Fri, May 2, 2025

Fri, May 2, 2025

ವೇಣೂರು: ಬಾಹುಬಲಿ ಸಭಾಭವನದಲ್ಲಿ ಸಾಮೂಹಿಕ ವೃತೋಪದೇಶ

Article Image

ವೇಣೂರು: ಬಾಹುಬಲಿ ಸಭಾಭವನದಲ್ಲಿ ಸಾಮೂಹಿಕ ವೃತೋಪದೇಶ

ಉಜಿರೆ: ಸಮ್ಯಕ್‌ದರ್ಶನ, ಸಮ್ಯಕ್‌ಜ್ಞಾನ ಮತ್ತು ಸಮ್ಯಕ್‌ಚಾರಿತ್ರ್ಯಂ ಎಂಬ ರತ್ನತ್ರಯ ಧರ್ಮದ ಪಾಲನೆಯೊಂದಿಗೆ ರಾಗ-ದ್ವೇಷ ರಹಿತನಾದ ವೀತರಾಗ ಭಗವಂತನ ಶ್ರದ್ಧಾ-ಭಕ್ತಿಯ ಧ್ಯಾನದಿಂದ ಮೋಕ್ಷ ಪ್ರಾಪ್ತಿ ಸಾಧ್ಯವಾಗುತ್ತದೆ ಎಂದು ಮೂಡಬಿದ್ರೆ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಅವರು ಶುಕ್ರವಾರ ವೇಣೂರಿನಲ್ಲಿ ಬಾಹುಬಲಿ ಸಭಾಭವನದಲ್ಲಿ ಬಾಹುಬಲಿ ಯುವಜನ ಸಂಘ, ದಿಗಂಬರ ಜೈನತೀರ್ಥಕ್ಷೇತ್ರ ಸಮಿತಿ ಹಾಗೂ ಬ್ರಾಹ್ಮಿ ಮಹಿಳಾ ಮಂಡಲದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಸಾಮೂಹಿಕ ವೃತೋಪದೇಶ ಸಮಾರಂಭದಲ್ಲಿ 53 ಮಂದಿ ಬಾಲಕರು ಮತ್ತು ಬಾಲಕಿಯರಗೆ ವೃತೋಪದೇಶ ನೀಡಿ ಆಶೀರ್ವದಿಸಿದರು. ವೃತ ಸ್ವೀಕಾರದಿಂದ ವರ್ತನೆಗಳ ಪರಿವರ್ತನೆ ಹಾಗೂ ಸುಧಾರಣೆಯಾಗುತ್ತದೆ. ಮನ, ವಚನ, ಕಾಯದಿಂದ ಪರಿಶುದ್ಧರಾಗಿ ದೇವರು, ಗುರುಗಳು ಮತ್ತು ಶಾಸ್ತçದಲ್ಲಿ ಅಚಲ ನಂಬಿಕೆ ಇಟ್ಟು ನಿತ್ಯವೂ ಜಪ, ತಪ, ಧ್ಯಾನದ ಮೂಲಕ ಆತ್ಮನಿಗಂಟಿದ ಸಕಲ ಪಾಪ ಕರ್ಮಗಳ ಕೊಳೆ ಕಳೆದುಕೊಂಡಾಗ ಮೋಕ್ಷ ಪ್ರಾಫ್ತಿಯಾಗುತ್ತದೆ. ನಿತ್ಯವೂ ಪಂಚಾಣುವೃತಗಳ ಪಾಲನೆ ಮಾಡಬೇಕು. ನೀರನ್ನು ಸೋಸಿ ಕುಡಿಯಬೇಕು ಹಾಗೂ ರಾತ್ರಿ ಭೋಜನ ತ್ಯಾಗ ಮಾಡಿ “ಬದುಕು ಮತ್ತು ಬದುಕಲು ಬಿಡು” ಎಂಬ ತತ್ವದೊಂದಿಗೆ ಸಾತ್ವಿಕ ಜೀವನ ನಡೆಸಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು. ಜನಿವಾರ ಎಂಬುದು ರತ್ನತ್ರಯ ಧರ್ಮ ಧಾರಣೆಯ ಸಂಕೇತ. ಬೀಗದ ಕೀ ಹಾಕಲು ಅಥವಾ ಬೆನ್ನು ತುರಿಸಲು ಅದನ್ನು ಬಳಸಬಾರದು ಎಂದು ಅವರು ಕಿವಿಮಾತು ಹೇಳಿದರು. ಮಾತಾ-ಪಿತರನ್ನು ಹಾಗೂ ಗುರು-ಹಿರಿಯರನ್ನು ಗೌರವಿಸಿ ಎಲ್ಲರೊಂದಿಗೂ ಪ್ರೀತಿ-ವಿಶ್ವಾಸದೊಂದಿಗೆ ಆದರ್ಶ ಜೀವನ ನಡೆಸಬೇಕು ಎಂದು ಸ್ವಾಮೀಜಿ ಹೇಳಿದರು. ಎಲ್ಲರಿಗೂ ಜನಿವಾರ ವಿತರಿಸಿ, ಸಾಮೂಹಿಕವಾಗಿ ಪಂಚನಮಸ್ಕಾರ ಮಂತ್ರ ಪಠಣ ನಡೆಸಲಾಯಿತು.

ನಾರಾವಿಯಲ್ಲಿ ಅದ್ದೂರಿಯಾಗಿ ನಡೆದ ಭ. ಶ್ರೀ ಮಹಾವೀರ ಸ್ವಾಮಿಯ ಜನ್ಮಕಲ್ಯಾಣ ಮಹೋತ್ಸವ

Article Image

ನಾರಾವಿಯಲ್ಲಿ ಅದ್ದೂರಿಯಾಗಿ ನಡೆದ ಭ. ಶ್ರೀ ಮಹಾವೀರ ಸ್ವಾಮಿಯ ಜನ್ಮಕಲ್ಯಾಣ ಮಹೋತ್ಸವ

ನಾರಾವಿ: ಭಗವಾನ್ ಶ್ರೀ ಮಹಾವೀರ ಸ್ವಾಮಿಯ ಜನ್ಮ ಕಲ್ಯಾಣ ಮಹೋತ್ಸವವು ಅತ್ಯಂತ ಅದ್ದೂರಿಯಾಗಿ ನೆರೆವೇರಿತು. ಜಿನ ಭಗವಂತರಿಗೆ ಶ್ರಾವಕ ಬಂಧುಗಳು ಹಾಗೂ ಮಕ್ಕಳು ಜಿನಭಿಷೇಕ ಮಾಡುವುದರ ಮೂಲಕ ಪುಣ್ಯ ಪಡೆದುಕೊಂಡರು. ಜೈನ ಯುವಜನ ಸಂಘದ ಪದಾಧಿಕಾರಿಗಳು ಕಾರ್ಯಕ್ರಮ ಆಯೋಜಿಸಿದ್ದರು. ಆಡಳಿತ ಸಮಿತಿ ನಾರಾವಿ ಹಾಗೂ ಜೈನ್ ಮಿಲನ್ ನಾರಾವಿ ಮತ್ತು ಊರ ಹಾಗೂ ಪರವೂರ ಶ್ರಾವಕ ಬಂಧುಗಳ ಸಹಕಾರದಿಂದ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

ಎಕ್ಸಲೆ0ಟ್ ಮೂಡುಬಿದಿರೆಯಲ್ಲಿ ಮಹಾವೀರ ಜಯ0ತಿ ದಿನಾಚರಣೆ

Article Image

ಎಕ್ಸಲೆ0ಟ್ ಮೂಡುಬಿದಿರೆಯಲ್ಲಿ ಮಹಾವೀರ ಜಯ0ತಿ ದಿನಾಚರಣೆ

ಮೂಡುಬಿದಿರೆ: ಚೈತ್ರ ಮಾಸದ ಶುಕ್ಲ ಪಕ್ಷದ ತ್ರಯೋದಶಿಯ0ದು ನಡೆಯುವ ಶ್ರೀ ಮಹಾವೀರ ಸ್ವಾಮಿಯ 2624 ನೇ ಜನ್ಮ ಕಲ್ಯಾಣ ಮಹೋತ್ಸವ ಎಕ್ಸಲೆ0ಟ್ ಮೂಡುಬಿದಿರೆಯಲ್ಲಿಸ0ಭ್ರಮದಿ0ದ ಸ0ಪನ್ನಗೊ0ಡಿತು. ಕಾರ್ಯಕ್ರಮದಲ್ಲಿ ಎಕ್ಸಲೆ0ಟ್ ಮೂಡುಬಿದಿರೆ ಈ ವರ್ಷದಿ0ದ ಕೊಡಮಾಡುವ ಸನ್ಮತಿ ಮಹಾವೀರ ಶಾ0ತಿ ಪುರಸ್ಕಾರ -2025 ನ್ನು ಶ್ರೀ ಧರ್ಮಸ್ಥಳ ಮ0ಜುನಾಥೇಶ್ವರ ಕಾನೂನು ಮಹಾವಿದ್ಯಾಲಯ ಮ0ಗಳೂರಿನ ವಿಶ್ರಾ0ತ ಪ್ರಾ0ಶುಪಾಲರಾದ ಪ್ರೊ ಅರಳ ರಾಜೇ0ದ್ರ ಶೆಟ್ಟಿಯವರಿಗೆ ನೀಡಿ ಅಭಿವ0ದಿಸಲಾಯಿತು. ಪುರಸ್ಕಾರಕ್ಕೆ ಪ್ರತಿಕ್ರಿಯಿಸಿದ ಅರಳ ರಾಜೇ0ದ್ರ ಶೆಟ್ಟಿಯವರು ಚೈತನ್ಯ ಈ ನೆಲದ ಕಣಕಣದಲ್ಲೂ ಅ0ತರ್ಯಾಮಿಯಾಗಿದೆ. ಅದನ್ನು ಕಾಣುವ ಕಣ್ಣಿರಬೇಕು. ಕಲ್ಲಿನೊಳಗಿನ ದೈವನಿಹಿತ ಶಕ್ತಿಯನ್ನು ಕ0ಡ ಯುವರಾಜರು ಅದರ ಸಾಕ್ಷಾತ್ಕಾರದ ಪಣ ತೊಟ್ಟರು. ಅವರ ಧರ್ಮ ಪತ್ನಿ ರಶ್ಮಿತಾ ಜೈನ್ ಜೊತೆಗೂಡಿದರು. ಅಭಯಚ0ದ್ರರು ಅಭಯ ನೀಡಿದರು. ಮು0ದಿನದ್ದು ಇತಿಹಾಸ. ಈ ನೆಲದಲ್ಲಿ ಕಲ್ಲರಳಿ ಹೂವಾಯಿತು. ನನಗೆ ಕರ್ಮಸ್ಥಳವೇ ಧರ್ಮಸ್ಥಳ. ಪೂಜ್ಯ ವೀರೆ0ದ್ರ ಹೆಗ್ಗಡೆಯವರಿಗೆ ನನ್ನೆಲ್ಲಾ ಸ0ತೋಷವನ್ನು ಅರ್ಪಿಸುತ್ತಿದ್ದೇನೆ. ನಮ್ಮ ಕೆಲಸವನ್ನು ತೃಪ್ತಿಯಿ0ದ ನಿಷ್ಠೆಯಿ0ದ ಮಾಡಿದರೆ ಸ0ತೋಷ ನಮ್ಮನ್ನು ಅರಸಿಕೊ0ಡು ಬರುತ್ತದೆ. ನಿರೀಕ್ಷೆಗಳ ಹಿ0ದೆ ಓಡಕೂಡದು. ಬದುಕಿನ ಬಹಳ ದೊಡ್ಡ ಗುಟ್ಟು ಸ0ತೋಷದಲ್ಲಿದೆ. ಮನಸ್ಸು ಸ0ತೋಷದಲ್ಲಿದ್ದರೆ ಬದುಕು ಸಾರ್ಥಕ್ಯವನ್ನು ಕಾಣುತ್ತದೆ. ನಾವು ನಮ್ಮ ದೃಷ್ಟಿ ಬದಲಾಯಿಸಿದರೆ ನಮ್ಮ ಸೃಷ್ಟಿ ಬದಲಾಗುತ್ತದೆ. ಸೃಷ್ಟಿಯಲ್ಲಿ ಸೌ0ದರ್ಯವೇ ಇರುತ್ತದೆ. ನಾವು ನಮ್ಮ ಅನಾವಶ್ಯಕ ಮಾತು, ಯೋಚನೆ, ಚಿ0ತನೆಗಳಿ0ದ ಆ ಸೌ0ದರ್ಯವನ್ನು ಕಾಣದಾಗಿದ್ದೇವೆ. ಅಹಿ0ಸೆ ಎ0ಬ ಒ0ದು ಬಾಗಿಲು ಸಾಕು ಭಗವ0ತನ ಸಾಕ್ಷಾತ್ಕಾರಕ್ಕೆ. ಅಹಿ0ಸೆಯ ರಾಜ ಮಾರ್ಗದಲ್ಲಿ ಪ್ರೀತಿ ಇದೆ, ಸಹನೆ ಇದೆ, ವಿಶ್ವಾಸ, ಭರವಸೆ ಇದೆ. ಆ ಮಾರ್ಗದಲ್ಲಿ ಪಥಿಕರಾಗೋಣ. ಮಣ್ಣ ಕಣಕಣದಲ್ಲೂ ತ0ಪು ತಣಿವುಗಳಿರಲಿ. ಒಲವಿನೊರತೆಯು ಹೊಳೆಯಾಗಿ ಹರಿದು ಬರಲಿ. ಭ್ರಮೆಯ ಬದುಕನ್ನು ಕಳಚಿ ಹೊರಡೋಣ, ಪ್ರೀತಿ ಎ0ಬ ಬೆಳಕಿನ ಬಟ್ಟೆ ನಮ್ಮನ್ನು ಭಗವ0ತನ ಕಡೆ ಒಯ್ಯುತ್ತದೆ. ಈ ಎಕ್ಸಲೆ0ಟ್ ನಲ್ಲಿ ನೀವು ಕಲಿಯುವುದರೊ0ದಿಗೆ ಬೆಳೆಯಿರಿ, ಎಕ್ಸಲೆ0ಟ್ ಗಳಾಗಿ ಎ0ದರು. ಪ್ರತಿ ಮಗುವೂ ಪ್ರಪ್ರಥಮವಾಗಿ ಒಳ್ಳೆಯವರೇ. ಸುತ್ತಲಿನ ಋಣಾತ್ಮಕ ಸ0ಗತಿಗಳು ನಿಮ್ಮನ್ನು ಕೆಡಿಸದಿರಲಿ. ಆಯ್ಕೆ ನಿಮ್ಮ ಕೈಯಲ್ಲಿದೆ. ಒಳ್ಳೆಯ ಆಯ್ಕೆ ಒಳ್ಳೆಯ ಜೀವನ. ಬೆಳಕಿನ ಬಟ್ಟೆಯಲ್ಲಿ ನಡೆಯುವ ಎಕ್ಸಲೆ0ಟ್ ನ ಈ ದೀಪಗಳು ಸಮಾಜಕ್ಕೆ ಬೆಳಕಾಗಲಿ ಎ0ದರು. ಮುಖ್ಯ ಅತಿಥಿಗಳಾದ ಮಾಜಿ ಸಚಿವರಾದ ಕೆ ಅಭಯಚ0ದ್ರ ಜೈನ್ ಸರಳ ಜೀವನ ಶ್ರೇಷ್ಠ ಜೀವನ. ಸರಳ ಜೀವನ ಘನತೆ, ಗೌರವ ಎಲ್ಲವನ್ನು ತ0ದುಕೊಡುತ್ತದೆ. ಭಾರತೀಯತೆ, ರಾಷ್ಟ್ರೀಯ ಚಿ0ತನೆಗಳೊ0ದಿಗೆ ಸರಳ ಬದುಕು ನಮ್ಮದಾಗಲಿ ಎ0ದರು. ಸ0ಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್ ಸಭೆಯ ಅಧ್ಯಕ್ಷರಾಗಿ ಬದುಕು ಮತ್ತು ಬದುಕಲು ಬಿಡಿ ಎ0ಬ ಸಿದ್ಧಾ0ತ ನಮ್ಮ ಬದುಕಿಗೆ ದಾರಿ ದೀಪಗಳಾಗಲಿ. ಭಗವತ್ ಸಾಕ್ಷಾತ್ಕಾರಕ್ಕೆ ಮುನ್ನುಡಿ ಇರುವುದೇ ಆತ್ಮತೃಪ್ತಿಯ ಸನ್ನಿಧಿಯಲ್ಲಿ. ಗುಣವ0ತರಾಗಿ, ಕಷ್ಟದಲ್ಲಿರುವವರಿಗೆ ಬಲವಾಗಿ, ಸೌಜನ್ಯ, ಸೌಶೀಲ್ಯ, ಸೌಮನಸ್ಸುಗಳು ನಮ್ಮ ಸ0ಸಾರವಾದರೆ ನಮ್ಮ ಹೃದಯದಲ್ಲಿಭಗವ0ತ ನೆರೆಗೊ0ಡು ನಮ್ಮ ಎಲ್ಲಾ ಕೆಲಸಗಳಿಗೆ ಭಗವದನುಗ್ರಹ ಇರುತ್ತದೆ. ಮಹಾತ್ಮರ, ಸ0ತರ ಜೀವನ ನಮ್ಮ ಬದುಕಿಗೆ ಹೊಸ ಬೆಳಕಿನ ದಾರಿ ತೋರಿಸಲಿ. ನಾವು ಅದರಲ್ಲಿ ಮು0ದುವರೆಯೋಣ ಎ0ದರು. ಆಧ್ಯಾತ್ಮಿಕತೆಯ ಪರಮ ಸತ್ಯವನ್ನು ಪ್ರಾಪ0ಚಿಕರಿಗೆ ಬೋಧಿಸಿದ ಅಹಿ0ಸೆ, ಸತ್ಯ, ಅಪರಿಗ್ರಹ, ಬ್ರಹ್ಮಚರ್ಯದ ಮೂಲಕ ಸೈತಿಕ ನಡವಳಿಕೆಯ ಸಹೋದರ, ಸಮನ್ವತೆಯ ಉದಾತ್ತ ಧರ್ಮ ತೋರಿಕೊಟ್ಟ, ವಿಶ್ವಮಾನ್ಯ ಚೇತನವಾದ ಜೈನಧರ್ಮದ 24 ನೇ ತೀರ್ಥ0ಕರರಾದ ಶ್ರೀ ಮಹಾವೀರ ಸ್ವಾಮಿಯ 2624 ನೇ ಜನ್ಮ ಕಲ್ಯಾಣೋತ್ಸವ ಶ್ರಾವಕರಾದ ಅಜಿತ್ ನಾರಾವಿಯವರ ಮಾರ್ಗದರ್ಶನದಲ್ಲಿ ಅಷ್ಟವಿಧ ಅರ್ಚನೆಯೊ0ದಿಗೆ ಶ್ರದ್ಧೆಯಿ0ದ ಶ್ರೀಮತಿ ಪದ್ಮಪ್ರಿಯ, ಕು ಋದ್ಧಿ ಕೇರ ಅವರ ಮ0ತ್ರ ಪಠಣದೊ0ದಿಗೆ ಸ0ಪನ್ನಗೊ0ಡಿತು. ಇದೇ ಸ0ದರ್ಭದಲ್ಲಿ ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ ಪುರಸ್ಕೃತರಾದ ನೇರ0ಕಿ ಪಾರ್ಶ್ವನಾಥ, ಸುಧಾ ಪಾರ್ಶ್ವನಾಥ ದ0ಪತಿಯನ್ನು ವಿಶೇಷ ಗೌರವ ಪುರಸ್ಕಾರಗಳೊ0ದಿಗೆ ಅಭಿನ0ದಿಸಲಾಯಿತು. ವಿದ್ಯಾರ್ಥಿನಿ ಶ್ರೇಯಾ ಪ್ರಕಾಶ್ ನೀಲಗೌಡರ್ ಅವರನ್ನು ಅವರ ಬಹುಮುಖೀ ಪ್ರತಿಭೆಗಾಗಿ ಗೌರವಿಸಲಾಯಿತು. ಭಾರತೀಯ ಅ0ಚೆ ಇಲಾಖೆ ದಿನದ ಪ್ರಯುಕ್ತ ಎಕ್ಸಲೆ0ಟ್ ಸ0ಸ್ಥೆಗೆ ವಿಶ್ವನಮೋಕಾರ ಮ0ತ್ರ ದಿನದ ಪ್ರಯುಕ್ತ ಎಕ್ಸಲೆ0ಟ್ ಸ0ಸ್ಥೆಗೆ ವಿಶೇಷ ಗೌರವವನ್ನು ಸ0ಸ್ಥೆಯ ಗೌರವಾಧ್ಯಕ್ಷರಾದ ಅಭಯಚ0ದ್ರ ಜೈನ್ ಹಾಗೂ ಅಧ್ಯಕ್ಷರಾದ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್ ಅವರಿಗೆ ಹಸ್ತಾ0ತರಿಸಲಾಯಿತು. ಸ0ಸ್ಥೆಯ ರಕ್ಷಣಾ ಸಿಬ್ಬ0ದಿಗಳಿಗೆ ಹಾಗೂ ಸ್ವಚ್ಛತಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲರನ್ನೂ ಗೌರವಿಸಲಾಯಿತು. ವೇದಿಕೆಯಲ್ಲಿ ಕೃಷ್ಣರಾಜ ಹೆಗ್ಡೆ ಉಪಸ್ಥಿತರಿದ್ದರು. ಸ0ಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಪ್ರಾಸ್ತಾವಿಕ ಮಾತಿನೊ0ದಿಗೆ ಸ್ವಾಗತಿಸಿದರು. ಉಪನ್ಯಾಸಕ ಸುನಾದ್ ರಾಜ್ ಜೈನ್ ವ0ದಿಸಿದರು. ಸ0ಸ್ಥೆಯ ಆಡಳಿತ ನಿರ್ದೇಶಕರಾದ ಡಾ ಬಿ.ಪಿ ಸ0ಪತ್ ಕುಮಾರ್ ನಿರೂಪಿಸಿದರು.

ಬೆಳ್ತಂಗಡಿ ಬಸದಿಯಲ್ಲಿ ಮಹಾವೀರ ಜಯಂತಿ ಆಚರಣೆ

Article Image

ಬೆಳ್ತಂಗಡಿ ಬಸದಿಯಲ್ಲಿ ಮಹಾವೀರ ಜಯಂತಿ ಆಚರಣೆ

ಉಜಿರೆ: ಬೆಳ್ತಂಗಡಿ ಜೈನಪೇಟೆಯಲ್ಲಿರುವ ರತ್ನತ್ರಯ ತೀರ್ಥಕ್ಷೇತ್ರದಲ್ಲಿ ಭಗವಾನ್ ಮಹಾವೀರ ಜಯಂತಿ ಆಚರಣೆಯ ಅಂಗವಾಗಿ ಗುರುವಾರ ತೋರಣಮುಹೂರ್ತ , ವಿಮಾನಶುದ್ಧಿ, ಭಗವಾನ್ ಮಹಾವೀರ ಸ್ವಾಮಿಗೆ ನವಕಲಾಶಾಭಿಷೇಕ, ಭಗವಾನ್ ಶಾಂತಿನಾಥ ಸ್ವಾಮಿಗೆ ೧೦೮ ಕಲಶಗಳಿಂದ ಮಹಾಭಿಷೇಕ, ಪದ್ಮಾವತಿ ಅಮ್ಮನವರಿಗೆ ಅಲಂಕಾರ ಪೂಜೆ ಹಾಗೂ ಬ್ರಹ್ಮಯಕ್ಷ ದೇವರಿಗೆ ವಿಶೇಷ ಪೂಜೆ ನಡೆಯಿತು. ಬಸದಿಯ ಆಡಳಿತ ಮೊಕ್ತೇಸರ ಕೆ. ಜಯವರ್ಮರಾಜ ಬಳ್ಳಾಲ್ ನೇತೃತ್ವದಲ್ಲಿ ಪ್ರಧಾನ ಅರ್ಚಕ ಕೆ. ಜಯರಾಜ ಇಂದ್ರರು ಮತ್ತು ಸಹಪುರೋಹಿತರಯ ಧಾರ್ಮಿಕ ವಿಧಿ-ವಿಧಾನಗನ್ನು ನೆರವೇರಿಸಿದರು. ಬಳಿಕ ನಡೆದ ಶಾಂತಿಚಕ್ರ ಆರಾಧನೆಯಲ್ಲಿ 26 ಮಂದಿ ಶ್ರಾವಕರು, ಶ್ರಾವಕಿಯರು ಭಾಗವಹಿಸಿ ಪುಣ್ಯಭಾಗಿಗಳಾದರು. ಭಗವಾನ್ ಮಹಾವೀರ ತೀರ್ಥಂಕರರ ಜೀವನ-ಸಾಧನೆ ಬಗ್ಯೆ ಉಪನ್ಯಾಸ ನೀಡಿದ ಅಳದಂಗಡಿ ಮಿತ್ರಸೇನ ಜೈನ್, ಮಹಾವೀರ ತೀರ್ಥಂಕರರು ಬೋಧಿಸಿದ ಅಹಿಂಸೆ, ಅನೇಕಾಂತವಾದ, ಬದುಕು ಮತ್ತು ಬದುಕಲು ಬಿಡು ಮೊದಲಾದ ಉಪದೇಶಗಳು ಸಾರ್ವಜನಿಕ ಮೌಲ್ಯ ಹೊಂದಿವೆ. ಸಕಲ ಪ್ರಾಣಿಪಕ್ಷಿಗಳಿಗೂ ನಮ್ಮಂತೆಯೇ ಬದುಕುವ ಹಕ್ಕಿದೆ. ಮಹಾವೀರರು ಬೋಧಿಸಿದ ತತ್ವಗಳಿಂದ ವಿಶ್ವಶಾಂತಿಯೊಂದಿಗೆ ಸುಖ-ಶಾಂತಿ, ನೆಮ್ಮದಿಯ ಜೀವನ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ಕೆ. ಜಯವರ್ಮರಾಜ ಬಳ್ಳಾಲ್, ಡಾ. ಕೆ. ಜೀವಂಧರ ಬಳ್ಳಾಲ್, ಕೆ. ರಾಜವರ್ಮ ಬಳ್ಳಾಲ್, ಬೆಂಗಳೂರಿನ ವಕೀಲ ಕೆ.ಬಿ. ಯುವರಾಜ ಬಳ್ಳಾಲ್, ವಿಜಯಾ ಬ್ಯಾಂಕ್‌ನ ನಿವೃತ್ತ ಪ್ರಬಂಧಕ ಎಂ. ಜಿನರಾಜ ಶೆಟ್ಟಿ, ಸುಮತಿ ಕೆ.ಆರ್. ಬಳ್ಳಾಲ್ದ, ವಿನಯಾ ಜೆ. ಬಳ್ಳಾಲ್, ಡಾ. ಪ್ರಿಯಾ ಬಳ್ಳಾಲ್ ಮತ್ತು ಮಣಿಮಾಲ ಬಳ್ಳಾಲ್ ಹಾಗೂ ಬಳ್ಳಾಲ್ ಕುಟುಂಬಸ್ಥರು ಉಪಸ್ಥಿತರಿದ್ದರು.

ಣಮೋಕಾರ ಮಹಾಮಂತ್ರ ಪಠಣ ಸಮಾರಂಭ

Article Image

ಣಮೋಕಾರ ಮಹಾಮಂತ್ರ ಪಠಣ ಸಮಾರಂಭ

108 ದೇಶಗಳಲ್ಲಿ ಏಕಕಾಲದಲ್ಲಿ ಬೆಳಗ್ಗೆ ಏಳರಿಂದ ಹತ್ತು ಗಂಟೆಯವರೆಗೆ ನಮೋಕಾರ ಮಂತ್ರವನ್ನು ಪಠಿಸಲಾಯಿತು. ಭಾರತದಲ್ಲಿ ಪ್ರಧಾನಮಂತ್ರಿಯಾದ ಸನ್ಮಾನ್ಯ ನರೇಂದ್ರ ಮೋದಿಯವರು ನವ ದೆಹಲಿಯಲ್ಲಿ ವಿಜ್ಞಾನ ಭವನದಲ್ಲಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿರುತ್ತಾರೆ. ಒಂದು ಜಗತ್ತು, ಒಂದು ಮಂತ್ರ, ಶಾಂತಿಗಾಗಿ ಜೊತೆಯಲ್ಲಿ ಎಂಬ ಧ್ಯೇಯದೊಂದಿಗೆ ಜೀತೋ ಸಂಸ್ಥೆ ವಿಶ್ವದಾದ್ಯಂತ ಏರ್ಪಡಿಸಿದ್ದ ವಿಶ್ವ ಣಮೋಕಾರ ಮಂತ್ರ ದಿವಸ ಇದರ ಅಂಗವಾಗಿ ಭಾರತೀಯ ಜೈನ್ ಮಿಲನ್ ಮೂಡುಬಿದರೆ, ಬಸದಿ ಸ್ವಚ್ಛತಾ ತಂಡ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಸಮಸ್ತ ಜೈನ ಬಾಂಧವರು ಮೂಡುಬಿದರೆ ಇವರಿಂದ ಜೈನ ಕಾಶಿ ಮೂಡುಬಿದರೆಯಲ್ಲಿ ಸಾವಿರ ಕಂಬದ ಬಸದಿ ಎಂದೇ ಪ್ರಸಿದ್ಧವಾಗಿರುವ ತ್ರಿಭುವನ ತಿಲಕ ಚೂಡಾಮಣಿ ಬಸದಿಯಲ್ಲಿ ಸಾಮೂಹಿಕವಾಗಿ ಣಮೋಕಾರ ಮಂತ್ರವನ್ನು ಪಠಿಸಲಾಯಿತು.

ಮಹಾವೀರ ಸ್ವಾಮಿ ಜನ್ಮಕಲ್ಯಾಣೋತ್ಸವ ಆಚರಣೆ

Article Image

ಮಹಾವೀರ ಸ್ವಾಮಿ ಜನ್ಮಕಲ್ಯಾಣೋತ್ಸವ ಆಚರಣೆ

ವೇಣೂರು: ಭಾರತೀಯ ಜೈನ್‌ ಮಿಲನ್‌ ಇವರು ಶ್ರೀ ದಿಗಂಬರ ಜೈನ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ (ರಿ.) ವೇಣೂರು, ಶ್ರೀ ಬಾಹುಬಲಿ ಯುವಜನ ಸಂಘ ವೇಣೂರು, ಬ್ರಾಹ್ಮಿ ಮಹಿಳಾ ಸಂಘ ವೇಣೂರು, ಕಲ್ಲುಬಸದಿ ಬ್ರಿಗೇಡಿಯರ್ಸ್‌ ವೇಣೂರು ಇವರ ಸಹಯೋಗದೊಂದಿಗೆ ಭ| ೧೦೦೮ ಶ್ರೀ ಮಹಾವೀರ ಸ್ವಾಮಿ ಜನ್ಮಕಲ್ಯಾಣೋತ್ಸವ ಆಚರಣೆಯು ದಿನಾಂಕ 10-04-2025ನೇ ಗುರುವಾರ ಶ್ರೀ ಬಾಹುಬಲಿ ಸಭಾ ಭವನದಲ್ಲಿ ಜರಗಲಿರುವುದು. ಕಾರ್ಯಕ್ರಮಗಳು : ಪೂರ್ವಾಹ್ನ ಗಂಟೆ 8.30ರಿಂದ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯಲ್ಲಿ ಪಾರ್ಶ್ವನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕ ಮತ್ತು ಮಹಾವೀರ ಸ್ವಾಮಿಗೆ ಕ್ಷೇರಾಭಿಷೇಕ ಪೂರ್ವಾಹ್ನ ಗಂಟೆ 9.00ರಿಂದ : ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯಿಂದ ಶ್ರೀ ಬಾಹುಬಲಿ ಸಭಾಭವನಕ್ಕೆ ಜಿನ ಬಾಲಕನ ಪುರ ವಿಹಾರ ಪೂರ್ವಾಹ್ನ ಗಂಟೆ 9.30ರಿಂದ : ಶ್ರಾವಕ ಶ್ರಾವಕಿಯವರಿಂದ ಸಾಮೂಹಿಕ ಅಷ್ಟವಿಧಾರ್ಚನೆ ಪೂಜೆ ಪೂರ್ವಾಹ್ನ ಗಂಟೆ 10.45ರಿಂದ : ಪಾಂಡುಕ ಶಿಲೆಯಲ್ಲಿ ಜಿನ ಬಾಲಕನಿಗೆ ಜನ್ಮಾಭಿಷೇಕ, ನಾಮಕರಣೋತ್ಸವ ಮಧ್ಯಾಹ್ನ ಗಂಟೆ 12.00ಕ್ಕೆ : ಮಹಾಮಂಗಳಾರತಿ

ಬಂಟ್ವಾಳ: ಜೈನ್ ಮಿಲನ್ ಮಾಸಿಕ ಸಭೆ

Article Image

ಬಂಟ್ವಾಳ: ಜೈನ್ ಮಿಲನ್ ಮಾಸಿಕ ಸಭೆ

ಬಂಟ್ವಾಳ: ಜೈನ್ ಮಿಲನ್ ಮಾಸಿಕ ಸಭೆಯು ದಿನಾಂಕ 23.03.2025ನೇ ಭಾನುವಾರ ಶ್ರೀ ಆದಿನಾಥ ತೀರ್ಥ0ಕರ ಜಿನಚೈತ್ಯಾಲಯದ ವಾರ್ಷಿಕೋತ್ಸವದಂದು ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಿಲನ್ ಅಧ್ಯಕ್ಷರಾದ ಮಧ್ವರಾಜ್ ಜೈನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜೈನ್ ಮಿಲನ್ ವಲಯ ಉಪಾಧ್ಯಕ್ಷರಾದ ಸುದರ್ಶನ್ ಜೈನ್, ಮಂಗಳೂರು ವಿಭಾಗ ಕಾರ್ಯದರ್ಶಿಗಳಾದ ಸುಭಾಶ್ಚಂದ್ರ ಜೈನ್,ವಲಯ ನಿರ್ದೇಶಕರಾದ ಪ್ರಮೋದ್ ಕುಮಾರ್ ಉಜಿರೆ ಸಭೆಯನ್ನುದ್ದೇಶಿಸಿ ಮಾತನಾಡಿದರು. ಮಂಗಳೂರು ವಿಭಾಗ ನಿರ್ದೇಶಕರಾದ ಸುಕುಮಾರ ಬಲ್ಲಾಳ್ ಧಾರ್ಮಿಕ ಚೌಕಟ್ಟಿನಲ್ಲಿ ಜೈನ ಸಮಾಜದ ಸಂಘಟನೆ ಎಂಬ ವಿಷಯದ ಬಗ್ಗೆ ಮಾತನಾಡುತ್ತಾ ಸಮಾಜದ ಯುವ ಜನರಲ್ಲಿ ಸಂಘಟನೆ, ಸಂಸ್ಕಾರ, ಸಂಸ್ಕೃತಿ ಮತ್ತು ಪರಂಪರೆ ಉಳಿಸುವ ಹಾಗೂ ಬೆಳೆಸುವ ಕೆಲಸಗಳು ಆಗಬೇಕು ಆಗ ಸಮಾಜ ಜಾಗೃತವಾಗುತ್ತದೆ ಎಂದು ತಿಳಿಸಿದರು . ಕಾರ್ಯಕ್ರಮದಲ್ಲಿ ಯಾವುದೇ ಪ್ರಚಾರವಿಲ್ಲದೆ ಸಮಾಜದ ಸೇವೆಯನ್ನು ಮಾಡುತ್ತಿರುವ ಪ್ರವೀಣ್ ಕುಮಾರ್ ಬಸ್ತಿಪಡ್ಫು , ಸಪ್ನ ಚಂದ್ರಪ್ರಭ ಬೈಪಾಸ್ ಬಂಟ್ವಾಳ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ವೇದಿಕೆಯಲ್ಲಿ ಜೈನ್ ಮಿಲನ್ ಕಾರ್ಯದರ್ಶಿಗಳಾದ ಭರತ್ ಕುಮಾರ್, ಕೋಶಾಧಿಕಾರಿ ಗೀತಾ ಜಿನಚಂದ್ರ ಉಪಸ್ಥಿತರಿದ್ದರು. ಕಾಂಚನಶ್ರೀಮದ್ವರಾಜ್ ಮತ್ತು ಮಮತಾ ಸುಭಾಶ್ಚಂದ್ರ ಜೈನ್ ಸನ್ಮಾನಿತರ ಪರಿಚಯವನ್ನು ಮಾಡಿದರು. ಶೈಲಜಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಿವಪ್ರಕಾಶ್ ಜೈನ್ ಸ್ವಾಗತಿಸಿ, ಗೀತಾ ಜಿನಚಂದ್ರ ಧನ್ಯವಾದವಿತ್ತರು. ವಿಭಾಗ ಕಾರ್ಯದರ್ಶಿಗಳಾದ ಸುಭಾಶ್ಚಂದ್ರ ಜೈನ್ ಕಾರ್ಯಕ್ರಮವನ್ನು ನಿರೂಪಿಸಿದರು.

ಬೆಳ್ತಂಗಡಿ: ವಿಶ್ವ ಮಹಿಳಾ ದಿನಾಚರಣೆ

Article Image

ಬೆಳ್ತಂಗಡಿ: ವಿಶ್ವ ಮಹಿಳಾ ದಿನಾಚರಣೆ

ಇಂದಿನ ಆಧುನಿಕ ಸಮಾಜದಲ್ಲಿ ಮಹಿಳೆಯೊಬ್ಬಳು ತನ್ನನ್ನು ತಾನು ತೊಡಗಿಸಿಕೊಂಡರೆ ಯಾವುದೇ ಕಾರ್ಯವನ್ನು ಮಾಡಲು ಸಾಧ್ಯ. ಅಂತಹ ಕಾರ್ಯವನ್ನು ಮಾಡುತ್ತಿರುವ ನಮ್ಮ ಬೆಳ್ತಂಗಡಿಯ ಶಾಂತಿಶ್ರೀ ಜೈನ ಮಹಿಳಾ ಸಮಾಜವು ಇಂದು ತಾಲೂಕಿನಲ್ಲಿ ಗುರುತಿಸುವಂತಾಗಿದೆ. ನಾವೆಲ್ಲರೂ ಆದರ್ಶ ಸಾಧಕ ಮಹಿಳೆರಾದಾಗ ಮಾತ್ರ ಸಮಾಜ ನಮ್ಮನ್ನು ಗುರುತಿಸಿ ಗೌರವಿಸುತ್ತದೆ. ಅಂತಹ ಗುರುತರವಾದ ಕಾರ್ಯಕ್ಕೆ ನಾವೆಲ್ಲ ಜೊತೆಯಾಗಿ ಕಾರ್ಯವನ್ನು ಮಾಡಬೇಕು ಎಂದು ವಿಶ್ವ ಮಹಿಳಾ ದಿನಾಚರಣೆಯನ್ನು ದೀಪ ಪ್ರಜ್ವಲನದೊಂದಿಗೆ ಉದ್ಘಾಟಿಸಿದ ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಅಭಿಯಂತರರಾಗಿದ್ದ ಚಂದ್ರರಾಜ್ ಜೈನ್ ಇವರ ಧರ್ಮಪತ್ನಿ ಸುಜಯ ಸಿ ಜೈನ್ ರವರು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ನ್ಯಾಯವಾದಿ ಸ್ವರ್ಣಲತಾ ಜೈನ್ ರವರು "ಇಂದಿನ ಸಮಾಜದಲ್ಲಿ ಮಹಿಳೆಯರ ಮುಂದಿರುವ ಸವಾಲುಗಳು, ಅದನ್ನು ನಿಭಾಯಿಸಬೇಕಾದ ತಂತ್ರಗಾರಿಕೆ, ಮಹಿಳೆಯರಿಗೆ ಪರವಾಗಿರುವ ಕಾನೂನುಗಳು, ಪೋಕ್ಸೋ ಕಾಯ್ದೆಯ ಮಹತ್ವ ಇತ್ಯಾದಿ ವಿಚಾರಗಳನ್ನು ಎಳೆ ಎಳೆಯಾಗಿ ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕು. ಆಗ ಮಾತ್ರ ಸುಸ್ತಿರ ಸಮಾಜವನ್ನು ಕಟ್ಟಲು ಸಾಧ್ಯ ಎಂದರು. ಈ ಕಾರ್ಯಕ್ರಮದಲ್ಲಿ ಪೂರ್ವ ಪರಂಪರೆಯಲ್ಲಿ ಸಾಧನೆಗೈದ ಹಲವಾರು ಜೈನ ಮಹಿಳಾ ಸಾಧಕೀಯರಲ್ಲಿ ಕೆಲವರ ಸಾಧನೆಯ ತುಣುಕನ್ನು ಸಭೆಯಲ್ಲಿ ಪರಿಚಯಿಸಲಾಯಿತು. ಕಾಳು ಮೆಣಸಿನ ರಾಣಿ ಚೆನ್ನಬೈರಾ ದೇವಿ ಇವರನ್ನು ಉಷಾ ಹಾಗೂ ಜೈನ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿರುವ ಜೈನ ಮಹಿಳೆ ಬಿರುದಾಂಕಿತ ರಾಧಮ್ಮ ಇವರ ಬಗ್ಗೆ ಸುರಕ್ಷಿತರವರು ಸಭೆಗೆ ಪರಿಚಯಿಸಿದರು. ಮಹಿಳೆಯರು ಪ್ರತಿ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡು ಸಮಾಜದಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎನ್ನುವ ಉದ್ದೇಶದಿಂದ ಈಗಾಗಲೇ ಶಾಂತಿಶ್ರೀ ತಂಡದಿಂದ ವಲಯ ಮಟ್ಟದ ಜಿನಭಜನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನಾಲ್ಕು ತಂಡಗಳನ್ನು ವಿಶೇಷ ರೀತಿಯಲ್ಲಿ ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿ ಶಾಂತಿಶ್ರೀ ಜೈನ ಮಹಿಳಾ ಸಮಾಜದ ಅಧ್ಯಕ್ಷರಾಗಿರುವ ಪ್ರೊಫೆಸರ್ ತ್ರಿಶಾಲ ಜೈನ್ ಕೆ ಎಸ್ ಇವರು "ಹತ್ತನೇ ಶತಮಾನದಿಂದ 21ನೇ ಶತಮಾನದವರೆಗೆ ದೇಶದ ನಾನಾ ಭಾಗಗಳಲ್ಲಿ ಆಳ್ವಿಕೆ ಮಾಡಿರುವ ಜೈನ ರಾಣಿಯರ ಧೈರ್ಯ, ಸಾಹಸ, ಚಾಣಕ್ಯತನ, ಆಡಳಿತ ಶೈಲಿ ಮುಂತಾದ ವಿಚಾರಗಳನ್ನು ನೆನಪಿಸಿಕೊಂಡರು. ಇದೇ ಸಂದರ್ಭದಲ್ಲಿ ಇಂದು ವಿಶ್ವದಲ್ಲಿ ಮಹಿಳೆಯರ ಸ್ಥಾನಮಾನ ಹಾಗೂ ಹಲವಾರು ಕ್ಷೇತ್ರಗಳಲ್ಲಿ ಮಹಿಳೆಯರು ಸಾಧಿಸುತ್ತಿರುವ ಸಾಧನೆಗಳು ನಮಗೆಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ. ಮಾತ್ರವಲ್ಲದೆ ಇತ್ತೀಚೆಗೆ ಬಾಹ್ಯಾಕಾಶ ಯಾನವನ್ನು ಮಾಡಿ ಯಶಸ್ವಿಯಾಗಿ ಧರೆಗೆ ಬಂದಿಳಿದ ಸುನಿತಾ ವಿಲಿಯಮ್ಸ್ ಇವರ ಅದ್ಭುತ ಪೂರ್ವ ಸಾಧನೆಗೆ ಸಂಸ್ಥೆಯ ವತಿಯಿಂದ ವಿಶೇಷ ಅಭಿನಂದನೆಯನ್ನು ಸಲ್ಲಿಸಲಾಯಿತು. ನಾವೆಲ್ಲರೂ ಜೊತೆಯಾಗಿದ್ದಾಗ ಸರ್ವ ಕಾರ್ಯವನ್ನು ಮಾಡಲು ಸಾಧ್ಯ. ಅಂತಹ ಕಾರ್ಯಕ್ಕೆ ತಾವೆಲ್ಲರೂ ನಮ್ಮ ಜೊತೆ ಕೈಗೂಡಿಸಬೇಕು ಎಂದು ಹೇಳಿದರು. ಈ ಕಾರ್ಯಕ್ರಮವು ಸ್ವಪ್ನ ಬಳಗದವರ ಪ್ರಾರ್ಥನೆಯೊಂದಿಗೆ ಆರಂಭಗೊಂಡರೆ, ಸಂಸ್ಥೆ ನಡೆದು ಬಂದ ದಾರಿಯ ಕುರಿತು ಸಂಸ್ಥೆಯ ಕಾರ್ಯದರ್ಶಿ, ರಾಜಶ್ರೀ ಪ್ರಸ್ತಾಪಿಸಿದರೆ, ಗುಣಮ್ಮ ಪಿ ಜೈನ್ ರವರು ಸ್ವಾಗತಿಸಿ, ತ್ರಿಶಾಲ ಅತಿಕಾರಿ ವಂದಿಸಿ, ಅನುಪ ಕುಮಾರಿ ಸಂಘಟಿಸಿ, ಸಂಘದ ಸದಸ್ಯರ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ದವಳ ಇವರ ಕಾರ್ಯಕ್ರಮ ನಿರ್ವಹಣೆಯೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.

ನೆಲ್ಲಿಕಾರು ಮಹಾರಥಯಾತ್ರಾ ಮಹೋತ್ಸವ

Article Image

ನೆಲ್ಲಿಕಾರು ಮಹಾರಥಯಾತ್ರಾ ಮಹೋತ್ಸವ

ಮೂಡುಬಿದಿರೆ: ಅತಿಶಯ ಶ್ರೀ ಕ್ಷೇತ್ರ ನೆಲ್ಲಿಕಾರಿನಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಭಗವಾನ್ ೧೦೦೮ ಶ್ರೀ ಅನಂತನಾಥ ಸ್ವಾಮಿ ಮತ್ತು ಶ್ರೀ ಬ್ರಹ್ಮಯಕ್ಷ ದೇವರ ಮಹಾರಥಯಾತ್ರಾ ಮಹೋತ್ಸವವು 30-03-2025ನೇ ಆದಿತ್ಯವಾರ ಮೊದಲ್ಗೊಂಡು ದಿನಾಂಕ 05-04-2025ನೇ ಶನಿವಾರ ಪರ್ಯಂತ ಜರಗಲಿರುವುದು. ದಿನಾಂಕ 04-04-2025ನೇ ಶುಕ್ರವಾರ ಮಹಾರಥಯಾತ್ರಾ ಮಹೋತ್ಸವವು ಕಾರ್ಕಳ ದಾನಶಾಲೆ ಶ್ರೀ ಜೈನ ಮಠದ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಬೆಳಿಗ್ಗೆ ಗಂಟೆ 8-15ರಿಂದ ಭಗವಾನ್ ಶ್ರೀ ಅನಂತನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕ, ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಗೆ ಕ್ಷೀರಾಭಿಷೇಕ, ಶ್ರೀ ಬ್ರಹ್ಮದೇವರಿಗೆ ಪಂಚಾಮೃತ ಅಭಿಷೇಕ. ಶ್ರೀಬಲಿ ವಿಧಾನ, ರಥ ಸಂಪ್ರೋಕ್ಷಣೆ, ಲಕ್ಷ ಹೂವಿನ ಪೂಜೆ, ರಥಾರೋಹಣಕ್ಕೆ ಪ್ರಸಾದ ಬೇಡಿಕೆ. ಮಧ್ಯಾಹ್ನ ಗಂಟೆ 12-00ಕ್ಕೆ ಮಹಾನೈವೇದ್ಯ ಪೂಜೆ, ಮಹಾಮಂಗಳಾರತಿ, ಶ್ರೀ ಸರ್ವಾಹ್ಣಯಕ್ಷರ ಶ್ರೀವಿಹಾರ, ಗ್ರಾಮ ಬಲಿ ಮಧ್ಯಾಹ್ನ ಗಂಟೆ 12-35ಕ್ಕೆ ಶ್ರೀ ಬ್ರಹ್ಮಯಕ್ಷ ದೇವರ ದರ್ಶನ ಪಾತ್ರಿಯೊಂದಿಗೆ ಭಗವಾನ್‌ ಶ್ರೀ ಅನಂತನಾಥ ಸ್ವಾಮಿಯ ರಥಾರೋಹಣ. ನಂತರ ಸಂಘಸಂತರ್ಪಣೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ. ರಾತ್ರಿ ಗಂಟೆ 7-00ಕ್ಕೆ ಸಮವಸರಣ ಪೂಜೆ. ರಾತ್ರಿ ಗಂಟೆ 10-00ಕ್ಕೆ ರಥೋತ್ಸವ. ನಂತರ ಭಗವಾನ್ ಶ್ರೀ ಅನಂತನಾಥ ಸ್ವಾಮಿಗೆ ೧೦೮ ಕಲಶಗಳಿಂದ ಮಹಾಭಿಷೇಕ, ಉತ್ಸವ. ದಿನಾಂಕ 04-04-2025ನೇ ಶುಕ್ರವಾರ ಸಂಗೀತ ಪೂಜಾಷ್ಟಕ ಶರ್ಮಿಳಾ ಜಿನೇಶ್ ಹಾಸನ ಮತ್ತು ಬಳಗದವರಿಂದ ದಿನಾಂಕ 04-04-2025ನೇ ಶುಕ್ರವಾರ ರಾತ್ರಿ ಗಂಟೆ 11.00ರಿಂದ ತುಳು ತೆಲಿಕೆದ ನಾಟಕ ಕಾಪಿಕಾಡ್‌ ವಾಮಂಜೂರು ಸಾಯಿ ಅಭಿನಯದ ಚಾಪರ್ಕ ಕಲಾವಿದರಿಂದ ತೆಲಿಕೆದ ಬೊಳ್ಳಿ ಡಾ|| ದೇವದಾಸ್ ಕಾಪಿಕಾಡ್‌ರವರ ವಿನೂತನ ಶೈಲಿಯ ತುಳು ಹಾಸ್ಯಮಯ ನಾಟಕ ಏರ್ಲಾ ಗ್ಯಾರಂಟಿ ಅತ್ತ್.

ಕುಪ್ಪೆಪದವು ಜೈನ್ ಮಿಲನ್-ಮಾಸಿಕ ಸಭೆ

Article Image

ಕುಪ್ಪೆಪದವು ಜೈನ್ ಮಿಲನ್-ಮಾಸಿಕ ಸಭೆ

ಭಾರತೀಯ ಜೈನ್ ಮಿಲನ್ ನ ಕುಪ್ಪೆಪದವು ಶಾಖೆ -ಅನಂತಪಾರ್ಶ್ವ ಜೈನ್ ಮಿಲನ್ ನ ಮಾಸಿಕ ಸಭೆಯು ಇರುವೈಲ್ ಬಳಿಯ ಕನ್ನೆಪದವು ಗ್ರಾಮದ ಬಾವದಬೈಲುವಿನ ಕಲ್ಪವೃಕ್ಷ ಮನೆಯಲ್ಲಿ ದಿನಾಂಕ 23/3/2025 ನೇ ರವಿವಾರ ನಡೆಯಿತು. ಮುಖ್ಯ ಅತಿಥಿಯಾದ ಪ್ರೊ.ಅಕ್ಷಯ ಕುಮಾರ್ ರವರು ಜೈನ್ ಧರ್ಮದ ಕರ್ಮ ಸಿದ್ಧಾಂತದ ಮೋಹನೀಯ ಕರ್ಮದ ಬಗ್ಗೆ ವಿವರಿಸುತ್ತಾ "ಸಾಮ್ರಾಟ ಅಲೆಕ್ಸಾಂಡರ್ ಕೂಡಾ ಭಾರತಕ್ಕೆ ದಂಡೆತ್ತಿ ಸಂದರ್ಭದಲ್ಲಿ ಜೈನ ಧರ್ಮದ ತತ್ವ ಸಿದ್ಧಾಂತದಲ್ಲಿ ಆಸಕ್ತಿಯನ್ನು ವ್ಯಕ್ತಪಡಿಸಿದ್ದ ಮತ್ತು ಜೈನ ವಿದ್ವಾಂಸರನ್ನು ಗ್ರೀಕ್ ದೇಶಕ್ಕೆ ಕರೆದುಕೊಂಡು ಹೋಗಲು ಬಯಸಿದ್ದ" ಎಂದು ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ ಎಂದರು. ಸ್ಥಾಪಕಾಧ್ಯಕ್ಷರಾದ ಭೋಜರಾಜ್ ಜೈನ್ ರವರು ದೈವೀ ಶಕ್ತಿ ಬಗ್ಗೆ ಮಾತನಾಡುತ್ತಾ "ಪಂಚ ನಮಸ್ಕಾರ" ನಮೋಕಾರ ಮಂತ್ರದ ಮಹತ್ವದ ಬಗ್ಗೆ ವಿವರಿಸಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸ್ವರ್ಣಲತಾ ಅಜಿತ್ ರವರು ಮುಂದಿನ ಮಿಲನ್ ಕಾರ್ಯಚಟುವಟಿಕೆಗಳ ವಿವರ ನೀಡಿದರು. ಪಂಚ ನಮಸ್ಕಾರ ಮಂತ್ರದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಅತಿಥೇಯರ ಪರವಾಗಿ ಚರಣ್ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ವರದಿ ಮಂಡಿಸಿದರು. ನಂತರ ಪ್ರಸ್ತುತ ತಿಂಗಳಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡವರನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ಹಿರಿಯ ಮಾರ್ಗದರ್ಶಕರಾದ ಪ್ರವೀಣ್ ಅಗರಿ, ಆತಿಥೇಯ ಭರತ್ ಕುಮಾರ್ ದಂಪತಿಗಳು, ಕೋಶಾಧಿಕಾರಿ ವನಿತಾ ಭೋಜರಾಜ್, ಉಪಸ್ಥಿತರಿದ್ದರು. ವಕೀಲ ಅತಿಶಯ ಜೈನ್ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಮಳಲಿ ಉದಯ ಕುಮಾರ್ ರವರು ಶಾಂತಿಮಂತ್ರ ಪಠಿಸಿದರು.

ಕಾರ್ಕಳ ಜೈನ್ ಮಿಲನ್ ಮಾಸಿಕ ಸಭೆಯಲ್ಲಿ ರಾಜ್ಯ ಮಟ್ಟದ ಜಿನ ಭಜನಾ ಸ್ಪರ್ಧಾ ವಿಜೇತರಿಗೆ ಸನ್ಮಾನ

Article Image

ಕಾರ್ಕಳ ಜೈನ್ ಮಿಲನ್ ಮಾಸಿಕ ಸಭೆಯಲ್ಲಿ ರಾಜ್ಯ ಮಟ್ಟದ ಜಿನ ಭಜನಾ ಸ್ಪರ್ಧಾ ವಿಜೇತರಿಗೆ ಸನ್ಮಾನ

23/3/2025 ರಂದು ನಡೆದ ಕಾರ್ಕಳ ಜೈನ್ ಮಿಲನ್ ಮಾಸಿಕ ಸಭೆಯಲ್ಲಿ ರಾಜ್ಯ ಮಟ್ಟದ ಜಿನ ಭಜನಾ ಸ್ಪರ್ಧೆ ಯಲ್ಲಿ ಪ್ರಥಮ ಸ್ಥಾನ ಪಡೆದ ಅನಂತ ಶ್ರೀ ಜಿನಭಜನಾ ತಂಡವನ್ನು ಅತ್ಯಂತ ಹೃದಯ ಸ್ಪರ್ಶಿಯಾಗಿ ಸಮಸ್ತ ಜೈನ ಬಾಂಧವರ ಪರವಾಗಿ ಗೌರವಿಸಲಾಯಿತು. ವೇದಿಕೆಯಲ್ಲಿದ್ದ ಅತಿಥಿಗಳು ಅವರ ಶಿಸ್ತು, ಭಕ್ತಿ, ಸಿದ್ಧತೆಗಳನ್ನು ಕೊಂಡಾಡಿದರು. ನಿರ್ದೇಶಕರಾದ ಯುವರಾಜ್ ಬಲಿಪ, ನಿರಂಜನ್ ಜೈನ್ ಕುದ್ಯಾಡಿ, ಶ್ರೀ ಪಾರ್ಶ್ವನಾಥ ಜೈನ್, ಅಧ್ಯಕ್ಷರಾದ ಅಶೋಕ್ ಯಚ್.ಯಮ್., ಯುವರಾಜ್ ಆರಿಗ, ಮಿತ್ರಪ್ರಭಾ ಮೇಡಂ, ವಸಂತರಾಜ್ ಜೈನ್, ಕಾರ್ಯದರ್ಶಿ ವಿಖ್ಯಾತ ಜೈನ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಾಜಧಾನಿ ದೆಹಲಿಯಲ್ಲಿ ಸನ್ಮಾನ

Article Image

ರಾಜಧಾನಿ ದೆಹಲಿಯಲ್ಲಿ ಸನ್ಮಾನ

ಬೆಳಗಾವಿ: ಇತ್ತೀಚೆಗೆ ಗ್ರೀನ್ ಪಾರ್ಕ್ ದಿಲ್ಲಿಯಲ್ಲಿ ಆಚಾರ್ಯ ಶ್ರೀ ಸೌಭಾಗ್ಯ ಸಾಗರಜಿ ನೇತೃತ್ವದಲ್ಲಿ ಜರುಗಿದ ಜೈನ ಜೋತಿಷಾಚಾರ್ಯರ ಸಮ್ಮೇಳನದಲ್ಲಿ ಭಾರತದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಐವತ್ತಕ್ಕೂ ಹೆಚ್ಚು ಜೋತಿಷಿಗಳು ಭಾಗವಹಿಸಿ, ತಮ್ಮ ಪ್ರಬಂಧಗಳನ್ನು ಮಂಡಿಸಿದರು.‌ ಕರ್ನಾಟಕದ-ಬೆಳಗಾವಿಯಿಂದ ಮುಹೂರ್ತ ಸಾಧನೆ ವಿಷಯದ ಪ್ರಬಂಧ ಮಂಡಿಸಿದ ಡಾ. ಪ್ರತಿಷ್ಠಾಚಾರ್ಯ ಶಾಂತಿನಾಥ ಪಾರ್ಶ್ವನಾಥ ಉಪಾಧ್ಯೆ ಇವರು ಎಲ್ಲರ ಗಮನಸೆಳೆದರು. ಕನ್ನಡದಲ್ಲಿ ಮಾಡಿದ ಮಂಗಲಾಚರಣೆಗೆ ಎಲ್ಲರೂ ದನಿಗೂಡಿಸಿದ್ದು ವಿಶೇಷ. ಶ್ವೇತಪಿಚ್ಛಾಚಾರ್ಯ ವಿದ್ಯಾನಂದಜಿ ತಪೋಭೂಮಿ ಕುಂದ ಕುಂದ ಭಾರತೀಯ ಸಭಾಗೃಹದಲ್ಲಿ ಪಟ್ಟಾಚಾರ್ಯ ಶ್ರೀ ಶೃತಸಾಗರಜಿ ಮಹಾರಾಜರ ಕುಶಲ ಮಾರ್ಗದರ್ಶನದಲ್ಲಿ ನಡೆದ ಸಮ್ಮಾನ ಕಾ‌ರ್ಯಕ್ರಮದಲ್ಲಿ ಪಂ. ಶಾಂತಿನಾಥ ಅವರನ್ನು ವಿಶೇಷ ಸಾಧನೆಗಾಗಿ ಶೃತಪುರೋಹಿತ ಬಿರುದಿನೊಂದಿಗೆ ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷರು ರವೀಂದ್ರ ಗುರೂಜಿ ಮತ್ತು ಪದಾಧಿಕಾರಿಗಳು ಮುತುವರ್ಜಿ ವಹಿಸಿ ಕಾರ್ಯಕ್ರಮ ಆಯೋಜಿಸಿದ್ದರು. ಬಳಿಕ ಎರಡೂ ದಿವಸ ದೆಹಲಿಯ ಪ್ರಮುಖ ಪರ್ಯಟಣ ಸ್ಥಳಗಳ ವಾಸ್ತು ವೀಕ್ಷಣೆಯ ವ್ಯವಸ್ಥೆಯನ್ನು ಮಾಡಲಾಗಿತ್ತು.

ಕಾರ್ಕಳ ಜೈನ್ ಮಿಲನ್ ಮಾಸಿಕ ಸಭೆ

Article Image

ಕಾರ್ಕಳ ಜೈನ್ ಮಿಲನ್ ಮಾಸಿಕ ಸಭೆ

ದಿನಾಂಕ 23/3/2025 ಆದಿತ್ಯವಾರದಂದು ನಡೆದ ಕಾರ್ಕಳ ಜೈನ್ ಮಿಲನ್ ಮಾಸಿಕ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ, ಅಂತಾರಾಷ್ಟ್ರೀಯ ಮಟ್ಟದ ಜಿನ ಧರ್ಮ ಪ್ರಚಾರಕರಾದ ನಿರಂಜನ ಜೈನ್, ಕುದ್ಯಾಡಿಯವರನ್ನು ಮತ್ತು ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ ಪುರಸ್ಕೃತರಾದ ನೇರೆಂಕಿ ಪಾರ್ಶ್ವನಾಥ್ ಜೈನ್ ರವರನ್ನು,ಅವರ ನಿಸ್ವಾರ್ಥ ಸೇವೆಗಾಗಿ ಕಾರ್ಕಳದ ಸಮಸ್ತ ಜೈನ ಬಾಂಧವರ ಪರವಾಗಿ ಅತ್ಯಂತ ಪ್ರೀತಿ, ಗೌರವಗಳಿಂದ ಸನ್ಮಾನ ಪತ್ರವನ್ನಿತ್ತು ಗೌರವಿಸಲಾಯಿತು.

ಕವನ ಸಂಕಲನ ಮಣಿ ಮುಕುಟ ಬಿಡುಗಡೆ

Article Image

ಕವನ ಸಂಕಲನ ಮಣಿ ಮುಕುಟ ಬಿಡುಗಡೆ

ದಿನಾಂಕ 23/3/2025 ಆದಿತ್ಯವಾರದಂದು ನಡೆದ ಜೈನ್ ಮಿಲನ್ ಕಾರ್ಕಳ, ಇದರ ಮಾಸಿಕ ಸಭೆಯಲ್ಲಿ ಮಾಲತಿ ವಸಂತರಾಜ್‌ರವರ ಕವನ ಸಂಕಲನ ಮಣಿ ಮುಕುಟವನ್ನು ಎಸ್.ವಿ.ಟಿ.ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲೆಯಾದ ಮಿತ್ರಪ್ರಭಾ ಹೆಗ್ಡೆಯವರು ಲೋಕಾರ್ಪಣೆ ಮಾಡಿದರು.ಜೈನ್ ಮಿಲನಿನ ನಿರ್ದೇಶಕರು, ಅಧ್ಯಕ್ಷರು,ಕಾರ್ಯದರ್ಶಿಯವರು, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿರಂಜನ ಜೈನ್, ಕುದ್ಯಾಡಿ, ನೇರೆಂಕಿ ಪಾರ್ಶ್ವನಾಥ ಜೈನ್, ವಸಂತರಾಜ್ ಜೈನ್ ರವರು ಉಪಸ್ಥಿತರಿದ್ದರು. ಶ್ರೀವರ್ಮ ಜೈನ್, ಯುವರಾಜ್ ಆರಿಗರವರು ಉಪಸ್ಥಿತರಿದ್ದರು.

ಮಹಾವೀರ ತೀರ್ಥಂಕರರ ಬಗ್ಗೆ ಭಾಷಣ ಸ್ಪರ್ಧೆ

Article Image

ಮಹಾವೀರ ತೀರ್ಥಂಕರರ ಬಗ್ಗೆ ಭಾಷಣ ಸ್ಪರ್ಧೆ

ರಾಜ್ಯ ಜೈನ ಜಾಗೃತಿ ಸಂಘ (ರಿ) ಕರ್ನಾಟಕ ಬೆಳಗಾವಿ ಇದರ ವತಿಯಿಂದ ಶ್ರೀ ಭಗವಾನ್ ಮಹಾವೀರ ತೀರ್ಥಂಕರರ 2624ನೇಯ ಜನ್ಮ ಕಲ್ಯಾಣದ ಮಹೋತ್ಸವದ ಅಂಗವಾಗಿ 5 ರಿಂದ 16 ವರ್ಷದೊಳಗಿನ ಮಕ್ಕಳಿಗೆ ಮಹಾವೀರ ತೀರ್ಥಂಕರರ ಬಗ್ಗೆ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ವಿಷಯ: ಭಗವಾನ್ ಮಹಾವೀರ ತೀರ್ಥಂಕರರ ಜೀವನ ಹಾಗೂ ಧರ್ಮೋಪದೇಶಗಳ ಕುರಿತು. 1) 5 ರಿಂದ 16 ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದು (ಜೈನ ಧರ್ಮಿಯರು ಮಾತ್ರ) (ಜನನ ಪ್ರಮಾಣ ಪತ್ರ ಕಳುಹಿಸಬೇಕು) 2) ಸದರಿ ಭಾಷಣದ 5 ನಿಮಿಷಗಳ ವಿಡಿಯೋ ಮಾಡಿ ಈ ಕೆಳಗೆ ತಿಳಿಸಿದ ಮೊ: 9916176515 ಹಾಗೂ ಮೊ: 9448644206 ನಂಬರಗಳಿಗೆ ಕಳಿಸಿಕೊಡಬೇಕು 3) ಭಾಷಣದ ವಿಡಿಯೋಗಳನ್ನು ದಿನಾಂಕ 6-04-2025ರೊಳಗಾಗಿ ಕಳಿಸಿಕೊಡಬೇಕು 4) ಸದರಿ ವಿಡಿಯೋಗಳನ್ನು ತಜ್ಞ ವಿದ್ವಾಂಸರು ಹಾಗೂ ಸ್ವಾಮೀಜಿಗಳವರೊಂದಿಗೆ ಪರಿಶೀಲಿಸಿ ನೋಡಿ, ಅದರಲ್ಲಿ ಅತೀ ಉತ್ತಮ ವಿಡಿಯೋ ಮಾಡಿದ ಮಕ್ಕಳ ಭಾಷಣದ ವಿಡಿಯೋಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಎಂದು ಆಯ್ಕೆ ಮಾಡಲಾಗುವುದು. 5) ಸದರಿ ಭಾಷಣದ ಫಲಿತಾಂಶವನ್ನು ದಿನಾಂಕ 10-04-2025 ರಂದು ಪ್ರಕಟಿಸಲಾಗುವುದು 6) ವಿಜೇತರಿಗೆ : ಪ್ರಥಮ ಬಹುಮಾನ ರೂ 1008, ದ್ವಿತೀಯ ಬಹುಮಾನ ರೂ 751, ತೃತೀಯ ಬಹುಮಾನ ರೂ 501ಗಳನ್ನು ನಗದು ರೂಪದಲ್ಲಿ ಕೊಡಲಾಗುವುದು. ವಿಜೇತ ಮಕ್ಕಳು ಅವರ ಬ್ಯಾಂಕಿನ ಅಥವಾ ಅವರ ಪಾಲಕರ ಬ್ಯಾಂಕಿನ ಖಾತೆ ಸಂಖ್ಯೆ ಹಾಗೂ ಐ ಎಫ್ ಎಸ್ ಸಿ ಕೋಡ್ ಹಾಗೂ ಬ್ಯಾಂಕಿನ ಹೆಸರನ್ನು ಮೇಲ್ದಂಡ ಮೊಬೈಲ್ ವಾಟ್ಸಾಪ್‌ಗೆ ಕಳಿಸಬೇಕು. 7) ಭಾಗವಹಿಸಿದ ಮಕ್ಕಳೆಲ್ಲರಿಗೂ ರಾಜ್ಯ ಜೈನ ಜಾಗೃತಿ ಸಂಘ (ರಿ) ವತಿಯಿಂದ ಪ್ರಶಸ್ತಿ ಪತ್ರಗಳನ್ನು ಕೊಡಲಾಗುವುದು.

ಮಂಚೇನಹಳ್ಳಿ: ಧಾರ್ಮಿಕ ಶಿಬಿರ

Article Image

ಮಂಚೇನಹಳ್ಳಿ: ಧಾರ್ಮಿಕ ಶಿಬಿರ

ಮಂಚೇನಹಳ್ಳಿ:‌ ಶ್ರೀ ಭಗವಾನ್ ಬಾಹುಬಲಿ ಟ್ರಸ್ಟ್, ಶ್ರೀ ಕೋಡಿಬ್ರಹ್ಮದೇವರ ಧರ್ಮಸಂಸ್ಥೆಯ ವತಿಯಿಂದ ಇದೇ ಏಪ್ರಿಲ್ 15ರಿಂದ 19ರವರೆಗೆ ಮಕ್ಕಳಿಗೆ ಮತ್ತು ಯುವಕರಿಗೆ ಧಾರ್ಮಿಕ ಶಿಬಿರವನ್ನು ಏರ್ಪಡಿಸಲಾಗಿದೆ. ಐದೂ ದಿನಗಳು ಊಟ ಮತ್ತು ವಸತಿಯ ವ್ಯವಸ್ಥೆ ಮಾಡಲಾಗಿದೆ. ಭಾಗವಹಿಸಲು ಇಚ್ಛಿಸುವವರು ಕೆಳಗಿನ ದೂರವಾಣಿ ಸಂಖ್ಯೆಯಲ್ಲಿ ಹೆಸರನ್ನು ನೀಡಿ ನೊಂದಾಯಿಸಿಕೊಳ್ಳತಕ್ಕದ್ದು. ಉಳಿದುಕೊಳ್ಳುವ ವ್ಯವಸ್ಥೆ ಸೀಮಿತವಾಗಿರುವುದರಿಂದ ಮೊದಲು ಕರೆ ಮಾಡಿದವರಿಗೆ ಆದ್ಯತೆ ನೀಡಲಾಗುವುದು. ದೂರವಾಣಿ ಸಂಖ್ಯೆ : ತ್ರಿಶಲಾ ಬ್ರಹ್ಮಯ್ಯ-94484 57738, ವಿ.ಜೆ. ಬ್ರಹ್ಮಯ್ಯ-94480 74801, ಕೆ.ಬಿ. ಅಶೋಕ್ ಕುಮಾರ್-95136 29196, ಪಿ.ಸಿ. ರಾಜೇಶ್-98454 84399, ವಿ.ಎಸ್. ಬ್ರಹ್ಮಪ್ರಕಾಶ್-98450 31482, ಎಂ.ಎಸ್‌. ದೇವರಾಜ್-92422 78089

ಪೆನಕೊಂಡ ಶ್ರೀ ಪಚ್ಚೆ ಪ್ರತಿಷ್ಠಾನದ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ

Article Image

ಪೆನಕೊಂಡ ಶ್ರೀ ಪಚ್ಚೆ ಪ್ರತಿಷ್ಠಾನದ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ

ಪೆನಕೊಂಡ ಶ್ರೀ ಪಚ್ಚೆ ಪ್ರತಿಷ್ಠಾನದ ವತಿಯಿಂದ ಪ್ರತಿವರ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರವನ್ನು ಮಾಡಿಕೊಂಡು ಬರುತ್ತಿದೆ. ಕಳೆದ 10 ವರ್ಷಗಳಿಂದ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. 11ನೆಯ ವರ್ಷದಲ್ಲಿ ಕೀರ್ತಿಶೇಷ‌ ಆರ್.‌ ಜೆ. ಅನಂತರಾಜಯ್ಯ ಸಂಸ್ಕರಣೆ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವನ್ನು ದಿನಾಂಕ 09-03-2025 ನೇ ಬುಧವಾರ ಮಧ್ಯಾಹ್ನ ತುಮಕೂರಿನ "ಸ್ನೇಹ ಸಂಗಮ ಕನ್ವೆನ್‌ಷನ್ ಹಾಲ್", ಶಿರಾ ರಸ್ತೆ, ತುಮಕೂರು ಇಲ್ಲಿ ಏರ್ಪಡಿಸಿ ವಿತರಣೆ ಮಾಡಲಾಯಿತು. ವೇದಿಕೆಯ ಗಣ್ಯರೆಲ್ಲಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮುಖಾಂತರ ಹಾಗೂ ಪಚ್ಚೆ ಪಾರ್ಶ್ವನಾಥ ಸ್ವಾಮಿ ಮತ್ತು ಆರ್.ಜೆ. ಅನಂತರಾಜಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮುಖಾಂತರ ಉದ್ಘಾಟನೆ ಮಾಡಿದರು. ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಪೆನುಗೊಂಡ ಪಚ್ಚೆ ಪಾರ್ಶ್ವನಾಥಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾದ ಆರ್.ಪಿ. ಚಂದ್ರಕೀರ್ತಿರವರು ಮಾತನಾಡುತ್ತಾ ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ಈ ಟ್ರಸ್ಟ್‌ನ ಕೆಲಸವನ್ನು ಗಮನಿಸಿರುವುದರಿಂದ ನೀವು ಗಳಿಸುವಂತಾದಾಗ ಅದರಲ್ಲಿ ಒಮ್ಮೆಯಾದರೂ ಈ ಟ್ರಸ್ಟ್‌ಗೆ ಸಹಾಯ ಮಾಡಿದಲ್ಲಿ ಇನ್ನು ಹೆಚ್ಚು ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಅನುಕೂಲವಾಗುತ್ತದೆ ಎಂದು ತಿಳಿಸಿದರು. ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ವಿದ್ವಾಂಸರು ವಿದ್ಯೋದಯ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿಗಳು ಆದ ಪ್ರೊ. ಕೆ. ಚಂದ್ರಣ್ಣನವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾನಾಡುತ್ತಾ ಅನಂತರಾಜಯ್ಯನವರು ವ್ಯಾಪಾರ ಧರ್ಮ, ಸಹಾಯ ಧರ್ಮ ಇವರೆಡನ್ನು ಮೈಗೂಡಿಸಿಕೊಂಡು ಇಷ್ಟು ದೊಡ್ಡ ಪ್ರತಿಷ್ಠಾನವನ್ನು ಕಟ್ಟಿ ಬೆಳೆಸಿದರು. ಅವರು ಮಾಡಿದ ಸಂಪಾದನೆಯಲ್ಲಿ ಕಿಂಚಿತ್ ಹಣ ಉಳಿಸಿ ಇವತ್ತು ನಿಮಗೆಲ್ಲಾ ವಿದ್ಯಾರ್ಥಿ ವೇತನವನ್ನು ನೀಡಲು ಕಾರಣ ಕರ್ತರಾಗಿದ್ದಾರೆ. ಅವರ ವೈಯಕ್ತಿಕ ಜೀವನವನ್ನು ಮಾದರಿ ಜೀವನವಾಗಿತ್ತು. ಅವರನ್ನು ಬಲ್ಲ ಎಲ್ಲರೂ ಅವರ ಗುಣಗಳಿಗೆ ತಲೆಬಾಗುತ್ತಿದ್ದರು. ಅಂತಹವರು ಇಂದು ನಮ್ಮ ಮುಂದೆ ದೈಹಿಕವಾಗಿ ಇಲ್ಲ ಮಾನಸಿಕವಾಗಿ ಉಳಿದಿದ್ದಾರೆ. ಅವರ ಆಸೆ ಕೈಗೂಡಬೇಕಾದರೆ ಈ ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ಶ್ರಮವಹಿಸಿ ಅಧ್ಯಯನ ಮಾಡಿ ಒಳ್ಳೆಯ ಪದವಿ ಪಡೆದು ಒಳ್ಳೆಯ ಕೆಲಸವನ್ನು ಪಡೆಯಬೇಕೆಂದು ಈ ಮೂಲಕ ಅವರ ಆತ್ಮಕ್ಕೆ ಶಾಂತಿ ನೀಡಿದಂತಾಗುತ್ತದೆ ಹಾಗೂ ನಿಮ್ಮ ತಂದೆ ತಾಯಿಗಳಿಗೂ ಗೌರವ ಸಿಗುತ್ತದೆ. ಈ ಕೆಲಸವನ್ನು ನೀವು ಮಾಡಬೇಕು ಎಂದು ಕಿವಿಮಾತು ಹೇಳಿದರು. ಆರ್.ಜೆ. ಅನಂತರಾಜಯ್ಯನವರ ಈ ಟ್ರಸ್ಟ್‌ನ ಸದಸ್ಯರುಗಳೆಲ್ಲಾ ಒಬ್ಬೊಬ್ಬರು ಒಂದು ಶಕ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಮಕ್ಕಳಾದ ನಾಗರಾಜು ಮತ್ತು ಪಾರ್ಶ್ವನಾಥ್ ಇವರುಗಳು ಕೂಡ ಆರ್.ಎ. ಸುರೇಶ್ ಕುಮಾರ್‌ರವರ ಜೊತೆ ಸೇರಿ ಟ್ರಸ್ಟ್‌ನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಬರುತ್ತಿದ್ದಾರೆ ಅದಕ್ಕೆ ಅವರ ತಾಯಿಯವರಾದ ಸಾದ್ವಿ ಸರೋಜಮ್ಮನವರ ಪೂರ್ಣ ಬೆಂಬಲ ಆಶೀರ್ವಾದವಿದೆ ಎಂದು, ಈ 11 ನೇ ವರ್ಷದಲ್ಲಿ 19 ವಿದ್ಯಾರ್ಥಿನಿಯರು 14 ಹುಡುಗರು ಒಟ್ಟು 33 ವಿದ್ಯಾರ್ಥಿಗಳಿಗೆ ರೂ. 7,20,000-00 ರೂಪಾಯಿಗಳನ್ನು ವಿತರಣೆ ಮಾಡಲಾಯಿತು. ಎ. ಎನ್. ರಾಜೇಂದ್ರಪ್ರಸಾದ್‌ರವರು ಕೀರ್ತಿಶೇಷ ಆರ್.ಜೆ. ಅನಂತರಾಜಯ್ಯನವರ ಸಮಗ್ರ ಜೀವನ ಚರಿತ್ರೆಯನ್ನು ಸಭೆಗೆ ವಿವರವಾಗಿ ಪರಿಚಯ ಮಾಡಿಕೊಟ್ಟರು. ಪ್ರೊ.ಪಿ.ಪಾರ್ಶ್ವನಾಥ್ ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜಿನ ಗಣಿತ ಶಾಸ್ತ್ರದ ವಿಭಾಗದ ಮುಖ್ಯಸ್ಥರು ಇವರು ಸಭೆಯಲ್ಲಿ ಆಗಮಿಸಿದ ಮಕ್ಕಳಿಗೆ ಹಿತ ನುಡಿಯನ್ನು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ನೇತ್ರ ತಜ್ಞರಾದ ಡಾ. ಕೆ. ಆರ್. ರಂಗನಾಥ್ ರವರು ಮಕ್ಕಳಿಗೆ ಶ್ರೇಯಸ್ಸು ಬರಲೆಂದು ಹಾಗೂ ಆರ್.ಜೆ. ಅನಂತರಾಜಯ್ಯನವರ ಕುಟುಂಬದವರು ಈ ಕಾರ್ಯಕ್ರಮವನ್ನು ಅನುಚಾನವಾಗಿ ನಡೆಸಿಕೊಂಡು ಬರುತ್ತಿರುವುದು ನಿಮಗೆಲ್ಲಾ ಒಂದು ಬೆಂಬಲವಾಗಿದೆ ಎಂದು ಆಶೀರ್ವಚನ ನೀಡಿದರು. ಜೈನ ಸಮಾಜದ ಹಿರಿಯರಾದ ಶ್ರೇಯಾಂಶ ಕುಮಾರ್‌ರವರು ಮಕ್ಕಳಿಗೆ ಹಿತ ವಚನ ನುಡಿದರು. ಪ್ರೇರಣಾ ಜೈನ್ ರವರು ಪ್ರಾರ್ಥಿಸಿ, ಪೆನಕೊಂಡ ಶ್ರೀ ಪಚ್ಚೆ ಪ್ರತಿಷ್ಠಾನದ ಅಧ್ಯಕ್ಷರಾದ ಆರ್.ಎ. ಸುರೇಶ್‌ ಕುಮಾರ್ ರವರು ಸ್ವಾಗತಿಸಿದರು. ಹಾಗೂ ಇದೇ ಸಂದರ್ಭದಲ್ಲಿ ಪಚ್ಚೆ ಪ್ರತಿಷ್ಠಾನದ ಉದ್ದೇಶ ಮತ್ತು ನಿಯಮಗಳಂತೆ ನಾವು ಪ್ರತಿವರ್ಷ ಈ ವಿದ್ಯಾರ್ಥಿ ವೇತನವನ್ನು ಪುರಸ್ಕರಿಸಿ ಕೊಡುತ್ತಲಿದ್ದೇವೆ. ಇದಕ್ಕೆ ಸಾಕ್ಷಿಭೂತರಾಗಿ ಆಗಮಿಸಿರುವ ಎಲ್ಲರಿಗೂ ಸ್ವಾಗತ ಬಯಸಿದರು. ಅಲ್ಲದೇ ಎಲ್ಲರೂ ನಮ್ಮ ತಂದೆಯವರ ಉದ್ದೇಶವನ್ನು ಈಡೇರಿಸಲು ಸಹಕರಿಸಬೇಕೆಂದು ಸಭೆಯಲ್ಲಿ ವಿನಂತಿಸಿಕೊಂಡರು. ಕಾರ್ಯಕ್ರಮದಲ್ಲಿ ಆರ್.‌ ಎಸ್. ಜ್ವಾಲನಪ್ಪನವರು ವಂದನಾರ್ಪಣೆ ಸಲ್ಲಿಸಿದರು. ಟ್ರಸ್ಟಿಗಳಾದ ಆರ್. ಎ. ಪಾರ್ಶ್ವನಾಥ, ಆರ್. ಎ. ನಾಗಾರಾಜುರವರು ಕಾರ್ಯಕ್ರಮ ನಿರ್ವಹಣೆಯನ್ನು ಮಾಡಿಕೊಟ್ಟರು. ಆರ್.ಎನ್. ಮಹಾವೀರ್ ಮತ್ತು ಆರ್.ಪಿ. ಮೋನಿಕಾರವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ದೈಹಿಕ ಶಿಕ್ಷಣ ಶಿಕ್ಷಕಿ ಪದ್ಮಶ್ರೀ ಜೈನ್ ಅವರು ರಾಜ್ಯಮಟ್ಟಕ್ಕೆ ಆಯ್ಕೆ

Article Image

ದೈಹಿಕ ಶಿಕ್ಷಣ ಶಿಕ್ಷಕಿ ಪದ್ಮಶ್ರೀ ಜೈನ್ ಅವರು ರಾಜ್ಯಮಟ್ಟಕ್ಕೆ ಆಯ್ಕೆ

ಮಂಗಳೂರಿನ ಮಂಗಳ ಸ್ಟೇಡಿಯಮ್ ನಲ್ಲಿ ನಡೆದ ದ.ಕ.ಜಿಲ್ಲಾ ಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಥ್ರೋಬಾಲ್ ಪಂದ್ಯಾಟದಲ್ಲಿ ಭಾಗವಹಿಸಿರುವ ಕಾಶಿಪಟ್ಣ ಹಿರಿಯ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಪದ್ಮಶ್ರೀ ಜೈನ್ ಅವರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ದ.ಕ.ಜಿಲ್ಲೆಯ ವಿವಿಧ ತಾಲೂಕುಗಳಿಂದ ಒಟ್ಟು 12 ಮಂದಿ ಶಿಕ್ಷಕಿಯರು ಆಯ್ಕೆಯಾಗಿದ್ದು ಬೆಳ್ತಂಗಡಿ ತಾಲೂಕಿನಿಂದ ಪದ್ಮಶ್ರೀ ಜೈನ್ ಆಯ್ಕೆಯಾಗಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ರಾಜ್ಯಮಟ್ಟದ ಥ್ರೋಬಾಲ್ ಪಂದ್ಯದಲ್ಲಿ ದ.ಕ.ಜಿಲ್ಲಾ ಮಹಿಳಾ ಥ್ರೋಬಾಲ್ ತಂಡವು ಪದ್ಮಶ್ರೀ ಅವರ ನೇತೃತ್ವದಲ್ಲಿ ಭಾಗವಹಿಸಲಿದೆ.

ನರಸಿಂಹರಾಜಪುರ: ಕೇವಲ ಜ್ಞಾನಕಲ್ಯಾಣ ಮಹೋತ್ಸವ

Article Image

ನರಸಿಂಹರಾಜಪುರ: ಕೇವಲ ಜ್ಞಾನಕಲ್ಯಾಣ ಮಹೋತ್ಸವ

ಶ್ರೀ ಜ್ವಾಲಾಮಾಲಿನಿ ಅತಿಶಯ ಕ್ಷೇತ್ರ ಸಿಂಹನಗದ್ದೆ ಬಸ್ತಿಮಠದಲ್ಲಿ ಭಗವಾನ್ ಶ್ರೀ ೧೦೦೮ ಚಂದ್ರಪ್ರಭ ಸ್ವಾಮಿ ಸ್ವಾಮಿಯವರ ಕೇವಲ ಜ್ಞಾನಕಲ್ಯಾಣ ಮಹೋತ್ಸವವು ಪ. ಪೂ. ಸ್ವಸ್ತಿಶ್ರೀ ಲಕ್ಷ್ಮೀಸೇನಾ ಭಟ್ಟಾರಕ ಪಟ್ಟಾ ಚಾರ್ಯವರ್ಯ ಮಹಾಸ್ವಾಮೀಜಿಗಳವರ ನೇತೃತ್ವ, ಮಾರ್ಗದರ್ಶನ ಹಾಗೂ ಪಾವನ ಸಾನ್ನಿಧ್ಯದಲ್ಲಿ ಇಂದು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಅಷ್ಟಮ ನಂದೀಶ್ವರದ ೫೨ ಜಿನಬಿಂಬಗಳಿಗೆ ೫೪ ಕಲಶಗಳಿಂದ ಮಹಾಭಿಷೇಕ

Article Image

ಅಷ್ಟಮ ನಂದೀಶ್ವರದ ೫೨ ಜಿನಬಿಂಬಗಳಿಗೆ ೫೪ ಕಲಶಗಳಿಂದ ಮಹಾಭಿಷೇಕ

ಮೂಡುಬಿದಿರೆ: ದರೆಗುಡ್ಡೆಯಲ್ಲಿರುವ ಶ್ರೀ ೧೦೦೮ ಅನಂತನಾಥ ಸ್ವಾಮಿ ಬಸದಿಯಲ್ಲಿ ಅಷ್ಟಮ ನಂದೀಶ್ವರದ ೫೨ ಜಿನಬಿಂಬಗಳಿಗೆ ೫೪ ಕಲಶಗಳಿಂದ ಮಹಾಭಿಷೇಕವು ಮೂಡುಬಿದಿರೆ ಶ್ರಿ ಜೈನ ಮಠದ ಪ. ಪೂ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯದಲ್ಲಿ ಮಾ. 23ರಂದು ನೆರವೇರಲಿದೆ. ದಿನಾಂಕ 22-03-2025ನೇ ಶನಿವಾರ ಗಂಟೆ 9ಕ್ಕೆ ನೂತನ ನಂದೀಶ್ವರ 52 ಅರಿಹಂತರ ಜಿನಬಿಂಬಗಳು ಪೂಜಾ ಸ್ಥಳಕ್ಕೆ ಆಗಮನ, ಗಂಟೆ 10ರಿಂದ ನಂದೀಶ್ವರರ 52 ಅರಿಹಂತರಿಗೆ ಪ್ರತ್ಯೇಕ ಪಂಚಾಮೃತ ಅಭಿಷೇಕ ನೆರವೇರಲಿರುವುದು ಎಂದು ಪ್ರಕಟಣೆ ತಿಳಿಸಿದೆ.

ವಾರ್ಷಿಕ ವರ್ಧಂತಿ ಪೂಜಾ ಮಹೋತ್ಸವ

Article Image

ವಾರ್ಷಿಕ ವರ್ಧಂತಿ ಪೂಜಾ ಮಹೋತ್ಸವ

ಉಳ್ಳಾಲ ಭಗವಾನ್ ಆದಿನಾಥ ಸ್ವಾಮಿ, ಭಗವಾನ್ ಪಾರ್ಶ್ವನಾಥ ಸ್ವಾಮಿ, ಮಾತೆ ಪದ್ಮಾವತೀ ದೇವಿ ಬಸದಿಯ ಪಂಚಕಲ್ಯಾಣ ಮಹೋತ್ಸವದ ವಾರ್ಷಿಕ ವರ್ಧಂತಿ ಪೂಜಾ ಮಹೋತ್ಸವವು ಮೂಡುಬಿದಿರೆ ಶ್ರೀ ಜೈನ ಮಠದ ಪ. ಪೂ. ಸ್ವಸ್ತಿಶೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನ ಹಾಗೂ ಪಾವನ ಸಾನ್ನಿಧ್ಯದೊಂದಿಗೆ ದಿನಾಂಕ 23-03-2025ನೇ ಆದಿತ್ಯವಾರ ಜರಗಲಿದೆ. ಪೂಜಾ ಕಾರ್ಯಕ್ರಮ ಮೂಲಸ್ವಾಮಿಗೆ ೨೪ ಕಲಶ ಅಭಿಷೇಕ, ಮಾತೆ ಶ್ರೀ ಪದ್ಮಾವತಿ ದೇವಿಗೆ ಲಕ್ಷ ಹೂವಿನ ಮಹಾಪೂಜೆ, ಶ್ರೀ ಕ್ಷೇತ್ರಪಾಲನಿಗೆ ಕ್ಷೀರಾಭಿಷೇಕ, ಶ್ರೀ ನಾಗಬ್ರಹ್ಮ ಸಾನ್ನಿಧ್ಯ ಪೂಜಾ ಸೇವೆ.

ಪ್ರೋ. ಪದ್ಮಾಶೇಖರ್ ಅವರಿಗೆ ಸಿದ್ಧಾಂತಕೀರ್ತಿ ಪ್ರಶಸ್ತಿ

Article Image

ಪ್ರೋ. ಪದ್ಮಾಶೇಖರ್ ಅವರಿಗೆ ಸಿದ್ಧಾಂತಕೀರ್ತಿ ಪ್ರಶಸ್ತಿ

ಹೊಂಬುಜ ಜೈನ ಮಠದಿಂದ ನೀಡುವ 2025ನೇ ಸಾಲಿನ ಸಿದ್ಧಾಂತಕೀರ್ತಿ ಪ್ರಶಸ್ತಿಯನ್ನು ವಿಶ್ರಾಂತ ಕುಲಪತಿ, ಸಾಹಿತಿ, ಪ್ರೋ. ಪದ್ಮಾಶೇಖರ್ ಅವರಿಗೆ ವಾರ್ಷಿಕ ಮಹಾರಥೋತ್ಸವ ಮುನ್ನಾ ದಿನವಾದ ಮಾ.21 ರಂದು ನಡೆಯುವ ಧಾರ್ಮಿಕ ಸಭೆಯಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿಗಳವರು ತಿಳಿಸಿದ್ದಾರೆ. ಈ ಪ್ರಶಸ್ತಿಯು 51 ಸಾವಿರ ರೂ. ನಗದು ಒಳಗೊಂಡಿದೆ. ಕವಯತ್ರಿ, ಲೇಖಕಿ, ಸಂಶೋಧಕಿ, ಪ್ರಾಧ್ಯಾಪಕಿ, ಆಡಳಿತಗಾರ್ತಿ, ವಿಮರ್ಶಕಿ ಹಾಗೂ ಮಹಿಳಾ ಪರ ಹೋರಾಟಗಾರ್ತಿಯಾಗಿ ಪ್ರೊ. ಪದ್ಮಾ ಶೇಖರ್ ಬಹುಮುಖ ಸಾಧನೆ ಮಾಡಿದ್ದಾರೆ. ವಿಮರ್ಶೆ, ಸಂಶೋಧನೆ, ಕಾವ್ಯ, ಜೀವನಚರಿತ್ರೆ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಪಿಎಚ್.ಡಿ ಸಂಶೋಧಕರಿಗೆ ಮಾರ್ಗದರ್ಶನ ಮಾಡಿದ್ದಾರೆ. ಇವರ ನೇತೃತ್ವದಲ್ಲಿ ಆರು ಸಾವಿರಕ್ಕೂ ಹೆಚ್ಚು ಪ್ರಾಚೀನ ತಾಳೆಪತ್ರಗಳನ್ನು ಡಿಜಟಲೀಕರಣ ಮಾಡಲಾಗಿದೆ. ಈಗಾಗಲೇ ಇವರಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ವಿಠಲಾನುಗ್ರಹ ಪ್ರಶಸ್ತಿ, ಚಾವುಂಡರಾಯ ಪ್ರಶಸ್ತಿ, ಆದರ್ಶ ಮಹಿಳಾ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಗಳು ಲಭಿಸಿವೆ. ಪ್ರಸ್ತುತ ಇವರು ಮೈಸೂರಿನಲ್ಲಿ ನೆಲೆಸಿರುತ್ತಾರೆ.

ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲ ಜಿನಮಂದಿರದ ವಾರ್ಷಿಕೋತ್ಸವ

Article Image

ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲ ಜಿನಮಂದಿರದ ವಾರ್ಷಿಕೋತ್ಸವ

ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲದ ಭಗವಾನ್ ೧೦೦೮ ಶ್ರೀ ಚಂದ್ರನಾಥ ಸ್ವಾಮಿ ಜಿನಮಂದಿರದಲ್ಲಿ ಪ.ಪೂ. ಸ್ವಸ್ತಿಶ್ರೀ ಸೌರಭಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳು ಸಂಸ್ಥಾನ ಮಠ ತಿಜಾರ ರಾಜಸ್ಥಾನ ಇವರ ಪಾವನ ಸಾನ್ನಿಧ್ಯ ಹಾಗೂ ಮಾರ್ಗದರ್ಶನದೊಂದಿಗೆ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ವಿಜೃಂಭಣೆಯಿಂದ ವಾರ್ಷಿಕೋತ್ಸವ ಹಾಗೂ ಶಾಂತಿ ಚಕ್ರ ಆರಾಧನೆ, ಪದ್ಮಾವತಿ ಅಮ್ಮನವರ ಆರಾಭನೆ, ಲಕ್ಷ ಹೂವಿನ ಪೂಜೆ, ೨೪ ಕಲಶಾಭಿಷೇಕ, ಉತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಪ್ರತಿಷ್ಠಾ ಪುರೋಹಿತರಾದ ಜಯರಾಜ್ ಇಂದ್ರ ಮತ್ತು ಅರಹಂತ ಇಂದ್ರ ಹಾಗೂ ತಂಡದವರಿಂದ ಮಾ. 11ರಂದು ಜರುಗಿತು. ಈ ಸಂದರ್ಭದಲ್ಲಿ ವಿಶೇಷ ಸಾಧನೆ ಮಾಡಿದ ಆಡಳಿತ ಮಂಡಳಿ ಸದಸ್ಯರಾದ ಎಚ್. ವಿಜಯ ಕುಮಾರ್, ಮನೋರಮಾ, ವಿಮಲ, ಅಜಿತ್ ಕುಮಾರ್, ಶೋಭಾ, ಚಂದನಾ, ಸುಮಂತ್ ಜೈನ್ ಮುಂತಾದವರನ್ನು ಪೂಜ್ಯ ಸ್ವಾಮೀಜಿಯವರು ಅಭಿನಂದಿಸಿ, ಆಶೀವರ್ದಿಸಿದರು. ಪೂಜ್ಯ ಸ್ವಾಮೀಜಿಗಳವರು ಮಾತನಾಡುತ್ತಾ, ಶ್ರೀ ಕ್ಷೇತ್ರ ಚಂದ್ರಪುರವು ಅತೀ ಪ್ರಾಚೀನವಾದ ಕ್ಷೇತ್ರವಾಗಿದ್ದು, ಈ ಕ್ಷೇತ್ರವು ಅತಿಶಯವಾಗಿರುತ್ತದೆ. ಈ ಕ್ಷೇತ್ರ ದರ್ಶನ ಮಾಡಿದವರ ಪಾಪವು ನಾಶವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ. ಕ್ಷೇತ್ರದಲ್ಲಿ ನಿರಂತರವಾಗಿ ಆರಾಧನೆಗಳು, ಪೂಜೆಗಳು ನಡೆದು ಲೋಕ ಕಲ್ಯಾಣವಾಗಲಿ. ಈ ಕ್ಷೇತ್ರಕ್ಕೆ ಇನ್ನೊಮ್ಮೆ ಬೇಟಿ ನೀಡಿ ಈ ಕ್ಷೇತ್ರದಲ್ಲಿ ಎರಡು ದಿನ ಇದ್ದು ಧಾರ್ಮಿಕ ಕಾರ್ಯಕ್ರಮ ನಡೆಸುವುದಾಗಿ ಆಶೀರ್ವಚನ ನೀಡಿದರು. ಸಮಿತಿಯ ಸಂಚಾಲಕರಾದ ಡಾ.ಕೆ. ಜಯಕೀರ್ತಿ ಜೈನ್ ಕಾರ್ಯಕ್ರಮ ನಿರ್ವಹಿದರು. ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು ಮತ್ತು ರಾಣಿ ಕಾಳಲಾದೇವಿ ಮಹಿಳಾ ಮಂಡಲದ ಪದಾಧಿಕಾರಿಗಳು, ಸದಸ್ಯರು ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅನಿತಾ ಸುರೇಂದ್ರ ಕುಮಾರ್‌ರವರಿಗೆ ರಾಣಿ ಅಬ್ಬಕ್ಕ ಪ್ರಶಸ್ತಿ 2025

Article Image

ಅನಿತಾ ಸುರೇಂದ್ರ ಕುಮಾರ್‌ರವರಿಗೆ ರಾಣಿ ಅಬ್ಬಕ್ಕ ಪ್ರಶಸ್ತಿ 2025

ಸಮಾಜ ಸೇವಕಿ, ಮುನಿಗಳ ಚಾತುರ್ಮಾಸದ ರುವಾರಿ, ಪ್ರತಿಯೊಂದು ಮನೆ ಮನೆಯಲ್ಲಿ ಜಿನಭಜನೆಯ ಮುಖಾಂತರ ಮನೆ ಮಾತಾಗಿರುವ ಧರ್ಮಸ್ಥಳದ ಅನಿತಾ ಸುರೇಂದ್ರ ಕುಮಾರ್‌ರವರಿಗೆ ಬೆಂಗಳೂರಿನ ರಾಣಿ ಅಬ್ಬಕ್ಕ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ "ವೀರರಾಣಿ ಅಬ್ಬಕ್ಕ ಪ್ರಶಸ್ತಿ"ಯನ್ನು ಮಹಾಲಕ್ಷ್ಮೀ ಲೇಔಟ್‌ನಲ್ಲಿ ಭಾನುವಾರ ಆಯೋಜಿಸಿದ್ದ ರಾಣಿ ಅಬ್ಬಕ್ಕ ಉತ್ಸವ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಯಿತು.

ಹೂವಿನ ಹಡಗಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಂಪನ್ನ

Article Image

ಹೂವಿನ ಹಡಗಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಂಪನ್ನ

ವಿಜಯನಗರ ಜಿಲ್ಲೆ, ಹೂವಿನ ಹಡಗಲಿ ಪಟ್ಟಣದ ಪಾರ್ಶ್ವನಾಥ ಜಿನ ಮಂದಿರದ ಶ್ರೀ ಪಾರ್ಶ್ವನಾಥ ಸಭಾ ಮಂಟಪದಲ್ಲಿ ಶ್ರೀ ಜ್ವಾಲಾಮಾಲಿನಿ ಮಹಿಳಾ ಸಮಾಜ ಹಾಗೂ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಸಹಭಾಗಿತ್ವದಲ್ಲಿ ಮಾ. 08ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ದೀಪ ಪ್ರಜ್ವಲನಿಯ ಮೂಲಕ ಉದ್ಘಾಟಿಸಲಾಯಿತು. ಶ್ರೀ ಜ್ವಾಲಾಮಾಲಿನಿ ಮಹಿಳಾ ಸಮಾಜದ ಅಧ್ಯಕ್ಷರಾದ ಎಂ.ಡಿ. ಪದ್ಮಾವತಿ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಮಹಿಳಾ ಸಾಧಕೀಯರಾದ ಮಹಾವೀರ ಅಲ್ಪಸಂಖ್ಯಾತರ ಪತಿನ ಸಹಕಾರ ಸಂಘದ ಪುಷ್ಪವತಿ ಪಾರ್ಶ್ವನಾಥ ರೇವಡಿ, ಶಿಲ್ಪ ಸಂತೋಷ ಸೂಗುರು, ನಾಗ ಮಂಜುಳಾ ಜೈನ್‌ರನ್ನು ಸನ್ಮಾನಿಸಲಾಯಿತು. ಚಂಪರಾಯಪ್ಪ ಹೊಳಲು ಸ್ವಾಗತಿಸಿದರು. ಅನುಷಾ ಮಯೂರ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಮೇಘ ಭಾಗೇಶ್ ಜೈನರ್ ವಂದಿಸಿದರು.

ಡಾ. ಹೆಚ್.ಎ.ಪಾಶ್ವ೯ನಾಥ್ ಅವರಿಗೆ ಪ್ರೊ.ಎಚ್ಚೆಸ್ಕೆ ಶತಮಾನೋತ್ಸವ ಪ್ರಶಸ್ತಿ ಪ್ರದಾನ

Article Image

ಡಾ. ಹೆಚ್.ಎ.ಪಾಶ್ವ೯ನಾಥ್ ಅವರಿಗೆ ಪ್ರೊ.ಎಚ್ಚೆಸ್ಕೆ ಶತಮಾನೋತ್ಸವ ಪ್ರಶಸ್ತಿ ಪ್ರದಾನ

ಗ್ರಾಮಾಂತರ ಬುದ್ಧಿ ಜೀವಿಗಳ ಬಳಗ (ಕೆ.ಆರ್.ನಗರ) ಸಂಸ್ಥೆಯು ತನ್ನ 40ನೇ ವಾಷಿ೯ಕೋತ್ಸವ ಹಾಗೂ ರಾಷ್ಟ್ರಕವಿ ಕುವೆಂಪು ಸಾಹಿತ್ಯೋತ್ಸವದ ಅಂಗವಾಗಿ ಫೆ.23ರಂದು ಮೈಸೂರಿನ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರಗಳಲ್ಲಿನ ಅತ್ಯಮೂಲ್ಯ ಕೊಡುಗೆಗಳನ್ನು ಪರಿಗಣಿಸಿ ಹಿರಿಯ ಸಾಹಿತಿಗಳು ಹಾಗೂ ರಂಗಭೂಮಿ ಕಲಾವಿದರು ಆಗಿರುವ ಡಾ. ಹೆಚ್.ಎ. ಪಾಶ್ವ೯ನಾಥ್ ಅವರಿಗೆ ಪ್ರೊ, ಎಚ್ಚೆಸ್ಕೆ ಶತಮಾನೋತ್ಸವ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿಯವರು ಪ್ರದಾನಮಾಡಿ ಗೌರವಿಸಿದರು. ಇವರು‌ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುತ್ತಾರೆ.

ರತ್ನತ್ರಯ ಜೈನ ಮಿಲನ್ ಮಾಸಿಕ ಸಭೆಯ ವರದಿ

Article Image

ರತ್ನತ್ರಯ ಜೈನ ಮಿಲನ್ ಮಾಸಿಕ ಸಭೆಯ ವರದಿ

ದಿನಾಂಕ 07-03-2025 ಶುಕ್ರವಾರದಂದು ರತ್ನತ್ರಯ ಜೈನ ಮಿಲನ್‌ನ ಮಾಸಿಕ ಸಭೆಯನ್ನು ಆನ್‌ಲೈನ್‌ಲ್ಲಿ ನಡೆಸಲಾಯಿತು. ಮುಖ್ಯ ಅತಿಥಿಗಳಾಗಿ ಪ್ರೇಮಕುಮಾರಿ, ಸುಖಾನಂದ, ರತ್ನತ್ರಯ ಜೈನ ಮಿಲನ ಅಧ್ಯಕ್ಷರಾದ ನವೀನ್ ಕುಮಾರ್ ಗುಬ್ಬಿ ಇವರು ಉಪಸ್ಥಿತರಿದ್ದರು. ಪಂಚ ನಮಸ್ಕಾರ ಪಠಣೆ ಮತ್ತು ಆರ್. ಎಸ್. ಭಾಮ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ವೀಣಾ ಅರಿಹಂತ್ ಅವರು ರತ್ನತ್ರಯ ಮಿಲನಿನ ಉದ್ದೇಶವನ್ನು ತಿಳಿಸಿದರು. ಪದ್ಮಸೂರಿ ಅವರು ಹಿಂದಿನ ಸಭೆಯ ವರದಿಯನ್ನು ಮಂಡಿಸಿದರು. ಪೂರ್ಣಿಮಾ ಜಯಂತರವರು ಮಾರ್ಚ್ ತಿಂಗಳ ಪರ್ವವಾಚನ ಮಾಡಿದರು. ಸುನೀತಾ ಸುಂದರರಾಜ್ ಅವರು ಕಳೆದ ತಿಂಗಳಲ್ಲಿ ವಿವಾಹ ವಾರ್ಷಿಕ ಹಾಗೂ ಹುಟ್ಟುಹಬ್ಬ ಆಚರಿಸಿಕೊಂಡ ರತ್ನತ್ರಯ ಮಿಲನ ಸದಸ್ಯರಿಗೆ ಶುಭ ಕೋರಿದರು. ರಾಣಿ ಪ್ರಫುಲ್ಲ ಅವರು ಅತಿಥಿಗಳ ಪರಿಚಯ ಮಾಡಿದರು. ಮುಖ್ಯ ಅತಿಥಿಗಳಾಗಿಭಾಗವಹಿಸಿದ್ದ ಸಿ. ಪಿ. ಉಷಾ ರಾಣಿಯವರು ವೀರ್ ಚಂದ್ ಗಾಂಧಿಯವರ ಬದುಕು ಮತ್ತು ಸಾಧನೆಗಳ ಕುರಿತು ಉಪನ್ಯಾಸ ಮಾಡಿದರು. ನವೀನ್ ಕುಮಾರ್ ಗುಬ್ಬಿಯವರು ಅಧ್ಯಕ್ಷರ ನುಡಿಗಳನ್ನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಅನಂತ ಕುಮಾರಿ ಅವರು ನಡೆಸಿಕೊಟ್ಟರು. ಶೋಭಿತ ನವೀನಕುಮಾರ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ವೇಣೂರು: ಮಹಿಳಾ ದಿನಾಚರಣೆ ಆಚರಣೆ

Article Image

ವೇಣೂರು: ಮಹಿಳಾ ದಿನಾಚರಣೆ ಆಚರಣೆ

ಬೆಳ್ತಂಗಡಿ ತಾಲೂಕು, ವೇಣೂರಿನ ಬ್ರಾಹ್ಮೀ ಜೈನ ಮಹಿಳಾ ಸಂಘದ ವತಿಯಿಂದ ಮಹಿಳಾ ದಿನಾಚರಣೆಯನ್ನು ಮಾರ್ಚ್ 8ರಂದು ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟಣೆಯನ್ನು ಹಿರಿಯರು ಆದ ವೇಣೂರಿನ ಸುನಂದಾದೇವಿ ಬಿ. ಪಿ. ಇಂದ್ರರವರು ನೆರವೇರಿಸಿದರು. ‌ ಮುಖ್ಯ ಭಾಷಣಕಾರರಾಗಿ ಬೆಳ್ತಂಗಡಿಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕರಾದ ಉಷಾ ನಾಯಕ್‌ರವರು ಆಗಮಿಸಿ, ಮಹಿಳೆಯರು ತನ್ನ ಕುಟುಂಬದೊಂದಿಗೆ ಮತ್ತು ಸಮಾಜದಲ್ಲಿ ನಿರ್ವಹಿಸುವ ವಿವಿಧ ಪಾತ್ರಗಳ ಬಗ್ಗೆ ವಿವರಿಸಿದರು. ಮಹಿಳೆ ಎಂದೂ ಕುಗ್ಗಬಾರದು ಸವಾಲುಗಳನ್ನು ತಾಳ್ಮೆಯಿಂದ ಎದುರಿಸಬೇಕು ಎಂದು ಹೇಳಿದರು. ಬ್ರಾಹ್ಮೀ ಜೈನ ಮಹಿಳಾ ಸಂಘದ ಕೋಶಾಧಿಕಾರಿಯಾದ ವಾಣಿಶ್ರೀ ವೃಷಭರಾಜ್‌ರವರು ಮಹಿಳೆಯರ ಉದಾಹರಣೆ ಮೂಲಕ ಮಹಿಳಾ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ನಂತರ ಬ್ರಾಹ್ಮೀ ಜೈನ ಮಹಿಳಾ ಸಂಘದ ಹಿರಿಯ ಸದಸ್ಯರಾದ ಸುನಂದಾ ಭರತ್‌ರಾಜ್‌ ಮತ್ತು ಶಶಿಪ್ರಭಾ ಸುರೇಶ್‌ ಆರಿಗರವರನ್ನು ಮಹಿಳಾ ದಿನಾಚರಣೆ ವಿಶೇಷವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬ್ರಾಹ್ಮೀ ಜೈನ ಮಹಿಳಾ ಸಂಘದ ಅದ್ಯಕ್ಷರು ಮತ್ತು ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ನಿರ್ದೇಶಕಿಯಾಗಿರುವ ಸರೋಜಾ ಗುಣಪಾಲ್‌‌ ಜೈನ್‌ರವರು ಮಹಿಳಾ ದಿನಾಚರಣೆ ಸಂಕ್ಷಿಪ್ತ ಮಾಹಿತಿ ನೀಡಿದರು. ಗೌರವ ಉಪಸ್ಥಿತಿಯನ್ನು ಬ್ರಾಹ್ಮೀ ಜೈನ ಮಹಿಳಾ ಸಂಘದ ಸ್ಥಾಪಕ ಅಧ್ಯಕ್ಷರಾದ ಪ್ರಸನ್ನ ಆರ್.‌ ಹೆಗ್ಡೆರವರು ವಹಿಸಿದ್ದರು. ದೀಪಶ್ರೀ ಕತ್ತೋಡಿ ಮತ್ತು ಪ್ರಿಯಾಲತಾ ಮೂಡುಕೋಡಿರವರು ಪ್ರಾರ್ಥಿಸಿ, ಕಾರ್ಯದರ್ಶಿ ಆಶಾಲತಾ ಜೈನ್‌ ಸ್ವಾಗತಿಸಿದರು. ಮಮತಾ ಪ್ರಸಾದ್‌ ಜೈನ್‌ರವರು ವಂದಿಸಿದರು. ಕಾರ್ಯಕ್ರಮವನ್ನು ಸಂಧ್ಯಾ ಸುಕುಮಾರ್‌ ಜೈನ್‌ರವರು ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ತುಂಗಭದ್ರ ಪ್ರೌಢಶಾಲೆಯಲ್ಲಿ ಎಸ್.ಎಸ್. ಎಲ್. ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿ

Article Image

ತುಂಗಭದ್ರ ಪ್ರೌಢಶಾಲೆಯಲ್ಲಿ ಎಸ್.ಎಸ್. ಎಲ್. ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿ

ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ ಮತ್ತು ಶ್ರೀ ಜ್ವಾಲಮಾಲಿನಿ ಮಹಿಳಾ ಸಮಾಜ ಹೂವಿನಡಗಲಿ ಇವರ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ತುಂಗಭದ್ರ ಪ್ರೌಢಶಾಲೆಯಲ್ಲಿ ಎಸ್.ಎಸ್. ಎಲ್. ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿ, ಪರೀಕ್ಷೆ ಹೇಗೆ ಬರೆಯಬೇಕು, ಅದನ್ನು ಹೀಗೆ ಎದುರಿಸಬೇಕು ಎಂಬ ಬಗ್ಗೆ ಸಲಹೆ ಹಾಗೂ ಮಾರ್ಗದರ್ಶನ ನೀಡಲಾಯಿತು. ಪರೀಕ್ಷೆಯಲ್ಲಿ ಫೇಲಾದರೂ ವಿದ್ಯಾರ್ಥಿಗಳಲ್ಲಿರುವ ಸದಾವಕಾಶಗಳು, ಇನ್ನಿತರ ವಿಚಾರಗಳನ್ನು ಹಾಗೂ ಯಾವುದೇ ಅನಾಹುತಗಳಿಗೆ ಎಡೆ ಮಾಡಿಕೊಡದಂತೆ ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಜ್ವಾಲಾಮಾಲಿನಿ ಮಹಿಳಾ ಸಮಾಜದ ಅಧ್ಯಕ್ಷ ಎಂ. ಡಿ. ಪದ್ಮಾವತಿ, ಉಪಾಧ್ಯಕ್ಷರಾದ ಜಯಶ್ರೀ ಮಂಜುನಾಥ್ ಜೈನ, ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಕಾರ್ಯಕಾರಿ ಸಮಿತಿಯ ಸೀಮಾ ಪ್ರಶಾಂತ್ ಹೊಳಲು ಕಾರ್ಯದರ್ಶಿ ಚಂಪಾರಾಯಪ್ಪ ಹೊಳಲು, ಖಜಾಂಚಿ ಮೇಘ ಬಾಗೇಶ ಜೈನರ್, ಸದಸ್ಯರಾದ ಪದ್ಮ ಅಜಿತ್ ಹೊಳಲು, ವೈಶಾಲಿ ಅಮಿತ್ ಹೊಳಲು, ಭಾಗವಹಿಸಿದ್ದರು ಇದೇ ಸಂದರ್ಭದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರುಗಳಿಗೆ ಪೆನ್ಸಿಲ್ ಗಳನ್ನು ವಿತರಿಸಲಾಯಿತು. ಜೆ ರಂಗನಾಥ- ತುಮಕೂರು

ಅಳದಂಗಡಿಯಲ್ಲೊಂದು ಅಪರೂಪದ ಕಾರ್ಯಕ್ರಮ

Article Image

ಅಳದಂಗಡಿಯಲ್ಲೊಂದು ಅಪರೂಪದ ಕಾರ್ಯಕ್ರಮ

ಕರಂಬಾರು ಗುತ್ತು ಪ್ರಸನ್ನ ಹೆಗ್ಡೆ ಹಾಗೂ ನವೀನ್ ಲೋಬೋ ಮಾಲಕತ್ವದ SKY ELECTRICALS SERVICE ಹಾಗೂ PRIME ASSOCIATE ಅಳದಂಗಡಿ ಶಾಖೆ ಉದ್ಘಾಟನೆಯು ಅಳದಂಗಡಿ ಸೋಮನಾಥೇಶ್ವರಿ ದೇವಸ್ಥಾನದ ಬಳಿಯ ಪಾವನಿ ಕಾಂಪ್ಲೆಕ್ಸ್ ನಲ್ಲಿ ಫೆ.28ರಂದು ನಡೆಯಿತು. ಉದ್ಘಾಟನೆಯನ್ನು ಅಳದಂಗಡಿ ಅರಮನೆಯ ಡಾ. ಪದ್ಮಪ್ರಸಾದ್ ಅಜಿಲರು ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಆಸುಪಾಸಿನ ಲೈನ್ ಮೆನ್ ಗಳನ್ನು ಸನ್ಮಾನಿಸುವುದರ ಮೂಲಕ ಮಾಲಕ ಪ್ರಸನ್ನ ಹೆಗ್ಡೆ ಮಾದರಿ ಕಾರ್ಯಕ್ರಮಕ್ಕೆ ನಾಂದಿ ಹಾಡಿದರು. ಸರಿಸುಮಾರು 20 ಮಂದಿ ಮೆಸ್ಕಾಂ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಇದೇ ಕಾರ್ಯಕ್ರಮದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಚಿಂತಕರಾದ ನಿರಂಜನ್ ಜೈನ್ ಕುದ್ಯಾಡಿ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಿವಪ್ರಸಾದ್ ಅಜಿಲರು, ಉದ್ಯಮಿಗಳಾದ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಡಾ. ಶಶಿಧರ್ ಡೋಂಗ್ರೆ, ಯೋಗೀಶ್ ನಡಕ್ಕರ, ಅಶ್ವಿನ್ ಪಿರೇರಾ ಮೂಡುಬಿದಿರೆ, ರವಿಪ್ರಸಾದ್ ಶೆಟ್ಟಿ ಮೂಡುಬಿದಿರೆ, ಸಂದೀಪ್ ಕುಮಾರ್ ಮೆಸ್ಕಾಂ ಇಂಜಿನಿಯರ್, ಗ್ರಾಮಪಂಚಾಯತ್ ಅಧ್ಯಕ್ಷೆ ಸರಸ್ವತಿ, ಗ್ರಾಮ ಪಂಚಾಯತ್ ಅಧಿಕಾರಿ ಪೂರ್ಣಿಮಾ ಜೆ, ನಿತ್ಯಾನಂದ ಶೆಟ್ಟಿ ನೊಚ್ಚ ಭಾಗವಹಿಸಿ ಶುಭಕೋರಿದರು. ಆಮಂತ್ರಣ ವಿಜಯ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಶ್ರೀರಂಗ ಮಯ್ಯ ಸಹಕರಿಸಿದರು.

First Previous

Showing 1 of 5 pages

Next Last