Article Image

ಮಹಾವೀರ ತೀರ್ಥಂಕರರ 2550ನೇ ಜನ್ಮಕಲ್ಯಾಣದ ನಿಮಿತ್ತವಾಗಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ

Article Image

ಮಹಾವೀರ ತೀರ್ಥಂಕರರ 2550ನೇ ಜನ್ಮಕಲ್ಯಾಣದ ನಿಮಿತ್ತವಾಗಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ

ತೇರದಾಳ ಶ್ರೀ ವಾಸುಪೂಜ್ಯ ವೀತರಾಗ ದಿಗಂಬರ ಜೈನ ಮಂದಿರದ ವತಿಯಿಂದ ಭಗವಾನ ಶ್ರೀ 1008 ಮಹಾವೀರ ತೀರ್ಥಂಕರರ 2550ನೇ ಜನ್ಮಕಲ್ಯಾಣದ ನಿಮಿತ್ತವಾಗಿ ಪ.ಪೂ. ಸಂತ ಶಿರೋಮಣಿ ಆಚಾರ್ಯ ಶ್ರೀ ವಿದ್ಯಾಸಾಗರ ಮಹಾರಾಜರ ಜೀವನ, ತಪ, ತ್ಯಾಗ ಮತ್ತು ಪ್ರೇರಣಾ ಕಾರ್ಯಗಳು ಎಂಬ ವಿಷಯದ ಕುರಿತು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವನ್ನು ಒಳಗೊಂಡಿರುತ್ತದೆ. ಸೂಚನೆಗಳು:- * ಪ್ರಬಂಧವನ್ನು A4 ಸೀಟ್‌ನಲ್ಲಿ ಒಂದೇ ಮಗ್ಗುಲಿನಲ್ಲಿ ಬರೆಯಬೇಕು. 10 ಪುಟ ಮೀರದಂತೆ ಇರಬೇಕು. * ಶುದ್ಧ ಕೈ ಬರಹ ಅಥವಾ ಟೈಪ್ ಮಾಡಬಹುದು. * ಪ್ರಬಂಧ ಬರೆಯಲು ವಯಸ್ಸಿನ ಮಿತಿ ಇಲ್ಲ. * ಪ್ರಬಂಧ ಬರೆಯುವವರ ಹೆಸರು, ವಿಳಾಸ, ವಾಟ್ಸ್ಆಪ್ ನಂಬರ್ ಕಡ್ಡಾಯವಾಗಿ ನಮೂದಿಸಬೇಕು. * ಪ್ರಬಂಧವನ್ನು ಕನ್ನಡ ಭಾಷೆಯಲ್ಲಿ ಮಾತ್ರ ಬರೆಯಬೇಕು. * ಆಯೋಜಕರ ತೀರ್ಮಾನ ಅಂತಿಮವಾಗಿರುತ್ತದೆ. * ಪ್ರಬಂಧ ಕಳುಹಿಸುವ ಕೊನೆಯ ದಿನಾಂಕ 16-04-2024 * ಪ್ರಬಂಧ ಕಳುಹಿಸುವ ವಿಳಾಸ- ಸಂತೋಷ ಶೆಟ್ಟಿ, ಗುರುಕುಲ ರೋಡ್, ಟೀಚರ್ ಕಾಲೋನಿ, A/Po ತೇರದಾಳ, 587315 ತಾ: ರಬಕವಿ-ಬನಹಟ್ಟಿ ಜಿ: ಬಾಗಲಕೋಟ * ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ- 9164896108, 7019326565, 8951742543 * ಪ್ರಬಂಧದಲ್ಲಿ ಭಾಗವಹಿಸುವ ಎಲ್ಲರಿಗೂ ಬಹುಮಾನ ನೀಡಲಾಗುವುದು.

ಮರುಕಳಿಸಿದ ಹಂತೂರಿನ ಗತವೈಭವ: ಸರ್ವಧರ್ಮ ಸಮನ್ವಯತೆಯ ಕ್ಷೇತ್ರ

Article Image

ಮರುಕಳಿಸಿದ ಹಂತೂರಿನ ಗತವೈಭವ: ಸರ್ವಧರ್ಮ ಸಮನ್ವಯತೆಯ ಕ್ಷೇತ್ರ

ಮೂಡಿಗೆರೆ, ಮಾ. 22: ಹೊಯ್ಸಳ ಸಾಮ್ರಾಜ್ಯದ ನಾಡದ ಹಂತೂರು ವೈಭವದಿಂದ ಮೆರೆದ ನಾಡಾಗಿತ್ತು, ಶಿಲ್ಪಕಲೆಗೆ ಹೆಸರಾಗಿತ್ತು, ಹೊಯ್ಸಳ ಸಾಮ್ರಾಜ್ಯದ ಉಗಮ ಸ್ಥಾನ ಸಮೀಪದ ಅಂಗಡಿ ಗ್ರಾಮವೇ ಆಗಿತ್ತು, ಅಹಿಂಸಾ ವೈಭವದಿಂದ ಮೆರೆದ ನಾಡು, ಕಾಲಚಕ್ರಕ್ಕೆ ಸಿಲುಕಿ ಅವನತಿಯಾಯಿತು, ಸರ್ವಧರ್ಮ ಜನರ ಸಹಕಾರ, ಧಾರ್ಮಿಕ ಮನೋಭಾವ, ಶಾಂತಿ ಅಹಿಂಸೆ ಫಲವಾಗಿ ಇಂದು ಶಿಲ್ಪಕಲಾ ಬಸದಿಯ ಪುನರ್ ನಿರ್ಮಾಣದಿಂದ ಈ ಹಿಂದಿನ ಗತವೈಭವ ಮರುಕಳಿಸಿದೆ ಎಂದು ಶ್ರೀ ಕ್ಷೇತ್ರ ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಹೇಳಿದರು. ಅವರಿಂದು ಹಂತೂರಿನ ಶ್ರೀ ಪಾರ್ಶ್ವನಾಥ ಜಿನ ಮಂದಿರದ ಧಾಮಸಂಪ್ರೋಕ್ಷಣಾಪೂರ್ವಕ ಪಂಚಕಲ್ಯಾಣ ಮಹೋತ್ಸವ ಸಹಿತ ಮಾನಸ್ತಂಭೋಪರಿ ಚತುರ್ಮುಖ ಬಿಂಬ ಪ್ರತಿಷ್ಠಾಪನ ಮಹೋತ್ಸವ ಕಾರ್ಯಕ್ರಮದಲ್ಲಿ ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇಲ್ಲಿನ ಜನ, ಧರ್ಮ ಕಾರ್ಯಕ್ಕೆ ಆದ್ಯತೆ ನೀಡುತ್ತಿದ್ದು, ಯಾವುದೇ ತಪ್ಪು ಒಪ್ಪುಗಳಿಗೆ ಜಟ್ಟಿಂಗರಾಯನ ಆಶ್ರಯಿಸುತ್ತಾರೆ. ಇಂತಹ ಧರ್ಮಭೂಮಿಯಲ್ಲಿ ಬಿಟ್ಟಿದೇವ, ಶಾಂತಲೆ, ಹರಿಯಲೇ, ಶಿಲ್ಪಕಲಾ ಬಸದಿ ಕಟ್ಟಿಸಿದರು, ಈ ಬಸದಿ ಸಂರಕ್ಷಣೆಯಲ್ಲಿ ಸ್ಥಳೀಯ ಗ್ರಾಮಸ್ಥರ ಕೊಡುಗೆ ಅಪಾರ. ಸ್ಥಳೀಯ ಜನರು ಹಾಗೂ ಕಳಸ ಭಾಗದ 8 ಸೀಮೆಯ ಜನರ ಸಹಕಾರದಿಂದ ಈ ಬಸದಿ ಜೀರ್ಣೋದ್ಧಾರಗೊಂಡಿದೆ ಎಂದರು. ಇಲ್ಲಿಯ ಜನ ಶ್ರೀಮಂತಿಕೆ ಜನರು ಇಲ್ಲಿನ ಪದ್ಮಾವತಿ ಮೂರ್ತಿ ಮನಮೋಹಕವಾಗಿದೆ. ಈ ಗತ ವೈಭವಕ್ಕೆ ಜನಸಾಗರವೇ ಹರಿದು ಬರುತ್ತಿದೆ ಎಂದು ಹೇಳಿದರು. ಬಳಿಕ ಕಂಬದಹಳ್ಳಿ ಶ್ರೀ ಜೈನ ಮಠದ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹೆಚ್.ಏನ್.ಸುಬ್ಬೆ ಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮೂಡಿಗೆರೆ ಹಂತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾನಾಗರಾಜ್, ಮಾಜಿ ಶಾಸಕ ಬಿ. ಬಿ. ನಿಂಗಯ್ಯ, ಅಶೋಕ್ ಗೌಡ, ಕೆ. ಸಿ. ಧರಣೇಂದ್ರಯ್ಯ, ವಿಮಲ್ ತಾಳಿಕೋಟೆ, ಶ್ರೀಪಾಲಯ್ಯ, ಎಚ್. ಕೆ. ಸುದರ್ಶನ್, ಪ್ರಶಾಂತ್ ಚಿತ್ರಗುತ್ತಿ, ತೇಜು ಕುಮಾರ್ ಕಟೋರಿಯ, ಪಾಶ್ವನಾಥ, ಜಿ. ಬಿ. ಸನ್ಮತಿ ಕುಮಾರ್, ಶೈಲಾ ಹರೀಶ್, ಭರತ್‌ರಾಜು, ಎಳನೀರು ಕೀರ್ತಿ ಜೈನ್, ಬಿ. ಎಲ್. ಜಿನರಾಜ ಇಂದ್ರ, ಬ್ರಹ್ಮಣ್ಣ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕ್ಷೇತ್ರದ ಏಳಿಗೆಗೆ ಸಹಕರಿಸಿದ ಸ್ಥಳೀಯರನ್ನು, ಹಲವಾರು ಗಣ್ಯರನ್ನು ಸನ್ಮಾನಿಸಲಾಯಿತು. ಹೊರನಾಡು ಅರ್ಕಕೀರ್ತಿರವರು ಪ್ರಾರ್ಥಿಸಿದರು. ಎಚ್. ಸಿ. ಅಣ್ಣಯ್ಯ ಸ್ವಾಗತಿಸಿದರು. ಪ್ರದೀಪ್ ಕುಮಾರ್ ತಡಪಾಲು ಪ್ರಾಸ್ತಾವಿಕ ನುಡಿಗಳನ್ನಾಡಿದರು. -ಜೆ. ರಂಗನಾಥ, ತುಮಕೂರು

ಎಂ. ಎಂ. ಜಿನೇಂದ್ರರವರ ಜೀವನ ಯಶೋಗಾಥೆ ಕೃತಿ ಶ್ರೀಘ್ರದಲ್ಲಿ ಲೋಕಾರ್ಪಣೆ

Article Image

ಎಂ. ಎಂ. ಜಿನೇಂದ್ರರವರ ಜೀವನ ಯಶೋಗಾಥೆ ಕೃತಿ ಶ್ರೀಘ್ರದಲ್ಲಿ ಲೋಕಾರ್ಪಣೆ

ಇತ್ತೀಚೆಗೆ ರಚಿತಗೊಂಡಿರುವ ಖ್ಯಾತ ಛಾಯಾಗ್ರಾಹಕ ಚಿತ್ತ ಜಿನೇಂದ್ರರವರ ಜೀವನ ಯಶೋಗಾಥೆಯಾದ "ಸವ್ಯಸಾಚಿ ಕಲಾವಿದ ಜಿನೇಂದ್ರ" ಎಂಬ ಕೃತಿ ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ತುಮಕೂರಿನ ಹಿರಿಯ ಸಾಹಿತಿ ಡಾ. ಎಸ್. ಪಿ. ಪದ್ಮಪ್ರಸಾದ್ ಜೈನ್ ರವರಿಂದ ರಚಿತವಾದ ಈ ಕೃತಿಗೆ ಹಿರಿಯ ಸಾಹಿತಿ, ನಾಡೋಜ ಹಂಪ ನಾಗರಾಜಯ್ಯ (ಹಂಪನಾ) ಮುನ್ನುಡಿ ಬರೆದಿದ್ದು, ಈ ಕೃತಿಯನ್ನು ಬೆಂಗಳೂರಿನ ಕರ್ನಾಟಕ ಪುರಾತತ್ವ ಮತ್ತು ಸಾಹಿತ್ಯ ಪರಿಷತ್ ಹೊರತುರುತ್ತಿದ್ದು ವಿಶಿಷ್ಟ ಕಲ್ಪನೆಯಲ್ಲಿ ಮೂಡಿಬರುತ್ತದೆ. ಕೃತಿಯಲ್ಲಿ ಎಂ.ಎಂ. ಜಿನೇಂದ್ರ ಅವರ ಜೀವನ, ಸವೆಸಿದ ಹಾದಿ, ಬೆಳೆದ ನೋಟ, ಅವರು ರಚಿಸಿದ ಕಲಾಕೃತಿಗಳ ಗುಚ್ಛವೇ ಈ ಕೃತಿಯಲ್ಲಿ ಅಡಗಿದೆ. ಸಾಂಪ್ರದಾಯಿಕ ಚಿತ್ರಕಲೆ, ಶಿಲ್ಪಕಲೆ, ಜಲವರ್ಣ, ವರ್ಣ ಚಿತ್ರಗಳು, ರೇಖಾ ಚಿತ್ರಗಳು, ವ್ಯಕ್ತಿ ಚಿತ್ರಗಳು, ಸ್ತಬ್ಧಚಿತ್ರಗಳು, ಸೆರಾಮಿಕ ಕಲಾಕೃತಿಗಳು ಆಧುನಿಕ ತಂತ್ರಜ್ಞಾನದ ರೂಪದಲ್ಲಿ ಮೂಡಿಬಂದಿವೆ. ಇದರಲ್ಲಿ ಕಲಾವಿದ ಎಂ. ಎಂ. ಜಿನೇಂದ್ರ ಅವರ ಕಲಾ ನೈಪುಣ್ಯತೆ, ಚತುರತೆ, ಸೂಕ್ಷ್ಮತೆ, ಗ್ರಹಿಕೆ, ರಚನಾ ಶೈಲಿ, ರೇಖೆಗಳ ಮೋಡ, ಭಾವನಾ ಲಹರಿ, ವಿಸ್ಮಯಕಾರಿ ಆಲೋಚನೆಗಳು, ಬೃಹತ್ ಮೂರ್ತಿಗಳು ಈ ಕೃತಿಯಲ್ಲಿ ಮೂಡಿ ಬಂದಿವೆ, ಅಲ್ಲದೆ ಸಮಾಜಕ್ಕೆ ಅವರ ಕೊಡುಗೆ, ಅವರಿಗೆ ಸಂದ ಗೌರವಗಳು ಅಡಕವಾಗಿವೆ. ಈ ಕೃತಿಯನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಹೊರ ತರಲಾಗಿದೆ.

ಹಂತೂರಿನ ಭಗವಾನ್ ಶ್ರೀ ೧೦೦೮ ಪಾರ್ಶ್ವನಾಥ ಸ್ವಾಮಿ ಬಸದಿಯ ಧಾಮಸಂಪ್ರೋಕ್ಷಣಾ ಪೂರ್ವಕ ಪಂಚಕಲ್ಯಾಣ ಮಹೋತ್ಸವ

Article Image

ಹಂತೂರಿನ ಭಗವಾನ್ ಶ್ರೀ ೧೦೦೮ ಪಾರ್ಶ್ವನಾಥ ಸ್ವಾಮಿ ಬಸದಿಯ ಧಾಮಸಂಪ್ರೋಕ್ಷಣಾ ಪೂರ್ವಕ ಪಂಚಕಲ್ಯಾಣ ಮಹೋತ್ಸವ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರಕೃತಿ ಸೌಂದರ್ಯದಿಂದ ಕೂಡಿದ ಮಲೆನಾಡ ಮಡಿಲಿನ ಹಂತೂರಿನ ಭಗವಾನ್ ಶ್ರೀ ೧೦೦೮ ಪಾರ್ಶ್ವನಾಥ ಸ್ವಾಮಿ ಬಸದಿಯ ಧಾಮಸಂಪ್ರೋಕ್ಷಣಾ ಪೂರ್ವಕ ಪಂಚಕಲ್ಯಾಣ ಮಹೋತ್ಸವ ಸಹಿತ ಮಾನಸ್ಥಂಭೋಪರಿ ಚತುರ್ಮುಖ ಬಿಂಬದ ಪ್ರತಿಷ್ಠಾಪನೆಯು ನರಸಿಂಹರಾಜಪುರ, ಸಿಂಹನಗದ್ದೆ ಬಸ್ತಿಮಠದ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಮತ್ತು ಸಮಸ್ತ ಭಟ್ಟಾರಕ ಸ್ವಾಮೀಜಿಗಳವರ ಪಾವನ ಸಾನ್ನಿಧ್ಯದಲ್ಲಿ ಹಾಗೂ ಶೃಂಗೇರಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶ್ರೀ ಶ್ರೀ ಗುಣನಾಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ದಿನಾಂಕ 22.03.2024 ರಿಂದ ಪ್ರಾರಂಭಗೊಂಡು 24.03.2024 ರವರೆಗೆ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆಯಲಿದೆ.

ಹಂತೂರು ಜೈನ ಬಸದಿಯ ನೂತನ ಮಾನಸ್ತಂಭ ಸ್ಥಾಪನೆ

Article Image

ಹಂತೂರು ಜೈನ ಬಸದಿಯ ನೂತನ ಮಾನಸ್ತಂಭ ಸ್ಥಾಪನೆ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಇತಿಹಾಸ ಪ್ರಸಿದ್ಧ ನೂತನ ಶ್ರೀ ಪಾರ್ಶ್ವನಾಥ ಜಿನ ಮಂದಿರದ ಮಾನಸ್ಥಂಭ ಹಾಗೂ ಚತುರ್ಮುಖ ಜಿನಬಿಂಬ ಸ್ಥಾಪನ ಕಾರ್ಯಕ್ರಮವು ಶ್ರೀ ಕ್ಷೇತ್ರ ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಸ್ವಸ್ತಿಶ್ರೀ ಲಕ್ಷ್ಮಿಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳರ ಪಾವನ ಸಾನಿಧ್ಯದಲ್ಲಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳಿಂದ ಮಾ. 16ರಂದು ನೆರವೇರಿತು. ನೂತನ ಮಾನಸ್ತಂಭವು 31.4 ಅಡಿಗಳ ಎತ್ತರದಲ್ಲಿದೆ. ಇದನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲೂಕಿನ, ಕೊಯ್ರಾ ಬಂಡೆಯಿಂದ ನಿರ್ಮಿಸಲಾಗಿದೆ. ಈ ಸಂದರ್ಭದಲ್ಲಿ ಮಾನಸ್ತಂಭದ ದಾನಿಗಳಾದ ಚಿತ್ರದುರ್ಗ ಜಿಲ್ಲೆ ಚಳ್ಳಕೆರಿಯ ಸವಿತಾ-ಗೌರಿಪುರ ಪಾರ್ಶ್ವನಾಥ ದಂಪತಿಗಳು, ಪುರೋಹಿತ ಬಿ. ಎಸ್. ಧರಣಿಂದ್ರ ಇಂದ್ರ, ಆರ್. ಕೆ. ಬ್ರಹ್ಮದೇವ್, ಬಸದಿ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಊರ-ಪರವೂರ ಜಿನ ಬಂಧುಗಳು, ಮತ್ತಿತರರು ಉಪಸ್ಥಿತರಿದ್ದರು.

ವರಂಗ: ವಾರ್ಷಿಕ ಮಹಾರಥಯಾತ್ರಾ ಮಹೋತ್ಸವ

Article Image

ವರಂಗ: ವಾರ್ಷಿಕ ಮಹಾರಥಯಾತ್ರಾ ಮಹೋತ್ಸವ

ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಅತಿಶಯ ಶ್ರೀ ಕ್ಷೇತ್ರ ವರಂಗದಲ್ಲಿ ಪರಂಪರಾನುಗತವಾಗಿ ನೆರವೇರಿಸಿಕೊಂಡು ಬಂದಿರುವ ಭಗವಾನ್ ಶ್ರೀ ೧೦೦೮ ನೇಮಿನಾಥ ಸ್ವಾಮಿ ಮತ್ತು ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರ ವಾರ್ಷಿಕ ರಥಯಾತ್ರಾ ಮಹೋತ್ಸವವು ಹೊಂಬುಜ ಜೈನ ಮಠದ ಪ.ಪೂ. ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ ಮತ್ತು ದಿವ್ಯ ನೇತೃತ್ವದಲ್ಲಿ ಫೆ.24ರಿಂದ ಮೊದಲ್ಗೊಂಡು ಫೆ.28ರವರೆಗೆ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.

ಧಾರವಾಡ : ವೇಣೂರು ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಆಹ್ವಾನ

Article Image

ಧಾರವಾಡ : ವೇಣೂರು ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಆಹ್ವಾನ

ಧಾರವಾಡ/ಸತ್ತೂರು: ವೇಣೂರಿನ ಮಹಾಮಸ್ತಕಾಭಿಷೇಕ ಸಮಿತಿಯ ಪದಾಧಿಕಾರಿಗಳು ಇಲ್ಲಿಯ ಎಸ್.ಡಿ.ಎಂ. ಮಹಾವಿದ್ಯಾಲಯದ ಉಪಕುಲಪತಿಗಳಾದ ಡಾ| ನಿರಂಜನ್ ಕುಮಾರ್ ಮತ್ತು ಪದ್ಮಲತಾ ನಿರಂಜನ್ ಕುಮಾರ್ ಧಾರವಾಡ ಇವರನ್ನು ಭೇಟಿ ಮಾಡಿ, ಅವರಿಗೆ ಮಹಾಮಸ್ತಕಾಭಿಷೇಕದ ಶ್ರೀಮುಖ ಪತ್ರಿಕೆಯನ್ನು ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಆ ಸಂದರ್ಭದಲ್ಲಿ ಎಸ್.ಡಿ.ಎಂ. ಸೊಸೈಟಿಯ ಕಾರ್ಯದರ್ಶಿಗಳಾದ ವಿ. ಜೀವಂಧರ್ ಕುಮಾರ್, ಮಸ್ತಕಾಭಿಷೇಕ ಸಮಿತಿಯ ಕೋಶಾಧಿಕಾರಿ ಜಯರಾಜ್ ಕಂಬ್ಳಿ, ಕಾರ್ಯದರ್ಶಿಗಳಾದ ಮಹಾವೀರ ಜೈನ್ ಮೂಡುಕೋಡಿ ಮತ್ತು ಕೆ. ಪ್ರವೀಣ್ ಅಜ್ರಿ ಹಾಗೂ ಪ್ರಸ್ತುಥ್ ಕುಂಡದಬೆಟ್ಟು ಉಪಸ್ಥಿತರಿದ್ದರು.

ಬೆಳಗಾವಿಯ ಧರ್ಮನಗರಿ ಶಮನೇವಾಡಿಯಲ್ಲಿ ಜೈನ ಸಮ್ಮೇಳನ

Article Image

ಬೆಳಗಾವಿಯ ಧರ್ಮನಗರಿ ಶಮನೇವಾಡಿಯಲ್ಲಿ ಜೈನ ಸಮ್ಮೇಳನ

ಬೆಳಗಾವಿಯ ಧರ್ಮನಗರಿ ಶಮನೇವಾಡಿಯಲ್ಲಿ ಪರಮ ಪೂಜ್ಯ ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರನಂದಿ ಮುನಿಮಹಾರಾಜರ 33ನೆಯ ದೀಕ್ಷಾ ಜಯಂತಿ ನಿಮಿತ್ತ ಇಂದು ಮಧ್ಯಾಹ್ನ 2:00 ಗಂಟೆಗೆ ಬೃಹತ್ ಜೈನ ಸಮ್ಮೇಳನ ನಡೆಯಲಿದೆ. ಜೈನ ಸಮ್ಮೇಳನದ ಉದ್ದೇಶ: ಸರಕಾರವು ಜೈನ ನಿಗಮ ಮಂಡಳಿಯನ್ನು ಸ್ಥಾಪಿಸಬೇಕು, ಮಹಾನಗರಗಳಲ್ಲಿ ಜೈನ್ ಹಾಸ್ಟೆಲ್‌ಗಳ ಸ್ಥಾಪನೆ ಆಗಬೇಕು, ಪ್ರತಿ ಜಿಲ್ಲೆಗಳಲ್ಲಿ ಬಡಜನರ ಉಚಿತ ಚಿಕಿತ್ಸೆಗಾಗಿ ಆಸ್ಪತ್ರೆಗಳ ಸ್ಥಾಪನೆ ಆಗಬೇಕು, ಜೈನ ಸಾಧುಗಳ ಸುರಕ್ಷತೆ ಆಗಬೇಕು, ಜೈನ ಬಡ ವಿದ್ಯಾರ್ಥಿಗಳಿಗೆ ನಿಶುಲ್ಕ (ಉಚಿತ) ವಿದ್ಯಾರ್ಜನೆ ಆಗಬೇಕು, ಪ್ರತಿ ಹಳ್ಳಿ ಹಳ್ಳಿಗೆ ಮುನಿ ನಿವಾಸ ಹಾಗೂ ಮಂಗಲ ಕಾರ್ಯಾಲಯಗಳು ನಿರ್ಮಾಣವಾಗಬೇಕು, ಕರ್ನಾಟಕ ಜೈನ ಸಂಸ್ಕೃತಿಯ ಸಂರಕ್ಷಣೆ ಆಗಬೇಕು. ಸಾಂಸ್ಕೃತಿಕ ಕಾರ್ಯಕ್ರಮ: ಇಂದು ಸಂಜೆ ನಟರಾಜ ಎಂಟಟೈನರ್ಸ್ ಅರ್ಪಿಸುವ ವಿಶ್ವ ಪ್ರಸಿದ್ದ ಕನ್ನಡ ಸಂಗೀತಗಾರ ರಾಜೇಶ್ ಕೃಷ್ಣನ್ ಇವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ಅಂಕೋಲ, ಶಿರಗುಂಜಿ : ಭ. ಶ್ರೀ ಪಾರ್ಶ್ವನಾಥ ತೀರ್ಥಂಕರರ ಜನ್ಮ ಕಲ್ಯಾಣ ಮಹೋತ್ಸವ ಮತ್ತು ವಾರ್ಷಿಕ ಪೂಜಾ ಮಹೋತ್ಸವ

Article Image

ಅಂಕೋಲ, ಶಿರಗುಂಜಿ : ಭ. ಶ್ರೀ ಪಾರ್ಶ್ವನಾಥ ತೀರ್ಥಂಕರರ ಜನ್ಮ ಕಲ್ಯಾಣ ಮಹೋತ್ಸವ ಮತ್ತು ವಾರ್ಷಿಕ ಪೂಜಾ ಮಹೋತ್ಸವ

ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರಗುಂಜಿಯ ಶ್ರೀ ಪಾರ್ಶ್ವನಾಥ ಹಾಗೂ ಶ್ರೀ ಜೋಡಿ ಪದ್ಮಾವತಿ ನಾಗರವಳ್ಳಿ ಕ್ಷೇತ್ರದಲ್ಲಿ ಭ|| ೧೦೦೮ ಶ್ರೀ ಪಾರ್ಶ್ವನಾಥ ತೀರ್ಥಂಕರರ ಜನ್ಮ ಕಲ್ಯಾಣ ಮಹೋತ್ಸವ ಮತ್ತು 12ನೇ ವಾರ್ಷಿಕ ಪೂಜಾ ಮಹೋತ್ಸವವು ಶ್ರೀ ಕ್ಷೇತ್ರ ಸ್ವಾದಿ ದಿಗಂಬರ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಜಗದ್ಗುರು ಅಕಲಂಕ ಕೇಸರಿ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಹಾಗೂ ಶ್ರೀ ಕ್ಷೇತ್ರ ಹೊಂಬುಜ ದಿಗಂಬರ ಜೈನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೆಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನಿಧ್ಯ ಹಾಗೂ ದಿವ್ಯ ನೇತೃತ್ವದಲ್ಲಿ ದಿನಾಂಕ 05-02-2024 ಮತ್ತು 06-02-2024ರ ರಂದು ನಡೆಯಲಿದೆ.

ಕಾರ್ಕಳ : ಜಿನಭಜನಾ ಸ್ಪರ್ಧೆ ಸೀಸನ್-7ನ ಸೆಮಿಫೈನಲ್ಸ್ ಮತ್ತು ಫೈನಲ್ಸ್ ಸ್ಪರ್ಧೆ

Article Image

ಕಾರ್ಕಳ : ಜಿನಭಜನಾ ಸ್ಪರ್ಧೆ ಸೀಸನ್-7ನ ಸೆಮಿಫೈನಲ್ಸ್ ಮತ್ತು ಫೈನಲ್ಸ್ ಸ್ಪರ್ಧೆ

ಭಾರತೀಯ ಜೈನ್ ಮಿಲನ್, ವಲಯ-8ರ ಆಶ್ರಯದಲ್ಲಿ, ಮಂಗಳೂರು ವಿಭಾಗದ ಕಾರ್ಕಳ ಜೈನ್ ಮಿಲನ್ ಸಹಯೋಗದೊಂದಿಗೆ, ಯುಗಲ ಮುನಿಗಳಾದ ಪರಮಪೂಜ್ಯ ಮುನಿಶ್ರೀ ೧೦೮ ಅಮೋಘ ಕೀರ್ತಿ ಮಹಾರಾಜರು ಮತ್ತು ಪರಮಪೂಜ್ಯ ಮುನಿಶ್ರೀ ೧೦೮ ಅಮರ ಕೀರ್ತಿ ಮಹಾರಾಜರು, ಕಾರ್ಕಳ ಶ್ರೀ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಇವರ ಆಶೀರ್ವಾದಗಳೊಂದಿಗೆ, ಭಾರತೀಯ ಜೈನ್ ಮಿಲನ್‌ನ ಪರಮಸಂರಕ್ಷಕರಾದ ಡಾ|| ಹೇಮಾವತಿ ಹೆಗ್ಗಡೆ ಮತ್ತು ಡಾ|| ವೀರೇಂದ್ರ ಹೆಗ್ಗಡೆಯವರು ಹಾಗೂ ಕುಟುಂಬ ವರ್ಗದವರ ಮಾರ್ಗದರ್ಶನದೊಂದಿಗೆ ಜಿನಭಜನಾ ಸ್ಪರ್ಧೆ ಸೀಸನ್-7ನ ಸೆಮಿಫೈನಲ್ಸ್ ಫೆಬ್ರವರಿ 3ರಂದು ಮತ್ತು ಫೆಬ್ರವರಿ 4ರಂದು ಫೈನಲ್ಸ್ ಸ್ಪರ್ಧೆಯು ಭಗವಾನ್ ಶ್ರೀ ಬಾಹುಬಲಿ ಪ್ರವಚನ ಮಂದಿರ ಕಾರ್ಕಳದಲ್ಲಿ ನಡೆಯಲಿದೆ.

ರಾಜ್ಯ ಬಜೆಟ್‌ನಲ್ಲಿ ಜೈನ ಅಭಿವೃದ್ಧಿ ನಿಗಮ ಸ್ಥಾಪನೆಗೆ ಅನುದಾನ ಮೀಸಲಿಡುವಂತೆ ಸಚಿವ ಡಿ. ಸುಧಾಕರ್‌ ಅವರಿಂದ ಮನವಿ

Article Image

ರಾಜ್ಯ ಬಜೆಟ್‌ನಲ್ಲಿ ಜೈನ ಅಭಿವೃದ್ಧಿ ನಿಗಮ ಸ್ಥಾಪನೆಗೆ ಅನುದಾನ ಮೀಸಲಿಡುವಂತೆ ಸಚಿವ ಡಿ. ಸುಧಾಕರ್‌ ಅವರಿಂದ ಮನವಿ

ಕ್ರಿ.ಪೂ. 3ನೇ ಶತಮಾನದಿಂದ ಜೈನ ಧರ್ಮವು ಐತಿಹಾಸಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯಕ ಕ್ಷೇತ್ರದಲ್ಲಿ ವಿಶಿಷ್ಟ ಕೊಡುಗೆಗಳನ್ನು ನಾಡಿಗೆ ನೀಡಿದ್ದು, ಕರ್ನಾಟಕ ರಾಜ್ಯವನ್ನು ಶ್ರೀಮಂತಗೊಳಿಸಿದೆ. ಪ್ರಸ್ತುತ ರಾಜ್ಯದಲ್ಲಿ 25-30 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಜೈನ ಸಮುದಾಯವು ಆರ್ಥಿಕವಾಗಿ ಹಿಂದುಳಿದಿರುತ್ತದೆ. ಕರ್ನಾಟಕದಾದ್ಯಂತ ಜೈನ ಸಮುದಾಯಕ್ಕೆ ಸೇರಿದ ಬಸದಿಗಳು, ಸ್ಮಾರಕಗಳು ತುಂಬಾ ಶಿಥಿಲಾವಸ್ಥೆಯಲ್ಲಿದ್ದು, ಅವುಗಳ ಜೀರ್ಣೋದ್ದಾರ ಆಗಬೇಕಿದೆ. ಕರುನಾಡಿನ ಇತಿಹಾಸ ಮತ್ತು ಸಾಹಿತ್ಯದ ಪುಟಗಳಲ್ಲಿ ಆನೇಕ ರಾಜರು, ಸಾಮಂತರು ಮತ್ತು ದಂಡನಾಯಕರ ಆಳ್ವಿಕೆಯಲ್ಲಿ ಜೈನ ಧರ್ಮವು ಕನ್ನಡ ನಾಡಿಗೆ ಅತ್ಯಮೂಲ್ಯವಾದ ಕಲೆ ಮತ್ತು ಸಾಹಿತ್ಯಗಳ ಮೂಲಕ ಅಪಾರ ಕೊಡುಗೆಯನ್ನು ನೀಡಿದೆ. ಆದ್ದರಿಂದ, ಜೈನ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ 2024-25ನೇ ಸಾಲಿನ ಆಯವ್ಯಯದಲ್ಲಿ "ಜೈನ ಅಭಿವೃದ್ಧಿ ನಿಗಮ"ವನ್ನು ಸ್ಥಾಪಿಸಲು ಘೋಷಣೆ ಮಾಡಿ ರೂ. 100 ಕೋಟಿಗಳ ಅನುದಾನವನ್ನು ಮೀಸಲಿಡಬೇಕೆಂದು ಹಾಗೂ ಶ್ರೀಕ್ಷೇತ್ರ ಶ್ರವಣಬೆಳಗೊಳವನ್ನು ಸಾಂಸ್ಕೃತಿಕ ಪಾರಂಪರಿಕ ನಗರವನ್ನಾಗಿ ಘೋಷಣೆ ಮಾಡಬೇಕೆಂದು ಜೈನ ಸಮುದಾಯದ ಪರವಾಗಿ ಕರ್ನಾಟಕ ಸರಕಾರದ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಡಿ. ಸುಧಾಕರ್‌ ಅವರು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಮನವಿಯನ್ನು ಜ. 31ರಂದು ಸಲ್ಲಿಸಿದರು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಶ್ರೀ ಮಠದ ವತಿಯಿಂದ ರಾಜೇಶ ಖನ್ನಾ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಉಪಾಧ್ಯಕ್ಷ ಅಶ್ವಿತ್ ಜೈನ್, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ನಿಕಟಪೂರ್ವ ನಿರ್ದೇಶಕ ಸುರೇಶ ತಂಗಾ, ಯೋಜನೆ ಮತ್ತು ಸಾಂಖ್ಯಿಕ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಅಜಿತ್ ಮುರಗುಂಡೆ, ಬೆಳಗಾವಿ ಜೈನ ಸಮಾಜದ ಮುಖಂಡರಾದ ನೇಮಿನಾಥ ಚೌಗಲೆ ಉಪಸ್ಥಿತರಿದ್ದರು.

ಬೆಂಗಳೂರು: ರಾಜ್ಯ ಮಟ್ಟದ ಅಂಚೆ ಚೀಟಿಗಳ ಪ್ರದರ್ಶನ ಕರ್ನಾಪೆಕ್ಸ್ 2024

Article Image

ಬೆಂಗಳೂರು: ರಾಜ್ಯ ಮಟ್ಟದ ಅಂಚೆ ಚೀಟಿಗಳ ಪ್ರದರ್ಶನ ಕರ್ನಾಪೆಕ್ಸ್ 2024

ವೇಣೂರು ಭ|| ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಶುಭ ಸಂದರ್ಭದಲ್ಲಿ ಭಾರತೀಯ ಅಂಚೆ ಇಲಾಖೆಯು ಕರ್ನಾಟಕದಲ್ಲಿನ 10 ಶ್ರೀ ಬಾಹುಬಲಿ ಸ್ವಾಮಿಯ ಮೂರ್ತಿಗಳ ಪಿಕ್ಚರ್ ಪೋಸ್ಟ್ ಕಾರ್ಡ್ ಹಾಗೂ ಜೈನ ಧರ್ಮದ ಮಹತ್ವ ಸಾರುವ ವಿಶ್ವ ಶಾಂತಿ, ಬದುಕು ಮತ್ತು ಬದುಕಲು ಬಿಡು, ಸತ್ಯ ಅಹಿಂಸೆಯ ಸಂದೇಶದ ವಿಶೇಷ ಸರಕಾರಿ ಅಂಚೆ ಮುದ್ರೆಗಳನ್ನು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಅಂಚೆ ಚೀಟಿಗಳ ಪ್ರದರ್ಶನ ಕರ್ನಾಪೆಕ್ಸ್ 2024ನಲ್ಲಿ ಲೋಕಾರ್ಪಣೆಗೊಳಿಸಲಾಯಿತು. ನಂತರ ಕರ್ನಾಟಕದ ಐತಿಹಾಸಿಕ ಭವ್ಯ ಸಂಸ್ಕೃತಿ, ಪರಂಪರೆ ಸಾರುವ ಪ್ರಮುಖ ಸ್ಥಳಗಳ ಕುರಿತು ಭಾರತೀಯ ಅಂಚೆ ಇಲಾಖೆ ಶಾಶ್ವತ ಮುದ್ರೆಗಳನ್ನು ಲೋಕಾರ್ಪಣೆ ಮಾಡುವ ಕಾರ್ಯದಲ್ಲಿ ವಿಶೇಷ ಶ್ರಮ ವಹಿಸಿದ ಹಿನ್ನಲೆಯಲ್ಲಿ ಹುಬ್ಬಳ್ಳಿಯ ಸಂಸ್ಕಾರ ಸ್ಕೂಲ್ ಅಧ್ಯಕ್ಷ ಮಹಾವೀರ ಕುಂದೂರ ಅವರನ್ನು ಕರ್ನಾಟಕ ಅಂಚೆ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ ಅವರು ಗೌರವಿಸಿದರು.

ಭಾರತೀಯ ಜೈನ್ ಮಿಲನ್ ಮಾಸಿಕ ಸಭೆ

Article Image

ಭಾರತೀಯ ಜೈನ್ ಮಿಲನ್ ಮಾಸಿಕ ಸಭೆ

ಬೆಂಗಳೂರು: ಇಲ್ಲಿಯ ರತ್ನತ್ರಯ ಜೈನ್ ಮಿಲನಿನ ಮಾಸಿಕ ಸಭೆಯು ಶ್ರೀ ಮಂಜುನಾಥೇಶ್ವರ ಕಲ್ಯಾಣ ಮಂಟಪದಲ್ಲಿ ಜ. 6ರಂದು ಜರುಗಿತು. ಮುಖ್ಯ ಅತಿಥಿಗಳಾಗಿ ಹಿರಿಯ ವಕೀಲರಾದ ನಾಗಶ್ರೀ ಮುಪ್ಪಾನೆ ಆಗಮಿಸಿದ್ದರು. ಗಣ್ಯರೆಲ್ಲರೂ ಸೇರಿ ದೀಪ ಪ್ರಜ್ವಲನೆ ಮಾಡುವುದರ ಮುಖಾಂತರ ಕಾರ್ಯಕ್ರಮ ಪ್ರಾರಂಭವಾಯಿತು. ಪೂರ್ಣಿಮಾರವರು ಡಿಸೆಂಬರ್ ತಿಂಗಳಲ್ಲಿ ವಿವಾಹ ವಾರ್ಷಿಕೋತ್ಸವ ಹಾಗೂ ಹುಟ್ಟುಹಬ್ಬವನ್ನು ಅಚರಿಸಿಕೊಂಡ ಮಿಲನ್ ಸದಸ್ಯರಿಗೆ ಶುಭಕೋರಿದರು. ಪದ್ಮಾ ಸೂರಿರವರು ಮಿಲನಿನ ನಡಾವಳಿಯನ್ನು ವಾಚಿಸಿದರು. ನಂತರ ಬೆಂಗಳೂರು ವಿಭಾಗದ ಜಿನಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಬಹುಮಾನ ಪಡೆದ ಮಿಲನಿನ ಸದಸ್ಯರನ್ನು ಅಭಿನಂದಿಸಲಾಯಿತು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಾಗಶ್ರೀ ಮುಪ್ಪಾನೆಯವರು, “ಜೈನ ಧರ್ಮದಲ್ಲಿ ಭಟ್ಟಾರಕ ಮಹತ್ವ, ಜೈನ ಮಠ ಮತ್ತು ಆಸ್ತಿ ಸಂರಕ್ಷಸಿಕೊಳ್ಳುವಲ್ಲಿ ನಮ್ಮ ಪಾತ್ರ” ಎಂಬ ವಿಷಯದ ಬಗ್ಗೆ ಕೂಲಂಕುಷವಾಗಿ ಮಾತನಾಡಿ ಅರಿವು ಮೂಡಿಸಿದರು. ನವೀನ್ ಕುಮಾರ್ ಗುಬ್ಬಿರವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಪ್ರೇಮಾ ಸುಖಾನಂದ ಉಪಸ್ಥಿತರಿದ್ದರು. ಅನಂತಕುಮಾರಿರವರು ಸ್ವಾಗತಿಸಿ, ಶ್ವೇತಾ ನವೀನ್ ವಂದಿಸಿದರು. ಧೀರಜ್ ಜೈನ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಅತಿಥ್ಯವನ್ನು ಪದ್ಮರಾಜ್ ಹಾಗೂ ಅನಂತ ಕುಮಾರಿರವರು ವಹಿಸಿಕೊಂಡಿದ್ದರು.

First Previous

Showing 4 of 4 pages

Next Last