Article Image

ಮಲೆನಾಡ ಜೈನ ಅಡುಗೆ ಹಬ್ಬ

Article Image

ಮಲೆನಾಡ ಜೈನ ಅಡುಗೆ ಹಬ್ಬ

ಶಿವಮೊಗ್ಗ: ವೀರರಾಣಿ ಚನ್ನಭೈರಾದೇವಿ ಜಿಲ್ಲಾ ಜೈನ ಮಹಿಳಾ ಸಂಘಟನೆ ಇವರ ಆಯೋಜನೆಯಲ್ಲಿ ಆಷಾಢದಲ್ಲಿ ಒಂದು ದಿನ ಮಲೆನಾಡ ಜೈನ ಅಡುಗೆ ಹಬ್ಬ ಸಾಂಪ್ರದಾಯಿಕ ಮಲೆನಾಡ ಜೈನ ಆಹಾರ ಮಹೋತ್ಸವ ಹಾಗೂ ಇನ್ನಿತರ ಕಾರ್ಯಕ್ರಮವನ್ನು ವಳಗೆರೆ ಪಂಚಕೂಟ ಬಸದಿ ಸಭಾಭವನದಲ್ಲಿ ಆಗಸ್ಟ್ 2ರಂದು ಹಮ್ಮಿಕೊಳ್ಳಲಾಗಿದೆ.

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ- ಸಮಾಲೋಚನಾ ಸಭೆ

Article Image

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ- ಸಮಾಲೋಚನಾ ಸಭೆ

ಬೆಂಗಳೂರು ಕೇಂದ್ರ ಕಚೇರಿಯಲ್ಲಿ ರಾಜ್ಯದ ಜೈನ ಸಮುದಾಯದ ಕುಂದು ಕೊರತೆಗಳ ಬಗ್ಗೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾದ ನಿಸಾರ್ ಅಹ್ಮದ್ ರವರ ಅಧ್ಯಕ್ಷತೆಯಲ್ಲಿ ರಾಜ್ಯ ಅಲ್ಪಸಂಖ್ಯಾತ ಆಯೋಗದ ಸದಸ್ಯರಾದ ಪರಿಮಳಜೈನ್ ರವರ ನೇತ್ರತ್ವದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶೇಕ್ ಲತಿಫ್ ರವರ ಉಪಸ್ಥಿತಿಯಲ್ಲಿ ಇಂದು (ಜು. 21) ಸಭೆ ನಡೆಯಿತು. ಸಭೆಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸದಸ್ಯರು ಸಮಾಜದ ಪ್ರಮುಖರು ಹಾಗೂ ಡಾ. ಕೆ ಜಯಕೀರ್ತಿ ಜೈನ್ ಧರ್ಮಸ್ಥಳ, ಧನ ಕೀರ್ತಿ ಶೆಟ್ಟಿ ಧರ್ಮಸ್ಥಳ, ಮಹಾವೀರ್ ಜೈನ್ ದೆಪ್ಪುನಿ ಮುಂತಾದವರು ಭಾಗವಹಿಸಿ ಹಲವಾರು ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಪ್ರಮುಖವಾಗಿ ತಸ್ತಿಕ್ ಕೊಡುತ್ತಿರುವ ಬಸದಿಗಳಿಗೆ ಸಹಾಯಕ ಪುರೋಹಿತರಿಗೂ ಗೌರವಧನ ನೀಡಬೇಕು, ಸ್ತ್ರೀ ಶಕ್ತಿ ಗುಂಪುಗಳಿಗೆ ಸ್ವ ಉದ್ಯೋಗಕ್ಕೆ ಪ್ರೋತ್ಸಾಹ ಕೊಡಬೇಕು, ಆಯೋಗದ ಕಚೇರಿಗಳಲ್ಲಿ ಸಮಾಜದವರಿಗೆ ಉದ್ಯೋಗ ಅವಕಾಶಗಳನ್ನು ನೀಡಬೇಕು, ಬಸದಿಗಳ ದಾಖಲೆಗಳನ್ನು ಸರಿಪಡಿಸಲು ಸಹಕರಿಸಬೇಕು, ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಮುಂತಾದ ಹಲವಾರು ವಿಷಯಗಳನ್ನು ಅಧ್ಯಕ್ಷರ ಗಮನಕ್ಕೆ ತಂದು ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ಮನವಿ ಸಲ್ಲಿಸಲಾಯಿತು.

ಹೇಮಾವತಿ ವೀ. ಹೆಗ್ಗಡೆಯವರಿಗೆÀ ಗೌರವ ಡಾಕ್ಟರೇಟ್ ಪ್ರದಾನ

Article Image

ಹೇಮಾವತಿ ವೀ. ಹೆಗ್ಗಡೆಯವರಿಗೆÀ ಗೌರವ ಡಾಕ್ಟರೇಟ್ ಪ್ರದಾನ

ಶ್ರೀ ಕ್ಷೇತ್ರ ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ಜ್ಞಾನವಿಕಾಸ’ ಕಾರ್ಯಕ್ರಮದ ಅಧ್ಯಕ್ಷರಾಗಿ ಮಹಿಳಾ ಸಬಲೀಕರಣ, ಗ್ರಾಮೀಣಾಭಿವೃದ್ಧಿ ಮತ್ತು ಸಮಾಜ ಸೇವಾ ಚಟುವಟಿಕೆಗಳಿಗೆ ನೀಡಿದ ಅಮೂಲ್ಯ ಕೊಡುಗೆಯನ್ನು ಗುರುತಿಸಿ ಜಾಗತಿಕ ಮನ್ನಣೆ ಪಡೆದ ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಯಾದ ‘ಸ್ವಿಟ್ಜರ್ಲೆಂಡ್‌ನ ಪ್ರತಿಷ್ಠಿತ ಡನ್‌ಸ್ಟರ್ ಬ್ಯುಸಿನೆಸ್ ಸ್ಕೂಲ್’ ಇವರು ‘ಗೌರವ ಡಾಕ್ಟರೇಟ್’ ಪದವಿಯನ್ನು ನೀಡಿ ಗೌರವಿಸಿದರು. ಡನ್‌ಸ್ಟರ್ ಬಿಸಿನೆಸ್ ಸ್ಕೂಲ್ ಇದೊಂದು ಅಂತಾರಾಷ್ಟ್ರೀಯ ಮಟ್ಟದ ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿದೆ. ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರ ರಾಜ್ಯಮಟ್ಟದ ಪುನಶ್ಚೇತನಾ ಕಾರ್ಯಾಗಾರದಲ್ಲಿ ಡನ್‌ಸ್ಟರ್ ಬಿಸಿನೆಸ್ ಸ್ಕೂಲ್‌ನ ಅಧ್ಯಕ್ಷರಾದ ಫಿಲಿಪ್ ಥೆವೆನೋಟ್‌ರವರು ಆನ್‌ಲೈನ್ ಮೂಲಕ ಪದವಿಯನ್ನು ಪ್ರಕಟಿಸಿದರು. ಡನ್‌ಸ್ಟರ್ ಬಿಸಿನೆಸ್ ಸ್ಕೂಲ್‌ನ ಪರವಾಗಿ ಅವಿನಾಶ್ ಗುಪ್ತಾರವರು ಗೌರವ ಡಾಕ್ಟರೇಟ್ ಪದವಿಯನ್ನು ಧರ್ಮಸ್ಥಳದಲ್ಲಿ ಪ್ರದಾನಿಸಿದರು. ಈ ಸಂದರ್ಭದಲ್ಲಿ ಅವಿನಾಶ್ ಗುಪ್ತಾರವರು ಮಾತಾನಾಡುತ್ತಾ ‘ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರನ್ನು ಗೌರವಿಸುವ ಈ ಐತಿಹಾಸಿಕ ಸಮಾರಂಭದಲ್ಲಿ ಪಾಲ್ಗೊಳ್ಳುವುದು ನಮ್ಮ ಸಂಸ್ಥೆಗೆ ಹೆಮ್ಮೆ ಹಾಗೂ ಧನ್ಯತೆಯ ಕ್ಷಣವಾಗಿದೆ. ನಾವಿಲ್ಲಿ ಕೇವಲ ಒಬ್ಬ ವ್ಯಕ್ತಿಯನ್ನು ಗೌರವಿಸುತ್ತಿಲ್ಲ. ಬದಲಾಗಿ ಅಸಂಖ್ಯಾತ ಜನರ ಬದುಕಿನಲ್ಲಿ ಬೆಳಕಾಗಿ, ಅವರ ಜೀವನವನ್ನೇ ಧನ್ಯಗೊಳಿಸಿದ ಮಹೋನ್ನತ ಚೇತನವೊಂದರ ಸಾಧನೆಯನ್ನು ಸಂಭ್ರಮಿಸುತ್ತಿದ್ದೇವೆ. ಅಪರೂಪಕ್ಕೊಮ್ಮೆ ನಮಗೆ ಇಂತಹ ಅಸಾಧಾರಣ ವ್ಯಕ್ತಿಗಳು ಸಿಗುತ್ತಾರೆ. ಇವರು ನಮಗೆ ಅತ್ಯುನ್ನತವಾದ ಜ್ಞಾನ ಅಂದರೆ ಕೇವಲ ಅಕ್ಷರ ಜ್ಞಾನ ಮಾತ್ರವಲ್ಲ, ಬದಲಾಗಿ ಮಾನವನ ಬದುಕನ್ನು ಸುಧಾರಿಸುವ ಶಕ್ತಿ ಇದೆ ಎಂಬುದನ್ನು ನೆನಪಿಸುತ್ತಾರೆ. ಅಂತಹ ಅಸಾಧಾರಣ ವ್ಯಕ್ತಿತ್ವವೇ ಹೇಮಾವತಿ ವೀ. ಹೆಗ್ಗಡೆಯವರು. ಕಳೆದ ನಾಲ್ಕು ದಶಕಗಳಿಂದ ಗ್ರಾಮೀಣ ಮಟ್ಟದಲ್ಲಿ ಸುಸ್ಥಿರವಾದ ಸಾಮಾಜಿಕ ಪರಿವರ್ತನೆಯನ್ನು ನಿರಂತರವಾಗಿ ಹೇಗೆ ತರಬಹುದು ಎಂಬುವುದನ್ನು ಮಾತೃಶ್ರೀಯವರು ಅತ್ಯಂತ ಯಶಸ್ವಿಯಾಗಿ ತೋರಿಸಿಕೊಟ್ಟಿದ್ದಾರೆ. ಜಗತ್ತು ಮಹಿಳಾ ಸಬಲೀಕರಣ, ಆರ್ಥಿಕತೆ, ಸಾಮಾಜಿಕ ಉದ್ಯಮಶೀಲತೆ ಮತ್ತು ಸಮಗ್ರ ಅಭಿವೃದ್ಧಿಯಂತಹ ಪರಿಕಲ್ಪನೆಗಳನ್ನು ಒಪ್ಪಿಕೊಳ್ಳುವುದಕ್ಕಿಂತ ದಶಕಗಳ ಹಿಂದೆಯೆ ರಾಜ್ಯದಾದ್ಯಂತ ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಇವರು ಕೆಲಸವನ್ನು ಮಾಡಿದ್ದಾರೆ. ಇವರ ಉದಾತ್ತ ಆದರ್ಶಗಳಿಗೆ ಗ್ರಾಮಾಭಿವೃದ್ಧಿ ಯೋಜನೆ ಉತ್ತಮ ಸಾಕ್ಷಿಯಾಗಿದೆ. ಗ್ರಾಮೀಣ ಮಹಿಳೆಯರು ಎದುರಿಸುತ್ತಿದ್ದ ವಾಸ್ತವಿಕ ಸಮಸ್ಯೆಗಳಿಗೆ ಪರಿಹಾರವಾಗಿ ನಾಲ್ಕು ದಶಕಗಳ ಹಿಂದೆ ‘ಜ್ಞಾನವಿಕಾಸ’ ಎಂಬ ಕಾರ್ಯಕ್ರಮವನ್ನು ಆರಂಭಿಸಿದರು. ಅದು ಇಂದು ಹೆಮ್ಮರವಾಗಿ ಬೆಳೆದು ವಾತ್ಸಲ್ಯ, ಮಾಸಾಶನ ಮುಂತಾದ ಕಾರ್ಯಕ್ರಮಗಳ ಮೂಲಕ ಮನೆಮಾತಾಗಿದೆ. ಜ್ಞಾನವಿಕಾಸದಿಂದಾಗಿ ಹಳ್ಳಿಯ ಮಹಿಳೆಯರಲ್ಲಿ ಮಹತ್ತರ ಬದಲಾವಣೆಯಾಗಿದೆ. ಆತ್ಮವಿಶ್ವಾಸ, ಸ್ವಾಭಿಮಾನದಿಂದ ಬದುಕು ಸಾಗಿಸಲು ಸಾಧ್ಯವಾಗಿದೆ. ಸಿರಿ ಗ್ರಾಮೋದ್ಯೋಗ ಸಂಸ್ಥೆ ಗ್ರಾಮೀಣ ಭಾಗದಲ್ಲಿ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಿದೆ. ಪರಿಸರ, ಜಲ ಸಂರಕ್ಷಣೆಯ ನಿಟ್ಟಿನಲ್ಲೂ ಕೆಲಸ ಮಾಡಿದ್ದಾರೆ. ಸಾಹಿತ್ಯ ಮತ್ತು ಕಲಾ ಕ್ಷೇತ್ರಕ್ಕೆ ಇವರ ಕೊಡುಗೆ ಅಪೂರ್ವವಾದುದು. ಮಾತೃಶ್ರೀಯವರು ಸರ್ವ ಆದರ್ಶಗಳಿಗೆ ಮಾದರಿಯಾಗಿದ್ದಾರೆ. ಮಹಿಳಾ ಸಬಲೀಕರಣ, ಗ್ರಾಮಾಭಿವೃದ್ಧಿ ಸಮುದಾಯದ ನಾಯಕತ್ವ ಮತ್ತು ಮಾನವೀಯ ಸೇವೆಗೆ ಇವರು ನೀಡಿರುವ ಅಸಾಧಾರಣ ಕೊಡುಗೆಗಳನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಅನ್ನು ನೀಡಿ ಗೌರವಿಸಲಾಗಿದೆ’ ಎಂದರು. ಹೆಗ್ಗಡೆಯವರು, ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿಗಳಾದ ಡಾ. ಹರೀಶ್ ಕೃಷ್ಣ ಸ್ವಾಮಿ, ಉದಯಕುಮಾರ್ ಶೆಟ್ಟಿ, ಸಂಪತ್ ಸಾಮ್ರಾಜ್ಯ, ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದÀ ಅನಿಲ್ ಕುಮಾರ್ ಎಸ್.ಎಸ್., ಯೋಜನೆಯ ಹಣಕಾಸು ಅಧಿಕಾರಿಗಳಾದ ಶಾಂತಾರಾಮ್ ಆರ್. ಪೈ., ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲ ಪ್ರಾದೇಶಿಕ ನಿರ್ದೇಶಕರು, ನಿರ್ದೇಶಕರುಗಳು, ಯೋಜನಾಧಿಕಾರಿಗಳು ಉಪಸ್ಥಿತರಿದ್ದರು. 1972 ಡಿಸೆಂಬರ್ 27ರಂದು ಡಿ. ವೀರೇಂದ್ರ ಹೆಗ್ಗಡೆಯವರ ಧರ್ಮಪತ್ನಿಯಾದ ಹೇಮಾವತಿ ವೀ. ಹೆಗ್ಗಡೆಯವರು ಮಹಿಳಾ ಸಬಲೀಕರಣಕ್ಕಾಗಿ, ಸಮಾಜದ ಅಸಹಾಯಕರಿಗೆ ನೆರವು ನೀಡುವ ನಿಟ್ಟಿನಲ್ಲಿ ಕೈಗೊಂಡ ಕೆಲಸಗಳ ಪಟ್ಟಿ ಬಹುದೊಡ್ಡದು. ಧರ್ಮಸ್ಥಳದ ಯುವತಿಯರನ್ನೇ ಸೇರಿಸಿಕೊಂಡು ಆರಂಭಿಸಿದ ‘ಕನ್ಯಾಕುಮಾರಿ ಯುವತಿ ಮಂಡಲ ಮುಂದೆ ಅವರ ಸಮಾಜಸೇವೆಗೆ ಮುನ್ನುಡಿ ಬರೆಯಿತು. ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರಾಜ್ಯದ ಮಹಿಳೆಯರನ್ನು ಸಬಲೀಕರಣಗೊಳಿಸುವ ಮತ್ತು ಅವರನ್ನು ಸ್ವಉದ್ಯೋಗಿಗಳನ್ನಾಗಿಸುವ ನಿಟ್ಟಿನಲ್ಲಿ ಜ್ಞಾನವಿಕಾಸ ಕಾರ್ಯಕ್ರಮದ ಆರಂಭ, ಕೌಟುಂಬಿಕ ಸಮಸ್ಯೆಗಳ ಪರಿಹಾರಕ್ಕಾಗಿ ‘ಗೆಳತಿ ಕೌಟುಂಬಿಕ ಸಲಹಾ ಕೇಂದ್ರ’ ಗ್ರಾಮೀಣ ಮಹಿಳೆಯರಲ್ಲಿ ಓದುವ ಹವ್ಯಾಸವನ್ನು ಹೆಚ್ಚಿಸುವ, ಬೆಳೆಸುವ ನಿಟ್ಟಿನಲ್ಲಿ ಜ್ಞಾನವಿಕಾಸ ಕೇಂದ್ರಗಳಲ್ಲಿ ಗ್ರಂಥಾಲಯಗಳ ಸ್ಥಾಪನೆ, ಮಹಿಳೆಯರು ನೀರಿಗಾಗಿ ಪಡುತ್ತಿರುವ ಬವಣೆಯನ್ನು ನೀಗಿಸಲು ರಾಜ್ಯದ ಕೆರೆಗಳನ್ನು ಹೂಳೆತ್ತುವ ಕಾರ್ಯಕ್ರಮ, ರಾಜ್ಯದಲ್ಲಿರುವ ಅಸಹಾಯಕರಿಗೆ ನೆರವು ನೀಡುವ ನಿಟ್ಟಿನಲ್ಲಿ ‘ವಾತ್ಸಲ್ಯ’, ‘ಮಾಸಾಶನ’ ಕಾರ್ಯಕ್ರಮ ಹೀಗೆ ಅವರು ಕೈಗೊಂಡ ಕಾರ್ಯಕ್ರಮಗಳು ಒಂದೆರಡಲ್ಲ. ಇವರು ಕಲಾಪ್ರಿಯರೂ ಹೌದು. ಧರ್ಮಸ್ಥಳದ ಸಿಬ್ಬಂದಿಗಳನ್ನು ಸೇರಿಸಿ ಕಟ್ಟಿದ ‘ರಂಗಶಿವ ಕಲಾ ಬಳಗ’ ಈಗಾಗಲೇ ಹಲವಾರು ನಾಟಕಗಳನ್ನು ಪ್ರದರ್ಶಿಸಿ ಕಲಾಭಿಮಾನಿಗಳ ಮನೆಗೆದ್ದಿದೆ. ಹಾಗೆಯೇ ಉಜಿರೆಯಲ್ಲಿ ‘ಸಮೂಹ’ ಸಾಂಸ್ಕೃತಿಕ ಕೇಂದ್ರ ವನ್ನು ಸ್ಥಾಪಿಸುವ ಮೂಲಕ ಉಜಿರೆಯ ಸಾಂಸ್ಕೃತಿಕ ಚಟುವಟಿಕೆಗಳಿಗೆ ಕಾರಣೀಕರ್ತರಾಗಿದ್ದಾರೆ. ಓದು ಇವರ ಹವ್ಯಾಸಗಳಲ್ಲೊಂದು. ನಿರಂತರದ ‘ಗೆಳತಿ’, ಮಂಜುವಾಣಿಯ ‘ಮಗಳಿಗೊಂದು ಪತ್ರ’ ಅಂಕಣದ ಮೂಲಕವೂ ಇವರು ಚಿರಪರಿಚಿತರು. ಇವರು ಕೈಗೊಂಡಿರುವ ಕೆಲಸ ಕಾರ್ಯಗಳು, ಸೇವೆಗಳು ನಾಡಿಗೆ ಮಾದರಿಯಾಗಿದೆ.

ಕಾರ್ಕಳ: ಮಹಾಮಸ್ತಕಾಭಿಷೇಕ ಸಮಿತಿ ವತಿಯಿಂದ ಪೂಜ್ಯ ಯುಗಲ ಮುನಿ ಮಹಾರಾಜರ ಬೇಟಿ

Article Image

ಕಾರ್ಕಳ: ಮಹಾಮಸ್ತಕಾಭಿಷೇಕ ಸಮಿತಿ ವತಿಯಿಂದ ಪೂಜ್ಯ ಯುಗಲ ಮುನಿ ಮಹಾರಾಜರ ಬೇಟಿ

2027ರ ಫೆಬ್ರವರಿಯಲ್ಲಿ ಕಾರ್ಕಳ ಜೈನಮಠದ ಪೂಜ್ಯ ಸ್ವಾಮೀಜಿಯವರ ಮಾರ್ಗದರ್ಶನ, ಸಮಿತಿಯ ಅಧ್ಯಕ್ಷರಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ ಹಾಗೂ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ. ಎಂ ಏನ್ ರಾಜೇಂದ್ರ ಕುಮಾರ್ ರವರ ಮುಂದಾಳತ್ವದಲ್ಲಿ ನಡೆಯುವ ಕಾರ್ಕಳದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ 2027 ರ ಮಹಾಮಸ್ತಕಾಭಿಷೇಕ ಮಹೋತ್ಸವ ಪ್ರಯುಕ್ತ ಮುಂಬೈಯ ಧುಲೆ ಎಂಬಲ್ಲಿ ವಿಹಾರ ಇರುವ ಪೂಜ್ಯ ಯುಗಲ ಮುನಿ ಮಹಾರಾಜರನ್ನು ಸಮಿತಿಯ ಪ್ರಧಾನ ಕಾರ್ಯದರ್ಶಿಯವರಾದ ಪುಷ್ಪರಾಜ್ ಜೈನ್ ಮಂಗಳೂರು, ಕಾರ್ಯದರ್ಶಿಗಳಾದ ಭರತ್ ಕುಮಾರ್ ಜೈನ್ ಇರ್ವತ್ತೂರು, ಶೀತಲ್ ಜೈನ್ ಶಿರ್ಲಾಲು, ಹಿರಿಯರಾದ ಶ್ರೀವರ್ಮ ಜೈನ್, ರಘುಚಂದ್ರ ಜೈನ್, ಮಾಲತಿ ವಸಂತರಾಜ್, ವಿಜಯಲಕ್ಷ್ಮಿ ಹೇಮಚಂದ್ರ ಜೈನ್, ಮೋಹಿನಿ ವರ್ಧಮಾನ್, ಅಭೀಷ್ಟ ಕುಮಾರ್ ರವರು ಬೇಟಿ ನೀಡಿ ಪೂಜ್ಯ ಯುಗಲ ಮುನಿಮಹಾರಾಜರಿಂದ ಆಶೀರ್ವಾದ ಪಡೆಯಲಾಯಿತು.

ಪದ್ಮಾಂಬ ಮಹಿಳಾ ಸಮಾಜ: ಮಾಸಿಕ ಸಭೆ

Article Image

ಪದ್ಮಾಂಬ ಮಹಿಳಾ ಸಮಾಜ: ಮಾಸಿಕ ಸಭೆ

ದಾವಣಗೆರೆ: ಪದ್ಮಾಂಬ ಮಹಿಳಾ ಸಮಾಜದ ವತಿಯಿಂದ, ಶ್ರೀ 1008 ಪಾರ್ಶ್ಶ್ವನಾಥ ಜಿನಮಂದಿರದ ಆವರಣದಲ್ಲಿ, ನಡೆದ ಸಮಾರಂಭದಲ್ಲಿ D.R.M. ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ರೂಪಶ್ರೀರವರು ದಾವಣಗೆರೆಯಲ್ಲಿ ಪ್ರಾಧ್ಯಾಪಕರಾಗಿ,ವಿಭಾಗ ಮುಖ್ಯಸ್ಥರಾಗಿ, ಪ್ರಾಶುಂಪಾಲರಾಗಿ ಅತ್ಯುತ್ತಮ ಸೇವೆ ಮತ್ತು ದಾವಣಗೆರೆಯ ಜೈನ ಸಮಾಜದ ಜೊತೆ ನಿಕಟ ಬಾಂಧವ್ಯವನ್ನು ಹೊಂದಿರುವುದನ್ನು ಗಮನಿಸಿ "ಪದ್ಮಾಂಬ ಮಹಿಳಾ ಸಾಧನಾ ಪ್ರಶಸ್ತಿ"ಯನ್ನು ನೀಡಿ ಗೌರವಿಸಲಾಯಿತು. ಗೌರವವನ್ನು ಸ್ವೀಕರಿಸಿ ಮಾತನಾಡಿದ ಅವರು ಮಹಿಳೆಯರ ಸಬಲೀಕರಣ ಮತ್ತು ಮಹಿಳಾ ಸಮಾಜಕ್ಕೆ ಮಹಿಳೆಯರ ಕೊಡುಗೆ ಇದರ ಬಗ್ಗೆ ತುಂಬಾ ವಿವರವಾಗಿ ಚೆನ್ನಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪದ್ಮಾಂಬ ಮಹಿಳಾ ಸಮಾಜದ ಅಧ್ಯಕ್ಷರಾದ ವರ್ಷ ಸುಧೀರ್, ಕಾರ್ಯದರ್ಶಿಯಾದ ಸುಹಾಸಿನಿ ದೀಪಕ್, ಖಜಾಂಚಿಯಾದ ಚೇತನ ಪದ್ಮರಾಜ್ ಹಾಗೂ ಗೌರವಾಧ್ಯಕ್ಷರಾದ ಸರಸ್ವತಮ್ಮ ಬೆತುರ, ಸಂಸ್ಥಾಪಕರಾದ ಉಷಾ ಜಯಪ್ರಕಾಶ್ ಮತ್ತು ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಪದ್ಮ ಪ್ರಕಾಶ್ ಹಾಗೂ ಕಾರ್ಯದರ್ಶಿಯಾದ ಹರ್ಷ ನಾಗರಾಜ್ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯೆಯರು ಉಪಸ್ಥಿತರಿದ್ದರು.

ಗಂಗರ ಕಾಲದ ಮತ್ತು ಹೊಯ್ಸಳರ ಕಾಲದ ಮೂರ್ತಿಗಳು, ಶಾಸನಗಳು ಪತ್ತೆ

Article Image

ಗಂಗರ ಕಾಲದ ಮತ್ತು ಹೊಯ್ಸಳರ ಕಾಲದ ಮೂರ್ತಿಗಳು, ಶಾಸನಗಳು ಪತ್ತೆ

ಮೈಸೂರಿನ ಬಳಿ ಇರುವ ಕುಮಾರ ಬೀಡು ಗ್ರಾಮದಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿದ್ದ ಜೈನ ಬಸದಿಯು ಈಗ ಶಿಥಿಲವಾಗಿ ಪಾಳು ಬಿದ್ದಿರುವುದು ಪತ್ತೆಯಾಗಿದೆ. ಗಂಗರ ಕಾಲದ ಮತ್ತು ಹೊಯ್ಸಳರ ಕಾಲದ ಎರಡು ಭಗವಾನ್ ಶ್ರೀ ಪಾರ್ಶ್ವನಾಥ ತೀರ್ಥಂಕರರ ಮೂರ್ತಿಗಳು ಎರಡು ಶಾಸನಗಳು ಮತ್ತು ಅನೇಕ ಜಿನ ಬಿಂಬಗಳು ಸ್ಥಳದಲ್ಲಿವೆ. ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಸೂಚನೆಯಂತೆ ಜಿ ಡಿ ಪಾರ್ಶ್ವನಾಥ್ ಮತ್ತು ವೀರೇಂದ್ರ ಬೇಗೂರ್ ರವರು ಸ್ಥಳ ಪರಿಶೀಲನೆಗಾಗಿ ಇತ್ತೀಚೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮೈಸೂರು ನಗರದಲ್ಲಿ ಕುಮಾರಬೀಡು ಅಭಿವೃದ್ಧಿಗಾಗಿ ರಚಿಸಿರುವ ಟ್ರಸ್ಟಿನ ಅಧ್ಯಕ್ಷರಾದ ಮಿತ್ರಸೇನ ಜೈನ್ ಉಪಾಧ್ಯಕ್ಷ ಚಂದ್ರಶೇಖರ್ ಅರಿಗ ಕಾರ್ಯದರ್ಶಿ ಮಹಾವೀರ ಗೋಗಿ ಸಹಕಾರ್ಯದರ್ಶಿ ವಾಗೀಶ್ವರಿ ಪ್ರಕಾಶ್ ಸಂಘಟನಾ ಕಾರ್ಯದರ್ಶಿ ನವೀನ್ ಬಸ್ತಿ ಮತ್ತು ಟ್ರಸ್ಟಿಯಾದ ಶಾಂತಪ್ಪ ಮೈಸೂರು ಜೈನ ಸಮಾಜದ ಅಧ್ಯಕ್ಷರಾದ ಸುನಿಲ್ ಕುಮಾರ್ ತೀರ್ಥಕ್ಷೇತ್ರ ಕಮಿಟಿಯ ಕರ್ನಾಟಕ ಅಧ್ಯಕ್ಷರಾದ ವಿನೋದ್ ಕುಮಾರ್ ಬಾಕ್ಲೀವಾಲ್ ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರಾದ ಎನ್ ಪ್ರಸನ್ನ ಕುಮಾರ್ ವರ್ಧಮಾನ ಜೈನ್ ಮಿಲನ್ ಉಪಾಧ್ಯಕ್ಷರಾದ ನಾಗರತ್ನ ಮತ್ತು ಚಂದ್ರಿಕಾ ರವರು ಕುಮಾರಬೀಡು ಉಪಸ್ಥಿತರಿದ್ದರು.

ಸರಣಿ ಉಪನ್ಯಾಸ ಕಾರ್ಯಕ್ರಮ

Article Image

ಸರಣಿ ಉಪನ್ಯಾಸ ಕಾರ್ಯಕ್ರಮ

ಉಜಿರೆ: ಶ್ರವಣಬೆಳಗೊಳದ ವಿವಿಧ ವಿದ್ಯಾಸಂಸ್ಥೆಗಳಲ್ಲಿ ಇತ್ತೀಚೆಗೆ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕರಾದ ಬಿ. ಸೋಮಶೇಖರ ಶೆಟ್ಟಿ ರವರು ಜೀವನ ಮೌಲ್ಯ ಹಾಗೂ ಉತ್ತಮ ಆರೋಗ್ಯ ಕಾಪಾಡುವಲ್ಲಿ ವಿಧ್ಯಾರ್ಥಿಗಳು ಅನುಸರಿಸಬೇಕಾದ ನಿಯಮಗಳ ಬಗ್ಗೆ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಗಳ ವತಿಯಿಂದ ಸಂಪನ್ಮೂಲ ವ್ಯಕ್ತಿಯಾದ ಬಿ.ಸೋಮಶೇಖರ ಶೆಟ್ಟಿ ಇವರನ್ನು ಗೌರವಿಸಲಾಯಿತು, ಶ್ರೀ ಕ್ಷೇತ್ರದ ವತಿಯಿಂದ ನಡೆಸಲ್ಪಡುವ ಪಿಯು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ. ಶೃತಕೀರ್ತಿ ರಾಜ್ ಉಪಸ್ಥಿತರಿದ್ದರು.

ಮೂಡುಬಿದಿರೆ: ಕಸ ವಿಲೇವಾರಿ ಪ್ರಾತ್ಯಕ್ಷಿಕೆ

Article Image

ಮೂಡುಬಿದಿರೆ: ಕಸ ವಿಲೇವಾರಿ ಪ್ರಾತ್ಯಕ್ಷಿಕೆ

ಸ್ವಸ್ತಿಶ್ರೀ ಜೈನ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಧವಳತ್ರಯ ಜೈನ ಕಾಶಿ ಟ್ರಸ್ಟ್ ಸಹಕಾರದಿಂದ ಕಾಲೇಜಿನ ಸಮಾಜ ಸೇವಾ ಸಂಘದ ಸಹಯೋಗದಲ್ಲಿ ಹಾಗೂ ಮೂಡುಬಿದಿರೆ ಪುರಸಭೆಯ ಸಹಯೋಗದೊಂದಿಗೆ ಕಸ ವಿಲೇವಾರಿ ಪ್ರಾತ್ಯಕ್ಷಿಕೆ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ‍್ಯಕ್ರಮದಲ್ಲಿ ಕಾಲೇಜಿನ ಸ್ಥಾಪಕ ಅಧ್ಯಕ್ಷರಾದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ‍್ಯ ಪಂಡಿತಾಚಾರ‍್ಯವರ‍್ಯ ಮಹಾಸ್ವಾಮೀಜಿ ಪಾವನ ಸಾನಿಧ್ಯವನ್ನು ವಹಿಸಿಕೊಂಡು ಮಾತನಾಡುತ್ತ ನಮ್ಮ ಊರಿನ ಪರಿಸರದ ಸ್ವಚ್ಛ ಸುಂದರವಾಗಿಸಿ ಕಸ ಇಲ್ಲದಂತೆ ನೋಡುದು ನಮ್ಮೆಲ್ಲರ ಜವಾಬ್ದಾರಿ ಕಸವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಿದಾಗ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿರುತ್ತದೆ ಎಂದರು. ಕಾರ‍್ಯಕ್ರಮದಲ್ಲಿ ಮೂಡುಬಿದಿರೆ ಪುರಸಭೆಯ ಮುಖ್ಯ ಅಧಿಕಾರಿ ಇಂದೂರವರು ಹಾಗೂ, ಪುರಸಭೆಯ ಪರಿಸರ ಅಭಿಯಂತರೆ ಶಿಲ್ಪಾ ಉಪಸ್ಥಿತರಿದ್ದರು ಇವರನ್ನು ಸ್ವಸ್ತಿಶ್ರೀ ಪೂಜ್ಯ ಸ್ವಾಮೀಜಿಯವರು ಸನ್ಮಾನಿಸಿ ಅಭಿನಂದಿಸಿದರು. ಶಿಲ್ಪಾರವರು ಕಸ ವಿಲೇವಾರಿಯ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಯಾವ ಯಾವ ರೀತಿಯ ಕಸವನ್ನು ಯಾವ್ಯಾವ ರೀತಿ ವಿಲೇವಾರಿ ಮಾಡಬೇಕು ಎನ್ನುವ ವಿಷಯವನ್ನು ಮನವರಿಕೆ ಮಾಡಿಕೊಟ್ಟರು. ಕಾರ‍್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಜ್ವಲ್ ಶೆಣೈ ಇವರು ಉಪಸ್ಥಿತರಿದ್ದರು. ಇವರು ಕಸ ವಿಲೇವಾರಿ ಮಾದರಿಗಳ ಮುಖಾಂತರ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಕಾರ‍್ಯಕ್ರಮದಲ್ಲಿ ಕಾಲೇಜಿನ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷರಾದ ಶ್ವೇತಾ ಜೈನ್ ನೋಟರಿ ಹಾಗೂ ನ್ಯಾಯವಾದಿಗಳು ಮೂಡುಬಿದಿರೆ ಇವರು ಉಪಸ್ಥಿತರಿದ್ದು ಎಲ್ಲಾ ವಿದ್ಯಾರ್ಥಿಗಳಿಗೆ ಬಟ್ಟೆ ಚೀಲ ಉಚಿತವಾಗಿ ನೀಡಿದರು. ಮಧ್ಯಾಹ್ನ ನಡೆದ ಈ ಸುಂದರ ಸಮಾರಂಭದಲ್ಲಿ ಕಾಲೇಜಿನ ಉಪನ್ಯಾಸಕ ವೃಂದದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲೆ ಸೌಮ್ಯಶ್ರೀ ಸ್ವಾಗತಿಸಿದರು. ಉಪನ್ಯಾಸಕಿ ಸರಸ್ವತಿ ವಂದಿಸಿದರು.

ಹುಬ್ಬಳ್ಳಿಯ ಬ್ರಹ್ಮಕುಮಾರ ಬೀಳಗಿರವರಿಗೆ ಚಾಣಕ್ಯಶ್ರೀ ಪುರಸ್ಕಾರ

Article Image

ಹುಬ್ಬಳ್ಳಿಯ ಬ್ರಹ್ಮಕುಮಾರ ಬೀಳಗಿರವರಿಗೆ ಚಾಣಕ್ಯಶ್ರೀ ಪುರಸ್ಕಾರ

ಹುಬ್ಬಳಿಯ ಹೆಸರಾಂತ ವ್ಯಾಪಾರೋಧ್ಯಮಿ, ಸರಳ ಸಜ್ಜನಿಕೆಯ ಸ್ನೇಹಜೀವಿ, ಅಜಾತ ಶತ್ರು ಹಾಗೂ ಜೈನ ಸಮಾಜದ ಗಣ್ಯರು, ಸಕ್ರಿಯ ಸಮಾಜಸೇವೆಯಲ್ಲಿ ಕ್ರೀಯಾಶೀಲರಾದ 80 ರ ಹರೆಯದ ಬ್ರಹ್ಮಕುಮಾರ ಬೀಳಗಿ ಇವರ ಸಹಸ್ರ ಚಂದ್ರದರ್ಶನ ಅಭಿಮಾನೋತ್ಸವ ಕಾರ್ಯಕ್ರಮ ತುಂಬಾ ಅರ್ಥಪೂರ್ಣವಾಗಿ ಜರುಗಿತು. ಕಾರ್ಯಕ್ರಮ ವೈಭವದಿಂದ ಮಾತ್ರ ಕೂಡಿರಲಿಲ್ಲ ಇದು ಇತರರಿಗೂ ಒಂದು ಅನುಕರಣಿಯ ಆದರ್ಶದ ಪಾಠ ಎನ್ನುವ ರೀತಿಯಲ್ಲಿ ಪರೋಕ್ಷವಾಗಿ ಸಂದೇಶ ರವಾನಿಸಿದಂತಿತ್ತು ಯಾಕಂದರೆ ಬ್ರಹ್ಮಕುಮಾರ ಬೀಳಗಿ ಇವರು 80 ರ ಹರೆಯದಲ್ಲೂ ಅವರ ಜೀವನ ಶೈಲಿ, ಯುವಕರನ್ನು ನಾಚಿಸುವ ಜೀವನೋತ್ಸಾಹ, ಕ್ರಮಬದ್ಧ ಶಿಸ್ತಿನ ದಿನಚರಿ, ಆರೋಗ್ಯ ಭಾಗ್ಯ ಇವೆಲ್ಲಕ್ಕಿಂತಲೂ ಮುಖ್ಯವಾಗಿ ಇವರ ಸಮಾಜಮುಖಿ ಕಲ್ಯಾಣ ಕಾರ್ಯಗಳು ನಿಜಕ್ಕೂ ಮೆಚ್ಚಬೇಕು. ಈ ಇಳಿ ವಯಸ್ಸಿನಲ್ಲೂ ನಿಮ್ಮ ಉತ್ಸಾಹಕ್ಕೆ ಚಿರಯೌವನ ಮತ್ತು ಆರೋಗ್ಯದ ಗುಟ್ಟೇನು? ಎಂದು ಯಾರಾದರೂ ಕೇಳಿದರೆ ಅದಕ್ಕೆ ಅವರು ಕೊಡುವ ಉತ್ತರ - ನಾನು ಎಲ್ಲರನ್ನೂ ಆತ್ಮೀಯವಾಗಿ ಪ್ರೀತಿಸುತ್ತೇನೆ ಯಾರನ್ನೂ ದ್ವೇಷಿಸುವದಿಲ್ಲ ಪ್ರತಿಯೊಬ್ಬರೂ ಒಳ್ಳೆಯವರೇ ಅವರಲ್ಲಿರುವ ಒಳ್ಳೆಯ ಗುಣಗಳನ್ನು ಸ್ವೀಕರಿಸುತ್ತೇನೆ, ಯಾರನ್ನೂ ನಿಂದಿಸುವದಿಲ್ಲ, ಸಹಾಯ, ಸಹಕಾರ, ಪರೋಪಕಾರ ದಾನ ಧರ್ಮ, ಮಾಡುವ ಮನೋಭಾವನೆ ಧಾರ್ಮಿಕ ಚಿಂತನೆ ಮೂಲಕ ಸಮಾಜದ ಕೆಲಸದಲ್ಲಿ ದೇವರನ್ನು ಕಾಣುವ ಪ್ರವೃತ್ತಿಯನ್ನು ಅಳವಡಿಸಿಕೊಂಡಿದ್ದೇನೆ ಪ್ರತಿಯೊಂದು ಕೆಲಸವನ್ನು ಇಷ್ಟಪಟ್ಟು ಮಾಡುತ್ತೇನೆ " ಎನ್ನುತ್ತಾರೆ. ಇದೇ ಇವರ ದೀರ್ಘ ಜೀವನೋತ್ಸಾಹದ ಸೂತ್ರ. ಇತ್ತೀಚಿನ ಆಧುನಿಕ ಪರಿಸರದಲ್ಲಿ ನಿತ್ಯ ಒತ್ತಡದ ಬದುಕು ಮತ್ತು ಅನಾರೋಗ್ಯ ಜೀವನಶೈಲಿ ಮಧ್ಯದಲ್ಲೂ ನಾವು ಹೇಗೆ ಉತ್ಸಾಹದಿಂದ ಬದುಕಬೇಕು ಎನ್ನುವದನ್ನು ಮೌಲ್ಯಗಳನ್ನು ಹೇಗೆ ಅಳವಡಿಸಿಕೊಳ್ಳಬೇಕು ಎನ್ನುವದನ್ನು ಇವರಿಂದ ಕಲಿಯಬೇಕು ಎಂದು ಅನೇಕರು ಅಂದುಕೊಳ್ಳುತ್ತಾರೆ. ಇದೇ ಸಂದರ್ಭದಲ್ಲಿ ಹುಬ್ಬಳ್ಳಿಯ ಶ್ರೀ ಶಾಂತಿನಾಥ ತೀರ್ಥಂಕರ ದಿಗಂಬರ ಜೈನ ಬಸದಿ ಟ್ರಸ್ಟ ಕಾರ್ಯಕಾರಿ ಮಂಡಳಿ ಅಧ್ಯಕ್ಷ ಮಹಾವೀರ ಗೊಂಗಡಿ ಸೇರಿ ಪದಾಧಿಕಾರಿಗಳು ಇವರ ಸಮಾಜ ಸೇವೆಯನ್ನು ಗುರುತಿಸಿ "ಚಾಣಕ್ಯಶ್ರೀ ಪುರಸ್ಕಾರ ನೀಡಿ ಸನ್ಮಾನಿಸಿ ಗೌರವಿಸಿದರು. ಮಾಜಿ ಮುಖ್ಯಮಂತ್ರಿ, ಸಂಸದರಾದ ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ, ಶಾಸಕ ಅರವಿಂದ ಬೆಲ್ಲದ ರಾಜಕೀಯ ಮುಖಂಡರಾದ ಮಹೇಶ್ ತೆಂಗಿನಕಾಯಿ,ಶಂಕರಣ್ಣ ಮುನವಳ್ಳಿ, ಮೋಹನ್ ಲಿಂಬಿಕಾಯಿ, ಖ್ಯಾತ ಪತ್ರಕರ್ತ ಅಜಿತ್ ಹನಮಕ್ಕನವರ ಮುಂತಾದವರು ಭಾಗವಹಿಸಿ ಶುಭಕೋರಿ ಅಭಿನಂದಿಸಿದರು. ಎನ್ ಆರ್ ಪುರ ಜೈನ ಮಠದ ಸ್ವಸ್ತಿಶ್ರೀ ಲಕ್ಷ್ಮಿಸೇನ ಭಟ್ಟಾರಕ ಮಹಾಸ್ವಾಮಿಗಳು, ಹೊಂಬುಜದ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಸೇರಿದಂತೆ ಎಲ್ಲಾ ಜೈನ ಮಠಗಳ ಸ್ವಾಮೀಜಿಯವರು ಮತ್ತು ಮಾಜಿ ಮುಖ್ಯಮಂತ್ರಿ ಯಡೆಯೂರಪ್ಪ ಸೇರಿ ಹಲವು ರಾಜಕೀಯ ಗಣ್ಯರು ಶುಭ ಸಂದೇಶ ಕಳಿಸುವ ಮೂಲಕ ಶುಭಾಶಯ ತಿಳಿಸಿದ್ದಾರೆ. ವರದಿ : ಎಸ್ ಆರ್ ಮಲ್ಲಸಮುದ್ರ

ಸುಕೇಶ್‌ ಕುಮಾರ್ ಜೈನ್ ರವರಿಗೆ- ಆರೋಗ್ಯ ಸೇವಾ ರತ್ನ ಪ್ರಶಸ್ತಿ

Article Image

ಸುಕೇಶ್‌ ಕುಮಾರ್ ಜೈನ್ ರವರಿಗೆ- ಆರೋಗ್ಯ ಸೇವಾ ರತ್ನ ಪ್ರಶಸ್ತಿ

ಬೆಳ್ತಂಗಡಿ: ಬಸವ ಅಕ್ಯೂ ಅಕಾಡೆಮಿ, ಬೆಂಗಳೂರು ವತಿಯಿಂದ ಆಯೋಜಿಸಲಾದ ಅಕ್ಯುಪ್ರೆಶರ್ ಹಾಗೂ ಮರ್ಮಬಿಂದು ಕಾರ್ಯಾಗಾರದಲ್ಲಿ ಔಷಧ ರಹಿತ ಚಿಕಿತ್ಸಾ ಸೇವೆಯಲ್ಲಿ ಸಲ್ಲಿಸಿರುವ ಗಮನಾರ್ಹ ಕೊಡುಗೆಗಾಗಿ ಅಳದಂಗಡಿಯ ಕಲ‌ ಥೆರಪಿಸ್ಟ್ ಸುಕೇಶ್ ಕುಮಾರ್ ಜೈನ್ ಅವರಿಗೆ “ಆರೋಗ್ಯ ಸೇವಾ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇವರಲ್ಲಿ ಕಲರ್ ಥೆರಪಿ, ಅಕ್ಯುಪ್ರೆಶರ್, ಮರ್ಮ ಪಾಯಿಂಟ್ ಥೆರಪಿ, ಸೀಡ್ ಥೆರಪಿ, ರೇಖೆ ಹೀಲಿಂಗ್ ಸೇರಿದಂತೆ ವಿವಿಧ ಪರ್ಯಾಯ ಚಿಕಿತ್ಸೆಗಳು ಲಭ್ಯವಿದ್ದು, ಆರೋಗ್ಯ ಜಾಗೃತಿ ಮತ್ತು ಸೇವೆಯ ಮೂಲಕ ಸಮಾಜದಲ್ಲಿ ವಿಶಿಷ್ಟ ಗುರುತನ್ನು ಮೂಡಿಸಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದು, ಸುಕೇಶ್ ಕುಮಾರ್‌ ಜೈನ್‌ ಅವರ ಸೇವಾ ಮನೋಭಾವವನ್ನು ಶ್ಲಾಘಿಸಿ ಅಭಿನಂದಿಸಿದರು.

ಗದಗ:- ಶ್ರೀ ಶಾಂತಿನಾಥ ವಿಧಾನ

Article Image

ಗದಗ:- ಶ್ರೀ ಶಾಂತಿನಾಥ ವಿಧಾನ

ಜೈನ ವಿಧಿವಿಧಾನಗಳು ಆತ್ಮದ ಶುದ್ಧೀಕರಣ ಮತ್ತು ಕರ್ಮಗಳ ವಿನಾಶಕ್ಕೆ ಅತ್ಯಂತ ಮಹತ್ವದ ಸಾಧನಗಳಾಗಿದ್ದು, ‘ಶಾಂತಿನಾಥ ವಿಧಾನ’ವು ಅತ್ಯಂತ ಪವಿತ್ರ ಮತ್ತು ಪ್ರಭಾವಶಾಲಿ ಪೂಜಾ ಆಚರಣೆಯಾಗಿದೆ ಎಂದು ಚರ್ಯಾಶಿರೋಮಣಿ ಮುನಿಶ್ರೀ ವಿದಿತಸಾಗರ ಮಹಾರಾಜರು ಉಪದೇಶಿದರು. ಅವರು ಗದಗ ಜಿಲ್ಲಾ ದಿಗಂಬರ ಜೈನ ಸಂಘವು ಹುಡ್ಕೋ ಕಾಲೋನಿಯ ಸಚ್ಚಿದಾನಂದ ಮಠದ ಭವನದಲ್ಲಿ ಆಯೋಜಿಸಿದ್ದ ‘ಶ್ರೀ ಶಾಂತಿನಾಥ ವಿಧಾನ’ದ ದಿವ್ಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡುತ್ತ, ಜೈನ ಪರಂಪರೆಯಲ್ಲಿ 16ನೆಯ ತೀರ್ಥಂಕರ ಶಾಂತಿನಾಥರನ್ನು ‘ಶಾಂತಿಯ ಅಧಿದೇವತೆ’ ಎಂದು ಆರಾಧಿಸಲಾಗುತ್ತದೆ. ಈ ವಿಧಾನವನ್ನು ಮಾಡುವುದರಿಂದ ಮನಸ್ಸಿನಲ್ಲಿರುವ ಒತ್ತಡ, ಕೋಪ, ಕ್ರೌರ್ಯಗಳು ದೂರವಾಗಿ ಇಡೀ ವಿಶ್ವದಲ್ಲಿ ಅಹಿಂಸೆ ಮತ್ತು ಶಾಂತಿ ನೆಲೆಸುತ್ತದೆ. ವ್ಯಾಪಾರ, ಉದ್ಯೋಗ, ಶಿಕ್ಷಣ, ಕುಟುಂಬದಲ್ಲಿ ಎದುರಾಗುವ ಕಷ್ಟಗಳು, ವಿಘ್ನಗಳು ಮತ್ತು ಪ್ರಾಕೃತಿಕ ವಿಕೋಪಗಳು ನಿವಾರಣೆಯಾಗುತ್ತವೆ. ಈ ವಿಧಿಯಲ್ಲಿ ಜಲ, ಚಂದನ, ಅಕ್ಷತೆ, ಪುಷ್ಪ, ದೀಪ, ಧೂಪ, ಫಲ, ಅರ್ಘ್ಯ ಎಂಬ ಅಷ್ಟದ್ರವ್ಯಗಳನ್ನು ಮಂತ್ರಘೋಷಗಳೊಂದಿಗೆ ಶಾಂತಿನಾಥ ತೀರ್ಥಂಕರರಿಗೆ ಸಮರ್ಪಿಸಲಾಗುತ್ತದೆ. ಈ ವಿಧಾನದಲ್ಲಿ ಭಾಗಿಯಾಗಿರುವ ತಾವೆಲ್ಲರೂ ಪುಣ್ಯಶಾಲಿಗಳಾಗಿದ್ದು, ಈ ಪರಂಪರೆಯನ್ನು ನಿರಂತರವಾಗಿ ಮುಂದುವರೆಸಲು ಜಿಲ್ಲೆಯ ಸಚಿವರು, ಸಂಸದರು, ಶಾಸಕರು, ಶ್ರಾವಕರು ನಗರದಲ್ಲಿ ಬಸದಿ, ಸಭಾಭವನ ನಿರ್ಮಿಸಲು ಉದಾರವಾಗಿ ಸಹಾಯ-ಸಹಕಾರ ನೀಡಬೇಕೆಂದು ಕೋರಿದರು. ಸಂಘದ ಗೌರವಾಧ್ಯಕ್ಷ ಡಾ. ಅಪ್ಪಣ್ಣ ಹಂಜೆ ಪ್ರಾಸ್ತಾವಿಕವಾಗಿ ಮಾತನಾಡುತ್ತ ಗದಗ ಜಿಲ್ಲೆಯ ಪ್ರದೇಶದಲ್ಲಿ 7ನೆಯ ಶತಮಾನದಿಂದಲೂ ಅನೇಕ ಜೈನ ಮುನಿಗಳು, ಆರ್ಯಿಕೆಯರು ವಿಹಾರ ಕೈಗೊಂಡು ಧರ್ಮಪ್ರಭಾವನೆ ಮೂಲಕ ಲೋಕಕಲ್ಯಾಣ ಚಟುವಟಿಕೆಗಳನ್ನು ಕೈಗೊಳ್ಳುತ್ತ ಬಂದಿದ್ದು, ಆ ಪರಂಪರೆ ಮುನಿಶ್ರೀ ವಿದಿತಸಾಗರ ಮಹಾರಾಜರಿಂದಲೂ ಮುಂದುವರೆದಿರುವುದು ಇಲ್ಲಿಯ ಜೈನ ಸಮಾಜದ ಸೌಭಾಗ್ಯವಾಗಿದೆ ಎಂದು ಹೇಳಿದರು. ವಿಧಾನದಲ್ಲಿ ಪ್ರಕಾಶ ಮುತ್ತಿನ, ಸಂಕಪ್ಪ ನಾವಳ್ಳಿ, ಎಂ.ಟಿ. ಕಬ್ಬಿಣ, ಟಿವಿ-9 ವರದಿಗಾರ ಸಂಜಯ ಪಾಂಡ್ರೆ, ಎ.ಎನ್. ಬಸ್ತಿ, ನಾಗರಾಜ ತುಕೋಳ, ಯಶವಂತ ಸಿದ್ದಣ್ಣವರ, ಸುಭಾಸ ಅಂಗಡಿ, ಅನಂತರಾಜ ಬಸ್ತಿ, ರವಿ ಮುತ್ತಿನ, ಎ.ವಾಯ್. ಇಂಚಲ, ಹನಮಂತಗೌಡ ಮತಗಟ್ಟಿ, ಬಿ.ಎಸ್. ನಾವಳ್ಳಿ, ಪರಿಮಳಾ ಕುಲಕರ್ಣಿ, ಸಹನಾ ಹಂಜೆ, ಸುಮನ ಮುತ್ತಿನ, ಶೋಭಕ್ಕ ಇಂಚಲ, ವಸಂತಮಾಲಾ ದೇಸಾಯಿ, ಅನಂತಮತಿ ಬಸ್ತಿ, ಸುಪ್ರಿಯಾ ನಾವಳ್ಳಿ, ಮಧುಮತಿ ಕಬ್ಬಿಣ ಸೇರಿದಂತೆ ಜಿಲ್ಲೆಯ ಹಿರಿಯರು, ಶ್ರಾವಕ- ಶ್ರಾವಿಕೆಯರು ಭಾಗವಹಿಸಿ ಅಷ್ಟದ್ರವ್ಯಗಳಿಂದ ಪೂಜೆ ಸಲ್ಲಿಸಿ ಕೃತಾರ್ಥರಾದರು. ಸಂಘದ ಅಧ್ಯಕ್ಷ ಪಿ.ಎ. ಕುಲಕರ್ಣಿ ಅವರು ಅಧ್ಯಕ್ಷೀಯ ನುಡಿಗಳಲ್ಲಿ ಮುನಿಶ್ರೀ ಅವರು ಗದಗ ನಗರಕ್ಕೆ ಆಗಮಿಸಿ ಧರ್ಮಪ್ರಭಾವನೆ ಕೈಗೊಂಡು ಶಾಂತಿನಾಥ ವಿಧಾನ ಆಚರಣೆಗೆ ಮಾರ್ಗದರ್ಶನದೊಂದಿಗೆ ಸಾನ್ನಿಧ್ಯ ವಹಿಸಿರುವುದು ಸದಾಕಾಲ ಸ್ಮರಣೀಯವಾಗಿದ್ದು, ಎಚ್.ಕೆ. ಪಾಟೀಲ ಅವರು ನಗರಾಭಿವೃದ್ಧಿ ಇಲಾಖೆಯಿಂದ ಬಸದಿ ಮತ್ತು ಸಭಾಭವನ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಿಕೊಡುವುದಾಗಿ ಜಿಲ್ಲೆಯ ಜೈನ ಸಮಾಜಕ್ಕೆ ಭರವಸೆ ನೀಡಿದ್ದಾರೆ. ಅವರ ಸಹಾಯ-ಸಹಕಾರದಿಂದ ನಗರದಲ್ಲಿ ಬಸದಿ ನಿರ್ಮಿಸಿ ಲೋಕಕಲ್ಯಾಣ ಚಟುವಟಿಕೆಗಳನ್ನು ಸಾಂಗವಾಗಿ ಮುಂದುವರೆಸಲಾಗುವುದೆಂದು ಹೇಳಿದರು. ಡಾ| ಅಪ್ಪಣ್ಣ ಹಂಜೆರವರು ಸ್ವಾಗತಿಸಿದರು. ಪ್ರಕಾಶ ಮುತ್ತಿನ ವಂದಾರ್ಪಣೆಗೈದರು. ಶಾಂತಿನಾಥ ತೀರ್ಥಂಕರರಿಗೆ ಆರತಿ ಮಾಡುವುದರೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು.

ತುಮಕೂರು: ಮುನಿ ಮಹಾರಾಜರುಗಳ ಆಗಮನ

Article Image

ತುಮಕೂರು: ಮುನಿ ಮಹಾರಾಜರುಗಳ ಆಗಮನ

ತುಮಕೂರು ನಗರದಲ್ಲಿ 2026 ರ ಚಾತುರ್ಮಾಸವನ್ನು ಆಚರಿಸಲು ದಿಗಂಬರ ಜೈನಾಚಾರ್ಯ 108 ಶ್ರೀ ಪ್ರಮುಖ ಸಾಗರ್ ಜೀ ಮಹಾರಾಜ್ ಮತ್ತು ಅವರ ಮುನಿ ಸಂಘ ದಿನಾಂಕ 6-7-2026 ಸೋಮವಾರ ತುಮಕೂರು ತಾಲ್ಲೂಕು ಪಂಡಿತನ ಹಳ್ಳಿ ಬಳಿ ಇರುವ ಮಂದಾರ ಗಿರಿ ಅತಿಶಯ ಕ್ಷೇತ್ರಕ್ಕೆ ಆಗಮಿಸಿದರು. ಜೈನ ಸಮಾಜದ ಅಧ್ಯಕ್ಷರಾದ ಟಿ ಡಿ ಬಾಹುಬಲಿ ಬಾಬು, ಪದಾಧಿಕಾರಿಗಳು ಮತ್ತು ತುಮಕೂರು ನಗರದ ಶ್ರಾವಕ -ಶ್ರಾವಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ತುಮಕೂರು: ವಿಶೇಷ ಕಾರ್ಯಾಗಾರ

Article Image

ತುಮಕೂರು: ವಿಶೇಷ ಕಾರ್ಯಾಗಾರ

ತುಮಕೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಜೈನ ಅಧ್ಯಯನ ವಿಭಾಗದ ವತಿಯಿಂದ "ಭಾರತೀಯ ಸಂಸ್ಕೃತಿಗೆ ಜೈನ ಧರ್ಮದ ಕೊಡುಗೆ" ಎಂಬ ವಿಷಯದ ಕುರಿತು ಎರಡು ದಿನಗಳ ವಿಶೇಷ ಕಾರ್ಯಾಗಾರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಜೈನ ಸಂಶೋಧಕರು ಹಾಗೂ ಜೈನ್ ಹೆರಿಟೇಜ್ ಸೆಂಟರ್ಸ್.ಕಾಂ (www.jainheritagecentres.com) ಅಂತರ್ಜಾಲತಾಣದ ಸಂಸ್ಥಾಪಕರು ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ಬೆಂಗಳೂರಿನ ನಿತಿನ್ ಹೆಚ್.ಪಿ. ಅವರು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಾ, "ಜೈನಧರ್ಮದ ಇತಿಹಾಸ, ತತ್ವಶಾಸ್ತ್ರ, ಕಲೆ ಮತ್ತು ಪರಂಪರೆಯ ಕುರಿತು ಇದುವರೆಗೆ ನಡೆದಿರುವ ದಾಖಲೀಕರಣ ಹಾಗೂ ಸಂಶೋಧನೆಯ ಫಲವಾಗಿಯೇ ಜೈನಧರ್ಮವು ಇಂದಿಗೂ ಜೀವಂತವಾಗಿ ಉಳಿದುಕೊಂಡಿದೆ. ಜೈನಧರ್ಮದ ಮಹತ್ವ ಮತ್ತು ಅದರ ಅಮೂಲ್ಯ ಕೊಡುಗೆಗಳು ಮುಂದಿನ ಪೀಳಿಗೆಗೆ ಪರಿಣಾಮಕಾರಿಯಾಗಿ ತಲುಪಬೇಕಾದರೆ, ಜೈನ ಅಧ್ಯಯನವು ಶೈಕ್ಷಣಿಕವಾಗಿ ಇನ್ನಷ್ಟು ಅಭಿವೃದ್ಧಿ ಹೊಂದಬೇಕು. ಜೈನ ಅಧ್ಯಯನ ಮತ್ತು ಸಂಶೋಧನೆಯ ವ್ಯಾಪ್ತಿಯನ್ನು ವಿಸ್ತರಿಸುವುದು ಇಂದಿನ ಅಗತ್ಯವಾಗಿದೆ" ಎಂದು ಅಭಿಪ್ರಾಯಪಟ್ಟರು. "ಭಾರತವನ್ನು ಬಿಟ್ಟು ಜೈನಧರ್ಮವಿಲ್ಲ, ಜೈನಧರ್ಮವನ್ನು ಬಿಟ್ಟು ಭಾರತವಿಲ್ಲ ಎನ್ನುವಷ್ಟು ಆಳವಾಗಿ ಜೈನಧರ್ಮವು ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆಯೊಂದಿಗೆ ಬೆಸೆದುಕೊಂಡಿದೆ. ಆದ್ದರಿಂದ ನಾವು ದಿಗಂಬರ ಮತ್ತು ಶ್ವೇತಾಂಬರ ಎಂಬ ಪಂಥೀಯ ಭೇದಗಳನ್ನು ಮೀರಿ, ಜೈನಧರ್ಮವನ್ನು ಮುಕ್ತ ಮನಸ್ಸಿನಿಂದ ಅಧ್ಯಯನ ಮಾಡುವ ಅಗತ್ಯವಿದೆ" ಎಂದು ತಿಳಿಸಿದರು. ಬಳಿಕ ಇವರು ಭಾರತದಲ್ಲಿ ಜೈನ ಚಿತ್ರಕಲೆ ಮತ್ತು ಶಿಲ್ಪಕಲೆಗಳ ಪರಂಪರೆ, ಭಾರತದಲ್ಲಿನ ಜೈನ ಗುಹೆಗಳ ವೈಶಿಷ್ಟತೆಗಳು, ಜೈನ ಪ್ರತಿಮಾಶಾಸ್ತ್ರ ಮತ್ತು ಅದರ ವಿಶಿಷ್ಟ ವಿನ್ಯಾಸಗಳು, ಜೈನ ಜಿನಾಲಯಗಳ ವಾಸ್ತುಶಿಲ್ಪ ಮತ್ತು ಅದರ ವಿಶೇಷತೆಗಳು. ಈ ಉಪನ್ಯಾಸಗಳು ಜೈನ ಕಲೆ, ವಾಸ್ತುಶಿಲ್ಪ, ಇತಿಹಾಸ ಮತ್ತು ಪರಂಪರೆಯ ವಿವಿಧ ಆಯಾಮಗಳನ್ನು ಒಳಗೊಂಡಿದ್ದು, ಭಾಗವಹಿಸಿದ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಂದ ಉತ್ತಮ ಪ್ರತಿಕ್ರಿಯೆ ಪಡೆದವು. ನಾಡಿನ ಹಿರಿಯ ಜೈನ ವಿದ್ವಾಂಸರು ಮತ್ತು ಸಂಶೋಧಕರಾದ ಡಾ. ಎಸ್.ಪಿ. ಪದ್ಮಪ್ರಸಾದ್ ಅವರ ಮಾರ್ಗದರ್ಶನ ಮತ್ತು ಉಪಸ್ಥಿತಿಯಲ್ಲಿ ಈ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಅವರ ಮಾರ್ಗದರ್ಶನವು ಕಾರ್ಯಕ್ರಮದ ಯಶಸ್ಸಿಗೆ ಮಹತ್ವದ ಕೊಡುಗೆಯಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಪ್ರಾಧ್ಯಾಪಕರಾದ ಪ್ರೊ. ಶೇಟ್ ಪ್ರಕಾಶ್ ಅವರು ವಹಿಸಿದ್ದರು. ಕಾರ್ಯಕ್ರಮದ ಸಂಯೋಜಕರಾದ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ. ವೆಂಕಟರಾಮ ರೆಡ್ಡಿ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಎಂ. ಕೊಟ್ರೇಶ್ ಅವರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ತುಮಕೂರು ವಿಶ್ವವಿದ್ಯಾಲಯದ ಜೈನಧರ್ಮ ಸ್ನಾತಕೋತ್ತರ ಡಿಪ್ಲೋಮಾ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದು, ಕಾರ್ಯಕ್ರಮದ ಆಯೋಜನೆ ಮತ್ತು ನಿರ್ವಹಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಜೊತೆಗೆ, ತುಮಕೂರು ನಗರದ ಶ್ರಾವಕ ಸಮುದಾಯದ ಸದಸ್ಯರು, ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಖ್ಯಾತ ವಿದ್ವಾಂಸರು, ಸಂಶೋಧಕರು ಹಾಗೂ ಶಿಕ್ಷಣ ತಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ರಾಮಚಂದ್ರ ಕಿಲ್ಲೇದಾರರಿಗೆ ಪಿ.ಎಚ್.ಡಿ. ಪ್ರದಾನ

Article Image

ರಾಮಚಂದ್ರ ಕಿಲ್ಲೇದಾರರಿಗೆ ಪಿ.ಎಚ್.ಡಿ. ಪ್ರದಾನ

ಬೆಳಗಾವಿ: ಕಾಗವಾಡ ತಾಲೂಕಿನ ಉಗಾರಖುರ್ದ ಪಟ್ಟಣದ ಪೀಪಲ್ಸ್ ಎಜ್ಯುಕೇಶನ್ ಸೊಸೈಟಿಯ ಪ್ರಾಚಾರ್ಯರು ಹಾಗೂ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಗೌರವಾನ್ವಿತ ಸಿಂಡಿಕೇಟ್ ಸದಸ್ಯರಾದ ರಾಮಚಂದ್ರ ಕಿಲ್ಲೇದಾರ ಅವರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಪಿ.ಎಚ್.ಡಿ. (ಡಾಕ್ಟರ್ ಆಫ್ ಫಿಲಾಸಫಿ) ಪದವಿಯನ್ನು ಅಧಿಕೃತವಾಗಿ ಪ್ರದಾನ ಮಾಡಿದೆ. ವಿಶ್ವ ವಿದ್ಯಾಲಯದ ವಾಣಿಜ್ಯ ನಿಕಾಯದ ವ್ಯವಹಾರ ನಿರ್ವಹಣೆ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗೂ ಸಂಶೋಧನಾ ಮಾರ್ಗದರ್ಶಕರಾದ ಪ್ರೊ. ಎಸ್.ಸಿ. ಪಾಟೀಲ ಅವರ ಮಾರ್ಗದರ್ಶನದಲ್ಲಿ ಇವರು ತಮ್ಮ ಸಂಶೋಧನಾ ಮಹಾಪ್ರಬಂಧವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಇವರು ಉಗಾರ ಖುರ್ದದ ಹೆಸರಾಂತ ಶೈಕ್ಷಣಿಕ ಸಂಸ್ಥೆಯಾದ ಪೀಪಲ್ಸ್ ಎಜುಕೇಶನ್ ಸೊಸೈಟಿಯ ಸಂಸ್ಥಾಪಕ ಕಾರ್ಯದರ್ಶಿ ಹಾಗೂ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2008 ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು ಅವರ ನೇತೃತ್ವದಲ್ಲಿ ಒಂದರಿಂದ ಎಂಟನೆ ತರಗತಿಯ ಇಂಗ್ಲಿಷ್ ಮಾಧ್ಯಮಶಾಲೆ, ಪಿಯುಸಿ (ಕಲಾ ಮತ್ತು ವಾಣಿಜ್ಯ) ಹಾಗೂ ಬಿ.ಬಿ.ಎ., ಬಿ.ಸಿ.ಎ. ಮತ್ತು ಬಿ.ಕಾಂ. ಪದವಿ ಕಾಲೇಜುಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದು, ಗ್ರಾಮೀಣ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಮಹತ್ವದ ನೀಡುತ್ತಿದೆ.

ಸುಧೀರ್ ಕುಮಾರ್- ಅಧ್ಯಕ್ಷರಾಗಿ ಆಯ್ಕೆ

Article Image

ಸುಧೀರ್ ಕುಮಾರ್- ಅಧ್ಯಕ್ಷರಾಗಿ ಆಯ್ಕೆ

ಮೂಡುಬಿದಿರೆ ರೋಟರಿ ಇಂಗ್ಲೀಷ್ ಮೀಡಿಯಂ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ವೇಣೂರಿನ ಸುಧೀರ್ ಕುಮಾರ್ ರವರು ತಾಲೂಕು ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ.

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ

Article Image

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ

ಶಿವಮೊಗ್ಗ: ವೀರರಾಣಿ ಚನ್ನಭೈರಾದೇವಿ ಜೈನ ಜಿಲ್ಲಾ ಮಹಿಳಾ ಸಂಘಟನೆ ಇವರ ಆಯೋಜನೆಯಲ್ಲಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ವಿಷಯ:- ಮಹಾಮಂಡಲೇಶ್ವರಿ ಚನ್ನಭೈರಾದೇವಿ ನಿಯಮಗಳು: ಪ್ರಬಂಧ ಸ್ಪರ್ಧೆಗೆ ವಯಸ್ಸಿನ ಮಿತಿ ಇರುವುದಿಲ್ಲ. ಎಲ್ಲರೂ ಭಾಗವಹಿಸಬಹುದು, ಕೈ ಅಕ್ಷರಗಳಲ್ಲಿ ಹಾಗೂ ಟೈಪ್ ಮಾಡಬಹುದು, ಎರಡು ಪುಟ ಮೀರಬಾರದು, ಪ್ರಬಂಧವನ್ನು ಕನ್ನಡ ಭಾಷೆಯಲ್ಲಿ ಬರೆಯಬೇಕು, ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ, ಸ್ಪರ್ಧಿಯ ಹೆಸರು ವಿಳಾಸ ಫೋನ್ ನಂಬರ್ ಬರೆಯಬೇಕು, ಅಂಜೆ (Post office) ಮೂಲಕ ಕಳುಹಿಸಬೇಕು. ಪ್ರಬಂಧ ಕಳುಹಿಸಲು ಕೊನೆಯ ದಿನಾಂಕ: 5-8-2026 ಕಳುಹಿಸುವ ವಿಳಾಸ: ಕೆ ಆರ್.ಪದ್ಮ ಬಾಹುಬಲಿ ಜೈನ್, ಎ ಪಿ ಎಂ ಸಿ ರೋಡ್, ಶ್ರೀಧರ ನಗರ, 2ನೇ ಕ್ರಾಸ್, ಸಾಗರ, ಪೋಸ್ಟ್ ಸಾಗರ, ಸಾಗರ (ತಾ) ಶಿವಮೊಗ್ಗ( ಜಿಲ್ಲೆ) ಸಾಗರ, ಪಿನ್ ನಂ:- 577421 ವಿವರಗಳಿಗೆ ಸಂಪರ್ಕಿಸಿ: 94822 04767, 94824 80220, 94497 06582, 94800 72644, 95916 83980

ಲಂಡನ್: ಜೈನ್ ಮಿಲನ್ ಮಾಸಿಕ ಸಭೆ

Article Image

ಲಂಡನ್: ಜೈನ್ ಮಿಲನ್ ಮಾಸಿಕ ಸಭೆ

ಇಂಗ್ಲೆಂಡ್: ಸ್ಲೋಘ್‌ನಲ್ಲಿರುವ ಶಾಂತಿನಾಥ ದಿಗಂಬರ ಜೈನ ಬಸದಿಯಲ್ಲಿ ಮೊದಲಿಗೆ ಪೂಜಾ ಕಾರ್ಯಕ್ರಮಗಳು ನಡೆದು, ನಂತರ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಆಚಾರ್ಯ ಶ್ರೀ ವಿದ್ಯಾಸಾಗರ ದಿಗಂಬರ ಜೈನ ಚಾರಿಟೇಬಲ್ ಟ್ರಸ್ಟ್ ಲಂಡನ್ ಇದರ ಟ್ರಸ್ಟಿ ಸಂತೋಷ್ ಕುಮಾರ್ ಜೈನ್ ಅವರು ಟ್ರಸ್ಟ್ ಬೆಳೆದು ಬಂದ ದಾರಿ , ಬಸದಿಯ ನಿರ್ಮಾಣ, ಉದ್ದೇಶ ಹಾಗೂ ಆಶಯಗಳ ಬಗ್ಗೆ ಮಾಹಿತಿ ನೀಡಿದರು. ಮಿಲನ್ ಉಪಾಧ್ಯಕ್ಷ ನಿಖಿಲ್ B.A ಅವರು ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವ ಆಚರಿಸುವ ಮಿಲನ್ ಸದಸ್ಯರಿಗೆ ಶುಭ ಹಾರೈಸಿ, ಮುಂದಿನ ಜೈನ್ ಮಿಲನ್ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಜೈನ್ ಮಿಲನ್ ಲಂಡನ್ ಅಧ್ಯಕ್ಷ Dr. ನರೇಂದ್ರ ಅಳದಂಗಡಿ ಪ್ರಾಸ್ತಾವಿಕ ಮಾತುಗಳೊಂದಿಗೆ ಜೈನ ಧರ್ಮದ ತತ್ವ ಸಿದ್ಧಾಂತಗಳ ಪಾಲನೆ ಮತ್ತು ಆಚರಣೆಯಿಂದ ಜೀವನದಲ್ಲಿ ಆರೋಗ್ಯಕರವಾಗಿ ಹಾಗೂ ನೆಮ್ಮದಿಯನ್ನು ಕಂಡುಕೊಳ್ಳಲು ಸಾಧ್ಯ ಎಂದು ತಿಳಿಸಿದರು. ಕೈವಲ್ಯ ಜೈನ್, ಕೇವಲ್ ಜೈನ್, ಧೀಮನ್ ಬಲ್ಲಾಳ್ ಜಿನ ಭಜನೆ ಹಾಡಿದರು. ಅಕ್ಷಯ , ಸಂಪದ , ದೀಕ್ಷಾ ಮತ್ತು ಸಂಧ್ಯಾ ಅವರ ತಂಡ ಜಿನ ಭಜನೆ ಹಾಡಿದರು. ಸಾರ್ಥಕ್ ಜೈನ್ ಬಾಹುಬಲಿ ಸ್ವಾಮಿಯ ಕಥೆ ಹೇಳಿದರು. ದೀಕ್ಷಾ ಜೈನ್ ಅವರು ಜೈನ ಧರ್ಮದಲ್ಲಿ ಹಿಂಸೆ ಅಥವಾ ಅಹಿಂಸೆ ಎಂದು ಪರಿಗಣಿಸುವ ಕರ್ಮಗಳು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಬಳಿಕ ಜಿನ ಭಜನೆ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ ಮಿಲನ್ ಸದಸ್ಯರಿಗೆ ಮತ್ತು ಸಾಧಕರಿಗೆ ಪ್ರಶಸ್ತಿ ಪತ್ರ ಗಳನ್ನು ನೀಡಿ ಗೌರವಿಸಲಾಯಿತು. ಆರವ್ ಜೈನ್ ಅವರು ಗಿಟಾರ್ ಮೂಲಕ ಪಂಚ ನಮಸ್ಕಾರ ಮಂತ್ರವನ್ನು ನುಡಿಸಿ ಮತ್ತು ಆಖ್ಯ ಹೆಗ್ಡೆ ಅವರು ಗಿಟಾರ್ ನುಡಿಸುತ್ತಾ ಪಾರ್ಶ್ವನಾಥ ಸ್ತುತಿಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು . ಕೋಶಾಧಿಕಾರಿ Dr. ವೈಶಾಕ್ ವಿದ್ಯಾಧರ್ ವಂದಿಸಿದರು. ಮಿಲನ್ ಕಾರ್ಯದರ್ಶಿ ಅಶ್ವಿನಿ ಚಂದ್ರ ಪ್ರಭು ಅವರು ಕಾರ್ಯಕ್ರಮ ನಿರೂಪಿಸಿದರು, ಸಭಾ ಕಾರ್ಯಕ್ರಮ ದ ನಂತರ ಸದಸ್ಯರಿಗೆ ಮೋಜಿನ ಸ್ಪರ್ಧೆಗಳನ್ನು ನಡೆಸಿಕೊಟ್ಟರು . ಕಾರ್ಯಕ್ರಮದ ಆತಿಥೇಯರಾಗಿ ಸಾಯಿನಾಥ್ ಹೆಗ್ಡೆ, ಉಜ್ವಲ್ ಶ್ರೇಯಸ್, Dr.ವೈಶಾಕ್ ವಿದ್ಯಾಧರ್, ದಯಾನಂದ ಪಾಟೀಲ್ ಕುಟುಂಬದವರು ಸಹಕರಿಸಿದರು. ವರದಿ ಧೀರೇಂದ್ರ ಬಲ್ಲಾಳ್

ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್: ವಿವೇಕ್ ಆಳ್ವ ನೇಮಕ

Article Image

ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್: ವಿವೇಕ್ ಆಳ್ವ ನೇಮಕ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ವಿವೇಕ್ ಆಳ್ವ ರವರನ್ನು ನವದೆಹಲಿ ಕೇಂದ್ರ ಕಚೇರಿಯ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಂಸ್ಥೆಯ ಸಾಂಸ್ಕೃತಿಕ ವಿನಿಮಯ ವಿಭಾಗದ ಉಪ ರಾಷ್ಟ್ರೀಯ ಆಯುಕ್ತರಾಗಿ ನೇಮಕ ಮಾಡಲಾಗಿದೆ. ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕರ್ನಾಟಕ ರಾಜ್ಯ ಮುಖ್ಯ ಆಯುಕ್ತರಾದ ಡಾ ಪಿ.ಜಿ.ಆರ್. ಸಿಂಧಿಯಾ ರವರ ಶಿಫಾರಸಿನ ಮೇರೆಗೆ, ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ನ ಮುಖ್ಯ ರಾಷ್ಟ್ರೀಯ ಆಯುಕ್ತರು ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ. ಕೆ.ಕೆ. ಖಂಡೇಲ್ವಾಲ್ ಇವರನ್ನು ಸಾಂಸ್ಕೃತಿಕ ವಿನಿಮಯ ವಿಭಾಗದ ಉಪ ರಾಷ್ಟ್ರೀಯ ಆಯುಕ್ತರನ್ನಾಗಿ ನೇಮಕಗೊಳಿಸಿ ಅಧಿಕೃತ ಆದೇಶ ಹೊರಡಿಸಿದ್ದಾರೆ. ಈ ನೇಮಕಾತಿಯು ಕರ್ನಾಟಕಕ್ಕೆ ಹಾಗೂ ಕರಾವಳಿ ಭಾಗಕ್ಕೆ ಹೆಮ್ಮೆಯ ವಿಷಯವಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಯುವಜನರಲ್ಲಿ ಸಾಂಸ್ಕೃತಿಕ ಸಾಮರಸ್ಯ, ರಾಷ್ಟ್ರೀಯ ಏಕತೆ ಹಾಗೂ ಅಂತರಾಷ್ಟ್ರೀಯ ಸ್ನೇಹ ಸಂಬಂಧಗಳನ್ನು ಬಲಪಡಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದೆ. ಉಪ ರಾಷ್ಟ್ರೀಯ ಆಯುಕ್ತ (ಸಾಂಸ್ಕೃತಿಕ ವಿನಿಮಯ) ಹುದ್ದೆಯಲ್ಲಿ ವಿವೇಕ್ ಆಳ್ವರು ದೇಶದ ವಿವಿಧ ರಾಜ್ಯಗಳ ನಡುವೆ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳನ್ನು ರೂಪಿಸುವುದು, ರಾಷ್ಟ್ರೀಯ ಸಮಗ್ರತಾ ಶಿಬಿರಗಳು, ಯುವ ವಿನಿಮಯ ಯೋಜನೆಗಳು, ಸಾಂಸ್ಕೃತಿಕ ಜಾಂಬೂರಿಗಳು, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಯುವ ಸಂವಾದಗಳು ಹಾಗೂ ವಿಶ್ವ ಸ್ಕೌಟ್ಸ್–ಗೈಡ್ಸ್ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಕಾರ್ಯಕ್ರಮಗಳನ್ನು ಸಮನ್ವಯಗೊಳಿಸುವ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ವಿವಿಧ ಭಾಷೆ, ಸಂಸ್ಕೃತಿ ಮತ್ತು ಪರಂಪರೆಗಳ ನಡುವೆ ಪರಸ್ಪರ ಗೌರವ, ರಾಷ್ಟ್ರೀಯ ಐಕ್ಯತೆ ಹಾಗೂ ವೈವಿಧ್ಯದಲ್ಲಿ ಏಕತೆ ಎಂಬ ಭಾರತದ ಮೌಲ್ಯಗಳನ್ನು ಯುವಜನರಲ್ಲಿ ಬೆಳೆಸುವ ಕಾರ್ಯಕ್ಕೂ ಅವರು ನಾಯಕತ್ವ ವಹಿಸಲಿದ್ದಾರೆ. ಇದರ ಜೊತೆಗೆ ವಿವಿಧ ರಾಜ್ಯಗಳ ಪ್ರತಿಭಾವಂತ ಸ್ಕೌಟ್ಸ್ ಮತ್ತು ಗೈಡ್ಸ್ ಗಳಿಗೆ ರಾಷ್ಟ್ರೀಯ ವೇದಿಕೆ ಕಲ್ಪಿಸುವುದು, ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಕಾರ್ಯಕ್ರಮಗಳನ್ನು ರೂಪಿಸುವುದು, ಯುವಜನರಲ್ಲಿ ನಾಯಕತ್ವ ಕೌಶಲ್ಯ, ಸಂವಹನ ಸಾಮರ್ಥ್ಯ ಮತ್ತು ಅಂತರಾಷ್ಟ್ರೀಯ ದೃಷ್ಟಿಕೋನವನ್ನು ಬೆಳೆಸುವ ಯೋಜನೆಗಳನ್ನು ಜಾರಿಗೊಳಿಸುವಲ್ಲಿಯೂ ಪ್ರಮುಖ ಪಾತ್ರವಹಿಸಲಿದ್ದಾರೆ. ವಿವೇಕ್ ಆಳ್ವರವರು ಹಲವು ವರ್ಷಗಳಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಿಗೆ ಸಕ್ರಿಯ ಬೆಂಬಲ ನೀಡುತ್ತಿದ್ದು, ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ, ರಾಷ್ಟ್ರೀಯ ಸಮಗ್ರತಾ ಶಿಬಿರ, ಯುವ ನಾಯಕತ್ವ ತರಬೇತಿಗಳು ಹಾಗೂ ವಿವಿಧ ರಾಷ್ಟ್ರೀಯ ಮಟ್ಟದ ಸ್ಕೌಟ್ಸ್–ಗೈಡ್ಸ್ ಕಾರ್ಯಕ್ರಮಗಳ ಯಶಸ್ವಿ ಆಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ವಿಶೇಷವಾಗಿ ಮೂಡುಬಿದಿರೆಯಲ್ಲಿ ನಡೆದ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಯಶಸ್ವಿ ಸಂಘಟನೆಯ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ಗಳಿಸಿದ್ದಾರೆ.

ಸಂತಶಿರೋಮಣಿ ಆಚಾರ್ಯ ವಿದ್ಯಾಸಾಗರ ಮಹಾರಾಜರ 59ನೇ ದೀಕ್ಷಾ ದಿನ ಆಚರಣೆ

Article Image

ಸಂತಶಿರೋಮಣಿ ಆಚಾರ್ಯ ವಿದ್ಯಾಸಾಗರ ಮಹಾರಾಜರ 59ನೇ ದೀಕ್ಷಾ ದಿನ ಆಚರಣೆ

ದಿಗಂಬರ ಜೈನ ಸಮಾಜದ ಅತಿದೊಡ್ಡ ನಕ್ಷತ್ರ ಎಂದೇ ಹೆಸರಾಗಿದ್ದ, ವಿಶ್ವ ವಂದನೀಯ ಆಚಾರ್ಯ ಶ್ರೀ 108 ವಿದ್ಯಾಸಾಗರ್ ಮಹಾರಾಜರ 59ನೇ ದೀಕ್ಷಾ ದಿನ ಆಚರಣೆಯು ಧಾರವಾಡ ಚಿಕ್ಕಮಲ್ಲಿಗವಾಡ ಹೊರವಲಯದ ಹಿರಿಯ ನ್ಯಾಯಾಧೀಶ ರಾಜಶೇಖರ್ ತಿಳಗಂಜಿ ಇವರ ನಿವಾಸದಲ್ಲಿ ಪರಮಪೂಜ್ಯ ಆಚಾರ್ಯಶ್ರೀ ಪುಣ್ಯಸಾಗರ ಮಹಾರಾಜರ ಮತ್ತು ಪ.ಪೂ ಮುನಿಶ್ರೀ ಪುರಾಣ ಸಾಗರ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ವೈಭವದಿಂದ ಜರುಗಿತು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಶ್ರಾವಕ ಶ್ರಾವಕಿಯರಿಂದ ಆಚಾರ್ಯ ಶ್ರೀ 108 ವಿದ್ಯಾಸಾಗರ ಮಹಾರಾಜರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಂತರ ಪೂಜಾ ಅಷ್ಟಕ ಜರುಗಿತು. ಹಿರಿಯ ನ್ಯಾಯಾಧೀಶ ರಾಜಶೇಖರ್ ತಿಳಗಂಜಿ ಮತ್ತು ಪರಿವಾರದವರು ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ತೀರ್ಥಂಕರರನ್ನು ನಾವು ನೋಡಿಲ್ಲ ಆದರೆ ದೇಶದಾದ್ಯಂತ ಶಾಂತಿ ಅಹಿಂಸೆ ಸಂದೇಶಗಳ ಮೂಲಕ ಧರ್ಮ ಪ್ರಭಾವನೆ ಮಾಡುತ್ತಿರುವ ಕಣ್ಣಿಗೆ ಕಾಣುವ ತೀರ್ಥಂಕರರನ್ನೇ ದಿಗಂಬರ ಮುನಿ ಮಹಾರಾಜರು ಇಂಥ ಮುನಿ ಮಹಾರಾಜರ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನಮ್ಮ ಭಾಗ್ಯ ಎಂದು ತಿಳಿಸಿ ಅವರ ಪಾದಪೂಜೆ ಮಾಡಿ ಆಶೀರ್ವಾದ ಪಡೆದರು. ಇದೇ ಸಂದರ್ಭದಲ್ಲಿ ಕೆ ಜೆ ರಪಾಟಿ, ಎಸ್ ಆರ್ ಮಲ್ಲಸಮುದ್ರ ಮುಂತಾದವರು ಮಾತನಾಡಿದರು. ಪರಮಪೂಜ್ಯ ಮುನಿಶ್ರೀ ಪುರಾಣ ಸಾಗರ ಮಹಾರಾಜರು ತಮ್ಮ ಪ್ರವಚನದಲ್ಲಿ ಆಚಾರ್ಯಶ್ರೀಗಳ ಗುಣಗಾನ ಮಾಡಿ ಸ್ಮರಿಸಿದರು. ಸಾನಿಧ್ಯ ವಹಿಸಿ ಪ್ರವಚನ ದಯಪಾಲಿಸಿದ ಆಚಾರ್ಯ ಶ್ರೀ ಪುಣ್ಯಸಾಗರ ಮಹಾರಾಜರು ಸಂತಶಿರೋಮಣಿ ಆಚಾರ್ಯ ಶ್ರೀ ವಿದ್ಯಾಸಾಗರ ಮಹಾರಾಜರು ಭಾರತ ದೇಶ ಕಂಡ ಅತ್ಯಂತ ಶ್ರೇಷ್ಠ ಪ್ರಭಾವಿ ಆಚಾರ್ಯರಾಗಿದ್ದರು ಅವರು ಆಧ್ಯಾತ್ಮ ಕವಿ, ಲೇಖಕ, ವಿಮರ್ಶಕ, ದಿಗಂಬರ ಜೈನ ಸರೋವರದ ರಾಜಹಂಸ ಎಂದು ಕರೆಯಲ್ಪಡುತ್ತಿದ್ದರು, ಕರ್ನಾಟಕದ ಬೆಳಗಾವಿ ಜಿಲ್ಲೆಯ ಸದಲಗಾ ಗ್ರಾಮದಲ್ಲಿ ಶ್ರೀಮತಿ ಶ್ರೀಮತಿದೇವಿ ಹಾಗೂ ಶ್ರೀ ಮಲ್ಲಪ್ಪಾಜಿಯವರ ಸುಪುತ್ರರಾಗಿ ದಿನಾಂಕ 10-10-1946 ಜನಿಸಿದರು. ಬಾಲ್ಯದಿಂದಲೂ ಆದ್ಯಾತ್ಮದ ಕಡೆ ಒಲವು ಹೊಂದಿದ್ದರು, ಆಚಾರ್ಯ ದೇಷಭೂಷಣ ಮಹಾರಾಜರಿಂದ ಪ್ರಭಾವಿತರಾಗಿ ಅನೇಕ ಸ್ಥಳಗಲ್ಲಿ ಸಂಚಾರಿಸುತ್ತ ಧರ್ಮದ ಅಧ್ಯಯನ ಮಾಡಿದರು. ಪೂಜ್ಯ ಜ್ಞಾನ ಸಾಗರ ಮಹಾರಾಜರಿಂದ ದಿನಾಂಕ 30-6-1968 ರಲ್ಲಿ ದಿಗಂಬರ ದೀಕ್ಷೆ ಪಡೆದು ಇಂದಿಗೆ 58 ವರ್ಷ ಮುಗಿದು 59ನೇ ವರ್ಷಕ್ಕೆ ಜೈನ ಮುನಿಯಾದರು. ಆಚಾರ್ಯರೊಟ್ಟಿಗೆ ಸದಾಕಾಲ ಸಾವಿರಕ್ಕೂ ಹೆಚ್ಚು ಅವರ ಶಿಷ್ಯರು ದೇಶದಾದ್ಯಂತ ವಿಹಾರ ಮಾಡಿ ಜಿನಧರ್ಮದ ಪ್ರಸಾರ ಹಾಗೂ ಧರ್ಮಜ್ಞಾನವನ್ನು ಪ್ರಸರಿಸಿದರು. ಆಶ್ಚರ್ಯವೆಂದರೆ ಆಚಾರ್ಯರ ಮೂಕ ಮಾಟಿ ಎಂಬ ಗ್ರಂಥವು ಜಗತ್ತಿನ ಎಲ್ಲ ಭಾಷೆಗಳಲ್ಲಿ ಪ್ರಕಟವಾಗಿದೆ. ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ. ಇಂಥ ಗುರುವರ್ಯರಿಂದ ನನ್ನನ್ನೂ ಸೇರಿ ಹಲವಾರು ಮುನಿಗಳು ದೀಕ್ಷೆ ಪಡೆದು ಧನ್ಯರಾಗಿದ್ದೇವೆ ಎಂದು ದೀಕ್ಷಾ ಗುರುಗಳನ್ನು ಸ್ಮರಿಸಿದರು. ನಂತರ 59 ದೀಪಗಳಿಂದ ಮಹಾ ಮಂಗಳಾರತಿ ವೈಭವದಿಂದ ನಡೆಯಿತು. ಸಮಾರಂಭದಲ್ಲಿ ಹುಬ್ಬಳ್ಳಿ ನವನಗರ ಧಾರವಾಡ ಮುಮ್ಮಿಗಟ್ಟಿ ಗದಗ ಮುಂತಾದ ಊರುಗಳಿಂದ ಹಲವಾರು ಶ್ರಾವಕ ಶ್ರಾವಕಿಯರು ಭಾಗವಹಿಸಿದ್ದರು. ಕುಶಲ ಅವಲಕ್ಕಿ ಅವರು ಪ್ರಾರ್ಥಿಸಿ, ಎಸ್ ಆರ್ ಮಲ್ಲಸಮುದ್ರರವರು ಸ್ವಾಗತಿಸಿ, ನಂದಿನಿ ಗೊಟೂರೆ ಇವರಿಂದ ಮಂಗಳಾಚರಣೆ ನೆರವೇರಿತು. ವರದಿ : ಶಾಂತರಾಜ ಮಲ್ಲಸಮುದ್ರ.

ಆರ್.ಅನನ್ಯಾ ಜೈನ್-ತೇರ್ಗಡೆ

Article Image

ಆರ್.ಅನನ್ಯಾ ಜೈನ್-ತೇರ್ಗಡೆ

ಮೂಡುಬಿದಿರೆ: ಇಟಲಿಯ ಮಿಲನ್‌ನ ಪ್ರತಿಷ್ಠಿತ ಪಾಲಿಟೆಕ್ನಿಕೊ ಡಿ ಮಿಲನೋ ವಿಶ್ವವಿದ್ಯಾಲಯದಲ್ಲಿ ಆರ್.ಅನನ್ಯಾ ಜೈನ್‌ರವರು ವಾಸ್ತುಶಿಲ್ಪ ವಿನ್ಯಾಸ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಅತ್ಯುತ್ತಮ ಶ್ರೇಣಿಯಲ್ಲಿ ಪೂರ್ಣಗೊಳಿಸಿರುತ್ತಾರೆ. ಇವರು ಮೂಡುಬಿದಿರೆಯ ಡಾ. ಬಿ.ಪಿ. ಸಂಪತ್ ಕುಮಾರ್ ಮತ್ತು ವೀರಶ್ರೀ ದಂಪತಿಗಳ ಪುತ್ರಿ.

ಹಲಸು ನಾ ನಿನ್ನ ಮರೆಯಲಾರೆ

Article Image

ಹಲಸು ನಾ ನಿನ್ನ ಮರೆಯಲಾರೆ

ಹಲಸು ( ಪಿಲಕ್ಕಯಿ ) ತುಳುನಾಡಿನ ಸಂಸ್ಕೃತಿ, ಪರಂಪರೆಗಳಲ್ಲಿ ಒಂದಾಗಿದೆ. ಒಂದು ಕಾಲದಲ್ಲಿ ತುಳುನಾಡಿನಲ್ಲಿ ಹಲಸು ಇಲ್ಲದ ಜೀವನವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅದರಲ್ಲೂ ಬಡವರಿಗೆ ಅದು ಸ್ವರ್ಗ ಸೋಪಾನವಾಗಿತ್ತು, ಜೀವನಧಾರವಾಗಿತ್ತು. ಆದರಿಂದು ಆಧುನಿಕ ಬದುಕಿನ ಓಟದಲ್ಲಿ ಹಲಸು ನಮಗೆ ಬೇಡವೆನಿಸುತ್ತಿದೆ. ಅಂದು ನಾವು ಚಿಕ್ಕವರಿದ್ದಾಗ ಹೊಟ್ಟೆ ಬಟ್ಟೆಗೆ ಬಹಳ ಬರವಿತ್ತು. ಮಕ್ಕಳಿಗೆ ಇದಾವುದರ ಪರಿವೆಯೇ ಇರುವುದಿಲ್ಲ. ಹೊಟ್ಟೆ ತುಂಬಬೇಕು, ಆಟ ಆಡಬೇಕು ಅಷ್ಟೇ. ಮನೆಯ ಕಷ್ಟ ತಂದೆ ತಾಯಿಗಳಿಗೆ ಗೊತ್ತಿರೋದು. ಲೋಕದಲ್ಲಿರುವ ಸಮಸ್ಯೆ ನಮ್ಮ ಮನೆಯಲ್ಲೂ ಇತ್ತು. ಅದರಲ್ಲೂ ಮಳೆಗಾಲ ಬಂತೆಂದರೆ ಸಾಕು ಹೊಟ್ಟೆಯ ದಾಹ ಜಾಸ್ತಿಯಾಗುವುದು. 0.38 ಎಕರೆ ಅಂದರೆ 38 ಸೆನ್ಸ್ ಗದ್ದೆ ಇರುವ ನಮ್ಮಲ್ಲಿ ಎಂಟು ಜನರಿಗೆ ಉಣ್ಣಲು ಅಕ್ಕಿ ಸಾಲುತ್ತಿರಲಿಲ್ಲ. ತಂದೆ ಹೊರಗಡೆ ಹೋಗಿ ದುಡಿದು ತಂದರೂ ಹೊಟ್ಟೆ ತುಂಬುವ ಪರಿಸ್ಥಿತಿ ಇರಲಿಲ್ಲ. ಆಗ ನಮ್ಮ ಅಪ್ಪಾಜಿ ಕಂಡುಕೊಂಡ ದಾರಿಯೇನೆಂದರೆ ಹಲಸಿನಿಂದ ಹೊಟ್ಟೆ ತುಂಬಿಸಿಕೊಳ್ಳುವ ಮಾರ್ಗ. ಹಲಸು ಪ್ರಾರಂಭವಾದ ದಿನದಿಂದ ಹಿಡಿದು ಹಲಸು ಮುಗಿಯುವವರೆಗೆ ನಮಗೆ ಮುಖ್ಯ ಆಹಾರಗಳಲ್ಲಿ ಹಲಸೂ ಕೂಡ ಆಗಿತ್ತು. ಕಾಯಿ ಹಲಸಿನ ಉಪ್ಪುಕಾರಿ ಅಂದರೆ ಹಲಸನ್ನು ಬೇಯಿಸಿ ತಿನ್ನುವುದು, ರಾಶಿ ರಾಶಿ ಹಪ್ಪಳ ಹಾಕುವುದು ನಮ್ಮ ಮನೆಯಲ್ಲಿ ಖಾಯಂ. ನಮಗೂ ಅನ್ನದ ಬದಲಿಗೆ ಹಲಸಿನ ಉಪ್ಪುಕಾರಿ ( ಉರುವೆಲ್ ) ಬಹಳ ಅಪ್ಯಾಯಮಾನವಾಗುತ್ತಿತ್ತು. ಒಮ್ಮೊಮ್ಮೆ ಮೂರು ಹೊತ್ತೂ ಇದೇ ಇರುತ್ತಿತ್ತು. ಆದರೆ ಅಮ್ಮ ಬಯ್ಯುತ್ತಿದ್ದರು ಮೂರೂ ಹೊತ್ತೂ ಇದನ್ನೇ ತಿಂದರೆ ಮಕ್ಕಳ ಆರೋಗ್ಯ ಏನಾಗಬಹುದು ಎಂಬುದು ಅವರ ಕಳವಳ. ನಮ್ಮ ಮನೆಯ ಹಪ್ಪಳವಂತೂ ನಮಗೆ ಪಂಚ ಪ್ರಾಣ. ಹಪ್ಪಳವೇ ಮನೆಗೆ ಬರುವ ನೆಂಟರಿಗೆ ಅತಿಥಿ ಸತ್ಕಾರ. ಧೋ.. ಎಂದು ಸುರಿಯವ ಜಡಿ ಮಳೆಗೆ ಜಿಗಿಜಿಗಿ ಕೆಂಡದಲ್ಲಿ ಹಾಕಿ ಬೇಯಿಸಿದ ಹಪ್ಪಳ ಮತ್ತು ತೆಂಗಿನಕಾಯಿ ಚೂರುಗಳು ಆಹಾ ಜಗತ್ತಿನಲ್ಲಿ ಇದಕ್ಕಿಂತ ರುಚಿಯಾದ ತಿನಿಸೇ ಇಲ್ಲವಾಗಿತ್ತು ನಮಗೆ. ಯಾವಾಗ ನೋಡಿದರೂ ಹಲಸಿನ ಪಲ್ಯ, ಊಟಕ್ಕಿಂತ ಎರಡು ಪಾಲು ಜಾಸ್ತಿ ಹಾಕಿಸಿಕೊಳ್ಳುವ ಪಲ್ಯ, ಕಾಯಿ ಹಲಸನ್ನು ಉಪ್ಪಿನ ದ್ರಾವಣದಲ್ಲಿ ಹಾಕಿಟ್ಟರೆ ಆವಾಗವಾಗ ಬೇಕದಾಗ ಖಾರ ಪಲ್ಯ ಹೊಟ್ಟೆಯೂ ತುಂಬುತ್ತಿತ್ತು ಅಕ್ಕಿಯ ಸಮಸ್ಯೆಯೂ ನೀಗುತ್ತಿತ್ತು. ಹಲಸು ಹಣ್ಣಾದ ಮೇಲೆ ಮತ್ತೊಂದು ರೀತಿಯ ಸಂಭ್ರಮ. ಹಲಸಿನ ಹಣ್ಣಿನ ಕಡುಬು ( ಗಟ್ಟಿ ) , ದೋಸೆ ( ಗಾರಿಯಾ ), ಹಂಗುಲಿ, ಹಲಸು ಹಣ್ಣಿನ ಉಪ್ಪುಕಾರಿ ವಾಹ್ ಎಂತೆಂತಾ ತಿಂಡಿಗಳು ನಮಗೆಲ್ಲರಿಗೂ ಅದು ಅಂದು ದೇವಲೋಕದ ಆಹಾರದಂತೆ ಆಗಿತ್ತು. ಇನ್ನು ಹಲಸಿನ ಬೀಜ ಅದನ್ನು ಮಣ್ಣಿನ ನೆಲದಲ್ಲಿ ಬತ್ತದ ಹೊಟ್ಟಿನ ಜೊತೆ ಶೇಖರಣೆ ಮಾಡುತ್ತಾರೆ. ಬಿಸಿಲು ಇಲ್ಲದ ಕಾರಣ ಹಲಸಿನ ಬೀಜವನ್ನು ಒಣಗಿಸುವ ವಿಧಾನ ಹಾಗೂ ಇದರಿಂದ ಹಲಸಿನ ಬೀಜ ಸಂರಕ್ಷಿತವಾಗಿರುತ್ತದೆ. ಒಣಗಿದ ಹಲಸಿನ ಬೀಜವನ್ನು ನಿಗಿ ನಿಗಿ ಕೆಂಡದಲ್ಲಿ ಹದವಾಗಿ ಬೇಯಿಸಿ ತಿನ್ನುವುದೆಂದರೆ ಈಗಿನ ಯಾವ ವಿಷಕಾರಿ ಚಾಕಲೇಟ್ ಮುಂತಾದ ಆಧುನಿಕ ತಿಂಡಿಗೂ ಸರಿ ಬರುವುದಿಲ್ಲ. ಹಲಸಿನ ಬೀಜದ ಪಲ್ಯ, ಉಪ್ಪಕಾರಿ ( ಉಪ್ಪಿಟ್ಟು ), ಹಲಸಿನ ಬೀಜದ ರೊಟ್ಟಿ, ವಡೆ ಇತ್ಯಾದಿ ಒಂದೇ ಎರಡೇ ಬಗೆಬಗೆ ತಿಂಡಿಗಳು ಆರೋಗ್ಯಕ್ಕೂ, ದೇಹಕ್ಕೂ, ಮನಸ್ಸಿಗೂ ಅದರಲ್ಲೂ ಮುಖ್ಯವಾಗಿ ಇದು ಬಡವರ ಪಾಲಿನ ಕಾಮಧೇನುವಾಗಿತ್ತು. ಮಳೆಗಾಲದಲ್ಲಿ ನಮ್ಮ ಅಪ್ಪಾಜಿಗೆ ಹಲಸು ಒಟ್ಟು ಮಾಡುವುದೇ ಕೆಲಸ. ಭೋರ್ಗರೆಯು ನದಿಯನ್ನು ದಾಟಿ ಕುದ್ಯಾಡಿ ಕೃಷ್ಣ ಭಟ್ಟರ ಮನೆಯಿಂದ, ಕೊಕ್ರಾಡಿ ಕಜಂಗೆಯಿಂದ ಹಲಸು ಹೊತ್ತು ತರುವುದು ಅವರ ಸಾಹಸಮಯ ವೀರೋಚಿತ ಗಾಥೆಯಾಗಿದೆ. ಪ್ರಾಕೃತಿಕವಾಗಿ ಬೆಳೆಯುವ ಹಲಸು ಪೋಷಕಾಂಶಗಳ ಆಗರವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಮತ್ತು ಹೃದಯದ ಆರೋಗ್ಯಕ್ಕೆ, ಕಣ್ಣು ಹಾಗೂ ಚರ್ಮದ ಕಾಂತಿಗೆ ತುಂಬಾ ಒಳ್ಳೆಯದು. ಇದು ನಾರಿನಂಶ, ವಿಟಮಿನ್ ಸಿ, ಮತ್ತು ಪೊಟ್ಯಾಸಿಯಮ್ ಅನ್ನು ಒಳಗೊಂಡಿದೆ. ಆದರಿಂದು ಹಲಸು ಬಹುತೇಕರಿಗೆ ಅಪಥ್ಯವಾಗುತ್ತಿದೆ. ನಮ್ಮ ಮನೆಯಲ್ಲೂ ಹಲಸು ಬಳಕೆ ಕಮ್ಮಿಯಾಗುತ್ತಿದೆ. ಗ್ರಾಮೀಣ ಪ್ರದೇಶದವರೂ ಕೂಡ ಈಗ ತಿನ್ನುವುದನ್ನು ಕಡಿಮೆ ಮಾಡಿದ್ದಾರೆ. ಹಲಸು ದೂರವಾಗುತ್ತಿದೆ. ಹಲಸು ತಿಂದರೆ ಅಜೀರ್ಣ, ಗ್ಯಾಷ್ಟ್ರಿಕ್ ಸಮಸ್ಯೆ ಬರುತ್ತಿದೆ ಎಂದು ಅನ್ನುತ್ತಿದ್ದಾರೆ. ರಾಸಾಯನಿಕಗಳನ್ನು ಬಳಸಿ ಬೆಳೆಸಿದ ತರಕಾರಿಯೇ ಆಗಬಹುದು ಅನ್ನುತ್ತಿದ್ದಾರೆ. ಅಮೃತದ ಬದಲು ವಿಷವೇ ಪ್ರಿಯವಾಗುತ್ತಿದೆ. ಹಣ್ಣಾದ ಹಲಸುಗಳನ್ನು ಇಂದು ಪ್ರಾಣಿ ಪಕ್ಷಿಗಳು ಬಂದು ತಿನ್ನುವುದು ನೋಡಿ ಅವುಗಳಾದರೂ ತಿಂದವಲ್ಲ ಎಂದು ಮನಸಿಗೆ ಸಮಾಧಾನವಾಗುತ್ತದೆ. ಆದರೆ ನನಗಂತೂ ಹಲಸು ಇಂದಿಗೂ ಪ್ರಿಯವೇ ಇದೆ. ಹಲಸು ನಾ ನಿನ್ನ ಎಂದೂ ಮರೆಯಲಾರೆ ..... ನಿರಂಜನ್ ಜೈನ್ ಕುದ್ಯಾಡಿ

ಸಿಂಗಾಪುರ: 24 ತೀರ್ಥಂಕರ ಜಿನ ಬಿಂಬ ಸ್ಥಾಪನೆ ಕಾರ್ಯಕ್ರಮ

Article Image

ಸಿಂಗಾಪುರ: 24 ತೀರ್ಥಂಕರ ಜಿನ ಬಿಂಬ ಸ್ಥಾಪನೆ ಕಾರ್ಯಕ್ರಮ

ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಪರಮಪೂಜ್ಯ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಪ್ರಥಮ ವಿದೇಶ ಪ್ರವಾಸ. ಸಿಂಗಾಪುರದಲ್ಲಿ ಹೊಸ ಜಿನಾಲಯದಲ್ಲಿ 24 ತೀರ್ಥಂಕರ ಜಿನ ಬಿಂಬ ಸ್ಥಾಪನೆ ಕಾರ್ಯಕ್ರಮ ವಿಧಿ ವಿಧಾನ ಪೂರ್ವಕ ಅದ್ದೂರಿಯಾಗಿ ಪೂಜ್ಯ ಸ್ವಾಮೀಜಿಯವರ ಸಾನಿಧ್ಯದಲ್ಲಿ ನಡೆಯಿತು. ಒಂದು ವಾರ ಸಿಂಗಾಪುರ ಮತ್ತು ಮಲೇಶಿಯಾ ಧಾರ್ಮಿಕ ವಿಜಯ ಯಾತ್ರೆಯನ್ನು ಮುಗಿಸಿ ಶ್ರವಣಬೆಳಗೊಳಕ್ಕೆ ಬಂದಾಗ ಸಿಂಗಾಪುರ ಜೈನ್ ಮಿಲನ್ ಅಧ್ಯಕ್ಷ ಸುಮಂತ್ ಪ್ರಕಾಶ್ ಮೈಸೂರಿನ ಪ್ರಕಾಶ್ ಮತ್ತು ಪ್ರಮೀಳಾ ಹಾಗೂ ಪ್ರಸನ್ನ ಕುಮಾರ್ ಮತ್ತು ನಾಗರತ್ನ ರವರು ಪೂಜ್ಯರನ್ನು ಭೇಟಿ ಮಾಡಿದ್ದರು. ಪೂಜ್ಯ ಸ್ವಾಮೀಜಿಯವರು ಸಿಂಗಾಪುರ ಜಿನಬಿಂಬ ಪ್ರತಿಷ್ಠಾ ಕಾರ್ಯಕ್ರಮದ ಸ್ಮರಣಿಕೆಯನ್ನು ನೀಡಿ ಆಶೀರ್ವದಿಸಿದರು.

ಉತ್ತರ ಪ್ರದೇಶ: ಪಂಚ ಕಲ್ಯಾಣ ಮಹೋತ್ಸವ

Article Image

ಉತ್ತರ ಪ್ರದೇಶ: ಪಂಚ ಕಲ್ಯಾಣ ಮಹೋತ್ಸವ

ಲಕ್ನೋ ಬಳಿಯ ಕಾಕೋರಿ ದಿಗಂಬರ ಜೈನ ಅತಿಶಯ ಕ್ಷೇತ್ರದಲ್ಲಿ ಭಗವಾನ್ ಅಧಿನಾಥ ಸ್ವಾಮಿ ಪಂಚ ಕಲ್ಯಾಣ, ಕರ‍್ಕಳ ಶಿಲೆಯಲ್ಲಿ ನಿರ್ಮಾಣಗೊಂಡ ನೂತನ ಮೂರು ಅಡಿಯ ಪದ್ಮಾವತಿದೇವಿ ಮೂರ್ತಿಯ ಪ್ರತಿಷ್ಠಾಪನೆಯು ಆಚಾರ್ಯ 108 ವಿಶುದ್ಧ ಸಾಗರ, ಆಚಾರ್ಯ ಸುಬಲ ಸಾಗರ, ವಿವಿಕ್ತ ಶ್ರೀ ಮಾತಾಜಿಗಳವರುಗಳ ಪಾವನ ಸಾನಿಧ್ಯದಲ್ಲಿ ಮೂಡುಬಿದಿರೆ ಶ್ರೀ ಜೈನ ಮಠದ ಪ.ಪೂ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಮಾರ್ಗದರ್ಶನ, ಉಪಸ್ಥಿತಿಯಲ್ಲಿ ಜಿನ ಆಗ ಮೊಕ್ತ ರೀತಿಯಲ್ಲಿ ನೆರವೇರಿತು. ಆಚಾರ್ಯ ವಿಶುದ್ಧ ಸಾಗರ ಮುನಿ ಮಹಾರಾಜರು ಜ್ಞಾನವೇ ಸರ್ವರಿಗೂ ಹಿತವನ್ನು ಉಂಟು ಮಾಡುವುದು ಸಮಾನತೆ-ಸಭ್ಯತೆಯ ಪ್ರತೀಕ ಸಮವ ಸರಣ. ಉ.ಪ್ರ ಅವಧ್ಯ ಪ್ರಾಂತ್ಯದಲ್ಲಿ ಅತೀ ಹೆಚ್ಚು 18 ತೀರ್ಥಂಕರರು ಜನ್ಮ ಪಡೆದ ಪವಿತ್ರ ಭೂಮಿ ಭಗವಂತರ ಭಕ್ತಿ ಮುಕ್ತಿಗೆ ಸೋಪಾನ ಎಂದು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ರವೀಂದ್ರ ಕೀರ್ತಿ ಸ್ವಾಮೀಜಿ ಹಸ್ತಿ ನಾಪುರ, ನರೇಶ್ ಪಂಡಿತ್,ಪ್ರವೀಣ್ ಶಾಸ್ತ್ರೀ, ಭೂಪಾಲ್, ಚಂದೇರಿ ಬ್ರ. ಬನಾರಸಿ ದಾಸ್ ಕ್ಷೇತ್ರದ ಅಧ್ಯಕ್ಷ ಕೈಲಾಶ್, ಸಂದೀಪ್, ಸನ್ಮತ್, ಸಜಲ್ ಜೈನ್, ಪಣಿರಾಜ್, ಅನುರಾಗ ಮಿಶ್ರ ಜಿಲ್ಲಾ ನ್ಯಾಯಧೀಶರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಬಳಿಕ 21 ಅಡಿಯ ಭಗವಾನ್ ಅಧಿನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕದಿಂದ ಮಹಾ ಮಸ್ತಕಾಭಿಷೇಕ ನೆರವೇರಿತು.

ಮೂಡುಬಿದಿರೆ: ಇನ್ನರ್ ವೀಲ್ ಕ್ಲಬ್ ಗೆ ಪ್ರಶಸ್ತಿ

Article Image

ಮೂಡುಬಿದಿರೆ: ಇನ್ನರ್ ವೀಲ್ ಕ್ಲಬ್ ಗೆ ಪ್ರಶಸ್ತಿ

ಇನ್ನರ್ ವೀಲ್ ಕ್ಲಬ್ ಮೂಡುಬಿದಿರೆ 2025–2026ನೇ ಸಾಲಿನಲ್ಲಿ ಸಮಾಜಮುಖಿ ಸೇವಾ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ದಾಖಲಿಸಿದ್ದು, 55 ಇನ್ನರ್ ವೀಲ್ ಕ್ಲಬ್‌ಗಳ ಪೈಕಿ ಅತ್ಯಧಿಕ ಸಂಖ್ಯೆಯ 200 ಸಮಾಜಮುಖಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಕ್ಲಬ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ "Special Recognition for Remarkable Highest Number of Projects" ವಿಶೇಷ ಗೌರವವನ್ನು ಪಡೆದುಕೊಂಡಿದೆ. ಕ್ಲಬ್‌ನ ಅಧ್ಯಕ್ಷೆ ಶ್ವೇತ ಜೈನ್ ಅವರ ಸಮರ್ಥ ನಾಯಕತ್ವ, ದೂರದೃಷ್ಟಿ ಮತ್ತು ಸಮಾಜಸೇವೆಯ ಬದ್ಧತೆಯ ಫಲವಾಗಿ ಈ ಮಹತ್ವದ ಸಾಧನೆ ಸಾಧ್ಯವಾಗಿದೆ. ಅವರ ಮಾರ್ಗದರ್ಶನದಲ್ಲಿ ಆರೋಗ್ಯ, ಶಿಕ್ಷಣ, ಮಹಿಳಾ ಸಬಲೀಕರಣ,ಮಕ್ಕಳ ಹಕ್ಕುಗಳು, ಹಿರಿಯ ನಾಗರಿಕರ care, ಪರಿಸರ ಸಂರಕ್ಷಣೆ ಹಾಗೂ ವಿವಿಧ ಸಮಾಜಮುಖಿ ಕ್ಷೇತ್ರಗಳಲ್ಲಿ ಅನೇಕ ಪರಿಣಾಮಕಾರಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಯಿತು. ಈ ಸಾಧನೆಗೆ ಕಾರ್ಯದರ್ಶಿ ಅನಿತಾ ಪೃತ್ವಿರಾಜ್ ಶೆಟ್ಟಿ ಹಾಗೂ ಕ್ಲಬ್‌ನ ಎಲ್ಲಾ ಸದಸ್ಯೆಯರ ಶ್ರಮ, ಸಹಕಾರ ಮತ್ತು ಸಮರ್ಪಿತ ಸೇವೆಯೂ ಪ್ರಮುಖ ಕಾರಣವಾಗಿದೆ ಎಂಬುದನ್ನು ಅಧ್ಯಕ್ಷರು ನೆನಪಿಸಿಕೊಳ್ಳುತ್ತಾರೆ.

ಮೈಸೂರು: 20ನೇ ವಲಯ ಸಮ್ಮೇಳನ

Article Image

ಮೈಸೂರು: 20ನೇ ವಲಯ ಸಮ್ಮೇಳನ

ಮೈಸೂರು: ಭಾರತೀಯ ಜೈನ್ ಮಿಲನ್ ವಲಯ 8ರ 20ನೇ ವಲಯ ಸಮ್ಮೇಳನವು ಇತ್ತೀಚೆಗೆ ಮಾನಸ ಗಂಗೋತ್ರಿಯ ಸೆನೆಟ್ ಹಾಲ್ ನಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರಾದ ಪ್ರಸನ್ನ ಕುಮಾರ್ ರವರು ವಿದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜೈನ್ ಮಿಲನ್ ಗಳ ಬಗ್ಗೆ ಮಾಹಿತಿ ನೀಡಿದರು. ದುಬೈ, ಜರ್ಮನಿ, ಲಂಡನ್, ಅಮೇರಿಕಾ, ಕೆನಡಾ, ಆಸ್ಟ್ರೇಲಿಯಾ ಮತ್ತು ಸಿಂಗಾಪುರದಲ್ಲಿ ಜೈನ್ ಮಿಲನ್ ಶಾಖೆಗಳು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದು ಬಹಳ ಜನಪ್ರಿಯವಾಗಿವೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕಾರ್ಯಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್, ರಾಷ್ಟ್ರೀಯ ಉಪಾಧ್ಯಕ್ಷೆ ಅನಿತಾ ಸುರೇಂದ್ರ ಕುಮಾರ್ ಸೇರಿದಂತೆ ಗಣ್ಯಾತೀಗಣ್ಯರು ಉಪಸ್ಥಿತರಿದ್ದರು.

ಸಿ.ಎ. ಇಂಟರ್ ಮೀಡಿಯೇಟ್ ಪರೀಕ್ಷೆ ಫಲಿತಾಂಶ: ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

Article Image

ಸಿ.ಎ. ಇಂಟರ್ ಮೀಡಿಯೇಟ್ ಪರೀಕ್ಷೆ ಫಲಿತಾಂಶ: ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಮೂಡುಬಿದಿರೆ: ಮೇ 2026ರಲ್ಲಿ ನಡೆದ ಸಿ.ಎ. ಇಂಟರ್ ಮೀಡಿಯೇಟ್ ಪರೀಕ್ಷೆಯಲ್ಲಿ ಆಳ್ವಾಸ್ ಬಿ.ಕಾಂ. ವಿದ್ಯಾರ್ಥಿಗಳಾದ ಗೋಡ್ವಿಲ್ ವಿನ್ಸ್ಟಾನ್ ವಾಸ್ (355), ಶೆಟ್ಟಿ ರಾಹುಲ್ ಉಮೇಶ್(313), ಎನ್. ಚಿರಂತನಾ(312) ಹಾಗೂ ರೋಹಿತ್ ಪೂಜಾರಿ (304) ಗ್ರೂಪ್-01 ಮತ್ತು ಗ್ರೂಪ್-02 ವಿಭಾಗದಲ್ಲಿ ಮೊದಲ ಪ್ರಯತ್ನದಲ್ಲಿ ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ. ಇಂಟರ್ ಮೀಡಿಯಟ್ ಗ್ರೂಪ್-01 ವಿಭಾಗದಲ್ಲಿ ಪ್ರಸ್ಮಿಯಾ (162), ಪನ್ನಗ ಜೈನ್ (157), ವಿಜಯ್ ಕುಮಾರ್(164), ಸಾನಿಯಾ (150), ಪ್ರಸಿದ್ಧ್ ಪೂಜಾರಿ(150), ಮೋನಿಶಾ ಕುಂದರ್(163) ಹಾಗೂ ಶ್ರೇಯಾ ಸುರೇಂದ್ರ ಪೂಜಾರಿ(150) ಉತ್ತೀರ್ಣರಾಗಿರುತ್ತಾರೆ. ಇಂಟರ್ ಮೀಡಿಯಟ್ ಗ್ರೂಪ್-02 ವಿಭಾಗದಲ್ಲಿ ಗಿರೀಶ್ (179) ಹಾಗೂ ತರುಣ್ ಕುಮಾರ್(152) ಅಂಕದೊಂದಿಗೆ ಉತ್ತೀರ್ಣರಾಗಿದ್ದಾರೆ. ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವರು ಅಭಿನಂದಿಸಿದ್ದಾರೆ.

ದಿಯಾ ಆಳ್ವಾ :-ರಾಜ್ಯಕ್ಕೆ 10 ನೇ ರ‍್ಯಾಂಕ್

Article Image

ದಿಯಾ ಆಳ್ವಾ :-ರಾಜ್ಯಕ್ಕೆ 10 ನೇ ರ‍್ಯಾಂಕ್

ಎಸ್.ಎಸ್.ಎಲ್.ಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಮೂಡುಬಿದಿರೆ ಡಿ.ಜೆ.ಇಂಗ್ಲೀಷ್ ಮೀಡಿಯಂ ಶಾಲೆಯ ವಿದ್ಯಾರ್ಥಿನಿ. ದಿಯಾ ಆಳ್ವಾರವರು 625ಕ್ಕೆ 616 ಅಂಕಗಳನ್ನು ಪಡೆದು ರಾಜ್ಯಕ್ಕೆ 10ನೇ ರ‍್ಯಾಂಕನ್ನು ಪಡೆದಿರುತ್ತಾರೆ. ಇವರು ಮೂಡುಬಿದಿರೆಯ ಪ್ರಕಾಶ್ ಮತ್ತು ಪ್ರಸನ್ನ ದಂಪತಿಗಳ ಪುತ್ರಿ. ಪ್ರಸ್ತುತ ಆಳ್ವಾಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಇವರ ಸಾಧನೆಗಳು:- *ನಮ್ಮ T.V ರಿಯಾಲಿಟಿ ಶೋ ಸೀಸನ್ 2 ರಾಜ್ಯ ಮಟ್ಟದ ಡಾನ್ಸ್ ಸ್ಪರ್ಧೆಯ ವಿನ್ನರ್ ಆಗಿ ಹೊರಹೊಮ್ಮಿರುತ್ತಾರೆ. *ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಮಂಗಳೂರು, ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಮಂಗಳೂರಿನಲ್ಲಿ ನಡೆದ ತುಳು ಹಾಗೂ ಕನ್ನಡ ಸಾಹಿತ್ಯೋತ್ಸವದಲ್ಲಿ ‘ಚೈತನ್ಯ ಶ್ರೀ ರಾಜ್ಯ ಪ್ರಶಸ್ತಿ’ ಗೆ ಭಾಜನರಾಗಿರುತ್ತಾರೆ. * ಶ್ರೀ ಕ್ಷೇತ್ರ ಶ್ರವಣ ಬೆಳಗೊಳ ಜೈನಮಠ, ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಇದರ ಸಹಯೋಗದಲ್ಲಿ 13-05-2022ರಂದು ಉಡುಪಿನಲ್ಲಿ ದಡೆದ 12 ನೇ ಅಖಿಲ ಕರ್ನಾಟಕ ಬೆಳಂದಿಗಳ ಸಾಹಿತ್ಯ ಸಮ್ಮೇಳನದಲ್ಲಿ ‘ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿ’ಯನ್ನು ಪಡೆದಿರುತ್ತಾರೆ. * ಶಟಲ್, ವಾಲಿಬಾಲ್ ಜಿಲ್ಲಾಮಟ್ಟ, ಅತ್ಲೆಟಿಕ್ ಕ್ರೀಡೆಗಳಲ್ಲಿ ರಾಜ್ಯ ಮಟ್ಟದವರೆಗೆ ಪ್ರತಿನಿಧಿಸಿದ್ದಾರೆ. * ಮಕ್ಕಿಮನೆ ಕಲಾವೃಂದದ ಸಕ್ರಿಯ ಸದಸ್ಯೆಯಾಗಿ ರಾಜ್ಯಾಂದತ್ಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ.

ಡಾ. ಅರ್ಹಂತ್ ಕುಮಾರ್ ಎ. ಅವರಿಗೆ ಪಿಎಚ್.ಡಿ. ಪದವಿ ಪ್ರದಾನ

Article Image

ಡಾ. ಅರ್ಹಂತ್ ಕುಮಾರ್ ಎ. ಅವರಿಗೆ ಪಿಎಚ್.ಡಿ. ಪದವಿ ಪ್ರದಾನ

ಆಯುರ್ವೇದ, ಸಂಸ್ಕೃತ ಹಾಗೂ ವೈದ್ಯಕೀಯ ಹಸ್ತಪ್ರತಿಶಾಸ್ತ್ರ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ ಉಡುಪಿಯ ಡಾ. ಅರ್ಹಂತ್ ಕುಮಾರ್ ಎ. ಅವರಿಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS), ಬೆಂಗಳೂರು ವತಿಯಿಂದ ಪಿಎಚ್.ಡಿ. ಪದವಿ ಪ್ರದಾನ ಮಾಡಲಾಗಿದೆ. ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪ್ರೇರಣೆಯಿಂದ, ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಕೃತಿ ಸಂಶೋಧನಾ ಕೇಂದ್ರದಲ್ಲಿ ಸಂಗ್ರಹಿಸಲ್ಪಟ್ಟ ಆಚಾರ್ಯ ಪೂಜ್ಯಪಾದ ವಿರಚಿತ ವೈದ್ಯಕೀಯ ತಾಳೆಗರಿ ಗ್ರಂಥಗಳ ಕುರಿತು ನಡೆಸಿದ ಮಹತ್ವದ ಸಂಶೋಧನೆಗಾಗಿ ಈ ಗೌರವ ಅವರಿಗೆ ಲಭಿಸಿದೆ. ಅವರ ಸಂಶೋಧನಾ ವಿಷಯ “Compendious Literary Research on the Medical Literatures of Acharya Pujyapada: A Regional Jaina Vaidya of Karnataka” ಆಗಿದ್ದು, ಈ ಸಂಶೋಧನೆಯನ್ನು ಮೈಸೂರಿನ ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಶ್ರೀವತ್ಸ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಶೈಕ್ಷಣಿಕ ಸಾಧನೆಗಳ ಪಯಣ: ಡಾ. ಅರ್ಹಂತ್ ಕುಮಾರ್ ಅವರು ಸುಳ್ಯದ ಕೆ.ವಿ.ಜಿ. ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಿಂದ ಬಿ.ಎ.ಎಂ.ಎಸ್. ಪದವಿಯನ್ನು ಪಡೆದಿದ್ದಾರೆ. ಬಳಿಕ ಮೈಸೂರು ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಿಂದ ಆಯುರ್ವೇದ ಸಂಹಿತಾ ಮತ್ತು ಸಿದ್ಧಾಂತ ವಿಭಾಗದಲ್ಲಿ ಎಂ.ಡಿ. ಪದವಿ ಪಡೆದರು. ಇದರ ಜೊತೆಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಎಂ.ಎ. ಪದವಿ ಹಾಗೂ ಮುಂಬೈ ವಿಶ್ವವಿದ್ಯಾಲಯದಿಂದ ಹಸ್ತಪ್ರತಿಶಾಸ್ತ್ರ (Manuscriptology) ವಿಷಯದಲ್ಲಿ ಡಿಪ್ಲೊಮಾವನ್ನು ಪೂರ್ಣಗೊಳಿಸಿದ್ದಾರೆ. ಸಂಶೋಧನೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಕೊಡುಗೆ: ವೈದ್ಯಕೀಯ ಹಸ್ತಪ್ರತಿಶಾಸ್ತ್ರ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ಡಾ. ಅರ್ಹಂತ್ ಕುಮಾರ್ ಅವರು 26ಕ್ಕೂ ಅಧಿಕ ಆಯುರ್ವೇದ ಗ್ರಂಥಗಳನ್ನು ರಚಿಸಿದ್ದಾರೆ. ಫ್ಲೋರಲ್ ಮೆಡಿಸಿನ್ ಇನ್ ಆಯುರ್ವೇದ, ವೈದ್ಯವಲ್ಲಭ ಹಾಗೂ ವೈದ್ಯಕೌಸ್ತುಭ ಮೊದಲಾದ ಕೃತಿಗಳು ವಿಶೇಷವಾಗಿ ಪ್ರಸಿದ್ಧಿ ಪಡೆದಿವೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ 100ಕ್ಕೂ ಹೆಚ್ಚು ಸಮ್ಮೇಳನಗಳು, ಕಾರ್ಯಾಗಾರಗಳು ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಉಪನ್ಯಾಸಗಳನ್ನು ನೀಡಿರುವ ಅವರು, ಆಯುರ್ವೇದ ಜ್ಞಾನ ಪ್ರಸಾರದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಪ್ರತಿಷ್ಠಿತ ಪ್ರಶಸ್ತಿ: ಆಯುರ್ವೇದ ಕ್ಷೇತ್ರದಲ್ಲಿ ಸಲ್ಲಿಸಿರುವ ವಿಶಿಷ್ಟ ಸೇವೆ, ಸಂಶೋಧನಾ ಕೊಡುಗೆ ಮತ್ತು ಶೈಕ್ಷಣಿಕ ಸಾಧನೆಗಳನ್ನು ಪರಿಗಣಿಸಿ, 2025ರಲ್ಲಿ ಬೆಂಗಳೂರಿನಲ್ಲಿ ನಡೆದ ದ್ವಿತೀಯ ವಿಶ್ವ ಆಯುರ್ವೇದ ಶೃಂಗಸಭೆಯಲ್ಲಿ ಇವರಿಗೆ ಪ್ರತಿಷ್ಠಿತ “ಆಯುರ್ವೇದ ವಿಶ್ವರತ್ನ ಪ್ರಶಸ್ತಿ” ನೀಡಿ ಗೌರವಿಸಲಾಯಿತು. ಪ್ರಸ್ತುತ ಸೇವೆ: ಡಾ. ಅರ್ಹಂತ್ ಕುಮಾರ್ ಅವರು ಉಡುಪಿ ಜಿಲ್ಲೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಸ್ನಾತಕೋತ್ತರ ಸಂಹಿತಾ, ಸಿದ್ಧಾಂತ ಮತ್ತು ಸಂಸ್ಕೃತ ವಿಭಾಗದಲ್ಲಿ ವೈದ್ಯರು ಹಾಗೂ ಸಹ ಪ್ರಾಧ್ಯಾಪಕರಾಗಿ ಕಳೆದ 13 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕುಟುಂಬ ಮತ್ತು ವ್ಯಕ್ತಿತ್ವ: ನಿವೃತ್ತ ಬ್ಯಾಂಕ್ ವ್ಯವಸ್ಥಾಪಕರಾದ ಚಂದ್ರಶೇಖರ್ ಮತ್ತು ನಾಗರತ್ನ ದಂಪತಿಗಳ ಪುತ್ರರಾಗಿರುವ ಡಾ. ಅರ್ಹಂತ್ ಕುಮಾರ್ ಅವರು ಆಯುರ್ವೇದ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ವಿದ್ವಾಂಸರು ಹಾಗೂ ವೈದ್ಯರಾಗಿದ್ದಾರೆ. ಇವರ ಪತ್ನಿ ನಂದಶ್ರೀ ಅವರು ಹಾಗೂ ಪುತ್ರರಾದ ಸರ್ವಾರ್ಥ್ ಮತ್ತು ಸಿದ್ಧಾಂತ್ ಇವರ ಸಾಧನೆಗೆ ಸದಾ ಬೆಂಬಲವಾಗಿದ್ದಾರೆ.

ಹಂಸಶ್ರೀ- ಪಿ.ಎಚ್.ಡಿ. ಪದವಿ

Article Image

ಹಂಸಶ್ರೀ- ಪಿ.ಎಚ್.ಡಿ. ಪದವಿ

ಹಂಸಶ್ರೀ ಅವರು ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT), ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE), ಸ್ಕೂಲ್ ಆಫ್ ಸಿವಿಲ್ ಅಂಡ್ ಕೆಮಿಕಲ್ ಎಂಜಿನಿಯರಿಂಗ್ ವಿಭಾಗದ ಡಾ. ಪೂರ್ಣಚಂದ್ರ ಪಂಡಿತ್ ಅವರ ಮಾರ್ಗದರ್ಶನದಲ್ಲಿ “Mechanical and Durability Performance of One-Part Alkali-Activated Concrete Incorporating Concrete Wash Water” ಎಂಬ ವಿಷಯದ ಕುರಿತು ಸಂಶೋಧನೆ ನಡೆಸಿ, ಯಶಸ್ವಿಯಾಗಿ ಪ್ರಬಂಧ ಮಂಡಿಸಿ, ಪಿ.ಎಚ್.ಡಿ. ಪದವಿ ಪಡೆದಿರುತ್ತಾರೆ. ಇವರು ಮೂಡಬಿದ್ರೆಯ ನಿವೃತ್ತ ಬ್ಯಾಂಕ್ ಉದ್ಯೋಗಿ ಶಾಂತಿರಾಜ್ ಕೆ. ಹಾಗೂ ನಿವೃತ್ತ ಶಿಕ್ಷಕಿ ಶೋಭಾ ಕೆ. ಅವರ ಪುತ್ರಿ.

ಶಿಶಿಲ: ಪ್ರೀತಮ್ ಜೈನ್ ಇಂಡಿಯನ್ ಆರ್ಮಿಗೆ ಆಯ್ಕೆ

Article Image

ಶಿಶಿಲ: ಪ್ರೀತಮ್ ಜೈನ್ ಇಂಡಿಯನ್ ಆರ್ಮಿಗೆ ಆಯ್ಕೆ

ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಬಸದಿ ಕ್ಷೇತ್ರ ಚಂದ್ರಪುರ ಶಿಶಿಲದ ಆಡಳಿತ ಮಂಡಳಿ ವತಿಯಿಂದ ಬೆಳ್ತಂಗಡಿಯ ಕೊಕ್ಕಡದ ಎಳ್ನೀರಿನ ಸಂಪತ್ ಕುಮಾರ್ ಹಾಗೂ ಶೋಭಿತರವರ ಪುತ್ರ ಪ್ರೀತಮ್ ಜೈನ್ ಇವರು ಇಂಡಿಯನ್ ಆರ್ಮಿಗೆ ಆಯ್ಕೆಯಾಗಿರುವುದಕ್ಕೆ ಸನ್ಮಾನಿಸಿ, ಶುಭಹಾರೈಸಲಾಯಿತು. ಇವರು ಉಜಿರೆ ಎಸ್ ಡಿ ಎಂ ಕಾಲೇಜಿನಲ್ಲಿ ಬಿಕಾಂ ಪದವಿಧರರಾಗಿದ್ದು ಕೃಷಿಕರಾಗಿರುತ್ತಾರೆ. ಶಿಶಿಲ ಬಸದಿಯಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದು ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ಸಕ್ರಿಯರಾಗುತ್ತಿದ್ದರು. ಈ ಸಂದರ್ಭದಲ್ಲಿ ಡಾ. ಕೆ. ಜಯಕೀರ್ತಿ ಜೈನ್, ಹೆಚ್. ವಿಜಯ ಕುಮಾರ್ ಜೈನ್, ಫಣಿರಾಜ್ ಜೈನ್, ಪಿ ಅತಶಯ ಜೈನ್, ಪ್ರೀತಮ್ ಜೈನ್, ಸಂಪತ್ ಜೈನ್ ಮುಂತಾದವರು ಉಪಸ್ಥಿತರಿದ್ದರು.

First Previous

Showing 1 of 22 pages

Next Last