Article Image

ಜೈನ ಬಸದಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಚಕರುಗಳಿಗೆ ಮಾಸಿಕ ಗೌರವ ಧನ ನೀಡಲು ಅನುದಾನ ಬಿಡುಗಡೆ

Article Image

ಜೈನ ಬಸದಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಚಕರುಗಳಿಗೆ ಮಾಸಿಕ ಗೌರವ ಧನ ನೀಡಲು ಅನುದಾನ ಬಿಡುಗಡೆ

ಬೆಳ್ತಂಗಡಿ: ಜೈನ ಬಸದಿಗಳ ಮುಖ್ಯ ಅರ್ಚಕರು ಹಾಗೂ ಸಹಾಯಕ ಅರ್ಚಕರುಗಳಿಗೆ ಅವರ ದೈನಂದಿನ ಜೀವನ ನಿರ್ವಹಣೆಗೆ ಅನುಕೂಲ ಆಗುವಂತೆ ಮಾಸಿಕ ಗೌರವಧನ ನೀಡುವ ಯೋಜನೆಯನ್ನು ಅನುಷ್ಠಾನಗೊಳಿಸಲು ಅನುದಾನವನ್ನು ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಬಿಡುಗಡೆಗೊಳಿಸಿರುತ್ತಾರೆ. ಈ ಯೋಜನೆ ಪ್ರಥಮ ಬಾರಿಗೆ ಜಾರಿಯಾಗುತ್ತಿರುವುದು ನಮಗೆಲ್ಲ ಸಂತೋಷವನ್ನುಂಟು ಮಾಡಿದೆ. ಯೋಜನೆಯನ್ನು ಜಾರಿ ಮಾಡಿದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಉಪಮುಖ್ಯಮಂತ್ರಿಗಳಾದ ಡಿ. ಕೆ. ಶಿವಕುಮಾರ್ ರವರಿಗೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವರಾದ ಸನ್ಮಾನ್ಯ ಝಮೀರ್ ರವರಿಗೆ ಹಾಗೂ ಈ ಯೋಜನೆಯನ್ನು ಜಾರಿಗೊಳಿಸುವಲ್ಲಿ ಶ್ರಮವಹಿಸಿದ ನಮ್ಮ ಸಮಾಜದ ಎಚ್. ನಾಭಿರಾಜ ಜೈನ್ ಹಾಗೂ ಕರ್ನಾಟಕ ಸರಕಾರಕ್ಕೆ ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲದ ಭಗವಾನ್ ೧00೮ ಶ್ರೀ ಚಂದ್ರನಾಥ ಸ್ವಾಮಿ ಜಿನ ಮಂದಿರದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಸಂಚಾಲಕರಾದ ಡಾ. ಕೆ ಜಯಕೀರ್ತಿ ಜೈನ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಸತ್ತೂರು, ಧಾರವಾಡ, ಸೆ.24: ಅಲೈಡ್ ಸೈನ್ಸಸ್ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ

Article Image

ಸತ್ತೂರು, ಧಾರವಾಡ, ಸೆ.24: ಅಲೈಡ್ ಸೈನ್ಸಸ್ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ

ಎಸ್.ಡಿ.ಎಂ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ, ಅಲೈಡ್ ಹೆಲ್ತ್ ಸೈನ್ಸಸ್ ಘಟಕವು ಸೆಪ್ಟೆಂಬರ್ 24, 2025 ರಂದು 7ನೇ ಬ್ಯಾಚ್ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಖ್ಯಾತ ಸಮಾಜ ಸೇವಕ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯ ಅಧ್ಯಕ್ಷರು ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರಾದ ರಾಜಣ್ಣ ಕೊರವಿ ಅವರು ಮುಖ್ಯ ಅತಿಥಿಗಳಾಗಿದ್ದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ್ ಅವರು ಗೌರವ ಅತಿಥಿಗಳಾಗಿದ್ದು ದೀಪ ಬೆಳಗಿಸುವ ಮೂಲಕ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾದ ರಾಜಣ್ಣ ಕೊರವಿ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ: ಆರೋಗ್ಯ ವೃತ್ತಿಪರರು ಧೈರ್ಯ ಮತ್ತು ಸಹಾನುಭೂತಿಯಿಂದ ರೋಗಿಗಳ ಸೇವೆ ಮಾಡಬೇಕು. ಎಸ್.ಡಿ.ಎಂ ಸಂಸ್ಥೆಗಳು ಶ್ರೇಷ್ಠತೆಯೊಂದಿಗೆ ಮಾನವೀಯ ಸೇವೆಗಳಿಗೆ ಹೆಸರುವಾಸಿಯಾಗಿವೆ. ಹೊಸ ಹೊಸ ತಂತ್ರಜ್ಞಾನದ ಬಳಕೆಯೊಂದಿಗೆ ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆಯನ್ನು ನೀಡಬೇಕು. ಸಮಯಪಾಲನೆ, ಶಿಸ್ತು ಮತ್ತು ಒಗಟ್ಟಿಗೆ ಆರೋಗ್ಯ ವೃತ್ತಿಪರರು ಆದ್ಯತೆ ನೀಡಬೇಕು. ಮಾನವೀಯತೆಯಿಂದ ರೋಗಿಗಳ ಸೇವೆ ಮಾಡುವುದರೊಂಗೆ ಉತ್ತಮ ಸಂವಹನವನ್ನು ಹೊಂದಬೇಕು. ಪ್ರತಿದಿನ ನಾವು ದೊಡ್ಡ ಕನಸುಗಳನ್ನು ಕಾಣತ್ತಾ, ಅದನ್ನು ಸಾಧಿಸುವ ಗುರಿ ಹೊಂದಬೇಕು. ಎಸ್.ಡಿ.ಎಂ.ನ ಅತ್ಯುತ್ತಮ ಸೌಲಭ್ಯ ಮತ್ತು ನಿಮಗೆ ಲಭ್ಯವಿರುವ ವಿಫುಲ ಅವಕಾಶವನ್ನು ಬಳಸಿಕೊಳ್ಳಬೇಕು. ಎಸ್.ಡಿ.ಎಂ. ಸಂಸ್ಥೆಗಳು ಸದೃಢ ಕಟ್ಟಡಗಳನ್ನು ನಿರ್ಮಿಸುವುದಲ್ಲದೆ ಜ್ಞಾನದ ಬದ್ರಬುನಾದಿಯನ್ನು ಸಹ ನಿರ್ಮಿಸುತ್ತದೆ. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್, ಸಹ ಉಪ ಕುಲಪತಿಗಳಾದ ವಿ. ಜೀವಂಧರ್ ಕುಮಾರ್ ಮತ್ತು ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ, ವಿಶ್ವವಿದ್ಯಾಲಯದ ಇತರ ಅಧಿಕಾರಿಗಳು, ಅಂಗ ಸಂಸ್ಥೆಗಳ ಮುಖ್ಯಸ್ಥರು, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಹೊಸ ವಿದ್ಯಾರ್ಥಿಗಳಿಗೆ ಬಿಳಿ ಕೋಟುಗಳನ್ನು ವಿತರಿಸಲಾಯಿತು. ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಜಯ್ ಕೆ. ಕುಲಕರ್ಣಿ, ಕಾಲೇಜಿನ ವೈಶಿಷ್ಟ್ಯದ ಬಗ್ಗೆ ಪರಿಚಯ ಮಾಡಿಕೊಟ್ಟರು. ನೇಫ್ರಾಲಜಿ ವಿಭಾಗದ ಪ್ರಾಧ್ಯಾಪಕರಾದ ಡಾ. ನಾಗರಾಜ್ ನಾಯಕ್, ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಉಪ ಕುಲಸಚಿವರಾದ ಡಾ. ಅಜಂತಾ ಜಿಎಸ್, ವಿಶ್ವವಿದ್ಯಾಲಯದ ತತ್ವಗಳು ಮತ್ತು ನೀತಿಗಳ ಬಗ್ಗೆ ವಿವರಿಸಿದರು. ಅಂಗ ರಚನಾಶಾಸ್ತ್ರ ವಿಭಾಗದ ಅಧ್ಯಾಪಕಿ ಡಾ. ರೋಶನಿ ಸದಾಶಿವ, ಕಾರ್ಯಕ್ರಮವನ್ನು ನಿರೂಪಿಸಿದರು. ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲರು ಮತ್ತು ಅಲೈಡ್ ಹೆಲ್ತ್ ಸೈನ್ಸ್ನ ಸಂಯೋಜಕಿಯವರಾದ ಡಾ. ವಿದ್ಯಾ ಎಸ್ ಪಾಟೀಲ್ ಅತಿಥಿಗಳನ್ನು ಸ್ವಾಗತಿಸಿದರು. ಉಪ ಸಂಯೋಜಕರಾದ ಡಾ. ಅನಿಲ್ ಬರ್ಗಲೆ, ಆಡಳಿತಾಧಿಕಾರಿಗಳು ಮತ್ತು ವಿಭಾಗಗಳ ಮುಖ್ಯಸ್ಥರನ್ನು ಪರಿಚಯಿಸಿದರು. ಡಾ. ಉಪೇಂದ್ರ ಜೋಯಿಶ್ ವಂದನಾರ್ಪಣೆ ಸಲ್ಲಿಸಿದರು.

ಪ್ರತಿಷ್ಠಿತ ರತ್ನಾಕರ ಬ್ಯಾಂಕ ನಿಂದ ಮೂರು ತಲೆಮಾರಿನ ಗ್ರಾಹಕರಿಗೆ ಸನ್ಮಾನ

Article Image

ಪ್ರತಿಷ್ಠಿತ ರತ್ನಾಕರ ಬ್ಯಾಂಕ ನಿಂದ ಮೂರು ತಲೆಮಾರಿನ ಗ್ರಾಹಕರಿಗೆ ಸನ್ಮಾನ

ಮಹಾರಾಷ್ಟ್ರ ಮೂಲದ ಪ್ರತಿಷ್ಠಿತರತ್ನಾಕರ ಬ್ಯಾಂಕ್ (RBL Bank) ಇದು ಹುಬ್ಬಳ್ಳಿಯಲ್ಲಿ ತನ್ನ ಶಾಖೆಯನ್ನು ಸುಮಾರು 42 ವರ್ಷಗಳ ಹಿಂದೆ ತೆರೆಯಿತು. ಆಗಿನಿಂದ ಇಂದಿನವರೆಗೂ ಈ ಬ್ಯಾಂಕು ಬ್ಯಾಂಕಿಂಗ್ ಸೇವೆಯಲ್ಲಿ ಸಾರ್ವಜನಿಕ ವಲಯದಲ್ಲಿಯೇ ತನ್ನದೇ ಆದ ಛಾಪು ಮೂಡಿಸಿದೆ. ಪ್ರಸ್ತುತ ಈ ರತ್ನಾಕರ ಬ್ಯಾಂಕ್ ಮೂರು ತಲೆಮಾರಿನಿಂದ ಈಗಲೂ ಅತ್ಯಂತ ಕ್ರೀಯಾಶೀಲವಾಗಿ ವ್ಯವಹರಿಸುತ್ತಿರುವ ಈಗ ಮೂರನೇ ಜನರೇಷನ್ ಗ್ರಾಹಕರನ್ನು ಗುರುತಿಸಿ ಗೌರವಿಸಲು ಮುಂದಾಗಿದೆ. ಇತ್ತೀಚಿಗೆ ಪ್ರತಿಷ್ಠಿತ ಖಾಸಗಿ ಹೋಟೆಲ್ ಒಂದರಲ್ಲಿ ಮೂರು ತಲೆಮಾರಿನ ಗ್ರಾಹಕರಲ್ಲಿ ಪ್ರಮುಖರಾದ ಹುಬ್ಬಳ್ಳಿ ಮಹಾವೀರ ಗಲ್ಲಿಯ ಪ್ರತಿಷ್ಠಿತ ಮೆ. ಎಸ್. ಬಿ. ಬೀಳಗಿ & ಸನ್ಸ್ ಹೆಸರಿನ ವ್ಯಾಪಾರಿ ಸಂಸ್ಥೆಯ ಮುಖ್ಯಸ್ಥ ಬ್ರಹ್ಮಕುಮಾರ ಎಸ್ ಬೀಳಗಿ, ಇವರ ಪುತ್ರ ಅಜಯ ಬಿ. ಬೀಳಗಿ ಹಾಗೂ ಇವರ ಪುತ್ರಿ ಪ್ರಣೀತ ಎ. ಬೀಳಗಿ ಇವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಜಯಶೀಲಾ ಬೀಳಗಿ ಮತ್ತು ಚಂದನಾ ಎ. ಬೀಳಗಿ ಇದ್ದರು. ಹಾಗೆಯೇ ಹುಬ್ಬಳ್ಳಿಯ ಇನ್ನೊರ್ವ ಗಿರಿಯ ಗ್ರಾಹಕ ಮೆ| ರಾಧಾಕೃಷ್ಣ ಇಂಡಸ್ಟ್ರೀಸ್ ಮಾಲೀಕರಾದ ಉದಯ ದಡೋತಿ ಮತ್ತು ಪ್ರತಿಭಾ ದಡೋತಿ ಮತ್ತು ಇವರ ಪುತ್ರ ಗುಣಧರ ದಡೋತಿ ಹಾಗೂ ಇವರ ಪತ್ನಿ ಶಲಾಖಾ ಇವರನ್ನು ಸನ್ಮಾನಿಸಿ ಗೌರವಿಸಿದರು ಜೊತೆಗೆ ಅತ್ಯಂತ ಹಿರಿಯ ಗ್ರಾಹಕರು ಬ್ಯಾಂಕನ ಹಿತೈಸಿಗಳೂ ಆದ 92 ವಸಂತಗಳನ್ನು ಕಂಡ ಸುರೇಂದ್ರ ನಾವಳ್ಳಿ ಇವರನ್ನೂ ಬ್ಯಾಂಕ್ ವತಿಯಿಂದ ವಿಶೇಷವಾಗಿ ಸನ್ಮಾನಿಸಿ ಬ್ಯಾಂಕು ತನ್ನ ಪ್ರತಿಷ್ಠೆಯನ್ನು ಹೆಚ್ಚಿಸಿಕೊಂಡಿದೆ. ಬ್ಯಾಂಕಿನ ಹಿರಿಯ ಅಧಿಕಾರಿ ನಂಜುಂಡ ಸ್ವಾಮಿ, ಬ್ರಾಂಚ್ ಮ್ಯಾನೇಜರ್ ಚಂದ್ರಗೌಡ ಪಾಟೀಲ್, ಟಾಸ್ಕ್ ಮ್ಯಾನೇಜರ್ - ಸಂಗಪ್ಪ ಉಕ್ಕಲಿ, ಸಿಬ್ಬಂದಿ ರತ್ನಾ ಉಪಾಧ್ಯೆ ಮತ್ತು ಕಾವೇರಿ ರಾಥೋಡ್ ಇವರು ಈ ಸನ್ಮಾನ ಸಮಾರಂಭವನ್ನು ನೆರವೇರಿಸಿದರು. ವರದಿ : ಎಸ್. ಆರ್. ಮಲ್ಲಸಮುದ್ರ

ಮಂಗಳೂರು: ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ ನವರಾತ್ರಿ ಮಹೋತ್ಸವ-2025 ಸಾಂಸ್ಕ್ರತಿಕ ವೈಭವ

Article Image

ಮಂಗಳೂರು: ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ ನವರಾತ್ರಿ ಮಹೋತ್ಸವ-2025 ಸಾಂಸ್ಕ್ರತಿಕ ವೈಭವ

ಮಠದಕಣಿ ಶ್ರೀ ವೀರಭದ್ರ - ಮಹಾಮಾಯಿ ದೇವಸ್ಥಾನದ ನವರಾತ್ರಿ ಮಹೋತ್ಸವದಲ್ಲಿ ಮಹಾಮಾಯಿ ಫ್ರೆಂಡ್ಸ್ ಎಸೋಸಿಯೇಶನ್ 48ನೇ ವಾರ್ಷಿಕೋತ್ಸವದ ಪ್ರಯುಕ್ತ ಸುದೇಶ್ ಜೈನ್ ಮಕ್ಕಿಮನೆ ಸಂಯೋಜನೆಯಲ್ಲಿ ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ ಬುಧವಾರ(24-9-2025) ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು. ಎಲ್ಲರ ಮೆಚ್ಚುಗೆ ಪಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಖ್ಯ ಅಥಿತಿಗಳಾಗಿ ಮಕ್ಕಳ ಕಲ್ಯಾಣ ಸಮಿತಿ ದ.ಕ ಜಿಲ್ಲಾ ಅಧ್ಯಕ್ಷೆ ಹಾಗೂ ವಕೀಲರಾದ ಡಾ. ಅಕ್ಷತಾ ಆದರ್ಶ್ ಮೂಡುಬಿದಿರೆ ಮತ್ತು ಸಂಪತ್ ಜೈನ್ ಮುಂಡೂರು, ಬಾಲಕೃಷ್ಣ ಕಲ್ಬಾವಿ, ವಿಶ್ವನಾಥ್ ಶೆಟ್ಟಿಗಾರ, ಸುದೇಶ್ ಜೈನ್ ಮಕ್ಕಿಮನೆ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನೃತ್ಯ ನಿರ್ದೇಶಕರುಗಳಾದ ರೀಮಾ ಜಗನ್ನಾಥ್ ಮಾರ್ನಮಿಕಟ್ಟೆ , ವಿದುಷಿ ಪ್ರಾರ್ಥನಾ ರೋಹಿತ್ ಹೊಸಬೆಟ್ಟು , ವಂಸತ್ ಕುಮಾರ್, ಆಶಿಶ್ ಅಂಚನ್, ಹರೀಶ್ ಆಚಾರ್ಯ ಅವರನ್ನು ಸನ್ಮಾನಿಸಿಗೌರವಿಸಲಾಯಿತು. ಪ್ರಿಯಾ ಸುದೇಶ್ ಕುಮಾರ್ ಮಂಗಳೂರು ನಿರೂಪಿಸಿದರು. ಗೌರವ್ ಶೆಟ್ಟಿಗಾರ, ಉಷಾ ಅಶೋಕ್, ಧಾತ್ರಿ, ಕೃತಿ ಸನಿಲ್, ಪ್ರೇರಣ ಜೆ,ಅಪೇಕ್ಷಾ ಎ. ಮೊದಲಾದವರು ಸಹಕರಿಸಿದರು.

ಗರ್ಡಾಡಿ ಗುಂಡದ ಬಸದಿಯ : ಶಿಲಾನ್ಯಾಸ ಕಾರ್ಯಕ್ರಮ

Article Image

ಗರ್ಡಾಡಿ ಗುಂಡದ ಬಸದಿಯ : ಶಿಲಾನ್ಯಾಸ ಕಾರ್ಯಕ್ರಮ

ಗರ್ಡಾಡಿ ಗುಂಡದ ಬಸದಿಯ ಭಗವಾನ್ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ಜೀರ್ಣೋದ್ಧಾರದ ನಿಮಿತ್ತ ನಿರ್ಮಾಣಗೊಂಡ ನೂತನ ಶಿಲಾಮಯ ಬಸದಿಯ ಮುಖ್ಯ ದ್ವಾರದ ಕಲ್ಲಿನ ದಾರಂದವನ್ನು ಕಾರ್ಕಳ ಶ್ರೀ ಜೈನಮಠದ ಪರಮ ಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು ಸೆ.24 ರಂದು ಬೆಳಗ್ಗೆ 8.45ಗಂಟೆಗೆ ನೆರವೇರಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.

ಎಕ್ಸಲೆಂಟ್ ಸಂಸ್ಥೆಯಲ್ಲಿ ನವರಾತ್ರಿ ನವಶಕ್ತಿ ಸನ್ಮಾನ ಕಾರ್ಯಕ್ರಮ

Article Image

ಎಕ್ಸಲೆಂಟ್ ಸಂಸ್ಥೆಯಲ್ಲಿ ನವರಾತ್ರಿ ನವಶಕ್ತಿ ಸನ್ಮಾನ ಕಾರ್ಯಕ್ರಮ

ಮೂಡಬಿದಿರೆ: ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ನವರಾತ್ರಿಯ ಪ್ರಯುಕ್ತ “ನವರಾತ್ರಿ - ನವಶಕ್ತಿ” ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು. “ಮಹಿಳಾ ಸ್ವಾವಲಂಬನೆ ಸಮಾಜದ ಪ್ರಗತಿಯ ಮೂಲವಾಗಿದೆ, ಹೆಣ್ಣುಮಕ್ಕಳಿಗೆ ಕನಸು ಕಾಣಲು ಹಕ್ಕು ಇದೆ ಸಾಧಿಸಲು ಶಕ್ತಿ ಎಂದರು ಜೊತೆಗೆ ಎಕ್ಸಲೆಂಟ್ ಸಂಸ್ಥೆಯ ಸ್ವಚ್ಛ ಪರಿಸರವನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ ಇಂದು.ಎಂ. ಮುಖ್ಯ ಅಧಿಕಾರಿಗಳು ಮೂಡುಬಿದರೆ ಪುರಸಭೆ ಇವರು ಪ್ರಶಂಸಿಸಿದರು. ಈ ಕಾರ್ಯಕ್ರಮವು ನವರಾತ್ರಿಯ ಆಧ್ಯಾತ್ಮಿಕತೆಯ ಜೊತೆಗೆ ಹೆಣ್ಣಿನ ಮಹತ್ವವನ್ನು ಬಿಂಬಿಸುತ್ತದೆ.“ಹೆಣ್ಣು ತನ್ನ ಜೀವನದಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸುತ್ತಾಳೆ. ನವರಾತ್ರಿಯು ಹೆಣ್ಣಿನ ಶಕ್ತಿಯ ಪ್ರತೀಕ” ಎಂದು ಸಂಸ್ಥೆಯ ಕಾರ್ಯದರ್ಶಿಯವರಾದ ರಶ್ಮಿತಾ ಜೈನ್ ರವರು ಮಾತನಾಡಿ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು. ನಕಾರಾತ್ಮಕತೆಯನ್ನು ನವಶಕ್ತಿಗಳು ಸಕಾರಾತ್ಮಕತೆಯನ್ನಾಗಿ ಪರಿವರ್ತಿಸಲಿ ಎಂದು ನವಶಕ್ತಿಯ ಮಹತ್ವವನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಯುವರಾಜ್ ಜೈನ್ ನವರು ತಿಳಿಸಿದರು. ಶಾರದಾದೇವಿಗೆ ಪುಷ್ಪ ಅರ್ಪಿಸಿ, ದೀಪವನ್ನು ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಈ ಸುಸಂದರ್ಭದಲ್ಲಿ ಅತಿಥಿಯಾಗಿ ಆಗಮಿಸಿದ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ರವರ ಮಾತೃಶ್ರೀ ಪದ್ಮಾವತಿ ಅಮ್ಮನವರನ್ನು ವಿಶೇಷವಾಗಿ ಗೌರವ ಪೂರ್ವಕವಾಗಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಹಾಗೂ ನವಶಕ್ತಿ ಸ್ವರೂಪದ ನವನಾರಿಯರಾದ ಅಮರಾಜಿ, ಸುಮಿತ್ರಾ, ಚಂದನಾ, ದೀಪಾ ಉಮೇಶ್ ರಾವ್, ಅನಿತಾ ಸಿಕ್ವೇರಾ, ಸೌಮ್ಯ ಕುಲದೀಪ್, ದಿವ್ಯಾ ಪಡಿವಾಳ್, ರೇಷ್ಮಾ ವರ್ಮಾ ಹಾಗೂ ಪ್ರಿಯಾ ಕ್ವಿನಿ ರೋಡ್ರಿಗಸ್ ಇವರನ್ನು ಸನ್ಮಾನಿಸಲಾಯಿತು. ಸನ್ಮಾನಿತಗೊಂಡ ದೀಪಾ ಉಮೇಶ್ ರಾವ್ ಹಾಗೂ ಪ್ರಿಯಾ ಕ್ವಿನಿ ರೋಡ್ರಿಗಸ್ ಇಂದಿನ ಕಾರ್ಯಕ್ರಮದ ಕುರಿತು ಅನಿಸಿಕೆಗಳನ್ನು ಹಂಚಿಕೊಂಡರು. ಎಕ್ಸಲೆಂಟ್ ಸಿ ಬಿ ಎಸ್ ಇ ಶಾಲೆಯ ಪ್ರಾಂಶುಪಾಲರಾದ ಪ್ರಸಾದ್, ಅಪೇಕ್ಷರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನೆರವೇರಿಸಿಕೊಟ್ಟರು. ಈ ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿಯಾದ ಅರ್ಚನಾ ಹಾಗೂ ಸ್ವಾತಿಯಾವರು ನೆರವೇರಿಸಿ ಎಕ್ಸಲೆಂಟ್ ಸಿಬಿಎಸ್ಇ ಶಾಲೆಯ ಪ್ರಾಂಶುಪಾಲರಾದ ಪ್ರಸಾದ್ ರವರು ವಂದಿಸಿದರು.

ವಿದ್ಯಾರ್ಥಿಗಳ ಬದುಕಿಗೆ ವಿದ್ಯಾಪ್ರೋತ್ಸಾಹ ಧನ ಶೈಕ್ಷಣಿಕ ಅಡಿಗಲ್ಲು: ಅಜಿತ್ ಕುಮಾರ್ ಕೊಕ್ರಾಡಿ

Article Image

ವಿದ್ಯಾರ್ಥಿಗಳ ಬದುಕಿಗೆ ವಿದ್ಯಾಪ್ರೋತ್ಸಾಹ ಧನ ಶೈಕ್ಷಣಿಕ ಅಡಿಗಲ್ಲು: ಅಜಿತ್ ಕುಮಾರ್ ಕೊಕ್ರಾಡಿ

ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಪರಿಪೂರ್ಣತೆಯತ ಸಾಗಬೇಕಾದರೆ ಶಿಕ್ಷಣವು ಬಹಳ ಮುಖ್ಯವಾಗಿ ಬೇಕು. ಶಿಕ್ಷಣ ಎನ್ನುವುದು ಅವರ ಬದುಕಿಗೆ ಭದ್ರತೆಯ ಅಡಿಗಲ್ಲು ಆಗಬೇಕಾದರೆ ಇಂತಹ ವಿದ್ಯಾ ಪ್ರೋತ್ಸಾಹ ಧನದ ಅವಶ್ಯಕತೆ ಖಂಡಿತ ಇದೆ. ಅಂತಹ ಕಾರ್ಯವನ್ನು ಮಾಡುತ್ತಿರುವ ಕೆಲ್ಲಗುತ್ತು ಕಿನ್ಯಮ ಯಾನೆ ಗುಣಾವತಿ ಅಮ್ಮ ಮೆಮೋರಿಯಲ್ ಟ್ರಸ್ಟ್ ಹಾಗೂ ಬೆಳ್ತಂಗಡಿ ತಾಲೂಕಿನ ಸಮಸ್ತ ಶ್ರಾವಕ ಹಾಗೂ ಶ್ರಾವಿಕೆಯರ ಈ ಕಾರ್ಯವು ಮಹತ್ತರವಾಗಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳುವುದರೊಂದಿಗೆ ಮೌಲ್ಯಾಧಾರಿತ ಬದುಕನ್ನು ಕಟ್ಟಿಕೊಳ್ಳಿ. ಅಂತಹ ಮೌಲ್ಯವೇ ನಮ್ಮ ನಿಮ್ಮೆಲ್ಲರ ಬದುಕಿನ ಭೂಷಣವಾಗಲಿ ಎಂದು ಗೇರುಕಟ್ಟೆ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಅಜಿತ್ ಕುಮಾರ್ ಕೊಕ್ರಾಡಿರವರು ಮಾತಾಡಿದರು. ಅವರು ಬೆಳ್ತಂಗಡಿಯ ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರ ಬಸದಿಯ ಸಮುಚ್ಛಯದಲ್ಲಿ ಇರುವ ಕೆಲ್ಲಗುತ್ತು ಕಿನ್ಯಮ್ಮ ಯಾನೆ ಗುಣಾವತಿ ಅಮ್ಮನವರ 36ನೇ ಪುಣ್ಯತಿಥಿಯ ಸಂದರ್ಭದಲ್ಲಿ ಶ್ರೀ ಅತಿಶಯ ಕ್ಷೇತ್ರ ಹುಂಬುಜ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿ ಶ್ರೀ ಶ್ರೀಮದ್ದದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜೈನ ವಿದ್ಯಾರ್ಥಿಗಳಿಗೆ ವಿದ್ಯಾ ಪ್ರೋತ್ಸಾಹ ಧನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರ ಬೆಳ್ತಂಗಡಿಯ ಅನುವಂಶಿಕ ಆಡಳಿತ ಮೊಕ್ತೇಸರರಾದ ಕೆ. ಜಯವರ್ಮರಾಜ ಬಳ್ಳಾಲ್ ರವರು ವಹಿಸಿಕೊಂಡು ಸಭೆಯನ್ನು ಮುನ್ನಡೆಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಡಾ. ಪ್ರಿಯ ಬಳ್ಳಾಲ್ ರವರು ಟ್ರಸ್ಟ್ ವತಿಯಿಂದ ನೀಡುತ್ತಿರುವ ವೈದ್ಯಕೀಯ ನೆರವಿನ ಕುರಿತು ವಿವರವಾಗಿ ಮಾಹಿತಿಗಳನ್ನು ಹಂಚಿಕೊಂಡರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕೆ.ರಾಜವರ್ಮ ರಾಜ ಬಳ್ಳಾಲ್ ಹಾಗೂ ಮಾಲಾಡಿ ಗುತ್ತು ವಜ್ರ ಕುಮಾರ್ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಟ್ರಸ್ಟ ಹಾಗೂ ದಾನಿಗಳ ಸಹಕಾರದಿಂದ ಈ ವರ್ಷ 753 ವಿದ್ಯಾರ್ಥಿಗಳಿಗೆ 22,10,550 ರೂಪಾಯಿಯನ್ನು ವಿದ್ಯಾಪ್ರೋತ್ಸಾಹ ಧನವಾಗಿ ವಿತರಿಸಲಾಯಿತು. ಇದೇ ರೀತಿ ಈ ವಿದ್ಯಾರ್ಥಿ ಪ್ರೋತ್ಸಾಹ ಧನವನ್ನು ಕಳೆದ 25 ವರ್ಷಗಳಿಂದ ನೀಡುತ್ತಾ ಬಂದಿರುವುದು ನಮ್ಮ ಸಮಾಜಕ್ಕೆ ಇದೊಂದು ಹೆಮ್ಮೆಯ ಸಂಗತಿಯಾಗಿದೆ. ಇಷ್ಟು ಮಾತ್ರವಲ್ಲದೆ 12 ಜನರಿಗೆ ಕ್ಯಾನ್ಸರ್ ಹಾಗೂ ಇನ್ನಿತರ ವೈದ್ಯಕೀಯ ಚಿಕಿತ್ಸೆಗಾಗಿ ನೀಡಿರುವ ಸಹಕಾರವನ್ನು ನೆನಪಿಸಲಾಯಿತು. ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡು, ವಕೀಲರಾದ ಶಶಿಕಿರಣ್ ಜೈನ ಸ್ವಾಗತಿಸಿ, ಧವಳ ಸಹಕರಿಸಿ, ನಿರಂಜನ್ ಜೈನ್ ಧನ್ಯವಾದ ಸಲ್ಲಿಸಿ, ಧರಣೇಂದ್ರ ಕೆ ಜೈನ್ ಕಾರ್ಯಕ್ರಮ ಸಂಯೋಜಿಸಿ ನಿರ್ವಹಿಸುವುದರೊಂದಿಗೆ ಸಮಾಪನಗೊಂಡಿತು.

ಹೊಂಬುಜ ಶ್ರೀ ಜೈನ ಮಠದಲ್ಲಿ ಶ್ರೀಶರನ್ನವರಾತ್ರಿ ವಿಶೇಷ ಪೂಜಾ ಮಹೋತ್ಸವ

Article Image

ಹೊಂಬುಜ ಶ್ರೀ ಜೈನ ಮಠದಲ್ಲಿ ಶ್ರೀಶರನ್ನವರಾತ್ರಿ ವಿಶೇಷ ಪೂಜಾ ಮಹೋತ್ಸವ

ಶಿವಮೊಗ್ಗ: ಹೊಂಬುಜ ಶ್ರೀ ಜೈನ ಮಠದಲ್ಲಿ ಶ್ರೀಶರನ್ನವರಾತ್ರಿ ವಿಶೇಷ ಪೂಜಾ ಮಹೋತ್ಸವವು 22-09-2025 ರಿಂದ 02-10-2025 ಆಶ್ವಯುಜ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ವಿಜಯದಶಮಿಯವರೆಗೆ ಶಕ್ತಿ ದೇವಿಗೆ ವಿವಿಧ ಅಲಂಕಾರಗಳಿಂದ ವಿಶೇಷ ಪೂಜೆ ನೆರವೇರಲಿದೆ. 22-09-2025 ಸೋಮವಾರ ಘಟಸ್ಥಾಪನೆ: ಹೂವಿನ ಅಲಂಕಾರ 23-09-2025, ಮಂಗಳವಾರ ಭೈರವಿ ಪದ್ಮಾವತಿ ದರ್ಶನ 24-09-2025, ಬುಧವಾರ ಮುತ್ತಿನ ಅಲಂಕಾರ 25-09-2025, ಗುರುವಾರ ಹಣ್ಣಿನ ಅಲಂಕಾರ 26-09-2025, ಶುಕ್ರವಾರ (ಲಕ್ಷಹೂವಿನ ಪೂಜೆ) ಸುವರ್ಣ ಅಲಂಕಾರ 27-09-2025, ಶನಿವಾರ ಸೀರೆ ಅಲಂಕಾರ 28-09-2025, ಭಾನುವಾರ ಧಾನ್ಯಗಳ ಅಲಂಕಾರ 29-09-2025 ಸೋಮವಾರ (ಸರಸ್ವತಿ ಪೂಜೆ) ನವಿಲಿನ ಅಲಂಕಾರ 30-09-2025. ಮಂಗಳವಾರ (ಜೀವದಯಾಷ್ಟಮಿ) ಬಳೆ ಅಲಂಕಾರ 01-10-2025, ಬುಧವಾರ (ಆಯುಧ ಪೂಜೆ) ಸುವರ್ಣ ಅಲಂಕಾರ 02-10-2025, ಗುರುವಾರ (ವಿಜಯದಶಮಿ) ಸುವರ್ಣ ಅಲಂಕಾರ ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರ ಪಲ್ಲಕ್ಕಿ ಉತ್ಸವದೊಂದಿಗೆ ಬನ್ನಿ ಮಂಟಪದವರೆಗೆ ಸ್ಯಾಕ್ರೋಫೋನ್, ಚಂಡೆ, ಡೊಳ್ಳುಕುಣಿತ, ಸಕಲ ಮಂಗಲವಾದ್ಯಗಳೊಂದಿಗೆ ಸಾಲಾಂಕೃತ ಶೋಭಾಯಾತ್ರೆ ನಡೆಯಲಿದೆ.

ಧರ್ಮಸ್ಥಳದಲ್ಲಿ 27 ನೇ ವರ್ಷದ ಭಜನಾ ಕಮ್ಮಟ: ಉದ್ಘಾಟನಾ ಸಮಾರಂಭ

Article Image

ಧರ್ಮಸ್ಥಳದಲ್ಲಿ 27 ನೇ ವರ್ಷದ ಭಜನಾ ಕಮ್ಮಟ: ಉದ್ಘಾಟನಾ ಸಮಾರಂಭ

ಉಜಿರೆ: ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ಪರಿಶುದ್ಧ ದೇಹ ಮತ್ತು ಮನಸಿನಿಂದ ರಾಗ, ತಾಳ, ಲಯಬದ್ಧವಾಗಿ ಭಜನೆ ಮಾಡುವುದರಿಂದ ಉತ್ತಮ ಸಂಸ್ಕಾರಯುತ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಮೂಡಬಿದ್ರೆಯ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು. ಅವರು ಭಾನುವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ 27 ನೇ ವರ್ಷದ ಭಜನಾ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು. ಭಜನೆಯಿಂದ ಸುಲಭದಲ್ಲಿ ದೇವರ ಅನುಗ್ರಹಕ್ಕೆ ಪಾತ್ರರಾಗಬಹುದು, ಭಜನೆಯಿಂದ ಜನಜಾಗೃತಿ ಉಂಟಾಗಿ ಎಲ್ಲರೂ ಸಮಾನರಾಗಿ, ಗುರು-ಹಿರಿಯರಿಂದ ಮಾರ್ಗದರ್ಶನ, ಪ್ರೇರಣೆ ಪಡೆದು ದೃಢಭಕ್ತಿ ಮತ್ತು ಪರಿಶುದ್ಧ ಮನಸಿನಿಂದ ಭಜನೆ ಮಾಡಿದಾಗ ಮಾನಸಿಕ ಶಾಂತಿ, ನೆಮ್ಮದಿ ಸಿಗುತ್ತದೆ. ದಾಸರ ಪದಗಳು, ಭಾಗ್ಯದ ಲಕ್ಷ್ಮೀ ಬಾರಮ್ಮ ಮೊದಲಾದ ಭಜನೆಗಳು ನಮಗೆ ಸಾರ್ಥಕ ಜೀವನದ ಪಾಠವನ್ನು ಕಲಿಸುತ್ತವೆ ಎಂದು ಡಾ. ಮೋಹನ ಆಳ್ವ ಹೇಳಿದರು. ಮಾಣಿಲದ ಮೋಹನದಾಸ ಸ್ವಾಮೀಜಿ ಶುಭಶಂಸನೆ ಮಾಡಿ, ಭಜನಾ ತರಬೇತಿ ಪಡೆದವರು ತಮ್ಮ ಮಕ್ಕಳಿಗೂ ಭಜನೆಯ ಮೂಲಕ ಉತ್ತಮ ಸಂಸ್ಕಾರ ನೀಡಬೇಕು. ಭಜನೆ ಮಾಡುವಾಗ ನಿತ್ಯವೂ ಶಿವಪಂಚಾಕ್ಷರಿ ಪಠಣ ಮಾಡಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಭಜನಾ ತರಬೇತಿ ಪಡೆದವರು ಶಿಸ್ತು, ಸಮಯಪಾಲನೆ, ಸ್ವಚ್ಛತೆಯೊಂದಿಗೆ ನಾಯಕತ್ವಗುಣವನ್ನೂ ಬೆಳೆಸಿಕೊಂಡು ಪ್ರಗತಿಯ ರೂವಾರಿಗಳಾಗಬೇಕು. ಸಂಸ್ಕೃತಿ ಪ್ರಸಾರದ ರಾಯಭಾರಿಗಳಾಗಿ ಎಲ್ಲರನ್ನೂ ನಮ್ಮವರೇ ಎಂದು ಭಾವಿಸಿ ವಿಶ್ವಮಾನವರಾಗಿ ಸಮಾಜಸೇವೆ ಮಾಡಬೇಕು. ನೃತ್ಯ ಭಜನೆಗೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಹೇಮಾವತಿ ವೀ. ಹೆಗ್ಗಡೆ ಮತ್ತು ಡಿ. ಹಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಭಜನಾ ಕಮ್ಮಟದ ಕಾಯದರ್ಶಿ ಎ.ವಿ. ಶೆಟ್ಟಿ ವರದಿ ಸಾದರ ಪಡಿಸಿದರು. ಭಜನಾಕಮ್ಮಟದ ಸಂಚಾಲಕ ಸುಬ್ರಹ್ಮಣ್ಯಪ್ರಸಾದ್ ಪ್ರಾಸ್ತಾವಿಕವಾಗಿ ಮಾತುಗಳೊಂದಿಗೆ ಸ್ವಾಗತಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಪದ್ಮರಾಜ್ ಧನ್ಯವಾದವಿತ್ತರು. ಧರ್ಮಸ್ಥಳದ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಪದ್ಮಶ್ರೀ ಕಾರ್ಯಕ್ರಮ ನಿರ್ವಹಿಸಿದರು. 111 ಪುರುಷರು ಹಾಗೂ 71 ಮಹಿಳೆಯರು ಸೇರಿದಂತೆ ಒಟ್ಟು 182 ಶಿಬಿರಾರ್ಥಿಗಳು ಕಮ್ಮಟದಲ್ಲಿ ಭಾಗವಹಿಸುತ್ತಿದ್ದಾರೆ.

ರಾಣಿ ಅಬ್ಬಕ್ಕನ 500ನೇ ಜನ್ಮ ಜಯಂತಿ ಸಂಸ್ಮರಣಾ ಸಮಾರಂಭ

Article Image

ರಾಣಿ ಅಬ್ಬಕ್ಕನ 500ನೇ ಜನ್ಮ ಜಯಂತಿ ಸಂಸ್ಮರಣಾ ಸಮಾರಂಭ

ಮಂಗಳೂರಿನ ಧವಳ ಕೋ-ಆಪರೇಟಿವ್‌ ಸೊಸೈಟ (ರಿ.), ಇದರ ಆಶ್ರಯದಲ್ಲಿ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ 300 ವರ್ಷಗಳ ಮೊದಲೇ ಸ್ವಾತಂತ್ರ್ಯದ ವೀರ ಕಹಳೆಯನ್ನು ಮೊಳಗಿಸಿ, ವಸಾಹತುಶಾಹಿಗಳ ಆಕ್ರಮಣವನ್ನು ನಾಲ್ಕು ದಶಕಗಳಕಾಲ ಹಿಮ್ಮೆಟ್ಟಿದ ಮೊಟ್ಟಮೊದಲ ಭಾರತೀಯ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ! ಅಚಲ ಧೈರ್ಯದ ಕಾರಣಕ್ಕೆ ಅವಳನ್ನು 'ಅಭಯ ರಾಣಿ' ರಾಣಿ ಅಬ್ಬಕ್ಕನ 500ನೇ ಜನ್ಮ ಜಯಂತಿ ಸಂಸ್ಮರಣಾ ಸಮಾರಂಭವು ಮಂಗಳೂರಿನ ಜೈನ್ ಬೋರ್ಡಿಂಗ್ ಸಿದ್ಧಾರ್ಥ ಸಭಾಭವನದಲ್ಲಿ ಸೆ. 21ರಂದು ಭಾನುವಾರ, ಸಂಜೆ 4.30ಕ್ಕೆ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಅತ್ಯಾಧುನಿಕ ನೇತ್ರ ಚಿಕಿತ್ಸೆ ಧಾರವಾಡದಲ್ಲಿ

Article Image

ಅತ್ಯಾಧುನಿಕ ನೇತ್ರ ಚಿಕಿತ್ಸೆ ಧಾರವಾಡದಲ್ಲಿ

ಎಸ್‌ಡಿಎಮ್ ವಿಶ್ವವಿದ್ಯಾಲಯ ಧಾರವಾಡದ, ಎಸ್‌ಡಿಎಮ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ನೇತ್ರ ಚಿಕಿತ್ಸಾ ವಿಭಾಗದಲ್ಲಿ 01.09.2025 ರಂದು ಅತ್ಯಾಧುನಿಕ ಕೋರ್ನಿಯಲ್ ಟೊಪೋಗ್ರಾಫಿ ಯಂತ್ರ ಹಾಗೂ ಸ್ಪೆಕ್ಯುಲರ್ ಮೈಕ್ರೋಸ್ಕೋಪ್ ಉಪಕರಣಗಳನ್ನು ಮಾನ್ಯ ಉಪ ಕುಲಪತಿಗಳಾದ ಹಾಗೂ ಪ್ರಸಿದ್ಧ ಪ್ಲಾಸ್ಟಿಕ್ ಸರ್ಜನ್ ಡಾ. ನಿರಂಜನ್ ಕುಮಾರ್ ಅವರು ಉದ್ಘಾಟಿಸಿದರು. ನೇತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಡಾ. ಅನುಪಮಾ ಎಸ್. ದೇಸಾಯಿ ಅವರು ಉಪಕರಣಗಳ ಉಪಯೋಗಗಳನ್ನು ವಿವರಿಸುತ್ತಾ ಕೋರ್ನಿಯಾ ಮೇಲ್ಮೆöÊ ನಿಖರ ನಕ್ಷೆ ತಯಾರಿಸಲು ನೆರವಾಗುತ್ತವೆ. ಕ್ಯಾರಟೊಕೋನಸ್, ಅಸ್ಟಿಗ್ಮಾಟಿಸಂ, ರೆಫ್ರಾಕ್ಟಿವ್ ಶಸ್ತ್ರಚಿಕಿತ್ಸೆ, ಡ್ರೈ ಐ ರೋಗಗಳ ತಪಾಸಣೆಗೆ ಸಹಾಯಕವಾಗುತ್ತವೆ” ಎಂದರು ತಿಳಿಸಿದರು. ಉಪಕುಲಪತಿಗಳಾದ ಡಾ. ನಿರಂಜನ್ ಕುಮಾರ ಮಾತನಾಡುತ್ತ ಈ ಸೌಲಭ್ಯದಿಂದ ಧಾರವಾಡ ಹಾಗೂ ಸುತ್ತಮುತ್ತಲಿನ ಜನತೆಗೆ ಜಾಗತಿಕ ಮಟ್ಟದ ನೇತ್ರ ಚಿಕಿತ್ಸಾ ಸೇವೆ ಲಭ್ಯವಾಗಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪದ್ಮಲತಾ ನಿರಂಜನ್, ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ, ಹಣಕಾಸು ಅಧಿಕಾರಿಗಳಾದ ವಿ.ಜಿ. ಪ್ರಭು, ಎಸ್.ಡಿ.ಎಮ್. ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಸಿ.ಎಮ್. ಶೆಟ್ಟರ್, ವೈದ್ಯಕೀಯ ಅಧೀಕ್ಷಕರಾದ ಡಾ. ಕಿರಣ್ ಹೆಗಡೆ, ಉಪ ವೈದ್ಯಕೀಯ ಅಧೀಕ್ಷಕರಾದ ಡಾ. ಮಗ್ದುಮ್ ಕಿಲ್ಲೇದಾರ್, ಪ್ರಾಂಶುಪಾಲರಾದ ಡಾ. ವಿಜಯ್ ಕುಲಕರ್ಣಿ, ಡಾ. ಶಂಕರಗೌಡಾ ಪಾಟೀಲ್ ಹಾಗೂ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಬೆಳ್ತಂಗಡಿ ರತ್ನತ್ರಯ ತೀರ್ಥಕ್ಷೇತ್ರದಲ್ಲಿ ಚಂದನ ಷಷ್ಠಿ ನೋಂಪಿ ಉದ್ಯಾಪನೆ

Article Image

ಬೆಳ್ತಂಗಡಿ ರತ್ನತ್ರಯ ತೀರ್ಥಕ್ಷೇತ್ರದಲ್ಲಿ ಚಂದನ ಷಷ್ಠಿ ನೋಂಪಿ ಉದ್ಯಾಪನೆ

ಉಜಿರೆ: ಬೆಳ್ತಂಗಡಿ ಜೈನಪೇಟೆಯಲ್ಲಿರುವ ರತ್ನತ್ರಯ ಜೈನತೀರ್ಥಕ್ಷೇತ್ರದಲ್ಲಿ ಶನಿವಾರ ಚಂದನ ಷಷ್ಠಿ ನೋಂಪಿ ವಿಧಾನದ ಉದ್ಯಾಪನಾ ಕಾರ್ಯಕ್ರಮ ವಿಧಿ-ವಿಧಾನಗಳೊಂದಿಗೆ ಶ್ರವಣಬೆಳಗೊಳದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಿತು. ಮೂರೂ ಬಸದಿಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಬಳಿಕ ಸಾಮೂಹಿಕ ಪಂಚನಮಸ್ಕಾರ ಮಂತ್ರ ಪಠಣದ ಬಳಿಕ ಸಾಮೂಹಿಕ ಅಷ್ಟವಿಧಾರ್ಚನೆ ಪೂಜೆ ನಡೆಯಿತು. ಚಂದ್ರಪ್ರಭ ತೀರ್ಥಂಕರರ ಪೂಜೆ, ಭಗವಾನ್ ಶಾಂತಿನಾಥ ಸ್ವಾಮಿ ಪೂಜೆ, ನವದೇವತೆಗಳ ಪೂಜೆ, ಪಂಚಪರಮೇಷ್ಠಿಗಳ ಪೂಜೆ, ಕ್ಷೇತ್ರಪಾಲಪೂಜೆ, ಪದ್ಮಾವತಿ ದೇವಿಪೂಜೆ, ಬ್ರಹ್ಮಯಕ್ಷ ಪೂಜೆ, ಭಗವಾನ್ ಬಾಹುಬಲಿ ಸ್ವಾಮಿ ಪೂಜೆ ಮತ್ತು ಶ್ರುತ ಪೂಜೆ ನಡೆಸಲಾಯಿತು. 108 ಮಂತ್ರಪುಷ್ಟ ಅರ್ಚನೆ ಬಳಿಕ ಜಯಮಾಲಾ ಅರ್ಘ್ಯ ಅರ್ಪಿಸಲಾಯಿತು. ಬಸದಿಯ ಪ್ರಧಾನ ಅರ್ಚಕ ಕೆ. ಜಯರಾಜ ಇಂದ್ರರ ನೇತೃತ್ವದಲ್ಲಿ ನವೀನ ಕುಮಾರ ಇಂದ್ರ ಮತ್ತು ಕೆ. ಮಹಾವೀರ ಇಂದ್ರರು ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ಧರ್ಮಸ್ಥಳದ ಸೌಮ್ಯ ಸುಭಾಶ್ ಮತ್ತು ಬಳಗದವರ ಜಿನಭಜನೆಗಳ ಸುಶ್ರಾವ್ಯ ಗಾಯನ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿತು. ಮೂಡಬಿದ್ರೆಯ ಸರ್ವೇಶ್ ಜೈನ್ ಮತ್ತು ಬಳಗದವರಿಂದ ಜಿನಭಕ್ತಿ ಗೀತೆಗಳ ಗಾಯನ ನಡೆಯಿತು. ಬಸದಿಯ ಅನುವಂಶಿಕ ಆಡಳಿತ ಮೊಕ್ತೇಸರ ಕೆ. ಜಯವರ್ಮರಾಜ್ ಬಳ್ಳಾಲ್, ಕೆ. ರಾಜವರ್ಮ ಬಳ್ಳಾಲ್, ಶ್ರೀನಾಥ್ ಬಳ್ಳಾಲ್, ವಿನಯಾ ಜೆ. ಬಳ್ಳಾಲ್, ವೈಶಾಲಿ ಬಳ್ಳಾಲ್, ಡಾ. ಪ್ರಿಯಾ ಬಳ್ಳಾಲ್, ವಿಜಯಾ ಬ್ಯಾಂಕ್ ನಿವೃತ್ತ ಮೇನೇಜರ್ ಎಂ. ಜಿನರಾಜ ಶೆಟ್ಟಿ ಮತ್ತು ಬಳ್ಳಾಲ್ ಕುಟುಂಬಸ್ಥರು ಉಪಸ್ಥಿತರಿದ್ದರು. 18 ಮಂದಿ ಚಂದನ ಷಷ್ಠಿ ನೋಂಪಿ ವ್ರತಧಾರಿಗಳಲ್ಲಿ 8 ಮಂದಿ 6 ವರ್ಷಗಳನ್ನು ಪೂರೈಸಿದ್ದು ನೋಂಪಿ ಉದ್ಯಾಪನೆ ಮಾಡಿದರು. ನೋಂಪಿ ವ್ರತಧಾರಿಗಳಾದ ಕುಂಡದಬೆಟ್ಟು ವಿನಯಮ್ಮ, ಸಬ್ರಬೈಲು ಸುಮಲತಾ ಜೀವಂಧರ ಚೌಟ ಮತ್ತು ಸುಜಾತ ಧನಕೀರ್ತಿ ಆರಿಗ ಧರ್ಮಸ್ಥಳ ಪ್ರಕಟಿಸಿದ “ಚಂದನ ಷಷ್ಠಿ ನೋಂಪಿ ವಿಧಾನ” ಕೃತಿಯನ್ನು ಸ್ವಾಮೀಜಿ ಬಿಡುಗಡೆಗೊಳಿಸಿ ಆಶೀರ್ವದಿಸಿದರು. ಕೃತಿಯನ್ನು ಎಲ್ಲರಿಗೂ ಶಾಸ್ತ್ರದಾನವಾಗಿ ವಿತರಿಸಲಾಯಿತು. ಸ್ವಾಮೀಜಿಯವರಿಂದ ಮಂಗಲಪ್ರವಚನ: ನೋಂಪಿಗಳಿಂದ ಕರ್ಮನಿರ್ಜರೆಯಾಗಿ ಮೋಕ್ಷ ಪ್ರಾಪ್ತಿ: ಉಪನ್ಯಾಸ ಹಾಗೂ ಕಠಿಣವ್ರತ ನಿಯಮಗಳ ಪಾಲನೆಯೊಂದಿಗೆ ಚಂದನ ಷಷ್ಠಿಯಂತಹ ಪವಿತ್ರ ನೋಂಪಿಗಳನ್ನು ಮಾಡಿದರೆ ನಮ್ಮ ಕರ್ಮಗಳ ನಿರ್ಜರೆಯಾಗಿ ರೋಗಗಳೂ ನಿವಾರಣೆಯಾಗಿ ಶಾಶ್ವತ ಸುಖವನ್ನೀಯುವ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಮಂಗಲಪ್ರವಚನ ನೀಡಿದ ಶ್ರವಣಬೆಳಗೊಳದ ಸ್ವಾಮೀಜಿ ಹೇಳಿದರು. ಹೆಚ್ಚಾಗಿ ನೋಂಪಿಗಳನ್ನು ಚಾತುರ್ಮಾಸದ ಅವಧಿಯಲ್ಲಿ ಭಾದ್ರಪದ ಮಾಸದಲ್ಲಿ ಮಾಡುತ್ತಾರೆ. ಏಕೆಂದರೆ ಭಾದ್ರಪದ ಮಾಸ ಬಹಳ ಹಿತಕರವಾಗಿದ್ದು ಆಗ ನಾವು ಮಾಡಿದ ಭಾವನೆಗಳು ಭದ್ರವಾಗುತ್ತವೆ. ಪರಿಶುದ್ಧ ತನು, ಮನದೊಂದಿಗೆ ವೃತ ನಿಯಮಗಳ ಪಾಲನೆಯೊಂದಿಗೆ ದೇವರು ಮತ್ತು ಗುರುಗಳ ಸೇವೆ, ಆರಾಧನೆ ಮಾಡಬೇಕು. ಆಧುನಿಕತೆಯ ನೆಪದಲ್ಲಿ ಎಂದೂ ಅಪವಿತ್ರ, ಅವಿನಯ ಮಾಡಬಾರದು ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದರು. ಬಸದಿಯ ಅನುವಂಶೀಯ ಆಡಳಿತ ಮೊಕ್ತೇಸರ ಕೆ. ಜಯವರ್ಮರಾಜ ಬಳ್ಳಾಲ್ ಅಧ್ಯಕ್ಷತೆ ವಹಿಸಿದರು. ಶಾಸಕ ಹರೀಶ್ ಪೂಂಜ ಮತ್ತು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಧರ್ಮಸ್ಥಳದ ಡಾ. ಕೆ. ಜಯಕೀರ್ತಿ ಜೈನ್ ಸ್ವಾಗತಿಸಿದರು. ಕಾರ್ಯಕ್ರಮ ನಿರ್ವಹಿಸಿದ ಶಿಕ್ಷಕ ಧರಣೇಂದ್ರ ಕುಮಾರ್ ಕೊನೆಯಲ್ಲಿ ಧನ್ಯವಾದವಿತ್ತರು.

ವಧು ವರರ ಅನ್ವೇಷಣೆಯಲ್ಲಿದ್ದ ಜೈನರಿಗೆ ಸುವರ್ಣಾವಕಾಶ

Article Image

ವಧು ವರರ ಅನ್ವೇಷಣೆಯಲ್ಲಿದ್ದ ಜೈನರಿಗೆ ಸುವರ್ಣಾವಕಾಶ

ಬದಲಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ವರನಿಗೆ ವಧು, ವಧುವಿಗೆ ವರ ಸುಲಭವಾಗಿ ಸಿಕ್ಕು ಮದುವೆಯಾಗುವದು ತುಂಬಾ ಕಷ್ಟಸಾದ್ಯವಾಗಿದೆ. ಅದರಲ್ಲೂ ಮುಖ್ಯವಾಗಿ ಹುಡುಗರಿಗೆ ಹುಡುಗಿಯರು ಸಿಗದಿರುವದೇ ಗಂಭೀರವಾದ ಸಮಸ್ಯೆಯಾಗಿದೆ. ಈ ಸಮಸ್ಯೆ ಎಲ್ಲಾ ಸಮುದಾಯದಲ್ಲೂ ಇದೆ ಆದರೆ ಜೈನ ಸಮುದಾಯದಲ್ಲಿ ತುಸು ಹೆಚ್ಚು ಎಂದೇ ಹೇಳಬೇಕು ( ಇದಕ್ಕೆ ಹಲವಾರು ಕಾರಣಗಳಿವೆ ಇವುಗಳನ್ನು ವಿಶ್ಲೇಶಿಸುವದು ಬೇಡ ಇದು ಎಲ್ಲರಿಗೂ ಗೊತ್ತಿದ್ದ ಸಂಗತಿ ) ಈ ವಿಷಯವಾಗಿ ಮಕ್ಕಳ ಪಾಲಕರು ಕಷ್ಟಪಡುತ್ತಿದಾರೆ ಅಷ್ಟೇ ಅಲ್ಲ ತುಂಬಾ ನೊಂದುಕೊಳ್ಳುತ್ತಿದ್ದಾರೆ. ಈ ಸಮಸ್ಯೆ ಪರಿಹಾರ ಕಂಡುಕೊಳ್ಳಲು ಅನೇಕ ಮಾಹಿತಿ ಕೇಂದ್ರಗಳು, ಮೇಳಗಳು ಮತ್ತು ಮೆಟ್ರಿಮೊನಿ ಇತ್ಯಾದಿ ಸಂಸ್ಥೆಗಳು ಹುಟ್ಟಿಕೊಂಡಿವೆಯಾದರೂ ಅವೆಲ್ಲವೂ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. "ಇಂಥ ಸಮಸ್ಯೆ ಪರಿಹಾರಕ್ಕೆ ಕಂಕಣಬದ್ದವಾಗಿದೆ ಬೆಳಗಾವಿಯ ಮಾಣಿಕಬಾಗ ದಿಗಂಬರ ಜೈನ್ ಬೋರ್ಡಿಂಗ್ ಸಂಸ್ಥೆ" ಇವೆಲ್ಲವನ್ನೂ ಗಮನಿಸಿದ ದಕ್ಷಿಣ ಭಾರತ ಜೈನ ಸಭಾದ ಅಂಗ ಸಂಸ್ಥೆ ಬೆಳಗಾವಿಯ ಮಾಣಿಕಭಾಗ ದಿಗಂಬರ ಜೈನ ಬೋರ್ಡಿಂಗಿನ ಆಡಳಿತ ಮಂಡಳಿ ಶ್ರೀ ಕುಂತಿನಾಥ ಕಲಮನಿ ಇವರ ಸಾರಥ್ಯದಲ್ಲಿ ಕಳೆದ 17 ವರ್ಷಗಳಿಂದ ಮದುವೆಗಾಗಿ ಸೂಕ್ತ ವಧು ಅಥವಾ ವರರನ್ನು ಹುಡುಕುವ ಪ್ರಕ್ರಿಯೆಯ ಭಾಗವಾಗಿ ಜೈನ್ ವಧು-ವರ ಪರಿಚಯ ಸಮಾವೇಶವನ್ನು ಅತ್ಯಂತ ಪ್ರಾಮಾಣಿಕವಾಗಿ ಹಾಗೂ ಯಶಸ್ವಿಯಾಗಿ ನಡೆಸುತ್ತಾ ಬಂದಿದೆ ಇದು ಎಷ್ಟು ಅದ್ಭುತವಾದ ಕಾರ್ಯಮಾಡುತ್ತಿದೆ ಎಂದರೆ ಪರಸ್ಪರ ಹೊಂದಾಣಿಕೆಯಿಂದ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಮದುವೆಗಳು ಜರುಗಿವೆ ಹಾಗೂ ಅವರೆಲ್ಲ ಸುಖವಾಗಿ ಕೌಟುಂಬಿಕ ಜೀವನ ಸಾಗಿಸುತ್ತಾ ಈ ಸಂಸ್ಥೆಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಇದೀಗ ಈ ವರ್ಷದ 18 ನೇ ಜೈನ್ ವಧು-ವರ ಪರಿಚಯ ಸಮಾವೇಶ ಜರುಗಲಿದೆ. 17ನೇ ಸಮಾವೇಶದ ಭವ್ಯ ಯಶಸ್ಸಿನ ನಂತರ ಬಹಳಷ್ಟು ಶ್ರಾವಕ ಶ್ರಾವಿಕೆಯರ ಆಗ್ರಹ ಹಾಗೂ ವಿನಂತಿಯ ಮೇರೆಗೆ ಇದೀಗ 18ನೇ ಜೈನ್ ವಧು-ವರ ಪರಿಚಯ ಸಮಾವೇಶ ಮುಂಬರುವ ದಿನಾಂಕ 12-10-2025 ರಂದು ರವಿವಾರ ಬೆಳಗಾವಿಯ ಧರ್ಮನಾಥ ಭವನದಲ್ಲಿ ಬೆಳಿಗ್ಗೆ 9ರಿಂದ ಪ್ರಾರಂಭವಾಗಲಿದೆ. ನೋಂದಣಿ ಕಾರ್ಯ ಪ್ರಾರಂಭವಾಗಿದೆ: ಈ ಸಮಾವೇಶದಲ್ಲಿ ಭಾಗಿಯಾಗಲು ಹೆಚ್ಚಿನ ಸಂಖ್ಯೆಯ ಜನ ನೋಂದಣಿ ಮಾಡಿಸಿದ್ದಾರೆ. ಸಮಾವೇಶದ ಪ್ರಯೋಜನ ಪಡೆದುಕೊಳ್ಳಲು ತಾವೂ ರೂ 820/- ಶುಲ್ಕ ಪಾವತಿಸಿ ಆನ್‌ಲೈನ್ ನೋಂದಣಿ ಮಾಡಿಕೊಳ್ಳಬಹುದಾಗಿದೆ. www.mdjbbelagavi.in ನೋಂದಣಿಗೆ ಕೊನೆಯ ದಿನಾಂಕ: 30/09/2025 ಇರುತ್ತದೆ. ಇದರ ಪ್ರಯೋಜನ ಪಡೆದುಕೊಳ್ಳಲು ಜೈನ ಧರ್ಮ ಬಂಧುಗಳಿಗೆ ಇದೊಂದು ದೊಡ್ಡ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ: 70226 91008, 94804 48108 ಈ ಸಂಖ್ಯೆಯಿಂದ ಪಡೆದುಕೊಳ್ಳಬಹುದು. ವರದಿ : ಶಾಂತರಾಜ ಮಲ್ಲಸಮುದ್ರ

ಎಕ್ಸಲೆಂಟ್ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

Article Image

ಎಕ್ಸಲೆಂಟ್ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

ಮೂಡುಬಿದಿರೆ: ಮೂಡುಬಿದಿರೆಯ ಎಕ್ಸಲೆ0ಟ್ ವಿದ್ಯಾ ಸ0ಸ್ಥೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಪ್ರಾ0ಶುಪಾಲರಾದ ದಿನೇಶ್ ಚೌಟ ಮಾತನಾಡುತ್ತಾ, ಶಿಕ್ಷಕರ ದಿನಾಚರಣೆ ವಿದ್ಯಾರ್ಥಿಗಳ ಪ್ರೀತಿ ಮತ್ತು ಅಭಿಮಾನಗಳ ಧ್ಯೋತಕವಾಗಿದೆ. ಡಾ. ರಾಧಾಕೃಷ್ಣ ಅವರ ಜ್ಞಾನ ಮತ್ತು ಸಾಧನೆ ಶಿಕ್ಷಣ ವೃತ್ತಿಯಲ್ಲಿರುವ ನಮಗೆಲ್ಲರಿಗೂ ಮಾದರಿ. ಅವರು ಮೇಧಾವಿಗಳಾಗಿದ್ದರೂ ತಮ್ಮ ವಿದ್ಯಾರ್ಥಿಗಳೊಂದಿಗೆ ಸರಳತೆ ಮತ್ತು ಸಜ್ಜನಿಕೆಯೊ0ದಿಗೆ ನಡೆದುಕೊಳ್ಳುತ್ತಿದ್ದರು. ಅವರ ವಿದ್ಯಾರ್ಥಿಗಳಿಂದ ಅವರಿಗೆ ಸಿಕ್ಕ ಪ್ರೀತಿ ಮತ್ತು ಗೌರವ ಎಲ್ಲಾ ಶಿಕ್ಷರಿಗೂ ಸಲ್ಲಬೇಕೆನ್ನುವ ಅವರ ಆಶಯವೇ ಅವರ ಜನ್ಮ ದಿನದಂದು ಶಿಕ್ಷಕರ ದಿನಾಚರಣೆಯಾಗಿ ಆಚರಿಸಲು ಕಾರಣವಾಯಿತು ಎಂದರು. ಒಬ್ಬ ಉತ್ತಮ ಶಿಕ್ಷಕ ಒಬ್ಬ ಶ್ರೇಷ್ಟ ಶಿಷ್ಯ ವೃಂದವನ್ನು ಹುಟ್ಟು ಹಾಕುತ್ತಾನೆ. ಅಂಥಹ ಶಿಕ್ಷಕರ ಸಾಲಿನಲ್ಲಿ ನನಗೆ ಅಗ್ರ ಪಂಕ್ತಿಯಲ್ಲಿ ಕಂಡು ಬರುವುದು ನೋಬಲ್ ಪ್ರಶಸ್ತಿ ವಿಜೇತ ಜೆ ಜೆ ಥಾಮ್ಸನ್. ಕೇವಲ ಆತನಷ್ಟೇ ಅಲ್ಲದೆ ಆತನಿಂದ ಪ್ರಭಾವಿತರಾಗಿ ಒಟ್ಟು ಏಳು ಜನ ಶಿಷ್ಯರು ತಮ್ಮ ಸಂಶೋಧನಾ ಕ್ಷೇತ್ರದಲ್ಲಿ ಸಾಧನೆ ಮಾಡಿ ನೋಬಲ್ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಅದು ಅತ್ಯಂತ ಶ್ಲಾಘನೀಯವಾದ ವಿಚಾರ. ಇಂದು ನನ್ನ ಶಿಷ್ಯರಲ್ಲೊಬ್ಬರಾದ ಯುವರಾಜ ಜೈನರ ಸಾಧನೆ ನನಗೆ ಅತ್ಯಂತ ಸಂತಸವನ್ನುಂಟು ಮಾಡಿದೆ. ಇವರ ಸಾಧನೆ ಇತರರಿಗೂ ಪ್ರೇರಣೆಯಾಗಲಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್ ಮಾತನಾಡುತ್ತಾ ಒಳ್ಳೆಯ ಗುರುವನ್ನು ಪಡೆಯಲು ಹಾಗೂ ಒಳ್ಳೆಯ ಶಿಷ್ಯವೃಂದವನ್ನು ಪಡೆಯಲು ಯೋಗ ಬೇಕು. ನಾನು ಉಪನ್ಯಾಸಕ ವೃತ್ತಿಯನ್ನು ಆರಂಭಿಸಿದಾಗ ನನಗೆ ಪಾಠ ಮಾಡಿದ ಗುರುಗಳೇ ನನ್ನ ಸಹೋದ್ಯೋಗಿಗಳಾಗಿದ್ದರು. ಈ ರೀತಿ ನಮ್ಮ ವಿಭಾಗದಲ್ಲಿ ನಾಲ್ಕು ತಲೆಮಾರುಗಳ ಗುರು ಶಿಷ್ಯ ಪರಂಪರೆ ಇತ್ತು. ನನ್ನನ್ನು ಆಸಂದರ್ಭದಲ್ಲಿ ಕೈ ಹಿಡಿದು ನಡೆಸಿದ ಗುರುಗಳಿಗೆ ನಾನು ಋಣಿ ಎಂದರು. ನನ್ನ ಗುರುಗಳ ಕರ್ತವ್ಯ ಪ್ರಜ್ಞೆ, ಶಿಷ್ಯರೆಡೆಗೆ ಅವರು ತೋರುವ ಪ್ರೀತಿ ನನಗೆ ಪ್ರೇರಣೆಯಾಗಿದೆ. ಸಮಾಜದಲ್ಲಿ ಏನೇ ಕಷ್ಟ ಬಂದರೂ ಅದನ್ನು ಎದುರಿಸಲು ತಯಾರಿರಬೇಕು. ಅದು ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಸಾಧ್ಯ. ಕೊಡೆ ಮಳೆಯನ್ನು ನಿಲ್ಲಿಸಲು ಸಾಧ್ಯವಿಲ್ಲದಿದ್ದರೂ ಮಳೆಯಿಂದ ರಕ್ಷಣೆ ನೀಡುತ್ತದೆ. ಈ ಸಂಸ್ಥೆಯಲ್ಲಿ ಶಿಕ್ಷಣದೊಂದಿಗೆ ಸಿಗುವ ಸಂಸ್ಕಾರ ಮು0ದೆ ಬದುಕನ್ನು ಎದುರಿಸಲು ನಿಮಗೆ ದಾರಿದೀಪವಾಗಲಿದೆ ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ಸಭೆಯಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಮೂಡು ಮಾರ್ನಾಡಿನ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಡಾ. ರಾಜಶ್ರೀ ಬಿ. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ ಧನಕನಕಾದಿಗಳಿಂದ ಬದುಕು ಭವ್ಯವಾಗಬಲ್ಲದೇ ಹೊರತು ದಿವ್ಯವಾಗುವುದಿಲ್ಲ. ಜೀವನದಲ್ಲಿ ಹಣ ಗಳಿಸುವುದು ಇದ್ದೇ ಇದೆ. ಆದರೆ ಸಮಾಜಕ್ಕೆ ಕೊಡುಗೆ ನೀಡುವುದರ ಕುರಿತು ಕೂಡ ತಮ್ಮ ಗಮನವಿರಲಿ. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯಿಂದ ಜೀವನವನ್ನು ಬೆಳಗಿಸಿಕೊಂಡು ಹೋಗುವುದೇ ಗುರುಗಳಾದವರಿಗೆ ಕೊಡಬಹುದಾದ ದೊಡ್ಡ ಗುರುದಕ್ಷಿಣೆ ಎಂದರು. ಸನ್ಮಾನಕ್ಕೆ ಉತ್ತರಿಸಿದ ರಾಷ್ಟ್ರ ಮಟ್ಟದ ವಿಕಸನ ತರಬೇತುದಾರರು ಹಾಗೂ ಪ್ರಶಸ್ತಿ ವಿಜೇತ ಶಿಕ್ಷಕರಾದ ಜೇಸಿ ರಾಜೇ0ದ್ರ ಭಟ್ ಮಾತನಾಡುತ್ತಾ ವಿದ್ಯಾರ್ಥಿ ಜೀವನದಲ್ಲಿ ತನ್ನ ಬುದ್ಧಿವಂತಿಕೆಯ ಅನುಸಾರ ತಾನು ಬೇರೆ ಕೋರ್ಸುಗಳನ್ನು ಆಯ್ಕೆ ಮಾಡಲು ಅವಕಾಶವಿದ್ದರೂ ಶಿಕ್ಷಕಿಯಾಗಿದ್ದ ತನ್ನ ತಾಯಿಗೆ ಸಮಾಜದಲ್ಲಿ ಸಿಗುತ್ತಿದ್ದ ಗೌರವಾದರಗಳನ್ನು ಕಂಡು ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡೆ. ಭಾರತ ಗುರು ಪರಂಪರೆಗೆ ಹೆಸರುವಾಸಿಯಾಗಿದೆ. ಜಗತ್ತಿನ ಶ್ರೇಷ್ಟ ವಿಶ್ವ ವಿದ್ಯಾನಿಲಯಗಳಲ್ಲಿ ಹದಿನೆಂಟು ವಿಶ್ವವಿದ್ಯಾನಿಲಯಗಳು ಒಂದು ಕಾಲದಲ್ಲಿ ಭಾರತದಲ್ಲಿತ್ತು. ವಿದೇಶಿಗರ ಆಕ್ರಮಾಣದಿಂದ ಭಾರತದ ಜ್ಞಾನ ಸ0ಪತ್ತು ನಾಶವಾದರೂ ಗುರುವಿನ ಛಲದಿಂದ ಕೆಲವೇ ವರ್ಷಗಳಲ್ಲಿ ಅದನ್ನು ಮರುಕಳಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಇದು ಪ್ರಪಂಚದಲ್ಲಿ ಎಲ್ಲೂ ನಡೆದಿಲ್ಲ. ಅವತಾರ ಪುರುಷರಿಗೂ ಗುರುಗಳಿದ್ದರು ಎ0ಬುದೇ ನಮ್ಮ ದೇಶದ ಗುರುಪರಂಪರೆಯ ಮಹತ್ವಕ್ಕೆ ಸಾಕ್ಷಿ. ಕೇವಲ ಪಾಠಕ್ಕೆ ಸೀಮಿತವಾಗಿರದೆ ಜೀವನಕ್ಕೆ ಸಜ್ಜುಗೊಳಿಸುವವನೇ ನಿಜವಾದ ಗುರು ಎಂದರು. ಉಜಿರೆ ಎಸ್ ಡಿ ಎಂ ಕಾಲೇಜಿನ ಸಹ ಪ್ರಾಧ್ಯಾಪಕರಾದ ಗಜಾನನ ಆರ್ ಭಟ್ ಸನ್ಮಾನಕ್ಕೆ ಉತ್ತರಿಸುತ್ತಾ ತಾನು ಕರ್ತವ್ಯ ನಿಷ್ಠೆಗೆ ಹೆಸರಾದ ಅನೇಕ ಹಿರಿಯ ಶಿಕ್ಷಕರಿಂದ ಸ್ಪೂರ್ತಿಯನ್ನು ಪಡೆದುಕೊಂಡಿದ್ದೇನೆ. ಬದುಕಿನಲ್ಲಿ ಜ್ಞಾನವನ್ನು ಗಳಿಸಲು ಕಷ್ಟಪಡಲೇ ಬೇಕು. ಕಷ್ಟ ಸಹುಷ್ಣುತೆ ಇದ್ದಲ್ಲಿ ಆತ್ಮ ವಿಶ್ವಾಸ ಬೆಳೆಯುತ್ತದೆ. ಆಗ ಮಾತ್ರ ಸಾಧನೆ ಸಾಧ್ಯ. ಪ್ರಾಮಾಣಿಕತೆಯಿಂದ ಒಂದು ಸಂಸ್ಥೆಯನ್ನು ಎತ್ತರಕ್ಕೆ ಕೊಂಡೊಯ್ಯಬಹುದು ಅನ್ನುವುದಕ್ಕೆ ಎಕ್ಸಲೆಂಟ್ ವಿದ್ಯಾ ಸ0ಸ್ಥೆಯೇ ಸಾಕ್ಷಿ ಎಂದರು. ಸನ್ಮಾನಿತರಾದ ಎಸ್ ಡಿ ಎಂ ಕಾಲೇಜಿನ ಉಪಪ್ರಾ0ಶುಪಾಲರಾದ ನಂದಾ ಕುಮಾರಿ ಕೆ ಪಿ ಮಾತನಾಡುತ್ತಾ ಈ ಕಲ್ಲಬೆಟ್ಟುವಿನ ಕಲ್ಲು ಕಲ್ಲುಗಳಲ್ಲಿ ಹೂವುಗಳನ್ನು ಅರಳಿಸುವ ಕೆಲಸವನ್ನು ಯುವರಾಜ ಜೈನ್ ರಶ್ಮಿತಾ ಜೈನ್ ದ0ಪತಿಗಳು ಮಾಡಿದ್ದಾರೆ. ಈ ಸಂಸ್ಥೆ ಈಗಾಗಲೇ ರಾಜ್ಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ನನ್ನ ವಿದ್ಯಾರ್ಥಿಯ ಸಾಧನೆಗೆ ಹೃದಯ ತುಂಬಿ ಬಂದಿದೆ. ವಿದ್ಯೆಗೆ ವಿನಯವೇ ಭೂಷಣ ಅನ್ನುವ ಮಾತಿನ0ತೆ ಸಾಧನೆಗೆ ಗುರುಗಳೇ ಕಾರಣ ಅನ್ನುವ ಅವರ ಮನೋಭಾವವೇ ಅವರನ್ನು ಈ ಎತ್ತರಕ್ಕೇರಿಸಿದೆ. ಈ ಸ0ಸ್ಥೆ ಇನ್ನು ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟಗಳಲ್ಲೂ ಬೆಳಗಲಿ ಎಂದರು. ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡುತ್ತಾವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕೆ ಸದಾ ಕಾರ್ಯಪ್ರವೃತ್ತರಾಗಿರುವ ಶಿಕ್ಷಕರು ಜಗತ್ತಿನಾದ್ಯಂತ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡುತ್ತಾ ಬಂದಿದ್ದಾರೆ. ತಂತ್ರಜ್ಞಾನ ಎಷ್ಟೇ ಮುಂದುವರೆದರೂ ವಿದ್ಯಾರ್ಥಿಯ ಉದ್ಧಾರ ಆಗಬೇಕೆಂದರೆ ಗುರುವಿನ ಸಾಂಗತ್ಯ ಇರಲೇಬೇಕು. ಹಾಗಾಗಿ ಗುರು ಶಿಷ್ಯ ಸಂಬಂಧ ಈ ಹಿಂದಿನಂತೆಯೇ ನಡೆದುಕೊಂಡು ಬಂದಿದೆ ಎಂದರು. ತಮ್ಮ ಬದುಕಿನಲ್ಲಿ ಮಾರ್ಗದರ್ಶನವನ್ನು ನೀಡುತ್ತಾ ಬಂದಿರುವ ಗುರುಗಳನ್ನು ಹಾಗೂ ಸಂಸ್ಥೆಯಲ್ಲಿ ಕಾರ್ಯನಿರತರಾಗಿರುವ ಗುರುಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಸ0ಸ್ಥೆಯ ಮಾಸ ಪತ್ರಿಕೆ “ಮನೋರಮಾ”ಈ ಸಂದರ್ಭದಲ್ಲಿ ಬಿಡುಗಡೆಯಾಯಿತು. 100 ಅಂಕ ತೆಗೆದ ವಿಷಯವಾರು ಶಿಕ್ಷಕರನ್ನು ಮತ್ತು ಉಪನ್ಯಾಸಕರನ್ನು ಈ ಸಂದರ್ಭದಲ್ಲಿ ಪುರಸ್ಕರಿಸಲಾಯಿತು. ಸಿಬಿಎಸ್ಸಿ ಶಾಲೆಯ ಪ್ರಾಂಶುಪಾಲರಾದ ಶ್ರೀಪ್ರಸಾದ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪದವಿಪೂರ್ವ ಪ್ರಾ0ಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾರರಾದ ಶಿವಪ್ರಸಾದ ಭಟ್ ವಂದಿಸಿದರು.ಉಪನ್ಯಾಸಕರಾದ ಯಶಸ್ವಿನಿ ಮತ್ತು ದಿವ್ಯಾಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.

ಜೈನ ತತ್ವ-ಸಿದ್ಧಾಂತಗಳು ಸರ್ವಕಾಲಕ್ಕೂ ಪ್ರಸ್ತುತ : ಡಾ. ಅಪ್ಪಣ್ಣ ಹಂಜೆ

Article Image

ಜೈನ ತತ್ವ-ಸಿದ್ಧಾಂತಗಳು ಸರ್ವಕಾಲಕ್ಕೂ ಪ್ರಸ್ತುತ : ಡಾ. ಅಪ್ಪಣ್ಣ ಹಂಜೆ

ಜೈನ ಧರ್ಮವು ‘ಅಹಿಂಸಾ ಪರಮೋಧರ್ಮ’ ಎಂಬ ಧ್ಯೇಯ ವಾಕ್ಯದೊಂದಿಗೆ ಅಹಿಂಸೆ, ಅಪರಿಗ್ರಹ, ಅನೇಕಾಂತವಾದ ಮುಂತಾದ ಸಿದ್ಧಾಂತಗಳ ಮೂಲಕ ಇಂದಿಗೂ ವಿಶ್ವಹಿತವನ್ನು ಬಯಸುತ್ತ ಮುನ್ನಡೆದಿದ್ದು, ಜಗತ್ತಿನ ಎಲ್ಲ ಜೀವಿಗಳಿಗೂ ಬದುಕುವ ಸಮಾನವಾದ ಹಕ್ಕಿದೆ, ಎಲ್ಲ ಜೀವಿಗಳೂ ಇತರ ಎಲ್ಲ ಜೀವಿಗಳನ್ನು ಮನ್ನಿಸಬೇಕು, ಎಲ್ಲ ಜೀವಿಗಳೂ ಸೌಹಾರ್ದದಿಂದ ಬದುಕಬೇಕೆಂಬುದು ಈ ಧರ್ಮದ ಹೆಬ್ಬಯಕೆಯಾಗಿದೆ ಎಂದು ಡಾ. ಅಪ್ಪಣ್ಣ ಹಂಜೆ ಹೇಳಿದರು. ಅವರು ಗದಗ ಜಿಲ್ಲಾ ದಿಗಂಬರ ಜೈನ ಸಂಘವು ‘ದಶಲಕ್ಷಣ ಪರ್ವಾಚರಣೆ ಮತ್ತು ಸಮಾಜ ಸಂಪರ್ಕ ಸಭೆ’ ಕಾರ್ಯಕ್ರಮದ ನಿಮಿತ್ತ ಗದುಗಿನ ವಿದ್ಯಾದಾನ ಸಮಿತಿಯ ಬಾಲಕರ ಪ್ರೌಢ ಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಸಾಮೂಹಿಕ ಕ್ಷಮಾವಳಿ ಹಾಗೂ ಸಮಾರೋಪ ಸಮಾರಂಭ’ದಲ್ಲಿ ಉಪನ್ಯಾಸ ಮಾಡುತ್ತ, ಜೈನರು “ನಾನು ಲೋಕದ ಸಕಲ ಜೀವಿರಾಶಿಗಳನ್ನು ಕ್ಷಮಿಸುತ್ತೇನೆ, ಸಕಲ ಜೀವರಾಶಿಗಳೂ ನನ್ನನ್ನು ಕ್ಷಮಿಸಲಿ, ನಾನು ಎಲ್ಲ ಜೀವಿಗಳಲ್ಲಿ ಮೈತ್ರಿಯನ್ನು ಇರಿಸಿಕೊಳ್ಳಲು ಬಯಸುತ್ತೇನೆ, ಯಾವ ಜೀವಿಯಲ್ಲೂ ನನಗೆ ವೈರವಾಗಲಿ ಮತ್ಸರವಾಗಲಿ ಇಲ್ಲ” ಎಂಬ ಸೌಹಾರ್ದ ಮಂತ್ರವನ್ನು ಆರಂಭದಿಂದಲೂ ಅನುಸರಿಸುತ್ತ ಬಂದಿದ್ದು, ದಶಲಕ್ಷಣ ಪರ್ವವು ಒಂದು ಅರ್ಥದಲ್ಲಿ ಜೈನರಿಗೆ ವಿಧಿಸಲಾದ ನೀತಿ ಸಂಹಿತೆ, ಇದು ಜೈನರ ಬದುಕುವ ಕಲೆಯಾಗಿದೆ ಎಂದು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗಜೇಂದ್ರಗಡದ ಉದ್ಯಮಿ ಮತ್ತು ಭಗವಾನ ಮಹಾವೀರ ಜೈನ ಆಯುರ್ವೇದಿಕ ಮೆಡಿಕಲ್ ಕಾಲೇಜಿನ ಅಧ್ಯಕ್ಷ ಅಶೋಕಕುಮಾರ ಬಾಗಮಾರ ಅವರು ಜೈನ ಧರ್ಮವು ಅರಿವು, ವಿಚಾರ, ಆಚಾರಕ್ಕೆ ಒತ್ತು ಕೊಡುತ್ತ ಬಂದಿದ್ದು, ಇಂದು ಸಂಖ್ಯಾದೃಷ್ಟಿಯಿಂದ ಜೈನರು ಮತೀಯ ಅಲ್ಪಸಂಖ್ಯಾತರೆಂದು ಪರಿಗಣಿಸಲ್ಪಟ್ಟಿದ್ದರೂ ತತ್ವ-ಸಿದ್ಧಾಂತಗಳು ಮತ್ತು ಅರ್ಥಪೂರ್ಣ ಆಚರಣೆ-ಅನುಷ್ಠಾನಗಳ ದೃಷ್ಟಿಯಿಂದ ನಾಡಿನ ಪ್ರಜ್ಞಾವಂತರ ಪ್ರೀತಿಗೆ ಪಾತ್ರರಾಗಿದ್ದಾರೆಂದು ಹೇಳಿದರು. ಸಂಘದ ಅಧ್ಯಕ್ಷ ಪಿ.ಎ. ಕುಲಕರ್ಣಿ ಪ್ರಾಸ್ತಾವಿಕವಾಗಿ ಮತ್ತು ಅಧ್ಯಕ್ಷತೆ ವಹಿಸಿ ಮಾತನಾಡುತ್ತ ವಿದ್ಯಾದಾನ ಸಮಿತಿಯ ಅಧ್ಯಕ್ಷ ಡಿ.ಬಿ. ಹುಯಿಲಗೋಳ ಮತ್ತು ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ಅವರು ಗದುಗಿನ ದಿಗಂಬರ ಜೈನ ಸಮಾಜದ ಕಾರ್ಯಕ್ರಮಗಳ ಆಯೋಜನೆಗೆ ಕಳೆದ ಇಪ್ಪತ್ತೆರಡು ವರ್ಷಗಳಿಂದಲೂ ಶಾಲೆಯ ಸಭಾಂಗಣವನ್ನು ಯಾವುದೇ ಅಪೇಕ್ಷೆಯಿಲ್ಲದೆ ಕೊಡಮಾಡುತ್ತ ಬಂದಿದ್ದು, ಅವರ ‘ಅಭಯದಾನ’ಕ್ಕೆ ಜೈನ ಸಮಾಜವು ಯಾವತ್ತೂ ಋಣಿಯಾಗಿದ್ದು, ಸಾಧಕರ ಸನ್ಮಾನಕ್ಕೆ ಅವಶ್ಯವಿರುವ ಸಾಮಗ್ರಿಗಳನ್ನು ಗದುಗಿನ ಗಣ್ಯ ವ್ಯಾಪಾರಸ್ಥ ಸಂಜಯ ಬಾಗಮಾರ ಅವರು ಪ್ರತಿವರ್ಷ ದಾನಮಾಡುತ್ತ ಬಂದಿದ್ದು, ಅವರ ‘ಶಾಸ್ತ್ರದಾನ’ ಮೌಲ್ಯ ಸಮಾಜಕ್ಕೆ ಮಾದರಿಯಾಗಿದೆ. ಸಂಘಕ್ಕೆ ಗಣ್ಯ ವ್ಯಾಪಾರಸ್ಥರಾಗಿರುವ ಕುಷ್ಟಗಿಯ ಅಭಿನಂದನ ಗೋಗಿ ಮತ್ತು ಗಜೇಂದ್ರಗಡದ ಬಾಹುಬಲಿ ಹೂಲಿ ಅವರ ಉದಾರವಾದ ಮಾರ್ಗದರ್ಶನ, ಸೇವೆ ಸ್ಮರಣೀಯವಾಗಿದೆ. ಜಿಲ್ಲೆಯ ಸಮಸ್ತ ಜೈನ ಸಮಾಜದ ಸಹಾಯ-ಸಹಕಾರದಿಂದಲೇ ದಶಲಕ್ಷಣ ಪರ್ವದ ಆಚರಣೆ ಸಾಂಗವಾಗಿ ನಡೆಯುತ್ತ ಬಂದಿದೆ ಎಂದು ಹೇಳಿದರು. ಸಾಮೂಹಿಕ ಪಂಚ ನಮೋಕಾರ ಮಂತ್ರ ಪಠಣ, ಜ್ವಾಲಾಮಾಲಿನಿ ಸದರಣ್ಣವರ ಪ್ರಾರ್ಥನೆ, ಯಶವಂತ ಸಿದ್ದಣ್ಣವರ ಭಕ್ತಿಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಜಿಲ್ಲೆಯ ವಿದ್ಯಾರ್ಥಿಗಳು, ದಾನಿಗಳು ಮತ್ತು ಗಣ್ಯರನ್ನು ಸನ್ಮಾನಿಸಲಾಯಿತು. ಪ್ರಕಾಶ ಮುತ್ತಿನ ನಿರೂಪಣೆ ಮತ್ತು ಸಂಕಪ್ಪ ನಾವಳ್ಳಿ ವಂದನಾರ್ಪನೆಗೈದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳ ಮುನ್ನೂರಕ್ಕೂ ಹೆಚ್ಚು ಶ್ರಾವಕರು, ಶ್ರಾವಿಕೆಯರು ಭಾಗವಹಿಸಿದ್ದರು. ಎಲ್ಲರೂ ಸಾಮೂಹಿಕವಾಗಿ ಪರಸ್ಪರ ಕ್ಷಮೆ ಕೋರಿ, ಪಂಚ ನಮೋಕಾರ ಮಂತ್ರ ಪಠಣದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಿದರು.

ವೇಣೂರು: ದಶಲಕ್ಷಣ ಪರ್ವದ ಸಮಾರೋಪ ಸಮಾರಂಭ

Article Image

ವೇಣೂರು: ದಶಲಕ್ಷಣ ಪರ್ವದ ಸಮಾರೋಪ ಸಮಾರಂಭ

ಉಜಿರೆ: ದಶಲಕ್ಷಣ ಪರ್ವವು ಸರ್ವ ಪರ್ವಗಳ ರಾಜನಾಗಿದ್ದು, ಉತ್ತಮ ಕ್ಷಮಾ, ಮಾರ್ದವ, ಆರ್ಜವ, ಶೌಚ, ಸತ್ಯ, ಸಂಯಮ, ತಪ, ತ್ಯಾಗ, ಅಕಿಂಚನ್ಯ ಮತ್ತು ಬ್ರಹ್ಮಚರ್ಯ ಎಂಬ ದಶಧರ್ಮಗಳ ಪಾಲನೆಯಿಂದ ಮುನಿಯಾಗುವ ಯೋಗವೂ, ಭಾಗ್ಯವೂ ಪ್ರಾಪ್ತಿಯಾಗುತ್ತದೆ ಎಂದು ಮೂಡಬಿದ್ರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಅವರು ಶನಿವಾರ ವೇಣೂರು ಬಾಹುಬಲಿ ಕ್ಷೇತ್ರದಲ್ಲಿ ಯಾತ್ರಿನಿವಾಸದಲ್ಲಿ ಕ್ಷಮಾವಳಿಯೊಂದಿಗೆ ದಶಲಕ್ಷಣ ಪರ್ವದ ಸಮಾರೋಪ ಸಮಾರಂಭದಲ್ಲಿ ಮಂಗಲ ಪ್ರವಚನ ನೀಡಿದರು. ದಶಧರ್ಮಗಳು ಮನಸ್ಸನ್ನು ಸುಂದರಗೊಳಿಸಿ ವಿವೇಕ ಪ್ರಾಪ್ತಿಗೆ ಪ್ರೇರಕವಾಗಿವೆ. ಅನುಕಂಪ ಮತ್ತು ಕರುಣೆಯೊಂದಿಗೆ ಅಹಿಂಸೆಯ ಪಾಲನೆ ಮಾಡಿದಾಗ ಕ್ಷಮಾ ಗುಣವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಅಜ್ಞಾನ ಮತ್ತು ಮಿಥ್ಯತ್ವವನ್ನು ತ್ಯಜಿಸಿ, ದರ್ಶನಗಳಲ್ಲಿ ಸಮನ್ವಯತೆಯನ್ನು ಸಾಧಿಸಿ, ವಿವೇಕದೊಂದಿಗೆ ಸರ್ವಜೀವಿಗಳಲ್ಲಿಯೂ ಅಹಿಂಸೆಯನ್ನು ತೋರಿದಾಗ ಮೋಕ್ಷ ಪ್ರಾಪ್ತಿ ಸಾಧ್ಯವಾಗುತ್ತದೆ. ಸದಾ ಸತ್ಯ, ಧರ್ಮ, ನ್ಯಾಯ, ನೀತಿಯ ಪಾಲನೆಯೊಂದಿಗೆ ಸದಾಚಾರದೊಂದಿಗೆ ವರ್ತಮಾನದ ಬದಕಿನ ಸವಾಲುಗಳನ್ನು ಕ್ಷಮಾಗುಣದೊಂದಿಗೆ ತಾಳ್ಮೆ ಮತ್ತು ಸಂಯಮದಿಂದ ಸುಲಭದಲ್ಲಿ ಪರಿಹರಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಸ್ವಾಮೀಜಿಯವರ ನೇತೃತ್ವದಲ್ಲಿ ಸರ್ವರೂ ಪರಸ್ಪರ ಕ್ಷಮೆ ಯಾಚಿಸಿ ಎಲ್ಲರಿಗೂ ಶುಭ ಹಾರೈಸಿ ಕ್ಷಮಾವಳಿ ಆಚರಿಸಿದರು. ಧಾರ್ಮಿಕ ಉಪನ್ಯಾಸ ನೀಡಿದ ಮೂಡಬಿದ್ರೆ ಜೈನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಪ್ರಭಾತ್ ಬಲ್ನಾಡ್, ಜೈನ ಧರ್ಮ ಅತ್ಯಂತ ಪ್ರಾಚೀನ ಧರ್ಮವಾಗಿದ್ದು, ವೇದಗಳ ಕಾಲದಲ್ಲಿಯೂ ಆಚರಣೆಯಲ್ಲಿತ್ತು. ಕರ್ಮಸಿದ್ಧಾಂತದ ಪ್ರಕಾರ ನಾವು ಮಾಡಿದ ಕರ್ಮವನ್ನು ಅನುಭವಿಸಲೇಬೇಕು. ಆಧ್ಯಾತ್ಮಿಕ ಚಿಂತನೆಯೊಂದಿಗೆ ಜಪ-ತಪ, ನೋಂಪಿ, ಆರಾಧನೆ ಮಾಡಿ ಪಂಚಾಣುವೃತಗಳ ಪಾಲನೆಯೊಂದಿಗೆ ಸರಳ ಜೀವನ ನಡೆಸಿ ಧರ್ಮದ ಅನುಷ್ಠಾನ ಮಾಡಬೇಕು. ದಾನ-ಧರ್ಮಾದಿ ಸತ್ಕಾರ್ಯಗಳಿಂದ ಆತ್ಮನಿಂಗಟಿದ ಕರ್ಮದ ಕೊಳೆಯನ್ನು ಕಳೆದಾಗ ಆತ್ಮನೇ ಪರಮಾತ್ಮನಾಗಿ ಮೋಕ್ಷ ಪ್ರಾಪ್ತಿ ಸಾಧ್ಯವಾಗುತ್ತದೆ ಎಂದು ಹೇಳಿದರು. ಕ್ಷಮಾಗುಣ ನಮ್ಮ ದೌರ್ಬಲ್ಯ ಅಲ್ಲ, ವೀರರಿಗೆ ಭೂಷಣವಾಗಿದೆ. ಸಂಯಮದೊಂದಿಗೆ ದೈನಂದಿನ ವ್ಯವಹಾರದಲ್ಲಿ ಕ್ಷಮಾ ಧರ್ಮ ಪಾಲನೆ ಮಾಡಿದರೆ ಸುಖ-ಶಾಂತಿ, ನೆಮ್ಮದಿಯ ಜೀವನ ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿ ಪ್ರವೀಣ್ ಕುಮಾರ್ ಇಂದ್ರ ಸ್ವಾಗತಿಸಿದರು. ಅಶ್ವಿನಿ ಪ್ರವೀಣ್ ಕುಮಾರ್ ಇಂದ್ರ ಧನ್ಯವಾದವಿತ್ತರು. ಮಹಾವೀರ ಜೈನ್ ಮೂಡುಕೋಡಿಗುತ್ತು ಕಾರ್ಯಕ್ರಮ ನಿರ್ವಹಿಸಿದರು. ಡಾ. ವರ್ಷಾ ಮತ್ತು ಸತ್ಯಪ್ರಸಾದ್ ವಿ. ಜೈನ್ ಸಮಾರಂಭದ ಪ್ರಾಯೋಜಕರಾಗಿ ಸಹಕರಿಸಿದರು.

ದಶಲಕ್ಷಣ ಪರ್ವಾಚರಣೆ ಮತ್ತು ಸಮಾಜ ಸಂಪರ್ಕ ಸಭೆ

Article Image

ದಶಲಕ್ಷಣ ಪರ್ವಾಚರಣೆ ಮತ್ತು ಸಮಾಜ ಸಂಪರ್ಕ ಸಭೆ

‘ಬ್ರಹ್ಮ’ವೆಂದರೆ ‘ಆತ್ಮ’ ಮತ್ತು ‘ಚರ್ಯ’ ಎಂದರೆ ‘ಪಾಲನೆ’ ಎಂದರ್ಥ. ಆತ್ಮನಲ್ಲಿ ಲೀನವಾಗಿ ಕಾಮಾದಿ ವಿಕಾರಗಳನ್ನು ತೊರೆದು ಆತ್ಮನ ನೈಜ ಗುಣಗಳನ್ನು ಅರಿತು ಆತ್ಮೋನ್ನತಿಯನ್ನು ಸಾಧಿಸುವುದೇ ಬ್ರಹ್ಮಚರ್ಯ ಧರ್ಮವಾಗಿದ್ದು, ಕಾರ್ಯ-ವಚನ ಆಲೋಚನೆಗಳಲ್ಲಿ ಬ್ರಹ್ಮಚರ್ಯ ಪಾಲನೆಯಿಂದ ಪರಿಶುದ್ಧ ಜೀವನ ನಡೆಸಲು ಸಾಧ್ಯವೆಂದು ವಸಂತಮಾಲಾ ದೇಸಾಯಿ ಹೇಳಿದರು. ಅವರು ಗದಗ ಜಿಲ್ಲಾ ದಿಗಂಬರ ಜೈನ ಸಂಘವು ‘ದಶಲಕ್ಷಣ ಪರ್ವಾಚರಣೆ ಮತ್ತು ಸಮಾಜ ಸಂಪರ್ಕ ಸಭೆ’ ನಿಮಿತ್ತ ಸಂಘದ ಕಾರ್ಯಾಲಯದಲ್ಲಿ ಮಹಿಳಾ ಮಂಡಳದ ಸಹಯೋಗದಲ್ಲಿ ಆಯೋಜಿಸಿದ್ದ ‘ಉತ್ತಮ ಬ್ರಹ್ಮಚರ್ಯ ಧರ್ಮ’ ಕುರಿತು ಉಪನ್ಯಾಸ ಮಾಡುತ್ತ, ಆತ್ಮವು ಪರಿಶುದ್ಧ, ಪ್ರಬುದ್ಧ, ಶಾಶ್ವತ, ಆನಂದಯಮವಾಗಿದ್ದು, ಆತ್ಮನ ನಿಜವಾದ ಗುಣವನ್ನು ತಿಳಿಯುವುದರಿಂದ ಬದುಕು ಸುಂದರವಾಗುತ್ತದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಶೋಭಕ್ಕ ಇಂಚಲ ಅವರು ಮಹಿಳೆಯನ್ನು ರಕ್ಷಿಸುವ ಅಭೇದ್ಯ ಬೇಲಿ ಅವಳ ಬ್ರಹ್ಮಚರ್ಯದ ಸದ್ಗುಣವಾಗಿದ್ದು, ಬೇರೆ ಯಾವುದೇ ಬೇಲಿಯೂ ಅವಳನ್ನು ರಕ್ಷಿಸಲು ಸಾಧ್ಯವಿಲ್ಲವೆಂದು ಹೇಳಿದರು. ಕಾರ್ಯಕ್ರಮದಲ್ಲಿ ಅಪ್ಪಣ್ಣ ಹಂಜೆ, ಪಿ.ಎ. ಕುಲಕರ್ಣಿ, ಯಶವಂತ ಸಿದ್ದಣ್ಣವರ, ಪ್ರಕಾಶ ಮುತ್ತಿನ, ಸಂಕಪ್ಪ ನಾವಳ್ಳಿ, ಸಂಜಯ ಪಾಂಡ್ರೆ, ಎಚ್.ಎ. ಕುಲಕರ್ಣಿ, ಸುಭಾಸ ಅಂಗಡಿ, ಪರಿಮಳಾ ಕುಲಕರ್ಣಿ, ಸಹನಾ ಹಂಜೆ, ಪದ್ಮಾವತಿ ತುಕೋಳ, ಸುಕನ್ಯಾ ಕುಲಕರ್ಣಿ, ಸುಪ್ರೀಯಾ ಪಾಂಡ್ರೆ ಸೇರಿದಂತೆ ಸ್ಥಳೀಯ ಶ್ರಾವಕರು, ಶ್ರಾವಿಕೆಯರು ಪಾಲ್ಗೊಂಡಿದ್ದರು. ಮಧುಮತಿ ಕಬ್ಬಿಣ ಭಕ್ತಿಗೀತೆ ಹಾಡಿದರು. ಸುಮನ ಮುತ್ತಿನ ನಿರೂಪಣೆ ಮತ್ತು ಸುಪ್ರೀಯಾ ನಾವಳ್ಳಿ ವಂದನಾರ್ಪಣೆಗೈದರು.

ನಾರಾವಿ : ಶ್ರೀ ಅನಂತ ನೋಂಪಿ ಆರಾಧನಾ ಪೂಜಾ ವಿಧಾನ

Article Image

ನಾರಾವಿ : ಶ್ರೀ ಅನಂತ ನೋಂಪಿ ಆರಾಧನಾ ಪೂಜಾ ವಿಧಾನ

ನಾರಾವಿ ಮಾಗಣೆ ಭ। ೧೦೦೮ ಶ್ರೀ ಧರ್ಮನಾಥ ಸ್ವಾಮಿ ಬಸದಿಯಲ್ಲಿ ಕಾರ್ಕಳ ದಾನಶಾಲೆ ಶ್ರೀ ಜೈನ ಮಠದ, ಪರಮ ಪೂಜ್ಯ ರಾಜಯೋಗಿ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನಿಧ್ಯ ಮತ್ತು ಆಶೀರ್ವಚನದೊಂದಿಗೆ ದಿನಾಂಕ 5-9-2025ನೇ ಶುಕ್ರವಾರದಿಂದ 7-9-2025ನೇ ಆದಿತ್ಯವಾರದ ಪರ್ಯಂತ 14ನೇ ವರ್ಷದ ಶ್ರೀ ಅನಂತ ನೋಂಪಿ ಆರಾಧನಾ ಪೂಜಾ ವಿಧಾನವು ಜರಗಲಿರುವುದು. ಕಾರ್ಯಕ್ರಮ : 1. ದಿನಾಂಕ 5-9-2025ನೇ ಶುಕ್ರವಾರ, ಅನಂತ ತ್ರಯೋದಶಿ, ಬೆಳಿಗ್ಗೆ ಗಂಟೆ 8.00ರಿಂದ ಜಿನಾಭಿಷೇಕದೊಂದಿಗೆ ಆರಾಧನಾ ಪೂಜಾ ಆರಂಭ. 2. ದಿನಾಂಕ 6-9-2025ನೇ ಶನಿವಾರ, ಅನಂತ ಚತುರ್ದಶಿ, ಬೆಳಿಗ್ಗೆ ಗಂಟೆ 8.00ರಿಂದ ಜಿನಾಭಿಷೇಕದೊಂದಿಗೆ ಆರಾಧನಾ ಪೂಜಾ ಆರಂಭ. ಮಧ್ಯಾಹ್ನ 1.00 ಗಂಟೆಗ ಮಹಾ ಅರ್ಥ್ಯ ಮತ್ತು ಜಿನ ಚೈತ್ಯಾಲಯಗಳಿಗೆ ಆರತಿ. 3. ದಿನಾಂಕ 7-9-2025ನೇ ಆದಿತ್ಯವಾರ, ಅನಂತ ಹುಣ್ಣಿಮೆ, ಬೆಳಿಗ್ಗೆ ಗಂಟೆ 8.00ರಿಂದ ಪರಮ ಪೂಜ್ಯ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿಯವರ ಉಪಸ್ಥಿತಿಯೊಂದಿಗೆ ಆರಾಧನಾ ಪೂಜಾ ವಿಧಾನ ಆರಂಭ. ವಿ.ಸೂ.: * ದಿನಾಂಕ 6-9-2025 ಮತ್ತು 7-9-2025ರಂದು ಸರ್ವೆಶ್ ಜೈನ್ ಮತ್ತು ಬಳಗ, ಮೂಡುಬಿದ್ರೆ ಇವರಿಂದ ಸಂಗೀತ ಪೂಜಾಷ್ಟಕ. * ಪ್ರತಿ ದಿನ ಮಧ್ಯಾಹ್ನ ಗಂಟೆ 1.30ಕ್ಕೆ ಕಂದಮೂಲ ರಹಿತ ಶುದ್ಧ ಭೋಜನದ ವ್ಯವಸ್ಥೆ ಇದೆ. * ದಿನಾಂಕ 7-9-2025ನೇ ಆದಿತ್ಯವಾರ “ಶ್ರೀ ಜಿನ ಪ್ರಸಾದ” ಸಮರ್ಪಣೆ ಇದೆ.

ದಶಲಕ್ಷಣ ಮಹಾಪರ್ವ: ಉತ್ತಮ ಮಾರ್ದವ

Article Image

ದಶಲಕ್ಷಣ ಮಹಾಪರ್ವ: ಉತ್ತಮ ಮಾರ್ದವ

ವೇಣೂರು: ದಶಲಕ್ಷಣ ಮಹಾಪರ್ವದ ಎರಡನೇ ದಿನದಂದು ಉತ್ತಮ ಮಾರ್ದವ ಧರ್ಮದ ಬನ್ನಿ ಉಪಾನ್ಯಾಸ ಕಾರ್ಯಕ್ರಮವು ಯಾತ್ರಿ ನಿವಾಸದಲ್ಲಿ ಆ. 29ರಂದು ನಡೆಯಿತು. ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರದಾನ ಮಂತ್ರಿಯವರ ಅಲ್ಪಸಂಖ್ಯಾತ 15 ಅಂಶಗಳ ಕಾರ್ಯಕ್ರಮ ಅನುಷ್ಠಾನದ ಜಿಲ್ಲಾ ಸಮಿತಿಯ ನಿರ್ದೇಶಕರು, ಕೆಲ್ಲಪುತ್ತಿಗೆ ಗುತ್ತು ದರೆಗುಡ್ಡೆಯ ಸುಭಾಶ್ಚಂದ್ರ ಚೌಟರವರು ಗಣ್ಯರೊಂದಿಗೆ ಸೇರಿ ಉದ್ಘಾಟಿಸಿ ಮಾತನಾಡುತ್ತಾ, ಧರ್ಮವನ್ನು ಉಳಿಸಿ, ಬೆಳೆಸಬೇಕು ಧಾರ್ಮಿಕ ಪ್ರವಚನಗಳಿಗೆ ಚಿಕ್ಕ ಮಕ್ಕಳಿಂದ ದೊಡ್ಡವರವರೆಗೆ ಕರೆದುಕೊಂಡು ಬಂದು ಧರ್ಮದ ಬಗ್ಗೆ ಇನ್ನಷ್ಟು ತಿವಳಿದುಕೊಳ್ಳುವ ಹಾಗೆ ಮಾಡಬೇಕು. ಧರ್ಮದ ಬಗ್ಗೆ ಒಲವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಭರತ್‌ರಾಜ್‌ ಜೈನ್‌ ಮುಡಾರು ಇವರು ಉತ್ತಮ ಮಾರ್ದವ ಧರ್ಮದ ಬಗ್ಗೆ ಉಪನ್ಯಾಸ ನೀಡಿದರು. ದಶಧರ್ಮಗಳು ನಮ್ಮನ್ನು ಧರ್ಮಾತ್ಮರನ್ನಾಗಿ ಮಾಡುವುದರ ಜೊತೆಗೆ ನಮ್ಮ ಆತ್ಮವನ್ನು ಕೇವಲ ಧರ್ಮಾತ್ಮರಲ್ಲಿ ಪರಮಾತ್ಮನಾಗಲು ಯೋಗ್ಯತೆ ಹೊಂದಿದೆ ಎನ್ನುವುದನ್ನು ಕೂಡ ಸೂಚಿಸುತ್ತದೆ. ಧರ್ಮಾತ್ಮನಾಗಲು ಅವಕಾಶವಿರುವುದು ಮನುಷ್ಯರಿಗೆ ಮಾತ್ರ. ನಾವೆಲ್ಲರೂ ನಮ್ಮ ಜೀವನದಲ್ಲಿ ದಶಧರ್ಮಗಳನ್ನು ಅಳವಡಿಸಿಕೊಂಡು ಪಾಲಿಸೋಣ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ದಿಗಂಬರ ತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿಯವರಾದ ವಿ. ಪ್ರವೀಣ್‌ ಕುಮಾರ್‌ ಇಂದ್ರ ಕಾರ್ಯಕ್ರಮದ ಅತಿಥೇಯರಾದ ಗುಣಪಾಲ ಅತಿಕಾರಿ ಕಡಂಬಿಲ, ಪ್ರಸನ್ನಾ ಆರ್‌. ಹೆಗ್ಡೆ, ಅರುಣ ಅಜಿತ್‌ ಕುಮಾರ್‌, ಪ್ರಿಯಕಾರಿಣಿ, ಸಂಭಾಷಿಣಿ ಉದಯ ಕುಮಾರ್‌ ಹಾಗೂ ಅಪಾರ ಸಂಖ್ಯೆಯಲ್ಲಿ ಶ್ರಾವಕ-ಶ್ರಾವಕಿಯು ಉಪಸ್ಥಿತರಿದ್ದರು. ಸಂಭಾಷಿಣಿ ಉದಯಕುಮಾರ್‌ ಪ್ರಾರ್ಥಿಸಿ, ಸಮಿತಿಯ ಕಾರ್ಯದರ್ಶಿ ವಿ. ಪ್ರವೀಣ್‌ ಕುಮಾರ್‌ ಇಂದ್ರ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸಮಿತಿಯ ಜೊತೆ ಕಾರ್ಯದರ್ಶಿ ಮಹಾವೀರ ಜೈನ ಮೂಡುಕೋಡಿಗುತ್ತುರವರು ನಿರೂಪಿಸಿ, ಧನ್ಯವಾದವಿತ್ತರು.

ಧರ್ಮಸ್ಥಳದಲ್ಲಿ ಜೈನಮಠಗಳ ಭಟ್ಟಾರಕರುಗಳಿಂದ: ಧರ್ಮ ಸಂರಕ್ಷಣಾ ಸಮಾವೇಶ

Article Image

ಧರ್ಮಸ್ಥಳದಲ್ಲಿ ಜೈನಮಠಗಳ ಭಟ್ಟಾರಕರುಗಳಿಂದ: ಧರ್ಮ ಸಂರಕ್ಷಣಾ ಸಮಾವೇಶ

ಉಜಿರೆ: ಸತ್ಯ ಮತ್ತು ಅಹಿಂಸಾ ಪರಿಪಾಲಕರಾದ ಜೈನರು ಯಾರಿಗೂ ತೊಂದರೆ ಕೊಡುವುದಿಲ್ಲ. ಆದರೆ ತೊಂದರೆ ಕೊಟ್ಟವರನ್ನು ನಾವು ಬಿಡುವುದಿಲ್ಲ ಎಂದು ತಮಿಳುನಾಡು ಅರಹಂತಗಿರಿ ಜೈನಮಠದ ಧವಳಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಎಲ್ಲಾ ಜೈನಮಠಗಳ ಭಟ್ಟಾರಕರುಗಳ ನೇತೃತ್ವದಲ್ಲಿ ಆಯೋಜಿಸಿದ ಧರ್ಮ ಸಂರಕ್ಷಣಾ ಸಮಾವೇಶದ ಉದ್ದೇಶವನ್ನು ವಿವರಿಸಿದರು. ಸತ್ಯಮೇವ ಜಯತೇ ಎನ್ನುವಂತೆ ಸತ್ಯಕ್ಕೆ ಸದಾ ಜಯವಿದೆ. ಸತ್ಯಕ್ಕೆ ಎಂದೂ ಸಾವಿಲ್ಲ. ಸತ್ಯ, ಧರ್ಮ, ನ್ಯಾಯ, ನೀತಿ ನೆಲೆ ನಿಂತ ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳದ ಶೋಭೆ ಮತ್ತು ಕೀರ್ತಿಗೆ ಎಂದೂ ಚ್ಯುತಿ ಬಾರದು ಎಂದು ಅವರು ಹೇಳಿದರು. ಶುಕ್ರವಾರ ಎಲ್ಲಾ ಭಟ್ಟಾರಕರುಗಳು ದೇವಸ್ಥಾನಕ್ಕೆ ಹೋಗಿ ಮಂಜುನಾಥ ಸ್ವಾಮಿಯ ದರ್ಶನ ಮಾಡಿ, ನ್ಯಾಯಕ್ಕಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಹೊರಗೆ ಬರುವಾಗ ದೇವಸ್ಥಾನದಲ್ಲಿ ಮಹಾಪೂಜೆಯೊಂದಿಗೆ ಘಂಟೆ ಬಾರಿಸಿತು. ಆದುದರಿಂದ ಸಣ್ಣ ಕಳಂಕ ಮಾಯವಾಯಿತು ಎಂದು ತಮಗೆ ತಿಳಿಯಿತು ಎಂದು ಸ್ವಾಮೀಜಿ ಹೇಳಿದರು. ರಾಮಚಂದ್ರ, ಸೀತೆಯ ಹಾಗೆ ಮಹಾಪುರುಷರಿಗೂ ಕಷ್ಟ, ಅಪವಾದ ಬರುತ್ತದೆ. ಹಾಗೆ ಧರ್ಮಸ್ಥಳಕ್ಕೆ ಬಂದ ಸಣ್ಣ ಕಳಂಕ ದೋಷ ಅಲ್ಲ. ಇಂದು ಸಣ್ಣ ಕಳಂಕವೂ ನಿವಾರಣೆಯಾಗಿದೆ. ಧರ್ಮಸ್ಥಳ ಹಾಗೂ ಹೆಗ್ಗಡೆಯವರಿಗೆ ನ್ಯಾಯ ಸಿಗದಿದ್ದರೆ ಎಲ್ಲಾ ಭಟ್ಟಾರಕರುಗಳು ಮುಂದೆ ವಿಧಾನಸಭೆ ಎದುರು ಪ್ರತಿಭಟನೆ ಹಾಗೂ ಉಗ್ರ ಹೋರಾಟ ನಡೆಸುವುದಾಗಿ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಹೆಗ್ಗಡೆಯವರು ಸಮಗ್ರ ಸಮಾಜದ ಚಕ್ರವರ್ತಿ. ಇಡೀ ರಾಷ್ಟ್ರದ ಮಹಾಪುರುಷ. ಅಧರ್ಮಿಗಳು ಷಡ್ಯಂತ್ರ ಹಾಗೂ ಅಸೂಯೆಯಿಂದ ಧರ್ಮಸ್ಥಳಕ್ಕೆ ಚ್ಯುತಿ ತರಲು ವಿಫಲಯತ್ನ ಮಾಡಿದ್ದಾರೆ. ಸರ್ವಧರ್ಮೀಯರ ಸಕಲ ಮಠ-ಮಂದಿರಗಳಿಗೂ ಸದಾ ನೆರವು, ಮಾರ್ಗದರ್ಶನ, ಪ್ರೋತ್ಸಾಹ ನೀಡುತ್ತಿರುವ ಹೆಗ್ಗಡೆಯವರ ಜೊತೆ ನಾವು ಸದಾ ಇದ್ದೇವೆ. ಹೆಗ್ಗಡೆಯವರು ಎಲ್ಲರಿಗೂ ಪೂಜ್ಯರು ಹಾಗೂ ಸರ್ವಮಾನ್ಯರು. ಜೈನಧರ್ಮೀಯರಾದ ಹೆಗ್ಗಡೆ ಸರ್ವಧರ್ಮೀಯರನ್ನೂ ಸಮಾನ ಪ್ರೀತಿ-ವಿಶ್ವಾಸದಿಂದ ನೋಡುತ್ತಾರೆ, ಗೌರವಿಸುತ್ತಾರೆ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು. ಅಭಿನಂದನಾ ಭಾಷಣ ಮಾಡಿದ ಖ್ಯಾತ ಸಾಹಿತಿ ನಾಡೋಜಾ ಹಂಪನಾ (ಹಂಪ ನಾಗರಾಜಯ್ಯ) ಮಾತನಾಡಿ, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಇಂದ್ರಿಯ ನಿಗ್ರಹ, ತಾಳ್ಮೆ, ಸಂಯಮ, ಗಾಭೀರ್ಯ, ಸ್ಥಿತಪ್ರಜ್ಞ ಶಕ್ತಿಯ ಪ್ರತಿಭೆ ವರ್ಣಿಸಲಸದಳವಾಗಿದೆ. ಅವರ ಮೌನದ ಶಕ್ತಿ ಮತ್ತು ಮೌಲ್ಯ ಕರ್ನಾಟಕದ ಮನೆಮಾತಾಗಿದೆ ಎಂದು ಶ್ಲಾಘಿಸಿ, ಅಭಿನಂದಿಸಿದರು. ಕಲುಷಿತ ವಾತಾವರಣದಿಂದ ಯುವಜನರ ಮನಸ್ಸು ಹಾಳಾಗಿದೆ. ಭಿನ್ನಾಭಿಪ್ರಾಯ ಬಂದಾಗ ಅದನ್ನು ಪರಿಹರಿಸುವ ಜವಾಬ್ಧಾರಿ ಹಿರಿಯರಿಗಿದೆ. ಸತ್ಯದ ಸ್ವರೂಪವನ್ನು ಅವರಿಗೆ ತಿಳಿಸಬೇಕು. ಏನೇ ಆಗಲಿ ಷಡ್ಯಂತ್ರದಿಂದ ಆದ ಸಣ್ಣ ಕಳಂಕ ನಿವಾರಣೆಯಾಗಿದೆ. ಅಗ್ನಿಪರೀಕ್ಷೆಯಲ್ಲಿ ಹೆಗ್ಗಡೆಯವರು ಉತ್ತೀರ್ಣರಾಗಿ ಸತ್ಯದ ಸಾಕ್ಷಾತ್ಕಾರವಾಗಿದೆ. ಹೆಗ್ಗಡೆಯವರ ಬೀಡಿನಲ್ಲಿ (ಮನೆಯಲ್ಲಿ), ಕುಟುಂಬದಲ್ಲಿ ಸುಖ-ಶಾಂತಿ, ನೆಮ್ಮದಿಯ ತಂಗಾಳಿ ಸದಾ ಬೀಸುತ್ತಿರಲಿ ಎಂದು ಹಂಪನಾ ಹಾರೈಸಿದರು. ಕನಕಗಿರಿ ಜೈನಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಹೆಗ್ಗಡೆಯವರು ಮಾನವ ಅಲ್ಲ, ದೇವಮಾನವ ಎಂದು ಬಣ್ಣಿಸಿದರು. ಧರ್ಮಸ್ಥಳವು ಸರ್ವಧರ್ಮೀಯರ ಮನೆಗಳನ್ನು ಹಾಗೂ ಮನಗಳನ್ನು ಬೆಳಗುವ “ನಂದಾದೀಪ”ವಾಗಿದೆ. ಅದನ್ನು ನಂದಿಸಲು ಹೋದರೆ ಧರೆಯ ಹೊತ್ತಿ ಉರಿಯಬಹುದು ಎಂದು ಭವಿಷ್ಯ ನುಡಿದರು. ಶ್ರವಣಬೆಲಗೊಳ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ ಜೈನಧರ್ಮ ಮತ್ತು ಹಿಂದೂ ಧರ್ಮ ಸಮಗ್ರ ಸಮಾಜದ ಸಂಪರ್ಕ ಸೇತುವಾಗಿದೆ. ಹಿಂದೂಗಳನ್ನು ಮತ್ತು ಜೈನರನ್ನು ಬೇರ್ಪಡಿಸಲು ಸಾಧ್ಯವಿಲ್ಲ. 800 ವರ್ಷಗಳ ಹಿಂದೆ ತಮ್ಮ ವಾಸ್ತವ್ಯದ ಮನೆಯನ್ನೆ ಧರ್ಮದೇವತೆಗಳಿಗಾಗಿ ಬಿಟ್ಟುಕೊಟ್ಟವರು ಹೆಗ್ಗಡೆ ಪರಂಪರೆಯವರು. ಇಲ್ಲಿನ ಸರ್ವಧರ್ಮ ಸಮನ್ವಯ ಹಾಗೂ ಚತುರ್ವಿದ ದಾನ ಪರಂಪರೆ ವಿಶ್ವವಿಖ್ಯಾತವಾಗಿದೆ. ಧರ್ಮ ಮತ್ತು ಧರ್ಮಸ್ಥಳದ ಸಂರಕ್ಷಣೆ ತಾವೆಲ್ಲರೂ ಹೆಗ್ಗಡೆಯವರ ಜೊತೆ ಇದ್ದೇವೆ ಎಂದು ಸ್ವಾಮೀಜಿ ಭರವಸೆ ನೀಡಿದರು. ತಮ್ಮ ಪೂರ್ವಾಶ್ರಮದಲ್ಲಿ ಉಜಿರೆಯಲ್ಲಿ ಪಿ.ಯು.ಸಿ. ವಿದ್ಯಾರ್ಥಿಯಾಗಿದ್ದಾಗ ಸಿದ್ಧವನ ಗುರುಕುಲ ಹಾಗೂ ಪದವಿಪೂರ್ವ ಕಾಲೇಜು ಶಿಕ್ಷಣ ಹಾಗೂ ಸ್ವಯಂ ಸೇವಕನಾಗಿ ಕರ್ತವ್ಯ ನಿರ್ವಹಿಸಿರುವುದನ್ನು ಸ್ವಾಮೀಜಿ ಧನ್ಯತೆಯಿಂದ ಸ್ಮರಿಸಿದರು. ಹೊಂಬುಜ ಜೈನಮಠದ ಪೂಜ್ಯ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ ಧರ್ಮ, ಸಂಸ್ಕೃತಿ ಮತ್ತು ಸಂಸ್ಕಾರ ಸಂರಕ್ಷಣೆಗಾಗಿ ಧರ್ಮಸ್ಥಳದ ವತಿಯಿಂದ ಮಾಡುತ್ತಿರುವ ಸೇವಾಕಾರ್ಯ ವಿಶ್ವಮಾನ್ಯವಾಗಿದೆ. ಹಳ್ಳಿಯಿಂದ ದಿಲ್ಲಿಯವರೆಗೆ ಮಾಡಿದ ಗ್ರಾಮಾಭಿವೃದ್ಧಿ ಯೋಜನೆ, ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಆರೋಗ್ಯ, ಶಿಕ್ಷಣ ಮತ್ತು ಇತರ ಬಹುಮುಖ ಸೇವಾ ಕಾರ್ಯಗಳು ಸಾರ್ವಕಾಲಿಕ ಮೌಲ್ಯ ಹೊಂದಿವೆ ಎಂದರು. ದೂರುದಾರನ ಸುಳ್ಳು ಮಾತು ಕೇಳಿ ತೆಗೆಸಿದ ಹೊಂಡಗಳಲ್ಲಿ ಗಿಡಗಳನ್ನಾದರೂ ನೆಡಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು. ಸೋಂದಾ ಮಠದ ಭಟ್ಟಾಕಳಂಕ ಸ್ವಮೀಜಿ ಮಾತನಾಡಿ, ಸತ್ಯವು ಸದಾ ಪರಿಶುದ್ಧವಾಗಿರುತ್ತದೆ. ಜೈನರು ಹಾಗೂ ಜೈನಧರ್ಮದ ಬಗ್ಗೆ ಎಂದೂ ಅವಹೇಳನ ಸಲ್ಲದು ಎಂದರು. ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಧರ್ಮದಲ್ಲಿ ರಾಜಕೀಯ ಮಾಡಬಾರದು. ರಾಜಕೀಯದಲ್ಲಿ ಧರ್ಮ ಇರಬೇಕು ಎಂದು ಕಿವಿಮಾತು ಹೇಳಿದರು. ತಮಗೆ ಸ್ವಾಮೀಜಿ ಆಗಿ ಪಟ್ಟಾಭಿಷೇಕ ಆಗುವಾಗ “ಅಪೇಕ್ಷೆ ಪಡಬೇಡಿ, ಉಪೇಕ್ಷೆ ಮಾಡಬೇಡಿ” ಎಂದು ಹೆಗ್ಗಡೆಯವರು ಹೇಳಿದ ಕಿವಿಮಾತನ್ನು ಸ್ವಾಮೀಜಿ ಧನ್ಯತೆಯಿಂದ ಸ್ಮರಿಸಿದರು. ನಮ್ಮ ಸನಾತನ ಧರ್ಮ ಯಾವುದೇ ಜಾತಿ, ಮತಕ್ಕೆ ಸೀಮಿತವಲ್ಲ. ಧರ್ಮಸ್ಥಳದ ಬಗ್ಯೆ ಅಸೂಯೆಯಿಂದ ಅಪಪ್ರಚಾರ ಮಾಡುವವರು “ಮಾನಸಿಕ ಭಯೋತ್ಪಾದಕರು” ಎಂದು ಸ್ವಾಮೀಜಿ ಬಣ್ಣಿಸಿದರು. ಕಾರ್ಕಳ ಜೈನಮಠದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ರಾಜಸ್ಥಾನದ ತಿಜಾರ ಮಠದ ಸೌರಭಸೇನ ಭಟ್ಟಾರಕ ಸ್ವಾಮೀಜಿ, ಲಕ್ಕವಳ್ಳಿ ಜೈನಮಠದ ವೃಷಭಸೇನ ಭಟ್ಟಾರಕ ಸ್ವಾಮೀಜಿ, ಕಂಬದಹಳ್ಳಿ ಜೈನಮಠದ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ವರೂರು ಜೈನಮಠದ ಧರ್ಮಸೇನ ಭಟ್ಟಾರಕ ಸ್ವಾಮೀಜಿ ಶುಭ ಹಾರೈಸಿ ಧರ್ಮಸ್ಥಳ ಹಾಗೂ ಹೆಗ್ಗಡೆಯವರ ಜೊತೆ ಸದಾ ತಾವೆಲ್ಲರೂ ಸೇವೆಗೆ ಬದ್ಧರಾಗಿದ್ದೇವೆ ಎಂದು ಭರವಸೆ ನೀಡಿದರು. ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಭಾದ್ರಪದ ಮಾಸದಲ್ಲಿ ದಶಲಕ್ಷಣ ಪರ್ವ ಆಚರಣೆಯ ಶುಭಾವಸರದಲ್ಲಿ ಎಲ್ಲಾ ಮಠಾಧೀಶರುಗಳ ದರ್ಶನ ಭಾಗ್ಯ ಲಭಿಸಿರುವುದು ಅತೀವ ಸಂತಸವಾಗಿದೆ ಎಂದರು. ಸತ್ಯ, ಅಹಿಂಸೆ, ತ್ಯಾಗ, ಬ್ರಹ್ಮಚರ್ಯ ಇತ್ಯಾದಿ ದಶಧರ್ಮಗಳನ್ನು ಜೈನರು ನಿತ್ಯವೂ ಪಾಲಿಸುತ್ತಾರೆ. ಇಂತಹ ಪವಿತ್ರಪರ್ವದ ಸಂದರ್ಭದಲ್ಲಿ ಎಲ್ಲಾ ಭಟ್ಟಾರಕರುಗಳು ತಮಗೆ ಹಾಗೂ ಧರ್ಮಸ್ಥಳಕ್ಕೆ ಬೆಂಬಲ ನೀಡಿ, ನಿಮ್ಮ ಜೊತೆ ಸದಾ ಇದ್ದೇವೆ ಎಂದು ಭರವಸೆ ನೀಡಿರುವುದು ತಮಗೆ ಹೆಚ್ಚಿನ ಉತ್ಸಾಹ ಮತ್ತು ಪ್ರೇರಣೆ ನೀಡಿದೆ ಎಂದು ಹೆಗ್ಗಡೆಯವರು ಸಂತಸ ವ್ಯಕ್ತಪಡಿಸಿದರು. ತತ್ವ, ಸಿದ್ಧಾಂತ, ಧರ್ಮ ಇರುವುದು ಕೇವಲ ಓದಲು, ಉಪದೇಶಕ್ಕೆ ಮಾತ್ರ ಅಲ್ಲ. ಅದನ್ನು ನಾವು ನಿತ್ಯವೂ ಪಾಲಿಸಬೇಕು. “ಸಮ್ಯಕ್‌ದರ್ಶನ, ಜ್ಞಾನ ಚಾರಿತ್ರಾಣಿ ಮೋಕ್ಷ ಮಾರ್ಗಃ” ಎಂಬುದು ಜೈನ ಧರ್ಮದ ಸಾರವಾಗಿದೆ. ಅಂದರೆ ಸರಿಯಾದ ತತ್ವ ಸಿದ್ಧಾಂತಗಳ ಬಗ್ಯೆ ನಂಬಿಕೆ, ತಿಳುವಳಿಕೆ (ಜ್ಞಾನ) ಮತ್ತು ಆಚರಣೆಯಿಂದ ಮೋಕ್ಷಪ್ರಾಪ್ತಿಯಾಗುತ್ತದೆ ಎಂಬುದು ಜೈನ ಸಿದ್ಧಾಂತವಾಗಿದೆ. ಇದರ ಪ್ರತೀಕವಾಗಿ ಮೂರು ಎಳೆಗಳಿರುವ ಜನಿವಾರ (ಯಜ್ಞೋಪವೀತ) ವನ್ನು ಜೈನರು ಧರಿಸುತ್ತಾರೆ. ಇಂತಹ ಸಾತ್ವಿಕ ಹಾಗೂ ನೈತಿಕ ಜೀವನದಿಂದ ಸುಖ-ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಹೇಳಿ ಹೆಗ್ಗಡೆಯವರು ಎಲ್ಲಾ ಭಟ್ಟಾರಕರುಗಳಿಗೆ ಕೃತಜ್ಞತೆ ವ್ಯಕ್ತಪಡಿಸಿದರು. ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಅನಿತಾಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರೀಯಾ ಹರ್ಷೇಂದ್ರ ಕುಮಾರ್, ಶ್ರದ್ಧಾಅಮಿತ್, ಮತ್ತು ಸೋನಿಯಾವರ್ಮ ಉಪಸ್ಥಿತರಿದ್ದರು.

ದಶಲಕ್ಷಣ ಮಹಾಪರ್ವ ಆಚರಣೆ- ಉದ್ಘಾಟಣಾ ಸಮಾರಂಭ

Article Image

ದಶಲಕ್ಷಣ ಮಹಾಪರ್ವ ಆಚರಣೆ- ಉದ್ಘಾಟಣಾ ಸಮಾರಂಭ

ವೇಣೂರು: ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ವತಿಯಿಂದ ಪ್ರತಿವರ್ಷ ನಡೆಯುವ ದಶಲಕ್ಷಣ ಮಹಾಪರ್ವ ಆಚರಣೆಯ ಉದ್ಘಾಟನಾ ಸಮಾರಂಭವು ಆ. 28ರಂದು ನಡೆಯಿತು. ಉದ್ಘಾಟನೆಯನ್ನು ಅಳದಂಗಡಿ ಅರಮನೆಯ ಮಧುರಾ ಪಿ. ಅಜಿಲರವರು ನೆರವೇರಿಸಿದರು. ಮೂಡುಬಿದಿರೆ ಶ್ರೀ ಜೈನ ಮಠದ ಪ.ಪೂ. ಸ್ವಸಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಪಾವನ ಸಾನ್ನಿಧ್ಯ ವಹಿಸಿ ದಶಲಕ್ಷಣ ಮಹಾಪರ್ವದ ಮೊದಲನೇ ದಿನದ ಉತ್ತಮ ಕ್ಷಮಾ ಧರ್ಮದ ಬಗ್ಗೆ ಪ್ರವಚನ ನೀಡುತ್ತಾ, ನಾವು ನಮ್ಮ ಜೀವನದಲ್ಲಿ ಕ್ಷಮಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಕ್ರೋಧವನ್ನು ನಿಗ್ರಹಿಸಿಕೊಳ್ಳಬೇಕು. ಕ್ಷಮಿಸುವ ಗುಣ ದೇವರಗುಣ. ಮನುಷ್ಯನ ಸ್ವಭಾವಗಳಲ್ಲಿ ಕ್ರೋಧವು ಕೂಡ ಒಂದು. ಸಿಟ್ಟು ಬಾರದಿರುವ ಹಾಗೆ ಪ್ರಯತ್ನಿಸೋಣ ಎಂದು ಹೇಳಿದರು. ಸಭಾಧ್ಯಕ್ಷತೆಯನ್ನು ವಹಿಸಿದ್ದ ಶ್ರೀಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಉಪಾಧ್ಯಕ್ಷರು, ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್‌ ಅಜಿಲರು, ಹಬ್ಬಗಳ ರಾಜ, ದಶಲಕ್ಷಣ ಪರ್ವ, ಆತ್ಮಶುದ್ಧೀಕರಣದ ಪವಿತ್ರ ಹಬ್ಬವೇ ದಶಲಕ್ಷಣ ಮಹಾಪರ್ವ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಅಳದಂಗಡಿ ಅರಮನೆಯ ಶಿವಪ್ರಸಾದ ಅಜಿಲರು ಆಗಮಿಸಿ, ಶುಭಹಾರೈಸಿದರು. ಈ ಸಂದರ್ಭದಲ್ಲಿ ಮೂಡುಬಿದಿರೆಯ ಸಂಜಯಂತ್‌ ಕುಮಾರ್‌ ಶೆಟ್ಟಿ, ಶಂಭವ ಕುಮಾರ್‌, ಸುದೇಶ್‌ ಕುಮಾರ್‌ ಮತ್ತಿತರ ಗಣ್ಯರು ಸೇರಿದಂತೆ ಶ್ರಾವಕ-ಶ್ರಾವಕಿಯರು ಪಾಲ್ಗೊಂಡಿದ್ದರು. ಸಮಿತಿಯ ಪ್ರದಾನ ಕಾರ್ಯದರ್ಶಿ ವಿ. ಪ್ರವೀಣ್‌ ಕುಮಾರ್‌ ಇಂದ್ರರವರು ಸ್ವಾಗತಿಸಿದರು. ಅಳದಂಗಡಿ ಅರಮನೆ ಶಿವಪ್ರಸಾದ್‌ ಅಜಿಲರು ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮವನ್ನು ಸಮಿತಿಯ ಜೊತೆ ಕಾರ್ಯದರ್ಶಿ ಮಹಾವೀರ್‌ ಜೈನ್‌ ಮೂಡುಕೋಡಿರವರು ನಿರೂಪಿಸಿದರು.

ವೇಣೂರು: ನವೀಕೃತ ಶ್ರೀ ಬಾಹುಬಲಿ ಸಭಾಭವನದ ಉದ್ಘಾಟನೆ

Article Image

ವೇಣೂರು: ನವೀಕೃತ ಶ್ರೀ ಬಾಹುಬಲಿ ಸಭಾಭವನದ ಉದ್ಘಾಟನೆ

2000ನೇ ಇಸವಿಯಲ್ಲಿ ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಸಂದಭ೯ದಲ್ಲಿ ಶ್ರೀ ಬಾಹುಬಲಿ ಸಭಾಭವನವನ್ನು ನಿಮಾ೯ಣ ಮಾಡಿ ಲೋಕಾಪ೯ಣೆ ಮಾಡಲಾಗಿತ್ತು. ಈಗ ಈ ಸಭಾಭವನದ ವ್ಯವಸ್ಥೆಯನ್ನು ಇನ್ನಷ್ಟು ಉನ್ನತೀಕರಿಸಿ ಆಧುನಿಕವಾಗಿ ನವೀಕರಿಸಲಾಗಿದೆ. ದಿನಾಂಕ 22.08.2025ನೇ ಶ್ರಾವಣ ಶುಕ್ರವಾರದ ಶುಭ ಸಂದಭ೯ದಲ್ಲಿ ಶ್ರೀ ಬಾಹುಬಲಿ ಸಭಾಭವನದ ಉದ್ಘಾಟನೆಯನ್ನು ಮೂಡುಬಿದ್ರಿ ಶ್ರೀ ಜೈನ ಮಠದ ಪರಮ ಪೂಜ್ಯ ,"ಭಾರತಭೂಷಣ" ಡಾ|ಸ್ವಸ್ತಿಶ್ರೀ ಚಾರುಕೀತಿ೯ ಪಂಡಿತಾಚಾಯ೯ವಯ೯ ಮಹಾಸ್ವಾಮೀಜಿಯವರ ಪಾವನ ಸಾನ್ನಿಧ್ಯದಲ್ಲಿ, ಶ್ರೀ ದಿಗಂಬರ ಜೈನ ತೀಥ೯ಕ್ಷೇತ್ರ ಸಮಿತಿಯ ಉಪಾಧ್ಯಕ್ಷರಾದ ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ|ಪದ್ಮಪ್ರಸಾದ್‌ ಅಜಿಲರ ಉಪಸ್ಥಿತಿಯಲ್ಲಿ, ಕನಾ೯ಟಕ ಸರಕಾರದ ಮಾಜಿ ಸಚಿವರಾದ ಕೆ.ಅಭಯಚಂದ್ರ ಜೈನ್‌ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ಈ ಸಂದಭ೯ದಲ್ಲಿ ಬೆಳ್ಳಿಬೀಡು ಬಸದಿಯ ಅನುವಂಶಿಕ ಆಡಳಿತ ಮೊಕ್ತೇಸರರಾದ ಕೆ. ಹೇಮರಾಜ್‌ ಬೆಳ್ಳಿಬೀಡು, ಶ್ರೀ ದಿಗಂಬರ ಜೈನ ತೀಥ೯ಕ್ಷೇತ್ರ ಸಮಿತಿಯ ಕಾಯ೯ದಶಿ೯ಗಳಾದ ವಿ.ಪ್ರವೀಣ್‌ ಕುಮಾರ್‌ ಇಂದ್ರ ಕೋಶಾಧಿಕಾರಿಗಳಾದ ಪಿ. ಜಯರಾಜ್‌ ಕಂಬ್ಳಿ, ಜತೆ ಕಾಯ೯ದಶಿ೯ಗಳಾದ ಮಹಾವೀರ್‌ ಜೈನ್‌ ಮೂಡುಕೋಡಿ, ಕಾಯ೯ಕಾರಿ ಸಮಿತಿಯ ಸದಸ್ಯರುಗಳಾದ ಬಿ.ರತ್ನವಮ೯ ಇಂದ್ರ, ಪ್ರವೀಣ್‌ ಅಜ್ರಿ, ಸುರೇಶ್‌ ಕುಮಾರ್‌ ಆರಿಗ, ಭರತ್‌ ಕುಮಾರ್‌ ಆರಿಗ, ಶಮಿ೯ತ್‌ ಕುಮಾರ್‌ ಹಾಗೂ ಹಿರಿಯ ಶ್ರಾವಕಿಯಾದ ಗುಣವತಿ ಎ. ಆಳ್ವ ಮತ್ತು ರಾಜ್ಯ ಜೈನ ಮಹಿಳಾ ಒಕ್ಕೂಟದ ನಿದೇ೯ಶಕಿಯಾದ ಸರೋಜಾ ಜಿ.ಜೈನ್‌, ಪುರೋಹಿತ ಸಚಿನ್‌ ಇಂದ್ರ ಮತ್ತಿತರರು ಉಪಸ್ಥಿತರಿದ್ದರು.

ವೇಣೂರು: ದಶಲಕ್ಷಣ ಮಹಾಪರ್ವ ಆಚರಣೆ

Article Image

ವೇಣೂರು: ದಶಲಕ್ಷಣ ಮಹಾಪರ್ವ ಆಚರಣೆ

ಬೆಳ್ತಂಗಡಿ ತಾಲೂಕಿನ ವೇಣೂರಿನ ಶ್ರೀ ದಿಗಂಬರ ಜೈನ ತೀರ್ಥ ಸಮಿತಿ (ರಿ.) ವತಿಯಿಂದ ಇತಿಹಾಸ ಪ್ರಸಿದ್ಧ ಭ| ಶ್ರೀ ಬಾಹುಬಲಿ ಕ್ಷೇತ್ರದಲ್ಲಿ ಪರಮಪೂಜ್ಯ 'ಭಾರತಭೂಷಣ' ಜಗದ್ಗುರು ಡಾ| ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು, ಶ್ರೀ ದಿಗಂಬರ ಜೈನ ಮಠ ಮೂಡುಬಿದಿರೆ ಇವರ ದಿವ್ಯ ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ಸಮಿತಿಯ ಅಧ್ಯಕ್ಷರಾದ ಪದ್ಮವಿಭೂಷಣ ರಾಜರ್ಷಿ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರು, ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಇವರ ಪ್ರೇರಣೆ ಹಾಗೂ ಸಮಿತಿಯ ಉಪಾಧ್ಯಕ್ಷರಾದ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು, ಅಳದಂಗಡಿ ಅರಮನೆ ಇವರ ನೇತೃತ್ವದಲ್ಲಿ ಇಂದಿನಿಂದ ಮೊದಲ್ಗೊಂಡು ತಾ. 06-09-2025ನೇ ಶನಿವಾರದವರೆಗೆ ಪ್ರತಿದಿನ ಅಪರಾಹ್ನ ಗಂಟೆ 4-30ರಿಂದ 6-00ರ ವರೆಗೆ ದಶಲಕ್ಷಣ ಮಹಾಪರ್ವ ಆಚರಣೆಯು ಜರುಗಲಿದೆ. ವಿ.ಸೂ: ಪ್ರತೀ ದಿನ ಅಪರಾಹ್ನ ಗಂಟೆ 4-00ರಿಂದ ವೇಣೂರು ಬಸದಿ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಗೆ ಕ್ಷೀರಾಭಿಷೇಕ ಯಾತ್ರಿ ನಿವಾಸದಲ್ಲಿ ಉಪನ್ಯಾಸ ಕಾರ್ಯಕ್ರಮಗಳು ಇರುತ್ತದೆ.

ಗುರುವಂದನಾ ಕಾರ್ಯಕ್ರಮ

Article Image

ಗುರುವಂದನಾ ಕಾರ್ಯಕ್ರಮ

ಮೂಡುಬಿದಿರೆ: ಪ.ಪೂ. ಆಚಾರ್ಯ 108 ಗುಲಾಬು ಭೂಷಣ ಮುನಿಮಹಾರಾಜರ ಪಾವನ ಸಾನ್ನಿಧ್ಯದಲ್ಲಿ ದಶಲಕ್ಷಣ ಮಹಾಪರ್ವ ಆಚರಣೆ ಹಾಗೂ ಮೂಡುಬಿದಿರೆ ಶ್ರೀ ಜೈನ ಮಠದ ಪ.ಪೂ. "ಭಾರತಭೂಷಣ" ಜಗದ್ಗುರು ಡಾ| ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಸ್ವಾಮೀಜಿಗಳವರ ಪಟ್ಟಾಭಿಷೇಕ ವರ್ಧಂತಿ ರಜತ ಮಹೋತ್ಸವದ ಪ್ರಯುಕ್ತ ಗುರುವಂದನಾ ಕಾರ್ಯಕ್ರಮವು ದಿನಾಂಕ: 29-08-2025ನೇ ಶುಕ್ರವಾರ 1000 ಕಂಬದ ಬಸದಿ ಆವರಣದಲ್ಲಿ ಜರಗಲಿರುವುದು.

ಜೈನ ವಧು-ವರರ ರಾಜ್ಯಮಟ್ಟದ ಸಮಾವೇಶ

Article Image

ಜೈನ ವಧು-ವರರ ರಾಜ್ಯಮಟ್ಟದ ಸಮಾವೇಶ

ಚಿಗುರು ಆಲ್ ಇಂಡಿಯಾ ವಧು-ವರರ ವೇದಿಕೆಯ ಆಶ್ರಯದಲ್ಲಿ ವಿದ್ಯಾಗಿರಿಯ ಆಳ್ವಾಸ್‌ ನುಡಿಸಿರಿ ವೇದಿಕೆಯಲ್ಲಿ ಭಾನುವಾರ ಸಂಪರ್ಕ-ಪರಿಚಯ ರಾಜ್ಯಮಟ್ಟದ ಜೈನ ವಧು ವರರ ಸಮಾವೇಶ ನಡೆಯಿತು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್‌ ಸಮಾವೇಶವನ್ನು ಉದ್ಘಾಟಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ ಮೋಹನ ಆಳ್ವ ಅವರು ವೆಬ್‌ಸೈಟ್ ಅನಾವರಣಗೊಳಿಸಿದರು. ಸುಭಾಶ್ಚಂದ್ರ ಚೌಟ ಅಧ್ಯಕ್ಷತೆ ವಹಿಸಿದರು. ಸಂಚಾಲಕ ಸಂಪತ್ ಜೈನ್ ಹೊಸ್ಕಾರ್ ಪ್ರಸ್ತಾವನೆಗೈದರು. ಜೈನ ಸಮುದಾಯದ ಪ್ರಮುಖರಾದ ಸಂಪತ್‌ ಶಿಮುಂಜೆಗುತ್ತು, ಭುಜಬಲಿ ಧರ್ಮಸ್ಥಳ, ಪೂರ್ಣಚಂದ್ರ ಜೈನ್‌, ವಿಜಯ ಕುಮಾ‌ರ್‌ ಜೈನ್ ನೂರಾಳ್‌ಬೆಟ್ಟು, ರಕ್ಷಿತ್ ಜೈನ್ ಬಡೆಕಾವುಗುತ್ತು, ಪ್ರಭಾತ್ ಬಲ್ನಾಡ್, ನೇಮಿರಾಜ್ ಅರಿಗ, ಜಿನೇಂದ್ರ ಜೈನ್ ಈದು, ಮಹೇಂದ್ರ ಜೈನ್‌, ಕೆ.ಸಿ. ಧರಣೇಂದ್ರಯ್ಯ, ಜ್ವಾಲ ಪ್ರಸಾದ್, ಆಮಂತ್ರಣ ವೇದಿಕೆ ಜಿಲ್ಲಾ ಉಪಾಧ್ಯಕ್ಷೆ ಅನಿತಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಜರ್ಮನ್ ಆಗಿದ್ದರೂ ಜೈನ ಧರ್ಮ ಪಾಲನೆ ಮಾಡುತ್ತಿರುವ ಖ್ಯಾತ ವಿದ್ವಾಂಸ ಹರ್ಮನ್

Article Image

ಜರ್ಮನ್ ಆಗಿದ್ದರೂ ಜೈನ ಧರ್ಮ ಪಾಲನೆ ಮಾಡುತ್ತಿರುವ ಖ್ಯಾತ ವಿದ್ವಾಂಸ ಹರ್ಮನ್

ಜರ್ಮನ್ ಆಗಿದ್ದರೂ ಜೈನ ಧರ್ಮ ಪಾಲನೆ ಮಾಡುತ್ತಿರುವ ಹರ್ಮನ್ ರವರು ಖ್ಯಾತ ವಿದ್ವಾಂಸರಾಗಿದ್ದಾರೆ. ಸಂಸ್ಕೃತ ಭಾಷೆಯನ್ನು ಕಲಿತು ಜೈನ ಧರ್ಮವನ್ನು ಆಳವಾಗಿ ಅಭ್ಯಾಸ ಮಾಡಿ ಇಂಗ್ಲಿಷ್ ಮತ್ತು ಜರ್ಮನ್ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ. ಹಲವಾರು ಬಾರಿ ಸಮ್ಮೇದ ಶಿಖರ್ಜಿ, ಶ್ರವಣಬೆಳಗೊಳ ಮುಂತಾದ ಅನೇಕ ಜೈನ ಕ್ಷೇತ್ರಗಳ ದರ್ಶನ ಮಾಡಿದ್ದಾರೆ. ನಾವು ಜರ್ಮನಿಯಲ್ಲಿರುವ ವಿಷಯವನ್ನು ತಿಳಿದು ಅವರ ಮನೆಗೆ ಆಹ್ವಾನಿಸಿದ್ದರು. ಜರ್ಮನಿಯ ಹನೋವರ್ ನಗರದ ಬಳಿ ಸ್ಟ್ಯನ್ ಹುಡೆರ್ ಗ್ರಾಮದಲ್ಲಿ ದಂಪತಿಗಳು ಬಹಳ ಆದರದಿಂದ ನಮ್ಮನ್ನು ಸ್ವಾಗತಿಸಿ ಸತ್ಕರಿಸಿದರು. ಅವರ ಮನೆಯಲ್ಲಿ ಶ್ರವಣಬೆಳಗೊಳ ಹೊಂಬುಜ ಮತ್ತು ಕೊಲ್ಲಾಪುರ ಮಠದ ಭಟ್ಟಾರಕರು ಆಶೀರ್ವದಿಸಿ ಕೊಟ್ಟಿರುವ ಜಿನ ಬಿಂಬಗಳನ್ನು ಇಟ್ಟು ಪೂಜಿಸುತ್ತಿರುವುದನ್ನು ನಮಗೆ ತೋರಿಸಿದರು. ಮೂಡುಬಿದಿರೆ ಪೂಜ್ಯ ಭಟ್ಟಾರಕ ಸ್ವಾಮೀಜಿ ಅವರನ್ನು ಭೇಟಿ ಆಗಿ ಆಶೀರ್ವಾದ ಪಡೆದ ವಿಷಯವನ್ನು ತಿಳಿಸಿದರು. ಅವರ ಸಂಗ್ರಹದಲ್ಲಿ ಕನ್ನಡ ಪುಸ್ತಕಗಳು ಇವೆ.

ಶಿರ್ತಾಡಿಬೀಡು ನರೇಂದ್ರಕುಮಾರ್ ಸ್ಮರಣಾರ್ಥ ಬಸದಿಯಲ್ಲಿ ವಿಶೇಷ ಪೂಜೆ, ಯಕ್ಷಜಿನಗಾನ ವೈಭವ

Article Image

ಶಿರ್ತಾಡಿಬೀಡು ನರೇಂದ್ರಕುಮಾರ್ ಸ್ಮರಣಾರ್ಥ ಬಸದಿಯಲ್ಲಿ ವಿಶೇಷ ಪೂಜೆ, ಯಕ್ಷಜಿನಗಾನ ವೈಭವ

ಉಜಿರೆ: ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಎಸ್.ಬಿ. ನರೇಂದ್ರಕುಮಾರ್ ಆ.4 ರಂದು ನಿಧನರಾಗಿದ್ದು ಅವರ ಆತ್ಮಶಾಂತಿಗಾಗಿ ಆಗೋಸ್ಟ್ 20 ರಂದು ಬುಧವಾರ ಬೆಳ್ತಂಗಡಿ ಜೈನಪೇಟೆಯಲ್ಲಿರುವ ರತ್ನತ್ರಯ ಜೈನತೀರ್ಥ ಕ್ಷೇತ್ರದಲ್ಲಿ ಭಗವಾನ್ ಶಾಂತಿನಾಥಸ್ವಾಮಿ ಸನ್ನಿಧಿಯಲ್ಲಿ 216 ಕಲಶ ಅಭಿಷೇಕ ಮತ್ತು ಪಂಚಾಮೃತ ಅಭಿಷೇಕ ನಡೆಯಿತು. ಯಕ್ಷಜಿನಗಾನ ನಮನ: ಖ್ಯಾತ ಯಕ್ಷಗಾನ ಭಾಗವತರುಗಳಾದ ರಾಮಕೃಷ್ಣ ಮಯ್ಯ ಸಿರಿಬಾಗಿಲು, ರವಿಚಂದ್ರ ಕನ್ನಡಿಕಟ್ಟೆ, ಕಾವ್ಯಶ್ರೀ ಅಜೇರು, ಚಂದ್ರಶೇಖರ ಆಚಾರ್, ಕುಮಾರಿ ಸಿಂಚನಾ ಮೂಡುಕೋಡಿ ಸುಶ್ರಾವ್ಯವಾಗಿ ಜಿನಭಕ್ತಿಗೀತೆಗಳನ್ನು ಯಕ್ಷಗಾನ ಶೈಲಿಯಲ್ಲಿ ಹಾಡಿದರು. ಕಾವ್ಯಶ್ರೀ ಅಜೇರು ಅವರಿಂದ ಪಂಚನಮಸ್ಕಾರ ಮಂತ್ರ ಪಠಣದೊಂದಿಗೆ ಆರಂಭವಾದ ಯಕ್ಷಜಿನಗಾನ ನಮನದಲ್ಲಿ ಉದಯರಾಗ, ಭಗವಾನ್ ಚಂದ್ರನಾಥಸ್ವಾಮಿ ಸ್ತುತಿ, ಜಿನವಾಣಿ ಸ್ತುತಿ, ಶಾಂತಿನಾಥಸ್ವಾಮಿ ಸ್ತುತಿ, ಪಂಚಪರಮೇಷ್ಠಿಗಳ ಸ್ತುತಿ, ಯಕ್ಷಜಿನಗಾನಗಳನ್ನು ಕಲಾವಿದರು ಸುಶ್ರಾವ್ಯವಾಗಿ ಸಾದರಪಡಿಸಿದರು. ಹಿಮ್ಮೇಳದಲ್ಲಿ ಚೆಂಡೆ, ಮದ್ದಳೆ ವಾದನದಲ್ಲಿ ಬಿ. ಸೀತಾರಾಮ ತೋಳ್ಪಾಡಿತ್ತಾಯ, ಬಿ. ಜನಾರ್ದನ ತೋಳ್ಪಾಡಿತ್ತಾಯ, ದೇವಾನಂದ ಭಟ್ ಮತ್ತು ಚಂದ್ರಶೇಖರ ಭಟ್ ಸಹಕರಿಸಿದರು. ನಿವೃತ್ತ ತಹಶೀಲ್ದಾರ್ ಹಾಗೂ ಹವ್ಯಾಸಿ ಯಕ್ಷಗಾನ ಕಲಾವಿದರಾದ ಉಜಿರೆಯ ಸುರೇಶ್ ಕುದ್ರೆಂತಾಯ ದಿವಂಗತ ನರೇಂದ್ರ ಕುಮಾರ್ ಜೀವನ-ಸಾಧನೆ ಬಗ್ಯೆ ಸ್ಥಳದಲ್ಲೆ ಕವನ ಒಂದನ್ನು ರಚಿಸಿ ಯಕ್ಷಗಾನ ಶೈಲಿಯಲ್ಲಿ ಹಾಡಿದರು. ನಿವೃತ್ತ ಮುಖ್ಯೋಪಾಧ್ಯಾಯ ಉಜಿರೆಯ ಸೋಮಶೇಖರ ಶೆಟ್ಟಿ ದಿವಂಗತ ನರೇಂದ್ರ ಕುಮಾರ್ ಕ್ರೀಡೆ, ಯಕ್ಷಗಾನ, ಎನ್.ಸಿ.ಸಿ. ಮತ್ತು ಸೇವಾ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಧನ್ಯತೆಯಿಂದ ಸ್ಮರಿಸಿ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದರು. ಕೊನೆಯಲ್ಲಿ ಒಂಬತ್ತು ಬಾರಿ ಪಂಚನಮಸ್ಕಾರ ಮಂತ್ರವನ್ನು ಸಾಮೂಹಿಕ ಪಠಣ ಮಾಡಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಲಾಯಿತು. ಡಾ. ಶೃತಕೀರ್ತಿರಾಜ ಮತ್ತು ಸಿದ್ಧಾಂತಕೀರ್ತಿ ರಾಜ, ಸಹೋದರಿ ಹಾಗೂ ಕುಟುಂಬಸ್ಥರು ಸಮಾರಂಭದ ಯಶಸ್ವಿಗೆ ಸಹಕರಿಸಿದರು. ಮುನಿರಾಜ ರೆಂಜಾಳ ಕಾರ್ಯಕ್ರಮ ನಿರ್ವಹಿಸಿದರು.

ಮೂಡುಬಿದಿರೆ: ಎಕ್ಸಲೆಂಟ್ ನೂತನ ಲಾಂಛನ ಬಿಡುಗಡೆ

Article Image

ಮೂಡುಬಿದಿರೆ: ಎಕ್ಸಲೆಂಟ್ ನೂತನ ಲಾಂಛನ ಬಿಡುಗಡೆ

ಮೂಡುಬಿದಿರೆ ಕಲ್ಲಬೆಟ್ಟು ಎಕ್ಸಲೆಂಟ್ ಸಂಸ್ಥೆಗಳ ನೂತನ ಲಾಂಛನವನ್ನು ಮೂಡುಬಿದಿರೆ ತಾಲೂಕಿನ ತಹಶೀಲ್ದಾರ್ ಶ್ರೀಧರ್ ಎಸ್ ಮುಂದಲಮನಿ ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅವರು ಎದುರಾಗುವ ಅನೀರೀಕ್ಷಿತ ಸಮಸ್ಯೆಗಳನ್ನು ಎದುರಿಸಲು ವಿದ್ಯೆ ಸಹಕಾರಿಯಾಗಬಲ್ಲದು ಆದ್ದರಿಂದ ಎಲ್ಲರೂ ವಿದ್ಯಾವಂತರಾಗಬೇಕು ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್ ದೇಹಕ್ಕೆ ಶಿರ ಪ್ರಧಾನವೆಂಬತೆ, ಸಂಸ್ಥೆಯ ಉದ್ದೇಶ, ಸಂಕಲ್ಪ, ಬದ್ಧತೆಗಳ ಸಂದೇಶವನ್ನು ಹೊಂದಿದ ಲಾಂಛನ ಸಂಸ್ಥೆಗೆ ಶಿರೋಭೂಷಣವಿದ್ದಂತೆ, ಬೆಳಕಿನ ಪ್ರತೀಕ ಎಕ್ಸಲೆಂಟಿನ ಲಾಂಛನದಲ್ಲಿ ಪುಸ್ತಕದ ಸಂಸ್ಕಾರ ಜ್ಯೋತಿಯ ಬೆಳಕಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕನ್ನೀವ ಸಂಕಲ್ಪವಿದೆ ಎಂದರು. ವೇದಿಕೆಯಲ್ಲಿ ಮಾಜಿ ಸಚಿವರು ಸಂಸ್ಥೆಯ ಸ್ಥಾಪಕ ಗೌರವಾಧ್ಯಕ್ಷರೂ ಆದ ಅಭಯಚಂದ್ರ ಜೈನ್. ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು. ಉಪಮುಖ್ಯೋಪಾಧ್ಯಾಯ ಜಯಶೀಲ್ ಕಾರ್ಯಕ್ರಮ ನಿರೂಪಿಸಿದರು. ಪ್ರಿಯಾಂಕ ಸ್ವಾಗತಿಸಿದರು. ಪ್ರಮೀಳಾ ಪಿಂಟೋ ವಂದಿಸಿದರು.

ಎಕ್ಸಲೆಂಟ್ ಕಾಲೇಜಿನಲ್ಲಿ ಸ್ವಾತಂತ್ರೋತ್ಸವ

Article Image

ಎಕ್ಸಲೆಂಟ್ ಕಾಲೇಜಿನಲ್ಲಿ ಸ್ವಾತಂತ್ರೋತ್ಸವ

ಮೂಡುಬಿದಿರೆ: ಎಕ್ಸಲೆಂಟ್ ಸ್ವಾತಂತ್ರೋತ್ಸವ ಮೂಡುಬಿದಿರೆ ತಾಲೂಕು ತಹಶೀಲ್ದಾರ್ ಶ್ರೀಧರ್ ಎಸ್. ಮುಂದಲಮನಿ ಧ್ವಜಾರೋಹಣ ಮಾಡುವುದರೊಂದಿಗೆ ಆಚರಿಸಲಾಯಿತು. ಬಳಿಕ ಮಾತನಾಡಿದ ಅವರು ಬದುಕಿನಲ್ಲಿ ಅನಿರೀಕ್ಷಿತಗಳು ಸಂಭವಿಸಿದಾಗ ಅದನ್ನು ಎದುರಿಸಿ ಈ ದೇಶದ ಘನತೆ ಗೌರವ ಕಾಪಾಡುವಲ್ಲಿ ನಾವು ಕಟಿಬದ್ಧರಾಗಬೇಕು ಎಂದರು. ಇದೇ ಸಂದರ್ಭದಲ್ಲಿ ಮೂಡುಬಿದಿರೆ ಎಕ್ಸಲೆಂಟ್ ಸಂಸ್ಥೆಯ ನೂತನ ಲಾಂಛನವನ್ನು ತಹಶೀಲ್ದಾರ್ ಬಿಡುಗಡೆಗೊಳಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಪ್ರತಿಕೂಲತೆಗಳ ನಡುವೆ ದೃಢ ಚಿತ್ತದಿಂದ ಬದುಕಿ ಗೆದ್ದು ನಾಡಿಗೆ, ದೇಶಕ್ಕೆ ಕೀರ್ತಿ ತರಬೇಕು ಎಂದರು. ಸಂಸ್ಥೆಯ ಗೌರವಾಧ್ಯಕ್ಷರಾದ ಅಭಯಚಂದ್ರ ಜೈನ್ ದೇಶ ಭಾಷೆಗಳ ರಕ್ಷಣೆ ನಮ್ಮ ಕರ್ತವ್ಯ ಎಂದರು. ಎನ್‌ಸಿಸಿ ವಿದ್ಯಾರ್ಥಿಗಳು ಕವಾಯತಿನೊಂದಿಗೆ ಕಾರ್ಯಕ್ರಮ ಪ್ರಾರಂಭಗೊAಡಿತು. ವೇದಿಕೆಯಲ್ಲಿ ಎಕ್ಸಲೆಂಟ್ ಮೂಡುಬಿದಿರೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು. ಸಂಸ್ಥೆಯ ಉಪನ್ಯಾಸಕಿ ಕು.ಪ್ರಿಯಾಂಕ ಸ್ವಾಗತಿಸಿ, ಡಾ. ಶೃತಿ ಅತಿಥಿಗಳನ್ನು ಪರಿಚಯಿಸಿದರು. ಕು. ಪ್ರಮೀಳಾ ಪಿಂಟೋ ವಂದಿಸಿದರು. ಉಪಮುಖ್ಯೋಪಾಧ್ಯಾಯ ಜಯಶೀಲ ಕಾರ್ಯಕ್ರಮ ನಿರೂಪಿಸಿದರು.

ಉಜಿರೆ ಶ್ರೀ ರತ್ನವರ್ಮ ಕ್ರೀಡಾಂಗಣದಲ್ಲಿ ಎಸ್.ಡಿ.ಎಂ ಸ್ವಾತಂತ್ರ್ಯೋತ್ಸವ ಸಂಭ್ರಮ

Article Image

ಉಜಿರೆ ಶ್ರೀ ರತ್ನವರ್ಮ ಕ್ರೀಡಾಂಗಣದಲ್ಲಿ ಎಸ್.ಡಿ.ಎಂ ಸ್ವಾತಂತ್ರ್ಯೋತ್ಸವ ಸಂಭ್ರಮ

ಉಜಿರೆ, ಆಗಸ್ಟ್ 15: ಸಮೃದ್ಧಿ, ಸುರಕ್ಷತೆ ಮತ್ತು ದಿಟ್ಟ ಹೆಜ್ಜೆಗಳೊಂದಿಗೆ ಮುನ್ನಡೆಯುವ “39;ಹೊಸ ಭಾರತ” ಕಟ್ಟುವ ಘೋಷವಾಕ್ಯದೊಂದಿಗೆ ಎಸ್.ಡಿ.ಎಂ ಕಾಲೇಜಿನ ಶ್ರೀರತ್ನವರ್ಮ ಹೆಗ್ಗಡೆ ಕ್ರೀಡಾಂಗಣವು 79ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾಯಿತು. ಎಸ್.ಡಿ.ಎಂ ಶಾಲೆ, ಪದವಿ ಪೂರ್ವ, ಪದವಿ, ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯ, ತಾಂತ್ರಿಕ ಸೇರಿದಂತೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿಗಳ ಸಮಕ್ಷಮದಲ್ಲಿ ನಿವೃತ್ತ ಸೇನಾಧಿಕಾರಿ ಮೇಜರ್ ಜನರಲ್ ಎಂ.ವಿ.ಭಟ್ ಅವರು ಧ್ವಜಾರೋಹಣ ನೆರವೇರಿಸಿದರು. ಎನ್.ಸಿ.ಸಿ. ಕೆಡೆಟ್‌ಗಳಿಂದ ಧ್ವಜವಂದನೆ ನಡೆಯಿತು. ಈ ವೇಳೆ ಎನ್‌ಸಿಸಿ ಅಧಿಕಾರಿಗಳಾದ ಲೆಫ್ಟಿನೆಂಟ್ ಭಾನುಪ್ರಕಾಶ್, ಎನ್‌ಸಿಸಿ ಆಫಿಸರ್ ಸದಾನಂದ್, ರೋವರ್ ಸ್ಕೌಟ್ ಲೀಡರ್ ಪ್ರಸಾದ್ ಕುಮಾರ್ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್.ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಶ್ವನಾಥ ಪಿ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ಸೌಮ್ಯ ಬಿ.ಪಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಮೋದ ಕುಮಾರ್, ಎಸ್.ಡಿ.ಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಪ್ರಶಾಂತ ಶೆಟ್ಟಿ, ಎಸ್‌ಡಿಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಅಶೋಕ ಕುಮಾರ್ ಮತ್ತಿತರ ಶೈಕ್ಷಣಿಕ ವಿಭಾಗಗಳ ಮುಖ್ಯಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಎಸ್.ಡಿ.ಎಂ ಕಾಲೇಜಿನ ಆಡಳಿತಾಂಗ ಕುಲಸಚಿವರಾದ ಡಾ. ಶ್ರೀಧರ್ ಭಟ್ ಕಾರ್ಯಕ್ರಮ ನಿರೂಪಿಸಿದರು.

First Previous

Showing 2 of 11 pages

Next Last