ಕೀರ್ತಿಶೇಷ ಡಿ. ರತ್ನವರ್ಮ ಹೆಗ್ಗಡೆಯವರ ಪುಣ್ಯತಿಥಿ ಆಚರಣೆ
Published Date: 28-Oct-2025 Link-Copied
ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ತಂದೆ ಕೀರ್ತಿಶೇಷ ಡಿ. ರತ್ನವರ್ಮ ಹೆಗ್ಗಡೆಯವರ ಪುಣ್ಯತಿಥಿ ಆಚರಣೆಯನ್ನು ಸೋಮವಾರ ಧರ್ಮಸ್ಥಳದಲ್ಲಿ ನಡೆಸಲಾಯಿತು. ಬೀಡಿನಿಂದ ಭಗವಾನ್ ಚಂದ್ರನಾಥಸ್ವಾಮಿ ಬಸದಿಯವರೆಗೆ ಮೌನ ಮೆರವಣಿಗೆಯಲ್ಲಿ ಹೋಗಿ ಪೂಜ್ಯರ ಪುಣ್ಯಸ್ಮರಣೆ ಮಾಡಲಾಯಿತು.