Article Image

ಡಾ. ಜಿನೇಶ್ ಬಹುಬಲಿ ನಾಗವಿ ಅವರಿಗೆ: ಬೆಸ್ಟ್ ಆರ್ಟಿಕಲ್ ಅವಾರ್ಡ್‌

Article Image

ಡಾ. ಜಿನೇಶ್ ಬಹುಬಲಿ ನಾಗವಿ ಅವರಿಗೆ: ಬೆಸ್ಟ್ ಆರ್ಟಿಕಲ್ ಅವಾರ್ಡ್‌

ಅಸೋಸಿಯೇಷನ್ ಆಫ್ ಫಾರ್ಮಾಟಿಕಲ್ ಟೀಚರ್ಸ್‌ ಆಫ್‌ ಇಂಡಿಯಾ (APTI) ಸಂಸ್ಥೆಯು ಡಾ. ಜಿನೇಶ್ ಬಹುಬಲಿ ನಾಗವಿ ಅವರಿಗೆ ಶ್ರೀ ಇಶ್ವರ್ ಎನ್. ಹುಕ್ಕೇರಿ ಮೆಮೋರಿಯಲ್ ಅವಾರ್ಡ್ - 2025 ಅಡಿಯಲ್ಲಿ ಕ್ಲಿನಿಕಲ್ ಪ್ರಾಕ್ಟಿಸ್ ಕ್ಷೇತ್ರದ “ಬೆಸ್ಟ್ ಆರ್ಟಿಕಲ್ ಅವಾರ್ಡ್‌” ಅನ್ನು ಪ್ರದಾನ ಮಾಡಿದೆ. ಡಾ. ಜಿನೇಶ್‌ ನಾಗವಿ ಅವರು “Assessment of Compliance in Hypertensive and Diabetic Patients at Primary Health Care: A Prospective Study" ಎಂಬ ಸಂಶೋಧನಾ ಲೇಖನವನ್ನು Indian Journal of Pharmacy Practice ಪತ್ರಿಕೆಯಲ್ಲಿ ಪ್ರಕಟಿಸಿದ್ದು, ಈ ಸಂಶೋಧನೆ ಗುಣಮಟ್ಟ, ವೈಜ್ಞಾನಿಕ ಆಳತೆ ಹಾಗೂ ಸಮಕಾಲೀನ ಆರೋಗ್ಯ ಸವಾಲುಗಳಿಗೆ ಹೊಂದಿಕೆಯಾಗಿರುವುದಕ್ಕಾಗಿ ಈ ಗೌರವಕ್ಕೆ ಪಾತ್ರವಾಗಿದೆ. ಈ ಪ್ರಶಸ್ತಿಯನ್ನು 74ನೇ ಇಂಡಿಯನ್ ಫಾರ್ಮಾಸ್ಯೂಟಿಕಲ್ ಕಾಂಗ್ರೆಸ್ (IPC) ಸಮಾವೇಶದ ಸಂದರ್ಭದಲ್ಲಿ, 2025ರ ಡಿಸೆಂಬರ್ 19 ರಿಂದ 21ರವರೆಗೆ ಬೆಂಗಳೂರಿನ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ (BIEC), ಕರ್ನಾಟಕದಲ್ಲಿ ಆಯೋಜಿಸಲಾದ APTI ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪದಾನ ಮಾಡಲಾಯಿತು. ಈ ಗೌರವವು ಸಾಮಾನ್ಯವಾಗಿ ವೈಜ್ಞಾನಿಕ ವಿಶ್ಲೇಷಣೆಯ ಶ್ರೇಷ್ಠತೆ, ಸಂಶೋಧನಾ ನವೀನತೆ ಹಾಗೂ ಪ್ರಸ್ತುತ ಫಾರ್ಮಾಸ್ಯೂಟಿಕಲ್ ಕ್ಷೇತ್ರದ ಅಗತ್ಯಗಳಿಗೆ ಸ್ಪಂದಿಸುವ ಸಂಶೋಧನೆಗಳಿಗೆ ಮಾತ್ರ ನೀಡಲಾಗುತ್ತದೆ. ಈ ಪ್ರಶಸ್ತಿ ದೊರಕಿರುವುದು ಡಾ. ಜಿನೇಶ್ ನಾಗವಿ ಅವರ ಸಂಶೋಧನಾ ಕಾರ್ಯದ ಗುಣಮಟ್ಟ, ವೈಜ್ಞಾನಿಕ ಪುಸ್ತುತಿಕೆಯ ಸ್ಪಷ್ಟತೆ ಹಾಗೂ ತಜ್ಞ ವಿಮರ್ಶಕರ ಸಮಿತಿಯಿಂದ ದೊರೆತ ಉನ್ನತ ಮೌಲ್ಯಮಾಪನವನ್ನು ಪ್ರತಿಬಿಂಬಿಸುತ್ತದೆ. ಡಾ. ಜಿನೇಶ್ ಬಹುಬಲಿ ನಾಗವಿ ಅವರು ಪ್ರಸ್ತುತ ಶಾರದಾ ವಿಲಾಸ್ ಕಾಲೇಜ್ ಆಫ್ ಫಾರ್ಮಸಿ, ಶಾರದಾ ವಿಲಾಸ್ ಎಜುಕೇಶನಲ್ ಇನ್‌ಸ್ಟಿಟ್ಯೂಷನ್ಸ್, ಮೈಸೂರು ಇಲ್ಲಿ ಫಾರ್ಮಾಸ್ಯೂಟಿಕಲ್ ಕೆಮಿಸ್ಟ್ರಿ ವಿಭಾಗದ ಪ್ರಾಧ್ಯಾಪಕರಾಗಿ ಮತ್ತು ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಅವರು HESDAR ಸೆಂಟರ್, ಮೈಸೂರುನಲ್ಲಿ ಗೌರವಾನ್ವಿತ ಸಂಯೋಜಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಈ ಸಾಧನ ಡಾ. ಜಿನೇಶ್ ನಾಗವಿ ಅವರ ವೃತ್ತಿಪರ ಜೀವನದಲ್ಲಿ ಮಹತ್ವದ ಮೈಲಿಗಲ್ಲಾಗಿದ್ದು, ಭಾರತೀಯ ಫಾರ್ಮಾಸ್ಯೂಟಿಕಲ್ ಸಂಶೋಧನಾ ಕ್ಷೇತ್ರದಲ್ಲಿ ಅವರ ಕೊಡುಗೆಗೆ ಮತ್ತೊಂದು ಗೌರವವಾಗಿದೆ.

ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ರಾಜ್ಯ ಮಾಧ್ಯಮ ವಕ್ತಾರರಾಗಿ ಸುದೇಶ್ ಕುಮಾರ್ ಮಂಗಳೂರು ಆಯ್ಕೆ

Article Image

ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ರಾಜ್ಯ ಮಾಧ್ಯಮ ವಕ್ತಾರರಾಗಿ ಸುದೇಶ್ ಕುಮಾರ್ ಮಂಗಳೂರು ಆಯ್ಕೆ

ಮಂಗಳೂರು: ಕನ್ನಡ ನಾಡು-ನುಡಿ ಹಾಗೂ ಶಿಕ್ಷಣದ ಉಳಿವಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ 'ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ'ದ ರಾಜ್ಯ ಮಾಧ್ಯಮ ವಕ್ತಾರರಾಗಿ ಹಿರಿಯ ಪತ್ರಕರ್ತ, ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಸುದೇಶ್ ಕುಮಾರ್ ಮಂಗಳೂರು ಅವರು ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ​ಕನ್ನಡ ಮಾಧ್ಯಮ ಶಾಲೆಗಳನ್ನು ಸಬಲೀಕರಣಗೊಳಿಸುವ ಮತ್ತು ಸರ್ಕಾರಿ ಶಾಲೆಗಳ ಹಿತರಕ್ಷಣೆಗಾಗಿ ರಾಜ್ಯಾದ್ಯಂತ ನಡೆಯುತ್ತಿರುವ ಈ ಮಹತ್ವದ ಅಭಿಯಾನಕ್ಕೆ ಮಾಧ್ಯಮಗಳ ಸಹಕಾರ ಮತ್ತು ಸಮರ್ಪಕ ಸಂವಹನದ ಅಗತ್ಯವಿದ್ದು, ಸುದೇಶ್ ಕುಮಾರ್ ಅವರ ಸುದೀರ್ಘ ಪತ್ರಿಕಾ ಅನುಭವವು ಈ ನಿಟ್ಟಿನಲ್ಲಿ ಆನೆಬಲ ತಂದಿದೆ. ​ಆಯ್ಕೆಯ ಪ್ರಮುಖ ಅಂಶಗಳು: ಅನುಭವ: ಪತ್ರಿಕೋದ್ಯಮದಲ್ಲಿ ದಶಕಗಳ ಕಾಲ ಸಕ್ರಿಯರಾಗಿರುವ ಸುದೇಶ್ ಕುಮಾರ್ ಅವರು ಸಮಾಜಮುಖಿ ಕಳಕಳಿಯ ಬರಹಗಳ ಮೂಲಕ ಗುರುತಿಸಿಕೊಂಡಿದ್ದಾರೆ. ​ಜವಾಬ್ದಾರಿ: ಇನ್ನು ಮುಂದೆ ಅಭಿಯಾನದ ಅಧಿಕೃತ ಮಾಹಿತಿ, ಉದ್ದೇಶಗಳು ಮತ್ತು ಮುಂಬರುವ ಯೋಜನೆಗಳನ್ನು ಮಾಧ್ಯಮಗಳಿಗೆ ತಲುಪಿಸುವ ಸಂಪರ್ಕ ಸೇತುವೆಯಾಗಿ ಅವರು ಕಾರ್ಯನಿರ್ವಹಿಸಲಿದ್ದಾರೆ. ​ಸಂಘಟನೆ: ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ಅವರು ಹೊಂದಿರುವ ಸಂಘಟನಾ ಚತುರತೆಯು ಅಭಿಯಾನವನ್ನು ರಾಜ್ಯದ ಮೂಲೆ ಮೂಲೆಗೂ ತಲುಪಿಸಲು ಸಹಕಾರಿಯಾಗಲಿದೆ. ಕನ್ನಡ ಶಾಲೆಗಳು ನಮ್ಮ ಸಂಸ್ಕೃತಿಯ ತಾಯಿಬೇರುಗಳು. ಈ ಅಭಿಯಾನದ ಮೂಲಕ ಕನ್ನಡ ಶಾಲೆಗಳ ಪುನಶ್ಚೇತನಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ, ಎಂದು ಸುದೇಶ್ ಕುಮಾರ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಅಭಿಯಾನದ ರಾಜ್ಯ ಪದಾಧಿಕಾರಿಗಳು ಹಾಗೂ ಕನ್ನಡಾಭಿಮಾನಿಗಳು ಸುದೇಶ್ ಕುಮಾರ್ ಅವರ ಈ ನೇಮಕಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಕಾರ್ಯದರ್ಶಿ, ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ, ಕರ್ನಾಟಕ.

ಧನ್ಯಕುಮಾರ್ ಅವರಿಗೆ ಸಹಕಾರ ರತ್ನ ಪ್ರಶಸ್ತಿ

Article Image

ಧನ್ಯಕುಮಾರ್ ಅವರಿಗೆ ಸಹಕಾರ ರತ್ನ ಪ್ರಶಸ್ತಿ

ತಾಲೂಕಿನ ಹಿರಿಯ ಜೈನ ಸಮಾಜದ ಮುಖಂಡರು ಹಾಗೂ ಪಟ್ಟಣದ ಪಾರ್ಶ್ವನಾಥ ಸಹಕಾರ ಸಂಘ ನಿಯಮಿತದ ಅಧ್ಯಕ್ಷರು ಆದ ಇ.ವಿ ಧನ್ಯಕುಮಾ‌ರ್ ಇವರಿಗೆ ಕರ್ನಾಟಕ ಸರ್ಕಾರದ ವತಿಯಿಂದ "ಸಹಕಾರ ರತ್ನ ಪ್ರಶಸ್ತಿ" ಲಭಿಸಿದೆ. ಇವರು ಸಹಕಾರ ಕ್ಷೇತ್ರದಲ್ಲಿ ಐದು ದಶಕಗಳ ಕಾಲ ಹಗಲಿರಳು ಶ್ರಮಿಸಿ ಅನೇಕ ಸಹಕಾರ. ಸಂಘಗಳಲ್ಲಿ ಸೇವೆ ಸಲ್ಲಿಸಿ ಹಾಗೂ ಪಟ್ಟಣದ ಶ್ರೀ ಪಾರ್ಶ್ವನಾಥ ಬ್ಯಾಂಕಿನ ಅಧ್ಯಕ್ಷರು ಮತ್ತು ಸಂಸ್ಥಾಪಕರು ಆಗಿ ಬ್ಯಾಂಕಿನ ಸ್ವಂತ ಕಟ್ಟಡದ ನಿರ್ಮಾತೃ ಆಗಿದ್ದಾರೆ ಹಾಗೂ ಖಾಸಗಿ ಬಸ್ಸಿನ ಮಾಲೀಕರು ಆದಂತಹ ಇವರು ವಿಜಯಗಂಗೋತ್ರಿ ಶಾಲೆಯ ಕಾರ್ಯದರ್ಶಿಯಾಗಿ ಹಾಗೂ ಜೈನ ಸಮಾಜದ ಗೌರವಾಧ್ಯಕ್ಷರಾಗಿ ಹಾಗೂ ಇನ್ನಿತರ ಸಂಘ ಸಂಸ್ಥೆಗಳಿಗೆ ಶ್ರಮಿಸಿದವರಾಗಿದ್ದ ಇವರ ಹಿರಿಯತನಕ್ಕೆ ಗೌರವ ಲಭಿಸಿದ್ದಾಗಿದೆ. ಜೈನ ಸಮಾಜದ ಮುಖಂಡರುಗಳಾದ ಧನಪಾಲ್‌, ಬ್ರಹ್ಮಪಾಲ್.ಡಿ, ಆದಿರಾಜಯ್ಯ, ಅನುಷ್‌ ಜೈನ್, ಶ್ರೀ ಪಾರ್ಶ್ವನಾಥ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಟಿ.ಜಿ.ಗುರುಸ್ವಾಮಿ, ಸಿಬ್ಬಂಧಿವರ್ಗ, ಸರ್ವ ಸದಸ್ಯರು ಸೇರಿದಂತೆ ಮತ್ತಿತರರು ಅಭಿನಂದಿಸಿದ್ದಾರೆ.

ಕಾರ್ಕಳದ ಶಗುನ್ ಎಸ್ ವರ್ಮಾ ಭಾರತ ತಂಡದ ವಾಲಿಬಾಲ್ ಮಹಿಳಾ ತಂಡಕ್ಕೆ ಆಯ್ಕೆ

Article Image

ಕಾರ್ಕಳದ ಶಗುನ್ ಎಸ್ ವರ್ಮಾ ಭಾರತ ತಂಡದ ವಾಲಿಬಾಲ್ ಮಹಿಳಾ ತಂಡಕ್ಕೆ ಆಯ್ಕೆ

ಕಾರ್ಕಳದ ಶಗುನ್ ಎಸ್ ವರ್ಮಾ ಭಾರತ ತಂಡದ 15 ವರ್ಷ ಕೆಳಗಿನ ವಾಲಿಬಾಲ್ ಮಹಿಳಾ ತಂಡಕ್ಕೆ ಆಯ್ಕೆಯಾಗಿದ್ದಾರೆ. World School Games Federation ವತಿಯಿಂದ ಚೀನಾದಲ್ಲಿ ನಡೆಯಲಿರುವ ವಾಲಿಬಾಲ್ ಪಂದ್ಯಾಟದಲ್ಲಿ ಭಾರತವನ್ನು ಪ್ರತಿನಿಧಿಸುವ ಕರ್ನಾಟಕದ ಏಕೈಕ ಆಟಗಾರ್ತಿ ಎಂಬ ಹೆಮ್ಮೆ ಇವರದ್ದು. ಇವರು ಕಾರ್ಕಳದ MMC Decorators ನ ಮಾಲಿಕರಾದ ಸಂದೇಶ್ ವರ್ಮ ಮತ್ತು ಶೃತಿರಾಜ್ ಇವರ ಪುತ್ರಿಯಾಗಿದ್ದು, ಪ್ರಸ್ತುತ ಕ್ರೈಸ್ಟ್ ಕಿಂಗ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯ ಮಲೆನಾಡು ವಿಭಾಗದ ಜಿನ ಭಜನಾ ಸ್ಪರ್ಧೆಗಳು

Article Image

ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯ ಮಲೆನಾಡು ವಿಭಾಗದ ಜಿನ ಭಜನಾ ಸ್ಪರ್ಧೆಗಳು

ಭಾರತೀಯ ಜೈನ್ ಮಿಲನ್ ವಲಯ - 8 ಬೆಂಗಳೂರು, ಮಲೆನಾಡು ವಿಭಾಗ ಮಟ್ಟದ ಜಿನ ಭಜನಾ ಸ್ಪರ್ಧೆಗಳು ಸೀಸನ್- 9, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯ ಮಲೆನಾಡು ವಿಭಾಗದ ಜಿನ ಭಜನಾ ಸ್ಪರ್ಧೆಗಳು ದಿನಾಂಕ 16 -11- 2025ರಂದು ಭಾನುವಾರ ಶಿವಮೊಗ್ಗದ ಹೊಂಬುಜ ಪದ್ಮಾವತಿ ಜೈನ ಸಮುದಾಯ ಭವನದಲ್ಲಿ ನಡೆದವು. ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್ ಮತ್ತು ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರಾದ ಡಿ. ಅನಿತಾ ಸುರೇಂದ್ರ ಕುಮಾರ್ ರವರು ಜಿನ ಭಜನಾ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಕೇಂದ್ರ ಸಮಿತಿಯ ಪಿ .ಅಜಿತ್ ಕುಮಾರ್, ಬೆಂಗಳೂರು ವಿಭಾಗದ ಕಾರ್ಯದರ್ಶಿ ವಿಲಾಸ್ ಪಾಸಣ್ಣವರ್, ಮಲೆನಾಡು ವಿಭಾಗದ ಉಪಾಧ್ಯಕ್ಷರಾದ ಯಶೋಧರ ಹೆಗ್ಡೆ ಕೆ. ಉಪಸ್ಥಿತರಿದ್ದರು. ಸಮಾರೋಪ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಹೊಂಬುಜ ಜೈನ ಮಠದ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಸಾನಿಧ್ಯ ಮತ್ತು ಆಶೀರ್ವಚನ ನೀಡಿದರು. ಪೂಜ್ಯ ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ಭಾರತೀಯ ಆಧ್ಯಾತ್ಮ 14ನೆಯ ಶತಮಾನದವರೆಗೆ ಜ್ಞಾನಮಾರ್ಗದಲ್ಲಿ ಕಠಿಣವಾದ ತಪಸ್ಸುಗಳು, ವ್ರತಗಳು, ನಿಯಮಗಳ ಮೂಲಕ ಭಗವಂತನನ್ನು ತಲುಪುವ ಮಾರ್ಗವಾಗಿತ್ತು. ಹದಿನಾಲ್ಕನೆಯ ಶತಮಾನದ ನಂತರದಲ್ಲಿ ಭಗವಂತನ ಭಜನೆ ಕೀರ್ತನೆ ಮುಂತಾದ ಎಲ್ಲರಿಗೂ ಸುಲಭವಾದ ಭಕ್ತಿ ಮಾರ್ಗದಲ್ಲಿ ಸಾಗುತ್ತಾ ಬಂದಿದೆ. ಮಹಾಕವಿ ರತ್ನಾಕರವರ್ಣಿ ಮುಂತಾದ ಅನೇಕ ಕವಿಗಳು ಜೈನ ಆಧ್ಯಾತ್ಮ ಗೀತೆಗಳನ್ನು ರಚಿಸಿದ್ದಾರೆ. ಶತಮಾನಗಳಿಂದ ಭಜನೆ ಮತ್ತು ಭಕ್ತಿಗೀತೆಗಳು ಸ್ತೋತ್ರಗಳು ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ದೈನಂದಿನ ಅವಿಭಾಜ್ಯ ಅಂಗಗಳಾಗಿದ್ದವು. ಆದರೆ ಪ್ರಸ್ತುತದಲ್ಲಿ ಮಕ್ಕಳಿಗೆ ಲೌಕಿಕ ಶಿಕ್ಷಣಕ್ಕೆ ಮಾತ್ರ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ. ಆದ್ದರಿಂದ ತಂದೆ - ತಾಯಿಯರು ಮಕ್ಕಳಿಗೆ ಲೌಕಿಕ ಶಿಕ್ಷಣದ ಜೊತೆ ಜೊತೆಯಲ್ಲಿ ಧಾರ್ಮಿಕ ಶಿಕ್ಷಣವನ್ನು ಸಹ ನೀಡಬೇಕು, ಇಲ್ಲದಿದ್ದರೆ ಮಕ್ಕಳ ಶಿಕ್ಷಣ ಅಪೂರ್ಣವಾಗುತ್ತದೆ. ಪ್ರತಿದಿನ ಅರ್ಧ ಗಂಟೆಯಾದರೂ ಮಕ್ಕಳಿಗೆ ಜೈನ ಧರ್ಮದ ಮೂಲ ಗುಣಗಳು ಮತ್ತು ಆಚಾರ ವಿಚಾರಗಳನ್ನು, ಸಣ್ಣ ಸಣ್ಣ ಸಂಗತಿಗಳನ್ನು ತಿಳಿಸಿಕೊಡಬೇಕು. ಮನೆಗಳಲ್ಲಿ ಹಿರಿಯರು ಮಕ್ಕಳನ್ನು ಸೇರಿಕೊಂಡು ಜಿನ ಭಜನೆಗಳನ್ನು ಮಾಡುವುದು ಮತ್ತು ಮನೆಯಲ್ಲಿಯೇ ಧಾರ್ಮಿಕ ಸಂಸ್ಕಾರ ನಿಡುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು. ಜೈನ ಪೂರ್ವಾಚಾರ್ಯರು ಉಪಸರ್ಗಗಳು ಉಂಟಾದಾಗ ಜಿನ ಭಗವಂತರ ಧ್ಯಾನದಲ್ಲಿ ತಲ್ಲೀನರಾಗಿ ಅನೇಕ ಸ್ತೋತ್ರಗಳನ್ನು ರಚಿಸಿದ್ದಾರೆ. ಆಚಾರ್ಯ ಸಮಂತಭದ್ರಸ್ವಾಮಿವರ ಸ್ವಯಂಭೂಸ್ತೋತ್ರ, ಮಾನತುಂಗಾಚಾರ್ಯರ ಭಕ್ತಾಮರ ಸ್ತೋತ್ರ, ಧನಂಜಯ ಕವಿಯ ವಿಷಾಪಹಾರ ಸ್ತೋತ್ರ ಇಂತಹ ಅನೇಕ ಸ್ತೋತ್ರಗಳಿಂದ ಜಿನ ಭಕ್ತಿಯ ಮಹಿಮೆಯಿಂದ ಉಪಸರ್ಗಗಳನ್ನು ನಿವಾರಣೆ ಮಾಡಿಕೊಂಡರು. ದೈಹಿಕ ಆರೋಗ್ಯಕ್ಕೆ ಭೋಜನ ಹೇಗೆ ಅಗತ್ಯವಿದೆಯೋ ಅದೇ ರೀತಿಯಲ್ಲಿ ಮಾನಸಿಕ ಆರೋಗ್ಯಕ್ಕೆ ಭಜನೆ ಅಷ್ಟೇ ಅಗತ್ಯವಾಗಿದೆ. ಜಿನಭಜನೆಯನ್ನು ಸ್ಪರ್ಧೆಗಾಗಿ ಮಾತ್ರವಲ್ಲದೆ ಜಿನ ಭಗವಂತರ ಭಕ್ತಿಯನ್ನು ಪ್ರತಿದಿನವೂ ಮಾಡುವುದರಿಂದ ಇಹ ಪರದಲ್ಲಿ ಶಾಂತಿ ನೆಮ್ಮದಿ ಪಡೆಯಬಹುದು ಎಂದು ಹೇಳಿದರು. ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರಾದ ಡಿ. ಅನಿತಾ ಸುರೇಂದ್ರ ಕುಮಾರ್ ರವರು ಮುಖ್ಯ ಅತಿಥಿಗಳಾಗಿ ಮನದಾಳದ ಮಾತುಗಳನ್ನು ಹೇಳುತ್ತಾ, ಕಳೆದ ಒಂಭತ್ತು ವರ್ಷಗಳಿಂದ ಜಿನ ಭಜನಾ ವೇದಿಕೆಯಿಂದ ಸಮಾಜದಲ್ಲಿ ಅನೇಕ ಉತ್ತಮವಾದ ಬೆಳವಣಿಗೆಗಳು ಆಗಿರುತ್ತವೆ. ಜಿನ ಭಜನಾ ಸ್ಪರ್ಧೆಗಳ ಫಲವಾಗಿ ಈಗ ಜೈನ ಸಮಾಜದಲ್ಲಿ ಜಿನ ಭಕ್ತಿ ಗೀತೆಗಳ ಹಾಡುಗಾರು, ಸಾಹಿತ್ಯ ರಚನೆಕಾರರು, ತೀರ್ಪುಗಾರರು, ಸಂಯೋಜಕರು ಮುಂತಾದ ಅನೇಕ ಪ್ರತಿಭೆಗಳು ಮುನ್ನೆಲೆಗೆ ಬಂದಿದ್ದಾರೆ ಎಂದು ಹೇಳಿದರು. ಸಮಾಜದ ಅನೇಕ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಿದೆ ಎಂಬ ಸಂತಸವನ್ನು ಹಂಚಿಕೊಂಡರು. ಸ್ಪರ್ಧೆಗಳು ಬಹುಮಾನ ಗಳಿಸಲು ಮಾತ್ರವಲ್ಲದೆ ಭಗವಂತರ ಸ್ಮರಣೆಯಿಂದ ಮಾನಸಿಕ ನೆಮ್ಮದಿ ಮತ್ತು ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು. ಮುಂದಿನ ವರ್ಷದ ದಶಮಾನೋತ್ಸವದ ಯೋಜನೆಗಳ ಕುರಿತು ತಮ್ಮ ಪರಿಕಲ್ಪನೆಯನ್ನು ತಿಳಿಸಿಕೊಟ್ಟರು. ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್ ರವರು, ಜೈನ್ ಮಿಲನ್ ಸಂಘಟನೆಯು ರಾಷ್ಟ್ರ ಮತ್ತು ರಾಜ್ಯ ವ್ಯಾಪ್ತಿಯ ಸಂಘಟನೆಯಾಗಿದೆ ಎಂದು ಹೇಳಿದರು. ವಿದೇಶಗಳಲ್ಲಿ ಸಹ ಅನಿವಾಸಿ ಭಾರತೀಯ ಜೈನರು ಪ್ರತಿ ಭಾನುವಾರ ಜೈನ ಧರ್ಮದ ಆಚಾರ ವಿಚಾರಗಳನ್ನು ತಮ್ಮ ಮಕ್ಕಳಿಗೆ ಕಲಿಸಿ ಕೊಡುತ್ತಿದ್ದಾರೆ ಎಂದು ಹೇಳಿದರು. ಮುನಿರಾಜ ರೆಂಜಾಳ ಮತ್ತು ಕಾವ್ಯ ಬೆಂಗಳೂರುರವರು ತೀರ್ಪುಗಾರರಾಗಿ ಪ್ರತಿಯೊಂದು ತಂಡದ ಸ್ಪರ್ಧಿಗಳಿಗೆ ಉತ್ತಮವಾದ ವಿಮರ್ಶೆಗಳನ್ನು ಮತ್ತು ಸಲಹೆಗಳನ್ನು ನೀಡಿದರು. ಹಿರಿಯರ ವಿಭಾಗದಲ್ಲಿ ಓಂಕಾರ್ ಜಿನ ಭಜನಾ ತಂಡ ಹೊರನಾಡು ಪ್ರಥಮ ಸ್ಥಾನ, ಸುಸ್ವರ ಜಿನ ಭಜನಾ ತಂಡ ಹೊರನಾಡು ದ್ವಿತೀಯ ಸ್ಥಾನ ಮತ್ತು ತೃತೀಯ ಸ್ಥಾನವನ್ನು ಶ್ರೀ ಶಾಂತಿನಾಥ ಜಿನ ಭಜನಾ ತಂಡ ಮೇಗುಂದ ಹಾಗೂ ದಿವ್ಯ ದ್ವನಿ ಜಿನ ಭಜನಾ ತಂಡ ಹೊರನಾಡು ಎರಡೂ ತಂಡಗಳು ಪಡೆದವು. ಕಿರಿಯರ ವಿಭಾಗದಲ್ಲಿ ಪಾರಸ್ ಜಿನ ಭಜನಾ ತಂಡ ಮಂಡವಳ್ಳಿ ಪ್ರಥಮ ಸ್ಥಾನ, ಶುಭಸ್ವರ ಜಿನ ಭಜನಾ ತಂಡ ಹೊರನಾಡು ದ್ವೀತೀಯ ಸ್ಥಾನ ‌ಮತ್ತು ತೃತೀಯ ಸ್ಥಾನವನ್ನು ಸಿದ್ಧಿ ಪದ್ಮಾವತಿ ಜಿನ ಭಜನಾ ತಂಡ ಹೊರನಾಡು ಹಾಗೂ ಸರ್ವತೋಭದ್ರ ಜಿನ ಭಜನಾ ತಂಡ ಸಾಗರ ಎರಡೂ ತಂಡಗಳು ಹಂಚಿಕೊಂಡವು. ವಿಜೇತ ತಂಡಗಳಿಗೆ ನಗದು ಪುರಸ್ಕಾರ ಮತ್ತು ಟ್ರೊಫಿಗಳನ್ನು ನೀಡಲಾಯಿತು. ಹಿರಿಯರ ವಿಭಾಗದಲ್ಲಿ - 28 ಮತ್ತು ಕಿರಿಯರ ವಿಭಾಗದಲ್ಲಿ - 13 ತಂಡಗಳು ಭಾಗವಹಿಸಿದ್ದವು . ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಜೈನ್ ಮಿಲನ್ ಜಿನ ಭಜನಾ ಕೇಂದ್ರ ಸಮಿತಿಯ ಪಿ. ಅಜಿತ್ ಕುಮಾರ್ , ಬೆಂಗಳೂರು ವಿಭಾಗದ ಕಾರ್ಯದರ್ಶಿ ವಿಲಾಸ್ ಪಾಸಣ್ಣವರ್, ಶಿವಮೊಗ್ಗ ದಿಗಂಬರ ಸಂಘದ ಅಧ್ಯಕ್ಷರಾದ ಜಯರಾಜ ಬಿ. ಪಾಂಡಿ, ಪ್ರಿಯಕಾರಿಣಿ ಮಹಿಳಾ ಸಮಾಜದ ಅಧ್ಯಕ್ಷೆ ಶೀಲಾ ಸಿರಸಪ್ಪ ಗೋಗಿ, ತೀರ್ಥಹಳ್ಳಿಯ ಡಾ. ಜೀವಂಧರ ಜೈನ್, ಮಲೆನಾಡು ವಿಭಾಗದ ಉಪಾಧ್ಯಕ್ಷ ಯಶೋಧರ ಹೆಗ್ಡೆ. ಕೆ., ಕಾರ್ಯದರ್ಶಿ ಡಿ .ಪೂರ್ಣಿಮಾ ಅಶೋಕ್ ಕುಮಾರ್, ನಿರ್ದೇಶಕರಾದ ಬಿ.ಡಿ. ಧರ್ಮಪಾಲ್, ದೇವರಾಜ್ ಜೈನ್ ಕುಪ್ಪಡಿ ವಗೆಕೆರೆ ಇವರುಗಳು ಉಪಸ್ಥಿತರಿದ್ದರು. ಶಿವಮೊಗ್ಗ ಜೈನ್ ಮಿಲನ್ ಅಧ್ಯಕ್ಷರಾದ ಅಪ್ಪಣ್ಣಜ್ಜ ಎ.ಪಿ ಇವರು ಅಧ್ಯಕ್ಷತೆ ವಹಿಸಿದ್ದರು. ಪೂರ್ಣಿಮಾ ಅಶೋಕ್ ಕುಮಾರ್ ಕಾರ್ಯಕ್ರಮದ ನಿರೂಪಣೆ ಮಾಡಿದರು. ರೋಹಿಣಿ ಪ್ರಶಾಂತ ಪ್ರಾರ್ಥನೆ ಮಾಡಿದರು. ಸುಜಾತಾ ಪ್ರಶಾಂತ್ ವಂದಿಸಿದರು .

ನಾರಾವಿ ಬಸದಿಯಲ್ಲಿ ಕಾರ್ತಿಕ ದೀಪೋತ್ಸವ

Article Image

ನಾರಾವಿ ಬಸದಿಯಲ್ಲಿ ಕಾರ್ತಿಕ ದೀಪೋತ್ಸವ

ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ನಾರಾವಿ ಗ್ರಾಮದಲ್ಲಿರುವ ಭಗವಾನ್ ಧರ್ಮನಾಥ ಸ್ವಾಮಿ ಬಸದಿಯಲ್ಲಿ ಕಾರ್ತಿಕ ಮಾಸದ ಲಕ್ಷ ದೀಪೋತ್ಸವವು ನ. 11 ರಂದು ಮಂಗಳವಾರ ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ವಿಶೇಷ ಪೂಜೆ, ಆರಾಧನೆಯೊಂದಿಗೆ ನಡೆಯಲಿದೆ ಎಂದು ಬಸದಿಯ ಆಡಳಿತ ಸಮಿತಿಯವರು ತಿಳಿಸಿದ್ದಾರೆ. ಮಂಗಳವಾರ ಅಪರಾಹ್ನ 2.00 ಗಂಟೆಯಿಂದ ನಿತ್ಯವಿಧಿ ಸಹಿತ ದೇವಿ ಪದ್ಮಾವತಿ ಅಮ್ಮನವರ ಆರಾಧನೆ 6.00 ಗಂಟೆಗೆ ಉಯ್ಯಾಲೆ ಸೇವೆ, ಭಗವಾನ್ ಧರ್ಮನಾಥ ಸ್ವಾಮಿಗೆ 24 ಕಲಶ ಅಭಿಷೇಕ ಹಾಗೂ ದೇವರ ಉತ್ಸವದ ಬಳಿಕ ದೀಪೋತ್ಸವ ನಡೆಯಲಿದೆ. ಹೊರನಾಡು ಜಯಶ್ರೀ ಜೈನ್ ಸಂಗೀತ ಪೂಜಾಷ್ಟಕ ಹಾಡುವರು. ರಾತ್ರಿ 11.00 ಗಂಟೆಯಿಂದ ಇಡೀ ರಾತ್ರಿ ನಾರಾವಿಯ ಭಾರತೀಯ ಜೈನ್‌ಮಿಲನ್ ಆಶ್ರಯದಲ್ಲಿ ಜಿನಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕಕರು ತಿಳಿಸಿದ್ದಾರೆ. ಮಾನಸಿ ಮಹಿಳಾ ಸಂಘ ಉದ್ಘಾಟನೆ: ಸಂಜೆ 5 ಗಂಟೆಗೆ ಮಾನಸಿ ಮಹಿಳಾ ಸಂಘವನ್ನು ಮೂಡಬಿದ್ರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಉದ್ಘಾಟಿಸುವರು. ಬಿ. ನಿರಂಜನ ಅಜ್ರಿ ರಾಮೆರಗುತ್ತು ಅಧ್ಯಕ್ಷತೆ ವಹಿಸುವರು. ಮೂಡಬಿದ್ರೆ ನೋಟರಿ ವಕೀಲರಾದ ಶ್ವೇತಾ ಜೈನ್ ಶುಭಾಶಂಸನೆ ಮಾಡುವರು.

ಅ. 24: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ

Article Image

ಅ. 24: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ

ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ ಅ. 24 ರಂದು ಶುಕ್ರವಾರ ಧರ್ಮಸ್ಥಳದಲ್ಲಿ ನೌಕರವೃಂದದವರು, ಊರಿನ ನಾಗರಿಕರು, ಭಕ್ತರು ಹಾಗೂ ಅಭಿಮಾನಿಗಳ ಉಪಸ್ಥಿತಿಯಲ್ಲಿ ನಡೆಯಲಿದೆ. ಭಗವಾನ್ ಚಂದ್ರನಾಥಸ್ವಾಮಿ ಬಸದಿ ಹಾಗೂ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ. ಊರಿನ ನಾಗರಿಕರು, ಭಕ್ತರು ಹಾಗೂ ಅಭಿಮಾನಿಗಳು ಪೂಜ್ಯ ಹೆಗ್ಗಡೆಯವರಿಗೆ ಶ್ರದ್ಧಾ-ಭಕ್ತಿಯಿಂದ ಗೌರವಾರ್ಪಣೆ ಮಾಡುವರು. ಸಭಾಕಾರ್ಯಕ್ರಮ: ಅಪರಾಹ್ನ ನಾಲ್ಕು ಗಂಟೆಯಿಂದ ನಡೆಯುವ ಸಮಾರಂಭದಲ್ಲಿ ತುಮಕೂರಿನ ಸಿದ್ಧಗಂಗ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಶಾಸಕರುಗಳಾದ ಹರೀಶ್ ಪೂಂಜ, ಕೆ. ಪ್ರತಾಪಸಿಂಹ ನಾಯಕ್ ಮತ್ತು ಮೆಸ್ಕಾಂ ಅಧ್ಯಕ್ಷರಾದ ಕೆ. ಹರೀಶ್ ಕುಮಾರ್ ಶುಭಾಶಂಸನೆ ಮಾಡುವರು. ಹಿರಿಯ ನೌಕರರ ಸನ್ಮಾನ ಹಾಗೂ ಹೆಗ್ಗಡೆಯವರು ಹೊಸ ಯೋಜನೆಗಳನ್ನು ಪ್ರಕಟಿಸುವರು. ಹಬ್ಬದ ವಾತಾವರಣ: ದೀಪಾವಳಿ ಹಬ್ಬದ ಜೊತೆಗೆ ಧರ್ಮಸ್ಥಳದಲ್ಲಿ ಪಟ್ಟಾಭಿಷೇಕದ ವರ್ಧಂತ್ಯುತ್ಸವದ ಅಂಗವಾಗಿ ಎಲ್ಲೆಲ್ಲೂ ಸಂಭ್ರಮ- ಸಡಗರದ ವಾತಾವರಣವಿದೆ. ಬಸದಿ, ದೇವಸ್ಥಾನ, ಬೀಡು (ಹೆಗ್ಗಡೆಯವರ ನಿವಾಸ) ಅನ್ನಪೂರ್ಣ ಹಾಗೂ ವಸತಿಛತ್ರಗಳನ್ನು ಆಕರ್ಷಕ ವಿನ್ಯಾಸದ ವಿದ್ಯುದ್ದೀಪಗಳು ಮತ್ತು ಪ್ರಾಕೃತಿಕ ಪರಿಕರಗಳಿಂದ ಅಲಂಕರಿಸಿದ್ದು, ಕಣ್ಮನ ಸೆಳೆಯುತ್ತಿವೆ. 1968ರ ಅಕ್ಟೋಬರ್ 24 ರಂದು ಧರ್ಮಸ್ಥಳದ ಇಪ್ಪತ್ತೊಂದನೆ ಧರ್ಮಾಧಿಕಾರಿಯಾಗಿ ನೆಲ್ಯಾಡಿ ಬೀಡಿನಲ್ಲಿ ಪಟ್ಟಾಭಿಷಿಕ್ತರಾದ ಹೆಗ್ಗಡೆಯವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರುಡ್‌ಸೆಟ್ ಸಂಸ್ಥೆಗಳು, ಕೆರೆಗಳಿಗೆ ಕಾಯಕಲ್ಪ, ಉಚಿತ ಸಾಮೂಹಿಕ ವಿವಾಹ ಸಮಾರಂಭ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಹಾಗೂ ಆಯುರ್ವೇದಕ್ಕೆ ಪ್ರೋತ್ಸಾಹ, ಶ್ರದ್ಧಾಕೇಂದ್ರಗಳ ಸ್ವಚ್ಛತಾ ಅಭಿಯಾನ, ರುದ್ರಭೂಮಿ ಮೊದಲಾದ ವಿನೂತನ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನದ ಮೂಲಕ ಉನ್ನತ ಸೇವೆ-ಸಾಧನೆ ಮಾಡಿ ಎಲ್ಲರ ಪ್ರೀತಿ-ವಿಶ್ವಾಸ ಮತ್ತು ಗೌರವಕ್ಕೆ ಪಾತ್ರರಾಗಿದ್ದಾರೆ.

ಹುಬ್ಬಳ್ಳಿ: ಬಸದಿಗಳಲ್ಲಿ ಭಕ್ತಾಮರ ಭಕ್ತಿ

Article Image

ಹುಬ್ಬಳ್ಳಿ: ಬಸದಿಗಳಲ್ಲಿ ಭಕ್ತಾಮರ ಭಕ್ತಿ

ಭಕ್ತಾಮರವಾಲೆ ಬಾಬಾ ಖ್ಯಾತಿಯ ಪರಮಪೂಜ್ಯ ಮುನಿಶ್ರೀ ಪ್ರಣಾಮಸಾಗರ ಮಹಾರಾಜರ ಕರೆಯ ಮೇರೆಗೆ ದೇಶದ ಬಹುಪಾಲು ಜಿನಮಂದಿರಗಳಲ್ಲಿ ಜೈನ ಜಗತ್ತಿನ ಜನಪ್ರಿಯ ಸ್ತೋತ್ರ ಭಕ್ತಾಮರ ಏಕಕಾಲಕ್ಕೆ ಗುಂಜಾಯಮಾನಗೊಳ್ಳುವ ಮೂಲಕ ಸುಖ ಶಾಂತಿ ನೆಮ್ಮದಿ ಸಂತೋಷಗಳ ಹಿತಾನುಭವ ನೀಡಿತು. ವಿಶ್ವಶಾಂತಿಯ ಭಾವನೆಯೊಂದಿಗೆ "ಭಕ್ತಾಮರ ಉತ್ಸವ " ಹೆಸರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಗಿನಿಂದ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೇ ಶ್ರಾವಕ ಶ್ರಾವಕಿಯರು ಸಂಭ್ರಮದಿಂದ ಪಾಲ್ಗೊಂಡರು. ಹುಬ್ಬಳ್ಳಿಯ ಎಲ್ಲ ಬಸದಿಗಳಲ್ಲೂ ಭಕ್ತಾಮರ ಉತ್ಸವ ವರ್ಣರಂಜಿತವಾಗಿ ನಡೆಯಿತು. ನಗರದ ವಿವಿಧ ಮಹಿಳಾ ಸಮಾಜಗಳ ನೇತೃತ್ವದಲ್ಲಿ ವಿವಿಧ ಬಸದಿಗಳಲ್ಲಿ ವೈವಿಧ್ಯಮಯ ಅಲಂಕಾರ ಸಹಿತ ಭಕ್ತಾಮರ ಪಾಠ ನಡೆಯಿತು. ಭಕ್ತಾಮರ ನಾಯಕ ಭಗವಾನ್ ಆದಿನಾಥರೇ ಮೂಲನಾಯಕರಾಗಿರುವ, ಭಿತ್ತಿಗಳಲ್ಲಿ ಭಕ್ತಾಮರ ಚಿತ್ತಾರವನ್ನು ಹೊಂದಿರುವ ಭಗವಾನ್ ಶ್ರೀ ಆದಿನಾಥ ಬಸದಿ, ಭಗವಾನ್ ಶ್ರೀ ಶಾಂತಿನಾಥ ಬಸದಿ, ಭಗವಾನ್ ಶ್ರೀ ಚಂದ್ರಪ್ರಭ ಬಸದಿ, ಭಗವಾನ್ ಶ್ರೀ ಅನಂತನಾಥಬಸದಿ, ಭಗವಾನ್ ಶ್ರೀ ಪಾರ್ಶ್ಶ್ವನಾಥ ಬಸದಿ, ಭಗವಾನ್ ಶ್ರೀ ಚಂದ್ರಪ್ರಭ ಬಸದಿ, ಭಗವಾನ್ ಶ್ರೀ ಆದಿನಾಥರ ಸಮವಸರಣವನ್ನೇ ಹೊಂದಿರುವ ತ್ರಿಕೂಟ ಬಸದಿಗಳಲ್ಲಿ ನಡೆದ ಸಾಮೂಹಿಕ ಭಕ್ತಾಮರ ಪಾಠ ನೆರೆದ ಜನರಿಗೆ ವಿಶಿಷ್ಟ, ಅನುಪಮ ಆನಂದವನ್ನು ನೀಡಿತು.. ಪ್ರತಿ ಒಂದು ಶ್ಲೋಕ ಪಾಠದ ನಂತರ ದೀಪ ಬೆಳಗಿ ಭಗವಂತನ ಸನ್ನಿಧಿಗೆ ಅರ್ಪಿಸಿ ಭಕ್ತಿ ಮಾಡಲಾಯಿತು. ದೀಪಾವಳಿಗೆ ಮುನ್ನ ಒಂದು ಕಿರು ದೀಪೋತ್ಸವ ನಡೆಯಿತು. ಭಗವಾನ್ ಶ್ರೀ ಆದಿನಾಥ ಸ್ವಾಮಿ, ಆಚಾರ್ಯ ಶ್ರೀಮಾನತುಂಗರು, ಭಕ್ತಾಮರ ಸ್ತೋತ್ರ, ಭಕ್ತಾಮರವಾಲೇ ಬಾಬಾರ ಜಯಘೋಷಗಳು ಮೊಳಗಿದವು.

ಹಿರಿಯ ವಕೀಲ ಬಿಜೆಪಿ ನೇತಾರ ಎಂ.ಕೆ. ವಿಜಯಕುಮಾರ್

Article Image

ಹಿರಿಯ ವಕೀಲ ಬಿಜೆಪಿ ನೇತಾರ ಎಂ.ಕೆ. ವಿಜಯಕುಮಾರ್

ಕಾರ್ಕಳ, ಅ. 3: ಹಿರಿಯ ವಕೀಲ, ಬಿಜೆಪಿ ಹಿರಿಯ ನಾಯಕರಾದ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ. ಕೆ. ವಿಜಯಕುಮಾರ್ (82) ಅವರು ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ. 1968ರಲ್ಲಿ ವಕೀಲ ವೃತ್ತಿಗೆ ಪ್ರವೇಶಿಸಿದ ಅವರು, ಬಡವರು, ಕೃಷಿ ಕಾರ್ಮಿಕರು ಮತ್ತು ಅಸಹಾಯಕ ಮಹಿಳೆಯರ ಪರ ಉಚಿತವಾಗಿ ವಾದ ಮಂಡಿಸುವ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿದರು. ವಿಜ್ಞಾನ ಮತ್ತು ಕಾನೂನಿನಲ್ಲಿ ಪದವಿ ಪಡೆದ ಅವರು ಕಾನೂನು ಕ್ಷೇತ್ರದೊಂದಿಗೆ ಸಮಾಜಸೇವೆ, ಧಾರ್ಮಿಕ ಹಾಗೂ ಪರಿಸರಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಸಮಾಜಮುಖಿ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿಯನ್ನೂ ಪಡೆದಿದ್ದ ಅವರು, ಕಾರ್ಕಳದಲ್ಲಿ ವಿಧಾನಸಭಾ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದರು. ಕಾರ್ಕಳ ಬಿಜೆಪಿಯಲ್ಲಿ ಹಿರಿಯರಾಗಿ ಪಕ್ಷಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ.

ನಿಧನ: ವೀಣಾ ಅಭಿನಂದನ್‌ ವನಕುದುರೆ

Article Image

ನಿಧನ: ವೀಣಾ ಅಭಿನಂದನ್‌ ವನಕುದುರೆ

ಹುಬ್ಬಳ್ಳಿ: ಪ್ರಿಯದರ್ಶಿನಿ ಕಾಲೋನಿ ನಿವಾಸಿ ವೀಣಾ ಅಭಿನಂದನ್‌ ವನಕುದುರೆ (53ವ) ಇವರು ಇಂದು ಬೆಳಿಗ್ಗೆ ನಿಧನ ಹೊಂದಿದರು. ಇವರು ಪತಿ ಅಭಿನಂದನ್‌ ವನಕುದುರೆ ಮತ್ತು ಇಬ್ಬರು ಪುತ್ರರನ್ನು ಹಾಗೂ ಅಪಾರ ಬಂಧು-ವರ್ಗದವರನ್ನು ಅಗಲಿದ್ದಾರೆ.

ಸಚಿನ್ ಕುಮಾರ್ ಜೈನ್ ನಿರ್ದೇಶಕರಾಗಿ ಆಯ್ಕೆ

Article Image

ಸಚಿನ್ ಕುಮಾರ್ ಜೈನ್ ನಿರ್ದೇಶಕರಾಗಿ ಆಯ್ಕೆ

ಸವಣೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ತೋಟಗಾರಿಕೆ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ ಇದರ ಪುತ್ತೂರು ಕ್ಷೇತ್ರದಿಂದ ನಿರ್ದೇಶಕರಾಗಿ ಪುಣ್ಚಪ್ಪಾಡಿ ಗ್ರಾಮದ ಸಚಿನ್ ಕುಮಾರ್ ಜೈನ್ ಅವರು 2ನೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಚಿನ್ ಕುಮಾರ್ ಜೈನ್ ಅವರು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದು, ಪ್ರಸ್ತುತ ಪುಣ್ಚಪ್ಪಾಡಿ ಗೌರಿಗಣೇಶ ಸೇವಾಟ್ರಸ್ಟ್ ಅಧ್ಯಕ್ಷರಾಗಿ, ಮಂಗಳೂರಿನ ಧವಳ ಕೋ-ಅಪರೇಟಿವ್ ಸೊಸೈಟಿ ನಿಯಮಿತ ಇದರ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಚಿನ್ ಕುಮಾರ್ ಅವರು ಪುಣ್ಚಪಾಡಿ ಯುವರಾಜ ಕಡಂಬ ಮತ್ತು ಮಲ್ಲಿಕಾ ಯುವರಾಜ್ ಅವರ ಪುತ್ರ.

ಬೆಳ್ತಂಗಡಿ: ನೂತನ ಶಿಲಾಮಯ ಬಸದಿಯ ಮುಖ್ಯ ದ್ವಾರದ ಕಲ್ಲಿನ ದಾರಂದವನ್ನು‌ ಇಡುವ ಕಾರ್ಯಕ್ರಮ

Article Image

ಬೆಳ್ತಂಗಡಿ: ನೂತನ ಶಿಲಾಮಯ ಬಸದಿಯ ಮುಖ್ಯ ದ್ವಾರದ ಕಲ್ಲಿನ ದಾರಂದವನ್ನು‌ ಇಡುವ ಕಾರ್ಯಕ್ರಮ

ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗುಂಡದ ಬಸದಿ ಭಗವಾನ್ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ಜೀರ್ಣೋದ್ಧಾರದ ನಿಮಿತ್ತ ನಿರ್ಮಾಣಗೊಂಡ ನೂತನ ಶಿಲಾಮಯ ಬಸದಿಯ ಮುಖ್ಯ ದ್ವಾರದ ಕಲ್ಲಿನ ದಾರಂದವನ್ನು‌ ಇಡುವ ಕಾರ್ಯಕ್ರಮವು ಇಂದು ಬೆಳಿಗ್ಗೆ ಕಾರ್ಕಳ ಶ್ರೀ ಜೈನಮಠದ ಪರಮ ಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಮಾರ್ಗದರ್ಶನ ಹಾಗೂ ಪಾವನ ಸಾನ್ನಿಧ್ಯದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಗಣ್ಯರು, ಶ್ರಾವಕ-ಶ್ರಾವಕಿಯರು ಉಪಸ್ಥಿತರಿದ್ದರು.

ಡಾ. ಮೋಹನ ಕುಮಾರ ಶಾಸ್ತ್ರಿ ಅವರಿಗೆ ರಾಷ್ಟ್ರ ಮಟ್ಟದ ಪುರಸ್ಕಾರ

Article Image

ಡಾ. ಮೋಹನ ಕುಮಾರ ಶಾಸ್ತ್ರಿ ಅವರಿಗೆ ರಾಷ್ಟ್ರ ಮಟ್ಟದ ಪುರಸ್ಕಾರ

ಮೈಸೂರಿನ ಆಚಾರ್ಯ ಗುರುಕುಲದ ಕುಲ ಸಚಿವರು ಹಾಗೂ ಖ್ಯಾತ ವಾಗ್ಮಿಗಳು ಶಿಕ್ಷಣ ತಜ್ಞರು, ವಿದ್ಯಾರ್ಥಿ ಪೋಷಕ ಆಪ್ತ ಸಮಾಲೋಚಕರಾದ ವಿದ್ಯಾ ವಾಚಸ್ಪತಿ ಡಾ ಮೋಹನ ಕುಮಾರ ಶಾಸ್ತ್ರಿ ಅವರಿಗೆ ರಾಷ್ಟ್ರ ಮಟ್ಟದ ಮಹಾತ್ಮ ಗಾಂಧಿ ನ್ಯಾಷನಲ್ ಸರ್ವೀಸ್ ಪುರಸ್ಕಾರ 2025 ಲಭಿಸಿದೆ.

ಶಾಂತಿನಾಥ ಪಾಯಪ್ಪ ಕುರನಿರವರು ಪಿ.ಎಸ್.‌ಐ ಆಗಿ ಆಯ್ಕೆ

Article Image

ಶಾಂತಿನಾಥ ಪಾಯಪ್ಪ ಕುರನಿರವರು ಪಿ.ಎಸ್.‌ಐ ಆಗಿ ಆಯ್ಕೆ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ನಿವಾಸಿಯಾಗಿರುವ ಶಾಂತಿನಾಥ ಪಾಯಪ್ಪ ಕುರನಿರವರು ಪೋಲೀಸ್‌ ಸಬ್ ಇನ್‌ಸ್ಪೆಕ್ಟರ್‌ (ಸಿವಿಲ್)‌ ಆಗಿ ಆ‌ಯ್ಕೆಯಾಗಿರುತ್ತಾರೆ. ಇವರು 132‌ ರಾಂಕ್ ಪಡೆದಿರುತ್ತಾರೆ. ಇವರು ಪಾಯಪ್ಪ ಕುರನಿ ಮತ್ತು ಸುಜಾತ ಕುರನಿ ದಂಪತಿಗಳ ಪುತ್ರ.

ರತ್ನತ್ರಯ ಜೈನ ಮಿಲನ್: ಮಾಸಿಕ ಸಭಾ ವರದಿ

Article Image

ರತ್ನತ್ರಯ ಜೈನ ಮಿಲನ್: ಮಾಸಿಕ ಸಭಾ ವರದಿ

ರತ್ನತ್ರಯ ಜೈನ ಮಿಲನ ಮಾಸಿಕ ಸಭೆಯು ಇತ್ತೀಚೆಗೆ ನಡೆಯಿತು. ಕಾರ್ಯಕ್ರಮವು ಅತಿಥಿಗಳಿಂದ ದೀಪಪ್ರಜ್ವಲನೆ ಪ್ರಾರಂಭಗೊಂಡು ಮುಖ್ಯ ಅತಿಥಿಗಳಾದ ನೀರಜ ನಾಗೇಂದ್ರ ಕುಮಾರ ದಶಲಕ್ಷಣಗಳ (ಕ್ಷಮಾ, ಮಾರ್ದವ, ಆರ್ಜವ, ಶೌಚ, ಸತ್ಯ, ಸಂಯಮ, ತಪ, ತ್ಯಾಗ, ಅಕಿಂಚನ್ಯ ಮತ್ತು ಬ್ರಹ್ಮಚರ್ಯ) ಮಹತ್ವದ ಕುರಿತು ಉಪನ್ಯಾಸ ನೀಡಿದರು. ಉಷಾರಾಣಿ ‘ಉತ್ತಮ ಕ್ಷಮಾ’ ಎಂಬ ವಿಷಯದ ಕುರಿತು ವಿಶದವಾದ ಭಾಷಣ ಮಾಡಿದರು. ಸುಖಾನಂದ ಅವರು, ನಡೆಯಲಿರುವ ಜಾತಿಗಣತಿಯ ಸಂದರ್ಭದಲ್ಲಿ ‘ಜೈನ - ದಿಗಂಬರ’ ಎಂದು ನಮೂದಿಸಲು ಸದಸ್ಯರಿಗೆ ಸಲಹೆ ನೀಡಿದರು. ಅನಂತಕುಮಾರಿ ಪದ್ಮರಾಜ್ ಅವರು ಆತ್ಮೀಯ ಸ್ವಾಗತ ಭಾಷಣ ಮಾಡಿದರು. ಬಳಿಕ ಮಾಲಿನಿ ಬ್ರಹ್ಮಣ್ಣ ರತ್ನತ್ರಯ ಮಿಲನದ ಉದ್ದೇಶವನ್ನು ವಿವರಿಸಿದರು. ಪೂರ್ಣಿಮಾ ಜಯಂತ್ ಪರ್ವವಾಚನ ಮಾಡಿದರು. ಸೆಪ್ಟೆಂಬರ್ ತಿಂಗಳಲ್ಲಿ ವಿವಾಹ ವಾರ್ಷಿಕೋತ್ಸವ ಹಾಗು ಹುಟ್ಟುಹಬ್ಬ ಆಚರಿಸಿಕೊಂಡ ಸದಸ್ಯರಿಗೆ ಮಹಾವೀರ ಕುಮಾರ್ ಅವರು ಹಾರ್ದಿಕ ಶುಭಾಶಯ ಕೋರಿದರು. ರಾಣಿ ಪ್ರಫುಲ್ಲ ಅವರು ಅತಿಥಿಗಳ ಪರಿಚಯ ಮಾಡಿಕೊಟ್ಟರು. ಬಳಿಕ ಸಭಾಧ್ಯಕ್ಷರಾದ ನವೀನ್ ಕುಮಾರ್ ಗುಬ್ಬಿ ಅಧ್ಯಕ್ಷರ ನುಡಿಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಆತಿಥ್ಯವನ್ನು ಪದ್ಮ ಸೂರಿಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಷಾರಾಣಿ, ನೀರಜ ನಾಗೇಂದ್ರ ಕುಮಾರ, ಪ್ರೇಮ, ಸುಖಾನಂದ ಹಾಗು ರತ್ನತ್ರಯ ಜೈನ ಮಿಲನ ಅಧ್ಯಕ್ಷರಾದ ನವೀನ್ ಕುಮಾರ್ ಗುಬ್ಬಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅನಂತಕುಮಾರಿಯವರು ನಿರೂಪಿಸಿ. ಶ್ವೇತಾ ನವೀನ್ ಕುಮಾರ್ ಅವರ ವಂದನಾರ್ಪಣೆಯೊಂದಿಗೆ ಸಭೆ ಸಮಾರೋಪಗೊಂಡಿತು.

ಶಿಕ್ಷಕ ಲಕ್ಷ್ಮಣ್ ಮಲ್ಲಸಮುದ್ರಗೆ : ಶಿಕ್ಷಣ ಸೇವಾ ರತ್ನ ಪ್ರಶಸ್ತಿ

Article Image

ಶಿಕ್ಷಕ ಲಕ್ಷ್ಮಣ್ ಮಲ್ಲಸಮುದ್ರಗೆ : ಶಿಕ್ಷಣ ಸೇವಾ ರತ್ನ ಪ್ರಶಸ್ತಿ

ಕರ್ನಾಟಕ ಪ್ರೆಸ್ ಕ್ಲಬ್ ಬೆಂಗಳೂರು ಇವರು ಭಾರತರತ್ನ ಡಾ. ಸರ್ವಪಲ್ಲಿ ರಾಧಾಕೃಷನ್ ಇವರ ಜನ್ಮದಿನಾಚರಣೆ ಮತ್ತು ಶಿಕ್ಷಕ ದಿನಾಚರಣೆಯ ಅಂಗವಾಗಿ ಕೊಡಮಾಡುವ ರಾಜ್ಯಮಟ್ಟದ "ಶಿಕ್ಷಣ ಸೇವಾ ರತ್ನ" ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಶಿಕ್ಷಕ ಲಕ್ಷ್ಮಣ್ ಮಲ್ಲಸಮುದ್ರಇವರು ಭಾಜನರಾಗಿದ್ದಾರೆ. ಲಕ್ಷ್ಮಣ್ ರವರು ಕಳೆದ 35 ವರ್ಷಗಳಿಂದ ಶಿಕ್ಷಕರಾಗಿ ಅತ್ಯತ್ತಮ ಸೇವೆ ಸಲ್ಲಿಸುತ್ತಿದ್ದು ಸಹಸ್ರಾರು ಮಕ್ಕಳ ಬಾಳಲ್ಲಿ ಬೆಳಕಾಗಿದ್ದಾರೆ. ಇವರು ಮಕ್ಕಳಿಗೆ ಕೇವಲ ಅಕ್ಷರಗಳನ್ನು ಭೋದನೆ ಮಾಡಿಲ್ಲ ಅವರು ವಿದ್ಯಾರ್ಥಿಗಳಿಗೆ ಬದುಕುವ ರೀತಿಯನ್ನು ಕಲಿಸಿ ಅವರ ಭವಿಷ್ಯವನ್ನು ರೂಪಿಸಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರು ಕಾಡ ಕಲ್ಲನ್ನು ಸುಂದರ ಮೂರ್ತಿಯನ್ನಾಗಿ ಮಾಡುವ ಶಿಲ್ಪಿಗಳಿದ್ದಹಾಗೆ ಇದು ಶಿಕ್ಷಕರಿಂದ ಮಾತ್ರ ಸಾಧ್ಯ ಈ ಕಾರಣಕ್ಕೆ ಶಿಕ್ಷಕರ ಬಗ್ಗೆ ಅಪಾರವಾದ ಗೌರವ ಅಭಿಮಾನ ಇರುವದು ಸಹಜ. ಪ್ರಸ್ತುತ ಗದಗ ಜಿಲ್ಲೆ ಶಿರಹಟ್ಟಿ ತಾಲೂಕ ಲಕ್ಷ್ಮೇಶ್ವರ ದಲ್ಲಿ ಸೇವೆ ಸಲ್ಲಿಸುತ್ತಿದ್ದು, ಇಲ್ಲಿನ ಶಾಲೆಯೊಂದರಲ್ಲಿ ಸ್ಥಳೀಯರ ಸಹಕಾರ ಸಹಾಯದಿಂದ ಸುಂದರವಾದ ಕೊಠಡಿಗಳನ್ನು ನಿರ್ಮಿಸಿ ಅದರ ಆವರಣದಲ್ಲಿ ಕೈದೋಟ ಹೂವಿನ ಗಿಡಗಳನ್ನು ಬೆಳೆಸುವ ಮೂಲಕ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸಿದ್ದಾರೆ. ಜೊತೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ಮೂಲಕ ವಿದ್ಯಾರ್ಥಿಗಳಲ್ಲಿ ಶಿಸ್ತು, ರಾಷ್ಟ್ರಪ್ರೇಮ, ಸಹಬಾಳ್ವೆ ಸಮಾನತೆಯ ತಿಳುವಳಿಕೆ ನೀಡಿ ಮಕ್ಕಳ ಮನದಲ್ಲಿ ಹೆಮ್ಮೆಯ ಶಿಕ್ಷಕರಾಗಿ ರುಪುಗೊಂಡಿದ್ದಾರೆ. ಇವರ ಅತ್ಯುತ್ತಮ ಸೇವೆಯನ್ನು ಗಮನಿಸಿದ ಕರ್ನಾಟಕ ಪ್ರೆಸ್ ಕ್ಲಬ್ ಪ್ರಸಕ್ತ ಸಾಲಿನಲ್ಲಿ "ಶಿಕ್ಷಣ ಸೇವಾ ರತ್ನ ಪ್ರಶಸ್ತಿ" ನೀಡಿ ಗೌರವಿಸಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಇದೇ ದಿನಾಂಕ 24-9-2025 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 3-30 ಕ್ಕೆ ಜರುಗಲಿದ್ದು ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವರು, ಮಂತ್ರಿಗಳು ಶಾಸಕರು, ಸಂಸದರು ಗಣ್ಯರು ಭಾಗವಹಿಸಲಿದ್ದಾರೆ. ತನ್ನಿಮಿತ್ಯ ಇವರ ಸಂಕ್ಷಿಪ್ತ ಪರಿಚಯ : ದಿನಾಂಕ: 22-05-1966 ರಂದು ಧಾರವಾಡ ಜಿಲ್ಲೆ ಕುಂದಗೋಳ ತಾಲೂಕು ಹರ್ಲಾಪುರ ಗ್ರಾಮದಲ್ಲಿ ರಾಮಣ್ಣ ಮತ್ತು ಸಾವಿತ್ರಮ್ಮ ದಂಪತಿಗಳ ನಾಲ್ಕು ಮಕ್ಕಳಲ್ಲಿ ಕೊನೆಯವರಾಗಿ ಜನಿಸಿದರು. (ಜೈನ ಸಮಾಜದ ಗಣ್ಯರೂ, ಹಿರಿಯ ಬರಹಗಾರರು ಸಾಮಾಜಿಕ ಕಾರ್ಯಕರ್ತರು ಆದ ಶ್ರೀ ಶಾಂತರಾಜ ಮಲ್ಲಸಮುದ್ರ ಇವರು ಇವರ ಹಿರಿಯ ಸಹೋದರ). ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ, ಮಾಧ್ಯಮಿಕ ಶಿಕ್ಷಣ, ಕಾಲೇಜ್ ಶಿಕ್ಷಣ ಹಾಗೂ ಶಿಕ್ಷಕ ತರಬೇತಿಯನ್ನು ಗದಗ ಜಿಲ್ಲೆಯ ಲಕ್ಷ್ಮೇಶ್ವರ್ ಪಟ್ಟಣದಲ್ಲಿ ಮುಗಿಸಿದರು. ಹಾಸನ ಜಿಲ್ಲೆ ಶ್ರವಣಬೆಳಗೊಳದ ಶ್ರೀಮಠವು ನಡೆಸುವ ಶ್ರೀ ಅಂಬಿಕಾ ಶಾಲೆಯಲ್ಲಿ ಶಿಕ್ಷಕ ವೃತ್ತಿ ಪ್ರಾರಂಭಿಸಿ ಇಲ್ಲಿ 10-06-1990 ರಿಂದ 04-01-1999 ರ ವರೆಗೆ ಇಲ್ಲಿ ಸೇವೆ ಸಲ್ಲಿಸಿದ್ದಾರೆ. ನಂತರ 1999ರಲ್ಲಿ ಹಾಸನ ಜಿಲ್ಲೆಯ ಶಿಕ್ಷಣ ಇಲಾಖೆಯಲ್ಲಿ ಸರಕಾರಿ ಶಾಲಾ ಶಿಕ್ಷಕರಾಗಿ ನಿಯುಕ್ತಿಗೊಂಡು ದಿನಾಂಕ 05.01.1999 ರಿಂದ 07-07-2000 ರವರೆಗೆ ಸ .ಹಿ. ಪ್ರಾಥಮಿಕ ಶಾಲೆ ಬಿ ಹೊನ್ನೆನಹಳ್ಳಿ ಹೋಂ.ಬಾಗೂರು. ತಾಲೂಕು ಚನ್ನರಾಯಪಟ್ಟಣ ಇಲ್ಲಿ ಸೇವೆ ನಂತರ 08.07.2000 ರಿಂದ 07.03.2003 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಿ ಹೊನ್ನೇನಹಳ್ಳಿ ಬೆಕ್ಕ ಹೋಬಳಿ ಕ್ಲಸ್ಟರ್ ಶ್ರವಣಬೆಳಗೊಳ ಜಿಲ್ಲಾ ಹಾಸನ ಇಲ್ಲಿಗೆ ವರ್ಗಾವಣೆ ಗೊಂಡರು. ಮುಂದೆ ಹಾಸನ ಜಿಲ್ಲೆಯಿಂದ ಗದಗ ಜಿಲ್ಲೆಗೆ ವರ್ಗಾವಣೆಗೊಂದು ದಿ. 08.03.2003 ರಿಂದ 18.06.2008 ರವರೆಗೆ ಸರ್ಕಾರಿ ಹಿರಿಯ ಗಂಡು ಮಕ್ಕಳ ಶಾಲೆ ಸೂರಣಗಿ ತಾಲೂಕು. ಶಿರಹಟ್ಟಿ ಜಿಲ್ಲಾ ಗದಗ ಇಲ್ಲಿ ನಂತರ 18.06.2008ರಿಂದ 03.09.2013ರವರೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆದರಹಳ್ಳಿ ತಾ. ಲಕ್ಷ್ಮೇಶ್ವರ ಜಿಲ್ಲೆ ಗದಗ ನಂತರ 04.09.2013ರಿಂದ ಇಲ್ಲಿಯವರೆಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಡಾಕ್ಟರ್ ಬಿ ಆರ್ ಅಂಬೇಡ್ಕರ್ ನಗರ ಲಕ್ಷ್ಮೇಶ್ವರ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಟ್ಟು ಸೇವೆ 35 ವರ್ಷಗಳ ಸುದೀರ್ಘ ಸೇವೆಯಲ್ಲಿ ಜೀವನದುದ್ದಕ್ಕೂ ಆದರ್ಶ ಮತ್ತು ಶಿಸ್ತು ಮೈಗೂಡಿಸಿಕೊಂಡ ಇವರು ವಿದ್ಯಾರ್ಥಿಗಳ ನೆಚ್ಚಿನ ಗುರುಗಳಾಗಿ ಆದರ್ಶಪ್ರಾಯರಾಗಿದ್ದಾರೆ. ಇತರ ಸಾಮಾಜಿಕ ಚಟುವಟಿಕೆಗಳು: ಪ್ರತಿ ವರ್ಷ ದಸರಾ ಸಂಧರ್ಭದಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನ ಲಕ್ಷ್ಮೇಶ್ವರದಲ್ಲಿ ಐದು ವರ್ಷದಿಂದ ಪುರಾಣ ಪ್ರವಚನ ಮುಂತಾದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಸುಮಾರು ಹತ್ತು ವರ್ಷದಿಂದ ಬಿ.ಎಲ್.ಓ. (ಬೂತ್ ಲೆವೆಲ್ ಆಫೀಸರ್) ಅಂತ ಕಂದಾಯ ಇಲಾಖೆಯ ಜೊತೆಗೆ ಅಂದರೆ ಹೊಸದಾಗಿ ಮತದಾರರನ್ನು ಮತ ಪಟ್ಟಿಗೆ ಸೇರಿಸುವುದು, ತಿದ್ದುಪಡೆ ಮಾಡುವುದು, ಬೇರೆ ಕಡೆ ವರ್ಗಾವಣೆ ಆದರೆ ವರ್ಗಾವಣೆ ಮಾಡುವುದು ಇತ್ಯಾದಿ ಶಿಕ್ಷಣ ಇಲಾಖೆಯ ಕೆಲಸದ ಜೊತೆಗೆ ಕಂದಾಯ ಇಲಾಖೆಯ ಕೆಲಸವನ್ನು ಕೂಡ ಮಾಡುವ ಮೂಲಕ ಎಲ್ಲಾ ಸರಕಾರಿ ಕರ್ತವ್ಯಗಳನ್ನು ನಿರ್ವಹಿಸಿದ್ದಾರೆ. ಏತನ್ಮದ್ಯ ದಿನಾಂಕ 15.05.1995 ರಂದು ಸ್ವಗ್ರಾಮದವರೇ ಆದ ಶಿಕ್ಷಕಿ ಸಾವಿತ್ರಿ ಇವರೊಂದಿಗೆ ವಿವಾಹವಾಗಿದ್ದು ಈ ಶಿಕ್ಷಕ ದಂಪತಿಗಳು ಒಂದೇ ಜಿಲ್ಲೆ ಯಲ್ಲಿ ಕಳೆದ ಕೆಲವು ವರ್ಷಗಳಿಂದ ಸೇವೆಯಲ್ಲಿದ್ದಾರೆ. ಇವರ ಸಾಧನೆಯ ಹಿಂದೆ ಇವರ ಪತ್ನಿಯ ಸಹಕಾರ ಪ್ರೋತ್ಸಾಹ ಬಹುಮಟ್ಟಿಗೆ ಕಾರಣವಾಗಿದೆ ಎನ್ನಬಹುದು. ಇವರಿಗೆ ಇಬ್ಬರು ಪುತ್ರರು ಇದ್ದು ಓರ್ವ ಸ್ನಾತಕೋತ್ತರ ಪದವಿ ವಿದ್ಯಾರ್ಥಿ, ಇನ್ನೊರ್ವ ವೈದ್ಯಕೀಯ ಶಿಕ್ಷಣ ಪಡೆಯಲು ಪ್ರವೇಶ ಪರೀಕ್ಷೆ ಬರುತ್ತಿದ್ದಾನೆ. ಇವರ ಪ್ರತಿಭೆಗೆ ತಕ್ಕ ಪುರಸ್ಕಾರ ದೊರೆಯಲಿ ಇನ್ನೂ ಹಲವಾರು ಪ್ರಶಸ್ತಿ ಸಮ್ಮಾನಗಳು ಸಿಗಲಿ. ಶಾಂತರಾಜ ಮಲ್ಲಸಮುದ್ರ ಲೇಖಕರು

ಡಾ. ಅಜಿತಪ್ರಸಾದ ಇವರು ಪ್ರತಿಷ್ಠಿತ ವಿದ್ಯಾವರ್ಧಕ ಸಂಘಕ್ಕೆ ಉಪಾಧ್ಯಕ್ಷರಾಗಿ ನೇಮಕ

Article Image

ಡಾ. ಅಜಿತಪ್ರಸಾದ ಇವರು ಪ್ರತಿಷ್ಠಿತ ವಿದ್ಯಾವರ್ಧಕ ಸಂಘಕ್ಕೆ ಉಪಾಧ್ಯಕ್ಷರಾಗಿ ನೇಮಕ

ಕರ್ನಾಟಕ ವಿದ್ಯಾವರ್ಧಕ ಸಂಘವು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರು ಮಹಾಸಾಧಕರಿಗೆ ಗೌರವ ಉಪಾಧ್ಯಕ್ಷರನ್ನಾಗಿ ನೇಮಿಸಿ ತನ್ನ ಘನತೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ಇವರಲ್ಲಿ ಪ್ರಮುಖರಾದ ಡಾ. ಅಜಿತಪ್ರಸಾದ ಇವರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆ ಬೆಟ್ಟದಷ್ಟು. ಜೆ.ಎಸ್.ಎಸ್. ಸಂಸ್ಥೆಯ ಮೂಲಕ ಶ್ರೇಷ್ಠ ಗುಣಮಟ್ಟದ ಶಿಕ್ಷಣ ಕೊಡುವದಕ್ಕೆ ಅಪಾರವಾಗಿ ಶ್ರಮಿಸಿದ್ದಾರೆ. ಈಗಲೂ ಅದೇ ದಾರಿಯಲ್ಲಿ ಮುನ್ನಡೆದಿದ್ದಾರೆ. ನಮ್ಮ ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಟ್ರಸ್ಟಿನ ಗೌರವಾಧ್ಯಕ್ಷರಾದ ಇವರು ಸಾಹಿತ್ಯದ ಚಟುವಟಿಕೆಗಳನ್ನು ಅಭಿವೃದ್ಧಿ ಮಾಡುವಲ್ಲಿ ಸಲಹೆ ಮಾರ್ಗದರ್ಶನ ನೀಡುತ್ತ ಪ್ರೋತ್ಸಾಹಿಸುತ್ತಿದ್ದಾರೆ. ಪ್ರಸ್ತುತ 130 ವರ್ಷಗಳ ಇತಿಹಾಸ ಹೊಂದಿದ ಕರ್ನಾಟಕದ ಹೆಮ್ಮೆಯ ಮತ್ತು ಪ್ರತಿಷ್ಠಿತ ವಿದ್ಯಾವರ್ಧಕ ಸಂಘಕ್ಕೆ ಉಪಾಧ್ಯಕ್ಷರಾಗಿ ನೇಮಕ ಮಾಡಿ ಗೌರವಿಸಿದ್ದು ಸಮಾಜಕ್ಕೆ ಅವರ ಶಿಷ್ಯ ಬಳಗಕ್ಕೆ, ಅಭಿಮಾನಿಗಳಿಗೆ ಬಾರೀ ಸಂತೋಷವನ್ನುಂಟುಮಾಡಿದೆ. ಎಸ್. ಆರ್. ಮಲ್ಲಸಮುದ್ರ

ಮಂಜುನಾಥ ಕಡಹಟ್ಟಿರವರು ಪಿ.ಎಸ್.ಐ ಆಗಿ ಆಯ್ಕೆ

Article Image

ಮಂಜುನಾಥ ಕಡಹಟ್ಟಿರವರು ಪಿ.ಎಸ್.ಐ ಆಗಿ ಆಯ್ಕೆ

ಬೆಳಗಾವಿ ಜಿಲ್ಲೆಯ, ರಾಯಬಾಗ್‌ ತಾಲೂಕಿನ ಯಲ್ಪರಟ್ಟಿ ನಿವಾಸಿಯಾಗಿರುವ ಮಂಜುನಾಥ ಕಡಹಟ್ಟಿರವರು ಪೋಲೀಸ್‌ ಸಬ್‌-ಇನ್‌ಸ್ಪೆಕ್ಟರ್‌ (ಸಿವಿಲ್)‌ ಆಗಿ ಆಯ್ಕೆಯಾಗಿರುತ್ತಾರೆ. ಇವರು ಸುಲೋಚನ ಮತ್ತು ರಾಮಪ್ಪ ದಂಪತಿಗಳ ಪುತ್ರ.

ರೋಹಿತ್‌ ರಾಜಗೌಡ ಪಾಟೀಲರವರು ಪಿ.ಎಸ್.ಐ ಆಗಿ ಆಯ್ಕೆ

Article Image

ರೋಹಿತ್‌ ರಾಜಗೌಡ ಪಾಟೀಲರವರು ಪಿ.ಎಸ್.ಐ ಆಗಿ ಆಯ್ಕೆ

ಬೆಳಗಾವಿ ಜಿಲ್ಲೆಯ, ರಾಯಬಾಗ ತಾಲೂಕಿನ ಮೊರಬ ಗ್ರಾಮದ ನಿವಾಸಿಯಾಗಿರುವ ರೋಹಿತ್‌ ರಾಜಗೌಡ ಪಾಟೀಲ್‌ರವರು ಪೋಲೀಸ್‌ ಸಬ್‌-ಇನ್‌ಸ್ಪೆಕ್ಟರ್‌ (ಸಿವಿಲ್)‌ ಆಗಿ ಆಯ್ಕೆಯಾಗಿರುತ್ತಾರೆ. ಇವರು ರಾಜಗೌಡ ಪಾಟೀಲ ಮತ್ತು ಭಾರತಿ ರಾಜಗೌಡ ಪಾಟೀಲ ದಂಪತಿಗಳ ಪುತ್ರ.

ಅಮಿತ್‌ ಭಗವಂತ್‌ ಹರವಿರವರು ಪಿ.ಎಸ್.ಐ ಆಗಿ ಆಯ್ಕೆ

Article Image

ಅಮಿತ್‌ ಭಗವಂತ್‌ ಹರವಿರವರು ಪಿ.ಎಸ್.ಐ ಆಗಿ ಆಯ್ಕೆ

ಬೆಳಗಾವಿ ಜಿಲ್ಲೆಯ, ರಾಯಬಾಗ್ ತಾಲೂಕಿನ ಹಾರೊಗೇರಿ ನಿವಾಸಿಯಾಗಿರುವ ಅಮಿತ್‌ ಭಗವಂತ್‌ ಹರವಿರವರು ಪೋಲೀಸ್‌ ಸಬ್‌-ಇನ್‌ಸ್ಪೆಕ್ಟರ್‌ (ಸಿವಿಲ್)‌ ಆಗಿ ಆಯ್ಕೆಯಾಗಿರುತ್ತಾರೆ. ಇವರು ಭಗವಂತ್‌ ಹರವಿ ಮತ್ತು ಸುನಂದ ಹರವಿ ದಂಪತಿಗಳ ಪುತ್ರ.

ಅಭಿಷೇಕ್‌ ಅಣ್ಣಾಸಾಹೇಬ್‌ ಸುಲ್ತಾಣ್ಣವರ್‌ರವರು ಪಿ.ಎಸ್.ಐ ಆಗಿ ಆಯ್ಕೆ

Article Image

ಅಭಿಷೇಕ್‌ ಅಣ್ಣಾಸಾಹೇಬ್‌ ಸುಲ್ತಾಣ್ಣವರ್‌ರವರು ಪಿ.ಎಸ್.ಐ ಆಗಿ ಆಯ್ಕೆ

ಬೆಳಗಾವಿ ಜಿಲ್ಲೆಯ, ಚಿಕ್ಕೋಡಿ ತಾಲೂಕಿನ ಪಟ್ಟಣಕುಡಿ ನಿವಾಸಿಯಾಗಿರುವ ಅಭಿಷೇಕ್‌ ಅಣ್ಣಾಸಾಹೇಬ್‌ ಸುಲ್ತಾಣ್ಣವರ್‌ರವರು ಪೋಲೀಸ್‌ ಸಬ್‌-ಇನ್‌ಸ್ಪೆಕ್ಟರ್‌ (ಸಿವಿಲ್)‌ ಆಗಿ ಆಯ್ಕೆಯಾಗಿರುತ್ತಾರೆ. ಇವರು ಅಣ್ಣಾಸಾಹೇಬ್‌ ಮತ್ತು ಶೀಲಾ ದಂಪತಿಗಳ ಪುತ್ರ.

ಮೂಡುಬಿದಿರೆ: ಚೌಟರ ಅರಮನೆಯ ಉಷಾ ಜಯವೀರ್ ನಿಧನ

Article Image

ಮೂಡುಬಿದಿರೆ: ಚೌಟರ ಅರಮನೆಯ ಉಷಾ ಜಯವೀರ್ ನಿಧನ

ಮೂಡುಬಿದಿರೆ: ಇಲ್ಲಿನ ಚೌಟರ ಅರಮನೆಯ ದಿ. ಜಯವೀರ್ ಅವರ ಪತ್ನಿ ಮುಳಿಬೆಟ್ಟು ಮನೆತನದ ಉಷಾ ಜಯವೀರ್ (78ವ) ಅವರು ಸೆ.17ರಂದು ಸಾವಿರ ಕಂಬದ ಬಸದಿ ಬಳಿಯ ತಮ್ಮ ಮನೆಯಲ್ಲಿ ನಿಧನರಾದರು. ಇವರು ಇಬ್ಬರು ಪುತ್ರಿಯರನ್ನು ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.

ಮೂಡುಬಿದಿರೆ: ಶ್ರೀ ಧವಲಾ ಕಾಲೇಜಿನಲ್ಲಿ ರಕ್ತದಾನ ಶಿಬಿರ

Article Image

ಮೂಡುಬಿದಿರೆ: ಶ್ರೀ ಧವಲಾ ಕಾಲೇಜಿನಲ್ಲಿ ರಕ್ತದಾನ ಶಿಬಿರ

ಶ್ರೀ ಧವಲಾ ಕಾಲೇಜಿನ ಎನ್ನೆಸ್ಸೆಸ್ ಘಟಕದ ವತಿಯಿಂದ ಇನ್ನರ್ ವೀಲ್ ಕ್ಲಬ್‌ ಮೂಡುಬಿದಿರೆ, ಲಯನ್ಸ್ ಕ್ಲಬ್ ಮೂಡುಬಿದಿರೆ ಮತ್ತು ರೋಟರಿ ಕ್ಲಬ್‌ ಮೂಡುಬಿದಿರೆ ಟೆಂಪಲ್ ಟೌನ್‌ ಸಹಯೋಗದಲ್ಲಿ ರಕ್ತದಾನ ಶಿಬಿರವು ಕಾಲೇಜಿನ ಎ.ವಿ. ಹಾಲ್‌ನಲ್ಲಿ ಸೆ. 17ರಂದು ಜರಗಿತು. ಶಿಬಿರವನ್ನು ಉದ್ಘಾಟಿಸಿದ ಡಿಜೆವಿವಿ ಸಂಘದ ಕಾರ್ಯದರ್ಶಿ ಅಬಿಜಿತ್ ಎಂ. ಶುಭ ಹಾರೈಸಿದರು. ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶ್ವೇತಾ ಜೈನ್ ಅವರು ಮಾತನಾಡಿ ಎಷ್ಟೇ ಹಣವಿದ್ದರೂ ರಕ್ತದ ಉತ್ಪಾದನೆ ಸಾಧ್ಯವಿಲ್ಲ. ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ ರಕ್ತದ ಅವಶ್ಯಕತೆಯನ್ನು ಅರಿತು ಪ್ರತಿಯೊಬ್ಬರೂ ರಕ್ತದಾನ ಮಾಡಲು ಮುಂದೆ ಬರಬೇಕಾಗಿರುವುದು ಸಾಮಾಜಿಕ ಜವಾಬ್ದಾರಿಯಾಗಿದೆ ಎಂದರು. ಲಯನ್ಸ್ ಕ್ಲಬ್ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆಯವರು ಮಾತನಾಡಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಇಂದು ಎಲ್ಲಾ ಕಡೆ ಕಾಣಿಸುತ್ತಿದ್ದು ಆಸ್ಪತ್ರೆ ಸೇರಿರುವ ವ್ಯಕ್ತಿ ಬದುಕಿ ಉಳಿದು ಬರಬೇಕಾದರೆ ರಕ್ತದ ಅಗತ್ಯವಿದೆ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಾರ್ಶ್ವನಾಥ ಅಜ್ರಿಯವರು ಮಾತನಾಡಿ ರಕ್ತದಾನಿ ಒಬ್ಬ ಸೈಲೆಂಟ್ ಹೀರೋ, ಯಾಕೆಂದರೆ ತಾನು ನೀಡಿರುವ ರಕ್ತ ಯಾರಿಗೆ ಸೇರುತ್ತದೆ ಎಂಬುದೂ ಆತನಿಗೆ ತಿಳಿದಿರುವುದಿಲ್ಲ. ಅಂತೆಯೇ ವೈಯಕ್ತಿಕ ಲಾಭ, ಅಭಿಲಾಷೆಗಳೂ ರಕ್ತದಾನದ ಸಂದರ್ಭ ಆತನಲ್ಲಿ ಇರುವುದಿಲ್ಲ ಎಂದರು. ಟೆಂಪಲ್ ಟೌನ್‌ ರೋಟರಿ ಅಧ್ಯಕ್ಷ ಹರೀಶ್ ಎಂ.ಕೆ., ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಕ್ಷತಾ ನಾಯಕ್, ವೆನ್ಲಾಕ್ ಆಸ್ಪತ್ರೆಯ ಬ್ಲಡ್‌ ಬ್ಯಾಂಕ್‌ನ ವಿದ್ಯಾ, ಆಂಟನಿ, ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಕ ಖಾದರ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮೂರೂ ಕ್ಲಬ್‌ಗಳ ಕಾರ್ಯದರ್ಶಿ ಮತ್ತು ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎನ್ನೆಸ್ಸೆಸ್ ಅಧಿಕಾರಿ ಮಲ್ಲಿಕಾ ರಾವ್ ಸ್ವಾಗತಿಸಿದರು. ಶ್ರೇಯಾ ನಿರೂಪಿಸಿದ ಕಾರ್ಯಕ್ರಮದಲ್ಲಿ ರಶ್ಮಿ ವಂದಿಸಿದರು.

ತೌಳವ ಇಂದ್ರ ಸಮಾಜ(ರಿ)ದಿಂದ ಧರ್ಮಸ್ಥಳದಲ್ಲಿ ಶಾಂತಿ ಚಕ್ರ ಆರಾಧನೆ ಮತ್ತು ಲಕ್ಷಾಧಿಕ ಜಾಪ್ಯಮಂತ್ರ ಪಠನೆ

Article Image

ತೌಳವ ಇಂದ್ರ ಸಮಾಜ(ರಿ)ದಿಂದ ಧರ್ಮಸ್ಥಳದಲ್ಲಿ ಶಾಂತಿ ಚಕ್ರ ಆರಾಧನೆ ಮತ್ತು ಲಕ್ಷಾಧಿಕ ಜಾಪ್ಯಮಂತ್ರ ಪಠನೆ

ತೌಳವ ಇಂದ್ರ ಸಮಾಜದ ಸದಸ್ಯರಿಂದ ಲೋಕ ಶಾಂತ್ಯರ್ಥವಾಗಿ ಧರ್ಮಸ್ಥಳದ ಭ l ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಶಾಂತಿ ಚಕ್ರ ಆರಾಧನೆ, ಸಾಮೂಹಿಕ ಜಾಪ್ಯಾ ಮಂತ್ರ ಹಾಗೂ ಪೂಜಾ ಕಾರ್ಯಕ್ರಮ ಇತ್ತೀಚೆಗೆ ಜರಗಿತು. ಬೆಳಗ್ಗೆ 7 ಗಂಟೆಗೆ ಆರಾಧನಾ ಪೂಜಾ ಕಾರ್ಯಕ್ರಮಗಳು ಪ್ರಾರಂಭಗೊಂಡವು,ತದನಂತರ ಲಕ್ಷಾಧೀಕ ಶಾಂತಿ ಮಂತ್ರ ಪಠಣ ಕಾರ್ಯ ಸಾಮೂಹಿಕವಾಗಿ ಮಾಡಲಾಯಿತು. ನೆರೆದಿರುವ ಸುಮಾರು ಇನ್ನೂರಕ್ಕೂ ಮಿಕ್ಕಿದ ಸಮಾಜ ಬಾಂಧವರುಗಳು ಬೇರೆಬೇರೆ ಊರುಗಳಿಂದ (ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ) ಬಂದು ಸಕ್ರಿಯವಾಗಿ ಭಾಗವಹಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೆ ತಮ್ಮ ಬೆಂಬಲವನ್ನು ನೀಡಿದರು. ನಂತರ ನಡೆದ ಸರಳ ಸಮಾರಂಭದಲ್ಲಿ ಸಮಾಜ ಬಾಂಧವರಿಂದ ಸನ್ಮಾನ ಹಾಗೂ ಬೇರೆ ಬೇರೆ ಬಸದಿಗಳ ಪ್ರಸಾದ ಸ್ವೀಕರಿಸಿ ಮಾತನಾಡಿದ ಪೂಜ್ಯ ಖಾವಂದರು "ಇಂದ್ರ ಸಮಾಜದವರು ಯಾವತ್ತೂ ನಮ್ಮೊಡನೆ ಇದ್ದು ಕ್ಷೇತ್ರದ ಎಲ್ಲಾ ಕಾರ್ಯಗಳಿಗೆ ಬೆಂಬಲ ನೀಡುತ್ತಾರೆ. ಹಿರಿಯರ ಪುರೋಹಿತರ ಆಶೀರ್ವಾದ ಸದಾ ಸಕಾರಾತ್ಮಕವಾಗಿರಲಿ" ಎಂದು ಎಲ್ಲರನ್ನು ಅಭಿನಂದಿಸಿದರು. ಹೇಮಾವತಿ ಹೆಗ್ಗಡೆಯವರು ಮತ್ತು ಹರ್ಷೇಂದ್ರ ಕುಮಾರ್ ಹೆಗ್ಗಡೆಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹೊಂಬುಜ ಜೈನಮಠದ ಪೂಜ್ಯ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಬೆಳ್ತಂಗಡಿ ಬಸದಿಗೆ ಭೇಟಿ

Article Image

ಹೊಂಬುಜ ಜೈನಮಠದ ಪೂಜ್ಯ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಬೆಳ್ತಂಗಡಿ ಬಸದಿಗೆ ಭೇಟಿ

ಉಜಿರೆ: ಹೊಂಬುಜ ಜೈನಮಠದ ಪೂಜ್ಯ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಸೆ. 21 ರಂದು ಭಾನುವಾರ ಬೆಳ್ತಂಗಡಿ ಜೈನಪೇಟೆಯಲ್ಲಿರುವ ರತ್ನತ್ರಯ ಜೈನತೀರ್ಥ ಕ್ಷೇತ್ರಕ್ಕೆ ಆಗಮಿಸಲಿದ್ದು ಕೀರ್ತಿಶೇಷ ಕಿನ್ಯಮ್ಮ ಯಾನೆ ಗುಣವತಿಅಮ್ಮ ಸ್ಮಾರಕ ಟ್ರಸ್ಟ್ ಆಶ್ರಯದಲ್ಲಿ 700 ವಿದ್ಯಾರ್ಥಿಗಳಿಗೆ 25 ಲಕ್ಷ ರೂ. ವಿದ್ಯಾರ್ಥಿ ಪ್ರೋತ್ಸಾಹಧನ ವಿತರಿಸಲಿದ್ದಾರೆ ಎಂದು ಬಸದಿಯ ಅನುವಂಶಿಕ ಆಡಳಿತ ಮೊಕ್ತೇಸರ ಕೆ. ಜಯವರ್ಮರಾಜ್ ಬಳ್ಳಾಲ್ ತಿಳಿಸಿದ್ದಾರೆ. ಬಸದಿಯ ಆಡಳಿತ ಮೊಕ್ತೇಸರರಾಗಿದ್ದ ಕೆಲ್ಲಗುತ್ತು ಸಬ್ರಬೈಲು ಕಿನ್ಯಮ್ಮ ಯಾನೆ ಗುಣವತಿಅಮ್ಮನವರ ವಾರ್ಷಿಕ ಸ್ಮರಣಾರ್ಥ ಪೂರ್ವಾಹ್ನ ಗಂಟೆ ಏಳರಿಂದ ಭಗವಾನ್ ಶಾಂತಿನಾಥ ಸ್ವಾಮಿ ಬಸದಿಯಲ್ಲಿ 108 ಕಲಶಾಭಿಷೇಕ, ಮೂರು ಬಸದಿಗಳಲ್ಲಿ ನವಕಲಶಾಭಿಷೇಕ, ಮಹಾಪೂಜೆ ಮತ್ತು ಮಹಾಮಾತೆ ಪದ್ಮಾವತಿ ಅಮ್ಮನವರಿಗೆ ಅಲಂಕಾರಪೂಜೆ ನಡೆಯಲಿದೆ. ಅಪರಾಹ್ನ ಮೂರು ಗಂಟೆಯಿಂದ ಪೂಜ್ಯ ಸ್ವಾಮೀಜಿಯವರಿಂದ ವಿದ್ಯಾರ್ಥಿ ಪ್ರೋತ್ಸಾಹಧನ ವಿತರಣೆ ನಡೆಯಲಿದೆ. ಬಸದಿಯ ಅನುವಂಶಿಕ ಆಡಳಿತ ಮೊಕ್ತೇಸರ ಕೆ. ಜಯವರ್ಮರಾಜ್ ಬಳ್ಳಾಲ್ ಅಧ್ಯಕ್ಷತೆ ವಹಿಸುವರು.

ಶಟಲ್ ಬ್ಯಾಡ್ಮಿಂಟನ್: ಮೂಡುಬಿದಿರೆ ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿನಿ ಮನಸ್ವಿ ಎಂ.ವಿ. ರಾಜ್ಯಮಟ್ಟಕ್ಕೆ ಆಯ್ಕೆ

Article Image

ಶಟಲ್ ಬ್ಯಾಡ್ಮಿಂಟನ್: ಮೂಡುಬಿದಿರೆ ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿನಿ ಮನಸ್ವಿ ಎಂ.ವಿ. ರಾಜ್ಯಮಟ್ಟಕ್ಕೆ ಆಯ್ಕೆ

ಮೂಡುಬಿದಿರೆ: ಮಂಗಳೂರಿನ ಫಾದರ್ ಮುಲ್ಲರ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಎಕ್ಸಲೆಂಟ್ ಮೂಡುಬಿದಿರೆ ಪದವಿ ಪೂರ್ವ ಕಾಲೇಜಿನ ಮನಸ್ವಿ ಎಂ.ವಿ. ವಿನ್ನರ್ ಆಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಮೈಸೂರಿನ ವಿಜಯನಗರದ ವೀರೇಂದ್ರ ಕುಮಾರ್‌ ಎಂ. ಎನ್‌. ಮತ್ತು ಅನುಪಮ ಎಸ್.‌ ಇವರ ಪುತ್ರಿ.

ಡಾ. ಅಪ್ಪಣ್ಣ ಹಂಜೆ ಅವರಿಗೆ ಈಶ್ವರಜ್ಞಾನ ಗುರುರತ್ನ ಪ್ರಶಸ್ತಿ

Article Image

ಡಾ. ಅಪ್ಪಣ್ಣ ಹಂಜೆ ಅವರಿಗೆ ಈಶ್ವರಜ್ಞಾನ ಗುರುರತ್ನ ಪ್ರಶಸ್ತಿ

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ.) ಗದಗ ಗ್ರಾಮೀಣ ವಿಭಾಗ ಮತ್ತು ಹುಲಕೋಟಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 2025-26ನೇ ಸಾಲಿನ ‘ಶಿಕ್ಷಕರ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ’ದಲ್ಲಿ ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಮತ್ತು ಪ್ರಾಧ್ಯಾಪಕ ಹಾಗೂ ಎನ್.ಎಸ್.ಎಸ್. ಘಟಕದ ಸಂಯೋಜಕ ಡಾ. ಅಪ್ಪಣ್ಣ ಹಂಜೆ ಅವರನ್ನು ‘ಈಶ್ವರಜ್ಞಾನ ಗುರುರತ್ನ’ ಪ್ರಶಸ್ತಿಯಿಂದ ಗೌರವಿಸಿವೆ. ಇವರು 20 ವರ್ಷಗಳ ಬೋಧನಾ ಅನುಭವ ಹೊಂದಿದ್ದು, ಪ್ರಾಚೀನ ಸಮಾಜ, ಧರ್ಮ, ಇತಿಹಾಸ, ಸಂಸ್ಕೃತಿ, ವಾಸ್ತುಕಲೆ, ಶಿಲ್ಪಕಲೆ, ಶಾಸನಗಳು, ಸಾಹಿತ್ಯ ಮುಂತಾದ ಕ್ಷೇತ್ರಗಳಲ್ಲಿ ಸಂಶೋಧನ ಅಧ್ಯಯನ ಕೈಗೊಂಡು 12ಕ್ಕೂ ಹೆಚ್ಚು ಕೃತಿಗಳು, 150ಕ್ಕೂ ಹೆಚ್ಚು ಸಂಶೋಧನ ಲೇಖನಗಳನ್ನು ಪ್ರಕಟಿಸಿದ್ದಾರೆ. ಬೀದರ ಜಿಲ್ಲೆಯ ಜೈನ ಶಾಸನಗಳು, ಲಕ್ಕುಂಡಿಯ ಬಸದಿಗಳು, ಅಣ್ಣಿಗೇರಿಯ ಜೈನ ದೇಸಗತಿ ಮನೆತನ, ಬೆಳಗಾವಿಯ ಕಮಲ ಬಸದಿ, ಕರ್ನಾಟಕದ ಬಸದಿಗಳು, ಶಾಸನ ಸಾಹಿತ್ಯದಲ್ಲಿ ಜೀವನ ಮೌಲ್ಯ ಕೃತಿಗಳು ವಸ್ತುನಿಷ್ಠ ಸಂಶೋಧನ ಅಧ್ಯಯನ ಗೌರವಕ್ಕೆ ಪಾತ್ರವಾಗಿವೆ. ಡಾ. ಅಪ್ಪಣ್ಣ ಅವರು ಗದಗ ಜಿಲ್ಲೆಯ ದೇಸಗತಿ ಮನೆತನಗಳು, ದಾಖಲೆ ಪತ್ರಗಳ ಶೋಧನೆ ಮತ್ತು ಸಂರಕ್ಷಣೆ, ಕರ್ನಾಟಕ ಏಕೀಕರಣ ಚಳುವಳಿ ಹಾಗೂ ಐತಿಹಾಸಿಕ ದಾಖಲೆಗಳು ಮತ್ತು ಛಾಯಾಚಿತ್ರಗಳ ಪ್ರದರ್ಶನ ಸೇರಿದಂತೆ ಹಲವು ವಿಚಾರ ಸಂಕಿರಣ ಮತ್ತು ಕಾರ್ಯಾಗಾರಗಳನ್ನು ಏರ್ಪಡಿಸಿದ್ದು, ಕೆಲವು ಸಂಸ್ಮರಣ ಕೃತಿಗಳು, ನಿಯತಕಾಲಿಕೆಗಳು, ಪತ್ರಿಕೆಗಳ ಸಂಪಾದಕ ಮಂಡಳಿ ಸದಸ್ಯರಾಗಿ, ಕರ್ನಾಟಕ ಪುರಾತತ್ವ ಮತ್ತು ಸಾಹಿತ್ಯ ಪರಿಷತ್ತು, ಗದಗ ಜಿಲ್ಲಾ ದಿಗಂಬರ ಜೈನ ಸಂಘ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಜೈನ ಸಾಹಿತ್ಯ ಸಂಸ್ಕೃತಿ ಅಧ್ಯಯನ ಕೇಂದ್ರಗಳ ಸಲಹಾ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಮಾನ್ಯತಾ ಕೇಂದ್ರ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಹಾಮಾನಾ ಸಂಶೋಧನ ಕೇಂದ್ರದಲ್ಲಿ ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಇವರು ಸಂಶೋಧನೆ, ಅಧ್ಯಯನ, ಪ್ರಕಟಣೆ ಕ್ಷೇತ್ರಗಳಲ್ಲಿ ಕೈಗೊಳ್ಳುತ್ತಿರುವ ಸಾಧನೆ, ಕೊಡುಗೆಗಳಿಗೆ ನಾಡಿನ ಹಲವು ಸಂಘ-ಸಂಸ್ಥೆಗಳಿಂದ ಶ್ರೀ ಹುಯಿಲಗೋಳ ನಾರಾಯಣರಾವ ಸ್ಮಾರಕ ಪ್ರಶಸ್ತಿ, ಸ್ವಸ್ತಿಶ್ರೀ ದೇವೇಂದ್ರಕೀರ್ತಿ ದತ್ತಿ ಪ್ರಶಸ್ತಿ, ಆಚಾರ್ಯ 108 ಶ್ರೀ ಬಾಹುಬಲಿ ಕನ್ನಡ ಸಾಹಿತ್ಯ ಪ್ರಶಸ್ತಿ, ಜಯಲಕ್ಷ್ಮಮ್ಮ ಬಿ.ಎಸ್. ಸಣ್ಣಯ್ಯ ದತ್ತಿ ಪ್ರಶಸ್ತಿ, ಆದರ್ಶ ಜೈನ ಯುವ ಪ್ರಶಸ್ತಿ, ಜ್ಞಾನಶ್ರೀ ಪ್ರಶಸ್ತಿ, ಬಾಹುಬಲಿ ಸಿದ್ಧಶ್ರೀ ಪ್ರಶಸ್ತಿ, ಜ್ಞಾನೇಶ್ವರ ಆದರ್ಶ ಶಿಕ್ಷಕ ಪ್ರಶಸ್ತಿ, ಬೆಳ್ಳಿ ಸಂಭ್ರಮ ಪ್ರಶಸ್ತಿ, ಸಾಹಿತ್ಯ ಸಿರಿ ಪ್ರಶಸ್ತಿಗಳ ಗೌರವಕ್ಕೆ ಪಾತ್ರರಾಗಿದ್ದಾರೆ. ಇವರನ್ನು ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು, ಸದಸ್ಯರು, ಪ್ರಾಂಶುಪಾಲರು, ಬೋಧಕ-ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಗದಗ ಜಿಲ್ಲಾ ದಿಗಂಬರ ಜೈನ ಸಂಘದ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

ಕಾರ್ಕಳ: ದತ್ತಿನಿಧಿ ಪ್ರಶಸ್ತಿ ಪ್ರದಾನ ಶ್ರೀ ಬಾಹುಬಲಿ ಶ್ರಾವಿಕಾಶ್ರಮ ದಾನಶಾಲೆ

Article Image

ಕಾರ್ಕಳ: ದತ್ತಿನಿಧಿ ಪ್ರಶಸ್ತಿ ಪ್ರದಾನ ಶ್ರೀ ಬಾಹುಬಲಿ ಶ್ರಾವಿಕಾಶ್ರಮ ದಾನಶಾಲೆ

2025 - 26ನೇ ಸಾಲಿನಲ್ಲಿ ಜರುಗಿದ ಧಾರ್ಮಿಕ ಪಾಠ ಪರೀಕ್ಷೆ, ಶೈಕ್ಷಣಿಕದಲ್ಲಿ ಉನ್ನತ ಸ್ಥಾನ ಹೊಂದಿದ, ನಾಯಕತ್ವ ಗುಣವುಳ್ಳ, ಹೊಂದಾಣಿಕೆ ಹೊಂದಿದ ಒಬ್ಬ ವಿದ್ಯಾರ್ಥಿನಿಯನ್ನು ಹೇಮಾವತಿ ಅಮ್ಮನವರ ನೇತೃತ್ವದ ಆಡಳಿತ ಮಂಡಳಿಯ ಸದಸ್ಯರು ಆಯ್ಕೆ ಮಾಡಿ ದತ್ತಿನಿಧಿ ಪ್ರಶಸ್ತಿಯನ್ನು ನೀಡಲಾಗುತ್ತದೆ.ಈ ಪ್ರಯುಕ್ತ ಶ್ರೀ ಬಾಹುಬಲಿ ಶ್ರಾವಿಕಾಶ್ರಮ ದಾನ ಶಾಲೆ, ಕಾರ್ಕಳ ಇಲ್ಲಿಯ ಅಂತಿಮ ಬಿ.ಕಾಂ ವಿದ್ಯಾರ್ಥಿನಿ ಪದ್ಮಮಾಲಿನಿ ಕೆ.ಎ., ಇಡಕಿಣಿ, ಕಳಸ ಇವರಿಗೆ ಶ್ರವಣಬೆಳಗೊಳ ಪ.ಪೂ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಧತ್ತಿನಿಧಿ ಪ್ರಶಸ್ತಿ ನೀಡಲಾಯಿತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾದ ಅಜಿತ್ ಕುಮಾರ್ ಕೊಕ್ರಡಿ, ಆಶ್ರಮದ ಆಡಳಿತ ಮಂಡಳಿಯ ಮಾಲತಿ ವಸಂತ್ ರಾಜ್, ಸುಮಾಲಿನಿ ವಿಜಯ್ ಕುಮಾರ್ ಅಜ್ರಿ, ಕಾರ್ಯದರ್ಶಿಗಳಾದ ಶಿಶುಪಾಲ್ ಪುವಣಿ ಹಾಗೂ ಜಯಲಕ್ಷ್ಮಿ ಅಜಿತ್ ಕುಮಾರ್ ರವರು, ಕಾರ್ಕಳ ಜೈನಮಠದ ವ್ಯವಸ್ಥಾಪಕರಾದ ಧನಕೀರ್ತಿ ಕಡಂಬರವರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ವೇದಿಕೆಯಲ್ಲಿರುವವರು ಪದ್ಮಮಾಲಿನಿಯವರಿಗೆ, ದತ್ತಿನಿಧಿ ಪ್ರಶಸ್ತಿ ಪತ್ರ, ಶಾಲು, ಹಾರ ಮತ್ತು ನಗದು ಬಹುಮಾನ ನೀಡಿ ಗೌರವಿಸಲಾಯಿತು. ಹಾಗೆಯೇ ದಶಲಕ್ಷಣ ಪರ್ವದ ಆರಂಭದಂದು ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ದಾನಶಾಲೆ, ಕಾರ್ಕಳ ಇವರ ಪಾವನ ಸಾನಿಧ್ಯದಲ್ಲಿ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟನೆಗೊಂಡಿತು ಹಾಗೆಯೇ ಮಂಗಲ ಪ್ರವಚನವನ್ನು ದಯಪಾಲಿಸಿದರು. ಶೈಕ್ಷಣಿಕ ಮತ್ತು ಧಾರ್ಮಿಕ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಪೂಜ್ಯ ಸ್ವಾಮೀಜಿಯವರಿಂದ ನೀಡಲಾಯಿತು ಈ ಸುಸಂದರ್ಭದಲ್ಲಿ ಪರಮಪೂಜ್ಯ 108 ಮುನಿಶ್ರೀ ಮಹಿಮಾ ಸಾಗರ ಮುನಿ ಮಹಾರಾಜರು ಮಕ್ಕಳ ಮೇಲಿನ ಅಭಿಮಾನದಿಂದ ಹತ್ತು ದಿನದ ಭೋಜನ ವ್ಯವಸ್ಥೆಯನ್ನು ಮಾಡಿಸಿರುತ್ತಾರೆ.

ದಿಗಂಬರ್ ಜೈನ್ ಮಹಾಸಮಿತಿ ದೆಹಲಿಯ ಕಾರ್ಯಾಧ್ಯಕ್ಷರ ಭೇಟಿ

Article Image

ದಿಗಂಬರ್ ಜೈನ್ ಮಹಾಸಮಿತಿ ದೆಹಲಿಯ ಕಾರ್ಯಾಧ್ಯಕ್ಷರ ಭೇಟಿ

ದಿಗಂಬರ್ ಜೈನ್ ಮಹಾಸಮಿತಿ, ದೆಹಲಿ ಇದರ ಕಾರ್ಯಾಧ್ಯಕ್ಷರು ಬಿಪಿನ್ ಸುಮಾರ್ ಜೈನ್ ಸರಫ್, ದಿನಾಂಕ 12.09.2025ನೇ ಶುಕ್ರವಾರ ಹಾಸನಕ್ಕೆ ಭೇಟಿ ನೀಡಿದರು. ಕಾರ್ಯಕ್ರಮವನ್ನು ಹಾಸನದ ದೆಹಲಿ ದಿಗಂಬರ ಜೈನ್ ಸಮಿತಿಯ ಸಂಚಾಲಕರಾದ ಹೆಚ್.ಎನ್‌., ಅಭಿನಂದನ್‌ರವರು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಜೈನ ಮಹಾಸಮಿತಿಯ ಕಾರ್ಯಾಧ್ಯಕ್ಷರು ಸಮಿತಿಯು 50 ವರ್ಷಗಳ ಹಿಂದೆ 1976ರಲ್ಲಿ ಸ್ಥಾಪಿತವಾಗಿದ್ದು ಶ್ರೀ 108 ವಿದ್ಯಾನಂದ ಮುನಿಮಹರಾಜರ ಆಶೀರ್ವಾದದಿಂದ ಪ್ರಾರಂಭವಾಗಿರುತ್ತದೆ. ಸಮಿತಿಯ ಸಮನ್ವಯ ಸದ್ಭಾವನೆ ಮತ್ತು ಸಂಘಟನೆಯ ಪ್ರತಿಬಿಂಬವಾಗಿರುತ್ತದೆ. ಸಮಿತಿಯ ಕಾರ್ಯ ಚಟುವಟಿಕೆಗಳ ಬಗ್ಗೆ ಜೈನ ಸಾಮಾಜಿಕ ಕಲ್ಯಾಣ ಮತ್ತು ಸಾರ್ವಜನಿಕ ಕಲ್ಯಾಣ ಕಾರ್ಯಗಳನ್ನು ಹಂಚಿಕೊಳ್ಳು ಸಮಾಜದ ಹಿತದೃಷ್ಠಿಯಿಂದ ಸರಪಳಿ ಸಧಿಸಬಹುದಾಗಿರುತ್ತದೆ. ಸಮಾಜದ ಬಡವರಿಗೆ, ಮಕ್ಕಳಿಗೆ, ಅವಶ್ಯಕತೆ ಇರುವ ಸವಲತ್ತುಗಳನ್ನು ಪೂರೈಸಲಾಗುತ್ತದೆ. ಹಾಸನದ ಜೈನ ಬಾಂಧವರು ಈ ಸಂಸ್ಥೆಯ ಅಜೀವ ಸದಸ್ಯತ್ವ ಪಡೆದುಕೊಳ್ಳಬೇಕೆಂದು ವಿನಂತಿಸಿದರು. ಹಾಸನ ಜೈನ ಸಂಘದ ಅಧ್ಯಕ್ಷರಾದ ಹೆಚ್‌.ಬಿ. ಶಾಂತೀಶ್, ಕರ್ನಾಟಕ ಜೈನ ಅಸೋಸಿಯೇಷನ್‌ ಹಾಸನದ ಪ್ರತಿನಿಧಿ ಹೆಚ್.ಬಿ.ನಾಗೇಂದ್ರಯ್ಯ, ಜೈನ ಸಹಕಾರ ಮಂಡಳಿಯ ಅಧ್ಯಕ್ಷರಾದ ಸುಕುಮಾ‌ ಮತ್ತು ಮಹಾವೀರ ಭವನದ ಅಧ್ಯಕ್ಷರಾದ ಎಂ. ಧನ್‌ ಪಾಲ್ ಮತ್ತು ಕಾಳಲಾದೇವಿ ಮಹಿಳಾ ಸಮಾಜದ ಅಧ್ಯಕ್ಷರಾದ ಸುಪ್ರಭ ಅಭಿನಂದನ್ ಇವರುಗಳು ಮಾತನಾಡಿ ಸಮಿತಿಯ ಸದಸ್ಯರಾಗಿ ಬೆಂಬಲಿಸುವುದಾಗಿ ತಿಳಿಸಿದರು. ಹಾಸನ ವಿಭಾಗಕ್ಕೆ ಹೆಚ್.ಎನ್. ಅಭಿನಂದನ್‌ ರವರು ಸಂಚಾಲಕ ಸಂರಕ್ಷಕರಾಗಿರುತ್ತಾರೆ ಎಂದು ಕಾರ್ಯಾಧ್ಯಕ್ಷರು ತಿಳಿಸಿದರು. ಹಾಸನದ ಬಾಹುಬಲಿ ಭವನದಲ್ಲಿ ಜೈನ ಸಮಾಜದ ಪ್ರಮುಖರು ಭಾಗವಹಿಸಿದ್ದರು. ಸಭೆಯು ರಂಜಿತ ಸಮಂತ್ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಸಂಚಾಲಕರಾದ ಅಭಿನಂದನ್‌ರವರು ಸಭೆಗೆ ಆಗಮಿಸಿದ್ದ ಅತಿಥಿಗಳು ಮತ್ತು ಗಣ್ಯರಿಗೆ ಸ್ವಾಗತವನ್ನು ಕೋರಿದರು. ಅಭಿನಂದನ್‌ರವರು ಆಗಮಿಸಿದ್ದ ಅತಿಥಿಗಳಿಗೆ ಗೌರವ ಸಮರ್ಪಿಸಿದರು. ವಂದನಾರ್ಪಣೆ ಮಾಡಿದರು.

ಕವಿ ವಿ.ಟಿ.ಸ್ವಾಮಿ ಅವರ ಸಾಗರ ಸಂಪಿಗೆ ಕವನ ಸಂಕಲನಕ್ಕೆ ರಾಷ್ಟ್ರೀಯ ಪುರಸ್ಕಾರ

Article Image

ಕವಿ ವಿ.ಟಿ.ಸ್ವಾಮಿ ಅವರ ಸಾಗರ ಸಂಪಿಗೆ ಕವನ ಸಂಕಲನಕ್ಕೆ ರಾಷ್ಟ್ರೀಯ ಪುರಸ್ಕಾರ

ಕವಿ ವಿ.ಟಿ.ಸ್ವಾಮಿ ಅವರ ಸಾಗರ ಸಂಪಿಗೆ ಕವನ ಸಂಕಲನಕ್ಕೆ 2025 ನೇ ಸಾಲಿನ ರಾಷ್ಟ್ರ ಮಟ್ಟದ “ಕಾವ್ಯ ಸಿರಿ” ಪ್ರಶಸ್ತಿಗೆ ಆಯ್ಕೆಯಾಗಿದೆ. ಹೈದರಬಾದಿನ ರಾಷ್ಟ್ರೀಯ ಕನ್ನಡ ಸಾಹಿತ್ಯ ಬಳಗ ಪ್ರತಿ ವರ್ಷ ಕನ್ನಡ ಕವನ ಸಂಕಲನಗಳಿಗೆ ರಾಷ್ಟ್ರ ಮಟ್ಟದ ಕಾವ್ಯ ಸಿರಿ ಪ್ರಶಸ್ತಿಯನ್ನು ನೀಡಲಾಗುತ್ತ ಬಂದಿದ್ದು ಈ ವರ್ಷ ಸಾಗರದ ವಿ.ಟಿ.ಸ್ವಾಮಿ ಅವರ ಸಾಗರ ಸಂಪಿಗೆ ಕವನ ಸಂಕಲನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ, ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಹೇಶ್ ಪ್ರಸಾದ್ ಅವರು ತಿಳಿಸಿದ್ದಾರೆ. ಸಾಗರದ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿ.ಟಿ.ಸ್ವಾಮಿಯವರು ಕಳೆದ ಹಲವು ದಶಕಗಳ ಕಾಲ ಶೈಕ್ಷಣಿಕ ಸಾಹಿತ್ಯ, ಸಾಂಸ್ಕೃತಿಕ ಸಾಮಾಜಿಕ ಕ್ಷೇತ್ರಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಬಂದಿರುವ ಇವರು, ಈಗಾಗಲೇ 30 ಕ್ಕೂ ಹೆಚ್ಚಿನ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದಿರುವ ಇವರು ಸ್ಥಳೀಯ ಜಿಲ್ಲೆ ರಾಜ್ಯ ಮಟ್ಟದ ಅನೇಕ ಪತ್ರಿಕೆಗಳಲ್ಲಿ ತಮ್ಮ ಬರಹಗಳನ್ನು ಪ್ರಕಟಿಸಿದ್ದಾರೆ. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಹಾಗೂ ವಿವಿಧ ಸಾಹಿತ್ಯ ಸಾಂಸ್ಕೃತಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಬಂದಿರುವ ಇವರು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದ್ದಾರೆ. ಸಾಂಸ್ಕೃತಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಹಿತ್ಯ, ಜಾನಪದ ಸಾಹಿತ್ಯದಲ್ಲಿ ಇವರು ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ.

First Previous

Showing 1 of 8 pages

Next Last