Article Image

ದಶಲಕ್ಷಣ ಮಹಾಪರ್ವ ಆಚರಣೆ

Article Image

ದಶಲಕ್ಷಣ ಮಹಾಪರ್ವ ಆಚರಣೆ

ಹುಬ್ಬಳ್ಳಿ: ಅಲ್ಪ ಸಂಖ್ಯಾತ ಜೈನ ಸೇವಾ ಸಂಘ, ನವನಗರ ಶ್ರೀ ಬಹುರೂಪಿಣಿ ಮಹಿಳಾ ಮಂಡಳ ನವನಗರ ಹಾಗೂ ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಟ್ರಸ್ಟ್, ಹುಬ್ಬಳ್ಳಿ-ಧಾರವಾಡ ಇವುಗಳ ಸಂಯುಕ್ತ ಆಶ್ರಯದಲ್ಲಿ ದಶಲಕ್ಷಣ ಮಹಾಪರ್ವ ಆಚರಣೆಯು ದಿನಾಂಕ 16-09-2026 ರಿಂದ 26-9-2026 ರ ವರೆಗೆ ಪ್ರತಿದಿನ ಸಂಜೆ 6.00 ಗಂಟೆಗೆ ನವಗ್ರಹ ಸಭಾ ಭವನ, ಭ. ಮುನಿಸುವೃತ ಜೈನ ಮಂದಿರ, ಮಹಾವೀರ ಸರ್ಕಲ್‌, ಪಂಚಾಕ್ಷರಿ ನಗರ, ನವನಗರ, ಹುಬ್ಬಳ್ಳಿ ಇಲ್ಲಿ ನಡೆಯಲಿದೆ.

ಅಥಣಿಯಲ್ಲಿ ಭವ್ಯ ಶಾಂತಿ ಕಳಸ ರಥಯಾತ್ರೆಗೆ ನಾಂದಣಿ ಭಟ್ಟಾರಕರಿಂದ ಚಾಲನೆ

Article Image

ಅಥಣಿಯಲ್ಲಿ ಭವ್ಯ ಶಾಂತಿ ಕಳಸ ರಥಯಾತ್ರೆಗೆ ನಾಂದಣಿ ಭಟ್ಟಾರಕರಿಂದ ಚಾಲನೆ

ಬೆಳಗಾವಿ: ದಿಗಂಬರ ಜೈನ ಪರಂಪರೆಯ ಪುನರುಜ್ಜೀವಕ, 20ನೇ ಶತಮಾನದ ಪ್ರಥಮಾಚಾರ್ಯ ಪ.ಪೂ. ಚಾರಿತ್ರ ಚಕ್ರವರ್ತಿ ಆಚಾರ್ಯ 108 ಶ್ರೀ ಶಾಂತಿಸಾಗರ ಮಹಾರಾಜರ 71ನೇ ಪುಣ್ಯತಿಥಿ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಭವ್ಯ ಶಾಂತಿ ಕಳಸ ರಥಯಾತ್ರೆಗೆ ಅಥಣಿ ನಗರದ ಶ್ರೀ ಶಿವಯೋಗಿ (ಹಲ್ಯಾಳ) ಸರ್ಕಲ್ ನಲ್ಲಿ ನಾಂದಣಿ ಸಂಸ್ಥಾನ ಮಠದ ಪ.ಪೂ. ಜಗದ್ಗುರು ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿಗಳವರು, ವಿಧಿವತ್ತಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿಯವರು, "ಆಚಾರ್ಯ ಶಾಂತಿಸಾಗರರು ಕೇವಲ ಒಬ್ಬ ಮುನಿಯಲ್ಲ, ಒಂದು ಯುಗ. ಅವರು ತೋರಿದ ತ್ಯಾಗ, ಸಂಯಮದ ಹಾದಿಯಲ್ಲೇ ಇಂದಿನ ಸಮಾಜಕ್ಕೆ ಶಾಂತಿ ಇದೆ. ಈ ಶಾಂತಿ ಕಳಸ ರಥವು ಕೇವಲ ರಥವಲ್ಲ, ಅದು ಶಾಂತಿ, ಕರುಣೆ ಮತ್ತು ಅಹಿಂಸೆಯ ಸಂದೇಶವನ್ನು ಮನೆ ಮನೆಗೆ ತಲುಪಿಸುವ ಸಂಕಲ್ಪ. ಅಥಣಿಯ ಶ್ರಾವಕರ ಭಕ್ತಿ ಅತ್ಯಂತ ಶ್ಲಾಘನೀಯ" ಎಂದು ನುಡಿದರು. ಶಾಂತಿ ಕಲಶದ ಸವಾಲವನ್ನು ಜಿನನಗೌಡ ಪಾಟೀಲ್, ಮತ್ತು ಭಾರಮೂ ಪಾಟೀಲ ದಮಾತಿಗಳು ಪಡೆದಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಇಂಜಿನೀಯರ್ ಅರುಣ ಯಲಗುದ್ರಿ, ಸಾತಗೌಡ ಅಥಣಿ, ನಾಗರಾಜ್ ಘೋಂಗಡಿ, ಪ್ರಫುಲ್ ಪಡನಾಡ, ರಾಜು ಕರ್ಪೂರಶೆಟ್ಟಿ, ಅಶೋಕ ಪಡನಾಡ, ಪ್ರಶಾಂತ ಇಜಾರೆ, ಮಹಾವೀರ ಜಕನೂರ, ಸಂತೋಷ ಬೊಮ್ಮಣ್ಣವರ, ನಿತಿನ ಘೊಂಗಡಿ, ಚಕ್ರವರ್ತಿ ಕಿನಿಂಗೆ ಸೇರಿದಂತೆ ಶ್ರಾವಕ-ಶ್ರಾವಕಿಯರು ಭಾಗವಹಿಸಿದ್ದರು. ಆಚಾರ್ಯ ಶ್ರೀ ಶಾಂತಿಸಾಗರ ಮಹಾರಾಜರ ಕುರಿತು: ಆಚಾರ್ಯ ಶ್ರೀ ಶಾಂತಿಸಾಗರ ಮಹಾರಾಜರು 1872ರಲ್ಲಿ ಬೆಳಗಾವಿ ಜಿಲ್ಲೆಯ ಭೋಜ ಗ್ರಾಮದಲ್ಲಿ ಜನಿಸಿದರು. ಸುಮಾರು 700 ವರ್ಷಗಳ ಕಾಲ ನಿಂತು ಹೋಗಿದ್ದ ದಿಗಂಬರ ಮುನಿ ಪರಂಪರೆಯನ್ನು 20ನೇ ಶತಮಾನದಲ್ಲಿ ಪುನಃ ಆರಂಭಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಹಿಂಸೆ, ಅಪರಿಗ್ರಹ ಮತ್ತು ಅನೇಕಾಂತವಾದದ ತತ್ವಗಳನ್ನು ತಮ್ಮ ಕಟ್ಟುನಿಟ್ಟಿನ ತಪಸ್ಸಿನ ಮೂಲಕ ಜಗತ್ತಿಗೆ ಸಾರಿದ ಇವರು, 18-09-1955 ರಂದು ಮಹಾರಾಷ್ಟ್ರದ ಕುಂಥಲಗಿರಿಯಲ್ಲಿ ಸಲ್ಲೇಖನ ವ್ರತದ ಮೂಲಕ ಸಮಾಧಿ ಹೊಂದಿದರು. ಇವರ ಪುಣ್ಯತಿಥಿ ಮಹೋತ್ಸವವು ದಿ.13-09-2026 ರಂದು ನಾಂದಣಿಯಲ್ಲಿ ನಡೆಯಲಿದೆ.

ನೆಲ್ಲಿಕಾರು: ಪೂಜಾ ಕಾರ್ಯಕ್ರಮ

Article Image

ನೆಲ್ಲಿಕಾರು: ಪೂಜಾ ಕಾರ್ಯಕ್ರಮ

ಅತಿಶಯ ಶ್ರೀ ಕ್ಷೇತ್ರ ನೆಲ್ಲಿಕಾರು ಭಗವಾನ್ ಶ್ರೀ ಅನಂತನಾಥ ಸ್ವಾಮಿ ಮತ್ತು ಬ್ರಹ್ಮಯಕ್ಷ ದೇವರ ಸನ್ನಿಧಿಯಲ್ಲಿ ಶ್ರಾವಣ ಮಾಸದ, ಗುರುವಾರದ ವಿಶೇಷ ಪೂಜೆಯ ಪ್ರಯುಕ್ತ ಲಕ್ಷ ಹೂವಿನ ಪೂಜೆ ಮತ್ತು ಆರಾಧನೆಯು ದಿನಾಂಕ 3-09-2026 ಸಮಯ ಮಧ್ಯಾಹ್ನ: 12.00 ಗಂಟೆಗೆ ಜರುಗಲಿದೆ.

ಕಾರ್ಕಳ: ದಶಲಕ್ಷಣ ಪರ್ವ

Article Image

ಕಾರ್ಕಳ: ದಶಲಕ್ಷಣ ಪರ್ವ

ಶ್ರೀ ಬಾಹುಬಲಿ ಶ್ರಾವಿಕಾಶ್ರಮದಲ್ಲಿ ದಶಲಕ್ಷಣ ಪರ್ವವು ಶ್ರೀ ಜೈನಮಠದ ರಾಜಗುರು “ಧ್ಯಾನಯೋಗಿ” ಪರಮ ಪೂಜ್ಯ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಸಾನ್ನಿಧ್ಯದಲ್ಲಿ ದಿನಾಂಕ 16-9-2026 ರಿಂದ 26-9-2026ರವರೆಗೆ ಜರಗಲಿರುವುದು ಹಾಗೂ ಧಾರ್ಮಿಕ ಪಾಠ ಸ್ಪರ್ಧಾ ವಿಜೇತರಿಗೆ ಪ್ರಮಾಣ ಪತ್ರ ನೀಡಿ ಆಶೀರ್ವಚನ ನೀಡಲಿರುವರು. ಭರತ್ ರಾಜ್ ಜೈನ್ ಮೂಡಾರು ಧಾರ್ಮಿಕ ಚಿಂತಕರು ಇವರು ದಿನಾಂಕ 26-09-2026ನೇ ಶನಿವಾರ ಅಪರಾಹ್ನ ಗಂಟೆ-3.00ಕ್ಕೆ ಪರಮಪೂಜ್ಯ ಜರದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಶ್ರೀ ಜೈನ ಮಠ, ಶ್ರವಣಬೆಳಗೊಳ “ದತ್ತಿನಿಧಿ ಪ್ರಶಸ್ತಿ” ಪ್ರದಾನ ಮಾಡಿ, ಉಪನ್ಯಾಸ ನೀಡಲಿರುವರು. ಪ್ರತಿದಿವಸ ಸಾಯಂಕಾಲ ಗಂಟೆ 6-30ರಿಂದ ಪೂಜೆ, ಭಜನೆ, ಗಣ್ಯರಿಂದ ಪ್ರವಚನ ಇತ್ಯಾದಿ ಕಾರ್ಯಕ್ರಮಗಳು ಜರಗಲಿರುವುದು.

ಪ್ರತಿಷ್ಠಿತ ಜಿನಸಮ್ಮಿಲನ ಕಾರ್ಯಕ್ರಮ

Article Image

ಪ್ರತಿಷ್ಠಿತ ಜಿನಸಮ್ಮಿಲನ ಕಾರ್ಯಕ್ರಮ

ಸುಹಾಸ್ತಿ ಯುವ ಜೈನ್ ಮಿಲನ್, ಬೆಂಗಳೂರು ವತಿಯಿಂದ ಆಯೋಜಿಸಲಾಗುತ್ತಿರುವ ಪ್ರತಿಷ್ಠಿತ ಜಿನಸಮ್ಮಿಲನ ಕಾರ್ಯಕ್ರಮವು ಇದೇ ಬರುವ ಡಿಸೆಂಬರ್ 11, 12 & 13ರಂದು ಸಮ್ಮೇದ ಶಿಖರ್ಜಿಯಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಜಿನಸಮ್ಮಿಲನದ ವಿಶೇಷ ಲೋಗೋವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಲೋಕಾರ್ಪಣೆ ಮಾಡಿದರು. ಡಾ. ಹೆಗ್ಗಡೆಯವರು ಮುಂಬರುವ ಜಿನಸಮ್ಮಿಲನ ಕಾರ್ಯಕ್ರಮಕ್ಕೆ ಶುಭಹಾರೈಸಿ, ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಲಿ ಹಾಗೂ ಯುವಜನರಿಗೆ ಮತ್ತಷ್ಟು ಪ್ರೇರಣೆಯಾಗಲಿ ಎಂದು ಆಶೀರ್ವದಿಸಿದರು. ನಂತರ ಹೇಮಾವತಿ ವೀ. ಹೆಗ್ಗಡೆಯವರನ್ನು ಭೇಟಿ ಮಾಡಲಾಯಿತು. ಅವರು ಜಿನಸಮ್ಮಿಲನವು ಯಶಸ್ವಿಯಾಗಿ ನೆರವೇರಲಿ, ಯುವ ಜನರನ್ನು ಮತ್ತಷ್ಟು ಒಗ್ಗೂಡಿಸಿ ಸಮಾಜದಲ್ಲಿ ಸಕರಾತ್ಮಕ ಚಟುವಟಿಕೆಗಳಿಗೆ ಪ್ರೇರಣೆಯಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸುಹಾಸ್ತಿ ಯುವ ಜೈನ್ ಮಿಲನ್ ಅಧ್ಯಕ್ಷರಾದ ದರ್ಶನ್ ಜೈನ್ ಮಾರಲಗೋಡು, ಚಿತ್ತ ಜಿನೇಂದ್ರ, ಮಾಜಿ ಅಧ್ಯಕ್ಷರಾದ ಪುಟ್ಟುಸ್ವಾಮಿ, ಮಾಜಿ ಕಾರ್ಯದರ್ಶಿ ಅಭಿನಂದನ್ ಜೈನ್ ಬಿದರೂರು ಹಾಗೂ ಅಭಿಷೇಕ್ ಉಪಸ್ಥಿತರಿದ್ದರು.

ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು

Article Image

ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು

ಬೆಳಗಾವಿ:- ದಕ್ಷಿಣ ಭಾರತ ಜೈನ ಸಭೆಯ ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ್ ನಲ್ಲಿ ಪ್ರಥಮಾಚಾರ್ಯ ಶ್ರೀ 108 ಶಾಂತಿಸಾಗರ ಮಹಾರಾಜರ ಪುಣ್ಯತಿಥಿ ಹಾಗೂ ದಶಲಕ್ಷಣ ಪರ‍್ವನಿಮಿತ್ತ ಕೈ. ಶ್ರೀ ನೇಮಿನಾಥ ಕಲ್ಲಪ್ಪಾ ಇಂಚಲ ಮತ್ತು ಶ್ರೀಮತಿ ಸುಮಿತ್ರಾದೇವಿ ನೇಮಿನಾಥ ಇಂಚಲ ಸಾಂಸ್ಕೃತಿಕ ಸ್ಪರ್ಧೆಗಳು-2026ನ್ನು ಆಯೋಜಿಸಲಾಗಿದೆ. ಕಂಠಪಾಠ ಸ್ಪರ್ಧೆ: (5 ರಿಂದ 10 ವರ್ಷಗಳು) ವಿಷಯ: ಗೊಮ್ಮಟ ಸ್ತುಥಿ (ಥುದಿ) (ವಿಸಟ್ಟ ಕಂದೊಟ್ಟ) ಭಾಷಣ ಸ್ಪರ್ಧೆ: (11 ರಿಂದ 22 ವರ್ಷಗಳು) ವಿಷಯ: 1) ವರ್ಧಮಾನ (ಮಹಾವೀರ) ತೀರ್ಥಂಕರ ಚರಿತ್ರೆ 2) ವರ್ತಮಾನ ಕಾಲದ 24 ತೀರ್ಥಂಕರರ ಮೋಕ್ಷಸ್ಥಾನ (ಕೂಟ)ಗಳ ಹೆಸರು ಸಮಯ: 5 ನಿಮಿಷ (Five minutes) ಭಾಷಣ ಸ್ಪರ್ಧೆ: (23 ರಿಂದ 40 ವರ್ಷಗಳು) ವಿಷಯ: 1) “ರತ್ನತ್ರಯ”-ವಿಶ್ಲೇಷಣೆ ಸಮಯ: 5 ನಿಮಿಷ (Five minutes) ಸ್ಪರ್ಧೆಯ ದಿನಾಂಕ: 06-09-2026 ಸ್ಥಳ: “ಶಾಂತಿಸ್ಮಾರಕ”, ಮಾಣಿಕಬಾಗ ದಿಗಂಬರ ಜೈನ ಬೊರ್ಡಿಂಗ, ಪಿ.ಬಿ.ರಸ್ತೆ, ಬೆಳಗಾವಿ. ವಿ.ಸೂ: 1) ಸ್ಪರ್ಧೆಗೆ ಭಾಗವಹಿಸಲಿಚ್ಛಿಸುವ ಅಭ್ಯರ್ಥಿಗಳಿಗೆ ಹೆಸರು ನೋಂದಾಯಿಸಲು ಕೊನೆಯ ದಿನಾಂಕ 30-08-2026 2) ಸ್ಪರ್ಧೆಗೆ ಭಾಗವಹಿಸುವ ಅಭ್ಯರ್ಥಿಗಳು ನಿಮ್ಮ ಆಧಾರ ಕಾರ್ಡನ್ನು ತೆಗೆದುಕೊಂಡು ಬನ್ನಿರಿ. 3) ಬಹುಮಾನವನ್ನು ಅದೇ ದಿನ ಕೊಡಲಾಗುವುದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:- 7022691008, 9481106489, 8762640855, 8095939274, 9448013923

ಯಜ್ಞೋಪವಿತ ತಯಾರಿಸುವ ತರಬೇತಿ

Article Image

ಯಜ್ಞೋಪವಿತ ತಯಾರಿಸುವ ತರಬೇತಿ

ಶಿಶಿಲ: ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಬಸದಿ ಶ್ರೀ ಕ್ಷೇತ್ರ ಚಂದ್ರಪುರ ಹಾಗೂ ಭಗವಾನ್ 1008 ಶ್ರೀ ಅನಂತನಾಥ ಸ್ವಾಮಿ ಬಸದಿ ಇಚಿಲoಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಜೈನರಲ್ಲಿ ಸಮ್ಯಕ್ ದರ್ಶನ, ಜ್ಞಾನ, ಚಾರಿತ್ರಗಳೆಂಬ ರತ್ನತ್ರಯಗಳ ಸಂಕೇತವಾದ ಯಜ್ಞೋಪವಿತ (ಜನಿವಾರ) ತಯಾರಿಸುವ ತರಬೇತಿಯನ್ನು ಜಿನ ಮಂದಿರದಲ್ಲಿ ನೀಡಲಾಯಿತು. ಈ ಸಂದರ್ಭದಲ್ಲಿ ಡಾ. ಕೆ. ಜಯಕೀರ್ತಿ ಜೈನ್, ಧನ ಕೀರ್ತಿ ಶೆಟ್ಟಿ, ಮಹಾವೀರ್ ಜೈನ್, ಶುಭಕರ ಹೆಗ್ಡೆ, ವಿಜು ಜೈನ್, ಸಿ ಅಶೋಕ್ ಜೈನ್, ಪ್ರವೀಣ್, ರೋಷನ್, ಸುದೇಶ್ ಜೈನ್, ನಮನ್, ಸುವರ್ಣ ಲತಾ, ಜಯಶ್ರೀ, ಶ್ವೇತ, ಸುರಭಿ, ಸುನಿತಾ ದೇವಿ, ಪ್ರತಿಮಾ, ಶಕುಂತಲಾ ಜೈನ್, ಸೂರಜ್, ಪುರೋಹಿತರು ಹಾಗೂ ಆಡಳಿತ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಶ್ರಾವಕ-ಶ್ರಾವಕಿಯರು ಭಾಗವಹಿಸಿದ್ದರು.

ಬಿದರೂರು ಜೈನ ಬಸದಿಯಲ್ಲಿ ವಿಶೇಷ ಪೂಜೆ, ಅಭಿಷೇಕ

Article Image

ಬಿದರೂರು ಜೈನ ಬಸದಿಯಲ್ಲಿ ವಿಶೇಷ ಪೂಜೆ, ಅಭಿಷೇಕ

ಸಾಗರ/ಕಾರ್ಗಲ್‌: ಇತಿಹಾಸ ಪ್ರಸಿದ್ಧ ಬಿದರೂರು ಜೈನ ಬಸದಿಯಲ್ಲಿ ಶ್ರಾವಣ ಶುಕ್ರವಾರದ ಅಂಗವಾಗಿ ಭಗವಾನ್ ವರ್ಧಮಾನ ಸ್ವಾಮಿ, ಕೂಷ್ಮಾಂಡಿನಿ ಮಾತೆ ಹಾಗೂ ಪದ್ಮಾವತಿ ಮತ್ತು ಸಿದ್ಧಯಿನಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಅರ್ಚಕರಾದ ಮೋಹನ ಕುಮಾರ ಇಂದ್ರರು, ವಿದ್ಯಾಧರ ಇಂದ್ರರು, ಛವಿಷಾ ಇಂದ್ರರ ನೇತೃತ್ವದಲ್ಲಿ ಕುಂಕುಮಾರ್ಚನೆ, ಅಷ್ಟ ವಿಧಾರ್ಚನೆಗಳು ಮತ್ತು ಮಹಾಮಂಗಳಾರತಿ ಪೂಜೆಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಶ್ರಾವಕ-ಶ್ರಾವಕಿಯರು ಭಾಗವಹಿಸಿದ್ದರು.

ಮುಕುಟಸಪ್ತಮಿ ಆಚರಣೆ

Article Image

ಮುಕುಟಸಪ್ತಮಿ ಆಚರಣೆ

ಹುಬ್ಬಳ್ಳಿ: ಛಬ್ಬಿ ಗ್ರಾಮದ ಭಗವಾನ್ ಶ್ರೀ 1008 ಶಾಂತಿನಾಥ ತೀರ್ಥಂಕರ ಜಿನ ಮಂದಿರದಲ್ಲಿ ಸ್ಥಳೀಯ ಸಮಸ್ತ ಜೈನ್ ಸಮಾಜದ ವತಿಯಿಂದ ಮುಕುಟಸಪ್ತಮಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ನಿರ್ವಾಣ ಲಾಡು ಸಮರ್ಪಣೆ ಕಾರ್ಯಕ್ರಮದಲ್ಲಿ ಪಾವನ ಸಾನಿಧ್ಯವನ್ನು ಪರಮ ಪೂಜ್ಯ ಡಾ 108 ಶ್ರೀ ಬಾಲಾಚಾರ್ಯ ಸಿದ್ಧಸೇನ ಮುನಿ ಮಹಾರಾಜರು ವಹಿಸಿದ್ದರು. ಪಾರಿಶ್ವನಾಥ ತೀರ್ಥಂಕರರ ಮೋಕ್ಷ ಹೊಂದಿದ ಪವಿತ್ರ ದಿನ, ತನ್ನಿಮಿತ್ತ ಜಿನ ಮಂದಿರದಲ್ಲಿ ಪಂಚಾಮೃತ ಅಭಿಷೇಕ ಮಹಾ ಶಾಂತಿ ಮಂತ್ರ ನಂತರ ಸಭಾ ಮಂಟಪದಲ್ಲಿ 150 ಮಕ್ಕಳಿಂದ ಪಾರಿಶ್ವನಾಥ ತೀರ್ಥಂಕರಿಗೆ ಅಭಿಷೇಕ ಪೂಜಾ ವಿಧಿವಿದಾನ ನಡೆದವು. ನಂತರ ಮಹಾವೀರ ಯುವಕ ಮಂಡಳದವರಿಂದ ಸಮ್ಮೇದ ಶಿಖರ್ಜಿಯಲ್ಲಿ ಇರುವ 24 ಕೂಟ (ಮಂದಿರ) ಸ್ತಬ್ದ ಚಿತ್ರ ರಚನೆ ಮಾಡಿ ತೀರ್ಥಂಕರರಿಗೆ ನಿರ್ವಾಣ ಲಾಡು ಸಮರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮುನಿಮಹಾರಾಜರು ಮಾನವ ಜನ್ಮ ಸಿಕ್ಕಿದು ಮಹಾಪುಣ್ಯ ಕಾರಣ ಎಲ್ಲರು ದೇವರ ದರ್ಶನ ಸ್ವಾಧ್ಯಾಯ ಜಪ ಮಾಡಬೇಕು. ಮುಕುಟ ಅಂದರೆ ಕಿರೀಟ ಇದ್ದಹಾಗೆ ಮೋಕ್ಷ ಮಾರ್ಗದ ಕಡೆ ಹೋಗುವ ಹಾಗೆ ಆದಕಾರಣ ತಾವುಗಳು ತನು ಮನ ಧನದಿಂದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಮರ್ಪಣಾ ಭಾವದಿಂದ ಭಾಗವಹಿಸಿ ಪುಣ್ಯವನ್ನು ಸಂಪಾದಿಸಿಕೊಳ್ಳಿ ಎಂದು ಪ್ರವಚನದಲ್ಲಿ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶ್ರಾವಕ ಶ್ರಾವಕಿಯರು ಭಾಗವಹಿಸಿದ್ದರು. ವರದಿ : ಎಸ್ ಆರ್ ಮಲ್ಲಸಮುದ್ರ

ಮೋಕ್ಷ ಕಲ್ಯಾಣ ಮಹೋತ್ವವ

Article Image

ಮೋಕ್ಷ ಕಲ್ಯಾಣ ಮಹೋತ್ವವ

ವಿಜಯಪುರ, ಮಹೇಂದ್ರಗಿರಿಯಲ್ಲಿರುವ ಭಗವಾನ್ ಶ್ರೀ 1008 ಸಹಸ್ರಪಣಿ ಪಾರ್ಶ್ವನಾಥ ದಿಗಂಬರ ಜೈನ ಬಸದಿಯಲ್ಲಿ ಭಗವಾನ್ ಶ್ರೀ 1008 ಪಾರ್ಶ್ವನಾಥ ತೀರ್ಥಂಕರರ ಮೋಕ್ಷ ಕಲ್ಯಾಣ ಮಹೋತ್ವವ - ಮುಕುಟ ಸಪ್ತಮಿ ಕಾರ್ಯಕ್ರಮವು ಪ.ಪೂ. ಸಪ್ತಭಂಗ ವ್ಯಾಖ್ಯಾತಾ, ವಾತ್ಸಲ್ಯಮೂರ್ತಿ ಪಟ್ಟಾಚಾರ್ಯ ಶ್ರೀ ತನ್ಮಯ ಸಾಗರ ಮಹಾರಾಜರ ಪಾವನ ಸಾನ್ನಿಧ್ಯದಲ್ಲಿ ಮತ್ತು ಶ್ರೀ ಕ್ಷೇತ್ರ ಶ್ರವಣಬೆಳಗೂಳ ದಿಗಂಬರ ಜೈನ ಮಠದ ಪ.ಪೂ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ವಿಧಿ - ವಿಧಾನಗಳು ನೆರವೇರಲಿರುವುದು

ನಾರಾವಿ: ಉಚಿತ ನೇತ್ರ ತಪಾಸಣಾ ಶಿಬಿರ

Article Image

ನಾರಾವಿ: ಉಚಿತ ನೇತ್ರ ತಪಾಸಣಾ ಶಿಬಿರ

ನಾರಾವಿ ಮಾಗಣೆ ಭ। ಧರ್ಮನಾಥ ಸ್ವಾಮಿ ಬಸದಿಯ ಶ್ರೀ ಅನಂತನೋಂಪಿಯ ವ್ರತಧಾರಿಗಳ ಮುಂದಾಳತ್ವದಲ್ಲಿ 15ನೇ ವರ್ಷದ ಶ್ರೀ ಅನಂತನೋಂಪಿ ಆರಾಧನಾ ಪ್ರಯುಕ್ತ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಸ್ಟ್ ಆಸ್ಪತ್ರೆ ಮಂಗಳೂರು - ಮೂಡಬಿದ್ರೆ ಮತ್ತು ನವಜ್ಯೋತಿ ಚಾರಿಟೇಬಲ್ ಟ್ರಸ್ಟ್ ಡಾ| ಪಿ. ದಯಾನಂದ ಪೈ ಮತ್ತು ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ (ರಿ.), ಸೆಂಚೂರಿ ಗ್ರೂಪ್, ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಅಂಧತ್ವ ನಿವರಣಾ ವಿಭಾಗ) ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವು ದಿನಾಂಕ 23-08-2026ನೇ ರವಿವಾರದಂದು ಧರ್ಮಶ್ರೀ ಸಭಾಭವನದಲ್ಲಿ ಬೆಳಿಗ್ಗೆ ಗಂ. 9-00ರಿಂದ ಮಧ್ಯಾಹ್ನ ಗಂ. 1-00ರವರೆಗೆ ನಡೆಯಲಿದೆ. ಶಿಖರದ ವಿಶೇಷತೆ: ಶಿಬಿರದಲ್ಲಿ ಕಣ್ಣಿನ ಸಂಪೂರ್ಣ ತಪಾಸಣೆ ನಡೆಸಲಾಗುವುದು. ಅಗತ್ಯವುಳ್ಳವರಿಗೆ ಉಚಿತವಾಗಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಯಶಸ್ವಿನಿ, ಸಂಪೂರ್ಣ ಸುರಕ್ಷಾ, E.S.I. ಮತ್ತು ಎಲ್ಲಾ ನಗದು ರಹಿತ ಯೋಜನೆಗಳು ಲಭ್ಯ. ತಮ್ಮ ಕಣ್ಣಿನ ಹಾಗೂ ಇತರ ಆರೋಗ್ಯ ಸಮಸ್ಯೆಯನ್ನು ತಪಾಸಣಾ ಸಮಯದಲ್ಲಿ ವೈದ್ಯರಿಗೆ ತಿಳಿಸತಕ್ಕದ್ದು. ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದವರಿಗೆ ಗೊತ್ತುಪಡಿಸಿದ ದಿನಾಂಕದಂದು ಮಂಗಳೂರು ಪ್ರಸಾದ್ ನೇತ್ರಾಲಯ ಕಣ್ಣಿನ ಆಸ್ಪತ್ರೆಗೆ ವಾಹನದಲ್ಲಿ ಕರೆದುಕೊಂಡು ಹೋಗಿ ಉಚಿತ ಶಸ್ತ್ರಚಿಕಿತ್ಸೆ ಮಾಡಿಸಿ ವಾಪಾಸು ಕರೆದು ತಂದು ಬಿಡಲಾಗುವುದು. ಅಗತ್ಯವುಳ್ಳವರಿಗೆ ರಿಯಾಯಿತಿ ದರದಲ್ಲಿ ಕನ್ನಡಕವನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ. ಶಿಶುಪಾಲ್ ಜೈನ್-9449449967, ಅಶೋಕ್ ಕುಮಾರ್ - 6361293020, ಜಯವರ್ಮ ಜೈನ್- 9902213650, ಹರ್ಷೇಂದ್ರ ಕುಮಾರ್ - 9901862308, ಶೀತಲ್ ಕುಮಾರ್- 9901296744, ಯಶೋಧರ ಜೈನ್- 9900902239 ಮಧುಕರ್ ಕನ್ನಾರ್, ಸಾರ್ವಜನಿಕ ಸಂಪರ್ಕ ಅಧಿಕಾರಿ, ಪ್ರಸಾದ್ ನೇತ್ರಾಲಯ ಉಡುಪಿ- 9844761421 ವಿಶೇಷ ಸೂಚನೆ :- ಹೆಸರು ನೋಂದಾವಣೆಯು ಬೆಳಗ್ಗೆ ಗಂ. 8-45ಕ್ಕೆ ಆರಂಭವಾಗುತ್ತದೆ. 15 ನಿಮಿಷ ಮುಂಚಿತವಾಗಿ ಆಗಮಿಸುವುದು.

ಜೈನ್ ಮಿಲನ್ ಮಾಸಿಕ ಸಭೆ

Article Image

ಜೈನ್ ಮಿಲನ್ ಮಾಸಿಕ ಸಭೆ

ಕಾರ್ಕಳ: ಭಾರತೀಯ ಜೈನ್ ಮಿಲನ್ ಇದರ ಆಗಸ್ಟ್ ತಿಂಗಳ ಮಾಸಿಕ ಸಭೆಯು ತ್ಯಾಗಿ ಭವನದಲ್ಲಿ ಏಲಾಚಾರ್ಯ 108 ಪ್ರಸಂಗ ಸಾಗರ ಮಹಾರಾಜರ ಮತ್ತು ಸ್ವಸ್ತಿಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಇವರ ಪಾವನ ಸಾನ್ನಿಧ್ಯದೊಂದಿಗೆ ನೆರವೇರಿತು. ಅತಿಥಿಗಳಾಗಿ ಆಗಮಿಸಿದ ವಲಯ 8 ರ ನಿರ್ದೇಶಕರಾದ ಶ್ವೇತಾ ಜೈನ್ ವಕೀಲರು, ಮೂಡಬಿದ್ರೆ ಇವರು ಮುನಿಧರ್ಮ ಮತ್ತು ಶ್ರಾವಕ ಧರ್ಮದ ಬಗ್ಗೆ ಮಾತನಾಡುತ್ತಾ ಮುನಿ ಪರಂಪರೆ ಶ್ರೇಷ್ಠವಾದದ್ದು, ಶ್ರಾವಕರಾದವರು ಮುನಿಗಳ ಸೇವೆಯಲ್ಲಿ ತೊಡಗಿ ಪುಣ್ಯ ಸಂಪಾದನೆ ಮಾಡಬೇಕು ಎಂದು ಹೇಳಿದರು. ನಂತರ ನೂತನ ವಲಯ ನಿರ್ದೇಶಕರಾದ ಎನ್ ಪ್ರಭಾತ್ ಕುಮಾರ್ ಇವರಿಗೆ ಅಧ್ಯಕ್ಷರು ಶಾಲು ಹೊದಿಸಿ ಗೌರವಿಸಿದರು. ಆಗಸ್ಟ್ ತಿಂಗಳಲ್ಲಿ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದವರಿಗೆ ಶುಭಾಶಯ ಕೋರಲಾಯಿತು. ಅಶೋಕ್ ಎಚ್ ಎಂ ಇವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ನಂತರ ಮುನಿ ಮಹಾರಾಜರಿಗೆ ಮತ್ತು ಸ್ವಾಮೀಜಿಯವರಿಗೆ ಪಾದ ಪೂಜೆಯೊಂದಿಗೆ ಜಿನಾವಾಣಿಯನ್ನು ಸಮರ್ಪಿಸಲಾಯಿತು. ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ಪಂಚಮ ಕಾಲದಲ್ಲಿ ನಿರ್ಗ್ರಂಥ ಮುನಿಗಳು ನಮ್ಮ ಊರಿಗೆ ಬಂದು ಚಾತುರ್ಮಾಸ ಮಾಡುವುದು ಸೌಭಾಗ್ಯವೇ ಸರಿ. ತಾವೆಲ್ಲ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಬೇಕೆಂದು ಕರೆ ನೀಡಿದರು. ನಂತರ ಪರಮಪೂಜ್ಯ ಪ್ರಸಂಗ ಸಾಗರ ಮುನಿ ಮಹಾರಾಜರ ಧಾರ್ಮಿಕ ಪ್ರವಚನ ನಡೆಯಿತು. ವೀಕ್ಷಿತ ಏ ಜೈನ್ ಹಾಗೂ ರಿಧಿ ಜೈನ್ ಪ್ರಾರ್ಥಿಸಿದರು. ಕಾರ್ಯದರ್ಶಿಯಾದ ವಸಂತ್ ಕುಮಾರ್ ಬಂಗ ರವರು ಸ್ವಾಗತಿಸಿದರು.

ವೇಣೂರು: ಕರಾವಳಿ ಮಿಲನೋತ್ಸವ

Article Image

ವೇಣೂರು: ಕರಾವಳಿ ಮಿಲನೋತ್ಸವ

ಉಜಿರೆ: ಜೈನರು ಅಲ್ಪಸಂಖ್ಯಾತರಾದರೂ, ಸತ್ಯ, ಧರ್ಮ ಮತ್ತು ಅಹಿಂಸೆಯ ಪರಿಪಾಲನೆಯೊಂದಿಗೆ ದಕ್ಷನಾಯಕತ್ವ, ಆದರ್ಶ ಆಹಾರ-ವಿಹಾರ, ಆಚಾರ-ವಿಚಾರಗಳೊಂದಿಗೆ ಉತ್ತಮ ಜೀವನಶೈಲಿ, ಎಲ್ಲರೊಂದಿಗೂ ಪ್ರೀತಿ-ವಿಶ್ವಾಸದಿಂದ ಹೃದಯ ಶ್ರೀಮಂತಿಕೆಯೊಂದಿಗೆ ಮುಕ್ತವಾಗಿ ಬೆರೆತು, ಸಾಮಾಜಿಕ ಬದ್ಧತೆ ಮತ್ತು ಸೇವಾಕಳಕಳಿಂದಾಗಿ ಉತ್ತಮ ಸ್ಥಾನ-ಮಾನ ಹೊಂದಿದ್ದಾರೆ. ಎಲ್ಲರಿಂದಲೂ ಗೌರವ, ಅಭಿಮಾನಕ್ಕೆ ಪಾತ್ರರಾಗಿದ್ದಾರೆ ಎಂದು ಭಾರತೀಯ ಜೈನ್‌ಮಿಲನ್ ವಲಯ-8ರ ಉಪಾಧ್ಯಕ್ಷರಾದ ಸುದರ್ಶನ್ ಜೈನ್ ಬಂಟ್ವಾಳ ಹೇಳಿದರು. ಅವರು ಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜಿನಲ್ಲಿ ಬೆಳ್ತಂಗಡಿ ಜೈನ್‌ಮಿಲನ್ ಆಶ್ರಯದಲ್ಲಿ ಆಯೋಜಿಸಿದ ಮಾಸಿಕ ಸಭೆ ಮತ್ತು ಆಹಾರೋತ್ಸವ ಉದ್ಘಾಟಿಸಿ ಜೈನ ಸಮುದಾಯದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಕೃತಿಯ ಮಡಿಲಲ್ಲಿ ಹೇರಳವಾಗಿ ದೊರಕುವ ನೆಲ್ಲಿಕಾಯಿ, ಕೆಸು, ನುಗ್ಗೆ, ಹರಿವೆಸೊಪ್ಪು, ಮಾವು ಮೊದಲಾದ ಪೌಷ್ಠಿಕ ವಸ್ತುಗಳ ಬಳಕೆ ಮತ್ತು ಮಹತ್ವದ ಬಗ್ಗೆ ಅರಿವು, ಜಾಗೃತಿ, ಮೂಡಿಸುವುದೇ ಆಹಾರೋತ್ಸವದ ಉದ್ದೇಶವಾಗಿದೆ ಎಂದು ಹೇಳಿದರು. ಅಂತಾರಾಷ್ಟ್ರೀಯ ಸೇವಾಸಂಸ್ಥೆಯಾದ ಭಾರತೀಯ ಜೈನ್‌ಮಿಲನ್ ಆಶ್ರಯದಲ್ಲಿ ಅಲ್ಲಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜಿನಭಜನಾ ಸ್ಪರ್ಧೆ ಆಯೋಜಿಸಿ ಸಮಾಜದ ಸಂಘಟನೆಯೊಂದಿಗೆ. ಪರಸ್ಪರ ಪ್ರೀತಿ-ವಿಶ್ವಾಸ ಬೆಳೆಯುತ್ತಿದೆ. 2027ರ ಫೆಬ್ರವರಿಯಲ್ಲಿ ಕಾರ್ಕಳದಲ್ಲಿ ಜರುಗಲಿರುವ ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಫೆ. 13 ಮತ್ತು 14 ರಂದು ರಾಜ್ಯಮಟ್ಟದ ಜಿನಭಜನಾ ಸ್ಪರ್ಧೆ ನಡೆಯಲಿದೆ ಎಂದು ಅವರು ಪ್ರಕಟಿಸಿದರು. ಇದೇ ಅಕ್ಟೋಬರ್ 25ರಂದು ವೇಣೂರಿನಲ್ಲಿ “ಕರಾವಳಿ ಮಿಲನೋತ್ಸವ” ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೈನ ಸಮಾಜದ ಸಂಘಟನೆ ಮತ್ತು ಬಲವರ್ಧನೆಗಾಗಿ ಸದಸ್ಯತ್ವ ಅಭಿಯಾನ ಆರಂಭಿಸಿದ್ದು ಎಲ್ಲರೂ ಸಕ್ರಿಯ ಸಹಕಾರ ನೀಡಬೇಕೆಂದು ಅವರು ಕೋರಿದರು. ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ. ಪ್ರಮೋದ್ ಕುಮಾರ್ ಮಾತನಾಡಿ ಜೈನ್‌ಮಿಲನ್ ಸದಸ್ಯರು ಸಮಾಜಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಹಕರಿಸಬೇಕೆಂದು ಕೋರಿದರು. ಭಾರತೀಯ ಜೈನ್‌ಮಿಲನ್ ವಲಯ -8ರ ನಿರ್ದೇಶಕ ಬಿ. ಸೋಮಶೇಖರ ಶೆಟ್ಟಿ ಶುಭಾಶಂಸನೆ ಮಾಡಿ ಸ್ಥಳೀಯ ಜೈನ್‌ಮಿಲನ್‌ಗಳ ಮೂಲಕ ಆಯಾ ಊರಿನಲ್ಲಿ ಎಲ್ಲರೂ ಸ್ವಯಂಪ್ರೇರಿತರಾಗಿ ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸಬೇಕೆಂದು ಸಲಹೆ ನೀಡಿದರು. ಕಕ್ಕಿಂಜೆಯ ಪಾಕಶಾಸ್ತ್ರ ಪ್ರವೀಣರಾದ ಅಶೋಕ ಕುಮಾರ್ ಜೈನ್ ಅವರನ್ನು ಗೌರವಿಸಲಾಯಿತು. ಅರ್ಪಣಾ ರವೀಶ್ ವರದಿ ಸಾದರಪಡಿಸಿದರು. ಬೆಳ್ತಂಗಡಿ ಜೈನ್‌ಮಿಲನ್ ಅಧ್ಯಕ್ಷ ಡಾ. ಸನ್ಮತಿಕುಮಾರ್ ಸ್ವಾಗತಿಸಿದರು. ಎಸ್.ಡಿ.ಎಂ. ಪ್ರೌಢಶಾಲೆಯ ಶಿಕ್ಷಕ ರವೀಶ್ ಕುಮಾರ್ ಧನ್ಯವಾದವಿತ್ತರು. ಸಂಪತ್‌ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಸಾಮೂಹಿಕ ಪಂಚನಮಸ್ಕಾರ ಮಂತ್ರ ಪಠಣದೊಂದಿಗೆ ಕಾರ್ಯಕ್ರಮ ಆರಂಭಿಸಿ, ಕೊನೆಯಲ್ಲಿ ಶಾಂತಿಮಂತ್ರ ಪಠಣದೊಂದಿಗೆ ಸಮಾಪನಗೊಳಿಸಲಾಯಿತು.

ಜೈನ ಸಾಹಿತ್ಯ ಸಿರಿ ಕಾರ್ಯಕ್ರಮ

Article Image

ಜೈನ ಸಾಹಿತ್ಯ ಸಿರಿ ಕಾರ್ಯಕ್ರಮ

ಬೆಂಗಳೂರು, ಆ.9- ರಾಮಾಯಣ ಕಾವ್ಯ ಭಾರತೀಯರಿಗೆ ಮಹತ್ವದ ಸಾಹಿತ್ಯ ಪರಂಪರೆಯಾಗಿದ್ದು, ಜೈನರಾಮಾಯಣವು ವೈದಿಕ ರಾಮಾಯಣಕ್ಕಿಂತ ಭಿನ್ನವಾದ ದೃಷ್ಟಿಕೋನವನ್ನು ಹೊಂದಿದೆ ಎಂದು ಪ್ರೊ. ಜಿ. ಅಶ್ವತ್ಥನಾರಾಯಣ ಹೇಳಿದರು. ಜೈನ ಮಿಲನ್ ಸೆಂಟ್ರಲ್ ಬೆಂಗಳೂರು ಹಾಗೂ ಜಯನಗರದ ಶ್ರೀಚಕ್ರೇಶ್ವರಿ ಮಹಿಳಾ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದ ಜೈನ ಸಾಹಿತ್ಯ ಸಿರಿ ಕಾರ್ಯಕ್ರಮದಲ್ಲಿ ಪ್ರೊ. ಜೀವಂಧರಕುಮಾರ ಹೋತಪೇಟಿ ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿರುವ ಆಧ್ಯಾತ್ಮ ಯೋಗಿ ರಾಮ್‌ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಜೈನ ರಾಮಾಯಣಗಳಲ್ಲಿ ಪ್ರತಿನಾಯಕ ರಾವಣನನ್ನು ನೋಡುವ ವಿಭಿನ್ನ ದೃಷ್ಟಿಕೋನ ದೊರೆಯುತ್ತದೆ. ಶಾಸ್ತ್ರ ಮತ್ತು ಕಾವ್ಯವನ್ನು ಒಳಗೊಂಡಿರುವ ಆಧ್ಯಾತ್ಮಯೋಗಿ ರಾಮ ಕೃತಿಯ ಪುಟಪುಟಗಳಲ್ಲೂ ಜೈನಧರ್ಮದ ಶಾಸ್ತ್ರದ ತಿಳಿವಳಿಕೆ ಕಾಣಬಹುದು. ಮೂಲ ಕೃತಿಕಾರ ರವಿಶೇಷಣರು ರಚಿಸಿರುವ 18 ಸಾವಿರ ಶ್ಲೋಕಗಳ ಕೃತಿಯನ್ನು ಪ್ರೊ. ಜೀವಂಧರಕುಮಾರ ಹೋತಪೇಟೆ ಅಪೂರ್ವವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ ಎಂದು ಹೇಳಿದರು. ಪ್ರೊ. ಜೀವಂಧರಕುಮಾರ ಮಾತನಾಡಿ, ಪ್ರತಿಯೊಬ್ಬ ಮನುಷ್ಯನೂ ತನ್ನ ಭವಿಷ್ಯದ ರೂವಾರಿಯಾಗಿದ್ದು, ಮಾನವ ಆತ್ಮ ಪರಮಾತ್ಮನಾಗುವ ಸಾಧ್ಯತೆ ಹೊಂದಿದೆ. ಸಂಸಾರ ಬಂಧನದಿಂದ ಮುಕ್ತರಾಗಲು ಮನುಷ್ಯ ಪ್ರಯತ್ನಿಸಬೇಕು ಎಂದರು. ಅನಿತಾ ಸುರೇಂದ್ರ ಕುಮಾರ ಮಾತನಾಡಿ, ಜೈನ ಸಾಹಿತ್ಯ ಸಿರಿ ಮೂಲಕ ಜನಸಾಮಾನ್ಯರಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುತ್ತಿದೆ ಎಂದರು. ಡಾ. ನಲ್ಲೂರು ಪ್ರಸಾದ್‌, ಮಮತ ಕಾಂತರಾಜ್, ನಾಗಶ್ರೀ ಮುಪ್ಪಾನೆ, ಡಾ. ಪದ್ಮನಿ ನಾಗರಾಜು, ಬ್ರಾಹ್ಮಲ ಮದನಕುಮಾರ, ದೀಪಾಂಜಲಿ ಗೌರಾಜ್ ಉಪಸ್ಥಿತರಿದ್ದರು. ದಿಶಾ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು.

ಬೆಳ್ತಂಗಡಿ: ಅರ್ಜಿ ಆಹ್ವಾನ

Article Image

ಬೆಳ್ತಂಗಡಿ: ಅರ್ಜಿ ಆಹ್ವಾನ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜೈನ ಧರ್ಮಿಯ ವಿದ್ಯಾರ್ಥಿಗಳಿಗೆ ಕೆಲ್ಲಗುತ್ತು ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಮೆಮೋರಿಯಲ್ ಟ್ರಸ್ಟ್ (ರಿ) ಬೆಳ್ತಂಗಡಿ ಹಾಗೂ ಶ್ರಾವಕ/ ಶ್ರಾವಿಕೆಯರ ಸಹಕಾರದಿಂದ ವಿದ್ಯಾರ್ಥಿ ಪ್ರೋತ್ಸಾಹ ಧನವನ್ನು ಕಳೆದ ಹಲವಾರು ವರ್ಷಗಳಿಂದ ನೀಡುತ್ತಾ ಬರಲಾಗುತ್ತಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಉತ್ತೇಜನವನ್ನು ನೀಡಲಾಗುತ್ತಿದೆ. ಅದೇ ರೀತಿ 2026-27 ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಜೈನ ಧರ್ಮೀಯ ವಿದ್ಯಾರ್ಥಿಗಳನ್ನು 2026ರ ಸೆಪ್ಟೆಂಬರ್ 21ರಂದು ಶ್ರೀ ಕ್ಷೇತ್ರ ಹೊಂಬುಜ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಡಾ. ಶ್ರೀಮದ್ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ವಿದ್ಯಾರ್ಥಿ ಪ್ರೋತ್ಸಾಹ ಧನವನ್ನು ನೀಡಿ ಪ್ರೋತ್ಸಾಹಿಸಲಾಗುವುದು. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಗಿಂತ ಮೇಲ್ಪಟ್ಟು ಪಿಯುಸಿ, ಪದವಿ, ಐಟಿಐ, ಪಾಲಿಟೆಕ್ನಿಕ್, ಬಿಬಿಎಂ, ಇಂಜಿನಿಯರಿಂಗ್, ವೈದ್ಯಕೀಯ ಇನ್ನಿತರ ವ್ಯಾಸಂಗವನ್ನು ಮುಂದುವರಿಸುತ್ತಿರುವ ವಿದ್ಯಾರ್ಥಿಗಳು ಮಾತ್ರ ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರದ ಕಚೇರಿಯಲ್ಲಿ ಪಡೆದುಕೊಳ್ಳುವುದು ಮತ್ತು ಅರ್ಜಿಯೊಂದಿಗೆ ಪ್ರಸ್ತುತ ಕಲಿಯುತ್ತಿರುವ ಸಂಸ್ಥೆಯಿಂದ ವ್ಯಾಸಂಗ ಪ್ರಮಾಣ ಪತ್ರ ಹಾಗೂ ಕಳೆದ ವರ್ಷ ಕಲಿತು ಉತ್ತೀರ್ಣರಾದ ಬಗ್ಗೆ ಅಂಕಪಟ್ಟಿಯ ಯಥಾಪ್ರತಿ, ವಿದ್ಯಾರ್ಥಿಯ ಖಾಯಂ ವಿಳಾಸ, ವಿದ್ಯಾರ್ಥಿಯ ಆಧಾರ್ ಪ್ರತಿ, ಸಂಪರ್ಕ ಸಂಖ್ಯೆ, ತಂದೆ ಮತ್ತು ತಾಯಿಯ ಹೆಸರು ನಮೂದಿಸಿ ಅವರಿಬ್ಬರಲ್ಲಿ ಒಬ್ಬರ ಸಹಿಯನ್ನು ಕಡ್ಡಾಯವಾಗಿ ಮಾಡಿ ಆಗಸ್ಟ್ 31ರ ಒಳಗೆ ಕೆ. ಜಯವರ್ಮರಾಜ ಬಳ್ಳಾಲ್, ಮ್ಯಾನೇಜಿಂಗ್ ಟ್ರಸ್ಟಿ, ಕೆಲಗುತ್ತು ಸಬ್ರಬ್ಯೆಲು ದಿ. ಕಿನ್ಯಮ್ಮ ಯಾನೆ ಗುಣವತಿಯಮ್ಮ ಮೆಮೋರಿಯಲ್ ಟ್ರಸ್ಟ್ ,(ರಿ), ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರ, ಜೈನ್ ಪೇಟೆ, ಬೆಳ್ತಂಗಡಿ-574214 ದಕ್ಷಿಣ ಕನ್ನಡ ಈ ವಿಳಾಸಕ್ಕೆ ತಲುಪುವಂತೆ ಕಳುಹಿಸತಕ್ಕದ್ದು. ಅದೇ ರೀತಿ ಉಭಯ ಜಿಲ್ಲೆಗಳಲ್ಲಿ ಕ್ಯಾನ್ಸರ್, ಕಿಡ್ನಿ, ಹೃದಯ ಸಂಬಂಧಿ ಇನ್ನಿತರ ತೀವ್ರತರದ ಕಾಯಿಲೆಗಳಿಂದ ಬಳಲುತ್ತಿರುವ ಸಮಾಜದ ಅರ್ಹ ಬಂಧುಗಳು ಕೂಡ ಈ ಬಗ್ಗೆ ಈ ಮೇಲಿನ ವಿಳಾಸದಾರರನ್ನು ಸಂಪರ್ಕಿಸಿದಲ್ಲಿ ಪರಿಶೀಲಿಸಿ ಅಗತ್ಯ ನೆರವು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9448180439 ಈ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಮ್ಯಾನೇಜಿಂಗ್ ಟ್ರಸ್ಟಿ ಕೆ. ಜಯವರ್ಮರಾಜ ಬಳ್ಳಾಲ್ ರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

ಸಂಪತ್ತು ಶ್ರಾವಣ ಶುಕ್ರವಾರ ವಿಶೇಷ ಪೂಜೆ

Article Image

ಸಂಪತ್ತು ಶ್ರಾವಣ ಶುಕ್ರವಾರ ವಿಶೇಷ ಪೂಜೆ

ನಾರಾವಿ ಮಾಗಣೆ ಭ| 1008 ಶ್ರೀ ಧರ್ಮನಾಥ ಸ್ವಾಮಿ ಸನ್ನಿಧಿಯಲ್ಲಿ ಕಾರ್ಕಳ ಶ್ರೀ ಜೈನಮಠದ ಪೂಜ್ಯ ರಾಜಗುರು, ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಗಳವರ ಶುಭಾಶೀರ್ವಾದಗಳೊಂದಿಗೆ ಶ್ರಾವಣ (ಸೋಣ) ತಿಂಗಳ ಸಂಪತ್ತು ಶ್ರಾವಣ ಶುಕ್ರವಾರದ ವಿಶೇಷ ಪೂಜೆಯು ದಿನಾಂಕ 21/08/2026 ರಿಂದ 11/09/2026 ರ ಪರ್ಯಂತ ಜರಗಲಿರುವುದು. ವಿ.ಸೂ: ಶ್ರಾವಣ ಶುಕ್ರವಾರದಂದು ಪ್ರತಿ ದಿನ ಬೆಳಗ್ಗೆ ಗಂಟೆ 9-00ರಿಂದ ಧಾರ್ಮಿಕ ಪೂಜಾ ಕಾರ್ಯಕ್ರಮ ಮತ್ತು ಮಹಾಮಾತೆ ಶ್ರೀ ಪದ್ಮಾವತೀ ಅಮ್ಮನವರ ಸಹಸ್ರನಾಮ ಕುಂಕುಮಾರ್ಚನೆ ನಡೆಯಲಿರುವುದು. ಕುಂಕುಮಾರ್ಚನೆ ಮಾಡಲು ಇಚ್ಛೆ ಉಳ್ಳವರು 10 ನಿಮಿಷ ಮುಂಚಿತವಾಗಿ ಬರುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ: ಶ್ರೀ ಶಾಂತಿರಾಜ ಮುದ್ಯ, ವ್ಯವಸ್ಥಾಪಕರು ಮೊ: 9902469108, ಶ್ರೀ ಹರ್ಷಿತ್ ಇಂದ್ರ, ಪುರೋಹಿತರು ಮೊ: 9901630039

ಚಾತುರ್ಮಾಸ ಮಂಗಳ ಕಳಸ ಸ್ಥಾಪನೆ

Article Image

ಚಾತುರ್ಮಾಸ ಮಂಗಳ ಕಳಸ ಸ್ಥಾಪನೆ

ಸಾಲಿಗ್ರಾಮ: ಪ. ಪೂಜ್ಯ ಸಂತಶಿರೋಮಣಿ ಆಚಾರ್ಯಶ್ರೀ 108 ವಿದ್ಯಾಸಾಗರಜೀ ಮಹಾರಾಜರ ಶಿಷ್ಯರಾದ ಹಾಗೂ ನೂತನ ಪ. ಪೂಜ್ಯ ಆಚಾರ್ಯ ಶ್ರೀ 108 ಸಮಯ ಸಾಗರಜೀ ಮಹಾರಾಜರ ಅಜ್ಞಾನುವರ್ತಿ ಶಿಷ್ಯರಾದ ಪ. ಪೂಜ್ಯ ಮುನಿಶ್ರೀ 108 ಪಾಯಸಾಗರಜೀ ಮಹಾರಾಜರ ರವರ ಪಾವನ ವರ್ಷಾಯೋಗದ ಚಾತುರ್ಮಾಸ ಮಂಗಳ ಕಳಸ ಸ್ಥಾಪನೆ ಕಾರ್ಯಕ್ರಮವು ದಿನಾಂಕ 9/8/2026 ರಂದು ನಡೆಯಲಿರುವುದು. ವಿ.ಸೂ: ಪ್ರತಿ ದಿನ ತ್ಯಾಗಿ ನಿವಾಸದಲ್ಲಿ ಬೆಳಗ್ಗೆ 6:00 ಗಂಟೆಗೆ ಭಗವಂತರಿಗೆ ಅಭಿಷೇಕ ಮತ್ತು ಪೂಜೆ ಸಂಜೆ 05:45 ಗಂಟೆಗೆ ಭಕ್ತಿ. ಆರತಿ ಮತ್ತು ಪ್ರವಚನ ನೆರವೇರಲಿದೆ.

ಮಂಗಳೂರು: ಆಟಿಡೊಂಜಿ ದಿನ ಕಾರ್ಯಕ್ರಮ

Article Image

ಮಂಗಳೂರು: ಆಟಿಡೊಂಜಿ ದಿನ ಕಾರ್ಯಕ್ರಮ

ದಿನಾಂಕ 02.08.2026ರಂದು ವೀರರಾಣಿ ಅಬ್ಬಕ್ಕ ಜೈನ ಮಹಿಳಾ ಸಂಘ ಇದರ 'ಆಟಿಡೊಂಜಿ ದಿನ' ಅತ್ಯಂತ ಯಶಸ್ವಿಯಾಗಿ ಎಸ್‌.ಡಿ.ಎಂ.ಲಾ ಕಾಲೇಜು ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು, ಮಹಿಳಾ ಸಂಘದ ಅಧ್ಯಕ್ಷರಾದ ಸುಮನ ಪೂವಣಿ ವಹಿಸಿದ್ದರು. ಪ್ರಸನ್ನ ವಿನಯ ಕುಮಾರ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸದಸ್ಯೆಯರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸಂಘದ ಕಾರ್ಯದರ್ಶಿಗಳಾದ ಶಿಲ್ಪಾ ಸಂದೀಪ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು. ಸುಮಾರು 65ಕ್ಕೂ ಮಿಕ್ಕಿ ಖಾದ್ಯಗಳನ್ನು ಮಹಿಳೆಯರು ಮನೆಯಲ್ಲಿ ತಯಾರಿಸಿ ತಂದಿದ್ದರು.

ಮುಡಾರು: ವಿಶೇಷ ಪೂಜಾ ಕಾರ್ಯಕ್ರಮಗಳು

Article Image

ಮುಡಾರು: ವಿಶೇಷ ಪೂಜಾ ಕಾರ್ಯಕ್ರಮಗಳು

ಉಡುಪಿ ಜಿಲ್ಲೆ, ಕಾರ್ಕಳ ತಾಲೂಕಿನ, ಬಜಗೋಳಿ, ಮುಡಾರು ಅಪ್ಪಾಯಿ ಬಸದಿ ಶ್ರೀ ಅನಂತನಾಥ ಸ್ವಾಮಿ ಹಾಗೂ ಶ್ರೀ ಪದ್ಮಾವತೀ ದೇವೀ ಸನ್ನಿಧಿಯಲ್ಲಿ ಶ್ರಾವಣ ಸಿಂಹ (ಸೋಣ) ಮಾಸದ ಪ್ರತಿ ಶುಕ್ರವಾರ ವಿಶೇಷ ಪೂಜೆ, ಸಾಮೂಹಿಕ ಅನಂತನೋಂಪಿ ವಿಧಾನ ಮತ್ತು ನವರಾತ್ರಿಯ ಶುಭದಿನಗಳಂದು ವಿಶೇಷ ಪೂಜಾ ಕಾರ್ಯಕ್ರಮಗಳು ಕಾರ್ಕಳ ಶ್ರೀ ಜೈನಮಠದ ಪರಮ ಪೂಜ್ಯ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ನೇತೃತ್ವ ಹಾಗೂ ಪಾವನ ಸಾನಿಧ್ಯದಲ್ಲಿ ಆ. 21ರಿಂದ ಸೆ. 11ರವರೆಗೆ ನೆರವೇರಲಿರುವುದು. ದಿನಾಂಕ 24-09-2026 ರಿಂದ ದಿನಾಂಕ 26-09-2026ರ ತನಕ ಶ್ರೀ ಅನಂತನೋಂಪಿ ವಿಧಾನ ನಡೆಯಲಿದೆ.

ಕ್ಷಮಿತ ಜೈನ್- ಪ್ರಥಮ ಸ್ಥಾನ

Article Image

ಕ್ಷಮಿತ ಜೈನ್- ಪ್ರಥಮ ಸ್ಥಾನ

ಮಂಗಳೂರಿನ ರಾಜ್ಯ ಸಾಹಿತ್ಯ ಚಿಗುರು ಬಳಗದ ವತಿಯಿಂದ ಬಳಗದ ಸದಸ್ಯರಿಗೆ ರಾಜ್ಯಮಟ್ಟದ ಚಿತ್ರ ಕವನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಕ್ಷಮಿತ ಜೈನ್ ರವರು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಇವರು ಕೊಪ್ಪ ತಾಲೂಕಿನ ಬಿ.ಎ. ವರ್ಧಮಾನ ಮತ್ತು ಪದ್ಮಲತಾ ದಂಪತಿಗಳ ಪುತ್ರಿ. ಪ್ರಸ್ತುತ ಇವರು ಬೆಂಗಳೂರಿನ ಶ್ರೀ ಶ್ರೀ ಕಾಲೇಜಿನಲ್ಲಿ ಇಎನ್‌ಟಿ ವಿಭಾಗದಲ್ಲಿ ಎಂ.ಎಸ್ (ಮಾಸ್ಟರ್ ಆಫ್ ಸರ್ಜರಿ) ಅಂತಿಮ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದಾರೆ.

ಮಲೆನಾಡ ಜೈನ ಅಡುಗೆ ಹಬ್ಬ

Article Image

ಮಲೆನಾಡ ಜೈನ ಅಡುಗೆ ಹಬ್ಬ

ಶಿವಮೊಗ್ಗ: ವೀರರಾಣಿ ಚನ್ನಭೈರಾದೇವಿ ಜಿಲ್ಲಾ ಜೈನ ಮಹಿಳಾ ಸಂಘಟನೆ ಇವರ ಆಯೋಜನೆಯಲ್ಲಿ ಆಷಾಢದಲ್ಲಿ ಒಂದು ದಿನ ಮಲೆನಾಡ ಜೈನ ಅಡುಗೆ ಹಬ್ಬ ಸಾಂಪ್ರದಾಯಿಕ ಮಲೆನಾಡ ಜೈನ ಆಹಾರ ಮಹೋತ್ಸವ ಹಾಗೂ ಇನ್ನಿತರ ಕಾರ್ಯಕ್ರಮವನ್ನು ವಳಗೆರೆ ಪಂಚಕೂಟ ಬಸದಿ ಸಭಾಭವನದಲ್ಲಿ ಆಗಸ್ಟ್ 2ರಂದು ಹಮ್ಮಿಕೊಳ್ಳಲಾಗಿದೆ.

ಕಾರ್ಕಳ: ಮಹಾಮಸ್ತಕಾಭಿಷೇಕ ಸಮಿತಿ ವತಿಯಿಂದ ಪೂಜ್ಯ ಯುಗಲ ಮುನಿ ಮಹಾರಾಜರ ಬೇಟಿ

Article Image

ಕಾರ್ಕಳ: ಮಹಾಮಸ್ತಕಾಭಿಷೇಕ ಸಮಿತಿ ವತಿಯಿಂದ ಪೂಜ್ಯ ಯುಗಲ ಮುನಿ ಮಹಾರಾಜರ ಬೇಟಿ

2027ರ ಫೆಬ್ರವರಿಯಲ್ಲಿ ಕಾರ್ಕಳ ಜೈನಮಠದ ಪೂಜ್ಯ ಸ್ವಾಮೀಜಿಯವರ ಮಾರ್ಗದರ್ಶನ, ಸಮಿತಿಯ ಅಧ್ಯಕ್ಷರಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ ಹಾಗೂ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ. ಎಂ ಏನ್ ರಾಜೇಂದ್ರ ಕುಮಾರ್ ರವರ ಮುಂದಾಳತ್ವದಲ್ಲಿ ನಡೆಯುವ ಕಾರ್ಕಳದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ 2027 ರ ಮಹಾಮಸ್ತಕಾಭಿಷೇಕ ಮಹೋತ್ಸವ ಪ್ರಯುಕ್ತ ಮುಂಬೈಯ ಧುಲೆ ಎಂಬಲ್ಲಿ ವಿಹಾರ ಇರುವ ಪೂಜ್ಯ ಯುಗಲ ಮುನಿ ಮಹಾರಾಜರನ್ನು ಸಮಿತಿಯ ಪ್ರಧಾನ ಕಾರ್ಯದರ್ಶಿಯವರಾದ ಪುಷ್ಪರಾಜ್ ಜೈನ್ ಮಂಗಳೂರು, ಕಾರ್ಯದರ್ಶಿಗಳಾದ ಭರತ್ ಕುಮಾರ್ ಜೈನ್ ಇರ್ವತ್ತೂರು, ಶೀತಲ್ ಜೈನ್ ಶಿರ್ಲಾಲು, ಹಿರಿಯರಾದ ಶ್ರೀವರ್ಮ ಜೈನ್, ರಘುಚಂದ್ರ ಜೈನ್, ಮಾಲತಿ ವಸಂತರಾಜ್, ವಿಜಯಲಕ್ಷ್ಮಿ ಹೇಮಚಂದ್ರ ಜೈನ್, ಮೋಹಿನಿ ವರ್ಧಮಾನ್, ಅಭೀಷ್ಟ ಕುಮಾರ್ ರವರು ಬೇಟಿ ನೀಡಿ ಪೂಜ್ಯ ಯುಗಲ ಮುನಿಮಹಾರಾಜರಿಂದ ಆಶೀರ್ವಾದ ಪಡೆಯಲಾಯಿತು.

ಗಂಗರ ಕಾಲದ ಮತ್ತು ಹೊಯ್ಸಳರ ಕಾಲದ ಮೂರ್ತಿಗಳು, ಶಾಸನಗಳು ಪತ್ತೆ

Article Image

ಗಂಗರ ಕಾಲದ ಮತ್ತು ಹೊಯ್ಸಳರ ಕಾಲದ ಮೂರ್ತಿಗಳು, ಶಾಸನಗಳು ಪತ್ತೆ

ಮೈಸೂರಿನ ಬಳಿ ಇರುವ ಕುಮಾರ ಬೀಡು ಗ್ರಾಮದಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿದ್ದ ಜೈನ ಬಸದಿಯು ಈಗ ಶಿಥಿಲವಾಗಿ ಪಾಳು ಬಿದ್ದಿರುವುದು ಪತ್ತೆಯಾಗಿದೆ. ಗಂಗರ ಕಾಲದ ಮತ್ತು ಹೊಯ್ಸಳರ ಕಾಲದ ಎರಡು ಭಗವಾನ್ ಶ್ರೀ ಪಾರ್ಶ್ವನಾಥ ತೀರ್ಥಂಕರರ ಮೂರ್ತಿಗಳು ಎರಡು ಶಾಸನಗಳು ಮತ್ತು ಅನೇಕ ಜಿನ ಬಿಂಬಗಳು ಸ್ಥಳದಲ್ಲಿವೆ. ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಸೂಚನೆಯಂತೆ ಜಿ ಡಿ ಪಾರ್ಶ್ವನಾಥ್ ಮತ್ತು ವೀರೇಂದ್ರ ಬೇಗೂರ್ ರವರು ಸ್ಥಳ ಪರಿಶೀಲನೆಗಾಗಿ ಇತ್ತೀಚೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮೈಸೂರು ನಗರದಲ್ಲಿ ಕುಮಾರಬೀಡು ಅಭಿವೃದ್ಧಿಗಾಗಿ ರಚಿಸಿರುವ ಟ್ರಸ್ಟಿನ ಅಧ್ಯಕ್ಷರಾದ ಮಿತ್ರಸೇನ ಜೈನ್ ಉಪಾಧ್ಯಕ್ಷ ಚಂದ್ರಶೇಖರ್ ಅರಿಗ ಕಾರ್ಯದರ್ಶಿ ಮಹಾವೀರ ಗೋಗಿ ಸಹಕಾರ್ಯದರ್ಶಿ ವಾಗೀಶ್ವರಿ ಪ್ರಕಾಶ್ ಸಂಘಟನಾ ಕಾರ್ಯದರ್ಶಿ ನವೀನ್ ಬಸ್ತಿ ಮತ್ತು ಟ್ರಸ್ಟಿಯಾದ ಶಾಂತಪ್ಪ ಮೈಸೂರು ಜೈನ ಸಮಾಜದ ಅಧ್ಯಕ್ಷರಾದ ಸುನಿಲ್ ಕುಮಾರ್ ತೀರ್ಥಕ್ಷೇತ್ರ ಕಮಿಟಿಯ ಕರ್ನಾಟಕ ಅಧ್ಯಕ್ಷರಾದ ವಿನೋದ್ ಕುಮಾರ್ ಬಾಕ್ಲೀವಾಲ್ ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರಾದ ಎನ್ ಪ್ರಸನ್ನ ಕುಮಾರ್ ವರ್ಧಮಾನ ಜೈನ್ ಮಿಲನ್ ಉಪಾಧ್ಯಕ್ಷರಾದ ನಾಗರತ್ನ ಮತ್ತು ಚಂದ್ರಿಕಾ ರವರು ಕುಮಾರಬೀಡು ಉಪಸ್ಥಿತರಿದ್ದರು.

ಮೂಡುಬಿದಿರೆ: ಕಸ ವಿಲೇವಾರಿ ಪ್ರಾತ್ಯಕ್ಷಿಕೆ

Article Image

ಮೂಡುಬಿದಿರೆ: ಕಸ ವಿಲೇವಾರಿ ಪ್ರಾತ್ಯಕ್ಷಿಕೆ

ಸ್ವಸ್ತಿಶ್ರೀ ಜೈನ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಧವಳತ್ರಯ ಜೈನ ಕಾಶಿ ಟ್ರಸ್ಟ್ ಸಹಕಾರದಿಂದ ಕಾಲೇಜಿನ ಸಮಾಜ ಸೇವಾ ಸಂಘದ ಸಹಯೋಗದಲ್ಲಿ ಹಾಗೂ ಮೂಡುಬಿದಿರೆ ಪುರಸಭೆಯ ಸಹಯೋಗದೊಂದಿಗೆ ಕಸ ವಿಲೇವಾರಿ ಪ್ರಾತ್ಯಕ್ಷಿಕೆ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ‍್ಯಕ್ರಮದಲ್ಲಿ ಕಾಲೇಜಿನ ಸ್ಥಾಪಕ ಅಧ್ಯಕ್ಷರಾದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ‍್ಯ ಪಂಡಿತಾಚಾರ‍್ಯವರ‍್ಯ ಮಹಾಸ್ವಾಮೀಜಿ ಪಾವನ ಸಾನಿಧ್ಯವನ್ನು ವಹಿಸಿಕೊಂಡು ಮಾತನಾಡುತ್ತ ನಮ್ಮ ಊರಿನ ಪರಿಸರದ ಸ್ವಚ್ಛ ಸುಂದರವಾಗಿಸಿ ಕಸ ಇಲ್ಲದಂತೆ ನೋಡುದು ನಮ್ಮೆಲ್ಲರ ಜವಾಬ್ದಾರಿ ಕಸವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಿದಾಗ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿರುತ್ತದೆ ಎಂದರು. ಕಾರ‍್ಯಕ್ರಮದಲ್ಲಿ ಮೂಡುಬಿದಿರೆ ಪುರಸಭೆಯ ಮುಖ್ಯ ಅಧಿಕಾರಿ ಇಂದೂರವರು ಹಾಗೂ, ಪುರಸಭೆಯ ಪರಿಸರ ಅಭಿಯಂತರೆ ಶಿಲ್ಪಾ ಉಪಸ್ಥಿತರಿದ್ದರು ಇವರನ್ನು ಸ್ವಸ್ತಿಶ್ರೀ ಪೂಜ್ಯ ಸ್ವಾಮೀಜಿಯವರು ಸನ್ಮಾನಿಸಿ ಅಭಿನಂದಿಸಿದರು. ಶಿಲ್ಪಾರವರು ಕಸ ವಿಲೇವಾರಿಯ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಯಾವ ಯಾವ ರೀತಿಯ ಕಸವನ್ನು ಯಾವ್ಯಾವ ರೀತಿ ವಿಲೇವಾರಿ ಮಾಡಬೇಕು ಎನ್ನುವ ವಿಷಯವನ್ನು ಮನವರಿಕೆ ಮಾಡಿಕೊಟ್ಟರು. ಕಾರ‍್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಜ್ವಲ್ ಶೆಣೈ ಇವರು ಉಪಸ್ಥಿತರಿದ್ದರು. ಇವರು ಕಸ ವಿಲೇವಾರಿ ಮಾದರಿಗಳ ಮುಖಾಂತರ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಕಾರ‍್ಯಕ್ರಮದಲ್ಲಿ ಕಾಲೇಜಿನ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷರಾದ ಶ್ವೇತಾ ಜೈನ್ ನೋಟರಿ ಹಾಗೂ ನ್ಯಾಯವಾದಿಗಳು ಮೂಡುಬಿದಿರೆ ಇವರು ಉಪಸ್ಥಿತರಿದ್ದು ಎಲ್ಲಾ ವಿದ್ಯಾರ್ಥಿಗಳಿಗೆ ಬಟ್ಟೆ ಚೀಲ ಉಚಿತವಾಗಿ ನೀಡಿದರು. ಮಧ್ಯಾಹ್ನ ನಡೆದ ಈ ಸುಂದರ ಸಮಾರಂಭದಲ್ಲಿ ಕಾಲೇಜಿನ ಉಪನ್ಯಾಸಕ ವೃಂದದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲೆ ಸೌಮ್ಯಶ್ರೀ ಸ್ವಾಗತಿಸಿದರು. ಉಪನ್ಯಾಸಕಿ ಸರಸ್ವತಿ ವಂದಿಸಿದರು.

ಗದಗ:- ಶ್ರೀ ಶಾಂತಿನಾಥ ವಿಧಾನ

Article Image

ಗದಗ:- ಶ್ರೀ ಶಾಂತಿನಾಥ ವಿಧಾನ

ಜೈನ ವಿಧಿವಿಧಾನಗಳು ಆತ್ಮದ ಶುದ್ಧೀಕರಣ ಮತ್ತು ಕರ್ಮಗಳ ವಿನಾಶಕ್ಕೆ ಅತ್ಯಂತ ಮಹತ್ವದ ಸಾಧನಗಳಾಗಿದ್ದು, ‘ಶಾಂತಿನಾಥ ವಿಧಾನ’ವು ಅತ್ಯಂತ ಪವಿತ್ರ ಮತ್ತು ಪ್ರಭಾವಶಾಲಿ ಪೂಜಾ ಆಚರಣೆಯಾಗಿದೆ ಎಂದು ಚರ್ಯಾಶಿರೋಮಣಿ ಮುನಿಶ್ರೀ ವಿದಿತಸಾಗರ ಮಹಾರಾಜರು ಉಪದೇಶಿದರು. ಅವರು ಗದಗ ಜಿಲ್ಲಾ ದಿಗಂಬರ ಜೈನ ಸಂಘವು ಹುಡ್ಕೋ ಕಾಲೋನಿಯ ಸಚ್ಚಿದಾನಂದ ಮಠದ ಭವನದಲ್ಲಿ ಆಯೋಜಿಸಿದ್ದ ‘ಶ್ರೀ ಶಾಂತಿನಾಥ ವಿಧಾನ’ದ ದಿವ್ಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡುತ್ತ, ಜೈನ ಪರಂಪರೆಯಲ್ಲಿ 16ನೆಯ ತೀರ್ಥಂಕರ ಶಾಂತಿನಾಥರನ್ನು ‘ಶಾಂತಿಯ ಅಧಿದೇವತೆ’ ಎಂದು ಆರಾಧಿಸಲಾಗುತ್ತದೆ. ಈ ವಿಧಾನವನ್ನು ಮಾಡುವುದರಿಂದ ಮನಸ್ಸಿನಲ್ಲಿರುವ ಒತ್ತಡ, ಕೋಪ, ಕ್ರೌರ್ಯಗಳು ದೂರವಾಗಿ ಇಡೀ ವಿಶ್ವದಲ್ಲಿ ಅಹಿಂಸೆ ಮತ್ತು ಶಾಂತಿ ನೆಲೆಸುತ್ತದೆ. ವ್ಯಾಪಾರ, ಉದ್ಯೋಗ, ಶಿಕ್ಷಣ, ಕುಟುಂಬದಲ್ಲಿ ಎದುರಾಗುವ ಕಷ್ಟಗಳು, ವಿಘ್ನಗಳು ಮತ್ತು ಪ್ರಾಕೃತಿಕ ವಿಕೋಪಗಳು ನಿವಾರಣೆಯಾಗುತ್ತವೆ. ಈ ವಿಧಿಯಲ್ಲಿ ಜಲ, ಚಂದನ, ಅಕ್ಷತೆ, ಪುಷ್ಪ, ದೀಪ, ಧೂಪ, ಫಲ, ಅರ್ಘ್ಯ ಎಂಬ ಅಷ್ಟದ್ರವ್ಯಗಳನ್ನು ಮಂತ್ರಘೋಷಗಳೊಂದಿಗೆ ಶಾಂತಿನಾಥ ತೀರ್ಥಂಕರರಿಗೆ ಸಮರ್ಪಿಸಲಾಗುತ್ತದೆ. ಈ ವಿಧಾನದಲ್ಲಿ ಭಾಗಿಯಾಗಿರುವ ತಾವೆಲ್ಲರೂ ಪುಣ್ಯಶಾಲಿಗಳಾಗಿದ್ದು, ಈ ಪರಂಪರೆಯನ್ನು ನಿರಂತರವಾಗಿ ಮುಂದುವರೆಸಲು ಜಿಲ್ಲೆಯ ಸಚಿವರು, ಸಂಸದರು, ಶಾಸಕರು, ಶ್ರಾವಕರು ನಗರದಲ್ಲಿ ಬಸದಿ, ಸಭಾಭವನ ನಿರ್ಮಿಸಲು ಉದಾರವಾಗಿ ಸಹಾಯ-ಸಹಕಾರ ನೀಡಬೇಕೆಂದು ಕೋರಿದರು. ಸಂಘದ ಗೌರವಾಧ್ಯಕ್ಷ ಡಾ. ಅಪ್ಪಣ್ಣ ಹಂಜೆ ಪ್ರಾಸ್ತಾವಿಕವಾಗಿ ಮಾತನಾಡುತ್ತ ಗದಗ ಜಿಲ್ಲೆಯ ಪ್ರದೇಶದಲ್ಲಿ 7ನೆಯ ಶತಮಾನದಿಂದಲೂ ಅನೇಕ ಜೈನ ಮುನಿಗಳು, ಆರ್ಯಿಕೆಯರು ವಿಹಾರ ಕೈಗೊಂಡು ಧರ್ಮಪ್ರಭಾವನೆ ಮೂಲಕ ಲೋಕಕಲ್ಯಾಣ ಚಟುವಟಿಕೆಗಳನ್ನು ಕೈಗೊಳ್ಳುತ್ತ ಬಂದಿದ್ದು, ಆ ಪರಂಪರೆ ಮುನಿಶ್ರೀ ವಿದಿತಸಾಗರ ಮಹಾರಾಜರಿಂದಲೂ ಮುಂದುವರೆದಿರುವುದು ಇಲ್ಲಿಯ ಜೈನ ಸಮಾಜದ ಸೌಭಾಗ್ಯವಾಗಿದೆ ಎಂದು ಹೇಳಿದರು. ವಿಧಾನದಲ್ಲಿ ಪ್ರಕಾಶ ಮುತ್ತಿನ, ಸಂಕಪ್ಪ ನಾವಳ್ಳಿ, ಎಂ.ಟಿ. ಕಬ್ಬಿಣ, ಟಿವಿ-9 ವರದಿಗಾರ ಸಂಜಯ ಪಾಂಡ್ರೆ, ಎ.ಎನ್. ಬಸ್ತಿ, ನಾಗರಾಜ ತುಕೋಳ, ಯಶವಂತ ಸಿದ್ದಣ್ಣವರ, ಸುಭಾಸ ಅಂಗಡಿ, ಅನಂತರಾಜ ಬಸ್ತಿ, ರವಿ ಮುತ್ತಿನ, ಎ.ವಾಯ್. ಇಂಚಲ, ಹನಮಂತಗೌಡ ಮತಗಟ್ಟಿ, ಬಿ.ಎಸ್. ನಾವಳ್ಳಿ, ಪರಿಮಳಾ ಕುಲಕರ್ಣಿ, ಸಹನಾ ಹಂಜೆ, ಸುಮನ ಮುತ್ತಿನ, ಶೋಭಕ್ಕ ಇಂಚಲ, ವಸಂತಮಾಲಾ ದೇಸಾಯಿ, ಅನಂತಮತಿ ಬಸ್ತಿ, ಸುಪ್ರಿಯಾ ನಾವಳ್ಳಿ, ಮಧುಮತಿ ಕಬ್ಬಿಣ ಸೇರಿದಂತೆ ಜಿಲ್ಲೆಯ ಹಿರಿಯರು, ಶ್ರಾವಕ- ಶ್ರಾವಿಕೆಯರು ಭಾಗವಹಿಸಿ ಅಷ್ಟದ್ರವ್ಯಗಳಿಂದ ಪೂಜೆ ಸಲ್ಲಿಸಿ ಕೃತಾರ್ಥರಾದರು. ಸಂಘದ ಅಧ್ಯಕ್ಷ ಪಿ.ಎ. ಕುಲಕರ್ಣಿ ಅವರು ಅಧ್ಯಕ್ಷೀಯ ನುಡಿಗಳಲ್ಲಿ ಮುನಿಶ್ರೀ ಅವರು ಗದಗ ನಗರಕ್ಕೆ ಆಗಮಿಸಿ ಧರ್ಮಪ್ರಭಾವನೆ ಕೈಗೊಂಡು ಶಾಂತಿನಾಥ ವಿಧಾನ ಆಚರಣೆಗೆ ಮಾರ್ಗದರ್ಶನದೊಂದಿಗೆ ಸಾನ್ನಿಧ್ಯ ವಹಿಸಿರುವುದು ಸದಾಕಾಲ ಸ್ಮರಣೀಯವಾಗಿದ್ದು, ಎಚ್.ಕೆ. ಪಾಟೀಲ ಅವರು ನಗರಾಭಿವೃದ್ಧಿ ಇಲಾಖೆಯಿಂದ ಬಸದಿ ಮತ್ತು ಸಭಾಭವನ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಿಕೊಡುವುದಾಗಿ ಜಿಲ್ಲೆಯ ಜೈನ ಸಮಾಜಕ್ಕೆ ಭರವಸೆ ನೀಡಿದ್ದಾರೆ. ಅವರ ಸಹಾಯ-ಸಹಕಾರದಿಂದ ನಗರದಲ್ಲಿ ಬಸದಿ ನಿರ್ಮಿಸಿ ಲೋಕಕಲ್ಯಾಣ ಚಟುವಟಿಕೆಗಳನ್ನು ಸಾಂಗವಾಗಿ ಮುಂದುವರೆಸಲಾಗುವುದೆಂದು ಹೇಳಿದರು. ಡಾ| ಅಪ್ಪಣ್ಣ ಹಂಜೆರವರು ಸ್ವಾಗತಿಸಿದರು. ಪ್ರಕಾಶ ಮುತ್ತಿನ ವಂದಾರ್ಪಣೆಗೈದರು. ಶಾಂತಿನಾಥ ತೀರ್ಥಂಕರರಿಗೆ ಆರತಿ ಮಾಡುವುದರೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು.

ತುಮಕೂರು: ವಿಶೇಷ ಕಾರ್ಯಾಗಾರ

Article Image

ತುಮಕೂರು: ವಿಶೇಷ ಕಾರ್ಯಾಗಾರ

ತುಮಕೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಜೈನ ಅಧ್ಯಯನ ವಿಭಾಗದ ವತಿಯಿಂದ "ಭಾರತೀಯ ಸಂಸ್ಕೃತಿಗೆ ಜೈನ ಧರ್ಮದ ಕೊಡುಗೆ" ಎಂಬ ವಿಷಯದ ಕುರಿತು ಎರಡು ದಿನಗಳ ವಿಶೇಷ ಕಾರ್ಯಾಗಾರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಜೈನ ಸಂಶೋಧಕರು ಹಾಗೂ ಜೈನ್ ಹೆರಿಟೇಜ್ ಸೆಂಟರ್ಸ್.ಕಾಂ (www.jainheritagecentres.com) ಅಂತರ್ಜಾಲತಾಣದ ಸಂಸ್ಥಾಪಕರು ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ಬೆಂಗಳೂರಿನ ನಿತಿನ್ ಹೆಚ್.ಪಿ. ಅವರು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಾ, "ಜೈನಧರ್ಮದ ಇತಿಹಾಸ, ತತ್ವಶಾಸ್ತ್ರ, ಕಲೆ ಮತ್ತು ಪರಂಪರೆಯ ಕುರಿತು ಇದುವರೆಗೆ ನಡೆದಿರುವ ದಾಖಲೀಕರಣ ಹಾಗೂ ಸಂಶೋಧನೆಯ ಫಲವಾಗಿಯೇ ಜೈನಧರ್ಮವು ಇಂದಿಗೂ ಜೀವಂತವಾಗಿ ಉಳಿದುಕೊಂಡಿದೆ. ಜೈನಧರ್ಮದ ಮಹತ್ವ ಮತ್ತು ಅದರ ಅಮೂಲ್ಯ ಕೊಡುಗೆಗಳು ಮುಂದಿನ ಪೀಳಿಗೆಗೆ ಪರಿಣಾಮಕಾರಿಯಾಗಿ ತಲುಪಬೇಕಾದರೆ, ಜೈನ ಅಧ್ಯಯನವು ಶೈಕ್ಷಣಿಕವಾಗಿ ಇನ್ನಷ್ಟು ಅಭಿವೃದ್ಧಿ ಹೊಂದಬೇಕು. ಜೈನ ಅಧ್ಯಯನ ಮತ್ತು ಸಂಶೋಧನೆಯ ವ್ಯಾಪ್ತಿಯನ್ನು ವಿಸ್ತರಿಸುವುದು ಇಂದಿನ ಅಗತ್ಯವಾಗಿದೆ" ಎಂದು ಅಭಿಪ್ರಾಯಪಟ್ಟರು. "ಭಾರತವನ್ನು ಬಿಟ್ಟು ಜೈನಧರ್ಮವಿಲ್ಲ, ಜೈನಧರ್ಮವನ್ನು ಬಿಟ್ಟು ಭಾರತವಿಲ್ಲ ಎನ್ನುವಷ್ಟು ಆಳವಾಗಿ ಜೈನಧರ್ಮವು ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆಯೊಂದಿಗೆ ಬೆಸೆದುಕೊಂಡಿದೆ. ಆದ್ದರಿಂದ ನಾವು ದಿಗಂಬರ ಮತ್ತು ಶ್ವೇತಾಂಬರ ಎಂಬ ಪಂಥೀಯ ಭೇದಗಳನ್ನು ಮೀರಿ, ಜೈನಧರ್ಮವನ್ನು ಮುಕ್ತ ಮನಸ್ಸಿನಿಂದ ಅಧ್ಯಯನ ಮಾಡುವ ಅಗತ್ಯವಿದೆ" ಎಂದು ತಿಳಿಸಿದರು. ಬಳಿಕ ಇವರು ಭಾರತದಲ್ಲಿ ಜೈನ ಚಿತ್ರಕಲೆ ಮತ್ತು ಶಿಲ್ಪಕಲೆಗಳ ಪರಂಪರೆ, ಭಾರತದಲ್ಲಿನ ಜೈನ ಗುಹೆಗಳ ವೈಶಿಷ್ಟತೆಗಳು, ಜೈನ ಪ್ರತಿಮಾಶಾಸ್ತ್ರ ಮತ್ತು ಅದರ ವಿಶಿಷ್ಟ ವಿನ್ಯಾಸಗಳು, ಜೈನ ಜಿನಾಲಯಗಳ ವಾಸ್ತುಶಿಲ್ಪ ಮತ್ತು ಅದರ ವಿಶೇಷತೆಗಳು. ಈ ಉಪನ್ಯಾಸಗಳು ಜೈನ ಕಲೆ, ವಾಸ್ತುಶಿಲ್ಪ, ಇತಿಹಾಸ ಮತ್ತು ಪರಂಪರೆಯ ವಿವಿಧ ಆಯಾಮಗಳನ್ನು ಒಳಗೊಂಡಿದ್ದು, ಭಾಗವಹಿಸಿದ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಂದ ಉತ್ತಮ ಪ್ರತಿಕ್ರಿಯೆ ಪಡೆದವು. ನಾಡಿನ ಹಿರಿಯ ಜೈನ ವಿದ್ವಾಂಸರು ಮತ್ತು ಸಂಶೋಧಕರಾದ ಡಾ. ಎಸ್.ಪಿ. ಪದ್ಮಪ್ರಸಾದ್ ಅವರ ಮಾರ್ಗದರ್ಶನ ಮತ್ತು ಉಪಸ್ಥಿತಿಯಲ್ಲಿ ಈ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಅವರ ಮಾರ್ಗದರ್ಶನವು ಕಾರ್ಯಕ್ರಮದ ಯಶಸ್ಸಿಗೆ ಮಹತ್ವದ ಕೊಡುಗೆಯಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಪ್ರಾಧ್ಯಾಪಕರಾದ ಪ್ರೊ. ಶೇಟ್ ಪ್ರಕಾಶ್ ಅವರು ವಹಿಸಿದ್ದರು. ಕಾರ್ಯಕ್ರಮದ ಸಂಯೋಜಕರಾದ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ. ವೆಂಕಟರಾಮ ರೆಡ್ಡಿ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಎಂ. ಕೊಟ್ರೇಶ್ ಅವರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ತುಮಕೂರು ವಿಶ್ವವಿದ್ಯಾಲಯದ ಜೈನಧರ್ಮ ಸ್ನಾತಕೋತ್ತರ ಡಿಪ್ಲೋಮಾ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದು, ಕಾರ್ಯಕ್ರಮದ ಆಯೋಜನೆ ಮತ್ತು ನಿರ್ವಹಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಜೊತೆಗೆ, ತುಮಕೂರು ನಗರದ ಶ್ರಾವಕ ಸಮುದಾಯದ ಸದಸ್ಯರು, ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಖ್ಯಾತ ವಿದ್ವಾಂಸರು, ಸಂಶೋಧಕರು ಹಾಗೂ ಶಿಕ್ಷಣ ತಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ರಾಮಚಂದ್ರ ಕಿಲ್ಲೇದಾರರಿಗೆ ಪಿ.ಎಚ್.ಡಿ. ಪ್ರದಾನ

Article Image

ರಾಮಚಂದ್ರ ಕಿಲ್ಲೇದಾರರಿಗೆ ಪಿ.ಎಚ್.ಡಿ. ಪ್ರದಾನ

ಬೆಳಗಾವಿ: ಕಾಗವಾಡ ತಾಲೂಕಿನ ಉಗಾರಖುರ್ದ ಪಟ್ಟಣದ ಪೀಪಲ್ಸ್ ಎಜ್ಯುಕೇಶನ್ ಸೊಸೈಟಿಯ ಪ್ರಾಚಾರ್ಯರು ಹಾಗೂ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಗೌರವಾನ್ವಿತ ಸಿಂಡಿಕೇಟ್ ಸದಸ್ಯರಾದ ರಾಮಚಂದ್ರ ಕಿಲ್ಲೇದಾರ ಅವರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಪಿ.ಎಚ್.ಡಿ. (ಡಾಕ್ಟರ್ ಆಫ್ ಫಿಲಾಸಫಿ) ಪದವಿಯನ್ನು ಅಧಿಕೃತವಾಗಿ ಪ್ರದಾನ ಮಾಡಿದೆ. ವಿಶ್ವ ವಿದ್ಯಾಲಯದ ವಾಣಿಜ್ಯ ನಿಕಾಯದ ವ್ಯವಹಾರ ನಿರ್ವಹಣೆ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗೂ ಸಂಶೋಧನಾ ಮಾರ್ಗದರ್ಶಕರಾದ ಪ್ರೊ. ಎಸ್.ಸಿ. ಪಾಟೀಲ ಅವರ ಮಾರ್ಗದರ್ಶನದಲ್ಲಿ ಇವರು ತಮ್ಮ ಸಂಶೋಧನಾ ಮಹಾಪ್ರಬಂಧವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಇವರು ಉಗಾರ ಖುರ್ದದ ಹೆಸರಾಂತ ಶೈಕ್ಷಣಿಕ ಸಂಸ್ಥೆಯಾದ ಪೀಪಲ್ಸ್ ಎಜುಕೇಶನ್ ಸೊಸೈಟಿಯ ಸಂಸ್ಥಾಪಕ ಕಾರ್ಯದರ್ಶಿ ಹಾಗೂ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2008 ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು ಅವರ ನೇತೃತ್ವದಲ್ಲಿ ಒಂದರಿಂದ ಎಂಟನೆ ತರಗತಿಯ ಇಂಗ್ಲಿಷ್ ಮಾಧ್ಯಮಶಾಲೆ, ಪಿಯುಸಿ (ಕಲಾ ಮತ್ತು ವಾಣಿಜ್ಯ) ಹಾಗೂ ಬಿ.ಬಿ.ಎ., ಬಿ.ಸಿ.ಎ. ಮತ್ತು ಬಿ.ಕಾಂ. ಪದವಿ ಕಾಲೇಜುಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದು, ಗ್ರಾಮೀಣ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಮಹತ್ವದ ನೀಡುತ್ತಿದೆ.

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ

Article Image

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ

ಶಿವಮೊಗ್ಗ: ವೀರರಾಣಿ ಚನ್ನಭೈರಾದೇವಿ ಜೈನ ಜಿಲ್ಲಾ ಮಹಿಳಾ ಸಂಘಟನೆ ಇವರ ಆಯೋಜನೆಯಲ್ಲಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ವಿಷಯ:- ಮಹಾಮಂಡಲೇಶ್ವರಿ ಚನ್ನಭೈರಾದೇವಿ ನಿಯಮಗಳು: ಪ್ರಬಂಧ ಸ್ಪರ್ಧೆಗೆ ವಯಸ್ಸಿನ ಮಿತಿ ಇರುವುದಿಲ್ಲ. ಎಲ್ಲರೂ ಭಾಗವಹಿಸಬಹುದು, ಕೈ ಅಕ್ಷರಗಳಲ್ಲಿ ಹಾಗೂ ಟೈಪ್ ಮಾಡಬಹುದು, ಎರಡು ಪುಟ ಮೀರಬಾರದು, ಪ್ರಬಂಧವನ್ನು ಕನ್ನಡ ಭಾಷೆಯಲ್ಲಿ ಬರೆಯಬೇಕು, ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ, ಸ್ಪರ್ಧಿಯ ಹೆಸರು ವಿಳಾಸ ಫೋನ್ ನಂಬರ್ ಬರೆಯಬೇಕು, ಅಂಜೆ (Post office) ಮೂಲಕ ಕಳುಹಿಸಬೇಕು. ಪ್ರಬಂಧ ಕಳುಹಿಸಲು ಕೊನೆಯ ದಿನಾಂಕ: 5-8-2026 ಕಳುಹಿಸುವ ವಿಳಾಸ: ಕೆ ಆರ್.ಪದ್ಮ ಬಾಹುಬಲಿ ಜೈನ್, ಎ ಪಿ ಎಂ ಸಿ ರೋಡ್, ಶ್ರೀಧರ ನಗರ, 2ನೇ ಕ್ರಾಸ್, ಸಾಗರ, ಪೋಸ್ಟ್ ಸಾಗರ, ಸಾಗರ (ತಾ) ಶಿವಮೊಗ್ಗ( ಜಿಲ್ಲೆ) ಸಾಗರ, ಪಿನ್ ನಂ:- 577421 ವಿವರಗಳಿಗೆ ಸಂಪರ್ಕಿಸಿ: 94822 04767, 94824 80220, 94497 06582, 94800 72644, 95916 83980

ಲಂಡನ್: ಜೈನ್ ಮಿಲನ್ ಮಾಸಿಕ ಸಭೆ

Article Image

ಲಂಡನ್: ಜೈನ್ ಮಿಲನ್ ಮಾಸಿಕ ಸಭೆ

ಇಂಗ್ಲೆಂಡ್: ಸ್ಲೋಘ್‌ನಲ್ಲಿರುವ ಶಾಂತಿನಾಥ ದಿಗಂಬರ ಜೈನ ಬಸದಿಯಲ್ಲಿ ಮೊದಲಿಗೆ ಪೂಜಾ ಕಾರ್ಯಕ್ರಮಗಳು ನಡೆದು, ನಂತರ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಆಚಾರ್ಯ ಶ್ರೀ ವಿದ್ಯಾಸಾಗರ ದಿಗಂಬರ ಜೈನ ಚಾರಿಟೇಬಲ್ ಟ್ರಸ್ಟ್ ಲಂಡನ್ ಇದರ ಟ್ರಸ್ಟಿ ಸಂತೋಷ್ ಕುಮಾರ್ ಜೈನ್ ಅವರು ಟ್ರಸ್ಟ್ ಬೆಳೆದು ಬಂದ ದಾರಿ , ಬಸದಿಯ ನಿರ್ಮಾಣ, ಉದ್ದೇಶ ಹಾಗೂ ಆಶಯಗಳ ಬಗ್ಗೆ ಮಾಹಿತಿ ನೀಡಿದರು. ಮಿಲನ್ ಉಪಾಧ್ಯಕ್ಷ ನಿಖಿಲ್ B.A ಅವರು ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವ ಆಚರಿಸುವ ಮಿಲನ್ ಸದಸ್ಯರಿಗೆ ಶುಭ ಹಾರೈಸಿ, ಮುಂದಿನ ಜೈನ್ ಮಿಲನ್ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಜೈನ್ ಮಿಲನ್ ಲಂಡನ್ ಅಧ್ಯಕ್ಷ Dr. ನರೇಂದ್ರ ಅಳದಂಗಡಿ ಪ್ರಾಸ್ತಾವಿಕ ಮಾತುಗಳೊಂದಿಗೆ ಜೈನ ಧರ್ಮದ ತತ್ವ ಸಿದ್ಧಾಂತಗಳ ಪಾಲನೆ ಮತ್ತು ಆಚರಣೆಯಿಂದ ಜೀವನದಲ್ಲಿ ಆರೋಗ್ಯಕರವಾಗಿ ಹಾಗೂ ನೆಮ್ಮದಿಯನ್ನು ಕಂಡುಕೊಳ್ಳಲು ಸಾಧ್ಯ ಎಂದು ತಿಳಿಸಿದರು. ಕೈವಲ್ಯ ಜೈನ್, ಕೇವಲ್ ಜೈನ್, ಧೀಮನ್ ಬಲ್ಲಾಳ್ ಜಿನ ಭಜನೆ ಹಾಡಿದರು. ಅಕ್ಷಯ , ಸಂಪದ , ದೀಕ್ಷಾ ಮತ್ತು ಸಂಧ್ಯಾ ಅವರ ತಂಡ ಜಿನ ಭಜನೆ ಹಾಡಿದರು. ಸಾರ್ಥಕ್ ಜೈನ್ ಬಾಹುಬಲಿ ಸ್ವಾಮಿಯ ಕಥೆ ಹೇಳಿದರು. ದೀಕ್ಷಾ ಜೈನ್ ಅವರು ಜೈನ ಧರ್ಮದಲ್ಲಿ ಹಿಂಸೆ ಅಥವಾ ಅಹಿಂಸೆ ಎಂದು ಪರಿಗಣಿಸುವ ಕರ್ಮಗಳು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಬಳಿಕ ಜಿನ ಭಜನೆ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ ಮಿಲನ್ ಸದಸ್ಯರಿಗೆ ಮತ್ತು ಸಾಧಕರಿಗೆ ಪ್ರಶಸ್ತಿ ಪತ್ರ ಗಳನ್ನು ನೀಡಿ ಗೌರವಿಸಲಾಯಿತು. ಆರವ್ ಜೈನ್ ಅವರು ಗಿಟಾರ್ ಮೂಲಕ ಪಂಚ ನಮಸ್ಕಾರ ಮಂತ್ರವನ್ನು ನುಡಿಸಿ ಮತ್ತು ಆಖ್ಯ ಹೆಗ್ಡೆ ಅವರು ಗಿಟಾರ್ ನುಡಿಸುತ್ತಾ ಪಾರ್ಶ್ವನಾಥ ಸ್ತುತಿಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು . ಕೋಶಾಧಿಕಾರಿ Dr. ವೈಶಾಕ್ ವಿದ್ಯಾಧರ್ ವಂದಿಸಿದರು. ಮಿಲನ್ ಕಾರ್ಯದರ್ಶಿ ಅಶ್ವಿನಿ ಚಂದ್ರ ಪ್ರಭು ಅವರು ಕಾರ್ಯಕ್ರಮ ನಿರೂಪಿಸಿದರು, ಸಭಾ ಕಾರ್ಯಕ್ರಮ ದ ನಂತರ ಸದಸ್ಯರಿಗೆ ಮೋಜಿನ ಸ್ಪರ್ಧೆಗಳನ್ನು ನಡೆಸಿಕೊಟ್ಟರು . ಕಾರ್ಯಕ್ರಮದ ಆತಿಥೇಯರಾಗಿ ಸಾಯಿನಾಥ್ ಹೆಗ್ಡೆ, ಉಜ್ವಲ್ ಶ್ರೇಯಸ್, Dr.ವೈಶಾಕ್ ವಿದ್ಯಾಧರ್, ದಯಾನಂದ ಪಾಟೀಲ್ ಕುಟುಂಬದವರು ಸಹಕರಿಸಿದರು. ವರದಿ ಧೀರೇಂದ್ರ ಬಲ್ಲಾಳ್

ಆರ್.ಅನನ್ಯಾ ಜೈನ್-ತೇರ್ಗಡೆ

Article Image

ಆರ್.ಅನನ್ಯಾ ಜೈನ್-ತೇರ್ಗಡೆ

ಮೂಡುಬಿದಿರೆ: ಇಟಲಿಯ ಮಿಲನ್‌ನ ಪ್ರತಿಷ್ಠಿತ ಪಾಲಿಟೆಕ್ನಿಕೊ ಡಿ ಮಿಲನೋ ವಿಶ್ವವಿದ್ಯಾಲಯದಲ್ಲಿ ಆರ್.ಅನನ್ಯಾ ಜೈನ್‌ರವರು ವಾಸ್ತುಶಿಲ್ಪ ವಿನ್ಯಾಸ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಅತ್ಯುತ್ತಮ ಶ್ರೇಣಿಯಲ್ಲಿ ಪೂರ್ಣಗೊಳಿಸಿರುತ್ತಾರೆ. ಇವರು ಮೂಡುಬಿದಿರೆಯ ಡಾ. ಬಿ.ಪಿ. ಸಂಪತ್ ಕುಮಾರ್ ಮತ್ತು ವೀರಶ್ರೀ ದಂಪತಿಗಳ ಪುತ್ರಿ.

First Previous

Showing 1 of 13 pages

Next Last