Article Image

ದಶಲಕ್ಷಣ ಮಹಾಪರ್ವ: ಉತ್ತಮ ಮಾರ್ದವ

Article Image

ದಶಲಕ್ಷಣ ಮಹಾಪರ್ವ: ಉತ್ತಮ ಮಾರ್ದವ

ವೇಣೂರು: ದಶಲಕ್ಷಣ ಮಹಾಪರ್ವದ ಎರಡನೇ ದಿನದಂದು ಉತ್ತಮ ಮಾರ್ದವ ಧರ್ಮದ ಬನ್ನಿ ಉಪಾನ್ಯಾಸ ಕಾರ್ಯಕ್ರಮವು ಯಾತ್ರಿ ನಿವಾಸದಲ್ಲಿ ಆ. 29ರಂದು ನಡೆಯಿತು. ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರದಾನ ಮಂತ್ರಿಯವರ ಅಲ್ಪಸಂಖ್ಯಾತ 15 ಅಂಶಗಳ ಕಾರ್ಯಕ್ರಮ ಅನುಷ್ಠಾನದ ಜಿಲ್ಲಾ ಸಮಿತಿಯ ನಿರ್ದೇಶಕರು, ಕೆಲ್ಲಪುತ್ತಿಗೆ ಗುತ್ತು ದರೆಗುಡ್ಡೆಯ ಸುಭಾಶ್ಚಂದ್ರ ಚೌಟರವರು ಗಣ್ಯರೊಂದಿಗೆ ಸೇರಿ ಉದ್ಘಾಟಿಸಿ ಮಾತನಾಡುತ್ತಾ, ಧರ್ಮವನ್ನು ಉಳಿಸಿ, ಬೆಳೆಸಬೇಕು ಧಾರ್ಮಿಕ ಪ್ರವಚನಗಳಿಗೆ ಚಿಕ್ಕ ಮಕ್ಕಳಿಂದ ದೊಡ್ಡವರವರೆಗೆ ಕರೆದುಕೊಂಡು ಬಂದು ಧರ್ಮದ ಬಗ್ಗೆ ಇನ್ನಷ್ಟು ತಿವಳಿದುಕೊಳ್ಳುವ ಹಾಗೆ ಮಾಡಬೇಕು. ಧರ್ಮದ ಬಗ್ಗೆ ಒಲವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಭರತ್‌ರಾಜ್‌ ಜೈನ್‌ ಮುಡಾರು ಇವರು ಉತ್ತಮ ಮಾರ್ದವ ಧರ್ಮದ ಬಗ್ಗೆ ಉಪನ್ಯಾಸ ನೀಡಿದರು. ದಶಧರ್ಮಗಳು ನಮ್ಮನ್ನು ಧರ್ಮಾತ್ಮರನ್ನಾಗಿ ಮಾಡುವುದರ ಜೊತೆಗೆ ನಮ್ಮ ಆತ್ಮವನ್ನು ಕೇವಲ ಧರ್ಮಾತ್ಮರಲ್ಲಿ ಪರಮಾತ್ಮನಾಗಲು ಯೋಗ್ಯತೆ ಹೊಂದಿದೆ ಎನ್ನುವುದನ್ನು ಕೂಡ ಸೂಚಿಸುತ್ತದೆ. ಧರ್ಮಾತ್ಮನಾಗಲು ಅವಕಾಶವಿರುವುದು ಮನುಷ್ಯರಿಗೆ ಮಾತ್ರ. ನಾವೆಲ್ಲರೂ ನಮ್ಮ ಜೀವನದಲ್ಲಿ ದಶಧರ್ಮಗಳನ್ನು ಅಳವಡಿಸಿಕೊಂಡು ಪಾಲಿಸೋಣ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ದಿಗಂಬರ ತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿಯವರಾದ ವಿ. ಪ್ರವೀಣ್‌ ಕುಮಾರ್‌ ಇಂದ್ರ ಕಾರ್ಯಕ್ರಮದ ಅತಿಥೇಯರಾದ ಗುಣಪಾಲ ಅತಿಕಾರಿ ಕಡಂಬಿಲ, ಪ್ರಸನ್ನಾ ಆರ್‌. ಹೆಗ್ಡೆ, ಅರುಣ ಅಜಿತ್‌ ಕುಮಾರ್‌, ಪ್ರಿಯಕಾರಿಣಿ, ಸಂಭಾಷಿಣಿ ಉದಯ ಕುಮಾರ್‌ ಹಾಗೂ ಅಪಾರ ಸಂಖ್ಯೆಯಲ್ಲಿ ಶ್ರಾವಕ-ಶ್ರಾವಕಿಯು ಉಪಸ್ಥಿತರಿದ್ದರು. ಸಂಭಾಷಿಣಿ ಉದಯಕುಮಾರ್‌ ಪ್ರಾರ್ಥಿಸಿ, ಸಮಿತಿಯ ಕಾರ್ಯದರ್ಶಿ ವಿ. ಪ್ರವೀಣ್‌ ಕುಮಾರ್‌ ಇಂದ್ರ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸಮಿತಿಯ ಜೊತೆ ಕಾರ್ಯದರ್ಶಿ ಮಹಾವೀರ ಜೈನ ಮೂಡುಕೋಡಿಗುತ್ತುರವರು ನಿರೂಪಿಸಿ, ಧನ್ಯವಾದವಿತ್ತರು.

ಧರ್ಮಸ್ಥಳದಲ್ಲಿ ಜೈನಮಠಗಳ ಭಟ್ಟಾರಕರುಗಳಿಂದ: ಧರ್ಮ ಸಂರಕ್ಷಣಾ ಸಮಾವೇಶ

Article Image

ಧರ್ಮಸ್ಥಳದಲ್ಲಿ ಜೈನಮಠಗಳ ಭಟ್ಟಾರಕರುಗಳಿಂದ: ಧರ್ಮ ಸಂರಕ್ಷಣಾ ಸಮಾವೇಶ

ಉಜಿರೆ: ಸತ್ಯ ಮತ್ತು ಅಹಿಂಸಾ ಪರಿಪಾಲಕರಾದ ಜೈನರು ಯಾರಿಗೂ ತೊಂದರೆ ಕೊಡುವುದಿಲ್ಲ. ಆದರೆ ತೊಂದರೆ ಕೊಟ್ಟವರನ್ನು ನಾವು ಬಿಡುವುದಿಲ್ಲ ಎಂದು ತಮಿಳುನಾಡು ಅರಹಂತಗಿರಿ ಜೈನಮಠದ ಧವಳಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಎಲ್ಲಾ ಜೈನಮಠಗಳ ಭಟ್ಟಾರಕರುಗಳ ನೇತೃತ್ವದಲ್ಲಿ ಆಯೋಜಿಸಿದ ಧರ್ಮ ಸಂರಕ್ಷಣಾ ಸಮಾವೇಶದ ಉದ್ದೇಶವನ್ನು ವಿವರಿಸಿದರು. ಸತ್ಯಮೇವ ಜಯತೇ ಎನ್ನುವಂತೆ ಸತ್ಯಕ್ಕೆ ಸದಾ ಜಯವಿದೆ. ಸತ್ಯಕ್ಕೆ ಎಂದೂ ಸಾವಿಲ್ಲ. ಸತ್ಯ, ಧರ್ಮ, ನ್ಯಾಯ, ನೀತಿ ನೆಲೆ ನಿಂತ ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳದ ಶೋಭೆ ಮತ್ತು ಕೀರ್ತಿಗೆ ಎಂದೂ ಚ್ಯುತಿ ಬಾರದು ಎಂದು ಅವರು ಹೇಳಿದರು. ಶುಕ್ರವಾರ ಎಲ್ಲಾ ಭಟ್ಟಾರಕರುಗಳು ದೇವಸ್ಥಾನಕ್ಕೆ ಹೋಗಿ ಮಂಜುನಾಥ ಸ್ವಾಮಿಯ ದರ್ಶನ ಮಾಡಿ, ನ್ಯಾಯಕ್ಕಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಹೊರಗೆ ಬರುವಾಗ ದೇವಸ್ಥಾನದಲ್ಲಿ ಮಹಾಪೂಜೆಯೊಂದಿಗೆ ಘಂಟೆ ಬಾರಿಸಿತು. ಆದುದರಿಂದ ಸಣ್ಣ ಕಳಂಕ ಮಾಯವಾಯಿತು ಎಂದು ತಮಗೆ ತಿಳಿಯಿತು ಎಂದು ಸ್ವಾಮೀಜಿ ಹೇಳಿದರು. ರಾಮಚಂದ್ರ, ಸೀತೆಯ ಹಾಗೆ ಮಹಾಪುರುಷರಿಗೂ ಕಷ್ಟ, ಅಪವಾದ ಬರುತ್ತದೆ. ಹಾಗೆ ಧರ್ಮಸ್ಥಳಕ್ಕೆ ಬಂದ ಸಣ್ಣ ಕಳಂಕ ದೋಷ ಅಲ್ಲ. ಇಂದು ಸಣ್ಣ ಕಳಂಕವೂ ನಿವಾರಣೆಯಾಗಿದೆ. ಧರ್ಮಸ್ಥಳ ಹಾಗೂ ಹೆಗ್ಗಡೆಯವರಿಗೆ ನ್ಯಾಯ ಸಿಗದಿದ್ದರೆ ಎಲ್ಲಾ ಭಟ್ಟಾರಕರುಗಳು ಮುಂದೆ ವಿಧಾನಸಭೆ ಎದುರು ಪ್ರತಿಭಟನೆ ಹಾಗೂ ಉಗ್ರ ಹೋರಾಟ ನಡೆಸುವುದಾಗಿ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಹೆಗ್ಗಡೆಯವರು ಸಮಗ್ರ ಸಮಾಜದ ಚಕ್ರವರ್ತಿ. ಇಡೀ ರಾಷ್ಟ್ರದ ಮಹಾಪುರುಷ. ಅಧರ್ಮಿಗಳು ಷಡ್ಯಂತ್ರ ಹಾಗೂ ಅಸೂಯೆಯಿಂದ ಧರ್ಮಸ್ಥಳಕ್ಕೆ ಚ್ಯುತಿ ತರಲು ವಿಫಲಯತ್ನ ಮಾಡಿದ್ದಾರೆ. ಸರ್ವಧರ್ಮೀಯರ ಸಕಲ ಮಠ-ಮಂದಿರಗಳಿಗೂ ಸದಾ ನೆರವು, ಮಾರ್ಗದರ್ಶನ, ಪ್ರೋತ್ಸಾಹ ನೀಡುತ್ತಿರುವ ಹೆಗ್ಗಡೆಯವರ ಜೊತೆ ನಾವು ಸದಾ ಇದ್ದೇವೆ. ಹೆಗ್ಗಡೆಯವರು ಎಲ್ಲರಿಗೂ ಪೂಜ್ಯರು ಹಾಗೂ ಸರ್ವಮಾನ್ಯರು. ಜೈನಧರ್ಮೀಯರಾದ ಹೆಗ್ಗಡೆ ಸರ್ವಧರ್ಮೀಯರನ್ನೂ ಸಮಾನ ಪ್ರೀತಿ-ವಿಶ್ವಾಸದಿಂದ ನೋಡುತ್ತಾರೆ, ಗೌರವಿಸುತ್ತಾರೆ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು. ಅಭಿನಂದನಾ ಭಾಷಣ ಮಾಡಿದ ಖ್ಯಾತ ಸಾಹಿತಿ ನಾಡೋಜಾ ಹಂಪನಾ (ಹಂಪ ನಾಗರಾಜಯ್ಯ) ಮಾತನಾಡಿ, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಇಂದ್ರಿಯ ನಿಗ್ರಹ, ತಾಳ್ಮೆ, ಸಂಯಮ, ಗಾಭೀರ್ಯ, ಸ್ಥಿತಪ್ರಜ್ಞ ಶಕ್ತಿಯ ಪ್ರತಿಭೆ ವರ್ಣಿಸಲಸದಳವಾಗಿದೆ. ಅವರ ಮೌನದ ಶಕ್ತಿ ಮತ್ತು ಮೌಲ್ಯ ಕರ್ನಾಟಕದ ಮನೆಮಾತಾಗಿದೆ ಎಂದು ಶ್ಲಾಘಿಸಿ, ಅಭಿನಂದಿಸಿದರು. ಕಲುಷಿತ ವಾತಾವರಣದಿಂದ ಯುವಜನರ ಮನಸ್ಸು ಹಾಳಾಗಿದೆ. ಭಿನ್ನಾಭಿಪ್ರಾಯ ಬಂದಾಗ ಅದನ್ನು ಪರಿಹರಿಸುವ ಜವಾಬ್ಧಾರಿ ಹಿರಿಯರಿಗಿದೆ. ಸತ್ಯದ ಸ್ವರೂಪವನ್ನು ಅವರಿಗೆ ತಿಳಿಸಬೇಕು. ಏನೇ ಆಗಲಿ ಷಡ್ಯಂತ್ರದಿಂದ ಆದ ಸಣ್ಣ ಕಳಂಕ ನಿವಾರಣೆಯಾಗಿದೆ. ಅಗ್ನಿಪರೀಕ್ಷೆಯಲ್ಲಿ ಹೆಗ್ಗಡೆಯವರು ಉತ್ತೀರ್ಣರಾಗಿ ಸತ್ಯದ ಸಾಕ್ಷಾತ್ಕಾರವಾಗಿದೆ. ಹೆಗ್ಗಡೆಯವರ ಬೀಡಿನಲ್ಲಿ (ಮನೆಯಲ್ಲಿ), ಕುಟುಂಬದಲ್ಲಿ ಸುಖ-ಶಾಂತಿ, ನೆಮ್ಮದಿಯ ತಂಗಾಳಿ ಸದಾ ಬೀಸುತ್ತಿರಲಿ ಎಂದು ಹಂಪನಾ ಹಾರೈಸಿದರು. ಕನಕಗಿರಿ ಜೈನಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಹೆಗ್ಗಡೆಯವರು ಮಾನವ ಅಲ್ಲ, ದೇವಮಾನವ ಎಂದು ಬಣ್ಣಿಸಿದರು. ಧರ್ಮಸ್ಥಳವು ಸರ್ವಧರ್ಮೀಯರ ಮನೆಗಳನ್ನು ಹಾಗೂ ಮನಗಳನ್ನು ಬೆಳಗುವ “ನಂದಾದೀಪ”ವಾಗಿದೆ. ಅದನ್ನು ನಂದಿಸಲು ಹೋದರೆ ಧರೆಯ ಹೊತ್ತಿ ಉರಿಯಬಹುದು ಎಂದು ಭವಿಷ್ಯ ನುಡಿದರು. ಶ್ರವಣಬೆಲಗೊಳ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ ಜೈನಧರ್ಮ ಮತ್ತು ಹಿಂದೂ ಧರ್ಮ ಸಮಗ್ರ ಸಮಾಜದ ಸಂಪರ್ಕ ಸೇತುವಾಗಿದೆ. ಹಿಂದೂಗಳನ್ನು ಮತ್ತು ಜೈನರನ್ನು ಬೇರ್ಪಡಿಸಲು ಸಾಧ್ಯವಿಲ್ಲ. 800 ವರ್ಷಗಳ ಹಿಂದೆ ತಮ್ಮ ವಾಸ್ತವ್ಯದ ಮನೆಯನ್ನೆ ಧರ್ಮದೇವತೆಗಳಿಗಾಗಿ ಬಿಟ್ಟುಕೊಟ್ಟವರು ಹೆಗ್ಗಡೆ ಪರಂಪರೆಯವರು. ಇಲ್ಲಿನ ಸರ್ವಧರ್ಮ ಸಮನ್ವಯ ಹಾಗೂ ಚತುರ್ವಿದ ದಾನ ಪರಂಪರೆ ವಿಶ್ವವಿಖ್ಯಾತವಾಗಿದೆ. ಧರ್ಮ ಮತ್ತು ಧರ್ಮಸ್ಥಳದ ಸಂರಕ್ಷಣೆ ತಾವೆಲ್ಲರೂ ಹೆಗ್ಗಡೆಯವರ ಜೊತೆ ಇದ್ದೇವೆ ಎಂದು ಸ್ವಾಮೀಜಿ ಭರವಸೆ ನೀಡಿದರು. ತಮ್ಮ ಪೂರ್ವಾಶ್ರಮದಲ್ಲಿ ಉಜಿರೆಯಲ್ಲಿ ಪಿ.ಯು.ಸಿ. ವಿದ್ಯಾರ್ಥಿಯಾಗಿದ್ದಾಗ ಸಿದ್ಧವನ ಗುರುಕುಲ ಹಾಗೂ ಪದವಿಪೂರ್ವ ಕಾಲೇಜು ಶಿಕ್ಷಣ ಹಾಗೂ ಸ್ವಯಂ ಸೇವಕನಾಗಿ ಕರ್ತವ್ಯ ನಿರ್ವಹಿಸಿರುವುದನ್ನು ಸ್ವಾಮೀಜಿ ಧನ್ಯತೆಯಿಂದ ಸ್ಮರಿಸಿದರು. ಹೊಂಬುಜ ಜೈನಮಠದ ಪೂಜ್ಯ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ ಧರ್ಮ, ಸಂಸ್ಕೃತಿ ಮತ್ತು ಸಂಸ್ಕಾರ ಸಂರಕ್ಷಣೆಗಾಗಿ ಧರ್ಮಸ್ಥಳದ ವತಿಯಿಂದ ಮಾಡುತ್ತಿರುವ ಸೇವಾಕಾರ್ಯ ವಿಶ್ವಮಾನ್ಯವಾಗಿದೆ. ಹಳ್ಳಿಯಿಂದ ದಿಲ್ಲಿಯವರೆಗೆ ಮಾಡಿದ ಗ್ರಾಮಾಭಿವೃದ್ಧಿ ಯೋಜನೆ, ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಆರೋಗ್ಯ, ಶಿಕ್ಷಣ ಮತ್ತು ಇತರ ಬಹುಮುಖ ಸೇವಾ ಕಾರ್ಯಗಳು ಸಾರ್ವಕಾಲಿಕ ಮೌಲ್ಯ ಹೊಂದಿವೆ ಎಂದರು. ದೂರುದಾರನ ಸುಳ್ಳು ಮಾತು ಕೇಳಿ ತೆಗೆಸಿದ ಹೊಂಡಗಳಲ್ಲಿ ಗಿಡಗಳನ್ನಾದರೂ ನೆಡಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು. ಸೋಂದಾ ಮಠದ ಭಟ್ಟಾಕಳಂಕ ಸ್ವಮೀಜಿ ಮಾತನಾಡಿ, ಸತ್ಯವು ಸದಾ ಪರಿಶುದ್ಧವಾಗಿರುತ್ತದೆ. ಜೈನರು ಹಾಗೂ ಜೈನಧರ್ಮದ ಬಗ್ಗೆ ಎಂದೂ ಅವಹೇಳನ ಸಲ್ಲದು ಎಂದರು. ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಧರ್ಮದಲ್ಲಿ ರಾಜಕೀಯ ಮಾಡಬಾರದು. ರಾಜಕೀಯದಲ್ಲಿ ಧರ್ಮ ಇರಬೇಕು ಎಂದು ಕಿವಿಮಾತು ಹೇಳಿದರು. ತಮಗೆ ಸ್ವಾಮೀಜಿ ಆಗಿ ಪಟ್ಟಾಭಿಷೇಕ ಆಗುವಾಗ “ಅಪೇಕ್ಷೆ ಪಡಬೇಡಿ, ಉಪೇಕ್ಷೆ ಮಾಡಬೇಡಿ” ಎಂದು ಹೆಗ್ಗಡೆಯವರು ಹೇಳಿದ ಕಿವಿಮಾತನ್ನು ಸ್ವಾಮೀಜಿ ಧನ್ಯತೆಯಿಂದ ಸ್ಮರಿಸಿದರು. ನಮ್ಮ ಸನಾತನ ಧರ್ಮ ಯಾವುದೇ ಜಾತಿ, ಮತಕ್ಕೆ ಸೀಮಿತವಲ್ಲ. ಧರ್ಮಸ್ಥಳದ ಬಗ್ಯೆ ಅಸೂಯೆಯಿಂದ ಅಪಪ್ರಚಾರ ಮಾಡುವವರು “ಮಾನಸಿಕ ಭಯೋತ್ಪಾದಕರು” ಎಂದು ಸ್ವಾಮೀಜಿ ಬಣ್ಣಿಸಿದರು. ಕಾರ್ಕಳ ಜೈನಮಠದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ರಾಜಸ್ಥಾನದ ತಿಜಾರ ಮಠದ ಸೌರಭಸೇನ ಭಟ್ಟಾರಕ ಸ್ವಾಮೀಜಿ, ಲಕ್ಕವಳ್ಳಿ ಜೈನಮಠದ ವೃಷಭಸೇನ ಭಟ್ಟಾರಕ ಸ್ವಾಮೀಜಿ, ಕಂಬದಹಳ್ಳಿ ಜೈನಮಠದ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ವರೂರು ಜೈನಮಠದ ಧರ್ಮಸೇನ ಭಟ್ಟಾರಕ ಸ್ವಾಮೀಜಿ ಶುಭ ಹಾರೈಸಿ ಧರ್ಮಸ್ಥಳ ಹಾಗೂ ಹೆಗ್ಗಡೆಯವರ ಜೊತೆ ಸದಾ ತಾವೆಲ್ಲರೂ ಸೇವೆಗೆ ಬದ್ಧರಾಗಿದ್ದೇವೆ ಎಂದು ಭರವಸೆ ನೀಡಿದರು. ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಭಾದ್ರಪದ ಮಾಸದಲ್ಲಿ ದಶಲಕ್ಷಣ ಪರ್ವ ಆಚರಣೆಯ ಶುಭಾವಸರದಲ್ಲಿ ಎಲ್ಲಾ ಮಠಾಧೀಶರುಗಳ ದರ್ಶನ ಭಾಗ್ಯ ಲಭಿಸಿರುವುದು ಅತೀವ ಸಂತಸವಾಗಿದೆ ಎಂದರು. ಸತ್ಯ, ಅಹಿಂಸೆ, ತ್ಯಾಗ, ಬ್ರಹ್ಮಚರ್ಯ ಇತ್ಯಾದಿ ದಶಧರ್ಮಗಳನ್ನು ಜೈನರು ನಿತ್ಯವೂ ಪಾಲಿಸುತ್ತಾರೆ. ಇಂತಹ ಪವಿತ್ರಪರ್ವದ ಸಂದರ್ಭದಲ್ಲಿ ಎಲ್ಲಾ ಭಟ್ಟಾರಕರುಗಳು ತಮಗೆ ಹಾಗೂ ಧರ್ಮಸ್ಥಳಕ್ಕೆ ಬೆಂಬಲ ನೀಡಿ, ನಿಮ್ಮ ಜೊತೆ ಸದಾ ಇದ್ದೇವೆ ಎಂದು ಭರವಸೆ ನೀಡಿರುವುದು ತಮಗೆ ಹೆಚ್ಚಿನ ಉತ್ಸಾಹ ಮತ್ತು ಪ್ರೇರಣೆ ನೀಡಿದೆ ಎಂದು ಹೆಗ್ಗಡೆಯವರು ಸಂತಸ ವ್ಯಕ್ತಪಡಿಸಿದರು. ತತ್ವ, ಸಿದ್ಧಾಂತ, ಧರ್ಮ ಇರುವುದು ಕೇವಲ ಓದಲು, ಉಪದೇಶಕ್ಕೆ ಮಾತ್ರ ಅಲ್ಲ. ಅದನ್ನು ನಾವು ನಿತ್ಯವೂ ಪಾಲಿಸಬೇಕು. “ಸಮ್ಯಕ್‌ದರ್ಶನ, ಜ್ಞಾನ ಚಾರಿತ್ರಾಣಿ ಮೋಕ್ಷ ಮಾರ್ಗಃ” ಎಂಬುದು ಜೈನ ಧರ್ಮದ ಸಾರವಾಗಿದೆ. ಅಂದರೆ ಸರಿಯಾದ ತತ್ವ ಸಿದ್ಧಾಂತಗಳ ಬಗ್ಯೆ ನಂಬಿಕೆ, ತಿಳುವಳಿಕೆ (ಜ್ಞಾನ) ಮತ್ತು ಆಚರಣೆಯಿಂದ ಮೋಕ್ಷಪ್ರಾಪ್ತಿಯಾಗುತ್ತದೆ ಎಂಬುದು ಜೈನ ಸಿದ್ಧಾಂತವಾಗಿದೆ. ಇದರ ಪ್ರತೀಕವಾಗಿ ಮೂರು ಎಳೆಗಳಿರುವ ಜನಿವಾರ (ಯಜ್ಞೋಪವೀತ) ವನ್ನು ಜೈನರು ಧರಿಸುತ್ತಾರೆ. ಇಂತಹ ಸಾತ್ವಿಕ ಹಾಗೂ ನೈತಿಕ ಜೀವನದಿಂದ ಸುಖ-ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಹೇಳಿ ಹೆಗ್ಗಡೆಯವರು ಎಲ್ಲಾ ಭಟ್ಟಾರಕರುಗಳಿಗೆ ಕೃತಜ್ಞತೆ ವ್ಯಕ್ತಪಡಿಸಿದರು. ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಅನಿತಾಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರೀಯಾ ಹರ್ಷೇಂದ್ರ ಕುಮಾರ್, ಶ್ರದ್ಧಾಅಮಿತ್, ಮತ್ತು ಸೋನಿಯಾವರ್ಮ ಉಪಸ್ಥಿತರಿದ್ದರು.

ದಶಲಕ್ಷಣ ಮಹಾಪರ್ವ ಆಚರಣೆ- ಉದ್ಘಾಟಣಾ ಸಮಾರಂಭ

Article Image

ದಶಲಕ್ಷಣ ಮಹಾಪರ್ವ ಆಚರಣೆ- ಉದ್ಘಾಟಣಾ ಸಮಾರಂಭ

ವೇಣೂರು: ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ವತಿಯಿಂದ ಪ್ರತಿವರ್ಷ ನಡೆಯುವ ದಶಲಕ್ಷಣ ಮಹಾಪರ್ವ ಆಚರಣೆಯ ಉದ್ಘಾಟನಾ ಸಮಾರಂಭವು ಆ. 28ರಂದು ನಡೆಯಿತು. ಉದ್ಘಾಟನೆಯನ್ನು ಅಳದಂಗಡಿ ಅರಮನೆಯ ಮಧುರಾ ಪಿ. ಅಜಿಲರವರು ನೆರವೇರಿಸಿದರು. ಮೂಡುಬಿದಿರೆ ಶ್ರೀ ಜೈನ ಮಠದ ಪ.ಪೂ. ಸ್ವಸಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಪಾವನ ಸಾನ್ನಿಧ್ಯ ವಹಿಸಿ ದಶಲಕ್ಷಣ ಮಹಾಪರ್ವದ ಮೊದಲನೇ ದಿನದ ಉತ್ತಮ ಕ್ಷಮಾ ಧರ್ಮದ ಬಗ್ಗೆ ಪ್ರವಚನ ನೀಡುತ್ತಾ, ನಾವು ನಮ್ಮ ಜೀವನದಲ್ಲಿ ಕ್ಷಮಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಕ್ರೋಧವನ್ನು ನಿಗ್ರಹಿಸಿಕೊಳ್ಳಬೇಕು. ಕ್ಷಮಿಸುವ ಗುಣ ದೇವರಗುಣ. ಮನುಷ್ಯನ ಸ್ವಭಾವಗಳಲ್ಲಿ ಕ್ರೋಧವು ಕೂಡ ಒಂದು. ಸಿಟ್ಟು ಬಾರದಿರುವ ಹಾಗೆ ಪ್ರಯತ್ನಿಸೋಣ ಎಂದು ಹೇಳಿದರು. ಸಭಾಧ್ಯಕ್ಷತೆಯನ್ನು ವಹಿಸಿದ್ದ ಶ್ರೀಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಉಪಾಧ್ಯಕ್ಷರು, ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್‌ ಅಜಿಲರು, ಹಬ್ಬಗಳ ರಾಜ, ದಶಲಕ್ಷಣ ಪರ್ವ, ಆತ್ಮಶುದ್ಧೀಕರಣದ ಪವಿತ್ರ ಹಬ್ಬವೇ ದಶಲಕ್ಷಣ ಮಹಾಪರ್ವ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಅಳದಂಗಡಿ ಅರಮನೆಯ ಶಿವಪ್ರಸಾದ ಅಜಿಲರು ಆಗಮಿಸಿ, ಶುಭಹಾರೈಸಿದರು. ಈ ಸಂದರ್ಭದಲ್ಲಿ ಮೂಡುಬಿದಿರೆಯ ಸಂಜಯಂತ್‌ ಕುಮಾರ್‌ ಶೆಟ್ಟಿ, ಶಂಭವ ಕುಮಾರ್‌, ಸುದೇಶ್‌ ಕುಮಾರ್‌ ಮತ್ತಿತರ ಗಣ್ಯರು ಸೇರಿದಂತೆ ಶ್ರಾವಕ-ಶ್ರಾವಕಿಯರು ಪಾಲ್ಗೊಂಡಿದ್ದರು. ಸಮಿತಿಯ ಪ್ರದಾನ ಕಾರ್ಯದರ್ಶಿ ವಿ. ಪ್ರವೀಣ್‌ ಕುಮಾರ್‌ ಇಂದ್ರರವರು ಸ್ವಾಗತಿಸಿದರು. ಅಳದಂಗಡಿ ಅರಮನೆ ಶಿವಪ್ರಸಾದ್‌ ಅಜಿಲರು ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮವನ್ನು ಸಮಿತಿಯ ಜೊತೆ ಕಾರ್ಯದರ್ಶಿ ಮಹಾವೀರ್‌ ಜೈನ್‌ ಮೂಡುಕೋಡಿರವರು ನಿರೂಪಿಸಿದರು.

ವೇಣೂರು: ನವೀಕೃತ ಶ್ರೀ ಬಾಹುಬಲಿ ಸಭಾಭವನದ ಉದ್ಘಾಟನೆ

Article Image

ವೇಣೂರು: ನವೀಕೃತ ಶ್ರೀ ಬಾಹುಬಲಿ ಸಭಾಭವನದ ಉದ್ಘಾಟನೆ

2000ನೇ ಇಸವಿಯಲ್ಲಿ ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಸಂದಭ೯ದಲ್ಲಿ ಶ್ರೀ ಬಾಹುಬಲಿ ಸಭಾಭವನವನ್ನು ನಿಮಾ೯ಣ ಮಾಡಿ ಲೋಕಾಪ೯ಣೆ ಮಾಡಲಾಗಿತ್ತು. ಈಗ ಈ ಸಭಾಭವನದ ವ್ಯವಸ್ಥೆಯನ್ನು ಇನ್ನಷ್ಟು ಉನ್ನತೀಕರಿಸಿ ಆಧುನಿಕವಾಗಿ ನವೀಕರಿಸಲಾಗಿದೆ. ದಿನಾಂಕ 22.08.2025ನೇ ಶ್ರಾವಣ ಶುಕ್ರವಾರದ ಶುಭ ಸಂದಭ೯ದಲ್ಲಿ ಶ್ರೀ ಬಾಹುಬಲಿ ಸಭಾಭವನದ ಉದ್ಘಾಟನೆಯನ್ನು ಮೂಡುಬಿದ್ರಿ ಶ್ರೀ ಜೈನ ಮಠದ ಪರಮ ಪೂಜ್ಯ ,"ಭಾರತಭೂಷಣ" ಡಾ|ಸ್ವಸ್ತಿಶ್ರೀ ಚಾರುಕೀತಿ೯ ಪಂಡಿತಾಚಾಯ೯ವಯ೯ ಮಹಾಸ್ವಾಮೀಜಿಯವರ ಪಾವನ ಸಾನ್ನಿಧ್ಯದಲ್ಲಿ, ಶ್ರೀ ದಿಗಂಬರ ಜೈನ ತೀಥ೯ಕ್ಷೇತ್ರ ಸಮಿತಿಯ ಉಪಾಧ್ಯಕ್ಷರಾದ ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ|ಪದ್ಮಪ್ರಸಾದ್‌ ಅಜಿಲರ ಉಪಸ್ಥಿತಿಯಲ್ಲಿ, ಕನಾ೯ಟಕ ಸರಕಾರದ ಮಾಜಿ ಸಚಿವರಾದ ಕೆ.ಅಭಯಚಂದ್ರ ಜೈನ್‌ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ಈ ಸಂದಭ೯ದಲ್ಲಿ ಬೆಳ್ಳಿಬೀಡು ಬಸದಿಯ ಅನುವಂಶಿಕ ಆಡಳಿತ ಮೊಕ್ತೇಸರರಾದ ಕೆ. ಹೇಮರಾಜ್‌ ಬೆಳ್ಳಿಬೀಡು, ಶ್ರೀ ದಿಗಂಬರ ಜೈನ ತೀಥ೯ಕ್ಷೇತ್ರ ಸಮಿತಿಯ ಕಾಯ೯ದಶಿ೯ಗಳಾದ ವಿ.ಪ್ರವೀಣ್‌ ಕುಮಾರ್‌ ಇಂದ್ರ ಕೋಶಾಧಿಕಾರಿಗಳಾದ ಪಿ. ಜಯರಾಜ್‌ ಕಂಬ್ಳಿ, ಜತೆ ಕಾಯ೯ದಶಿ೯ಗಳಾದ ಮಹಾವೀರ್‌ ಜೈನ್‌ ಮೂಡುಕೋಡಿ, ಕಾಯ೯ಕಾರಿ ಸಮಿತಿಯ ಸದಸ್ಯರುಗಳಾದ ಬಿ.ರತ್ನವಮ೯ ಇಂದ್ರ, ಪ್ರವೀಣ್‌ ಅಜ್ರಿ, ಸುರೇಶ್‌ ಕುಮಾರ್‌ ಆರಿಗ, ಭರತ್‌ ಕುಮಾರ್‌ ಆರಿಗ, ಶಮಿ೯ತ್‌ ಕುಮಾರ್‌ ಹಾಗೂ ಹಿರಿಯ ಶ್ರಾವಕಿಯಾದ ಗುಣವತಿ ಎ. ಆಳ್ವ ಮತ್ತು ರಾಜ್ಯ ಜೈನ ಮಹಿಳಾ ಒಕ್ಕೂಟದ ನಿದೇ೯ಶಕಿಯಾದ ಸರೋಜಾ ಜಿ.ಜೈನ್‌, ಪುರೋಹಿತ ಸಚಿನ್‌ ಇಂದ್ರ ಮತ್ತಿತರರು ಉಪಸ್ಥಿತರಿದ್ದರು.

ವೇಣೂರು: ದಶಲಕ್ಷಣ ಮಹಾಪರ್ವ ಆಚರಣೆ

Article Image

ವೇಣೂರು: ದಶಲಕ್ಷಣ ಮಹಾಪರ್ವ ಆಚರಣೆ

ಬೆಳ್ತಂಗಡಿ ತಾಲೂಕಿನ ವೇಣೂರಿನ ಶ್ರೀ ದಿಗಂಬರ ಜೈನ ತೀರ್ಥ ಸಮಿತಿ (ರಿ.) ವತಿಯಿಂದ ಇತಿಹಾಸ ಪ್ರಸಿದ್ಧ ಭ| ಶ್ರೀ ಬಾಹುಬಲಿ ಕ್ಷೇತ್ರದಲ್ಲಿ ಪರಮಪೂಜ್ಯ 'ಭಾರತಭೂಷಣ' ಜಗದ್ಗುರು ಡಾ| ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು, ಶ್ರೀ ದಿಗಂಬರ ಜೈನ ಮಠ ಮೂಡುಬಿದಿರೆ ಇವರ ದಿವ್ಯ ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ಸಮಿತಿಯ ಅಧ್ಯಕ್ಷರಾದ ಪದ್ಮವಿಭೂಷಣ ರಾಜರ್ಷಿ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರು, ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಇವರ ಪ್ರೇರಣೆ ಹಾಗೂ ಸಮಿತಿಯ ಉಪಾಧ್ಯಕ್ಷರಾದ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು, ಅಳದಂಗಡಿ ಅರಮನೆ ಇವರ ನೇತೃತ್ವದಲ್ಲಿ ಇಂದಿನಿಂದ ಮೊದಲ್ಗೊಂಡು ತಾ. 06-09-2025ನೇ ಶನಿವಾರದವರೆಗೆ ಪ್ರತಿದಿನ ಅಪರಾಹ್ನ ಗಂಟೆ 4-30ರಿಂದ 6-00ರ ವರೆಗೆ ದಶಲಕ್ಷಣ ಮಹಾಪರ್ವ ಆಚರಣೆಯು ಜರುಗಲಿದೆ. ವಿ.ಸೂ: ಪ್ರತೀ ದಿನ ಅಪರಾಹ್ನ ಗಂಟೆ 4-00ರಿಂದ ವೇಣೂರು ಬಸದಿ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಗೆ ಕ್ಷೀರಾಭಿಷೇಕ ಯಾತ್ರಿ ನಿವಾಸದಲ್ಲಿ ಉಪನ್ಯಾಸ ಕಾರ್ಯಕ್ರಮಗಳು ಇರುತ್ತದೆ.

ಗುರುವಂದನಾ ಕಾರ್ಯಕ್ರಮ

Article Image

ಗುರುವಂದನಾ ಕಾರ್ಯಕ್ರಮ

ಮೂಡುಬಿದಿರೆ: ಪ.ಪೂ. ಆಚಾರ್ಯ 108 ಗುಲಾಬು ಭೂಷಣ ಮುನಿಮಹಾರಾಜರ ಪಾವನ ಸಾನ್ನಿಧ್ಯದಲ್ಲಿ ದಶಲಕ್ಷಣ ಮಹಾಪರ್ವ ಆಚರಣೆ ಹಾಗೂ ಮೂಡುಬಿದಿರೆ ಶ್ರೀ ಜೈನ ಮಠದ ಪ.ಪೂ. "ಭಾರತಭೂಷಣ" ಜಗದ್ಗುರು ಡಾ| ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಸ್ವಾಮೀಜಿಗಳವರ ಪಟ್ಟಾಭಿಷೇಕ ವರ್ಧಂತಿ ರಜತ ಮಹೋತ್ಸವದ ಪ್ರಯುಕ್ತ ಗುರುವಂದನಾ ಕಾರ್ಯಕ್ರಮವು ದಿನಾಂಕ: 29-08-2025ನೇ ಶುಕ್ರವಾರ 1000 ಕಂಬದ ಬಸದಿ ಆವರಣದಲ್ಲಿ ಜರಗಲಿರುವುದು.

ಜೈನ ವಧು-ವರರ ರಾಜ್ಯಮಟ್ಟದ ಸಮಾವೇಶ

Article Image

ಜೈನ ವಧು-ವರರ ರಾಜ್ಯಮಟ್ಟದ ಸಮಾವೇಶ

ಚಿಗುರು ಆಲ್ ಇಂಡಿಯಾ ವಧು-ವರರ ವೇದಿಕೆಯ ಆಶ್ರಯದಲ್ಲಿ ವಿದ್ಯಾಗಿರಿಯ ಆಳ್ವಾಸ್‌ ನುಡಿಸಿರಿ ವೇದಿಕೆಯಲ್ಲಿ ಭಾನುವಾರ ಸಂಪರ್ಕ-ಪರಿಚಯ ರಾಜ್ಯಮಟ್ಟದ ಜೈನ ವಧು ವರರ ಸಮಾವೇಶ ನಡೆಯಿತು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್‌ ಸಮಾವೇಶವನ್ನು ಉದ್ಘಾಟಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ ಮೋಹನ ಆಳ್ವ ಅವರು ವೆಬ್‌ಸೈಟ್ ಅನಾವರಣಗೊಳಿಸಿದರು. ಸುಭಾಶ್ಚಂದ್ರ ಚೌಟ ಅಧ್ಯಕ್ಷತೆ ವಹಿಸಿದರು. ಸಂಚಾಲಕ ಸಂಪತ್ ಜೈನ್ ಹೊಸ್ಕಾರ್ ಪ್ರಸ್ತಾವನೆಗೈದರು. ಜೈನ ಸಮುದಾಯದ ಪ್ರಮುಖರಾದ ಸಂಪತ್‌ ಶಿಮುಂಜೆಗುತ್ತು, ಭುಜಬಲಿ ಧರ್ಮಸ್ಥಳ, ಪೂರ್ಣಚಂದ್ರ ಜೈನ್‌, ವಿಜಯ ಕುಮಾ‌ರ್‌ ಜೈನ್ ನೂರಾಳ್‌ಬೆಟ್ಟು, ರಕ್ಷಿತ್ ಜೈನ್ ಬಡೆಕಾವುಗುತ್ತು, ಪ್ರಭಾತ್ ಬಲ್ನಾಡ್, ನೇಮಿರಾಜ್ ಅರಿಗ, ಜಿನೇಂದ್ರ ಜೈನ್ ಈದು, ಮಹೇಂದ್ರ ಜೈನ್‌, ಕೆ.ಸಿ. ಧರಣೇಂದ್ರಯ್ಯ, ಜ್ವಾಲ ಪ್ರಸಾದ್, ಆಮಂತ್ರಣ ವೇದಿಕೆ ಜಿಲ್ಲಾ ಉಪಾಧ್ಯಕ್ಷೆ ಅನಿತಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಜರ್ಮನ್ ಆಗಿದ್ದರೂ ಜೈನ ಧರ್ಮ ಪಾಲನೆ ಮಾಡುತ್ತಿರುವ ಖ್ಯಾತ ವಿದ್ವಾಂಸ ಹರ್ಮನ್

Article Image

ಜರ್ಮನ್ ಆಗಿದ್ದರೂ ಜೈನ ಧರ್ಮ ಪಾಲನೆ ಮಾಡುತ್ತಿರುವ ಖ್ಯಾತ ವಿದ್ವಾಂಸ ಹರ್ಮನ್

ಜರ್ಮನ್ ಆಗಿದ್ದರೂ ಜೈನ ಧರ್ಮ ಪಾಲನೆ ಮಾಡುತ್ತಿರುವ ಹರ್ಮನ್ ರವರು ಖ್ಯಾತ ವಿದ್ವಾಂಸರಾಗಿದ್ದಾರೆ. ಸಂಸ್ಕೃತ ಭಾಷೆಯನ್ನು ಕಲಿತು ಜೈನ ಧರ್ಮವನ್ನು ಆಳವಾಗಿ ಅಭ್ಯಾಸ ಮಾಡಿ ಇಂಗ್ಲಿಷ್ ಮತ್ತು ಜರ್ಮನ್ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ. ಹಲವಾರು ಬಾರಿ ಸಮ್ಮೇದ ಶಿಖರ್ಜಿ, ಶ್ರವಣಬೆಳಗೊಳ ಮುಂತಾದ ಅನೇಕ ಜೈನ ಕ್ಷೇತ್ರಗಳ ದರ್ಶನ ಮಾಡಿದ್ದಾರೆ. ನಾವು ಜರ್ಮನಿಯಲ್ಲಿರುವ ವಿಷಯವನ್ನು ತಿಳಿದು ಅವರ ಮನೆಗೆ ಆಹ್ವಾನಿಸಿದ್ದರು. ಜರ್ಮನಿಯ ಹನೋವರ್ ನಗರದ ಬಳಿ ಸ್ಟ್ಯನ್ ಹುಡೆರ್ ಗ್ರಾಮದಲ್ಲಿ ದಂಪತಿಗಳು ಬಹಳ ಆದರದಿಂದ ನಮ್ಮನ್ನು ಸ್ವಾಗತಿಸಿ ಸತ್ಕರಿಸಿದರು. ಅವರ ಮನೆಯಲ್ಲಿ ಶ್ರವಣಬೆಳಗೊಳ ಹೊಂಬುಜ ಮತ್ತು ಕೊಲ್ಲಾಪುರ ಮಠದ ಭಟ್ಟಾರಕರು ಆಶೀರ್ವದಿಸಿ ಕೊಟ್ಟಿರುವ ಜಿನ ಬಿಂಬಗಳನ್ನು ಇಟ್ಟು ಪೂಜಿಸುತ್ತಿರುವುದನ್ನು ನಮಗೆ ತೋರಿಸಿದರು. ಮೂಡುಬಿದಿರೆ ಪೂಜ್ಯ ಭಟ್ಟಾರಕ ಸ್ವಾಮೀಜಿ ಅವರನ್ನು ಭೇಟಿ ಆಗಿ ಆಶೀರ್ವಾದ ಪಡೆದ ವಿಷಯವನ್ನು ತಿಳಿಸಿದರು. ಅವರ ಸಂಗ್ರಹದಲ್ಲಿ ಕನ್ನಡ ಪುಸ್ತಕಗಳು ಇವೆ.

ಶಿರ್ತಾಡಿಬೀಡು ನರೇಂದ್ರಕುಮಾರ್ ಸ್ಮರಣಾರ್ಥ ಬಸದಿಯಲ್ಲಿ ವಿಶೇಷ ಪೂಜೆ, ಯಕ್ಷಜಿನಗಾನ ವೈಭವ

Article Image

ಶಿರ್ತಾಡಿಬೀಡು ನರೇಂದ್ರಕುಮಾರ್ ಸ್ಮರಣಾರ್ಥ ಬಸದಿಯಲ್ಲಿ ವಿಶೇಷ ಪೂಜೆ, ಯಕ್ಷಜಿನಗಾನ ವೈಭವ

ಉಜಿರೆ: ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಎಸ್.ಬಿ. ನರೇಂದ್ರಕುಮಾರ್ ಆ.4 ರಂದು ನಿಧನರಾಗಿದ್ದು ಅವರ ಆತ್ಮಶಾಂತಿಗಾಗಿ ಆಗೋಸ್ಟ್ 20 ರಂದು ಬುಧವಾರ ಬೆಳ್ತಂಗಡಿ ಜೈನಪೇಟೆಯಲ್ಲಿರುವ ರತ್ನತ್ರಯ ಜೈನತೀರ್ಥ ಕ್ಷೇತ್ರದಲ್ಲಿ ಭಗವಾನ್ ಶಾಂತಿನಾಥಸ್ವಾಮಿ ಸನ್ನಿಧಿಯಲ್ಲಿ 216 ಕಲಶ ಅಭಿಷೇಕ ಮತ್ತು ಪಂಚಾಮೃತ ಅಭಿಷೇಕ ನಡೆಯಿತು. ಯಕ್ಷಜಿನಗಾನ ನಮನ: ಖ್ಯಾತ ಯಕ್ಷಗಾನ ಭಾಗವತರುಗಳಾದ ರಾಮಕೃಷ್ಣ ಮಯ್ಯ ಸಿರಿಬಾಗಿಲು, ರವಿಚಂದ್ರ ಕನ್ನಡಿಕಟ್ಟೆ, ಕಾವ್ಯಶ್ರೀ ಅಜೇರು, ಚಂದ್ರಶೇಖರ ಆಚಾರ್, ಕುಮಾರಿ ಸಿಂಚನಾ ಮೂಡುಕೋಡಿ ಸುಶ್ರಾವ್ಯವಾಗಿ ಜಿನಭಕ್ತಿಗೀತೆಗಳನ್ನು ಯಕ್ಷಗಾನ ಶೈಲಿಯಲ್ಲಿ ಹಾಡಿದರು. ಕಾವ್ಯಶ್ರೀ ಅಜೇರು ಅವರಿಂದ ಪಂಚನಮಸ್ಕಾರ ಮಂತ್ರ ಪಠಣದೊಂದಿಗೆ ಆರಂಭವಾದ ಯಕ್ಷಜಿನಗಾನ ನಮನದಲ್ಲಿ ಉದಯರಾಗ, ಭಗವಾನ್ ಚಂದ್ರನಾಥಸ್ವಾಮಿ ಸ್ತುತಿ, ಜಿನವಾಣಿ ಸ್ತುತಿ, ಶಾಂತಿನಾಥಸ್ವಾಮಿ ಸ್ತುತಿ, ಪಂಚಪರಮೇಷ್ಠಿಗಳ ಸ್ತುತಿ, ಯಕ್ಷಜಿನಗಾನಗಳನ್ನು ಕಲಾವಿದರು ಸುಶ್ರಾವ್ಯವಾಗಿ ಸಾದರಪಡಿಸಿದರು. ಹಿಮ್ಮೇಳದಲ್ಲಿ ಚೆಂಡೆ, ಮದ್ದಳೆ ವಾದನದಲ್ಲಿ ಬಿ. ಸೀತಾರಾಮ ತೋಳ್ಪಾಡಿತ್ತಾಯ, ಬಿ. ಜನಾರ್ದನ ತೋಳ್ಪಾಡಿತ್ತಾಯ, ದೇವಾನಂದ ಭಟ್ ಮತ್ತು ಚಂದ್ರಶೇಖರ ಭಟ್ ಸಹಕರಿಸಿದರು. ನಿವೃತ್ತ ತಹಶೀಲ್ದಾರ್ ಹಾಗೂ ಹವ್ಯಾಸಿ ಯಕ್ಷಗಾನ ಕಲಾವಿದರಾದ ಉಜಿರೆಯ ಸುರೇಶ್ ಕುದ್ರೆಂತಾಯ ದಿವಂಗತ ನರೇಂದ್ರ ಕುಮಾರ್ ಜೀವನ-ಸಾಧನೆ ಬಗ್ಯೆ ಸ್ಥಳದಲ್ಲೆ ಕವನ ಒಂದನ್ನು ರಚಿಸಿ ಯಕ್ಷಗಾನ ಶೈಲಿಯಲ್ಲಿ ಹಾಡಿದರು. ನಿವೃತ್ತ ಮುಖ್ಯೋಪಾಧ್ಯಾಯ ಉಜಿರೆಯ ಸೋಮಶೇಖರ ಶೆಟ್ಟಿ ದಿವಂಗತ ನರೇಂದ್ರ ಕುಮಾರ್ ಕ್ರೀಡೆ, ಯಕ್ಷಗಾನ, ಎನ್.ಸಿ.ಸಿ. ಮತ್ತು ಸೇವಾ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಧನ್ಯತೆಯಿಂದ ಸ್ಮರಿಸಿ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದರು. ಕೊನೆಯಲ್ಲಿ ಒಂಬತ್ತು ಬಾರಿ ಪಂಚನಮಸ್ಕಾರ ಮಂತ್ರವನ್ನು ಸಾಮೂಹಿಕ ಪಠಣ ಮಾಡಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಲಾಯಿತು. ಡಾ. ಶೃತಕೀರ್ತಿರಾಜ ಮತ್ತು ಸಿದ್ಧಾಂತಕೀರ್ತಿ ರಾಜ, ಸಹೋದರಿ ಹಾಗೂ ಕುಟುಂಬಸ್ಥರು ಸಮಾರಂಭದ ಯಶಸ್ವಿಗೆ ಸಹಕರಿಸಿದರು. ಮುನಿರಾಜ ರೆಂಜಾಳ ಕಾರ್ಯಕ್ರಮ ನಿರ್ವಹಿಸಿದರು.

ಮೂಡುಬಿದಿರೆ: ಎಕ್ಸಲೆಂಟ್ ನೂತನ ಲಾಂಛನ ಬಿಡುಗಡೆ

Article Image

ಮೂಡುಬಿದಿರೆ: ಎಕ್ಸಲೆಂಟ್ ನೂತನ ಲಾಂಛನ ಬಿಡುಗಡೆ

ಮೂಡುಬಿದಿರೆ ಕಲ್ಲಬೆಟ್ಟು ಎಕ್ಸಲೆಂಟ್ ಸಂಸ್ಥೆಗಳ ನೂತನ ಲಾಂಛನವನ್ನು ಮೂಡುಬಿದಿರೆ ತಾಲೂಕಿನ ತಹಶೀಲ್ದಾರ್ ಶ್ರೀಧರ್ ಎಸ್ ಮುಂದಲಮನಿ ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅವರು ಎದುರಾಗುವ ಅನೀರೀಕ್ಷಿತ ಸಮಸ್ಯೆಗಳನ್ನು ಎದುರಿಸಲು ವಿದ್ಯೆ ಸಹಕಾರಿಯಾಗಬಲ್ಲದು ಆದ್ದರಿಂದ ಎಲ್ಲರೂ ವಿದ್ಯಾವಂತರಾಗಬೇಕು ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್ ದೇಹಕ್ಕೆ ಶಿರ ಪ್ರಧಾನವೆಂಬತೆ, ಸಂಸ್ಥೆಯ ಉದ್ದೇಶ, ಸಂಕಲ್ಪ, ಬದ್ಧತೆಗಳ ಸಂದೇಶವನ್ನು ಹೊಂದಿದ ಲಾಂಛನ ಸಂಸ್ಥೆಗೆ ಶಿರೋಭೂಷಣವಿದ್ದಂತೆ, ಬೆಳಕಿನ ಪ್ರತೀಕ ಎಕ್ಸಲೆಂಟಿನ ಲಾಂಛನದಲ್ಲಿ ಪುಸ್ತಕದ ಸಂಸ್ಕಾರ ಜ್ಯೋತಿಯ ಬೆಳಕಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕನ್ನೀವ ಸಂಕಲ್ಪವಿದೆ ಎಂದರು. ವೇದಿಕೆಯಲ್ಲಿ ಮಾಜಿ ಸಚಿವರು ಸಂಸ್ಥೆಯ ಸ್ಥಾಪಕ ಗೌರವಾಧ್ಯಕ್ಷರೂ ಆದ ಅಭಯಚಂದ್ರ ಜೈನ್. ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು. ಉಪಮುಖ್ಯೋಪಾಧ್ಯಾಯ ಜಯಶೀಲ್ ಕಾರ್ಯಕ್ರಮ ನಿರೂಪಿಸಿದರು. ಪ್ರಿಯಾಂಕ ಸ್ವಾಗತಿಸಿದರು. ಪ್ರಮೀಳಾ ಪಿಂಟೋ ವಂದಿಸಿದರು.

ಎಕ್ಸಲೆಂಟ್ ಕಾಲೇಜಿನಲ್ಲಿ ಸ್ವಾತಂತ್ರೋತ್ಸವ

Article Image

ಎಕ್ಸಲೆಂಟ್ ಕಾಲೇಜಿನಲ್ಲಿ ಸ್ವಾತಂತ್ರೋತ್ಸವ

ಮೂಡುಬಿದಿರೆ: ಎಕ್ಸಲೆಂಟ್ ಸ್ವಾತಂತ್ರೋತ್ಸವ ಮೂಡುಬಿದಿರೆ ತಾಲೂಕು ತಹಶೀಲ್ದಾರ್ ಶ್ರೀಧರ್ ಎಸ್. ಮುಂದಲಮನಿ ಧ್ವಜಾರೋಹಣ ಮಾಡುವುದರೊಂದಿಗೆ ಆಚರಿಸಲಾಯಿತು. ಬಳಿಕ ಮಾತನಾಡಿದ ಅವರು ಬದುಕಿನಲ್ಲಿ ಅನಿರೀಕ್ಷಿತಗಳು ಸಂಭವಿಸಿದಾಗ ಅದನ್ನು ಎದುರಿಸಿ ಈ ದೇಶದ ಘನತೆ ಗೌರವ ಕಾಪಾಡುವಲ್ಲಿ ನಾವು ಕಟಿಬದ್ಧರಾಗಬೇಕು ಎಂದರು. ಇದೇ ಸಂದರ್ಭದಲ್ಲಿ ಮೂಡುಬಿದಿರೆ ಎಕ್ಸಲೆಂಟ್ ಸಂಸ್ಥೆಯ ನೂತನ ಲಾಂಛನವನ್ನು ತಹಶೀಲ್ದಾರ್ ಬಿಡುಗಡೆಗೊಳಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಪ್ರತಿಕೂಲತೆಗಳ ನಡುವೆ ದೃಢ ಚಿತ್ತದಿಂದ ಬದುಕಿ ಗೆದ್ದು ನಾಡಿಗೆ, ದೇಶಕ್ಕೆ ಕೀರ್ತಿ ತರಬೇಕು ಎಂದರು. ಸಂಸ್ಥೆಯ ಗೌರವಾಧ್ಯಕ್ಷರಾದ ಅಭಯಚಂದ್ರ ಜೈನ್ ದೇಶ ಭಾಷೆಗಳ ರಕ್ಷಣೆ ನಮ್ಮ ಕರ್ತವ್ಯ ಎಂದರು. ಎನ್‌ಸಿಸಿ ವಿದ್ಯಾರ್ಥಿಗಳು ಕವಾಯತಿನೊಂದಿಗೆ ಕಾರ್ಯಕ್ರಮ ಪ್ರಾರಂಭಗೊAಡಿತು. ವೇದಿಕೆಯಲ್ಲಿ ಎಕ್ಸಲೆಂಟ್ ಮೂಡುಬಿದಿರೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು. ಸಂಸ್ಥೆಯ ಉಪನ್ಯಾಸಕಿ ಕು.ಪ್ರಿಯಾಂಕ ಸ್ವಾಗತಿಸಿ, ಡಾ. ಶೃತಿ ಅತಿಥಿಗಳನ್ನು ಪರಿಚಯಿಸಿದರು. ಕು. ಪ್ರಮೀಳಾ ಪಿಂಟೋ ವಂದಿಸಿದರು. ಉಪಮುಖ್ಯೋಪಾಧ್ಯಾಯ ಜಯಶೀಲ ಕಾರ್ಯಕ್ರಮ ನಿರೂಪಿಸಿದರು.

ಉಜಿರೆ ಶ್ರೀ ರತ್ನವರ್ಮ ಕ್ರೀಡಾಂಗಣದಲ್ಲಿ ಎಸ್.ಡಿ.ಎಂ ಸ್ವಾತಂತ್ರ್ಯೋತ್ಸವ ಸಂಭ್ರಮ

Article Image

ಉಜಿರೆ ಶ್ರೀ ರತ್ನವರ್ಮ ಕ್ರೀಡಾಂಗಣದಲ್ಲಿ ಎಸ್.ಡಿ.ಎಂ ಸ್ವಾತಂತ್ರ್ಯೋತ್ಸವ ಸಂಭ್ರಮ

ಉಜಿರೆ, ಆಗಸ್ಟ್ 15: ಸಮೃದ್ಧಿ, ಸುರಕ್ಷತೆ ಮತ್ತು ದಿಟ್ಟ ಹೆಜ್ಜೆಗಳೊಂದಿಗೆ ಮುನ್ನಡೆಯುವ “39;ಹೊಸ ಭಾರತ” ಕಟ್ಟುವ ಘೋಷವಾಕ್ಯದೊಂದಿಗೆ ಎಸ್.ಡಿ.ಎಂ ಕಾಲೇಜಿನ ಶ್ರೀರತ್ನವರ್ಮ ಹೆಗ್ಗಡೆ ಕ್ರೀಡಾಂಗಣವು 79ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾಯಿತು. ಎಸ್.ಡಿ.ಎಂ ಶಾಲೆ, ಪದವಿ ಪೂರ್ವ, ಪದವಿ, ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯ, ತಾಂತ್ರಿಕ ಸೇರಿದಂತೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿಗಳ ಸಮಕ್ಷಮದಲ್ಲಿ ನಿವೃತ್ತ ಸೇನಾಧಿಕಾರಿ ಮೇಜರ್ ಜನರಲ್ ಎಂ.ವಿ.ಭಟ್ ಅವರು ಧ್ವಜಾರೋಹಣ ನೆರವೇರಿಸಿದರು. ಎನ್.ಸಿ.ಸಿ. ಕೆಡೆಟ್‌ಗಳಿಂದ ಧ್ವಜವಂದನೆ ನಡೆಯಿತು. ಈ ವೇಳೆ ಎನ್‌ಸಿಸಿ ಅಧಿಕಾರಿಗಳಾದ ಲೆಫ್ಟಿನೆಂಟ್ ಭಾನುಪ್ರಕಾಶ್, ಎನ್‌ಸಿಸಿ ಆಫಿಸರ್ ಸದಾನಂದ್, ರೋವರ್ ಸ್ಕೌಟ್ ಲೀಡರ್ ಪ್ರಸಾದ್ ಕುಮಾರ್ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್.ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಶ್ವನಾಥ ಪಿ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ಸೌಮ್ಯ ಬಿ.ಪಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಮೋದ ಕುಮಾರ್, ಎಸ್.ಡಿ.ಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಪ್ರಶಾಂತ ಶೆಟ್ಟಿ, ಎಸ್‌ಡಿಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಅಶೋಕ ಕುಮಾರ್ ಮತ್ತಿತರ ಶೈಕ್ಷಣಿಕ ವಿಭಾಗಗಳ ಮುಖ್ಯಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಎಸ್.ಡಿ.ಎಂ ಕಾಲೇಜಿನ ಆಡಳಿತಾಂಗ ಕುಲಸಚಿವರಾದ ಡಾ. ಶ್ರೀಧರ್ ಭಟ್ ಕಾರ್ಯಕ್ರಮ ನಿರೂಪಿಸಿದರು.

ಸತ್ತೂರು, ಧಾರವಾಡ: ಎಸ್.ಡಿ.ಎಂ. ವಿಶ್ವವಿದ್ಯಾಲಯವು 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ

Article Image

ಸತ್ತೂರು, ಧಾರವಾಡ: ಎಸ್.ಡಿ.ಎಂ. ವಿಶ್ವವಿದ್ಯಾಲಯವು 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ

ಸತ್ತೂರು, ಧಾರವಾಡ: ಎಸ್.ಡಿ.ಎಂ. ವಿಶ್ವವಿದ್ಯಾಲಯವು 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದಂತ ಮಹಾವಿದ್ಯಾಲಯದಲ್ಲಿ ಆಚರಿಸಲಾಯಿತು. ದಂತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಬಲರಾಮ್ ನಾಯ್ಕ ಮುಖ್ಯ ಅತಿಥಿಯವರಾಗಿ ಧ್ವಜಾರೋಹಣ ಮಾಡಿದರು. ಮುಖ್ಯ ಅತಿಥಿಯವರಾದ ಡಾ. ಬಲರಾಮ್ ನಾಯ್ಕ ಅವರು ಮಾತನಾಡುತ್ತಾ: ದೇಶಕ್ಕೆ ಸ್ವಾತಂತ್ರ್ಯದ ಉಡುಗೊರೆ ತಂದು ಕೊಟ್ಟು ಕ್ರಾಂತಿಕಾರಿ ಹೋರಾಟಗಾರರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಜೀವನದಲ್ಲಿ ಗೆಲವು ಸಾಧಿಸಬೇಕೆಂದ್ದಿದರೆ ಭಾರತ ಇತಿಹಾಸವನ್ನು ಮರೆಯಬಾರದು. ಭಾರತದ ಸಂಪತ್ಭರಿತ ಹಾಗೂ ಸಡೃಡ ಸಂಪ್ರಧಾಯವನ್ನು ನಾವೆಲ್ಲರು ಗೌರವಿಸಬೇಕು. ಸಡೃಡ ದೇಶ ನಿರ್ಮಾಣಕ್ಕೆ ಆಂತರಿಕ ದ್ವೇಷ, ಅಸೂಯೆಗಳಂತ ದೌರ್ಬಲ್ಯಗಳಿಂದ ಮುಕ್ತರಾಗಬೇಕು. ಬಲಾಡ್ಯ ದೇಶ ನಿರ್ಮಾಣ ಮತ್ತು ಜನರ ಸಮಸ್ಯೆಗಳಿಗೆ ಆಧುನಿಕ ಕೌಶಲ್ಯ ಮತ್ತು ಜ್ಞಾನದ ಅವಶ್ಯಕವಿದೆ. ನಾವು ವೃತ್ತಿಪರರು ನಿಷ್ಠೆಯಿಂದ ಸೇವೆ ಸಲ್ಲಿಸುವುದರ ಮೂಲಕ ದೇಶ ನಿರ್ಮಾಣದಲ್ಲಿ ಪಾಲ್ಗೊಳ್ಳಬಹುದು. ಇಂದಿನ ಯುವಜನರು ಸರಿಯಾದ ಮಾರ್ಗವನ್ನು ಅನುಸರಿಸದರೊಂದಿಗೆ ತಮ್ಮನ್ನು ದೇಶ ಸೇವೆಗೆ ಅರ್ಪಿಸಿಕೊಳ್ಳಬಹುದು. ಈ ಸಂದರ್ಭದಲ್ಲಿ ಅಂಗ ಸಂಸ್ಥೆಗಳ ಪ್ರಥಮ ವರ್ಷದ ಒಬ್ಬ ಮತ್ತು ಅಂತಿಮ ವರ್ಷದ ಇಬ್ಬರು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಕಿರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಉಪಕುಲಪತಿಗಳಾದ ಡಾ. ನಿರಂಜನ್ ಕುಮಾರ, ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್, ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ, ಸಹ ಉಪಕುಲಪತಿಯವರಾದ ವಿ. ಜೀವಂಧರ್ ಕುಮಾರ್, ಹಣಕಾಸು ಅಧಿಕಾರಿಗಳಾದ ವಿ ಜಿ ಪ್ರಭು, ಕುಲಸಚಿವರಾದ ಡಾ. ಚಿದೇಂದ್ರ ಎಂ. ಶೆಟ್ಟರ್, ಸಂಸ್ಥೆಗಳ ಮುಖ್ಯಸ್ಥರು, ಉಪ ಪ್ರಾಂಶುಪಾಲರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದಂತ ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ಆನಂದ್ ತಾವರಗೇರಿ ಅತಿಥಿಗಳನ್ನು ಸ್ವಾಗತಿಸಿದರು. ಡಾ. ವಿನಾಯಕ್ ಮತ್ತು ಡಾ. ಶ್ರೇಯಾ ಜಿ. ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಕಿರಣ ಕುಮಾರ್ ವಂದನಾರ್ಪಣೆಯನ್ನು ಮಾಡಿದರು.

ಬೋಳಂಬಳ್ಳಿಯಲ್ಲಿ ತೌಳವ ಇಂದ್ರ ಸಮಾಜದ ಬಸದಿ ದರ್ಶನ ಹಾಗೂ ಆಟಿಕೂಟ

Article Image

ಬೋಳಂಬಳ್ಳಿಯಲ್ಲಿ ತೌಳವ ಇಂದ್ರ ಸಮಾಜದ ಬಸದಿ ದರ್ಶನ ಹಾಗೂ ಆಟಿಕೂಟ

ತೌಳವ ಇಂದ್ರ ಸಮಾಜದ 2025ನೆ ವರ್ಷದ ಕ್ಷೇತ್ರ ದರ್ಶನ ಮತ್ತು ಆಟಿ ಕೂಟ ಇತ್ತೀಚೆಗೆ ಕಂಬದಕೋಣೆಯ ಬೋಳಂಬಳ್ಳಿ ಯ ಶ್ರೀ ಪದ್ಮಾವತಿ ಕ್ಷೇತ್ರದ ಸಭಾಂಗಣದಲ್ಲಿ ನಡೆಯಿತು. ಬಸದಿಗೆ ಬನ್ನಿ ಘೋಷವಾಕ್ಯದ ಅನುಷ್ಠಾನದ ನಿಟ್ಟಿನಲ್ಲಿ ನಗರದಿಂದ ದೂರವಿರುವ ಊರಿನ ಬಸದಿಗಳ ದರ್ಶನ ಪಡೆದು ಅಲ್ಲಿಯ ಪರಿಸರದಲ್ಲಿ ಕ್ರೀಡಾ ಕೂಟ ಹಾಗೂ ಸಭೆ ಮುಂತಾದ ಕಾರ್ಯಕ್ರಮ ಹಮ್ಮಿಕೊಂಡು, ಬಸದಿಗಳನ್ನೂ ಸಂದರ್ಶಿಸುವುದೇ ಇದರ ಮೂಲ ಉದ್ದೇಶ. ಈ ಆಚರಣೆಯೇ "ಕ್ಷೇತ್ರದರ್ಶನ ಹಾಗೂ ಆಟಿ ಕೂಟ"ಕಾರ್ಯಕ್ರಮ. "ಜೈನ ಬ್ರಾಹ್ಮಣರ(ಇಂದ್ರ) ಸಮಾಜ ಬಹಳ ಸಣ್ಣ ಸಮುದಾಯ, ಅದರಲ್ಲೂ ತುಳು ಮಾತಾಡುವ ಇಂದ್ರ ಸಮಾಜ ಎನ್ನುವ ಒಂದು ಸಂಘಟನೆ ಇದೆ ಎಂದು ನನಗೆ ತಿಳಿದಿರಲಿಲ್ಲ, ಈ ಜೈನ ಪುರೋಹಿತ ವರ್ಗ ನಮ್ಮ ಕ್ಷೇತ್ರಕ್ಕೆ ಬಂದದ್ದು ನನಗೆ ಬಹಳ ಸಂತಸವಾಗಿದೆ, ಅವರ ಈ ದಿನದ ಎಲ್ಲಾ ಕಾರ್ಯ ಚಟುವಟಿಕೆಗೆ ಇಲ್ಲಿರುವ ಎಲ್ಲಾ ಸೌಲಭ್ಯಗಳನ್ನು ಉಪಯೋಗಿಸಬಹುದು, ಮೇಲಾಗಿ ಏನಾದರೂ ವ್ಯವಸ್ಥೆ ಬೇಕಿದ್ದಲ್ಲಿ ಸಂತೋಷದಿಂದ ಪೂರೈಸಲು ಕ್ಷೇತ್ರ ಬದ್ಧವಾಗಿದೆ" ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾತನಾಡಿದ ಬೋಳಂಬಳ್ಳಿ ಶ್ರೀ ಪದ್ಮಾವತಿ ದೇವಿ ಕ್ಷೇತ್ರದ ಜ್ಯೋತಿಷ್ಯರೂ, ಧರ್ಮದರ್ಶಿಯೂ ಆದ ಧರ್ಮರಾಜ್ ಜೈನ್ ರವರು ಸಭೆಗೆ ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೊ.ಅಕ್ಷಯ ಕುಮಾರ್ ಮಳಲಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ತೌಳವ ಇಂದ್ರ ಸಂಘಟನೆಯು ಹದಿನೈದು ವರ್ಷಗಳಿಂದ ನಿರಂತರ ಸಮಾಜಮುಖಿ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡು, ಪುರೋಹಿತ ವರ್ಗದವರಿಗೆ ಸ್ವಲ್ಪ ಬಿಡುವುವಿರುವ ಆಟಿ ಮಾಸದಲ್ಲಿ ಇಂಥಹ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದು, ಈ ವರ್ಷ ಬಹಳ ಹಿಂದಿನ ಪುರಾತನ ಆಳುಪ ಅರಸರ ಕಾಲದಿಂದಲೂ ಪೂಜೆ ಗೊಳ್ಳುತ್ತಿರುವ ಶ್ರೀ ಪದ್ಮಾವತಿ ದೇವಿ ನೆಲೆಸಿರುವ ಬೋಳಂಬಳ್ಳಿ ಬಸದಿಯ ದರ್ಶನ ಮಾಡಿ, ಸ್ಥಳದಲ್ಲಿಯೇ ಸದಸ್ಯರಿಗೆ ಕೆಲ ಕ್ರೀಡೆಗಳನ್ನು ಏರ್ಪಡಿಸಿ ಕ್ಷೇತ್ರದ ಪ್ರಸಾದ ಸ್ವೀಕರಿಸಲು ನಿರ್ಧರಿಸಲಾಯಿತು" ಎಂದರಲ್ಲದೆ ಅತಿಥಿಗಳನ್ನೂ ಸ್ವಾಗತಿಸಿ ಮುಂದುವರಿದು ಕಾರ್ಯಕ್ರಮಕ್ಕೆ ಅನುಮತಿ ನೀಡಿ ಸಹಕರಿಸಿದ ಕ್ಷೇತ್ರದ ಆಡಳಿತ ಮಂಡಳಿಯನ್ನು ಶ್ಲಾಘಿಸಿದರು. ಅನಂತರ ಇನ್ನೋರ್ವ ಅತಿಥಿ ಧರ್ಮರಾಜ ಜೈನ್ ರವರ ಪುತ್ರ ಡಾಕ್ಟರ್ ಆಕಾಶ್ ರಾಜ್ ರವರೂ ಮನೋರಂಜನೆಯ ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸುತ್ತಾ ಸಂಘದ ಚಟುವಟಿಕೆಗಳನ್ನು ಹೊಗಳುತ್ತಾ,ಪುರೋಹಿತರ ಸಂಘಟನೆ ಇಲ್ಲಿಗೆ ಬಂದುದು ನಮ್ಮ ಭಾಗ್ಯ ಎಂದು ತಿಳಿಯುತ್ತೇವೆ ಎಂದರು ಹಾಗು ಮುಂದಕ್ಕೂ ಪ್ರೋತ್ಸಾಹ ನೀಡುವ ಭರವಸೆ ನೀಡಿದರು. ಅನಂತರ ಧರ್ಮರಾಜ ಜೈನ್ ರವರನ್ನು ಶಾಲು, ಹಾರ, ಫಲ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು ಹಾಗೂ ಇಂದ್ರ ಸಮಾಜದ ವತಿಯಿಂದ ಕ್ಷೇತ್ರಕ್ಕೆ ದೇಣಿಗೆಯನ್ನು ನೀಡಲಾಯಿತು. ಕ್ಷೇತ್ರದ ವತಿಯಿಂದ ಹಿರಿಯ ಪುರೋಹಿತರಾದ ಪಡೆಂಗಡಿ ಅರುಣಾ ಕುಮಾರ್ ಇಂದ್ರ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಇಂದ್ರ ಸಮಾಜದ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಎರ್ಮಾಳು ಸುಧೀರ್ ಕುಮಾರ್ ಇಂದ್ರರವರನ್ನೂ ಶಾಲುಹಾಕಿ ಅಭಿನಂದಿಸಲಾಯಿತು. ಉಪಾಧ್ಯಕ್ಷರಾದ ದಿವ್ಯಾವಿರೇಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆರಂಭದಲ್ಲಿ ವಾಣಿಶ್ರೀ ಪ್ರಾರ್ಥನೆ ನೆರವೇರಿಸಿದರು. ಕಾರ್ಯದರ್ಶಿ ಅಭಯ ಕುಮಾರ್ ಧನ್ಯವಾದ ಸಮರ್ಪಿಸಿದರು, ಆಹ್ಲಾದ ಜೈನ್ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು. ಸುಜಾತ, ಶ್ರೇಯಶ್ರೀ, ಮೇಘನಾರವರು ಕ್ರೀಡಾ ನಿರ್ಣಾಯಕರಾಗಿ ಸಹಕರಿಸಿದರು. ವಿಜೇತರ ಪಟ್ಟಿಯನ್ನು ಸುಜ್ಞಾನ ಇಂದ್ರ ವಾಚಿಸಿದರು. ಶಾಂತಿ ಮಂತ್ರದೊಡನೆ ಕಾರ್ಯಕ್ರಮಕ್ಕೆ ಮುಕ್ತಾಯ ಮಾಡಿ ಪ್ರವಾಸಿ ತಂಡ ಮೂಡುಬಿದಿರೆಗೆ ಹಿಂದಿರುಗಿತು.

ಭಾರತೀಯ ಸೇನೆಯಲ್ಲಿ ವಿಪುಲ ಅವಕಾಶ ನಿವೃತ್ತ ಯೋಧ ಕಾರ್ಗಿಲ್ ವೀರ ನಾಯಕ್ ಲೀಲಾದರ್ ಕಡಂಬೋಡಿ

Article Image

ಭಾರತೀಯ ಸೇನೆಯಲ್ಲಿ ವಿಪುಲ ಅವಕಾಶ ನಿವೃತ್ತ ಯೋಧ ಕಾರ್ಗಿಲ್ ವೀರ ನಾಯಕ್ ಲೀಲಾದರ್ ಕಡಂಬೋಡಿ

ಭಾರತೀಯ ಸೇನೆ ವಿಶ್ವದ ಅತ್ಯಂತ ಶಿಸ್ತಿನ ಮತ್ತು ಶಕ್ತಿಶಾಲಿ ಸೈನ್ಯಗಳಲ್ಲಿ ಒಂದು. ದೇಶದ ರಕ್ಷಣೆಯೊಂದಿಗೆ ಸೇನೆ ತನ್ನ ಸದಸ್ಯರಿಗೆ ವೈವಿಧ್ಯಮಯ ಅವಕಾಶಗಳನ್ನು ವೃತ್ತಿಪರ ಬೆಳವಣಿಗೆ, ಶಿಸ್ತು ಹಾಗೂ ಗೌರವದ ಜೀವನವನ್ನು ಒದಗಿಸುತ್ತದೆ. ಎಂದು ಭಾರತೀಯ ಸೇನೆಯ ನಿವೃತ್ತ ಯೋಧ ನಾಯಕ್ ಲೀಲಾದರ್ ಕಡಂಬೋಡಿ ಅವರು ಹೇಳಿದರು. ಮೂಡುಬಿದಿರೆಯ ಕಲ್ಲಬೆಟ್ಟುವಿನ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಜರಗಿದ ವೀರ ಯೋಧರಿಗೆ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಭಾರತೀಯ ಸೇನೆಯಲ್ಲಿ ಇರುವಂತಹ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತಾ, ಕಾರ್ಗಿಲ್ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತ ಯೋಗೇಂದ್ರ ಸಿಂಗ್ ಯಾದವ್ ಅವರ ಹೋರಾಟವನ್ನು ಸ್ಮರಿಸಿದರು. ನಿವೃತ್ತಿಯ ನಂತರವೂ ನಾವೂ ದೈಹಿಕವಾಗಿ ಸದೃಡರಾಗಿದ್ದರೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಗೌರವ ಅವಕಾಶಗಳು ಸಿಗುತ್ತವೆ. ಸೈನಿಕರನ್ನು ಗುರುತಿಸುವ ಕಾರ್ಯಕ್ರಮ ಮುಂದೆ ಕೂಡ ಈ ಸಂಸ್ಥೆಯಿಂದ ನಡೆಯಲಿ. ಮುಂದಿನ ದಿನಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಸೇನೆಗೆ ಸೇರಿ ಈ ಸಂಸ್ಥೆಯಿಂದ ಗೌರವಿಸುವಂತಾಗಲಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಮಾತನಾಡಿ ಎಲ್ಲರಿಗೂ ಭಗವಂತ ಪ್ರತಿಭೆಯನ್ನು ಕೊಟ್ಟಿದ್ದಾನೆ ಅದನ್ನು ಬಳಸಿಕೊಂಡು ಜೀವನವನ್ನು ರೂಪಿಸಿಕೊಳ್ಳಬೇಕು, ನಾವೆಲ್ಲರೂ ಸುಖ ಶಾಂತಿ ನೆಮ್ಮದಿಯಿಂದ ಇರಲು ಭಾರತೀಯ ಸೇನೆ ಕಾರಣ. ಸೇನೆಗೆ ಸೇರಲು ದೈಹಿಕ ಸಾಮರ್ಥ್ಯ ಬಹುಮುಖ್ಯ. ದೇಶ ಸೇವೆಗೆ ಎಲ್ಲರೂ ಸೇರಬೇಕು. ದೇಶ ಕಾಯುವ ಸೈನಿಕರ ಬಗ್ಗೆ ನಮಗೆ ಗೌರವ ಇರಬೇಕು, ಎಲ್ಲರಲ್ಲೂ ದೇಶ ಪ್ರೇಮವನ್ನು ಹುಟ್ಟಿಸಬೇಕು, ಎಂದು ಹೇಳಿದರು. ಈ ಸಂದರ್ಭದಲ್ಲಿ ನಿವೃತ್ತ ಯೋಧ ನಾಯಕ್ ಲೀಲಾಧರ ಕಡಂಬೋಡಿಯವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು ವೇದಿಕೆಯಲ್ಲಿ ದೇಶದ ವೀರಯೋಧರ ಸೇವೆಯನ್ನು ಅವರ ತ್ಯಾಗ ಬಲಿದಾನವನ್ನು ನೃತ್ಯದ ಮೂಲಕ ಬಿಂಬಿಸಲಾಯಿತು. ಭಾರತೀಯ ಧೀರ ಯೋಧ ಮೇಜರ್ ಆಶಾರಾಮ್ ತ್ಯಾಗಿ ಅವರ ಹೋರಾಟದ ದೃಶ್ಯ ರೂಪಕವನ್ನು ಅಭಿನಯಿಸಲಾಯಿತು. ಇದೇ ಕಾರ್ಯಕ್ರಮದಲ್ಲಿ ಸಂಸ್ಥೆಯ ಎನ್‌ಸಿಸಿ ವಿದ್ಯಾರ್ಥಿಗಳಿಗೆ ಶಿಸ್ತು, ಜವಬ್ದಾರಿ ಹಾಗೂ ರಾಷ್ಟ್ರಭಕ್ತಿ ನೈತಿಕತೆಯ ಮೌಲ್ಯ ಸಾರುವ ಎನ್‌ಸಿಸಿ ಬ್ಯಾರೆಟ್‌ಗಳನ್ನು ನೀಡಲಾಯಿತು. ಶಿಸ್ತು, ಶಾರೀರಿಕ ಕ್ಷಮತೆ ಹಾಗೂ ರಾಷ್ಟ್ರಭಕ್ತಿಯ ಅಭಿವ್ಯಕ್ತಿಗಾಗಿ ಎನ್‌ಸಿಸಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು. ಸಂಸ್ಥೆಯ ಆಡಳಿತ ನಿರ್ದೇಶಕರಾದ ಡಾ. ಸಂಪತ್‌ಕುಮಾರ್ ಜೈನ್, ಶಾಲೆಯ ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್, ಉಪಮುಖ್ಯೋಪಾಧ್ಯಾಯರಾದ ಜಯಶೀಲ ಉಪಸ್ಥಿತರಿದ್ದ ಈ ಕಾರ್ಯಕ್ರಮವನ್ನು ಶಾಶ್ವತ್ ಮತ್ತು ಆರ್ಯನ್ ಶಿಂಧೆ ನಿರೂಪಿಸಿದರು. ದಕ್ಷ ಸ್ವಾಗತಿಸಿ, ಚಾರ್ವಿ ವಂದಿಸಿದರು.

ಹೊಂಬುಜದ ಜೈನ ಮಠಕ್ಕೆ ಕಾಲ್ನಡಿಗೆಯಿಂದ ಶ್ರೀಕ್ಷೇತ್ರ ದರ್ಶನ ಮಾಡುವ ಸಂಕಲ್ಪ ಯಾತ್ರೆ

Article Image

ಹೊಂಬುಜದ ಜೈನ ಮಠಕ್ಕೆ ಕಾಲ್ನಡಿಗೆಯಿಂದ ಶ್ರೀಕ್ಷೇತ್ರ ದರ್ಶನ ಮಾಡುವ ಸಂಕಲ್ಪ ಯಾತ್ರೆ

ಜನರು ದೇವರಿಗೆ ಭಕ್ತಿ ಸಮರ್ಪಣೆ ಮಾಡಲು ವಿವಿಧ ವಿಧಾನಗಳನ್ನು ಅನುಸರಿಸುತ್ತಾರೆ. ಅದರಲ್ಲಿ ಕಾಲ್ನಡಿಗೆಯಿಂದ (ಪಾದಯಾತ್ರೆ) ಯಾತ್ರೆಯನ್ನು ಮಾಡುವ ಮೂಲಕ ದೇವರ ದರ್ಶನ ಮಾಡಿ ಧನ್ಯತಾ ಭಾವ ತೋರುವುದೂ ಕೂಡಾ ಒಂದು. ಈ ಪಾದಯಾತ್ರೆಯ ಉದ್ದೇಶ ದೇವರ ದರ್ಶನ ಮಾತ್ರವಲ್ಲ, ಸಾಧನೆ, ಯುವ ಶಕ್ತಿಯ ಉತ್ಸಾಹ, ಯುವಕರ ಸಂಘಟನೆ, ಧರ್ಮಜಾಗ್ರತಿ, ಸಂಸ್ಕೃತಿ ಮತ್ತು ಪರಂಪರೆಯ ಅನಾವರಣ ಕೂಡಾ ಅಡಗಿದೆ ಎನ್ನಬಹುದು ಜೊತೆಗೆ ಒಗ್ಗಟ್ಟಿನ ಪ್ರದರ್ಶನವೂ ಹೌದು. ಈ ಹಿನ್ನಲೆಯಲ್ಲಿ ಹಾವೇರಿ ಜಿಲ್ಲಾ ಶಿಗ್ಗಾವಿ ತಾಲೂಕ "ಅ ಮ ಕೊಪ್ಪ ಮತ್ತು ದುಂಡಸಿ" ಗ್ರಾಮದ ಜೈನ ಸಮಾಜದ ಯುವಕರು ಪ್ರಶಾಂತ ಬಿಶೆಟ್ಟಿ, ಸಂತೋಷ ಧರಣಪ್ಪನವರ, ಭರತೇಶ ದೀಪಣ್ಣವರ, ಬ್ರಹ್ಮಾನಂದ ಪುಟ್ಟಣ್ಣವರ, ಭರಮಪ್ಪ ದೇ, ಧರನಪ್ಪನವರ, ಧರಣೇಂದ್ರ ಜ ಮನಕಟ್ಟಿ, ಬಾಬು ಭದ್ರಾಪುರ, ಚಂದ್ರು ವೈಗುಡ್ಡಿ ಮುಂತಾದ ಇತರ ಯುವ ಮುಖಂಡರು ಒಂದು ತಂಡವನ್ನು ಕಟ್ಟಿಕೊಂಡು ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ದರ್ಶನ ಮಾಡುವ ಸಂಕಲ್ಪ ಮಾಡಿ ಯಾತ್ರೆಗೆ ಸನ್ನದ್ದರಾದರು. ಪ್ರಾರಂಭದಲ್ಲಿ 20 ಜನರಿದ್ದ ಈ ತಂಡದಲ್ಲಿ ಈಗ ನೂರರ ಸಂಖ್ಯೆ ದಾಟಿದೆ. ಈ ತಂಡವು ಪ್ರತಿವರ್ಷ ಶ್ರಾವಣ ಮಾಸದ ಕೊನೆಯ ಶುಕ್ರವಾರದಂದು ಹೊಂಬುಜದ ಶ್ರೀಕ್ಷೇತ್ರದ ಇಷ್ಟಾರ್ಥ ಫಲಪ್ರದಾಯಿನಿ ಮಹಾಮಾತೆ ಪದ್ಮಾವತಿ ಅಮ್ಮನವರ ದರ್ಶನಮಾಡುವ ಉದ್ದೇಶದಿಂದ ನಾಲ್ಕು ವರ್ಷಗಳಿಂದ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಇದು ಈ ತಂಡದ ನಾಲ್ಕನೇ ವರ್ಷದ ಪಾದಯಾತ್ರೆ. ಇದೇ ಆಗಸ್ಟ್ 17 ರಿಂದ 21 ರವರೆಗೆ ಕೈಗೊಂಡಿದ್ದು ಸುಮಾರು 200 ಕೀ ಮೀ ದಾರಿಯನ್ನು 5 ದಿನಗಳಲ್ಲಿ ಕ್ರಮಿಸಿ ಕ್ಷೇತ್ರವನ್ನು ತಲುಪಲಿದ್ದಾರೆ. ಶ್ರಾವಣ ಮಾಸದ ಕೊನೆಯ ಸಂಪತ್ ಶುಕ್ರವಾರ ದಿ 22ರಂದು ದೇವಿ ದರ್ಶನ ಮಾಡಿ ಪೂಜಾದಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಈ ಸಂಕಲ್ಪ ಯಾತ್ರೆಯಲ್ಲಿ ಜಾತ್ಯತೀತವಾಗಿ ಸರ್ವಧರ್ಮದವರು ಕೂಡಾ ಭಾಗೀಗಳಾಗುತ್ತಿರುವದು ವಿಶೇಷವಾಗಿದೆ. ಅತ್ಯಂತ ಶ್ರದ್ದಾ ಭಕ್ತಿಯಿಂದ ದೇವಿ ದರ್ಶನ ಮಾಡಿ ಪಾವನರಾಗಬೇಕೆಂಬ ಉದ್ದೇಶ ಹೊಂದಿದ ಈ ತಂಡದ ಪಾದಯಾತ್ರೆ ಫಲಪ್ರದವಾಗಿ ಯಶಸ್ವಿಯಾಗಲಿ, ಜಗದ್ ರಕ್ಷಕಿ ಮಹಾಮಾತೆಯ ಕೃಪಾಶೀರ್ವಾದ ಎಲ್ಲರ ಮೇಲಿರಲಿ ಹಾಗು ಸಕಲ ಇಷ್ಟಾರ್ಥಗಳು ಈಡೇರಲಿ ಎನ್ನುವ ಆಶಯಗಳೊಂದಿಗೆ ಶುಭ ಹಾರೈಕೆಗಳು ಮತ್ತು ಅಭಿನಂದನೆಗಳು. ವರದಿ: ಶಾಂತರಾಜ ಮಲ್ಲಸಮುದ್ರ

ಮೂಡುಬಿದಿರೆ: ಜೈನ್ ಮಿಲನ್ ಪದ ಸ್ವೀಕಾರ ಸಮಾರಂಭ

Article Image

ಮೂಡುಬಿದಿರೆ: ಜೈನ್ ಮಿಲನ್ ಪದ ಸ್ವೀಕಾರ ಸಮಾರಂಭ

ಭಾರತೀಯ ಜೈನ್ ಮಿಲನ್ ಮೂಡುಬಿದರೆ ವಲಯದ 25-27ನೇ ಸಾಲಿನ ಪದ ಸ್ವೀಕಾರ ಸಮಾರಂಭ ಜುಲೈ 27ರಂದು ಮಹಾವೀರಭಾನದಲ್ಲಿ ಜರಗಿತು. ನೂತನ ಅಧ್ಯಕ್ಷರಾಗಿ ಮಹೇಂದ್ರ ಕುಮಾ‌ರ್ ಜೈನ್, ಕಾರ್ಯದರ್ಶಿಯಾಗಿ ಶಶಿಕಾಂತ್ ಎ, ಕೋಶಾಧಿಕಾರಿಯಾಗಿ ಶ್ರೇಯಾಂಸ ಹೆಗ್ಡೆ, ಅಧಿಕಾರವನ್ನು ವಹಿಸಿಕೊಂಡರು. ಕಾರ್ಯಕ್ರಮದಲ್ಲಿ ದಿವ್ಯ ಉಪಸ್ಥಿತ ಪರಮಪೂಜ್ಯ ಆಚಾರ್ಯ ಗುಲಾಬ್ ಭೂಷಣ್ ಜಿ ಮಹಾರಾಜ್ ಅವರು: ಜೈನರು, ಬದುಕು ಬದುಕಲು ಬಿಡು ಎನ್ನುವ ಧೈಯವನ್ನು ಪಾಲಿಸಬೇಕು. ಶಾಂತಿ ಸುಖವನ್ನು ನೀಡುವ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಂಡು ಆಚಾರ್ಯರುಗಳ, ಗುರುಗಳ ಆಶೀರ್ವಾದವನ್ನು ಸದಾ ಪಡೆದುಕೊಳ್ಳಬೇಕು ಎಂದು ಕರೆ ಕೊಟ್ಟರು. ಮೂಡುಬಿದಿರೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ಧರ್ಮವಾರ್ತೆಯನ್ನು ಕೇಳಿ ಜೈನ ಬಂಧುಗಳು ಸದುಪಯೋಗದ ಉತ್ತಮ ಕೆಲಸಗಳನ್ನು ಮಾಡಿ ಸಂಘಟನೆಯನ್ನು ಬಲಪಡಿಸಬೇಕು. ಅಸಹನೆಗೆ ಅವಕಾಶವನ್ನು ನೀಡದೆ ಆಚಾರ್ಯರಿಗೆ ಪೂಜ್ಯತೆಯಿಂದ ಒಗ್ಗಟ್ಟನ್ನು ತೋರಿಸಿಕೊಡಬೇಕಾಗಿದೆ ಎಂದು ಕೇಳಿಕೊಂಡರು. ವಲಯ ಉಪಾಧ್ಯಕ್ಷ ಸುದರ್ಶನ್ ಜೈನ್ ಮಾತನಾಡಿ ಜೈನ ಪರಂಪರೆಯನ್ನು ಯುವಕರಿಗೆ ತಿಳಿಸಿ ಕೊಡುವುದರೊಂದಿಗೆ ಮಕ್ಕಳನ್ನು, ಯುವಕರನ್ನು ಒಟ್ಟುಗೂಡಿಸಿ ಯುವ ಜೈನ್ ಸಂಘಟನೆ ರಚಿಸಬೇಕಾದ ಅಗತ್ಯವಿದೆ ಎಂದರು. ಸನ್ಮಾನಕ್ಕೆ ಉತ್ತರಿಸಿದ ಉಜಿರೆಯ ಸೋನಿಯಾ ವರ್ಮ ಅವರು. ಒಳ್ಳೆಯ ಸಮಯವನ್ನು ಹಾಳು ಮಾಡದೆ ಉತ್ತಮ ಕೆಲಸಗಳಿಗೆ ತೊಡಗಿಸಬೇಕೆಂದು ಕೇಳಿಕೊಂಡರು. 17 ಮಂದಿ ನೂತನ ಸದಸ್ಯರನ್ನು ಸಭೆಗೆ ಪರಿಚಯಿಸಲಾಯಿತು. ಅಭಯ ಚಂದ್ರ ಮಂಜುಳಾ ಜೈನ್ ದಂಪತಿಗಳನ್ನು ಸನ್ಮಾನಿಸಲಾಯಿತು. ವಲಯ ಉಪಾಧ್ಯಕ್ಷ ಸುದರ್ಶನ್ ಜೈನ್ ಮಾತನಾಡಿ ಜೈನ ಪರಂಪರೆಯನ್ನು ಯುವಕರಿಗೆ ತಿಳಿಸಿ ಕೊಡುವುದರೊಂದಿಗೆ ಮಕ್ಕಳನ್ನು, ಯುವಕರನ್ನು ಒಟ್ಟುಗೂಡಿಸಿ ಯುವ ಜೈನ್ ಸಂಘಟನೆ ರಚಿಸಬೇಕಾದ ಅಗತ್ಯವಿದೆ ಎಂದರು. ಸನ್ಮಾನಕ್ಕೆ ಉತ್ತರಿಸಿದ ಉಜಿರೆಯ ಸೋನಿಯಾ ವರ್ಮ ಅವರು. ಒಳ್ಳೆಯ ಸಮಯವನ್ನು ಹಾಳು ಮಾಡದೆ ಉತ್ತಮ ಕೆಲಸಗಳಿಗೆ ತೊಡಗಿಸಬೇಕೆಂದು ಕೇಳಿಕೊಂಡರು. 17 ಮಂದಿ ನೂತನ ಸದಸ್ಯರನ್ನು ಸಭೆಗೆ ಪರಿಚಯಿಸಲಾಯಿತು. ಅಭಯ ಚಂದ್ರ ಮಂಜುಳಾ ಜೈನ್ ದಂಪತಿಗಳನ್ನು ಸನ್ಮಾನಿಸಲಾಯಿತು. ವಲಯ ನಿರ್ದೇಶಕ ಜಯರಾಜ ಕಂಬಳಿ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಆಸ್ಪತ್ರೆಯಲ್ಲಿರುವ ಜೈನ್ ಮಿಲನ್ ನ ಅಧ್ಯಕ್ಷ ಅನಡ್ಕ ದಿನೇಶ್ ಕುಮಾರ್ ಅವರ ಆರೋಗ್ಯ ಸುಧಾರಿಸಲು ಎಲ್ಲರೂ ಭಗವಂತನಲ್ಲಿ ಪ್ರಾರ್ಥಿಸಿದರು. ಅವರ ಅನುಪಸ್ಥಿತಿಯಲ್ಲಿ ಪ್ರಭಾತ್ ಕುಮಾರ್ ಬಲ್ನಾಡ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶ್ವೇತಾ ಜೈನ್ ಉಪಸ್ಥಿತರಿದ್ದರು. ಅನಂತವೀರ ಜೈನ್ ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಶ್ ಕುಮಾರ್ ವರದಿ ವಾಚಿಸಿದರು. ಕೋಶಾಧಿಕಾರಿ ಪುಷ್ಪರಾಜ್ ಜೈನ್ ಲೆಕ್ಕಪತ್ರ ಮಂಡಿಸಿದರು. ನೂತನ ಅಧ್ಯಕ್ಷ ಮಹೇಂದ್ರ ಕುಮಾ‌ರ್ ಜೈನ್ ತಮ್ಮ ಎರಡು ವರ್ಷದ ಕಾಲಾವಧಿಯ ಕಾರ್ಯಸೂಚಿಯನ್ನು ಪ್ರಸ್ತುತಪಡಿಸಿದ್ದರು. ನಿತೀಶ್ ಕುಮಾರ್ ಬಲ್ಲಾಳ್ ಕಾರ್ಯಕ್ರಮ ನಿರ್ವಹಿಸಿದರು. ನೂತನ ಕಾರ್ಯದರ್ಶಿ ಶಶಿಕಾಂತ್ ಜೈನ್ ವರದಿ: ರಾಯಿ ರಾಜಕುಮಾರ ಮೂಡುಬಿದಿರೆ

ಎಕ್ಸಲೆಂಟ್ ಮೂಡುಬಿದಿರೆ ಪ್ರಶಂಸಿದ ರಾಷ್ಟ್ರಪತಿಗಳು

Article Image

ಎಕ್ಸಲೆಂಟ್ ಮೂಡುಬಿದಿರೆ ಪ್ರಶಂಸಿದ ರಾಷ್ಟ್ರಪತಿಗಳು

ನವದೆಹಲಿ: ರಾಣಿ-ಚೆನ್ನಭೈರಾದೇವಿ ಸ್ಮಾರಕ ಅಂಚೆ ಚೀಟಿ ಬಿಡುಗಡೆ ಸಮಾರಂಭ. ಇಡೀ ಭರತಖಂಡದಲ್ಲಿ 1552 ರಿಂದ 1606ರವರೆಗೆ 54 ವರ್ಷಗಳ ಸುದೀರ್ಘಕಾಲ ರಾಜ್ಯಭಾರ ನಡೆಸಿದ ರಾಣಿ ಚೆನ್ನಭೈರಾದೇವಿಯ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆ ಪ್ರಕಟಸಿದ ವಿಶೇಷ ಅಂಚೆ ಚೀಟಿಯ ಲೋಕಾರ್ಪಣೆಯ ಐತಿಹಾಸಿಕ ಕಾರ‍್ಯಕ್ರಮ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ದಿನಾಂಕ 24.7.2025 ರಂದು ನಡೆಯಿತು. ಗೌರವಾನ್ವಿತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಈ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದರು. ಅಂಚೆಚೀಟಿ ಬಿಡುಗಡೆಗೊಳಿಸಿ ಮಾತನಾಡಿದ ರಾಷ್ಟ್ರಪತಿಗಳು ರಾಣಿ ಚೆನ್ನಭೈರಾದೇವಿಯ ಕೊಡುಗೆಗಳನ್ನು ಸ್ಮರಿಸಿಕೊಂಡು ರಾಷ್ಟ್ರದ ಗೌರವವನ್ನು ಸಲ್ಲಿಸಿದರು. ರಾಷ್ಟ್ರಪತಿಗಳು ತಮ್ಮ ಸಂದೇಶದಲ್ಲಿ, ರಾಣಿ ಚೆನ್ನಭೈರಾದೇವಿಯ ಧೈರ್ಯ ಸ್ಥೈರ್ಯ ಮತ್ತು ಸಾಧನೆಯನ್ನು ನಾವು ಸುವರ್ಣಾಕ್ಷರಗಳಲ್ಲಿ ಮಾತ್ರವಲ್ಲ ವಜ್ರದ ಅಕ್ಷರಗಳಲ್ಲಿ ಕೆತ್ತಬೇಕು. ರಾಣಿ ಚೆನ್ನಭೈರಾದೇವಿಯ ನಾಡಿನ ರಕ್ಷಣೆಗಾಗಿ ಆಕೆ ನಡೆಸಿದ ಹೋರಾಟ, ಸಾಮಾಜಿಕ ಕಾಳಜಿ, ಜಾತ್ಯತೀತ ಮನೋಭಾವ, ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಅಭಿವೃದ್ಧಿಗಾಗಿ ಆಕೆ ಕೈಕೊಂಡ ರಾಜನೀತಿಗಳನ್ನು ಮುಕ್ತಕಂಠದಿಂದ ಪ್ರಶಂಶಿಸಿದರು. ಅಂಚೆಚೀಟಿ ಹೊರತಂದ ಭಾರತೀಯ ಅಂಚೆ ಇಲಾಖೆ ಹಾಗೂ ಪ್ರಾಯೋಜಕರಾದ ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಗಳನ್ನು ಅಭಿನಂದಿಸಿದರು. ಕಾರ್ಯಕ್ರಮದ ಆರಂಭದಲ್ಲಿ ರಾಜ್ಯಸಭಾ ಸದಸ್ಯರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅತಿಥಿಗಣ್ಯರನ್ನು ಸ್ವಾಗತಿಸುತ್ತ, “ರಾಜ್ಯ ವಿಸ್ತರಣೆ ರಾಣಿ ಚೆನ್ನಭೈರಾದೇವಿಯರಾಜ ನೀತಿಯಾಗಿರಲಿಲ್ಲ. ಬದಲಿಗೆ ಪ್ರಜೆಗಳ ಬದುಕಿಗೆ ಸುಖ ಸೌಲಭ್ಯ ಒದಗಿಸುವುದು ಅವಳ ಉದ್ದೇಶವಾಗಿತ್ತು. ಆಕೆ ವಾಣಿಜ್ಯ ವ್ಯವಹಾರದಲ್ಲಿ ನಿಷ್ಣಾತೆಯಾಗಿದ್ದಳು.ತನ್ನರಾಜ್ಯದಿಂದ, ಕರಿ ಮೆಣಸು, ದಾಲ್ಚಿನ್ನಿ, ಶುಂಠಿ, ಏಲಕ್ಕಿ, ಗಂಧ, ಅಕ್ಕಿ, ಬೆಲ್ಲ, ದಂತ ಮುಂತಾದ ವಸ್ತುಗಳನ್ನು ವಿದೇಶಗಳಿಗೆ ರಫ್ತು ಮಾಡಿ ಅಪಾರ ಪ್ರಮಾಣದ ವಿದೇಶೀ ವಿನಿಮಯಗಳಿಸಿದ್ದಳು. ರಾಜಕೀಯವಾಗಿ ವೈರ ಸಾಧಿಸುತ್ತಿದ್ದ ಪೋರ್ಚುಗೀಸರೊಡನೆ ಉತ್ತಮ ವ್ಯಾವಹಾರಿಕ ಸಂಬಂಧ ಇರಿಸಿಕೊಂಡು, ಅವರಿಂದಲೇ "ರೈನಾದ ಪೆಮೆಂಟಾ" ಅರ್ಥಾತ್ "ಕರಿಮೆಣಸಿನ ಅರಸಿ" ಎಂಬ ಬಿರುದು ಪಡೆದಿದ್ದಳು. ಅಂಥ ಹೆಮ್ಮೆಯ ವೀರವನಿತೆಗೆ ಇಂದು ದೇಶದದೊಡ್ಡ ಗೌರವ ಪ್ರಾಪ್ತವಾಗಲಿದೆ” ಎಂದು ಆಶಿಸಿದರು. ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಕಾರ‍್ಯದರ್ಶಿ ರಶ್ಮಿತಾ ಜೈನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ರಾಣಿ ಚೆನ್ನಭೈರಾದೇವಿಯ ಇತಿಹಾಸ, ವೀರತ್ವ ಹಾಗೂ ಸಮಾಜಮುಖಿ ಕರ‍್ಯಗಳನ್ನು ನೆನಪಿಸಿ ಗೌರವ ಸೂಚಿಸಿದರು. ಅಲ್ಲದೆ ಚೆನ್ನಭೈರಾದೇವಿ ಸ್ಮಾರಕ ಅಂಚೆ ಚೀಟಿಯನ್ನು ಹಾಗೂ ಇಂದಿನ ಕರ‍್ಯಕ್ರಮವನ್ನು ಎಕ್ಸಲೆಂಟ್ ಎಜುಕೇಶನ್ ಫೌಂಡೇಶನ್, ಮೂಡುಬಿದಿರೆ ಇದರ ಮೂಲಕ ಪ್ರಾಯೋಜಿಸಲಾಗಿದೆ ಎಂಬುದನ್ನೂ ಅವರು ವಿವರಿಸಿದರು. ಕಾರ‍್ಯಕ್ರಮಕ್ಕೆ ಮಾರ್ಗದರ್ಶನ ನೀಡಿ ಸಹಕರಿಸಿದವರು ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ ಅವರು ರಾಣಿ ಚೆನ್ನಭೈರಾದೇವಿಯ ಶೌರ್ಯ, ದೃಢ ನಿರ್ಧಾರ ಮತ್ತು ಆಡಳಿತ ಕೌಶಲ್ಯವನ್ನು ಸ್ಮರಿಸಿದರು. ರಾಣಿ ಚೆನ್ನಭೈರಾದೇವಿ ವಾಣಿಜ್ಯ ಮತ್ತು ನೌಕಾಯಾನದಲ್ಲಿ ದಿಟ್ಟ ಹೆಜ್ಜೆ ಇಟ್ಟ ಹೆಗ್ಗುರುತು ಸ್ವರೂಪ ಎಂದು ಅವರು ಹೇಳಿದರು. ಪೋರ್ಚುಗೀಸ್ ಬಲಗಳ ವಿರುದ್ಧ ನಿರ್ಭೀತಿಯಾಗಿ ಪ್ರತಿರೋಧಿಸಿದ ರಾಷ್ಟ್ರೀಯ ಸ್ವಾಭಿಮಾನದ ಸಂಕೇತವಾಗಿದ್ದಾಳೆ ಎಂದರು. ರೈತರು ಮತ್ತು ಮೀನುಗಾರರ ನೆಮ್ಮದಿಗೆ ಹಲವಾರು ಸಾಮಾಜಿಕ ಸೌಲಭ್ಯಗಳನ್ನು ನೀಡಿದಳು ಎಂಬುದನ್ನು ಜೋಷಿ ತಿಳಿಸಿದರು. ಇಂತಹ ಮಹಾನ್ ಮಹಿಳೆಯ ನೆನಪಿಗಾಗಿ ಸ್ಮಾರಕ ಅಂಚೆಪಟ್ಟಿ ಬಿಡುಗಡೆ ಮಾಡುವುದು ಹೆಮ್ಮೆಯ ವಿಚಾರ ಎಂದು ಅವರು ಅಭಿಪ್ರಾಯಪಟ್ಟರು. ಅಂಚೆ ಚೀಟಿ ಪ್ರಾಯೋಜಕರಾದ ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್ ಉಪಸ್ಥಿತರಿದ್ದು ಶುಭಕೋರಿದರು. ಕಾರ‍್ಯಕ್ರಮದಲ್ಲಿ ದೆಹಲಿಯ ಅಂಚೆ ಮಹಾನಿರ್ದೇಶಕರಾದ ಅಖಿಲೇಶ್‌ಕುಮಾರ್ ಪಾಂಡಿಯವರು, ಹುಬ್ಬಳ್ಳಿಯ ಸಾಮಾಜಿಕ ಕಾರ‍್ಯಕರ್ತರಾದ ಮಹೇಂದ್ರ ಸಿಂಗ್, ಕರಿಮೆಣಸಿನ ರಾಣಿ ಕಾದಂಬರಿಯ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಚಿರಪರಿಚಿತರಾಗಿರುವ ಖ್ಯಾತ ಲೇಖಕರಾದ ಡಾ.ಗಜಾನನ ಶರ್ಮ, ಸಂಯೋಜಕರಾದ ಹುಬ್ಬಳ್ಳಿಯ ಖ್ಯಾತ ಉದ್ಯಮಿ ಮಹಾವೀರ ಕುಂದೂರ್, ಎಕ್ಸಲೆಂಟ್ ವಿದ್ಯಾಸಂಸ್ಥೆಯ ಆಡಳಿತ ನಿರ್ದೇಶಕರೂ ಕಾರ‍್ಯಕ್ರಮ ಸಂಯೋಜಕರೂ ಆದ ಡಾ. ಬಿ. ಪಿ. ಸಂಪತ್‌ ಕುಮಾರ, ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಇತರ ಗಣ್ಯರು ಈ ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾದರು. ಎಕ್ಸಲೆಂಟ್ ವಿದ್ಯಾಸಂಸ್ಥೆಯ ಪ್ರಾಯೋಜಕತ್ವದಲ್ಲಿ ಭಾರತೀಯ ಅಂಚೆ ಇಲಾಖೆ ಪ್ರಕಟಿಸಿದ ರಾಣಿ ಚೆನ್ನಭೈರಾದೇವಿಯ ಅಂಚೆ ಚೀಟಿ ಬಿಡುಗಡೆ ಸಮಾರಂಭವು ಇತಿಹಾಸದ ಪುಟದಲ್ಲಿ ಶಾಶ್ವತ ಸ್ಥಾನ ಪಡಯುವಲ್ಲಿ ಸಾರ್ಥಕತೆಯನ್ನು ಪಡೆಯಿತು. ಇತಿಹಾಸದ ಗರ್ಭದಲ್ಲಿ ಮರೆಯಾಗಿದ್ದ ಮಹಾನ್ ಚೇತನವೊಂದಕ್ಕೆ ಗೌರವ ನೀಡುವ ಹಾಗೂ ಹೊಸತಲೆಮಾರಿನಲ್ಲಿ ರಾಣಿಯ ಪೌರುಷ, ರಾಜನೀತಿ, ದೂರದೃಷ್ಟಿಯ ಆಡಳಿತ, ನಾಡಪ್ರೇಮ, ಸಂಸ್ಕೃತಿ ಪ್ರೀತಿ ಮೊದಲಾದ ನೆನಪುಗಳನ್ನು ಪುನರ್ ಸ್ಥಾಪಿಸುವ ರಾಷ್ಟ್ರಭಕ್ತಿಯ ಪ್ರತೀಕವಾಗಿಯೂ ಗಮನಸೆಳೆಯಿತು.

ಬಸದಿ ಸ್ಚಚ್ಛತಾ ಕಾರ್ಯಕ್ರಮ

Article Image

ಬಸದಿ ಸ್ಚಚ್ಛತಾ ಕಾರ್ಯಕ್ರಮ

ಭ 1008 ಶ್ರೀ ಶೀತಲನಾಥ ತೀರ್ಥoಕರ ಹಾಗೂ ಬ್ರಹ್ಮ ದೇವರ ಅತಿಶಯ ಕ್ಷೇತ್ರ ಮುಗುಳಿಯಲ್ಲಿ ಸ್ವಚ್ಛತೆ. ಬಸದಿ ಸ್ವಚ್ಛತಾ ತಂಡದಿಂದ 2ನೇ ವರ್ಷದ ಸ್ವಚ್ಛತೆ. ಸುಮಾರು 45 ಜನ ಶ್ರಾವಕರು ಭಾಗವಹಿಸಿದ್ದರು

ತಿಮ್ಮಣಬೆಟ್ಟು ಶಾಲೆಯಲ್ಲಿ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ

Article Image

ತಿಮ್ಮಣಬೆಟ್ಟು ಶಾಲೆಯಲ್ಲಿ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ

ವೇಣೂರು: ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳು ನಿಜವಾಗಿಯೂ ಸಂಸ್ಕಾರಯುತ ಶಿಕ್ಷಣವನ್ನು ನೀಡುವ ಕೇಂದ್ರಗಳಾಗಿವೆ ಇಂತಹ ಶಾಲೆಗಳ ವಿದ್ಯಾರ್ಥಿಗಳನ್ನು ಹಾಗೂ ಅವರಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ಸಮಾಜದ ಸರ್ವರ ಪ್ರೋತ್ಸಾಹ ಅಗತ್ಯವಿದೆ. ಶಾಲಾ ಎಸ್.ಡಿ.ಎಂ.ಸಿ, ಮುಖ್ಯಶಿಕ್ಷಕರು ಮತ್ತು ಶಿಕ್ಷಕ ವೃಂದ ಹಾಗೂ ಪೋಷಕರು ಸಹಕಾರವಿದ್ದಾಗ ಮಾತ್ರ ಗ್ರಾಮೀಣ ಪ್ರದೇಶಗಳ ಶಾಲೆಗಳ ಉನ್ನತಿ ಸಾಧ್ಯ ಎಂದು ಮರೋಡಿ ಬೆಳ್ಳಿಬೀಡು ಬಸದಿಯ ಅನುವಂಶಿಕ ಆಡಳಿತ ಮೊಕೇಸ್ತರ ಹಾಗೂ ಮೂಡುಬಿದಿರೆ ಶ್ರೀ ದಿಗಂಬರ ಜೈನ ವಿದ್ಯಾವರ್ಧಕ ಸಂಘದ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ. ಹೇಮರಾಜ್ ಬೆಳ್ಳಿಬೀಡು ಹೇಳಿದರು. ಅವರು ಕರಿಮಣೇಲು ಗ್ರಾಮದ ತಿಮ್ಮಣಬೆಟ್ಟು ಸರಕಾರಿ ಉ.ಹಿ.ಪ್ರಾ ಶಾಲಾ ಮಕ್ಕಳಿಗೆ ತಮ್ಮ ವೈಯಕ್ತಿಕ ನಿಧಿಯಿಂದ ಒಂದರಿಂದ ಏಳನೇ ತರಗತಿವರೆಗಿನ ಮಕ್ಕಳಿಗೆ ಇಡೀ ಶೈಕ್ಷಣಿಕ ವರ್ಷಕ್ಕೆ ಅಗತ್ಯವಿರುವ ನೋಟ್ ಪುಸ್ತಕಗಳನ್ನು ಮತ್ತು ಇತರ ಪರಿಕರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದರು. ಕಾರ್ಯಕ್ರಮವನ್ನು ದೀಪಪ್ರಜ್ವಲಿಸಿ ಉದ್ಘಾಟಿಸಿದ ಅವರು ಈ ದಿನದಂದು ವಿತರಿಸಿದ ಪುಸ್ತಕಗಳನ್ನು ಸದುಪಯೋಗ ಪಡಿಸಿಕೊಂಡು ತಾವು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ, ನಿಮ್ಮೊಂದಿಗೆ ನಿಮ್ಮ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕವೃಂದ, ಪೋಷಕರು ಬೆಂಬಲವಾಗಿ ಇರುತ್ತಾರೆ, ಕಲಿಕೆಯಲ್ಲಿ ಉತ್ತಮ ಆಸಕ್ತಿಯನ್ನು ವಹಿಸಿ ತಮ್ಮ ಸಾಧನೆಯ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಶಾಲೆಗೆ, ಊರಿಗೆ ಮತ್ತು ನಿಮ್ಮ ಹೆತ್ತವರಿಗೆ ಕೀರ್ತಿ ತರಬೇಕೆಂದರು. ಮುಖ್ಯ ಅತಿಥಿಗಳಾಗಿ ಮೂಡುಬಿದಿರೆ ಜೈನ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಮಹಾವೀರ ಜೈನ್‌ ಮೂಡುಕೋಡಿ ಭಾಗವಹಿಸಿ ಶುಭಹಾರೈಸಿದರು. ವೇದಿಕೆಯಲ್ಲಿ ಶಾಲಾ ಎಸ್.ಡಿ.ಎಂ.ಸಿ ಹಾಗೂ ಗ್ರಾಮ ಪಂಚಾಯತ್ ಸದಸ್ಯೆ ಸುಮ, ಮರಾಠಿ ಸೇವಾ ಸಂಘದ ಅಧ್ಯಕ್ಷ ವಿಠಲ ನಾಯ್ಕ, ಮಾಜಿ ಅಧ್ಯಕ್ಷ ಲಕ್ಷ್ಮಣ ನಾಯ್ಕ, ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಸಚಿನ್ ಬೇಗೂರ್ ಸ್ವಾಗತಿಸಿ, ಶಾಲಾ ಶಿಕ್ಷಕಿ ಗಾಯತ್ರಿ ಪ್ರಶಾಂತ್ ಅತಿಥಿಗಳಾದ ಕೆ. ಹೇಮರಾಜ್ ರವರನ್ನು ಸಭೆಗೆ ಪರಿಚಯಿಸಿದರು. ಶಿಕ್ಷಕಿ ಕವಿತಾ ಕಾರ್ಯಕ್ರಮ ನಿರೂಪಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ರಾಜುನಾಯ್ಕ ವಂದಿಸಿದರು.

ಶೀಘ್ರದಲ್ಲಿಯೇ ಧಾರ್ಮಿಕ ಪಾಠಶಾಲೆ ಪ್ರಾರಂಭ

Article Image

ಶೀಘ್ರದಲ್ಲಿಯೇ ಧಾರ್ಮಿಕ ಪಾಠಶಾಲೆ ಪ್ರಾರಂಭ

ಕೊಪ್ಪಳ: ಜೈನ ಕಾಶಿ ಕೊಪ್ಪಳ ತಾಲೂಕಿನ ಹುಲಗಿಯಲ್ಲಿ ಜೈನ ಧರ್ಮದ ತತ್ವಗಳನ್ನು ತಿಳಿಸುವ, ಮುಂದಿನ ಪಿಳಿಗೆಯು ಜೈನ ಧರ್ಮದ ಅಸ್ತಿತ್ವವನ್ನು ಉಳಿಸುವ ಉದ್ದೇಶದಿಂದ ಧಾರ್ಮಿಕ ಪಾಠಶಾಲೆ ಮಾಡಲು ಪ್ರಕ್ರೀಯೆ ಪ್ರಾರಂಭವಾಗಿದೆ. ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರ ನೇಮಕವನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿ ಅದನ್ನು ಪ್ರಾರಂಭ ಮಾಡಲಾಗುವುದು ಎಂದು ಶ್ರಾವಕ ಸುಹಾಸ ಇಜಾರೆ ಹುಲಗಿ ಅವರು ತಿಳಿಸಿದ್ದಾರೆ. ಕೊಪ್ಪಳದಲ್ಲಿ ಸುಮಾರು ಏಳು ನೂರು ಜೈನ ಬಸದಿಗಳು ಅಸ್ತಿತ್ವದಲ್ಲಿದ್ದವು, ಕಾಲಕ್ರಮೇಣ ಅವು ಇತಿಹಾಸದ ಪುಟ ಸೇರಿದವು. ಮೂಲ ಇದು ಜೈನ ಸ್ಥಳವಾಗಿದ್ದು, ಅದರ ಪುನರ್ ಸ್ಥಾಪನೆ ಇದರ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಕಟ್ಟ ಕಡೆಯ ಗ್ರಾಮ ಅಂಠರಣಾದಲ್ಲಿ ಆದಿನಾಥರ ವಿಗ್ರಹ ವಿದ್ದು, ಅಲ್ಲಿ ಜೈನರ ಉಪಸ್ಥಿತಿ ಇಲ್ಲದ ಕಾರಣ ಗ್ರಾಮಸ್ಥರು ಅದರ ಪೂಜೆ ಪುನಸ್ಕಾರ ಮಾಡುತ್ತಿದ್ದಾರೆ, ಅದನ್ನು ಕೊಪ್ಪಳ ಜೈನ ಬಸದಿಗೆ ಹಸ್ತಾಂತರ ಮಾಡಬೇಕು, ಹಾಗೇಯೇ ತಾಲೂಕಿನ ಜಬ್ಬಲಗುಡ್ಡದಲ್ಲಿ ಜೈನ ಬಸದಿಯ ಜಿರ್ಣೋದ್ಧಾರ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಬೇಕು ಎಂದು ಅವರು ತಿಳಿಸಿದರು. ಧಾರ್ಮಿಕ ಪಾಠಶಾಲೆಗೆ ಅಭಿನಂದನ ಗೋಗಿ, ಸಮೇದ ಜೈನ ಪದ್ಮ ಗೌಡ ಹೀರೆಗೌಡ್ರ, ಭುಜಬಲಿ ಪಾಟೀಲ್, ಉದಯರಾಜ ಕಾರಟಗಿ, ಉದಯ ಕುಮಾರ್ ಕಂಪಸಾಗರ, ಪಾಯಸಾಗರ, ಪದ್ಮಾವತಿ ಆನಂದ ಬಸ್ತಿ ನಿಲೋಗಲ್, ಗುರುರಾಜ್ ದೇಸಾಯಿ,ಅನಿಲ್ ಕುಮಾರ್ ಕಲ್ಯಾವಿ, ವಿನಯ ತುಂಬಳ, ಪುಷ್ಪದಂತ ಪಾಟೀಲ್‌, ಸನ್ಮತಿ ಇಜಾರೆ, ಶ್ರೀಕರ ಇಜಾರೆ, ಅನಿಲ್ ಕುಮಾರ್ ರೋಗೆ ಹೊಸಪೇಟೆ ಇವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದ್ದು, ಆಸಕ್ತ ಶ್ರಾವಕ, ಶ್ರಾವಕಿಯರು ಇದರ ಸದಸ್ಯತ್ವ ಪಡೆಯಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೀನಾಕ್ಷಿ ಜೈನ್ ರಾಜ್ಯಸಭೆಗೆ ರಾಷ್ಟ್ರಪತಿಯಿಂದ ನೇಮಕ

Article Image

ಮೀನಾಕ್ಷಿ ಜೈನ್ ರಾಜ್ಯಸಭೆಗೆ ರಾಷ್ಟ್ರಪತಿಯಿಂದ ನೇಮಕ

ರಾಷ್ಟ್ರಪತಿಯವರು ಹೊಸದಾಗಿ ನಾಲ್ಕು ಜನರನ್ನು ರಾಜ್ಯಸಭಾ ಸದಸ್ಯರನ್ನು ನೇಮಕ ಮಾಡಿದ್ದು ಅವರಲ್ಲಿ ಮೀನಾಕ್ಷಿ ಜೈನ್ ಕೂಡ ಒಬ್ಬರಾಗಿದ್ದಾರೆ. ಮೀನಾಕ್ಷಿ ಜೈನ್ ( 23ನೇ ಮಾರ್ಚ್ 1943 )ರವರು ದೆಹಲಿಯ ಗಾರ್ಗಿ ಕಾಲೇಜಿನಲ್ಲಿ ಇತಿಹಾಸದ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಭಾರತೀಯ ವಿಜ್ಞಾನಿ ಮತ್ತು ಇತಿಹಾಸಕಾರರು. 2014 ರಲ್ಲಿ ಅವರು ಭಾರತ ಸರ್ಕಾರದಿಂದ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್‌ನ ಸದಸ್ಯರಾಗಿ ನಾಮನಿರ್ದೇಶನಗೊಂಡರು. 2020 ರಲ್ಲಿ ಅವರು ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಕೆಲಸಕ್ಕಾಗಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಗುರು ಪೂರ್ಣಿಮೆಯ ಅಂಗವಾಗಿ ಸನ್ಮಾನ ಕಾರ್ಯಕ್ರಮ

Article Image

ಗುರು ಪೂರ್ಣಿಮೆಯ ಅಂಗವಾಗಿ ಸನ್ಮಾನ ಕಾರ್ಯಕ್ರಮ

ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ವತಿಯಿಂದ ಗುರುಪೂರ್ಣಿಮೆ ಹಾಗೂ ಆಷಾಡ ಮಾಸದ ವಿಶೇಷತೆಯ ಕುರಿತು ಕಾರ್ಯಕ್ರಮ ಪೆರ್ವಾಜೆ ಶಾಲೆಯಲ್ಲಿ ನಡೆಯಿತು. ವಸುಧಾ ಶೆಣೈಯವರು ಆಷಾಡ ಮಾಸದ ವಿಶೇಷತೆಯ ಕುರಿತು ಮಾತನಾಡಿದರು. ಗುರು ಪೂರ್ಣಿಮೆಯ ಕುರಿತು ಸಾವಿತ್ರಿ ಮನೋಹರ ಮಾತನಾಡಿದರು. ಗುರು ಪೂರ್ಣಿಮೆಯ ಅಂಗವಾಗಿ ಡಾಕ್ಟರೇಟ್ ಪದವಿಯನ್ನು ಪಡೆದ ಸದಸ್ಯೆಯರಾದ ಡಾ. ಸುಮತಿ ಪ್ರಭು ಹಾಗೂ ಡಾ. ಮಾಲತಿ ಜಿ. ಪೈಯವರನ್ನು ಸನ್ಮಾನಿಸಲಾಯಿತು. ರೂಪ ಚಿಪ್ಲೂಂಕರ್ ಪ್ರಾರ್ಥಿಸಿ, ಜಾಗೃತಿಯ ಅಧ್ಯಕ್ಷೆ ಪ್ರೊ. ಮಿತ್ರಪ್ರಭಾ ಹೆಗ್ಡೆ ಸ್ವಾಗತಿಸಿ, ಸುಲೋಚನ ಬಿ.ವಿ. ಧನ್ಯವಾದವನ್ನಿತ್ತರು. ಶೈಲಜಾ ಹೆಗ್ಡೆ ನಿರೂಪಿಸಿದರು.

ಬೆಳ್ತಂಗಡಿ : ಜೈನ ವಿದ್ಯಾರ್ಥಿ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

Article Image

ಬೆಳ್ತಂಗಡಿ : ಜೈನ ವಿದ್ಯಾರ್ಥಿ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜೈನ ಧರ್ಮೀಯ ವಿದ್ಯಾರ್ಥಿಗಳಿಗೆ ಕೆಲ್ಲಗುತ್ತು ಸಬ್ರಬೈಲು ಕಿನ್ಯಮ್ಮ ಯಾನೆ ಗುಣಾವತಿ ಅಮ್ಮ ಮೆಮೋರಿಯಲ್ ಟ್ರಸ್ಟ್ (ರಿ) ಹಾಗೂ ಶ್ರಾವಕ ಬಂಧುಗಳ ಸರ್ವ ಸಹಕಾರದಿಂದ ವಿದ್ಯಾರ್ಥಿ ಪ್ರೋತ್ಸಾಹ ಧನವನ್ನು ಕಳೆದ ಹಲವಾರು ವರ್ಷಗಳಿಂದ ನೀಡುತ್ತಾ ಬರಲಾಗುತ್ತಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಉತ್ತೇಜನವನ್ನು ನೀಡಲಾಗುತ್ತಿದೆ. ಅದೇ ರೀತಿ 2025-26 ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಜೈನ ಧರ್ಮೀಯ ವಿದ್ಯಾರ್ಥಿಗಳನ್ನು 2025 ನೇ ಸೆಪ್ಟಂಬರ್ 21ರಂದು ಶ್ರೀಕ್ಷೇತ್ರ ಹೊಂಬುಜ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಶ್ರೀಮದ್ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ವಿದ್ಯಾರ್ಥಿ ಪ್ರೋತ್ಸಾಹ ಧನವನ್ನು ನೀಡಿ ಪ್ರೋತ್ಸಾಹಿಸಲಾಗುವುದು. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ SSLC, ಗಿಂತ ಮೇಲ್ಪಟ್ಟು ಪಿಯುಸಿ, ಪದವಿ, ಐಟಿಐ, ಪಾಲಿಟೆಕ್ನಿಕ್, ಬಿಬಿಎಂ, ಎಂಬಿಎ, ಇಂಜಿನಿಯರಿಂಗ್, ವೈದ್ಯಕೀಯ ಇನ್ನಿತರ ವ್ಯಾಸಂಗವನ್ನು ಮುಂದುವರಿಸುತ್ತಿರುವ ವಿದ್ಯಾರ್ಥಿಗಳು ಮಾತ್ರ ನಿಗದಿತ ಅರ್ಜಿ ನಮೂನೆಯಲ್ಲಿಯೇ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರದ ಕಚೇರಿಯಲ್ಲಿ ಪಡೆದುಕೊಳ್ಳುವುದು ಮತ್ತು ಅರ್ಜಿಯೊಂದಿಗೆ ಪ್ರಸ್ತುತ ಕಲಿಯುತ್ತಿರುವ ಸಂಸ್ಥೆಯಿಂದ ವ್ಯಾಸಂಗ ಪ್ರಮಾಣ ಪತ್ರ, ಕಳೆದ ವರ್ಷ ಕಲಿತು ತೇರ್ಗಡೆ ಆಗಿರುವ ಬಗ್ಗೆ ಅಂಕಪಟ್ಟಿಯ ಯಥಾಪ್ರತಿ, ವಿದ್ಯಾರ್ಥಿಯ ಪ್ರಸ್ತುತ ಮನೆಯ ವಿಳಾಸ, ವಿದ್ಯಾರ್ಥಿಯ ಆಧಾರ್ ಕಾರ್ಡ್ ಯಥಾಪ್ರತಿ, ಸಂಪರ್ಕ ಸಂಖ್ಯೆ, ತಂದೆ ಮತ್ತು ತಾಯಿಯ ಹೆಸರು ನಮೂದಿಸಿ ಇವರಿಬ್ಬರಲ್ಲಿ ಒಬ್ಬರ ಸಹಿಯೊಂದಿಗೆ ಆಗಸ್ಟ್ 31ರ ಒಳಗೆ ಕೆ. ಜಯವರ್ಮರಾಜ್ ಬಳ್ಳಾಲ್, ಮ್ಯಾನೇಜಿಂಗ್ ಟ್ರಸ್ಟಿ, ಕೆಲ್ಲಗುತ್ತು ಸಬ್ರಬೈಲು ಕಿನ್ಯಮ್ಮ ಯಾನೆ ಗುಣಾವತಿ ಅಮ್ಮ ಮೆಮೋರಿಯಲ್ ಟ್ರಸ್ಟ್ (ರಿ,) ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರ, ಜೈನ್ ಪೇಟೆ, ಬೆಳ್ತಂಗಡಿ,-574214 ದಕ್ಷಿಣ ಕನ್ನಡ ಈ ವಿಳಾಸಕ್ಕೆ ತಲುಪುವಂತೆ ಕಳುಹಿಸಿಕೊಡಬೇಕು. ಅದೇ ರೀತಿ ಉಭಯ ಜಿಲ್ಲೆಗಳಲ್ಲಿ ತೀವ್ರತರದ ಕಾಯಿಲೆಗಳಾದ ಕ್ಯಾನ್ಸರ್, ಕಿಡ್ನಿ, ಹೃದಯ ಸಂಬಂಧಿ ಇನ್ನಿತರ ಕಾಯಿಲೆಗಳಿಂದ ಬಳಲುತ್ತಿರುವ ಜೈನ ಸಮಾಜದ ಅರ್ಹ ಬಂಧುಗಳು ಕೂಡ ಈ ಬಗ್ಗೆ ಈ ಕೆಳಗಿನ ವಿಳಾಸದಾರರನ್ನು ಸಂಪರ್ಕಿಸಿದ್ದಲ್ಲಿ ಪರಿಶೀಲಿಸಿ ಅಗತ್ಯ ನೆರವು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 08256-233577 ಅಥವಾ 9448180439,8310381962 ಸಂಖ್ಯೆಯ ದೂರವಾಣಿಯನ್ನು ಸಂಪರ್ಕಿಸಬಹುದೆಂದು ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಕೆ. ಜಯವರ್ಮರಾಜ್ ಬಳ್ಳಾಲ್ ರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

ಧಾರವಾಡ ಜೈನ ಮಿಲನದ ಕಾರ್ಯಗಳು ಜನರ ಮನಸಿನಲ್ಲಿ ಅಚ್ಚಳಿಯದೆ ಉಳಿದಿವೆ : ಡಾ. ಅಜಿತಪ್ರಸಾದ

Article Image

ಧಾರವಾಡ ಜೈನ ಮಿಲನದ ಕಾರ್ಯಗಳು ಜನರ ಮನಸಿನಲ್ಲಿ ಅಚ್ಚಳಿಯದೆ ಉಳಿದಿವೆ : ಡಾ. ಅಜಿತಪ್ರಸಾದ

ಒಂದು ಸಂಸ್ಥೆ ಅದು ಮಾಡುವ ಅತ್ಯುನ್ನತ ಕಾರ್ಯಗಳಿಂದಲೇ ಸಮಾಜದಲ್ಲಿ ವಿಶಿಷ್ಟ ಸ್ಥಾನ ಪಡೆದು ವಿಶೇಷವಾಗಿ ಗುರುತಿಸಿಕೊಳ್ಳುತ್ತದೆ ಮತ್ತು ಅದು ಧರ್ಮಪ್ರಭಾವನೆಗೆ ಕಾರಣವಾಗುತ್ತದೆ ಎಂದು ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿಗಳು ಹಾಗೂ ಧಾರವಾಡ ಜೈನ ಮಿಲನ ಸಂಸ್ಥಾಪಕ ಕಾರ್ಯದರ್ಶಿಗಳೂ ಆದ ಡಾ. ಅಜಿತಪ್ರಸಾದ ಹೇಳಿದರು, ಅವರು ಧಾರವಾಡ ಜೈನ ಮಿಲನ್ ಅಯೋಜಿಸಿದ್ದ ವನಮಹೋತ್ಸವ, ಪ್ರಸಕ್ತ ಸಾಲಿನ ಪದಾಧಿಕಾರಿಗಳ ಪದಗ್ರಹಣ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಮುಂದುವರೆದ ಅವರು ಕಳೆದ 33 ವರ್ಷಗಳಿಂದ ಧಾರವಾಡ ಜೈನ ಮಿಲನ್ ಇಂಥ ಹಲವಾರು ಜನೋಪಯೋಗಿ ಕಾರ್ಯಕ್ರಮ ಮಾಡುವಲ್ಲಿ ತನ್ನದೇ ಆದ ಛಾಪು ಮೂಡಿಸಿದೆ ಎಂದರು. ಪ್ರಾರಂಭದಲ್ಲಿ ಜೆ ಎಸ್ ಎಸ್ ಸಂಸ್ಥೆಯ ಆವರಣದಲ್ಲಿ ಗಿಡ ನೆಡುವ ಮೂಲಕ ಸಾಂಕೇತಿಕವಾಗಿ ವನಮಹೋತ್ಸವ ಆಚರಿಸಲಾಯಿತು ಮುಂದಿನ ಒಂದು ವಾರದಲ್ಲಿ ನೂರಕ್ಕೂ ಹೆಚ್ಚು ಸಸಿಗಳನ್ನು ನೆಡುವ ಮೂಲಕ ಅರ್ಥಪೂರ್ಣವಾಗಿ ವನಮಹೋತ್ಸವವನ್ನು ರಚನಾತ್ಮಕವಾಗಿ ಆಯೋಜಿಸಲಾಯಿತು. ಸಂಸ್ಥೆಯ ಐವತ್ತಕ್ಕೂ ಹೆಚ್ಚು ಪ್ರತಿಭಾವಂತ ಅರ್ಹ ವಿದ್ಯಾರ್ಥಿಗಳಿಗೆ ನೋಟ ಬುಕ್ ವಿತರಿಸಿ ಅವರ ವಿದ್ಯಾರ್ಜನೆಗೆ ಉತ್ಸಾಹ ಪ್ರೋತ್ಸಾಹ ತುಂಬಲಾಯಿತು. ಮಿಲನದ ನೂತನ ಅಧ್ಯಕ್ಷ ಜಿನ್ನಪ್ಪ ಕುಂದಗೋಳ, ಕಾರ್ಯದರ್ಶಿ ರತ್ನಾಕರ ಹೋಳಗಿ ಮತ್ತು ಖಜಾಂಚಿ ಮೋಹನಕುಮಾರ ಗೋಗಿ ಇವರುಗಳಿಗೆ ಬ್ಯಾಡ್ಜ್ ವಿತರಿಸಿ ಪ್ರಮಾಣ ವಚನವನ್ನು ಡಾ. ಅಜಿತಪ್ರಸಾದ ಬೋಧಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಟ್ರಸ್ಟಿನ ಕಾರ್ಯದರ್ಶಿ ಶಾಂತರಾಜ ಮಲ್ಲಸಮುದ್ರ ಇವರು ವಹಿಸಿದ್ದರು. ಇದೇ ಸಂದರ್ಭದಲ್ಲಿ ಮಿಲನದ ನಿಕಟಪೂರ್ವಅಧ್ಯಕ್ಷಿಣಿ ಸುಜಾತಾ ಹಡಗಲಿ ಹಾಗೂ ಇತರ ಪದಾಧಿಕಾರಿಗಳಾದ ಸಂಗೀತಾ ಉಪಾಧ್ಯ, ಸುನಂದಾ ವರದಿ ಜೈನ ಅಧ್ಯಯನ ಪೀಠದ ಸಂಯೋಜಕರಾದ ಡಾ. ಜಿನದತ್ತ ಹಡಗಲಿ, ಗಣ್ಯರಾದ ಮಹಾವೀರ ಉಪಾಧ್ಯ, ಎ ಎ ಬಾಳಿಕಾಯಿ, ಕೆ.ಜೆ. ರಪಾಟಿ ಹಾಗೂ ಬ್ರಹ್ಮಪ್ರಕಾಶ, ಡಿ.ಸಿ. ನಾಯಕ, ಅಮಿತ್ ಡೊರ್ಲೆ ಹಾಗೂ ಮಿಲನದ ಸದಸ್ಯರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಇದೇ ಸಂಧರ್ಭದಲ್ಲಿ ಕಾರ್ಯಕ್ರಮದಲ್ಲಿ ಆಥಿತ್ಯವನ್ನು ನೀಡಿದ ವಾಣಿಪ್ರಸಾದ ಇವರನ್ನು ಗೌರವಿಸಿ ಸತ್ಕಾರಿಸಲಾಯಿತು. ಣಮೋಕಾರ ಮಂತ್ರದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಶಿಕ್ಷಕಿ ರಾಜೇಶ್ವರಿ ಶೆಟ್ಟಿ ಇವರು ಸ್ವಾಗತ ಗೀತೆ ಹಾಡಿದರು, ಡಾ. ಸೂರಜ ಜೈನ ಇವರು ಸಮಾರಂಭದಲ್ಲಿ ಭಾಗವಹಿಸಿದ ಸರ್ವರನ್ನು ಸ್ವಾಗತಿಸಿದರು. ಕೊನೆಯಲ್ಲಿ ವೈಶಾಲಿ ಹೊನ್ನಪ್ಪನವರ ಇವರು ವಂದಿಸಿದರು. ಕಾರ್ಯಕ್ರಮವನ್ನು ಸುನಂದಾ ವರೂರ ಅತ್ಯಂತ ಅಚ್ಚುಕಟ್ಟಾಗಿ ನಿರೂಪಿಸಿದರು. ವರದಿ: ಶಾಂತರಾಜ ಮಲ್ಲಸಮುದ್ರ

ಜೈನ ಸಮಾಜದ ಅಪರೂಪದ ರಾಜಕಾರಿಣಿ

Article Image

ಜೈನ ಸಮಾಜದ ಅಪರೂಪದ ರಾಜಕಾರಿಣಿ

ಶ್ರೀ ತವನಪ್ಪ ಅಷ್ಟಗಿ ಅವರ ೬೪ ನೇ ಜನ್ಮ ದಿನದ ಸಂಭ್ರಮ ಇಂದು ವಿಧಾನ ಪರಿಷತ್ ಸ್ಥಾನಕ್ಕೆ ನಾಮಕರಣಕ್ಕೆ ಸೂಕ್ತ ಅಭ್ಯರ್ಥಿ. ಜಾತಿ ಆಧಾರವೇ ನಿರ್ಣಾಯಕವಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಅಲ್ಪಸಂಖ್ಯಾತರಲ್ಲಿಯೇ ಅಲ್ಪಸಂಖ್ಯಾತ ಜೈನ ಸಮುದಾಯದ ನಾಯಕ ಧಾರವಾಡ ತಾಲೂಕು ಉಪ್ಪಿನ ಬೆಟಗೇರಿ ಗ್ರಾಮದ ಸ್ನೇಹ ಜೀವಿ ಶ್ರೀ ತವನಪ್ಪ ಅಷ್ಟಗಿಯವರು. ಸಾರ್ವಜನಿಕ ಕ್ಷೇತ್ರದಲ್ಲಿ ಇವರ ಜನಪರ ಕಾಳಜಿ, ಮೌಲ್ಯಾಧಾರಿತ ರಾಜಕೀಯ ಸಿದ್ದಾಂತ,ಸಾಮಾನ್ಯ ಜನರೊಂದಿಗೆ ನಿರಂತರ ಸಂಪರ್ಕ ಮತ್ತು ಸಮಸ್ಯೆ ಪರಿಹಾರದ ಬಗ್ಗೆ ಸ್ಪಂದನೆ ಪ್ರಾಮಾಣಿಕ ಪ್ರಯತ್ನ ಶುದ್ಧ ಚಾರಿತ್ಯ ಇವರ ಹುಟ್ಟುಗುಣ. ಈ ಕಾರಣದಿಂದಲೇ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಬಹಳ ಜನಪ್ರೀಯ ನಾಯಕರಾಗಿ ಹೊರಹೊಮ್ಮಿದ್ದಾರೆ ಹಾಗೂ ಒಂದೂ ವಿವಾದ ಇಲ್ಲದ ಅಪ್ಪಟ ನಾಯಕರು ಎನ್ನಬಹುದು. ಧಾರವಾಡ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದಲ್ಲಿ ಅಪಾರ ಜನ ಬೆಂಬಲ ಇದ್ದು ಅಪಾರವಾದ ಅಭಿಮಾನಿಗಳನ್ನು, ಹಿತ ಚಿಂತಕರನ್ನು ಹೊoದಿ ಅವರ ಆಶಯದಂತೆ ಜನರ ಸೇವೆಗಾಗಿ ರಾಜಕೀಯವನ್ನು ಬಳಸಿಕೊಳ್ಳುತ್ತಿವ ಅಪರೂಪದ ರಾಜಕಾರಣಿ ಇವರು. ಜೊತೆಗೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ಹಿಂದಿನ ಶಕ್ತಿ ಇವರೇ ಆಗಿದ್ದಾರೆ. ಹಿನ್ನಲೆ, ಕಾರ್ಯಾವಲೋಕನ ಮತ್ತು ಸಂಕ್ಷಿಪ್ತ ಪರಿಚಯ : ಶ್ರೀ ತವನಪ್ಪಾ ಅಷ್ಟಗಿಯವರು ಗ್ರಾಮೀಣ ಹಿನ್ನೆಲೆಯುಳ್ಳವರು ಧಾರವಾಡ ತಾಲೂಕು ಉಪ್ಪಿನ ಬೆಟಗೇರಿ ಗ್ರಾಮದ ರೈತ ಕುಟುಂಬದ ಶ್ರೀ ಪಾಯಪ್ಪ ಮತ್ತು ದ್ಯಾಮವ್ವ ದಂಪತಿಗಳ ಉದರದಲ್ಲಿ ಜನಿಸಿದ್ದು ದಿ 6-7-1961ರಲ್ಲಿ ಪಿಯುಸಿವರೆಗೆ ಶಿಕ್ಷಣ ಪಡೆದ ಇವರು ಸಮಾಜ ಸೇವೆಯನ್ನೇ ಗುರಿಯಾಗಿಟ್ಟುಕೊಂಡು ರಾಜಕೀಯ ಜೀವನವನ್ನು ಪ್ರಾರಂಭಿಸಿದರು ಮತ್ತು ಅದರಲ್ಲಿ ಸಾರ್ಥಕತೆಯನ್ನು ಕಂಡಿದ್ದಾರೆ. ಸಾರ್ವಜನಿಕ ಸೇವೆಯ ಮನೋಭಾವನೆಯಿಂದ ರಾಜಕೀಯ ಪ್ರವೇಶಿಸಿದ ಇವರು 2005 ರ ಜಿಲ್ಲಾ ಪಂಚಾಯತು ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾಯಿತರಾದರು ಹಾಗೂ 2008 - 2009 ರ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿಯ ಶಿಕ್ಷಣ ಮತ್ತು ಅರೋಗ್ಯ ಸಂಘಟನೆಯ ಅಧ್ಯಕ್ಷರಾಗಿ ಅತ್ಯಂತ ಸಮರ್ತವಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಧರ್ಮಪತ್ನಿ ಶ್ರೀಮತಿ ಕಸ್ತೂರಿ ಅಷ್ಟಗಿ ಕೂಡ ರಾಜಕೀಯದಲ್ಲಿ ಒಳ್ಳೆಯ ಹೆಸರು ಮಾಡಿದ್ದು ಇವರು ಕೂಡ ಉಪ್ಪಿನ ಬೆಟಗೇರಿ ಕ್ಷೇತ್ರದಿಂದ ಜಿಲ್ಲಾ ಪಂಚಾಯತಿ ಸದಸ್ಯರಾಗಿ 2011-2016 ರ ಅವಧಿಗೆ ಆಯ್ಕೆಯಾಗಿ 2016ರಲ್ಲಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. "ಇದುವರೆಗೂ ಎಲ್ಲಿಯೂ ಒಂದು ಪೈಸೆಯೂ ಭ್ರಷ್ಟಾಚಾರದ ಮಾಡಿದವನಲ್ಲ ಹಣಕ್ಕಾಗಿ ನನ್ನ ನಿಷ್ಠೆ ಹಾಗೂ ಕರ್ತವ್ಯ ಮರೆತವನಲ್ಲ" ಎಂದು ಶ್ರೀ ತವನಪ್ಪ ಹಲವಾರು ಬಾರಿ ಹೇಳಿಕೊಂಡಿದ್ದಾರೆ. ಇವರ ಮೂಲತ ಕೃಷಿ ಕುಟುಂಬದವರಾಗಿದ್ದು ಅತ್ಯಂತ ಪ್ರಗತಿಪರ ರೈತ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಜೊತೆಗೆ ರೈತರಲ್ಲಿ ಆತ್ಮಸ್ಥರ್ಯ ತುಂಬಿ ಅವರನ್ನು ಸ್ವಾವಲಂಬರನ್ನಾಗಿ ಮಾಡಿ ಹೆಮ್ಮೆಯಿಂದ ಬದುಕಲು ಪ್ರೇರೇಪಿಸುತ್ತಾ ಅವರಿಗೆ ಪ್ರೀತಿ ಪಾತ್ರರಾಗಿದ್ದು ಉತ್ತಮ ಮಾರ್ಗದರ್ಶಕರಾಗಿದ್ದಾರೆ. ಇವರ ಕ್ಷೇತ್ರದಲ್ಲಿ ಸಣ್ಣವರಿರಲಿ ದೊಡ್ಡವರಲಿ ಪ್ರತಿಯೊಬ್ಬರ ಮನೆ ಮನೆಯಲ್ಲಿ ನಡೆಯುವ ಯಾವದೇ ಕಾರ್ಯಕ್ರಮವಿರಲಿ ಅಲ್ಲಿಗೆ ಬಿಡುವು ಮಾಡಿಕೊಂಡು ತಪ್ಪದೇ ಭಾಗವಹಿಸಿ ಅವರೊಂದಿಗೆ ಸ್ಪಂದಿಸುತ್ತಾರೆ ಇದೇ ಇವರ ದೊಡ್ಡಗುಣ. ಇವರದೇ ಮೇಲ್ವಿಚಾರಣೆಯಲ್ಲಿ ಧಾರವಾಡದಲ್ಲಿ ಕೃಷಿಗೆ ಪೂರಕ ಉದ್ದಿಮೆಯಾಗಿ ಪದ್ಮಾವತಿ ಕಾಟನ್ ಇಂಡಸ್ಟ್ರೀಸ್ ಫ್ಯಾಕ್ಟರಿಯನ್ನು ಪ್ರಾರಂಭಿಸಿ ರೈತರ ಆಶಾಕಿರಣವಾಗಿದ್ದಾರೆ. ಜನ್ಮ ದಿನದ ವಿಶೇಷ : ತವನಪ್ಪ ಅಷ್ಟಗಿ ಇವರಿಗೆ ಅಭಿಮಾನಿಗಳು ಸ್ನೇಹಿತರು, ಕಾರ್ಯಕರ್ತರ, ಹಿತೈಸಿಗಳ ದೊಡ್ಡ ಬಳಗವೇ ಇದೆ. ಇವರೆಲ್ಲರೂ ಸೇರಿ ಇವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಸಲು ರವಿವಾರ ದಿನಾಂಕ ೬ ರಂದು ಇಡೀ ದಿನ ರಕ್ತದಾನ ಶಿಬಿರ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಲವಾರು ಪೂಜ್ಯರ ಆಶೀರ್ವಚನ, ಅನ್ನಸಂತರ್ಪಣೆ ಮುಂತಾದ ಜನಸ್ನೇಹಿ ಕಾರ್ಯಕ್ರಗಳನ್ನು ಸವದತ್ತಿ ರಸ್ತೆಯಲ್ಲಿ ರುವ ಪದ್ಮಾವತಿ ಕಾಟನ್ ಇಂಡಸ್ಟ್ರಿ ಯಲ್ಲಿ ಆಯೋಜಿಸಿದ್ದಾರೆ. ಮುಂದಿನ ಚಿಂತನೆಗಳು : ಕ್ಷೇತ್ರ ಸರ್ವಾoಗೀನ ಅಭಿವೃದ್ಧಿಗೆ ಶ್ರಮಿಸುವುದು, ಜನರ ಆಶೋತ್ತರಗಳಿಗೆ ಸದಾ ಸ್ಪಂದಿಸುವುದು. ಯುವಕರಲ್ಲಿ ನವೋತ್ಸಾಹ ತುಂಬಿ ಸ್ವಯಂ ಉದ್ಯೋಗಕ್ಕೆ ಪ್ರೇರೇಪಿಸುವುದು ನಿರುದ್ಯೋಗ ನಿವಾರಣೆ, ರಾಜಕೀಯದಲ್ಲಿ ಪ್ರಾಮಾಣಿಕ ಮೌಲ್ಯ ಆಧಾರಿತ ಕ್ರಮವನ್ನು ಅನುಸರಿಸುವುದು. ಇಂಥ ಒಬ್ಬ ನಿಷ್ಠಾವಂತ ರಾಜಕಾರಿಣಿಯನ್ನು ಈಗ ಖಾಲಿ ಇರುವ ವಿಧಾನ ಪರಿಷತ್ ಸ್ಥಾನಕ್ಕೆ ಸರಕಾರ ನಾಮಕರಣ ಮಾಡಬೇಕೆಂದು ಈ ಸಂಧರ್ಭದಲ್ಲಿ ಸರಕಾರವನ್ನು ಒತ್ತಾಯಿಸುತ್ತೇವೆ. ಇವರ ರಾಜಕೀಯ ಭವಿಷ್ಯ ಉಜ್ವಲವಾಗಲಿ ಈ ನಾಡಿಗೆ ಇವರ ಸೇವೆ ಮಾರ್ಗದರ್ಶನ ಸದಾ ಲಭಿಸಲಿ ಇವರ ಆದರ್ಶ ನಡೆ ನುಡಿ ಇತರರಿಗೆ ಮಾದರಿಯಾಗಲಿ ಎನ್ನುವ ಹಾರೈಕೆಗಳೊಂದಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಶಾಂತರಾಜ ಮಲ್ಲಸಮುದ್ರ ಲೇಖಕರು

ಕ ವಿ ವಿ ಕುಲಪತಿಯವರಿಗೆ ಗೌರವ ಸನ್ಮಾನ

Article Image

ಕ ವಿ ವಿ ಕುಲಪತಿಯವರಿಗೆ ಗೌರವ ಸನ್ಮಾನ

ಕರ್ನಾಟಕ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ ಡಾ. ಎ ಎಮ್ ಖಾನ್ ಇವರನ್ನು ಇಂದು ಕ ವಿ ವಿ ಜೈನ ಅಧ್ಯಯನ ಪೀಠ ಮತ್ತು ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಟ್ರಸ್ಟ್ ವತಿಯಿಂದ ಅಭಿನಂದಿಸಿ ಸತ್ಕರಿಸಲಾಯಿತು. ಪೀಠದ ಸಂಯೋಜಕರು ಹಾಗೂ ಟ್ರಸ್ಟಿನ ಅಧ್ಯಕ್ಷರೂ ಆದ ಡಾ. ಜಿನದತ್ತ ಹಡಗಲಿ, ಜೈನ ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯರಾದ ಶಾಂತರಾಜ ಮಲ್ಲಸಮುದ್ರ,ದನಪಾಲ ಜೆ ಮುನ್ನೊಳ್ಳಿ, ಧರಣೇoದ್ರ ಜವಳಿ, ಡಾ. ಆರ್.ಎ. ಬಾಳಿಕಾಯಿ ಮುಂತಾದವರು ಭಾಗವಹಿಸಿದ್ದರು. ಕುಲಪತಿಗಳು ಜೈನ ಅಧ್ಯಯನ ಪೀಠದ ಅಭಿವೃದ್ಧಿಗೆ ಮತ್ತು ಕಾರ್ಯಾಚಟುವಟಿಕೆಗೆ ನನ್ನ ಸಹಾಯ ಸಹಕಾರ ನೀಡುವುದಾಗಿ ಹೇಳಿದರು. ವರದಿ : ಶಾಂತರಾಜ ಮಲ್ಲಸಮುದ್ರ

ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ

Article Image

ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ

ಸತ್ತೂರು, ಧಾರವಾಡ: ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ಜುಲೈ 1, 2025 ರಂದು ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು. ಪಶ್ಚಿಮ ಬಂಗಾಳದ ಖ್ಯಾತ ವೈದ್ಯ ಮತ್ತು ಮುಖ್ಯಮಂತ್ರಿಯವರಾದ ಡಾ. ಬಿ. ಸಿ. ರಾಯ್ ಅವರ ಜನ್ಮದಿನವನ್ನು ಸ್ಮರಿಸಲು ಮತ್ತು ದೇಶದಲ್ಲಿ ವೈದ್ಯರನ್ನು ಸ್ಮರಿಸಲು ವೈದ್ಯರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಅವರ ಮನುಕುಲಕ್ಕೆ ನೀಡಿದ ಅಪಾರ ಸೇವೆಯನ್ನು ಪರಿಗಣಿಸಿ ಈ ದಿನವನ್ನು ಆಚರಿಸಲಾಗುತ್ತದೆ. ವೈದ್ಯರ ದಿನಾಚರಣೆಯ ಸಂದರ್ಭದಲ್ಲಿ, ಎಸ್.ಡಿ.ಎಂ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ 3 ಖ್ಯಾತ ವೈದ್ಯರನ್ನು ಸನ್ಮಾನಿಸಲಾಯಿತು ಡಾ. ಪ್ರಕಾಶ ಜಿ. ಮಹಾಲಿಂಗಶೆಟ್ಟಿ, ಹಿರಿಯ ಶಸ್ತ್ರಚಿಕಿತ್ಸಾ ಪ್ರಾಧ್ಯಾಪಕರು ಡಾ. ಚಿದೇಂದ್ರ ಶೆಟ್ಟರ್, ಹಿರಿಯ ಎಲಬು ಮತ್ತು ಕೀಲು ಚಿಕಿತ್ಸಕರು ಮತ್ತು ಕುಲಸಚಿವರು ಡಾ. ಶೀಲಾ ಎಸ್. ಕುದರಿ, ನುರಿತ ವೈದ್ಯಕೀಯ ಚಿಕಿತ್ಸಕರು ಉಪಕುಲಪತಿಗಳಾದ ಡಾ. ನಿರಂಜನ್ ಕುಮಾರ್ ಅವರು ಅಧ್ಯಕ್ಷತೆಯನ್ನು ವಹಿಸಿ, ಮೂವರು ವೈದ್ಯರನ್ನು ಸನ್ಮಾನಿಸಿದರು. ವೈದ್ಯರ ದಿನದ ಪ್ರಶಸ್ತಿಯನ್ನು ಸ್ವೀಕರಿಸಿದ ಹಿರಿಯ ಶಸ್ತ್ರಚಿಕಿತ್ಸಾ ಪ್ರಾಧ್ಯಾಪಕರಾದ ಡಾ. ಪ್ರಕಾಶ ಜಿ. ಮಹಾಲಿಂಗಶೆಟ್ಟಿ ಅವರು ಮಾತನಾಡುತ್ತಾ ವೈದ್ಯರು ರೋಗಿಗಳ ಆರೋಗ್ಯ ಮತ್ತು ಸಾಮಾಜಿಕ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ಚಿಕಿತ್ಸೆ ನೀಡಬೇಕು. ರೋಗಿಗಳ ಸಂತೃಪ್ತಿಯೇ ವೈದ್ಯರುಗಳ ತೃಪ್ತಿಯ ಮೂಲವಾಗಿರಬೇಕು. ಹೊಸವಿಷಯಗಳ ಅಧ್ಯಯನದೊಂದಿಗೆ ಉತ್ತಮ ಸಮಯ ಪಾಲನೆ ವೈದ್ಯರ ಜ್ಞಾನವನ್ನು ಹೆಚ್ಚಿಸುತ್ತದೆ. ಸರಳತೆ ಮತ್ತು ಕೃತಜ್ಞತಾ ಮನೋಭಾವ ಜೀವನದಲ್ಲಿ ಬಹಳ ಯಶಸ್ಸನ್ನು ತಂದುಕೊಡುತ್ತದೆ. ಎಸ್.ಡಿ.ಎಂ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ವಿಜಯ್ ಕುಲಕರ್ಣಿ ಅವರು ಅಭಿನಂದನಾ ಭಾಷಣ ಮಾಡಿದರು. ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್, ಸಹ ಉಪ ಕುಲಪತಿಗಳಾದ ಜೀವಂಧರ್ ಕುಮಾರ, ಹಣಕಾಸು ಅಧಿಕಾರಿಗಳಾದ ವಿ.ಜಿ. ಪ್ರಭು, ಆಡಳಿತ ನಿರ್ದೇಶಕರಾದ ಸಾಕೇತ ಶೆಟ್ಟಿ ಮತ್ತು ಇತರ ವಿಶ್ವವಿದ್ಯಾಲಯದ ಅಧಿಕಾರಿಗಳು, ಸಂಸ್ಥೆಯ ಮುಖ್ಯಸ್ಥರು, ಎಲ್ಲಾ ವೈದ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಎಸ್.ಡಿ.ಎಂ ವೈದ್ಯಕೀಯ ಮಹಾವಿಧ್ಯಾಲಯದ ಉಪ ಪ್ರಾಂಶುಪಾಲರಾದ ಡಾ. ವಿದ್ಯಾ ಪಾಟೀಲ ಅವರು ಅತಿಥಿಗಳನ್ನು ಸ್ವಾಗತಿಸಿದರು. ಡಾ. ಸುರೇಶ ಬಡಿಗೇರ, ಡಾ. ಸುನಿಲ್ ಎಂ. ಮತ್ತು ಡಾ. ಕಿರಣ ಐತಾಳ್ ಮೂವರು ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಡಾ. ಪ್ರಿಯಾಂಕಾ ಮೋತಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಾಧ್ಯಾಪಕರಾದ ಡಾ. ಆಶಾ ನೆರವಿ ವಂದನಾರ್ಪಣೆ ಸಲ್ಲಿಸಿದರು.

ಚಾಮರಾಜನಗರ: 17ನೇ ವರ್ಷದ ವಾರ್ಷಿಕೋತ್ಸವ

Article Image

ಚಾಮರಾಜನಗರ: 17ನೇ ವರ್ಷದ ವಾರ್ಷಿಕೋತ್ಸವ

ದಿಗಂಬರ ಪಾರ್ಶ್ವನಾಥ ಜೈನ ಬಸದಿಯ ಜೀರ್ಣೋದ್ಧಾರದ 17ನೇ ವರ್ಷದ ವಾರ್ಷಿಕೋತ್ಸವದ ಪೂಜಾ ಕಾರ್ಯಕ್ರಮದಲ್ಲಿ ಕನಕಗಿರಿ ಜೈನ ಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿಗಳವರು ಪಾವನ ಸಾನ್ನಿಧ್ಯ ವಹಿಸಿ, ಮಾತನಾಡಿದ ಅವರು ಧರ್ಮ, ರಾಜಕೀಯ, ಸಂಸ್ಕೃತಿಗೆ ಚಾಮರಾಜನಗರ ಪ್ರಸಿದ್ಧಿಯಾಗಿದ್ದು ಕರ್ನಾಟಕಕ್ಕೆ ಅದರ್ಶಪ್ರಾಯವಾಗಿದೆ. ಇಲ್ಲಿರುವ ಹರಳುಕೋಟೆ ಹಾಗೂ ಹರದವಹಳ್ಳಿಯಲ್ಲಿರುವ ದೇವಸ್ಥಾನಗಳು ಪುರಾತನವಾಗಿವೆ. ವಿಜಯ ಪಾರ್ಶ್ವನಾಥ ಸ್ವಾಮಿ ದೇವಸ್ಥಾನ 1116ರಲ್ಲಿ ನಿರ್ಮಾಣವಾಗಿರುವುದು ಇತಿಹಾಸದಿಂದ ತಿಳಿದು ಬರುತ್ತದೆ. ಜನಪದ ಕಲೆಗೂ ಜಿಲ್ಲೆ ಪ್ರಸಿದ್ಧಿ ಪಡೆದಿದೆ ಎಂದು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಜಿ. ಆರ್. ಆಶ್ವಥ್ ನಾರಾಯಣ್ ಮತ್ತು ವೆಂಕಟನಾಗಪ್ಪ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜೈನ ಸಮಾಜದ ಅಧ್ಯಕ್ಷ ನಿರ್ಮಲ್ ಕುಮಾರ್ ಜೈನ್, ಜೈಶಾಮಾದೇವಿ ಸಂಘದ ಅಧ್ಯಕ್ಷೆ ಪದ್ಮಶ್ರೀ ಬ್ರಹ್ಮೇಶ್ ಉಪಸ್ಥಿತರಿದ್ದರು.

ಉಜಿರೆ ಎಸ್. ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ

Article Image

ಉಜಿರೆ ಎಸ್. ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆಯನ್ನು ಜು.1 ರಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ವೈದ್ಯರ ಸೇವೆ ಮತ್ತು ತ್ಯಾಗ ಅಮೂಲ್ಯವಾದದ್ದು, ರೋಗಿಗಳ ಸೇವೆಗಾಗಿ ತನ್ನ ಹೆಚ್ಚಿನ ಸಮಯವನ್ನು ಮುಡಿಪಾಗಿಡುವ ವೈದ್ಯರದ್ದು ಒತ್ತಡದ ಜೀವನ. ಇಂತಹ ಗ್ರಾಮೀಣ ಪ್ರದೇಶದ ಆಸ್ಪತ್ರೆಯಲ್ಲಿ ವೈದ್ಯಕೀಯ ವೃತ್ತಿ ಮಾಡುತ್ತಾ, ರೋಗಿಗಳ ಸೇವೆಯ ವಿಷಯ ಬಂದಾಗ ಎಲ್ಲರು ಒಗ್ಗಟ್ಟಿನಿಂದ ರೋಗಿಯ ಸೇವೆಗೆ ಮುಂದಾಗುವ ನಮ್ಮ ಆಸ್ಪತ್ರೆಯ ವೈದ್ಯರ ಸೇವೆ ನಿಜವಾಗಿಯೂ ಶ್ಲಾಘನೀಯ ಎಂದರು. ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಹೇಮಾವತಿ ವಿ. ಹೆಗ್ಗಡೆಯವರ ಆಶೀರ್ವಾದ ಮತ್ತು ಆದೇಶದಂತೆ, ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯ ಹರ್ಷೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಮ್ಮ ಆಸ್ಪತ್ರೆಯ ವೈದ್ಯಕೀಯ ತಂಡ ಅತ್ಯುತ್ತಮ ವೈದ್ಯಕೀಯ ಸೇವೆ ನೀಡುತ್ತಿದ್ದು, ಸ್ವತಃ ರೋಗಿಗಳೇ ವೈದ್ಯರ ಮತ್ತು ಆಸ್ಪತ್ರೆಯ ಸೇವೆಯನ್ನು ಶ್ಲಾಘಿಸುತ್ತಿದ್ದಾರೆ. ನಮ್ಮ ಆಸ್ಪತ್ರೆಯಲ್ಲಿ ಶೀಘ್ರದಲ್ಲಿ ಎಂ.ಆರ್.ಐ ‌ಸ್ಕ್ಯಾನಿಂಗ್ ಸೇವೆ ದೊರೆಯಲಿದ್ದು, ದೇಶದಲ್ಲಿಯೇ ಈ ಅತ್ಯಾಧುನಿಕ ಯಂತ್ರ ಹೊಂದಲಿರುವ 2ನೆಯ ಆಸ್ಪತ್ರೆ ನಮ್ಮದಾಗಲಿದೆ ಎಂದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್ ಮಾತನಾಡಿ ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಸೇವೆ ನೀಡಲು ಹಗಲಿರುಳು ದುಡಿಯುತ್ತಿರುವ ಎಲ್ಲಾ ವೈದ್ಯರಿಗೆ ಶುಭ ಹಾರೈಸಿದರು. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಸಾತ್ವಿಕ್ ಜೈನ್ ಮಾತನಾಡಿ, ಎಲ್ಲರಿಗೂ ವೈದ್ಯರ ದಿನಾಚರಣೆಯ ಶುಭಾಶಯ ತಿಳಿಸುತ್ತಾ, ಹಿರಿಯ ಅನುಭವಿ ವೈದ್ಯರೊಂದಿಗೆ ಯುವ ಮತ್ತು ಉತ್ಸಾಹಭರಿತ ವೈದ್ಯರ ತಂಡವೇ ಈ ಆಸ್ಪತ್ರೆಯಲ್ಲಿ ರೋಗಿಗಳ ಸೇವೆಗೆ ಸದಾ ಸಿದ್ಧವಾಗಿದೆ ಎಂದರು. ಈ ಸಂದರ್ಭದಲ್ಲಿ ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ಎಲ್ಲಾ ವೈದ್ಯರನ್ನು ಸನ್ಮಾನಿಸಲಾಯಿತು. ವಿವಿಧ ಮನರಂಜನಾ ಹಾಗೂ ಫನ್ನಿ ಗೇಮ್ಸ್‌ಗಳಲ್ಲಿ ಆಸ್ಪತ್ರೆಯ ವೈದ್ಯರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಖುಷಿಪಟ್ಟರು. ಆಸ್ಪತ್ರೆಯ ವೈದ್ಯರು, ಎಲ್ಲಾ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು. ಜಗನ್ನಾಥ ಎಂ ಮತ್ತು ಸೃಜನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

First Previous

Showing 3 of 11 pages

Next Last