗ ಸಂಸ್ಥೆಗಳ ಪ್ರಥಮ ವರ್ಷದ ಒಬ್ಬ ಮತ್ತು ಅಂತಿಮ ವರ್ಷದ ಇಬ್ಬರು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಕಿರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಉಪಕುಲಪತಿಗಳಾದ ಡಾ. ನಿರಂಜನ್ ಕುಮಾರ, ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್, ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ, ಸಹ ಉಪಕುಲಪತಿಯವರಾದ ವಿ. ಜೀವಂಧರ್ ಕುಮಾರ್, ಹಣಕಾಸು ಅಧಿಕಾರಿಗಳಾದ ವಿ ಜಿ ಪ್ರಭು, ಕುಲಸಚಿವರಾದ ಡಾ. ಚಿದೇಂದ್ರ ಎಂ. ಶೆಟ್ಟರ್, ಸಂಸ್ಥೆಗಳ ಮುಖ್ಯಸ್ಥರು, ಉಪ ಪ್ರಾಂಶುಪಾಲರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದಂತ ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ಆನಂದ್ ತಾವರಗೇರಿ ಅತಿಥಿಗಳನ್ನು ಸ್ವಾಗತಿಸಿದರು. ಡಾ. ವಿನಾಯಕ್ ಮತ್ತು ಡಾ. ಶ್ರೇಯಾ ಜಿ. ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಕಿರಣ ಕುಮಾರ್ ವಂದನಾರ್ಪಣೆಯನ್ನು ಮಾಡಿದರು.

ಬೋಳಂಬಳ್ಳಿಯಲ್ಲಿ ತೌಳವ ಇಂದ್ರ ಸಮಾಜದ ಬಸದಿ ದರ್ಶನ ಹಾಗೂ ಆಟಿಕೂಟ

Article Image

ಬೋಳಂಬಳ್ಳಿಯಲ್ಲಿ ತೌಳವ ಇಂದ್ರ ಸಮಾಜದ ಬಸದಿ ದರ್ಶನ ಹಾಗೂ ಆಟಿಕೂಟ

ತೌಳವ ಇಂದ್ರ ಸಮಾಜದ 2025ನೆ ವರ್ಷದ ಕ್ಷೇತ್ರ ದರ್ಶನ ಮತ್ತು ಆಟಿ ಕೂಟ ಇತ್ತೀಚೆಗೆ ಕಂಬದಕೋಣೆಯ ಬೋಳಂಬಳ್ಳಿ ಯ ಶ್ರೀ ಪದ್ಮಾವತಿ ಕ್ಷೇತ್ರದ ಸಭಾಂಗಣದಲ್ಲಿ ನಡೆಯಿತು. ಬಸದಿಗೆ ಬನ್ನಿ ಘೋಷವಾಕ್ಯದ ಅನುಷ್ಠಾನದ ನಿಟ್ಟಿನಲ್ಲಿ ನಗರದಿಂದ ದೂರವಿರುವ ಊರಿನ ಬಸದಿಗಳ ದರ್ಶನ ಪಡೆದು ಅಲ್ಲಿಯ ಪರಿಸರದಲ್ಲಿ ಕ್ರೀಡಾ ಕೂಟ ಹಾಗೂ ಸಭೆ ಮುಂತಾದ ಕಾರ್ಯಕ್ರಮ ಹಮ್ಮಿಕೊಂಡು, ಬಸದಿಗಳನ್ನೂ ಸಂದರ್ಶಿಸುವುದೇ ಇದರ ಮೂಲ ಉದ್ದೇಶ. ಈ ಆಚರಣೆಯೇ "ಕ್ಷೇತ್ರದರ್ಶನ ಹಾಗೂ ಆಟಿ ಕೂಟ"ಕಾರ್ಯಕ್ರಮ. "ಜೈನ ಬ್ರಾಹ್ಮಣರ(ಇಂದ್ರ) ಸಮಾಜ ಬಹಳ ಸಣ್ಣ ಸಮುದಾಯ, ಅದರಲ್ಲೂ ತುಳು ಮಾತಾಡುವ ಇಂದ್ರ ಸಮಾಜ ಎನ್ನುವ ಒಂದು ಸಂಘಟನೆ ಇದೆ ಎಂದು ನನಗೆ ತಿಳಿದಿರಲಿಲ್ಲ, ಈ ಜೈನ ಪುರೋಹಿತ ವರ್ಗ ನಮ್ಮ ಕ್ಷೇತ್ರಕ್ಕೆ ಬಂದದ್ದು ನನಗೆ ಬಹಳ ಸಂತಸವಾಗಿದೆ, ಅವರ ಈ ದಿನದ ಎಲ್ಲಾ ಕಾರ್ಯ ಚಟುವಟಿಕೆಗೆ ಇಲ್ಲಿರುವ ಎಲ್ಲಾ ಸೌಲಭ್ಯಗಳನ್ನು ಉಪಯೋಗಿಸಬಹುದು, ಮೇಲಾಗಿ ಏನಾದರೂ ವ್ಯವಸ್ಥೆ ಬೇಕಿದ್ದಲ್ಲಿ ಸಂತೋಷದಿಂದ ಪೂರೈಸಲು ಕ್ಷೇತ್ರ ಬದ್ಧವಾಗಿದೆ" ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾತನಾಡಿದ ಬೋಳಂಬಳ್ಳಿ ಶ್ರೀ ಪದ್ಮಾವತಿ ದೇವಿ ಕ್ಷೇತ್ರದ ಜ್ಯೋತಿಷ್ಯರೂ, ಧರ್ಮದರ್ಶಿಯೂ ಆದ ಧರ್ಮರಾಜ್ ಜೈನ್ ರವರು ಸಭೆಗೆ ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೊ.ಅಕ್ಷಯ ಕುಮಾರ್ ಮಳಲಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ತೌಳವ ಇಂದ್ರ ಸಂಘಟನೆಯು ಹದಿನೈದು ವರ್ಷಗಳಿಂದ ನಿರಂತರ ಸಮಾಜಮುಖಿ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡು, ಪುರೋಹಿತ ವರ್ಗದವರಿಗೆ ಸ್ವಲ್ಪ ಬಿಡುವುವಿರುವ ಆಟಿ ಮಾಸದಲ್ಲಿ ಇಂಥಹ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದು, ಈ ವರ್ಷ ಬಹಳ ಹಿಂದಿನ ಪುರಾತನ ಆಳುಪ ಅರಸರ ಕಾಲದಿಂದಲೂ ಪೂಜೆ ಗೊಳ್ಳುತ್ತಿರುವ ಶ್ರೀ ಪದ್ಮಾವತಿ ದೇವಿ ನೆಲೆಸಿರುವ ಬೋಳಂಬಳ್ಳಿ ಬಸದಿಯ ದರ್ಶನ ಮಾಡಿ, ಸ್ಥಳದಲ್ಲಿಯೇ ಸದಸ್ಯರಿಗೆ ಕೆಲ ಕ್ರೀಡೆಗಳನ್ನು ಏರ್ಪಡಿಸಿ ಕ್ಷೇತ್ರದ ಪ್ರಸಾದ ಸ್ವೀಕರಿಸಲು ನಿರ್ಧರಿಸಲಾಯಿತು" ಎಂದರಲ್ಲದೆ ಅತಿಥಿಗಳನ್ನೂ ಸ್ವಾಗತಿಸಿ ಮುಂದುವರಿದು ಕಾರ್ಯಕ್ರಮಕ್ಕೆ ಅನುಮತಿ ನೀಡಿ ಸಹಕರಿಸಿದ ಕ್ಷೇತ್ರದ ಆಡಳಿತ ಮಂಡಳಿಯನ್ನು ಶ್ಲಾಘಿಸಿದರು. ಅನಂತರ ಇನ್ನೋರ್ವ ಅತಿಥಿ ಧರ್ಮರಾಜ ಜೈನ್ ರವರ ಪುತ್ರ ಡಾಕ್ಟರ್ ಆಕಾಶ್ ರಾಜ್ ರವರೂ ಮನೋರಂಜನೆಯ ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸುತ್ತಾ ಸಂಘದ ಚಟುವಟಿಕೆಗಳನ್ನು ಹೊಗಳುತ್ತಾ,ಪುರೋಹಿತರ ಸಂಘಟನೆ ಇಲ್ಲಿಗೆ ಬಂದುದು ನಮ್ಮ ಭಾಗ್ಯ ಎಂದು ತಿಳಿಯುತ್ತೇವೆ ಎಂದರು ಹಾಗು ಮುಂದಕ್ಕೂ ಪ್ರೋತ್ಸಾಹ ನೀಡುವ ಭರವಸೆ ನೀಡಿದರು. ಅನಂತರ ಧರ್ಮರಾಜ ಜೈನ್ ರವರನ್ನು ಶಾಲು, ಹಾರ, ಫಲ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು ಹಾಗೂ ಇಂದ್ರ ಸಮಾಜದ ವತಿಯಿಂದ ಕ್ಷೇತ್ರಕ್ಕೆ ದೇಣಿಗೆಯನ್ನು ನೀಡಲಾಯಿತು. ಕ್ಷೇತ್ರದ ವತಿಯಿಂದ ಹಿರಿಯ ಪುರೋಹಿತರಾದ ಪಡೆಂಗಡಿ ಅರುಣಾ ಕುಮಾರ್ ಇಂದ್ರ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಇಂದ್ರ ಸಮಾಜದ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಎರ್ಮಾಳು ಸುಧೀರ್ ಕುಮಾರ್ ಇಂದ್ರರವರನ್ನೂ ಶಾಲುಹಾಕಿ ಅಭಿನಂದಿಸಲಾಯಿತು. ಉಪಾಧ್ಯಕ್ಷರಾದ ದಿವ್ಯಾವಿರೇಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆರಂಭದಲ್ಲಿ ವಾಣಿಶ್ರೀ ಪ್ರಾರ್ಥನೆ ನೆರವೇರಿಸಿದರು. ಕಾರ್ಯದರ್ಶಿ ಅಭಯ ಕುಮಾರ್ ಧನ್ಯವಾದ ಸಮರ್ಪಿಸಿದರು, ಆಹ್ಲಾದ ಜೈನ್ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು. ಸುಜಾತ, ಶ್ರೇಯಶ್ರೀ, ಮೇಘನಾರವರು ಕ್ರೀಡಾ ನಿರ್ಣಾಯಕರಾಗಿ ಸಹಕರಿಸಿದರು. ವಿಜೇತರ ಪಟ್ಟಿಯನ್ನು ಸುಜ್ಞಾನ ಇಂದ್ರ ವಾಚಿಸಿದರು. ಶಾಂತಿ ಮಂತ್ರದೊಡನೆ ಕಾರ್ಯಕ್ರಮಕ್ಕೆ ಮುಕ್ತಾಯ ಮಾಡಿ ಪ್ರವಾಸಿ ತಂಡ ಮೂಡುಬಿದಿರೆಗೆ ಹಿಂದಿರುಗಿತು.

ಭಾರತೀಯ ಸೇನೆಯಲ್ಲಿ ವಿಪುಲ ಅವಕಾಶ ನಿವೃತ್ತ ಯೋಧ ಕಾರ್ಗಿಲ್ ವೀರ ನಾಯಕ್ ಲೀಲಾದರ್ ಕಡಂಬೋಡಿ

Article Image

ಭಾರತೀಯ ಸೇನೆಯಲ್ಲಿ ವಿಪುಲ ಅವಕಾಶ ನಿವೃತ್ತ ಯೋಧ ಕಾರ್ಗಿಲ್ ವೀರ ನಾಯಕ್ ಲೀಲಾದರ್ ಕಡಂಬೋಡಿ

ಭಾರತೀಯ ಸೇನೆ ವಿಶ್ವದ ಅತ್ಯಂತ ಶಿಸ್ತಿನ ಮತ್ತು ಶಕ್ತಿಶಾಲಿ ಸೈನ್ಯಗಳಲ್ಲಿ ಒಂದು. ದೇಶದ ರಕ್ಷಣೆಯೊಂದಿಗೆ ಸೇನೆ ತನ್ನ ಸದಸ್ಯರಿಗೆ ವೈವಿಧ್ಯಮಯ ಅವಕಾಶಗಳನ್ನು ವೃತ್ತಿಪರ ಬೆಳವಣಿಗೆ, ಶಿಸ್ತು ಹಾಗೂ ಗೌರವದ ಜೀವನವನ್ನು ಒದಗಿಸುತ್ತದೆ. ಎಂದು ಭಾರತೀಯ ಸೇನೆಯ ನಿವೃತ್ತ ಯೋಧ ನಾಯಕ್ ಲೀಲಾದರ್ ಕಡಂಬೋಡಿ ಅವರು ಹೇಳಿದರು. ಮೂಡುಬಿದಿರೆಯ ಕಲ್ಲಬೆಟ್ಟುವಿನ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಜರಗಿದ ವೀರ ಯೋಧರಿಗೆ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಭಾರತೀಯ ಸೇನೆಯಲ್ಲಿ ಇರುವಂತಹ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತಾ, ಕಾರ್ಗಿಲ್ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತ ಯೋಗೇಂದ್ರ ಸಿಂಗ್ ಯಾದವ್ ಅವರ ಹೋರಾಟವನ್ನು ಸ್ಮರಿಸಿದರು. ನಿವೃತ್ತಿಯ ನಂತರವೂ ನಾವೂ ದೈಹಿಕವಾಗಿ ಸದೃಡರಾಗಿದ್ದರೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಗೌರವ ಅವಕಾಶಗಳು ಸಿಗುತ್ತವೆ. ಸೈನಿಕರನ್ನು ಗುರುತಿಸುವ ಕಾರ್ಯಕ್ರಮ ಮುಂದೆ ಕೂಡ ಈ ಸಂಸ್ಥೆಯಿಂದ ನಡೆಯಲಿ. ಮುಂದಿನ ದಿನಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಸೇನೆಗೆ ಸೇರಿ ಈ ಸಂಸ್ಥೆಯಿಂದ ಗೌರವಿಸುವಂತಾಗಲಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಮಾತನಾಡಿ ಎಲ್ಲರಿಗೂ ಭಗವಂತ ಪ್ರತಿಭೆಯನ್ನು ಕೊಟ್ಟಿದ್ದಾನೆ ಅದನ್ನು ಬಳಸಿಕೊಂಡು ಜೀವನವನ್ನು ರೂಪಿಸಿಕೊಳ್ಳಬೇಕು, ನಾವೆಲ್ಲರೂ ಸುಖ ಶಾಂತಿ ನೆಮ್ಮದಿಯಿಂದ ಇರಲು ಭಾರತೀಯ ಸೇನೆ ಕಾರಣ. ಸೇನೆಗೆ ಸೇರಲು ದೈಹಿಕ ಸಾಮರ್ಥ್ಯ ಬಹುಮುಖ್ಯ. ದೇಶ ಸೇವೆಗೆ ಎಲ್ಲರೂ ಸೇರಬೇಕು. ದೇಶ ಕಾಯುವ ಸೈನಿಕರ ಬಗ್ಗೆ ನಮಗೆ ಗೌರವ ಇರಬೇಕು, ಎಲ್ಲರಲ್ಲೂ ದೇಶ ಪ್ರೇಮವನ್ನು ಹುಟ್ಟಿಸಬೇಕು, ಎಂದು ಹೇಳಿದರು. ಈ ಸಂದರ್ಭದಲ್ಲಿ ನಿವೃತ್ತ ಯೋಧ ನಾಯಕ್ ಲೀಲಾಧರ ಕಡಂಬೋಡಿಯವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು ವೇದಿಕೆಯಲ್ಲಿ ದೇಶದ ವೀರಯೋಧರ ಸೇವೆಯನ್ನು ಅವರ ತ್ಯಾಗ ಬಲಿದಾನವನ್ನು ನೃತ್ಯದ ಮೂಲಕ ಬಿಂಬಿಸಲಾಯಿತು. ಭಾರತೀಯ ಧೀರ ಯೋಧ ಮೇಜರ್ ಆಶಾರಾಮ್ ತ್ಯಾಗಿ ಅವರ ಹೋರಾಟದ ದೃಶ್ಯ ರೂಪಕವನ್ನು ಅಭಿನಯಿಸಲಾಯಿತು. ಇದೇ ಕಾರ್ಯಕ್ರಮದಲ್ಲಿ ಸಂಸ್ಥೆಯ ಎನ್‌ಸಿಸಿ ವಿದ್ಯಾರ್ಥಿಗಳಿಗೆ ಶಿಸ್ತು, ಜವಬ್ದಾರಿ ಹಾಗೂ ರಾಷ್ಟ್ರಭಕ್ತಿ ನೈತಿಕತೆಯ ಮೌಲ್ಯ ಸಾರುವ ಎನ್‌ಸಿಸಿ ಬ್ಯಾರೆಟ್‌ಗಳನ್ನು ನೀಡಲಾಯಿತು. ಶಿಸ್ತು, ಶಾರೀರಿಕ ಕ್ಷಮತೆ ಹಾಗೂ ರಾಷ್ಟ್ರಭಕ್ತಿಯ ಅಭಿವ್ಯಕ್ತಿಗಾಗಿ ಎನ್‌ಸಿಸಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು. ಸಂಸ್ಥೆಯ ಆಡಳಿತ ನಿರ್ದೇಶಕರಾದ ಡಾ. ಸಂಪತ್‌ಕುಮಾರ್ ಜೈನ್, ಶಾಲೆಯ ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್, ಉಪಮುಖ್ಯೋಪಾಧ್ಯಾಯರಾದ ಜಯಶೀಲ ಉಪಸ್ಥಿತರಿದ್ದ ಈ ಕಾರ್ಯಕ್ರಮವನ್ನು ಶಾಶ್ವತ್ ಮತ್ತು ಆರ್ಯನ್ ಶಿಂಧೆ ನಿರೂಪಿಸಿದರು. ದಕ್ಷ ಸ್ವಾಗತಿಸಿ, ಚಾರ್ವಿ ವಂದಿಸಿದರು.

ಹೊಂಬುಜದ ಜೈನ ಮಠಕ್ಕೆ ಕಾಲ್ನಡಿಗೆಯಿಂದ ಶ್ರೀಕ್ಷೇತ್ರ ದರ್ಶನ ಮಾಡುವ ಸಂಕಲ್ಪ ಯಾತ್ರೆ

Article Image

ಹೊಂಬುಜದ ಜೈನ ಮಠಕ್ಕೆ ಕಾಲ್ನಡಿಗೆಯಿಂದ ಶ್ರೀಕ್ಷೇತ್ರ ದರ್ಶನ ಮಾಡುವ ಸಂಕಲ್ಪ ಯಾತ್ರೆ

ಜನರು ದೇವರಿಗೆ ಭಕ್ತಿ ಸಮರ್ಪಣೆ ಮಾಡಲು ವಿವಿಧ ವಿಧಾನಗಳನ್ನು ಅನುಸರಿಸುತ್ತಾರೆ. ಅದರಲ್ಲಿ ಕಾಲ್ನಡಿಗೆಯಿಂದ (ಪಾದಯಾತ್ರೆ) ಯಾತ್ರೆಯನ್ನು ಮಾಡುವ ಮೂಲಕ ದೇವರ ದರ್ಶನ ಮಾಡಿ ಧನ್ಯತಾ ಭಾವ ತೋರುವುದೂ ಕೂಡಾ ಒಂದು. ಈ ಪಾದಯಾತ್ರೆಯ ಉದ್ದೇಶ ದೇವರ ದರ್ಶನ ಮಾತ್ರವಲ್ಲ, ಸಾಧನೆ, ಯುವ ಶಕ್ತಿಯ ಉತ್ಸಾಹ, ಯುವಕರ ಸಂಘಟನೆ, ಧರ್ಮಜಾಗ್ರತಿ, ಸಂಸ್ಕೃತಿ ಮತ್ತು ಪರಂಪರೆಯ ಅನಾವರಣ ಕೂಡಾ ಅಡಗಿದೆ ಎನ್ನಬಹುದು ಜೊತೆಗೆ ಒಗ್ಗಟ್ಟಿನ ಪ್ರದರ್ಶನವೂ ಹೌದು. ಈ ಹಿನ್ನಲೆಯಲ್ಲಿ ಹಾವೇರಿ ಜಿಲ್ಲಾ ಶಿಗ್ಗಾವಿ ತಾಲೂಕ "ಅ ಮ ಕೊಪ್ಪ ಮತ್ತು ದುಂಡಸಿ" ಗ್ರಾಮದ ಜೈನ ಸಮಾಜದ ಯುವಕರು ಪ್ರಶಾಂತ ಬಿಶೆಟ್ಟಿ, ಸಂತೋಷ ಧರಣಪ್ಪನವರ, ಭರತೇಶ ದೀಪಣ್ಣವರ, ಬ್ರಹ್ಮಾನಂದ ಪುಟ್ಟಣ್ಣವರ, ಭರಮಪ್ಪ ದೇ, ಧರನಪ್ಪನವರ, ಧರಣೇಂದ್ರ ಜ ಮನಕಟ್ಟಿ, ಬಾಬು ಭದ್ರಾಪುರ, ಚಂದ್ರು ವೈಗುಡ್ಡಿ ಮುಂತಾದ ಇತರ ಯುವ ಮುಖಂಡರು ಒಂದು ತಂಡವನ್ನು ಕಟ್ಟಿಕೊಂಡು ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ದರ್ಶನ ಮಾಡುವ ಸಂಕಲ್ಪ ಮಾಡಿ ಯಾತ್ರೆಗೆ ಸನ್ನದ್ದರಾದರು. ಪ್ರಾರಂಭದಲ್ಲಿ 20 ಜನರಿದ್ದ ಈ ತಂಡದಲ್ಲಿ ಈಗ ನೂರರ ಸಂಖ್ಯೆ ದಾಟಿದೆ. ಈ ತಂಡವು ಪ್ರತಿವರ್ಷ ಶ್ರಾವಣ ಮಾಸದ ಕೊನೆಯ ಶುಕ್ರವಾರದಂದು ಹೊಂಬುಜದ ಶ್ರೀಕ್ಷೇತ್ರದ ಇಷ್ಟಾರ್ಥ ಫಲಪ್ರದಾಯಿನಿ ಮಹಾಮಾತೆ ಪದ್ಮಾವತಿ ಅಮ್ಮನವರ ದರ್ಶನಮಾಡುವ ಉದ್ದೇಶದಿಂದ ನಾಲ್ಕು ವರ್ಷಗಳಿಂದ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಇದು ಈ ತಂಡದ ನಾಲ್ಕನೇ ವರ್ಷದ ಪಾದಯಾತ್ರೆ. ಇದೇ ಆಗಸ್ಟ್ 17 ರಿಂದ 21 ರವರೆಗೆ ಕೈಗೊಂಡಿದ್ದು ಸುಮಾರು 200 ಕೀ ಮೀ ದಾರಿಯನ್ನು 5 ದಿನಗಳಲ್ಲಿ ಕ್ರಮಿಸಿ ಕ್ಷೇತ್ರವನ್ನು ತಲುಪಲಿದ್ದಾರೆ. ಶ್ರಾವಣ ಮಾಸದ ಕೊನೆಯ ಸಂಪತ್ ಶುಕ್ರವಾರ ದಿ 22ರಂದು ದೇವಿ ದರ್ಶನ ಮಾಡಿ ಪೂಜಾದಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಈ ಸಂಕಲ್ಪ ಯಾತ್ರೆಯಲ್ಲಿ ಜಾತ್ಯತೀತವಾಗಿ ಸರ್ವಧರ್ಮದವರು ಕೂಡಾ ಭಾಗೀಗಳಾಗುತ್ತಿರುವದು ವಿಶೇಷವಾಗಿದೆ. ಅತ್ಯಂತ ಶ್ರದ್ದಾ ಭಕ್ತಿಯಿಂದ ದೇವಿ ದರ್ಶನ ಮಾಡಿ ಪಾವನರಾಗಬೇಕೆಂಬ ಉದ್ದೇಶ ಹೊಂದಿದ ಈ ತಂಡದ ಪಾದಯಾತ್ರೆ ಫಲಪ್ರದವಾಗಿ ಯಶಸ್ವಿಯಾಗಲಿ, ಜಗದ್ ರಕ್ಷಕಿ ಮಹಾಮಾತೆಯ ಕೃಪಾಶೀರ್ವಾದ ಎಲ್ಲರ ಮೇಲಿರಲಿ ಹಾಗು ಸಕಲ ಇಷ್ಟಾರ್ಥಗಳು ಈಡೇರಲಿ ಎನ್ನುವ ಆಶಯಗಳೊಂದಿಗೆ ಶುಭ ಹಾರೈಕೆಗಳು ಮತ್ತು ಅಭಿನಂದನೆಗಳು. ವರದಿ: ಶಾಂತರಾಜ ಮಲ್ಲಸಮುದ್ರ

ಮೂಡುಬಿದಿರೆ: ಜೈನ್ ಮಿಲನ್ ಪದ ಸ್ವೀಕಾರ ಸಮಾರಂಭ

Article Image

ಮೂಡುಬಿದಿರೆ: ಜೈನ್ ಮಿಲನ್ ಪದ ಸ್ವೀಕಾರ ಸಮಾರಂಭ

ಭಾರತೀಯ ಜೈನ್ ಮಿಲನ್ ಮೂಡುಬಿದರೆ ವಲಯದ 25-27ನೇ ಸಾಲಿನ ಪದ ಸ್ವೀಕಾರ ಸಮಾರಂಭ ಜುಲೈ 27ರಂದು ಮಹಾವೀರಭಾನದಲ್ಲಿ ಜರಗಿತು. ನೂತನ ಅಧ್ಯಕ್ಷರಾಗಿ ಮಹೇಂದ್ರ ಕುಮಾ‌ರ್ ಜೈನ್, ಕಾರ್ಯದರ್ಶಿಯಾಗಿ ಶಶಿಕಾಂತ್ ಎ, ಕೋಶಾಧಿಕಾರಿಯಾಗಿ ಶ್ರೇಯಾಂಸ ಹೆಗ್ಡೆ, ಅಧಿಕಾರವನ್ನು ವಹಿಸಿಕೊಂಡರು. ಕಾರ್ಯಕ್ರಮದಲ್ಲಿ ದಿವ್ಯ ಉಪಸ್ಥಿತ ಪರಮಪೂಜ್ಯ ಆಚಾರ್ಯ ಗುಲಾಬ್ ಭೂಷಣ್ ಜಿ ಮಹಾರಾಜ್ ಅವರು: ಜೈನರು, ಬದುಕು ಬದುಕಲು ಬಿಡು ಎನ್ನುವ ಧೈಯವನ್ನು ಪಾಲಿಸಬೇಕು. ಶಾಂತಿ ಸುಖವನ್ನು ನೀಡುವ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಂಡು ಆಚಾರ್ಯರುಗಳ, ಗುರುಗಳ ಆಶೀರ್ವಾದವನ್ನು ಸದಾ ಪಡೆದುಕೊಳ್ಳಬೇಕು ಎಂದು ಕರೆ ಕೊಟ್ಟರು. ಮೂಡುಬಿದಿರೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ಧರ್ಮವಾರ್ತೆಯನ್ನು ಕೇಳಿ ಜೈನ ಬಂಧುಗಳು ಸದುಪಯೋಗದ ಉತ್ತಮ ಕೆಲಸಗಳನ್ನು ಮಾಡಿ ಸಂಘಟನೆಯನ್ನು ಬಲಪಡಿಸಬೇಕು. ಅಸಹನೆಗೆ ಅವಕಾಶವನ್ನು ನೀಡದೆ ಆಚಾರ್ಯರಿಗೆ ಪೂಜ್ಯತೆಯಿಂದ ಒಗ್ಗಟ್ಟನ್ನು ತೋರಿಸಿಕೊಡಬೇಕಾಗಿದೆ ಎಂದು ಕೇಳಿಕೊಂಡರು. ವಲಯ ಉಪಾಧ್ಯಕ್ಷ ಸುದರ್ಶನ್ ಜೈನ್ ಮಾತನಾಡಿ ಜೈನ ಪರಂಪರೆಯನ್ನು ಯುವಕರಿಗೆ ತಿಳಿಸಿ ಕೊಡುವುದರೊಂದಿಗೆ ಮಕ್ಕಳನ್ನು, ಯುವಕರನ್ನು ಒಟ್ಟುಗೂಡಿಸಿ ಯುವ ಜೈನ್ ಸಂಘಟನೆ ರಚಿಸಬೇಕಾದ ಅಗತ್ಯವಿದೆ ಎಂದರು. ಸನ್ಮಾನಕ್ಕೆ ಉತ್ತರಿಸಿದ ಉಜಿರೆಯ ಸೋನಿಯಾ ವರ್ಮ ಅವರು. ಒಳ್ಳೆಯ ಸಮಯವನ್ನು ಹಾಳು ಮಾಡದೆ ಉತ್ತಮ ಕೆಲಸಗಳಿಗೆ ತೊಡಗಿಸಬೇಕೆಂದು ಕೇಳಿಕೊಂಡರು. 17 ಮಂದಿ ನೂತನ ಸದಸ್ಯರನ್ನು ಸಭೆಗೆ ಪರಿಚಯಿಸಲಾಯಿತು. ಅಭಯ ಚಂದ್ರ ಮಂಜುಳಾ ಜೈನ್ ದಂಪತಿಗಳನ್ನು ಸನ್ಮಾನಿಸಲಾಯಿತು. ವಲಯ ಉಪಾಧ್ಯಕ್ಷ ಸುದರ್ಶನ್ ಜೈನ್ ಮಾತನಾಡಿ ಜೈನ ಪರಂಪರೆಯನ್ನು ಯುವಕರಿಗೆ ತಿಳಿಸಿ ಕೊಡುವುದರೊಂದಿಗೆ ಮಕ್ಕಳನ್ನು, ಯುವಕರನ್ನು ಒಟ್ಟುಗೂಡಿಸಿ ಯುವ ಜೈನ್ ಸಂಘಟನೆ ರಚಿಸಬೇಕಾದ ಅಗತ್ಯವಿದೆ ಎಂದರು. ಸನ್ಮಾನಕ್ಕೆ ಉತ್ತರಿಸಿದ ಉಜಿರೆಯ ಸೋನಿಯಾ ವರ್ಮ ಅವರು. ಒಳ್ಳೆಯ ಸಮಯವನ್ನು ಹಾಳು ಮಾಡದೆ ಉತ್ತಮ ಕೆಲಸಗಳಿಗೆ ತೊಡಗಿಸಬೇಕೆಂದು ಕೇಳಿಕೊಂಡರು. 17 ಮಂದಿ ನೂತನ ಸದಸ್ಯರನ್ನು ಸಭೆಗೆ ಪರಿಚಯಿಸಲಾಯಿತು. ಅಭಯ ಚಂದ್ರ ಮಂಜುಳಾ ಜೈನ್ ದಂಪತಿಗಳನ್ನು ಸನ್ಮಾನಿಸಲಾಯಿತು. ವಲಯ ನಿರ್ದೇಶಕ ಜಯರಾಜ ಕಂಬಳಿ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಆಸ್ಪತ್ರೆಯಲ್ಲಿರುವ ಜೈನ್ ಮಿಲನ್ ನ ಅಧ್ಯಕ್ಷ ಅನಡ್ಕ ದಿನೇಶ್ ಕುಮಾರ್ ಅವರ ಆರೋಗ್ಯ ಸುಧಾರಿಸಲು ಎಲ್ಲರೂ ಭಗವಂತನಲ್ಲಿ ಪ್ರಾರ್ಥಿಸಿದರು. ಅವರ ಅನುಪಸ್ಥಿತಿಯಲ್ಲಿ ಪ್ರಭಾತ್ ಕುಮಾರ್ ಬಲ್ನಾಡ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶ್ವೇತಾ ಜೈನ್ ಉಪಸ್ಥಿತರಿದ್ದರು. ಅನಂತವೀರ ಜೈನ್ ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಶ್ ಕುಮಾರ್ ವರದಿ ವಾಚಿಸಿದರು. ಕೋಶಾಧಿಕಾರಿ ಪುಷ್ಪರಾಜ್ ಜೈನ್ ಲೆಕ್ಕಪತ್ರ ಮಂಡಿಸಿದರು. ನೂತನ ಅಧ್ಯಕ್ಷ ಮಹೇಂದ್ರ ಕುಮಾ‌ರ್ ಜೈನ್ ತಮ್ಮ ಎರಡು ವರ್ಷದ ಕಾಲಾವಧಿಯ ಕಾರ್ಯಸೂಚಿಯನ್ನು ಪ್ರಸ್ತುತಪಡಿಸಿದ್ದರು. ನಿತೀಶ್ ಕುಮಾರ್ ಬಲ್ಲಾಳ್ ಕಾರ್ಯಕ್ರಮ ನಿರ್ವಹಿಸಿದರು. ನೂತನ ಕಾರ್ಯದರ್ಶಿ ಶಶಿಕಾಂತ್ ಜೈನ್ ವರದಿ: ರಾಯಿ ರಾಜಕುಮಾರ ಮೂಡುಬಿದಿರೆ

ಶೀಘ್ರದಲ್ಲಿಯೇ ಧಾರ್ಮಿಕ ಪಾಠಶಾಲೆ ಪ್ರಾರಂಭ

Article Image

ಶೀಘ್ರದಲ್ಲಿಯೇ ಧಾರ್ಮಿಕ ಪಾಠಶಾಲೆ ಪ್ರಾರಂಭ

ಕೊಪ್ಪಳ: ಜೈನ ಕಾಶಿ ಕೊಪ್ಪಳ ತಾಲೂಕಿನ ಹುಲಗಿಯಲ್ಲಿ ಜೈನ ಧರ್ಮದ ತತ್ವಗಳನ್ನು ತಿಳಿಸುವ, ಮುಂದಿನ ಪಿಳಿಗೆಯು ಜೈನ ಧರ್ಮದ ಅಸ್ತಿತ್ವವನ್ನು ಉಳಿಸುವ ಉದ್ದೇಶದಿಂದ ಧಾರ್ಮಿಕ ಪಾಠಶಾಲೆ ಮಾಡಲು ಪ್ರಕ್ರೀಯೆ ಪ್ರಾರಂಭವಾಗಿದೆ. ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರ ನೇಮಕವನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿ ಅದನ್ನು ಪ್ರಾರಂಭ ಮಾಡಲಾಗುವುದು ಎಂದು ಶ್ರಾವಕ ಸುಹಾಸ ಇಜಾರೆ ಹುಲಗಿ ಅವರು ತಿಳಿಸಿದ್ದಾರೆ. ಕೊಪ್ಪಳದಲ್ಲಿ ಸುಮಾರು ಏಳು ನೂರು ಜೈನ ಬಸದಿಗಳು ಅಸ್ತಿತ್ವದಲ್ಲಿದ್ದವು, ಕಾಲಕ್ರಮೇಣ ಅವು ಇತಿಹಾಸದ ಪುಟ ಸೇರಿದವು. ಮೂಲ ಇದು ಜೈನ ಸ್ಥಳವಾಗಿದ್ದು, ಅದರ ಪುನರ್ ಸ್ಥಾಪನೆ ಇದರ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಕಟ್ಟ ಕಡೆಯ ಗ್ರಾಮ ಅಂಠರಣಾದಲ್ಲಿ ಆದಿನಾಥರ ವಿಗ್ರಹ ವಿದ್ದು, ಅಲ್ಲಿ ಜೈನರ ಉಪಸ್ಥಿತಿ ಇಲ್ಲದ ಕಾರಣ ಗ್ರಾಮಸ್ಥರು ಅದರ ಪೂಜೆ ಪುನಸ್ಕಾರ ಮಾಡುತ್ತಿದ್ದಾರೆ, ಅದನ್ನು ಕೊಪ್ಪಳ ಜೈನ ಬಸದಿಗೆ ಹಸ್ತಾಂತರ ಮಾಡಬೇಕು, ಹಾಗೇಯೇ ತಾಲೂಕಿನ ಜಬ್ಬಲಗುಡ್ಡದಲ್ಲಿ ಜೈನ ಬಸದಿಯ ಜಿರ್ಣೋದ್ಧಾರ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಬೇಕು ಎಂದು ಅವರು ತಿಳಿಸಿದರು. ಧಾರ್ಮಿಕ ಪಾಠಶಾಲೆಗೆ ಅಭಿನಂದನ ಗೋಗಿ, ಸಮೇದ ಜೈನ ಪದ್ಮ ಗೌಡ ಹೀರೆಗೌಡ್ರ, ಭುಜಬಲಿ ಪಾಟೀಲ್, ಉದಯರಾಜ ಕಾರಟಗಿ, ಉದಯ ಕುಮಾರ್ ಕಂಪಸಾಗರ, ಪಾಯಸಾಗರ, ಪದ್ಮಾವತಿ ಆನಂದ ಬಸ್ತಿ ನಿಲೋಗಲ್, ಗುರುರಾಜ್ ದೇಸಾಯಿ,ಅನಿಲ್ ಕುಮಾರ್ ಕಲ್ಯಾವಿ, ವಿನಯ ತುಂಬಳ, ಪುಷ್ಪದಂತ ಪಾಟೀಲ್‌, ಸನ್ಮತಿ ಇಜಾರೆ, ಶ್ರೀಕರ ಇಜಾರೆ, ಅನಿಲ್ ಕುಮಾರ್ ರೋಗೆ ಹೊಸಪೇಟೆ ಇವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದ್ದು, ಆಸಕ್ತ ಶ್ರಾವಕ, ಶ್ರಾವಕಿಯರು ಇದರ ಸದಸ್ಯತ್ವ ಪಡೆಯಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗುರು ಪೂರ್ಣಿಮೆಯ ಅಂಗವಾಗಿ ಸನ್ಮಾನ ಕಾರ್ಯಕ್ರಮ

Article Image

ಗುರು ಪೂರ್ಣಿಮೆಯ ಅಂಗವಾಗಿ ಸನ್ಮಾನ ಕಾರ್ಯಕ್ರಮ

ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ವತಿಯಿಂದ ಗುರುಪೂರ್ಣಿಮೆ ಹಾಗೂ ಆಷಾಡ ಮಾಸದ ವಿಶೇಷತೆಯ ಕುರಿತು ಕಾರ್ಯಕ್ರಮ ಪೆರ್ವಾಜೆ ಶಾಲೆಯಲ್ಲಿ ನಡೆಯಿತು. ವಸುಧಾ ಶೆಣೈಯವರು ಆಷಾಡ ಮಾಸದ ವಿಶೇಷತೆಯ ಕುರಿತು ಮಾತನಾಡಿದರು. ಗುರು ಪೂರ್ಣಿಮೆಯ ಕುರಿತು ಸಾವಿತ್ರಿ ಮನೋಹರ ಮಾತನಾಡಿದರು. ಗುರು ಪೂರ್ಣಿಮೆಯ ಅಂಗವಾಗಿ ಡಾಕ್ಟರೇಟ್ ಪದವಿಯನ್ನು ಪಡೆದ ಸದಸ್ಯೆಯರಾದ ಡಾ. ಸುಮತಿ ಪ್ರಭು ಹಾಗೂ ಡಾ. ಮಾಲತಿ ಜಿ. ಪೈಯವರನ್ನು ಸನ್ಮಾನಿಸಲಾಯಿತು. ರೂಪ ಚಿಪ್ಲೂಂಕರ್ ಪ್ರಾರ್ಥಿಸಿ, ಜಾಗೃತಿಯ ಅಧ್ಯಕ್ಷೆ ಪ್ರೊ. ಮಿತ್ರಪ್ರಭಾ ಹೆಗ್ಡೆ ಸ್ವಾಗತಿಸಿ, ಸುಲೋಚನ ಬಿ.ವಿ. ಧನ್ಯವಾದವನ್ನಿತ್ತರು. ಶೈಲಜಾ ಹೆಗ್ಡೆ ನಿರೂಪಿಸಿದರು.

ಕ ವಿ ವಿ ಕುಲಪತಿಯವರಿಗೆ ಗೌರವ ಸನ್ಮಾನ

Article Image

ಕ ವಿ ವಿ ಕುಲಪತಿಯವರಿಗೆ ಗೌರವ ಸನ್ಮಾನ

ಕರ್ನಾಟಕ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ ಡಾ. ಎ ಎಮ್ ಖಾನ್ ಇವರನ್ನು ಇಂದು ಕ ವಿ ವಿ ಜೈನ ಅಧ್ಯಯನ ಪೀಠ ಮತ್ತು ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಟ್ರಸ್ಟ್ ವತಿಯಿಂದ ಅಭಿನಂದಿಸಿ ಸತ್ಕರಿಸಲಾಯಿತು. ಪೀಠದ ಸಂಯೋಜಕರು ಹಾಗೂ ಟ್ರಸ್ಟಿನ ಅಧ್ಯಕ್ಷರೂ ಆದ ಡಾ. ಜಿನದತ್ತ ಹಡಗಲಿ, ಜೈನ ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯರಾದ ಶಾಂತರಾಜ ಮಲ್ಲಸಮುದ್ರ,ದನಪಾಲ ಜೆ ಮುನ್ನೊಳ್ಳಿ, ಧರಣೇoದ್ರ ಜವಳಿ, ಡಾ. ಆರ್.ಎ. ಬಾಳಿಕಾಯಿ ಮುಂತಾದವರು ಭಾಗವಹಿಸಿದ್ದರು. ಕುಲಪತಿಗಳು ಜೈನ ಅಧ್ಯಯನ ಪೀಠದ ಅಭಿವೃದ್ಧಿಗೆ ಮತ್ತು ಕಾರ್ಯಾಚಟುವಟಿಕೆಗೆ ನನ್ನ ಸಹಾಯ ಸಹಕಾರ ನೀಡುವುದಾಗಿ ಹೇಳಿದರು. ವರದಿ : ಶಾಂತರಾಜ ಮಲ್ಲಸಮುದ್ರ

ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ

Article Image

ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ

ಸತ್ತೂರು, ಧಾರವಾಡ: ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ಜುಲೈ 1, 2025 ರಂದು ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು. ಪಶ್ಚಿಮ ಬಂಗಾಳದ ಖ್ಯಾತ ವೈದ್ಯ ಮತ್ತು ಮುಖ್ಯಮಂತ್ರಿಯವರಾದ ಡಾ. ಬಿ. ಸಿ. ರಾಯ್ ಅವರ ಜನ್ಮದಿನವನ್ನು ಸ್ಮರಿಸಲು ಮತ್ತು ದೇಶದಲ್ಲಿ ವೈದ್ಯರನ್ನು ಸ್ಮರಿಸಲು ವೈದ್ಯರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಅವರ ಮನುಕುಲಕ್ಕೆ ನೀಡಿದ ಅಪಾರ ಸೇವೆಯನ್ನು ಪರಿಗಣಿಸಿ ಈ ದಿನವನ್ನು ಆಚರಿಸಲಾಗುತ್ತದೆ. ವೈದ್ಯರ ದಿನಾಚರಣೆಯ ಸಂದರ್ಭದಲ್ಲಿ, ಎಸ್.ಡಿ.ಎಂ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ 3 ಖ್ಯಾತ ವೈದ್ಯರನ್ನು ಸನ್ಮಾನಿಸಲಾಯಿತು ಡಾ. ಪ್ರಕಾಶ ಜಿ. ಮಹಾಲಿಂಗಶೆಟ್ಟಿ, ಹಿರಿಯ ಶಸ್ತ್ರಚಿಕಿತ್ಸಾ ಪ್ರಾಧ್ಯಾಪಕರು ಡಾ. ಚಿದೇಂದ್ರ ಶೆಟ್ಟರ್, ಹಿರಿಯ ಎಲಬು ಮತ್ತು ಕೀಲು ಚಿಕಿತ್ಸಕರು ಮತ್ತು ಕುಲಸಚಿವರು ಡಾ. ಶೀಲಾ ಎಸ್. ಕುದರಿ, ನುರಿತ ವೈದ್ಯಕೀಯ ಚಿಕಿತ್ಸಕರು ಉಪಕುಲಪತಿಗಳಾದ ಡಾ. ನಿರಂಜನ್ ಕುಮಾರ್ ಅವರು ಅಧ್ಯಕ್ಷತೆಯನ್ನು ವಹಿಸಿ, ಮೂವರು ವೈದ್ಯರನ್ನು ಸನ್ಮಾನಿಸಿದರು. ವೈದ್ಯರ ದಿನದ ಪ್ರಶಸ್ತಿಯನ್ನು ಸ್ವೀಕರಿಸಿದ ಹಿರಿಯ ಶಸ್ತ್ರಚಿಕಿತ್ಸಾ ಪ್ರಾಧ್ಯಾಪಕರಾದ ಡಾ. ಪ್ರಕಾಶ ಜಿ. ಮಹಾಲಿಂಗಶೆಟ್ಟಿ ಅವರು ಮಾತನಾಡುತ್ತಾ ವೈದ್ಯರು ರೋಗಿಗಳ ಆರೋಗ್ಯ ಮತ್ತು ಸಾಮಾಜಿಕ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ಚಿಕಿತ್ಸೆ ನೀಡಬೇಕು. ರೋಗಿಗಳ ಸಂತೃಪ್ತಿಯೇ ವೈದ್ಯರುಗಳ ತೃಪ್ತಿಯ ಮೂಲವಾಗಿರಬೇಕು. ಹೊಸವಿಷಯಗಳ ಅಧ್ಯಯನದೊಂದಿಗೆ ಉತ್ತಮ ಸಮಯ ಪಾಲನೆ ವೈದ್ಯರ ಜ್ಞಾನವನ್ನು ಹೆಚ್ಚಿಸುತ್ತದೆ. ಸರಳತೆ ಮತ್ತು ಕೃತಜ್ಞತಾ ಮನೋಭಾವ ಜೀವನದಲ್ಲಿ ಬಹಳ ಯಶಸ್ಸನ್ನು ತಂದುಕೊಡುತ್ತದೆ. ಎಸ್.ಡಿ.ಎಂ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ವಿಜಯ್ ಕುಲಕರ್ಣಿ ಅವರು ಅಭಿನಂದನಾ ಭಾಷಣ ಮಾಡಿದರು. ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್, ಸಹ ಉಪ ಕುಲಪತಿಗಳಾದ ಜೀವಂಧರ್ ಕುಮಾರ, ಹಣಕಾಸು ಅಧಿಕಾರಿಗಳಾದ ವಿ.ಜಿ. ಪ್ರಭು, ಆಡಳಿತ ನಿರ್ದೇಶಕರಾದ ಸಾಕೇತ ಶೆಟ್ಟಿ ಮತ್ತು ಇತರ ವಿಶ್ವವಿದ್ಯಾಲಯದ ಅಧಿಕಾರಿಗಳು, ಸಂಸ್ಥೆಯ ಮುಖ್ಯಸ್ಥರು, ಎಲ್ಲಾ ವೈದ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಎಸ್.ಡಿ.ಎಂ ವೈದ್ಯಕೀಯ ಮಹಾವಿಧ್ಯಾಲಯದ ಉಪ ಪ್ರಾಂಶುಪಾಲರಾದ ಡಾ. ವಿದ್ಯಾ ಪಾಟೀಲ ಅವರು ಅತಿಥಿಗಳನ್ನು ಸ್ವಾಗತಿಸಿದರು. ಡಾ. ಸುರೇಶ ಬಡಿಗೇರ, ಡಾ. ಸುನಿಲ್ ಎಂ. ಮತ್ತು ಡಾ. ಕಿರಣ ಐತಾಳ್ ಮೂವರು ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಡಾ. ಪ್ರಿಯಾಂಕಾ ಮೋತಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಾಧ್ಯಾಪಕರಾದ ಡಾ. ಆಶಾ ನೆರವಿ ವಂದನಾರ್ಪಣೆ ಸಲ್ಲಿಸಿದರು.

ಚಾಮರಾಜನಗರ: 17ನೇ ವರ್ಷದ ವಾರ್ಷಿಕೋತ್ಸವ

Article Image

ಚಾಮರಾಜನಗರ: 17ನೇ ವರ್ಷದ ವಾರ್ಷಿಕೋತ್ಸವ

ದಿಗಂಬರ ಪಾರ್ಶ್ವನಾಥ ಜೈನ ಬಸದಿಯ ಜೀರ್ಣೋದ್ಧಾರದ 17ನೇ ವರ್ಷದ ವಾರ್ಷಿಕೋತ್ಸವದ ಪೂಜಾ ಕಾರ್ಯಕ್ರಮದಲ್ಲಿ ಕನಕಗಿರಿ ಜೈನ ಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿಗಳವರು ಪಾವನ ಸಾನ್ನಿಧ್ಯ ವಹಿಸಿ, ಮಾತನಾಡಿದ ಅವರು ಧರ್ಮ, ರಾಜಕೀಯ, ಸಂಸ್ಕೃತಿಗೆ ಚಾಮರಾಜನಗರ ಪ್ರಸಿದ್ಧಿಯಾಗಿದ್ದು ಕರ್ನಾಟಕಕ್ಕೆ ಅದರ್ಶಪ್ರಾಯವಾಗಿದೆ. ಇಲ್ಲಿರುವ ಹರಳುಕೋಟೆ ಹಾಗೂ ಹರದವಹಳ್ಳಿಯಲ್ಲಿರುವ ದೇವಸ್ಥಾನಗಳು ಪುರಾತನವಾಗಿವೆ. ವಿಜಯ ಪಾರ್ಶ್ವನಾಥ ಸ್ವಾಮಿ ದೇವಸ್ಥಾನ 1116ರಲ್ಲಿ ನಿರ್ಮಾಣವಾಗಿರುವುದು ಇತಿಹಾಸದಿಂದ ತಿಳಿದು ಬರುತ್ತದೆ. ಜನಪದ ಕಲೆಗೂ ಜಿಲ್ಲೆ ಪ್ರಸಿದ್ಧಿ ಪಡೆದಿದೆ ಎಂದು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಜಿ. ಆರ್. ಆಶ್ವಥ್ ನಾರಾಯಣ್ ಮತ್ತು ವೆಂಕಟನಾಗಪ್ಪ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜೈನ ಸಮಾಜದ ಅಧ್ಯಕ್ಷ ನಿರ್ಮಲ್ ಕುಮಾರ್ ಜೈನ್, ಜೈಶಾಮಾದೇವಿ ಸಂಘದ ಅಧ್ಯಕ್ಷೆ ಪದ್ಮಶ್ರೀ ಬ್ರಹ್ಮೇಶ್ ಉಪಸ್ಥಿತರಿದ್ದರು.

ಮುಸಕೊಂಡ್ಲಿ ಶ್ರೀ ಪಾರ್ಶ್ವನಾಥ - ಉಡೆದಾರ್ ಪದ್ಮಾವತಿ ವಾರ್ಷಿಕ ಪೂಜಾ ಸಂಪನ್ನ

Article Image

ಮುಸಕೊಂಡ್ಲಿ ಶ್ರೀ ಪಾರ್ಶ್ವನಾಥ - ಉಡೆದಾರ್ ಪದ್ಮಾವತಿ ವಾರ್ಷಿಕ ಪೂಜಾ ಸಂಪನ್ನ

ತುಮಕೂರು ಜಿಲ್ಲೆ, ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಮುಸಕೊಂಡ್ಲಿಯ ಇತಿಹಾಸ ಪ್ರಸಿದ್ಧ ಶ್ರೀ ಪಾರ್ಶ್ವನಾಥ ತೀರ್ಥಂಕರ, ಉಡೆದರ್ ಪದ್ಮಾವತಿ ಜೈನಬಸದಿಯ ವಾರ್ಷಿಕ ಪೂಜಾ ಮಹೋತ್ಸವ ಇಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಪನ್ನಗೊಂಡಿತು. ಶ್ರೀ ಕ್ಷೇತ್ರ ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಜಿಗಳವರ ದಿವ್ಯ ಆಶೀರ್ವಾದದೊಂದಿಗೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಬೆಳಗ್ಗೆ ನಿತ್ಯ ಅಭಿಷೇಕ, ಪೂಜೆ, ಉತ್ಸವ, ಆರಾಧನೆಗಳು, 108 ಕಳಶಗಳ ಅಭಿಷೇಕಗಳು ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶ್ರೀ ಪಾರ್ಶ್ವನಾಥ, ಉಡೆದರ್ ಪದ್ಮಾವತಿ ಜೈನ ಬಸದಿ ಸಮಿತಿಯ ಅಧ್ಯಕ್ಷ ಕಾಂತರಾಜು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ತುಮಕೂರು ಶ್ರೀ ದಿಗಂಬರ ಜೈನ ಶ್ರೀ ಪಾರ್ಶ್ವನಾಥ ಜಿನಮಂದಿರ ಸಮಿತಿಯ ಮಹಾವೀರ್, ಮುಸಕೊಂಡ್ಲಿ ಜೈನ ಸಮಾಜದ ಎಂ.ಡಿ ಶಾಂತರಾಜು, ಪತ್ರಿಕಾ ವರದಿಗಾರ ಎಂ.ಡಿ. ಮೋಹನ್ ಎಂ.ಡಿ. ಚಂದ್ರಯ್ಯ. ಪಂಕಜ ಚಂದ್ರಯ್ಯ, ಉಡೆದರ್ ವಂಶಸ್ಥರಾದ ಧರಣಿಂದ್ರ, ಭರತ್ ಕುಮಾರ್, ಪದ್ಮಲತಾ, ಎಂ.ಎನ್. ಬಾಹುಬಲಿ, ಶ್ರೀ ಮಹಾವೀರ ಜೈ ನ ಬಸದಿ ಹಾಗೂ ಶ್ರೀ ಪಾರ್ಶ್ವನಾಥ- ಉಡೆದರ್ ಪದ್ಮಾವತಿ ಜೈನಬಸದಿಯ ಸದಸ್ಯರು, ಮುಸಕೊಂಡ್ಲಿ ಜೈನ ಸಮಾಜದ ಮುಖಂಡರು, ಪದ್ಮಾವತಿ ಮಹಿಳಾ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು, ಉಡೇದಾರ್ ವಂಶಸ್ಥರು, ಮೈಸೂರು, ಮುಸಕೊಂಡ್ಲಿ, ತುಮಕೂರು, ಕುಣಿಗಲ್, ಬೆಂಗಳೂರು, ಸೇರಿದಂತೆ ರಾಜ್ಯದ ವಿವಿಧಡೆಗಳಿಂದ ವಿವಿಧ ಜೈನ ಸಂಘಟನೆಗಳ ಪದಾಧಿಕಾರಿಗಳು, ಶ್ರಾವಕ- ಶ್ರಾವಕಿಯರು ಭಾಗವಹಿಸಿದ್ದರು. ಪ್ರತಿಷ್ಠಾಪನಾಚಾರ್ಯ ಅನಿಲ್ ಕುಮಾರ್ ಹಾಗೂ ಸ್ಥಳೀಯ ಪುರೋಹಿತರಾದ ಅಮೃತ್ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಜೆ. ರoಗನಾಥ, ತುಮಕೂರು.

ಜೈನ ಪದವಿಪೂರ್ವ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Article Image

ಜೈನ ಪದವಿಪೂರ್ವ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಮೂಡುಬಿದರೆಯ ಜೈನ ಪದವಿಪೂರ್ವ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗೆ ಪ್ರಾಣಾಯಾಮ ಮತ್ತು ಯೋಗದ ಮಹತ್ವವನ್ನು ತಿಳಿಸಲಾಯಿತು. ಆಳ್ವಾಸ್ ನ್ಯಾಚುರೋಪತಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಪ್ರಜ್ಞ ಶೆಟ್ಟಿ ಹಾಗೂ ಡಾ. ಶಾಲಿನಿ ಅವರು ಪ್ರಾಣಾಯಾಮವನ್ನು ಮಾಡಿಸುವುದರ ಮೂಲಕ ಅದರ ಮಹತ್ವವನ್ನು ವಿವರಿಸಿದರು ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಭಾತ್ ಬಲ್ನಾಡು ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ನೀಶಾ ಜೈನ್ ನಿರೂಪಿಸಿದರು

ಸತ್ತೂರು, ಧಾರವಾಡ: 11ನೇ ಅಂತರರಾಷ್ಟ್ರೀಯ ಯೋಗ ದಿನ

Article Image

ಸತ್ತೂರು, ಧಾರವಾಡ: 11ನೇ ಅಂತರರಾಷ್ಟ್ರೀಯ ಯೋಗ ದಿನ

ಎಸ್.ಡಿ.ಎಂ. ವಿಶ್ವವಿದ್ಯಾಲಯವು 11ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಎಸ್.ಡಿ.ಎಂ. ದಂತ ಮಹಾವಿದ್ಯಾಲಯದಲ್ಲಿ “ಒಂದು ಭೂಮಿ - ಒಂದು ಆರೋಗ್ಯ” ಎಂಬ ಧ್ಯೇಯವಾಕ್ಯದಡಿಯಲ್ಲಿ ಆಚರಿಸಲಾಯಿತು. ಹೆಸರಾಂತ ದಂತ ಚಿಕಿತ್ಸಕರು ಮತ್ತು ಯೋಗ ತಜ್ಞೆಯಾದ ಡಾ. ಕೃತಿಕಾ ಗುತ್ತಲ್ ಅವರು ಮುಖ್ಯ ಅತಿಥಿಯಾಗಿದ್ದರು. ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾದ ಡಾ. ಕೃತಿಕಾ ಗುತ್ತಲ್, ಯೋಗದ ಮಹತ್ವವನ್ನು ತಿಳಿಸಿ ಮಾತನಾಡುತ್ತಾ: ಯೋಗವು ಆರೋಗ್ಯಕರ ಜೀವನಕ್ಕೆ ಸಮಗ್ರ ಜ್ಞಾನವನ್ನು ಒದಗಿಸುತ್ತದೆ, ಯೋಗಾಸನಗಳನ್ನು ಮಾಡುವ ಮೂಲಕ ನಮ್ಮ ದೇಹ ಮತ್ತು ಮನಸ್ಸು ಉಲ್ಲಾಸದಿಂದಿರುತ್ತದೆ, ಯೋಗವು ದೇಹ ಮತ್ತು ಮನಸ್ಸಿಗೆ ಸುಲಭವಾದ ವ್ಯಾಯಾಮವಾಗಿದ್ದು ಎಲ್ಲರೂ ಅದನ್ನು ರೂಢಿಸಿಕೊಳ್ಳಬಹುದು, ಯೋಗವು ದೇಹದ ಲವಲವಿಕೆಯನ್ನು ಹೆಚ್ಚಿಸಿ, ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ, ಮನಸ್ಸಿನ ಶಾಂತತೆಗೆ ಮತ್ತು ದಕ್ಷತೆಯ ಕಾರ್ಯನಿರ್ವಹಣೆಗೆ ಯೋಗಾಭ್ಯಸಗಳು ಅತ್ಯಾವಶ್ಯಕ, ನಿರಂತರ ಯೋಗ ಅಭ್ಯಾಸ ಹಾಗೂ ಪ್ರಾಚೀನ ಆಹಾರ ಸೇವನಾ ಪದ್ದತ್ತಿಯಿಂದ ಉತ್ತಮ ಜೀವನ ಶೈಲಿ ನಡೆಸಲು ಸಾಧ್ಯ ಎಸ್.ಡಿ.ಎಂ. ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್, ಸಹ ಉಪ ಕುಲಪತಿಗಳಾದ ವಿ. ಜೀವಂಧರ್ ಕುಮಾರ್, ಕುಲಸಚಿವರಾದ ಡಾ. ಚಿದೇಂದ್ರ ಎಂ ಶೆಟ್ಟರ್, ಡಾ. ಸತೀಶ್ ಪಾಟೀಲ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸುಮಾರು 300ಕ್ಕೂ ಅಧಿಕ ವೈದ್ಯರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಸ್.ಡಿ.ಎಂ ದಂತ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಲರಾಮ್ ಡಿ. ನಾಯ್ಕ ಅತಿಥಿಗಳನ್ನು ಸ್ವಾಗತಿಸಿದರು. ಡಾ. ಪ್ರಶಾಂತ್ ಮೋಗಿ ಧನ್ಯವಾದ ಅರ್ಪಿಸಿದರು ಮತ್ತು ಡಾ. ಶ್ರೇಯಾ ಕಾರ್ಯಕ್ರಮ ನಿರೂಪಿಸಿದರು. ಉಜಿರೆಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ತಂಡದವರು ದೇವರ ನಾಮ ಸ್ತುತಿಸಿ, ಯೋಗಾಸನಗಳನ್ನು ಪ್ರಸ್ತುತಿಪಡಿಸಿದರು.

ಮೂಡುಬಿದಿರೆಯ ಎಕ್ಸಲೆಂಟ್ ಸಮೂಹ ಸಂಸ್ಥೆಯಲ್ಲಿ ಅಂತರಾ‌ಷ್ಟ್ರೀಯ ಯೋಗ ದಿನಾಚರಣೆ

Article Image

ಮೂಡುಬಿದಿರೆಯ ಎಕ್ಸಲೆಂಟ್ ಸಮೂಹ ಸಂಸ್ಥೆಯಲ್ಲಿ ಅಂತರಾ‌ಷ್ಟ್ರೀಯ ಯೋಗ ದಿನಾಚರಣೆ

ಯೋಗವು ವಿಶ್ವಕ್ಕೆ ಭಾರತೀಯರ ಅಮೂಲ್ಯ ಕೊಡುಗೆ, ವಿದ್ಯಾರ್ಥಿಗಳು ಯೋಗಭ್ಯಾಸ ಮಾಡುವುದರಿಂದ ದೈನಂದಿನ ಕಾರ್ಯಗಳು ಸುಲಲಿತವಾಗಿ ಸಾಗುತ್ತದೆ. ಯೋಗವನ್ನು ಕೇವಲ ಚಟುವಟಿಕೆ ಆಗಿ ಸ್ವೀಕರಿಸದೆ ದೈನಂದಿನ ಜೀವನ ಶೈಲಿಯಾಗಿ ಸ್ವೀಕರಿಸಿ ಎಂದು ಮೂಡುಬಿದಿರೆಯ ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಇವರು ಅಭಿಪ್ರಾಯ ಪಟ್ಟರು. ಅಂತರಾ‌ಷ್ಟ್ರೀಯ ಯೋಗ ದಿನಾಚರಣೆಯ ಅವಸರದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿಶ್ವದ್ಯಂತ 180 ಅಧಿಕ ರಾಷ್ಟ್ರಗಳು ಯೋಗಸಕ್ತರಾಗಿದ್ದು. ಯೋಗವು ಇಂದು ವಿಶ್ವಮಾನ್ಯವಾಗಿದೆ, ಪ್ರತಿಯೊಬ್ಬ ಮಗುವು ಕೂಡ ನಿತ್ಯ ಜೀವನದಲ್ಲಿ ಯೋಗಭ್ಯಾಸವನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಸ್ಥೆಯ ಹಳೆಯ ವಿದ್ಯಾರ್ಥಿನಿ ಕು. ದಿಶಾ ಪ್ರಶಾಂತ್, ಮಾತನಾಡಿ ಯೋಗಭ್ಯಾಸಕ್ಕೆ ವಯಸ್ಸಿನ ಮಿತಿ ಇಲ್ಲ, ದೇಹ ಮತ್ತು ಮನಸ್ಸಿನ ಶುಚಿತ್ವಕ್ಕೆ ಯೋಗ ಬಲು ಸಹಕಾರಿ, ಪ್ರತಿಯೊಬ್ಬರು ತಮ್ಮ ದಿನನಿತ್ಯದ ಚಟುವಟಿಕೆ ಸುಗಮವಾಗಿ ಸಾಗಲು ಅಭ್ಯಸಿಸುವುದು ಉತ್ತಮ ಎಂದು ತಿಳಿಸಿದರು. ಸಂಸ್ಥೆಯ ಯೋಗ ತರಬೇತುದಾರರಾದ ದಿವ್ಯ ಎಂ. ಇವರು ಉಪಸ್ಥಿತರಿದ್ದು ಆಂತರಿಕ ಮತ್ತು ಬಾಹ್ಯ ಯೋಗಗಳ ಕುರಿತಾಗಿ ಮಾಹಿತಿ ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಯೋಗ ಪ್ರದರ್ಶನ ಮತ್ತು ಯೋಗ ನೃತ್ಯ ಪ್ರದರ್ಶಿಸಿ ಯೋಗ ದಿನಾಚರಣೆಯ ಸಂಭ್ರಮದಲ್ಲಿ ಪಾಲ್ಗೊಂಡರು. ವಿದ್ಯಾರ್ಥಿ ಶಾಶ್ವತ್ ಕಾರ್ಯಕ್ರಮ ನಿರೂಪಿಸಿ ವಂದಿಸಿದ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್, ಸಿ ಬಿ ಎಸ್ ಇ ಶಾಲಾ ಪ್ರಾಂಶುಪಾಲರಾದ ಶ್ರೀಪ್ರಸಾದ್, ಉಪ ಮುಖ್ಯೋಪಾಧ್ಯಾಯರಾದ ಜಯಶೀಲ, ಜೀವಶಾಸ್ತ್ರ ಉಪನ್ಯಾಸಕರಾದ ಪ್ರಶಾಂತ್ ಆರ್ ಉಪಸ್ಥಿತರಿದ್ದರು.

ಜೂನ್ 21: ಮೈಸೂರಿನಲ್ಲಿ ಹನ್ನೊಂದನೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Article Image

ಜೂನ್ 21: ಮೈಸೂರಿನಲ್ಲಿ ಹನ್ನೊಂದನೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಉಜಿರೆ: ಎಸ್.ಡಿ.ಎಂ. ಪ್ರಕೃತಿಚಿಕಿತ್ಸಾ ಮತ್ತು ಯೋಗವಿಜ್ಞಾನ ಕಾಲೇಜು, ಉಜಿರೆ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳು, ಶಾಂತಿವನ ಟ್ರಸ್ಟ್‌ನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು “ಪಯಣ” ವಿಂಟೇಜ್ ಕಾರುಗಳ ಸಂಗ್ರಹಾಲಯ, ಮೈಸೂರು-ಇವುಗಳ ಸಂಯುಕ್ತ ಆಶ್ರಯದಲ್ಲಿ ಜೂ.21 ರಂದು ಶನಿವಾರ ಬೆಳಿಗ್ಗೆ ಏಳು ಗಂಟೆಯಿಂದ ಮೈಸೂರಿನಲ್ಲಿ “ಪಯಣ” ಆವರಣದಲ್ಲಿರುವ ಸಭಾಭವನದಲ್ಲಿ ಹನ್ನೊಂದನೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಯೋಜಿಸಲಾಗಿದೆ ಎಂದು ಎಸ್.ಡಿ.ಎಂ. ಪ್ರಕೃತಿಚಿಕಿತ್ಸಾ ಮತ್ತು ಯೋಗವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ ಶೆಟ್ಟಿ ಮತ್ತು ಯೋಗ ನಿರ್ದೇಶಕ ಡಾ. ಶಶಿಕಾಂತ ಜೈನ್ ತಿಳಿಸಿದ್ದಾರೆ. ಮೈಸೂರು ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಸಮಾರಂಭವನ್ನು ಉದ್ಘಾಟಿಸುವರು. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯ ಸ್ವಾಮಿ, ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಬಂಡಿಸಿದ್ದೇಗೌಡ ಮತ್ತು ಮಾಜಿ ಸಚಿವ ಸಿ. ಎಸ್. ಪುಟ್ಟರಾಜು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭಾಶಂಸನೆ ಮಾಡುವರು. ಮೈಸೂರಿನಲ್ಲಿ ವಿವಿಧ ಕೇಂದ್ರಗಳಲ್ಲಿ ಈಗಾಗಲೆ ಸಾರ್ವಜನಿಕರಿಗೆ ಯೋಗ ತರಬೇತಿ ಶಿಬಿರ ನಡೆಸಿದ್ದು, ಇಲ್ಲಿ ತರಬೇತಿ ಪಡೆದ 3,500 ಮಂದಿ “ಪಯಣ”ದಲ್ಲಿ ನಡೆಯುವ ವಿಶ್ವಯೋಗ ದಿನಾಚರಣೆಯಲ್ಲಿ ಭಾಗವಹಿಸುವರು. ಉಜಿರೆಯ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿ ಆಶ್ರಯದಲ್ಲಿ ನಡೆಸಲ್ಪಡುವ ಎಲ್ಲಾ 54 ಶಿಕ್ಷಣ ಸಂಸ್ಥೆಗಳಲ್ಲಿ ಕೂಡಾ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೈನ ಯುವ ಗೆಳೆಯರ ಬಳಗದಿಂದ ಬ್ಯಾಡ್ಮಿಂಟನ್ ಪಂದ್ಯಾವಳಿ

Article Image

ಜೈನ ಯುವ ಗೆಳೆಯರ ಬಳಗದಿಂದ ಬ್ಯಾಡ್ಮಿಂಟನ್ ಪಂದ್ಯಾವಳಿ

ಜೈನ ಯುವ ಗೆಳೆಯರ ಬಳಗ (ಯೂತ್ ವಿಂಗ್, ಜೈನ ಗೆಳೆಯರ ಬಳಗ) ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಜುಲೈ 13ರಂದು ಭಾನುವಾರ, ಬೆಳಿಗ್ಗೆ 9:30 ರಿಂದ ಸಂಜೆ 5:00ರವರೆಗೆ ಮಂಜುಷಾ ಸ್ಪೋರ್ಟ್ಸ್ ಕ್ಲಬ್ ಪಟೇಲ್ ಚಿನ್ನಪ್ಪ ರೋಡ್, ಆದಿತ್ಯ ಲೇಔಟ್, ರಾಜರಾಜೇಶ್ವರಿ ನಗರ, ಬೆಂಗಳೂರಿನಲ್ಲಿ ಆಯೋಜಿಸಿದೆ. ಕೇವಲ ದಿಗಂಬರ ಜೈನರಿಗೆ ಮಾತ್ರ, ಸ್ಪರ್ಧೆಯ ವಿಭಾಗಗಳು: ಪುರುಷರ ಡಬಲ್ಸ್: 40 ವರ್ಷಕ್ಕಿಂತ ಕಡಿಮೆ, 40 ವರ್ಷಕ್ಕಿಂತ ಹೆಚ್ಚು ಮಹಿಳೆಯರ ಡಬಲ್ಸ್: 35 ವರ್ಷಕ್ಕಿಂತ ಕಡಿಮೆ, 35 ವರ್ಷಕ್ಕಿಂತ ಹೆಚ್ಚು ಪ್ರವೇಶ ಶುಲ್ಕ: ₹ 800/- (ಪ್ರತಿ ತಂಡಕ್ಕೆ), ಸೀಮಿತ ಸ್ಥಾನಗಳು ಮಾತ್ರ ನಿರಾಶೆಯಾಗದಂತೆ ಮುಂಚಿತವಾಗಿ ನೋಂದಾಯಿಸಿ. ಗಮನಿಸಬೇಕಾದ ಸಂಗತಿಗಳು: - ವಯಸ್ಸಿನ ಪುರಾವೆಗಾಗಿ ಆಧಾರ್ ಪ್ರತಿ ಅಗತ್ಯ - ರಾಜ್ಯ/ರಾಷ್ಟ್ರೀಯ ಶ್ರೇಣಿಯ ಆಟಗಾರರಿಗೆ ಅನುಮತಿಯಿಲ್ಲ - ಯೋನೆಕ್ಸ್ ಮಾವಿಸ್ 350 ಶಟಲ್ ಬಳಸಲಾಗುವುದು - ಅಂಪೈರ್ ನಿರ್ಧಾರ ಅಂತಿಮ - ಆಟಕ್ಕೆ ಮಾರ್ಕ್ ಇಲ್ಲದ ಶೂಗಳು ಮಾತ್ರ ಅನುಮತಿ - ಎಲ್ಲಾ ಭಾಗವಹಿಸುವವರಿಗೆ ಪ್ರಮಾಣ ಪತ್ರ ಮತ್ತು ಪದಕ ನೀಡಲಾಗುವುದು - ಎಲ್ಲರಿಗೂ ಮಧ್ಯಾಹ್ನದ ಊಟ ಒದಗಿಸಲಾಗುವುದು ಪ್ರಶಸ್ತಿಗಳು: ವಿಜೇತರು, ಉಪವಿಜೇತರಿಗೆ ಟ್ರೋಫಿಗಳು ನೋಂದಣಿಗಾಗಿ ಸಂಪರ್ಕಿಸಿ: ಸನ್ಮತಿ - 91 98453 28203 ಮಹಾವೀರ್ ರಾಜಕೀರ್ತಿ- 91 97427 09709 ವಿದ್ಯಾನಂದ - 91 98450 81162 ಚಿರಂತ್ - 91 72046 96475

ಶಿಲಾನ್ಯಾಸ ಪೂಜಾ ಕಾರ್ಯಕ್ರಮ

Article Image

ಶಿಲಾನ್ಯಾಸ ಪೂಜಾ ಕಾರ್ಯಕ್ರಮ

ಪಾಣೆಮಂಗಳೂರು: ಶ್ರೀ ಕ್ಷೇತ್ರ ಪಾಣೇರ್ ಭ। ೧೦೦೮ ಶ್ರೀ ಅನಂತನಾಥ ತೀರ್ಥಂಕರ ಜಿನ ಚೈತ್ಯಾಲಯ, ಭ। ೧೦೦೮ ಶ್ರೀ ಚಂದ್ರನಾಥ ತೀರ್ಥಂಕರ ಶ್ರೀ ಮಹಾಮಾತೆ ಪದ್ಮಾವತಿ ಅಮ್ಮನವರ ಜಿನ ಚೈತ್ಯಾಲಯದಲ್ಲಿ ಪರಮಪೂಜ್ಯ ಮುನಿಶ್ರೀ ೧೦೮ ಚಂದ್ರ ಸಾಗರ ಮುನಿ ಮಹಾರಾಜರ ಪುಣ್ಯಸ್ಮರಣೆಯೊಂದಿಗೆ, ಪರಮಪೂಜ್ಯ ಆಚಾರ್ಯ ೧೦೮ ಶ್ರೀ ಚಂದ್ರಪ್ರಭ ಸಾಗರ ಮುನಿ ಮಹಾರಾಜರ ಪರಮಶಿಷ್ಯರಾದ ಯುವಸಂತ ಪರಮಪೂಜ್ಯ ಮುನಿಶ್ರೀ ೧೦೮ ವೀರ ಸಾಗರ ಮುನಿ ಮಹಾರಾಜರು ಮತ್ತು ಪರಮಪೂಜ್ಯ ಮುನಿಶ್ರೀ ೧೦೮ ಪರಮ ಸಾಗರ ಮುನಿ ಮಹಾರಾಜರ ಶುಭಾಶೀರ್ವಾದಗಳೊಂದಿಗೆ, ಸೀಮೆಯ ಗುರುಗಳಾದ ಪರಮಪೂಜ್ಯ ಭಾರತಭೂಷಣ ಡಾ| ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ಶ್ರೀ ಜೈನ ಮಠ ಮೂಡಬಿದಿರೆ ಇವರ ಮಾರ್ಗದರ್ಶನ ಮತ್ತು ದಿವ್ಯ ಉಪಸ್ಥಿತಿಯಲ್ಲಿ, ಕಾರ್ಯಕಾರಿ ಸಮಿತಿಯ ಗೌರವಾದ್ಯಕ್ಷರಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಮುಂದಾಳತ್ವ ಹಾಗೂ ಸಹಕಾರದೊಂದಿಗೆ ತ್ಯಾಗಿ ನಿವಾಸ, ಸಭಾಭವನ, ಭೋಜನ ಶಾಲೆ, ತಡೆಗೋಡೆ ನಿರ್ಮಾಣದ ಶಿಲಾನ್ಯಾಸ ಪೂಜಾ ಕಾರ್ಯಕ್ರಮವು 30-5-2025ನೇ ಶುಕ್ರವಾರದಂದು ಜರಗಲಿರುವುದು.

ಉಪನ್ಯಾಸ ಕಾರ್ಯಕ್ರಮ

Article Image

ಉಪನ್ಯಾಸ ಕಾರ್ಯಕ್ರಮ

ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಟ್ರಸ್ಟಿನ ಬಹು ನಿರೀಕ್ಷಿತ ಮತ್ತು ಅತ್ಯುತ್ತಮ ಕಾರ್ಯಕ್ರಮಗಳಲ್ಲಿ ಒಂದಾದ ಪ್ರತಿ ತಿಂಗಳು ಕೊನೆಯ ಶನಿವಾರ ವಿವಿಧ ಸ್ಥಳಗಳಲ್ಲಿ ನಡೆಯುತ್ತಿರುವ ಮಾಸಿಕ ಸರಣಿ ಉಪನ್ಯಾಸ ಮಾಲಿಕೆ ದಿವ್ಯ ವಾಣಿ ಯು ಕರ್ನಾಟಕ ವಿಶ್ವವಿದ್ಯಾಲಯದ ಜೈನ ಅಧ್ಯಯನ ಪೀಠದ ಸಹಯೋಗದಲ್ಲಿ ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಈಗಾಗಲೇ ಎರಡು ಉಪನ್ಯಾಸಗಳು ತುಂಬಾ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇದರ ಮೂರನೇ ಉಪನ್ಯಾಸ ಕಾರ್ಯಕ್ರಮವನ್ನು ಹುಬ್ಬಳ್ಳಿ ಗೋಕುಲ ರಸ್ತೆ ಮಾನಸಗಿರಿ ಇಲ್ಲಿನ ಮಹಾವೀರ ಭವನದಲ್ಲಿ ದಿನಾಂಕ 31-5-2025ರಂದು ಶನಿವಾರ ಸಂಜೆ 4 ಗಂಟೆಗೆ ಆಯೋಜಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟಿನ ಅಧ್ಯಕ್ಷರು ಜೈನ ಅಧ್ಯಯನ ಪೀಠದ ಸಂಯೋಜಕರೂ ಆದ ಡಾ. ಜಿನದತ್ತ ಹಡಗಲಿ ಇವರು ವಹಿಸಲಿದ್ದು ಹಿರಿಯ ಉಪನ್ಯಾಸಕ ಡಾ. ವೈ ಎಮ್ ಭಜಂತ್ರಿ ಇವರು ಶೃತ ಪಂಚಮಿ ಮತ್ತು ಅದರ ಮಹತ್ವ ಕುರಿತಾಗಿ ಪ್ರಧಾನ ಉಪನ್ಯಾಸ ನೀಡಲಿದ್ದಾರೆ. ಇಲ್ಲಿನ ತ್ರಿಕೂಟ ಬಸದಿಯ ಭ. ಮಹಾವೀರ ಜೈನ ಹಿತವರ್ಧಕ ಸಂಘದ ಮತ್ತು ಸನ್ಮತಿ ಮಹಿಳಾ ಮಂಡಳದ ಪದಾಧಿಕಾರಿಗಳ ಗೌರವ ಉಪಸ್ಥಿತಿ ಇರಲಿದೆ. ಟ್ರಸ್ಟಿನ ಗೌರವಾಧ್ಯಕ್ಷ ಡಾ. ಅಜಿತ್ ಪ್ರಸಾದ, ಹುಬ್ಬಳ್ಳಿ ಜೈನ ಅಧ್ಯಕ್ಷ ರಾಜೇಂದ್ರ ಬೀಳಗಿ, ಉಪಾಧ್ಯಕ್ಷ ವಿಮಲ್ ತಾಳಿಕೋಟಿ, ಜೈನ್ ಬೋರ್ಡಿಂಗ್ ಅಧ್ಯಕ್ಷ ವಿದ್ಯಾಧರ ಪಾಟೀಲ್ ಸೇರಿದಂತ ಹಲವು ಗಣ್ಯರು ಭಾಗಿಯಾಗಲಿದ್ದಾರೆ ಎಂದು ಟ್ರಸ್ಟಿನ ಕಾರ್ಯದರ್ಶಿ ಹಾಗೂ ಉಪನ್ಯಾಸ ಮಾಲಿಕೆಯ ಪ್ರೇರಕರೂ ಆದ ಎಸ್.ಆರ್. ಮಲ್ಲಸಮುದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶಾಂತರಾಜ ಮಲ್ಲಸಮುದ್ರ

ವೈದ್ಯರಿಂದ ಸಮಾಲೋಚನೆ ಹಾಗೂ ಉಚಿತ ಶಿಬಿರ

Article Image

ವೈದ್ಯರಿಂದ ಸಮಾಲೋಚನೆ ಹಾಗೂ ಉಚಿತ ಶಿಬಿರ

ತುಮಕೂರು: ಚಿಕ್ಕಪೇಟೆಯ ಶ್ರೀ ದಿಗಂಬರ ಜೈನ ಶ್ರೀ ಪಾರ್ಶ್ವನಾಥ ಸ್ವಾಮಿ ಜಿನ ಮಂದಿರ ಹೃದಯ ಸಂಬಂಧಿತ ರೋಗದ ಬಗ್ಗೆ ವೈದ್ಯರಿಂದ ಸಮಾಲೋಚನೆ ಹಾಗೂ ಉಚಿತ ಶಿಬಿರವು 27.04.2025ನೇ ಭಾನುವಾರ ಜೈನ ಭವನದಲ್ಲಿ ಯಶಸ್ವಿಯಾಗಿ ನಡೆಯಿತು. ಟಸ್ಟ್ ವೆಲ್ ಹಾಸ್ಪಿಟಲ್ ವತಿಯಿಂದ ಡಾಕ್ಟರ್ ಅಮಿತ್ ಕುಮಾರ್ ಎಂ. ಒಸ್ವಾಲ್ ರವರು ಯುವಕರಲ್ಲಿ ಹೆಚ್ಚುತ್ತಿರುವ ಹೃದಯ ಕಾಯಿಲೆಯ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಮುನ್ನೆಚ್ಚರಿಕೆಯನ್ನು ನೀಡಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಉಚಿತವಾಗಿ ಮಧುಮೇಹ,ರಕ್ತದೊತ್ತಡ, ಹಾಗೂ ಇಸಿಜಿ ಪರೀಕ್ಷೆಗಳನ್ನು ಮಾಡಲಾಯಿತು. ಉಚಿತ ವೈದ್ಯಕೀಯ ಶಿಬಿರವನ್ನು ಮಾಡಿಕೊಟ್ಟ ಟ್ರಸ್ಟ್ ಆಸ್ಪತ್ರೆಯ ಡಾ. ಅಮಿತ್ ಕುಮಾರ್ ಎಂ ಒಸ್ಪಾಲ್ ರವರು ಮತ್ತು ಅವರ ತಂಡಕ್ಕೆ ಜೈನ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.

ತುಮಕೂರು: ವೈಭವದ ಭಗವಾನ್ ಶ್ರೀ ಮಹಾವೀರ ತೀರ್ಥಂಕರ ಜಯಂತಿ ಆಚರಣೆ

Article Image

ತುಮಕೂರು: ವೈಭವದ ಭಗವಾನ್ ಶ್ರೀ ಮಹಾವೀರ ತೀರ್ಥಂಕರ ಜಯಂತಿ ಆಚರಣೆ

ಶಾಂತಿ ಮತ್ತು ಅಹಿಂಸೆಯ ಪ್ರತಿಪಾದಕ ಭಗವಾನ್ ಮಹಾವೀರರ 2624 ನೆಯ ಜನ್ಮ ಜಯಂತಿಯನ್ನು ತುಮಕೂರು ದಿಗಂಬರ ಜೈನ ಶ್ರೀ ಪಾರ್ಶ್ವನಾಥ ಜಿನ ಮಂದಿರ ಸಮಿತಿಯ ವತಿಯಿಂದ ವೈಭವದಿಂದ ಆಚರಿಸಲಾಯಿತು. ಶ್ರೀ ಕ್ಷೇತ್ರ ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಲಕ್ಷ್ಮಿ ಸೇನಾ ಭಟ್ಟಾರಕ ಮಹಾಸ್ವಾಮೀಜಿಗಳವರ ಮಾರ್ಗದರ್ಶನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪೂಜೆ, ಅಭಿಷೇಕ, ಆರಾಧನೆಗಳು ನಡೆದವು. ನಂತರ ನಗರದ ಚಿಕ್ಕಪೇಟೆಯ ಶ್ರೀ ಪಾರ್ಶ್ವನಾಥ ಜಿನ ಮಂದಿರದ ತ್ರಿಲೋಕ್ ಭವನದಿಂದ ಮೆರವಣಿಗೆ ಸಾಗಿದ ಭಕ್ತರು, ಗ್ರಾಮ ದೇವತೆ ವೃತ್ತ, ಚಿಕ್ಕಪೇಟೆ ವೃತ್ತ, ಚಿಕ್ಕಪೇಟೆಯ ಮುಖ್ಯರಸ್ತೆ, ಕೋಟೆ ಆಂಜನೇಯ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ, ಎಂ.ಜಿ. ರಸ್ತೆ, ಬಿ.ಎಚ್. ರಸ್ತೆಯ ಮೂಲಕ ಸಾಗಿ ಜೈನ ಭವನದಲ್ಲಿ ಸಮಾವೇಶಗೊಂಡರು. ತುಮಕೂರು ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಸಭೆಯನ್ನ ಉದ್ದೇಶಿಸಿ ಮಾತನಾಡಿ ಭಗವಾನ್ ಶ್ರೀ ಮಹಾವೀರರ ತತ್ವ ಆದರ್ಶಗಳನ್ನ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಶಾಂತಿ, ಅಹಿಂಸೆಗೆ ಸಹಕರಿಸಬೇಕೆಂದರು. ಸವಿತಾ, ಸುಭೋದ್ ಕುಮಾರ್ ಜೈನ್ ಇಂದ್ರ ಇಂದ್ರಾಣಿಯರಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮಹಾವೀರ ಜಯಂತಿ ಅಂಗವಾಗಿ ನಗರದ ಸುರೇಶ್ ಬಾಂಡ್ ಟೀ ವತಿಯಿಂದ ಹಾಗೂ ಜೈನ ಸಮಾಜದ ವತಿಯಿಂದ ಜಿಲ್ಲಾ ಆಸ್ಪತ್ರೆ ರೋಗಿಗಳಿಗೆ ಹಣ್ಣು- ಹಂಪಲುಗಳನ್ನು ವಿತರಿಸಲಾಯಿತು. ಪಿ.ಯು.ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಶ್ರೀ ಪಾರ್ಶ್ವನಾಥ ಜಿನಮಂದಿರ ಸಮಿತಿಯ ಅಧ್ಯಕ್ಷ ಟಿ. ಡಿ. ಬಾಹುಬಲಿ ಬಾಬು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಮಂದರಗಿರಿ ಯಾತ್ರಾ ಸಂಘದ ಅಧ್ಯಕ್ಷ ಕೆ.ಪಿ. ವೀರೇಂದ್ರ, ಡೈರಿ ರಾಜೇಂದ್ರ ಪ್ರಸಾದ್, ಟಿ.ಜೆ. ನಾಗರಾಜ್, ಎ. ಆರ್. ಬ್ರಹ್ಮಪ್ರಕಾಶ್, ಜ್ವಾಲಾಮಾಲಿನಿ, (ಎಂ.ಎಲ್.ಎ. ಮಾಲಮ್ಮ)ಮಂಜುಳಾ ಚಂದ್ರಪ್ರಭ, ಎಸ್‌.ವಿ. ಜಿನೇಶ್, ಬಿ .ಎಸ್ ಪಾರ್ಶ್ವನಾಥ, ವಿನಯ್ ಸೇರಿದ್ದಂತೆ ಶ್ರೀ ಪಾರ್ಶ್ವನಾಥ ಜಿನ ಮಂದಿರ ಸಮಿತಿಯ ಸದಸ್ಯರುಗಳು, ವಿವಿಧ ಜೈನ ಸಂಘಟನೆಗಳ ಪದಾಧಿಕಾರಿಗಳು, ಜೈನ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ಶ್ರಾವಕ-ಶ್ರಾವಕಿಯರು ಭಾಗವಹಿಸಿದ್ದರು. ಜೆ. ರoಗನಾಥ - ತುಮಕೂರು.

ತುಮಕೂರು: ಉಚಿತ ಬೇಸಿಗೆ ಶಿಬಿರ

Article Image

ತುಮಕೂರು: ಉಚಿತ ಬೇಸಿಗೆ ಶಿಬಿರ

ತುಮಕೂರು: ಇಲ್ಲಿಯ ಶ್ರೀ ಪದ್ಮಾಂಬ ಜೈನ ಮಹಿಳಾ ಸಮಾಜವು ಹಲವಾರು ವರ್ಷಗಳಿಂದ ಬೇಸಿಗೆ ಶಿಬಿರ ಏರ್ಪಡಿಸುತ್ತಿದ್ದು, ಈ ವರ್ಷವು ಸಹ ಉಚಿತ ಬೇಸಿಗೆ ಶಿಬಿರ ಆಯೋಜಿಸಿರುತ್ತಾರೆ ರಜಾ ದಿನಗಳಲ್ಲಿ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡುವ ಸದುದ್ದೇಶದಿಂದ ಈ ಸಂಸ್ಕಾರ ಶಿಬಿರದಲ್ಲಿ ನಿರ್ಯಾಪಕ ಮುನಿಗಳಾದ ಪರಮ ಪೂಜ್ಯ 108 ನಿಯಮಸಾಗರ ಮಹಾರಾಜರಿಂದ ತರಬೇತಿ ಹೊಂದಿ, ಅನೇಕ ಧಾರ್ಮಿಕ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿರುವ ಬೆಳಗಾವಿಯ ಸಂಪನ್ಮೂಲ ವ್ಯಕ್ತಿ ಸುಮನ್‌ಪತ್ರಾವಳಿಯವರು 5 ದಿನಗಳ ಕಾಲ ಮಕ್ಕಳ ಜೊತೆಯಲ್ಲಿದ್ದು ಅವರುಗಳ ಶ್ರೇಯೋಭಿವೃದ್ಧಿಗೆ ತಮ್ಮ ಅಮೂಲ್ಯ ಸಮಯವನ್ನು ಮೀಸಲಿಡುವರು. ಇದರೊಂದಿಗೆ ಚಿತ್ರಕಲೆ, ಆಟೋಟ, ನಾಟಕ ವಿವಿಧ ಮನೋರಂಜನೆಯಿಂದಲೂ ಸಹ ಹಲವು ಸಂಪನ್ಮೂಲ ವ್ಯಕ್ತಿಗಳು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವರು. ಈ ವರ್ಷ ದಿನಾಂಕ: 11/04/2025 ರಿಂದ 20/04/2025ರ ವರೆಗೆ 10 ದಿನಗಳ ಶಿಬಿರದಲ್ಲಿ ಉಚಿತ ಊಟ, ವಸತಿ ಸೌಕರ್ಯ ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಕವಿತಾ ಅತ್ತಿಮಬ್ಬೆ ವಿದ್ಯಾಮಂದಿರ, ಚಿಕ್ಕಪೇಟೆ, ತುಮಕೂರು. ಮೊ. 8618408638

ಮೈಸೂರು: ಬೇಸಿಗೆ ಧಾರ್ಮಿಕ ಶಿಬಿರ

Article Image

ಮೈಸೂರು: ಬೇಸಿಗೆ ಧಾರ್ಮಿಕ ಶಿಬಿರ

ಮೈಸೂರು ಜಿಲ್ಲೆ, ಸರಗೂರು ತಾಲೂಕಿನ ಶ್ರೀಕ್ಷೇತ್ರ ಕನಕಗಿರಿ, ದಿಗಂಬರ ಜೈನ ಮಠದ ಪೀಠಾಧ್ಯಕ್ಷರಾದ ಪ.ಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಆಶೀರ್ವಾದ, ಪ್ರೇರಣೆ ಹಾಗೂ ಮಾರ್ಗದರ್ಶನದಲ್ಲಿ, ಭಾರತೀಯ ಜೈನ್ ಮಿಲನ್, ಮೈಸೂರು ವಿಭಾಗದ ನಿರ್ದೇಶಕರಾದ ಸರಗೂರಿನ ಎಸ್‌. ಎಸ್. ಸೋಮಪ್ರಭರವರು, ಅವರ ಸ್ವಗೃಹ "ಕನಕಾದ್ರಿ" ಯಲ್ಲಿ ಹಿಂದಿನ ವರ್ಷಗಳಂತೆ ಯಥಾಪ್ರಕಾರವಾಗಿ ಮಕ್ಕಳಿಗೆ ಬೇಸಿಗೆ ಧಾರ್ಮಿಕ ಶಿಬಿರವನ್ನು ಆಯೋಜಿಸಿದ್ದಾರೆ. ಬೇಸಿಗೆ ರಜೆಯ ಸಂದರ್ಭದಲ್ಲಿ ಮಕ್ಕಳು ಉತ್ತಮ ಸಂಸ್ಕಾರ ಪಡೆಯಲು ಈ ಧಾರ್ಮಿಕ ಶಿಬಿರ ಅತ್ಯಂತ ಉಪಯುಕ್ತವಾಗಿದೆ. ದಿ:01-04-2025 ರ ಮಂಗಳವಾರದಿಂದ 8.ದಿನಗಳ ಕಾಲ ಈ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ ಅನುಭವಿ ಹಾಗೂ ಪ್ರಬುದ್ಧ ವಿದ್ವಾಂಸರು, ಉಪನ್ಯಾಸಕರುಗಳು, ಪಂಡಿತರುಗಳಿಂದ ಮಕ್ಕಳ ಅಭಿರುಚಿಗೆ ತಕ್ಕಂತೆ, ಅತ್ಯಂತ ಸರಳವಾಗಿ ಹಾಗೂ ಆಕರ್ಷಣೀಯವಾಗಿ ಧಾರ್ಮಿಕ ಪಾಠ ಪ್ರವಚನಗಳ ಜೊತೆಗೆ ಮನರಂಜನಾತ್ಮಕ ಹಾಗೂ ಭಕ್ತಿರಸ ಪ್ರಧಾನವಾದ ಭಕಿಗೀತೆಗಳು, ರೂಪಕಗಳು, ಕಥೆಗಳು, ಇತ್ಯಾದಿ ಜ್ಞಾನವರ್ಧನೆಯ ಪೂರಕ ಅಂಶಗಳು ಸಂಪನ್ಮೂಲ ವ್ಯಕ್ತಿಗಳಿಂದ ಕಲಿಕೆಯಾಗಲಿದೆ. ಶಿಬಿರದ ಉದ್ಘಾಟನೆ ದಿ:: 01-04-2025ರ ಮಂಗಳವಾರ ಬೆಳಿಗ್ಗೆ 9-30 ಕ್ಕೆ ಶುಭಾಶೀರ್ವಾದ, ಮಾರ್ಗದರ್ಶನ: ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಶ್ರೀಕ್ಷೇತ್ರ ಕನಕಗಿರಿ. ಗೌರವ ಉಪಸ್ಥಿತಿ : ಶ್ರೀ ಬಾಹುಬಲಿ ಬಯ್ಯಾಜಿ ತ್ಯಾಗಿಗಳು/ಬಾಲ ಬ್ರಹ್ಮಚಾರಿಗಳು,ಆಚಾರ್ಯಶ್ರೀ 108 ವಿದ್ಯಾಸಾಗರ ಮಹಾರಾಜರ ಶಿಷ್ಯರು, 5ನೇ ಪ್ರತಿಮಾಧಾರಿಗಳು. ಮುಖ್ಯ ಅತಿಥಿಗಳು: ಶೀಲಾ ಅನಂತರಾಜ್,ಮೈಸೂರು. ಗೌರವ ಉಪಾಧ್ಯಕ್ಷರು, ಭಾರತೀಯ ಜೈನ್ ಮಿಲನ್, ಕರ್ನಾಟಕ ರಾಜ್ಯ. ಬ್ರಹ್ಮದೇವಯ್ಯ ಜೈನ ಸಮಾಜದ ಹಿರಿಯ ಮುಖಂಡರು ಸರಗೂರು. ಪ್ರಥಮ ದಿನದ ಬೆಳಗ್ಗೆ ಅವಧಿ: ಪಾಠ ಪ್ರವಚನಗಳ ಬೋಧನೆ: ಮೈಸೂರು ವಿಶ್ವವಿದ್ಯಾನಿಲಯದ ಜೈನ ಶಾಸ್ತ್ರ ಮತ್ತು ಪ್ರಾಕೃತ ವಿಭಾಗದ ಉಪನ್ಯಾಸಕರಾದ ಡಾ. ಅರುಣಾಪ್ರಕಾಶ್ ರವರು ನಡೆಸಿಕೊಡಲಿದ್ದಾರೆ. ಮಧ್ಯಾಹ್ನದ ಅವಧಿ: ಶ್ರೀ ಬಾಹುಬಲಿ ಬಯ್ಯಾಜಿ ರವರಿಂದ, 5.ನೇ ತರಗತಿಯಿಂದ ಪಿ.ಯೂ.ಸಿ ತನಕ ಓದುತ್ತಿರುವ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಬಹುದಾಗಿದೆ. ಶಿಬಿರ ಪ್ರತಿದಿನ ಬೆಳಿಗ್ಗೆ10-00 ಗಂಟೆಗೆ ಪ್ರಾರಂಭವಾಗಿ ಸಂಜೆ 4-00 ಗಂಟೆಗೆ ಮುಕ್ತಾಯವಾಗುತ್ತದೆ. ಮಕ್ಕಳಿಗೆ ಲೇಖನ ಸಾಮಗ್ರಿಗಳ ಜೊತೆಗೆ ಬಹುಮಾನಗಳನ್ನು ನೀಡಲಾಗುತ್ತದೆ. ಪಾಲಕರು/ಪೋಷಕರು ಮಕ್ಕಳನ್ನು ಬೆಳಿಗ್ಗೆ 9-30 ಗಂಟೆಗೆ ಶಿಬಿರಕ್ಕೆ ಕರೆತಂದು ಬಿಟ್ಟು, ಸಂಜೆ 4-00 ಗಂಟೆ ನಂತರ ಕರೆದುಕೊಂಡು ಹೋಗುವ ಜವಾಬ್ದಾರಿ ಅವರಿಗೆ ಸೇರಿರುತ್ತದೆ. ಶಿಬಿರದಲ್ಲಿ ಮಕ್ಕಳಿಗೆ ಬೆಳಿಗ್ಗೆ 11-00 ಗಂಟೆಗೆ ಕಾಫಿ/ ಟೀ/ ಬಿಸ್ಕತ್ತು, ಮಧ್ಯಾಹ್ನ ಊಟದ ವ್ಯವಸ್ಥೆ, ಸಂಜೆ ಸ್ನಾಕ್ಸ್ ವ್ಯವಸ್ಥೆ ಮಾಡಲಾಗಿದೆ. ಸರಗೂರು ಹಾಗೂ ಹೆಚ್.ಡಿ.ಕೋಟೆ ತಾ. ವ್ಯಾಪ್ತಿಯ ಗ್ರಾಮಾಂತರದ ಮಕ್ಕಳುಗಳು ಈ ಸದಾವಕಾಶವನ್ನು ಬಳಸಿಕೊಳ್ಳಬೇಕೆಂದು ಎಸ್‌. ಎಸ್. ಸೋಮಪ್ರಭರವರು ತಿಳಿಸಿರುತ್ತಾರೆ. .ರಜಾ-ಮಜಾ ಜೊತೆಗೆ ಉತ್ತಮ ಸಂಸ್ಕಾರ, ಜ್ಞಾನಾರ್ಜನೆಯ, ಸದಭಿರುಚಿಯ ಬಾಲ್ಯದ ಶಿಕ್ಷಣ ಮಕ್ಕಳ ಪ್ರತಿಭಾ ಅನಾವರಣಕ್ಕೆ ಪೂರಕವಾಗಲಿದೆ ಈ ಧಾರ್ಮಿಕ ಶಿಬಿರದಲ್ಲಿ ಭಾಗವಹಿಸಲು ಹಾಗೂ ಹೆಚ್ಚಿನ ಮಾಹಿತಿಗೆ ಈ ಕೆಳಕಂಡವರನ್ನು ಸಂಪರ್ಕಿಸಲು ಕೋರಿದೆ. ಎಸ್.ಎಸ್. ಸೋಮಪ್ರಭ, ಸರಗೂರು: ಮೊ: 94487 93649 ಸಿ.ಎಸ್. ನಾಗರಾಜು, ಚಕ್ಕೂರು: ಮೊ: 94489 58024 ಜಿ. ಬಿ.ಚಂದ್ರಪ್ರಕಾಶ್, ಗುಜ್ಜಪ್ಪನಹುಂಡಿ: ಮೊ: 99452 59709

ಬಂಟ್ವಾಳ: 33ನೇ ವರ್ಧಂತ್ಯುತ್ಸವ

Article Image

ಬಂಟ್ವಾಳ: 33ನೇ ವರ್ಧಂತ್ಯುತ್ಸವ

ಬಂಟ್ವಾಳ ತಾಲೂಕಿನ ಅತಿಶಯ ಶ್ರೀ ಕ್ಷೇತ್ರ ಅಜ್ಜಿಬೆಟ್ಟು ಬಸದಿ ಭಗವಾನ್ ಶ್ರೀ ಆದಿನಾಥ ತೀರ್ಥಂಕರರ ಜಿಂಬ ಪ್ರತಿಷ್ಠಾ ಮಹೋತ್ಸವದ 33ನೇ ವರ್ಧಂತ್ಯುತ್ಸವವು ಕಾರ್ಕಳ ಶ್ರೀ ಜೈನ ಮಠದ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ಪಾವನ ಸಾನಿಧ್ಯದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ 02-04-2025ನೇ ಬುಧವಾರ ಜರಗಲಿರುವುದು.

ಬೆಂಗಳೂರು: ಕರ್ನಾಟಕ ಜೈನ ಅಸೋಸಿಯೇಷನ್ ವತಿಯಿಂದ ನಡೆದ ಸಮಸ್ತ ಕರ್ನಾಟಕ ಜೈನ ಸಮುದಾಯ ಸಭೆ

Article Image

ಬೆಂಗಳೂರು: ಕರ್ನಾಟಕ ಜೈನ ಅಸೋಸಿಯೇಷನ್ ವತಿಯಿಂದ ನಡೆದ ಸಮಸ್ತ ಕರ್ನಾಟಕ ಜೈನ ಸಮುದಾಯ ಸಭೆ

ರಾಜ್ಯದಲ್ಲಿ ಜೈನ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರ್ಕಾರ ಬದ್ಧವಾಗಿದ್ದು ಶೀಘ್ರದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕರ್ನಾಟಕ ಅಲ್ಪಸಂಖ್ಯಾತರ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು. ಅವರಿಂದು ಇಲ್ಲಿನ ಕರ್ನಾಟಕ ಜೈನ ಅಸೋಸಿಯೇಷನ್ ವತಿಯಿಂದ ನಡೆದ ಸಮಸ್ತ ಕರ್ನಾಟಕ ಜೈನ ಸಮುದಾಯ ಸಭೆಯಲ್ಲಿ ಸಮುದಾಯದ ಪರವಾಗಿ ಮನವಿ ಪತ್ರ ಸ್ವೀಕರಿಸಿ ಮಾತನಾಡಿದರು. ರಾಜ್ಯದ 44 ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಗಳಲ್ಲಿ ಪ್ರತಿ ಜಿಲ್ಲೆಯಲ್ಲಿ ಒಂದು ಅಥವಾ ಜೈನ ಜನಸಂಖ್ಯೆಗೆ ಅನುಗುಣವಾಗಿ ಜೈನರಿಗೆ ಪ್ರತ್ಯೇಕ ವಿದ್ಯಾರ್ಥಿ ನಿಲಯ ಮೀಸಲಿಡಬೇಕು, ಇಲ್ಲಿಯವರೆಗೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಸ್ಥಾನ ಜೈನ ಸಮಾಜಕ್ಕೆ ಸಿಕ್ಕಿಲ್ಲ ನಿಗಮದಲ್ಲಿ ಜೈನ ನಿರ್ದೇಶಕರು ಆಗಿಲ್ಲ ಸರ್ಕಾರ ಜೈನ ಶಿಕ್ಷಣ ಸಂಸ್ಥೆಗಳಲ್ಲಿ ಮೊಟ್ಟೆ ಕೊಡುವ ನಿರ್ಧಾರ ಸರ್ಕಾರ ಹಿಂತೆಗೆದ್ದುಕೊಳ್ಳಬೇಕೆಂದು ಪತ್ರದಲ್ಲಿ ತಿಳಿಸಲಾಗಿದೆ ಎಂದರು. ಮಾಜಿ ಮುಖ್ಯಮಂತ್ರಿ ಹಾಗೂ ಅಥಣಿ ಕ್ಷೇತ್ರದ ಶಾಸಕ ಲಕ್ಷ್ಮಣ್ ಸವದಿ ಮಾತನಾಡಿ ವರೂರು ಶ್ರೀ ಕ್ಷೇತ್ರದ ಗುಣದರ ನoದಿ ಮಹಾರಾಜರು ಸರ್ಕಾರ ಮೂರು ಬೇಡಿಕೆಗಳ ಈಡೇರಿಕೆಗೆ ತಿಳಿಸಿದ್ದು , ಈ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಪ್ರತ್ಯೇಕ ಹಾಸ್ಟೆಲ್‌ಗಳನ್ನು ನಿರ್ಮಿಸಲು ತಿಳಿಸಿದ್ದು, ಈ ಕಾರ್ಯಕ್ಕೆ ಸಚಿವರು ಉತ್ಸುಕರಾಗಿದ್ದಾರೆ ಎಂದರು. ಬೇರೆ ಸರ್ಕಾರಗಳಿಂದ ಉತ್ತರ ಸಿಗುತ್ತಿತ್ತು ಆದರೆ ಕಾರ್ಯಗತವಾಗುತ್ತಿರಲಿಲ್ಲ ಆದರೆ ಸಚಿವರಾದ ಜಮೀರ್ ಅಹಮದ್ ರವರಿಂದ ಇಂದು ಕಾರ್ಯಾಗತವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಕೂಅಧಿವೇಶನಕ್ಕೆ ಮುನ್ನ ಒಂದು ಪ್ರಾಯೋಗಿಕ ಶಾಲೆ ಜೈನರಿಗಾಗಿ ನಿರ್ಮಿಸಲು ತಿಳಿಸಲಾಗಿತ್ತು ಆದರೆ ಪ್ರಾಯೋಗಿಕವಾಗಿ ಎರಡು ಶಾಲೆಗಳನ್ನು ಸರ್ಕಾರ ಮಂಜೂರು ಮಾಡಿದೆ ಎಂದರು. ಕರ್ನಾಟಕ ಜೈನ್ ಅಸೋಸಿಯೇಷನ್ ಅಧ್ಯಕ್ಷ ಎಸ್. ಜಿತೇಂದ್ರ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಕಂಬದಹಳ್ಳಿ ಜೈನಮಠದ ಸ್ವಸ್ತಿಶ್ರೀ ಬಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳವರು ಪಾವನ ಸಾನ್ನಿಧ್ಯ ಆಶೀರ್ವಚನ ನೀಡಿದರು. ಪುರೋಹಿತ ರತ್ನ ದಿವ್ಯ ಪಂಡಿತ್ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಯೋಜನಾ ಹಾಗೂ ಸಂಖ್ಯೆಕ ಸಚಿವರಾದ ಡಿ. ಸುಧಾಕರ್, ಮಾಜಿ ಸಚಿವ ವೀರ್ ಕುಮಾರ್ ಪಾಟೀಲ್, ಕರ್ನಾಟಕ ಜೈನ್ ಅಸೋಸಿಯೇಷನ್ ಪದಾಧಿಕಾರಿಗಳಾದ ರಾಜಕೀರ್ತಿ ಕಲಾ ಗೌಡ, ಶೀತಲ್ ಗೌಡ ಪಾಟೀಲ್, ಆಶಾ ಪ್ರಭು, ಡಾ ನೀರಜಾ ನಾಗೇಂದ್ರ ಕುಮಾರ್, ಧರಣಿಂದ್ರ ಕುಮಾರ್ ಪ್ರಶಾಂತ್, ಎಂ. ಎಂ. ಜಿನೇಂದ್ರ, ಶೀತಲ ಕುಮಾರ್, ಮಾಳ ಹರ್ಷೇಂದ್ರ ಜೈನ್, ವಿ ಜೇ. ಬ್ರಹ್ಮಯ್ಯ, ಪದ್ಮಶ್ರೀ, ಪದ್ಮಿನಿ, ಅಜಿತ್ ಕುಮಾರ್, ಮಹಾವೀರ್, ಸ್ವರೂಪ್, ಜಿನೇಂದ್ರ, ಅನಿಲ್ ಕುಮಾರ್, ಕೋಮಲ ಬ್ರಹ್ಮದೇವಯ್ಯ, ಪ್ರಕಾಶ್ ಜೆ. ಪಿ. ರಾಜೇಶ್, ಅಶೋಕ್ ಕುಮಾರ್ ಸೇರಿದoತೆ ಕರ್ನಾಟಕದ ವಿವಿಧ ಭಾಗಗಳಿಂದ ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಭಾಗವಹಿಸಿದ್ದರು. ಕರ್ನಾಟಕ ಜೈನ್ ಅಸೋಸಿಯೇಷನ್ ಸಹಕಾರ್ಯದರ್ಶಿ, ರತ್ನತ್ರಯ ಕ್ರಿಯೇಷನ್ ಡಾ. ನೀರಜಾ ನಾಗೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು .

First Previous

Showing 2 of 4 pages

Next Last