Article Image

ದೆಹಲಿ: ಜಿನ ಬಸದಿ 24 ತೀರ್ಥಂಕರರ ಪಂಚ ಕಲ್ಯಾಣ-ವಿವಿಧ ಜಿನ ಬಿಂಬಗಳ ಸ್ಥಾಪನೆ

Article Image

ದೆಹಲಿ: ಜಿನ ಬಸದಿ 24 ತೀರ್ಥಂಕರರ ಪಂಚ ಕಲ್ಯಾಣ-ವಿವಿಧ ಜಿನ ಬಿಂಬಗಳ ಸ್ಥಾಪನೆ

ಮುಂಬಯಿ, ಏ.25: ದೆಹಲಿಯ ರಾಣಾ ಪ್ರತಾಪ್ ನಗರದ ಜಿನ ಬಸದಿಯಲ್ಲಿ 24 ತೀರ್ಥಂಕರರ ಪಂಚ ಕಲ್ಯಾಣವು ರಾಷ್ಟ್ರಸಂತ ೧೦೮ ಉಪಾಧ್ಯಾಯ ಗುಪ್ತಿ ಸಾಗರ ಮುನಿಮಹಾರಾಜರ ಮಾರ್ಗದರ್ಶನ, ಪಾವನ ಸಾನ್ನಿಧ್ಯದಲ್ಲಿ ಮೂಡಬಿದಿರೆ ಶ್ರೀ ದಿಗಂಬರ ಜೈನ ಮಠದ, ಭಾರತ ಭೂಷಣ ಜಗದ್ಗುರು ಸ್ವಸ್ತಿಶ್ರೀ ಡಾ| ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಗೌರವ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಇಂದು ಜರುಗಿತು. ಮೂರು ಆಡಿ ಎತ್ತರದ ಪಂಚ ಲೋಹದ ಇಪ್ಪತ್ತನಾಲ್ಕು ತೀರ್ಥಂಕರರ ಹಾಗೂ ವಿವಿಧ ಜಿನ ಬಿಂಬಗಳ ಸ್ಥಾಪನೆ, ಮೋಕ್ಷ ಕಲ್ಯಾಣ ಪೂಜೆ, ನಂತರ ದೆಹಲಿ ವಿಶ್ವ ವಿದ್ಯಾಲಯ ಸ್ಪೋರ್ಟ್ಸ್ ಕ್ಲಬ್ ಸಭಾಂಗಣದಿಂದ ಮೆರವಣಿಗೆ ಮೂಲಕ ಮೂರು ಕಿ.ಮೀ ದೂರದ ಬಸದಿಗೆ ತೆರಳಿ ಬೆಳಿಗ್ಗೆಯಿಂದ ಮಧ್ಯಾಹ್ನವರೆಗೂ ದೆಹಲಿ ರಾಣಾಪತ್ ನಗರದ ಬಸದಿಯಲ್ಲಿ ಮೂರ್ತಿ ಸ್ಥಾಪನೆ ಜರುಗಿತು. ಬಳಿಕ ಧಾರ್ಮಿಕ ಸಭೆಯಲ್ಲಿ ಧರ್ಮೋಪದೇಶ ನೀಡಿದ ಮೂಡುಬಿದಿರೆ ಸ್ವಸ್ತಿಶ್ರೀ ಡಾ|| ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿಯವರು ಜಿನ ಬಿಂಬ ಸ್ಥಾಪನೆಯಿಂದ ಆತ್ಮಕಲ್ಯಾಣ ಹಾಗೂ ಪರ ಕಲ್ಯಾಣವಾಗುವುದು, ಜನ ಸಂಸ್ಕೃತಿ ಸಂಸ್ಕಾರ ಧರ್ಮದಿಂದ ಸಾಧ್ಯ ಎಂದು ಹೇಳುತ್ತಾ, ಸುಂದರ ಜಿನಾಲಯ ಸ್ಥಾಪನೆಗೆ ಕಾರಣರಾದ ದಾನಿಗಳನ್ನು ಗೌರವಿಸಿ ಹರಸಿದರು. ರಾಷ್ಟ್ರಸಂತ ೧೦೮ ಗುಪ್ತಿ ಸಾಗರ ಮುನಿಮಹಾರಾಜರು ಮೂಡುಬಿದಿರೆ ಶ್ರೀಗಳವರಿಗೆ ಶಾಸ್ತ್ರ ಸ್ಮರಣಿಕೆ ನೀಡಿ ಹರಸಿ ಆಶೀರ್ವಾದಿಸಿದರು. ಬಳಿಕ ದೆಹಲಿ ಗ್ರೀನ್ ಪಾರ್ಕ್ ಬಸದಿಯಲ್ಲಿ ಉಪಸ್ಥಿತರಿದ್ದ ರಾಷ್ಟ್ರಸಂತ ೧೦೮ ಆಚಾರ್ಯ ಪ್ರಾಗ್ಯ ಸಾಗರ ಮುನಿಮಹಾರಾಜರು ಶ್ರೀಗಳಿಗೆ ಗೌರವಾನ್ವಿತ ಪ್ರಧಾನ ಮಂತ್ರಿಗಳಿಂದ ಏ.21 ರ ಭಗವಾನ್ ಮಹಾವೀರ ಜನ್ಮ ಕಲ್ಯಾಣದಂದು ನಿರ್ವಾಣ ವರ್ಷ 2550ರ ಅಂಗವಾಗಿ ಬಿಡುಗಡೆಗೊಳಿಸಿದ ರೂಪಾಯಿ 100ರ ನಾಣ್ಯ ಹಾಗೂ ಅಂಚೆ ಇಲಾಖೆ ಬಿಡುಗಡೆಗೊಳಿಸಿದ ಪಾವಪುರಿ ಸಿದ್ದಕ್ಷೇತ್ರ ಫಸ್ಟೇಡ್ ಕವರ್ ನೀಡಿ ಹರಸಿದರು. ಈ ಸಂದರ್ಭ ಮೂಡುಬಿದಿರೆ ಸ್ವಾಮೀಜಿಯವರು ಈ ವರ್ಷ ಪೂರ್ತಿ ಆಚಾರ್ಯ ಶಾಂತಿ ಸಾಗರ ಮುನಿಮಹಾರಾಜರ ಆಚಾರ್ಯ ಶತಾಬ್ಧಿ ವರ್ಷ ಹಾಗೂ ಭಗವಾನ್ ಮಹಾವೀರ ಸ್ವಾಮಿ ನಿರ್ವಾಣ ಕಲ್ಯಾಣವನ್ನು ವಿವಿಧೆಡೆ ಆಚರಿಸಲು ಸಂಕಲ್ಪ ಮಾಡಿದರು.

ಮೂಡುಬಿದಿರೆ: ಶ್ರೀ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವ ಆಚರಣೆ

Article Image

ಮೂಡುಬಿದಿರೆ: ಶ್ರೀ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವ ಆಚರಣೆ

ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.) ಮತ್ತು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಜೈನ ಸಮಾಜ ಬಾಂಧವರ ಸಹಕಾರದೊಂದಿಗೆ ಭ| ಶ್ರೀ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವ ಆಚರಣೆಯು ಮೂಡುಬಿದಿರೆ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯದಲ್ಲಿ ವಿದ್ಯಾಗಿರಿಯ ಮೋಹಿನಿ ಅಪ್ಪಾಜಿ ನಾಯಕ್ ಸಭಾಭವನದಲ್ಲಿ ಏ.27 (ನಾಳೆ)ರಂದು ಜರಗಲಿರುವುದು.

ಇಜಿಲಂಪಾಡಿ: ಧಾಮ ಸಂಪ್ರೋಕ್ಷಣಾಪೂರ್ವಕ ಪುನಃಪ್ರತಿಷ್ಠಾ ಮಹೋತ್ಸವ

Article Image

ಇಜಿಲಂಪಾಡಿ: ಧಾಮ ಸಂಪ್ರೋಕ್ಷಣಾಪೂರ್ವಕ ಪುನಃಪ್ರತಿಷ್ಠಾ ಮಹೋತ್ಸವ

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಇಜಿಲಂಪಾಡಿ ಭಗವಾನ್ ೧೦೦೮ ಶ್ರೀ ಅನಂತನಾಥ ಸ್ವಾಮಿ ಬಸದಿಯು ಸಂಪೂರ್ಣ ಶಿಲಾಮಯವಾಗಿ ಜೀಣೋದ್ಧಾರಗೊಂಡು, ಧಾಮ ಸಂಪ್ರೋಕ್ಷಣಾಪೂರ್ವಕ ಪುನಃಪ್ರತಿಷ್ಠಾ ಮಹೋತ್ಸವವು ಕಾರ್ಕಳ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ ಹಾಗೂ ಮಾರ್ಗದರ್ಶನದಲ್ಲಿ, ನಾಡಿನ ಎಲ್ಲಾ ಶ್ರೀ ಮಠದ ಪ.ಪೂ. ಭಟ್ಟಾರಕ ಸ್ವಾಮೀಜಿಗಳವರ ಆರ್ಶೀವಾದಗಳೊಂದಿಗೆ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ, ದಿನಾಂಕ 26-04-2024ನೇ ಶುಕ್ರವಾರ ಮೊದಲ್ಗೊಂಡು ದಿನಾಂಕ 28-04-2024ನೇ ಭಾನುವಾರ ಪರ್ಯಂತ ಜೈನ ಆಗಮೋಕ್ತ ವಿಧಿ-ವಿಧಾನಗಳೊಂದಿಗೆ ಸಂಪನ್ನಗೊಳ್ಳಲಿರುವುದು.

ಧರ್ಮಸ್ಥಳ: ವಿಷು ಜಾತ್ರೆ ಸಂಪನ್ನ

Article Image

ಧರ್ಮಸ್ಥಳ: ವಿಷು ಜಾತ್ರೆ ಸಂಪನ್ನ

ಬೆಳ್ತಂಗಡಿ, ಏ. 23: ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವಾರ್ಷಿಕ ವಿಷು ಜಾತ್ರಾ ಮಹೋತ್ಸವವು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ, ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಎ. 13ರಂದು ಮೊದಲ್ಗೊಂಡು ಎ. 23ರಂದು ಶ್ರೀ ಮಂಜುನಾಥ ಸ್ವಾಮಿಯ ಉತ್ಸವ ಮೂರ್ತಿ ಓಕುಳಿಯಾಗಿ ನೇತ್ರಾವತಿ ನದಿಯಲ್ಲಿ ಅವಭೃಥ ಸ್ನಾನ ಹಾಗೂ ಧ್ವಜಾವರೋಹಣದೊಂದಿಗೆ ಭಕ್ತಿ, ಸಂಭ್ರಮದಿಂದ ವಿಧ್ಯುಕ್ತವಾಗಿ ಸಂಪನ್ನಗೊಂಡಿತು. ಎ.22ರಂದು ರಾತ್ರಿ ಶ್ರೀ ಸ್ವಾಮಿಯ ಮಹಾರಥೋತ್ಸವ ಪ್ರಯುಕ್ತ ದೇವಸ್ಥಾನದ ಒಳಾಂಗಣದಲ್ಲಿ ಉತ್ಸವ ಮೂರ್ತಿಯ ಉಡ್ಕು ಹಾಗೂ ವಿವಿಧ ವಾದ್ಯ ವೈಭವಗಳ ನಾಲ್ಕು ಸುತ್ತು ಬಲಿ ಉತ್ಸವ ನಡೆದು, ಹೊರಾಂಗಣದಲ್ಲಿ ಚೆಂಡೆ, ನಾದಸ್ವರ, ಶಂಖ ಜಾಗಟೆ, ಬ್ಯಾಂಡ್ ವಾಲಗ, ಸರ್ವ ವಾದ್ಯ, ತಟ್ಟಿರಾಯ ಸಹಿತ ಪ್ರದಕ್ಷಿಣೆ ಬಂದು ಬ್ರಹ್ಮ ರಥಕ್ಕೆ ಸುತ್ತು ಪ್ರದಕ್ಷಿಣೆ ಬಂದು ರಥಾರೋಹಣ ನಡೆಯಿತು. ಕ್ಷೇತ್ರದ ಸಕಲ ಬಿರುದಾವಲಿಗಳೊಂದಿಗೆ ಬಸವ, ಎರಡು ಆನೆಗಳು, ಸಹಸ್ರಾರು ಭಕ್ತರು ಮಹೋತ್ಸವದಲ್ಲಿ ಭಾಗಿಗಳಾಗಿದ್ದರು. ರಥಕ್ಕೆ ಭಕ್ತರು ಬಾಳೆಹಣ್ಣು ಎಸೆದು ತಮ್ಮ ಭಕ್ತಿ ಸಮರ್ಪಿಸಿದರು. ಡಾ| ಡಿ.ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಹೆಗ್ಗಡೆ ಕುಟುಂಬಸ್ಥರು, ಸೋನಿಯಾ ವರ್ಮಾ, ಕೆ.ಎನ್.ಜನಾರ್ದನ, ಜನಾರ್ದನ ಎಂ., ಡಾ| ಸತೀಶ್ಚಂದ್ರ ಎಸ್., ಡಾ| ಬಿ.ಎ.ಕುಮಾರ ಹೆಗ್ಡೆ, ಡಾ| ಶ್ರೀನಾಥ್ ಎಂ.ಪಿ., ವೀರು ಶೆಟ್ಟಿ, ಲಕ್ಷ್ಮೀನಾರಾಯಣ ರಾವ್, ಕ್ಷೇತ್ರದ ಅರ್ಚಕವೃಂದ, ಸಿಬ್ಬಂದಿ ಹಾಗೂ ಊರ ಪರವೂರ ಭಕ್ತರು ಪಾಲ್ಗೊಂಡಿದ್ದರು.

ಜೈನ ಶ್ರಾವಕ ಶ್ರಾವಕಿಯರಿಗೆ ರಾಜ್ಯ ಮಟ್ಟದ ಸ್ಪರ್ಧೆ

Article Image

ಜೈನ ಶ್ರಾವಕ ಶ್ರಾವಕಿಯರಿಗೆ ರಾಜ್ಯ ಮಟ್ಟದ ಸ್ಪರ್ಧೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾರಾವಿ ಗ್ರಾಮದ ಭ| ೧೦೦೮ ಧರ್ಮನಾಥ ಸ್ವಾಮಿ ಬಸದಿಯ ಧಾಮ ಸಂಪ್ರೋಕ್ಷಣಾ ಪೂರ್ವಕ ಪ್ರತಿಷ್ಠಾ ಮಹೋತ್ಸವವು ಇದೇ ಬರುವ ದಿನಾಂಕ 3, 4 ಮತ್ತು 5 ಮೇ 2024 ರಂದು ವಿಜೃಂಭಣೆಯಿಂದ ಜರಗಲಿರುವುದು. ಈ ಪ್ರಯುಕ್ತ ಜೈನ ಶ್ರಾವಕ, ಶ್ರಾವಕಿಯರಿಗೆ ರಾಜ್ಯ ಮಟ್ಟದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸ್ಪರ್ಧೆಗಳ ವಿವರ ಮತ್ತು ನಿಯಮ 1.ಧರ್ಮನಾಥ ಸ್ವಾಮಿಯ ಸಂಗೀತ/ಭಜನೆ ಸ್ಪರ್ಧೆ ಪ್ರಥಮ ಬಹುಮಾನ : 10,000 ನಗದು ಮತ್ತು ಸ್ಮರಣಿಕೆ ದ್ವಿತೀಯ ಬಹುಮಾನ : 8,000 ನಗದು ಮತ್ತು ಸ್ಮರಣಿಕೆ ನಿಯಮಗಳು :- ಧರ್ಮನಾಥ ಸ್ವಾಮಿಯ ಬಗ್ಗೆ ಹಾಡು/ಭಜನೆಯನ್ನು ಒಬ್ಬರೇ ಹಾಡಿ (ಹಿನ್ನೆಲೆ/ಮುನ್ನೆಲೆ) ವಿಡಿಯೋ ಮಾಡಿ ಕಳುಹಿಸಬೇಕು. ಸಾಹಿತ್ಯ ರಚಿಸುವವರು ಮತ್ತು ಗಾಯಕರು ಕಡ್ಡಾಯವಾಗಿ ‌‌ಶ್ರಾವಕ/ಶ್ರಾವಕಿಯರೇ ಆಗಿರಬೇಕು ಮತ್ತು ವಿಡಿಯೋದಲ್ಲಿ ಪ್ರತಿಯೊಬ್ಬರ ಹೆಸರುಗಳನ್ನು ನಮೂದಿಸಬೇಕು. ರಚನೆ ಮತ್ತು ಗಾಯನಕ್ಕೆ ಒಬ್ಬರಿಗೆ ಒಂದೇ ವಿಡಿಯೋಕ್ಕೆ ಮಾತ್ರ ಅವಕಾಶ. ಸಾಹಿತ್ಯ, ಸ್ವರ, ಹಿನ್ನೆಲೆ ಸಂಗೀತ, ಛಾಯಾಗ್ರಹಣ, ಇತ್ಯಾದಿ ಅಂಶಗಳನ್ನು ಪರಿಗಣಿಸಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ನಕಲು ಮಾಡಿದ ಅಥವಾ ಈ ಹಿಂದೆ ಪ್ರಕಟವಾದ ಹಾಡು/ಭಜನೆಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ. ಭಜನೆ/ಸಂಗೀತ ಕನ್ನಡ ಅಥವಾ ಹಿಂದಿ ಭಾಷೆಯಲ್ಲಿರಬೇಕು. 2. ಪ್ರಬಂಧ ಸ್ಪರ್ಧೆ ಪ್ರಥಮ ಬಹುಮಾನ : 3,000 ನಗದು ಮತ್ತು ಸ್ಮರಣಿಕೆ ದ್ವಿತೀಯ ಬಹುಮಾನ : 2000 ನಗದು ಮತ್ತು ಸ್ಮರಣಿಕೆ ನಿಯಮಗಳು :- ಪ್ರಬಂಧದ ವಿಷಯ : "ಜೈನ ಧರ್ಮದ ಆಚರಣೆಗಳು ಮತ್ತು ವೈಜ್ಞಾನಿಕತೆ". ಪ್ರಬಂಧವು 900 ಶಬ್ದಗಳನ್ನು ಮೀರಬಾರದು. (ಅಂದಾಜು 2 ಪುಟಗಳು) ಪ್ರಬಂಧವನ್ನು ಕನ್ನಡ ನುಡಿಯಲ್ಲಿ ಟೈಪ್ ಮಾಡಿ PDF ಮಾಡಿ ಕಳುಹಿಸಬೇಕು. ವಿಶೇಷ ಸೂಚನೆಗಳು ವಿಡಿಯೋ ಮತ್ತು ಪ್ರಬಂಧಗಳನ್ನು ಕಳುಹಿಸಲು ಕೊನೆಯ ದಿನಾಂಕ 30 ಎಪ್ರಿಲ್ 2024. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ವಿಡಿಯೋ ಮತ್ತು ಪ್ರಬಂಧಗಳನ್ನು ಕಳುಹಿಸುವವರು ತಮ್ಮ ಫೋಟೊ, ವಿಳಾಸ, ಹಾಗೂ ಮೊಬೈಲ್ ನಂಬರ್ ನೊಂದಿಗೆ 9481016887 ಈ ವಾಟ್ಸಪ್ ನಂಬರ್ ಗೆ ಅಥವಾ naravibasadi24@gmail.com ಗೆ ಕಳುಹಿಸಬೇಕಾಗಿ ವಿನಂತಿ. ದಿನಾಂಕ 1 ಮೇ 2024 ರಂದು ವಿಜೇತರನ್ನು ಆಯ್ಕೆ ಮಾಡಲಾಗುವುದು ಮತ್ತು ದಿನಾಂಕ 5 ಮೇ 2024 ರಂದು ಸಂಜೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಿಜೇತರನ್ನು ಗೌರವಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಅತುಲ್ ಎಸ್. ಸೇಮಿತ: 9481016887 ಜ್ಞಾನೇಂದ್ರ ಕುಮಾರ್ ಜೈನ್: 9902799196

ಮೂಡುಬಿದಿರೆ: ಸಾವಿರ ಕಂಬ ಬಸದಿಯ ಕಿರಿಯ ಮತ್ತು ಹಿರಿಯ ರಥೋತ್ಸವ

Article Image

ಮೂಡುಬಿದಿರೆ: ಸಾವಿರ ಕಂಬ ಬಸದಿಯ ಕಿರಿಯ ಮತ್ತು ಹಿರಿಯ ರಥೋತ್ಸವ

ವರ್ಷಂಪ್ರತಿ ಜರುಗುವ ಜಗತ್ಪ್ರಸಿದ್ಧ ತ್ರಿಭುವನ ತಿಲಕ ಚೂಡಾಮಣಿ ಸಾವಿರ ಕಂಬ ಬಸದಿಯ ಕಿರಿಯ ಮತ್ತು ಹಿರಿಯ ರಥೋತ್ಸವವು ಎ. 18ರಿಂದ ಪ್ರಾರಂಭಗೊಂಡಿದ್ದು, ಇಂದು (ಏ.23) ಹಿರಿಯ ರಥೋತ್ಸವ ಮತ್ತು ಶ್ರವಣ ಸಂಸ್ಕೃತಿ ಸಮ್ಮೇಳನ ೧೦೮ ಚಾರಿತ್ರ ಚಕ್ರವರ್ತಿ ಶಾಂತಿಸಾಗರ ಮುನಿಮಹಾರಾಜರ ಆಚಾರ್ಯ ಪದಾರೋಹಣ ಶತಾಬ್ಧಿವರ್ಷ ಆಚರಣೆಯು, ಮೂಡುಬಿದಿರೆ ಶ್ರೀ ಜೈನ ಮಠದ ಪ. ಪೂ. ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ನೇತೃತ್ವ, ಪಾವನ ಸಾನಿಧ್ಯ ಮತ್ತು ಆಶೀರ್ವಚನದೊಂದಿಗೆ ಜರಗಲಿರುವುದು.

ರಥೋತ್ಸವ ಮತ್ತು ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು

Article Image

ರಥೋತ್ಸವ ಮತ್ತು ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು

ಸಂಸೆ: ಇಲ್ಲಿಯ ಶ್ರೀ ಪದ್ಮಾವತಿ ಅಮ್ಮನವರ ಸನ್ನಿಧಿಯಲ್ಲಿ ವಷ೯ಂಪ್ರತಿ ನಡೆಯುವ ಶ್ರೀ ಮನ್ಮಮಹಾರಥೋತ್ಸವದ ಪೂಜಾ ಮಹೋತ್ಸವಗಳು ಕಾಕ೯ಳ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾಯ೯ವಯ೯ ಮಹಾ ಸ್ವಾಮೀಜಿಗಳವರ ಪಾವನ ಸಾನ್ನಿಧ್ಯದಲ್ಲಿ ಏ. 18ರಿಂದ ಪ್ರಾರಂಭಗೊಂಡು ಏ. 24ರವರೆಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಲಿರುವುದು.

ಬೆಳ್ತಂಗಡಿ: ಮಹಾವೀರ ಜಯಂತಿ ಆಚರಣೆ, ಚತುರ್ವಿಂಶತಿ ತೀರ್ಥಂಕರರ ಆರಾಧನೆ

Article Image

ಬೆಳ್ತಂಗಡಿ: ಮಹಾವೀರ ಜಯಂತಿ ಆಚರಣೆ, ಚತುರ್ವಿಂಶತಿ ತೀರ್ಥಂಕರರ ಆರಾಧನೆ

ಜೈನಪೇಟೆಯಲ್ಲಿರುವ ರತ್ನತ್ರಯ ತೀರ್ಥಕ್ಷೇತ್ರದಲ್ಲಿ ಇದೇ 21 ರಂದು ಭಾನುವಾರ ಹತ್ತನೆ ವಾರ್ಷಿಕೋತ್ಸವ, ಚತುರ್ವಿಂಶತಿ (ಇಪ್ಪತ್ತನಾಲ್ಕು) ತೀರ್ಥಂಕರರ ಆರಾಧನೆ, ೧೦೮ ಕಲಶಾಭಿಷೇಕ ಹಾಗೂ ಭಗವಾನ್ ಮಹಾವೀರ ಜಯಂತಿ ಆಚರಣೆ ನಡೆಯಲಿದೆ ಎಂದು ಬಸದಿಯ ಅನುವಂಶೀಯ ಆಡಳಿತ ಮೊಕ್ತೇಸರ ಕೆ. ಜಯವರ್ಮರಾಜ ಬಳ್ಳಾಲ್ ತಿಳಿಸಿದ್ದಾರೆ. ಭಾನುವಾರ ಬೆಳಿಗ್ಗೆ ಏಳು ಗಂಟೆಯಿಂದ ತೋರಣಮುಹೂರ್ತ, ವಿಮಾನಶುದ್ಧಿ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ನಡೆಯಲಿವೆ. ಪೂರ್ವಾಹ್ನ ಗಂಟೆ 8.45 ರಿಂದ ಸಾಮೂಹಿಕ ಚತುರ್ವಿಂಶತಿ (24) ತೀರ್ಥಂಕರರ ಆರಾಧನೆ ನಡೆಯಲಿದೆ. ಭಗವಾನ್ ಮಹಾವೀರ ಸ್ವಾಮಿಗೆ ನವಕಲಶಾಭಿಷೇಕ, ಭಗವಾನ್ ಶಾಂತಿನಾಥ ಸ್ವಾಮಿಗೆ ೧೦೮ ಕಲಶಗಳಿಂದ ಅಭಿಷೇಕ, ನೂತನ ಗಂಧಕುಟಿಯಲ್ಲಿ 24 ತೀರ್ಥಂಕರರ ಬಿಂಬಗಳ ಸ್ಥಾಪನೆ ನಡೆಯಲಿದೆ. ಅಪರಾಹ್ನ 3.00 ಗಂಟೆಗೆ ಹೊಂಬುಜ ಶ್ರೀ ಜೈನಮಠದ ಪ.ಪೂ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಮಹಾವೀರ ಜಯಂತಿ ಆಚರಣೆ ಬಗ್ಗೆ ಮಂಗಲ ಪ್ರವಚನ ನೀಡಲಿದ್ದಾರೆ. ಬಳಿಕ ನೂತನ ಘಂಟಾಮಂಟಪ ಹಾಗೂ ಜಲಧಾರ ಲೋಕಾರ್ಪಣೆಗೊಳ್ಳಲಿದೆ.

ಬೋಳ: ಪುನರ್ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ

Article Image

ಬೋಳ: ಪುನರ್ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಶ್ರೀ ವರ್ಧಮಾನ ಸ್ವಾಮಿ ಬಸದಿಯ ಪುನರ್ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮವು ಪ.ಪೂ ಮುನಿಶ್ರೀ ೧೦೮ ಅಮರಕೀರ್ತಿ ಮಹಾರಾಜರು, ಪ.ಪೂ. ಮುನಿಶ್ರೀ ೧೦೮ ಅಮೋಘಕೀರ್ತಿ ಮಹಾರಾಜರು ಮತ್ತು ಪ.ಪೂ. ಮುನಿಶ್ರೀ ೧೦೮ ಪ್ರಸಂಗ ಸಾಗರ ಮಹಾರಾಜರುಗಳ ಶುಭಾಶೀರ್ವಾದಗಳೊಂದಿಗೆ ಮತ್ತು ಮೂಡುಬಿದಿರೆ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ, ಮಾರ್ಗದರ್ಶನದಲ್ಲಿ ಏ.22 ರಂದು ನೆರವೇರಲಿರುವುದು.

ಧರ್ಮಸ್ಥಳ: 52ನೇ ವರ್ಷದ ಉಚಿತ ಸಾಮೂಹಿಕ ವಿವಾಹ

Article Image

ಧರ್ಮಸ್ಥಳ: 52ನೇ ವರ್ಷದ ಉಚಿತ ಸಾಮೂಹಿಕ ವಿವಾಹ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿವರ್ಷದಂತೆ ನೆರವೇರುವ ಉಚಿತ ಸಾಮೂಹಿಕ ವಿವಾಹವು ದಿನಾಂಕ 01-05-2024ನೇ ಬುಧವಾರ ಸಂಜೆ ಗಂಟೆ 6.45ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಜರುಗಲಿರುವುದು. ಈ ಸಾಮೂಹಿಕ ವಿವಾಹ ಸಮಾರಂಭದಲ್ಲಿ ವಿವಾಹವಾಗಲಿಚ್ಛಿಸುವವರು ದಿನಾಂಕ 25-04-2024ನೇ ಗುರುವಾರದ ಒಳಗಾಗಿ ವಧೂ-ವರರ ಹೆಸರು ದಾಖಲು ಮಾಡಿಸುವುದು. ಬರುವಾಗ ಮಂಡಲ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಯಾ ಕಾರ್ಯದರ್ಶಿಯವರಿಂದ ವಧೂ-ವರರ ಹೆಸರು, ಪ್ರಾಯ, ಹಿರಿಯರ ಒಪ್ಪಿಗೆ ಹಾಗೂ ಅವಿವಾಹಿತನೆಂಬುದಕ್ಕೆ ಅವಶ್ಯ ದೃಢಪತ್ರಿಕೆ ಮತ್ತು ವಧೂ-ವರರ ಇತ್ತೀಚಿನ ಭಾವಚಿತ್ರ 1+1 (ಪಾಸ್‌ಪೋರ್ಟ್ ಅಳತೆ) ತರಬೇಕು. ವರನಿಗೆ ಧೋತಿ, ಶಾಲು, ವಧುವಿಗೆ ಸೀರೆ, ರವಿಕೆಕಣ ಮತ್ತು ಮಂಗಲಸೂತ್ರವನ್ನು ಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ: ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಎದುರಿನ ಪ್ರವಚನ ಮಂಟಪದಲ್ಲಿರುವ ಸಾಮೂಹಿಕ ವಿವಾಹ ನೋಂದಣಿ ಕಚೇರಿಯನ್ನು ಸಂಪರ್ಕಿಸಿ: 9663464648/8147263422/08256 - 266644 ಅರ್ಜಿ ಮತ್ತು ಹೆಚ್ಚಿನ ಮಾಹಿತಿ ವೆಬ್‌ಸೈಟ್‌ನಲ್ಲಿ ಲಭ್ಯವಿದೆ: www.shridharmasthala.org ವಿ.ಸೂ.: ಯಾವುದೇ ಸಂದರ್ಭದಲ್ಲಿ ಎರಡನೇ ವಿವಾಹಕ್ಕೆ ಅವಕಾಶವಿರುವುದಿಲ್ಲ.

ಪ್ರೊ. ಡೇವಿಡ್ ಎ. ಕೋಲಾ ಅವರಿಗೆ ಬಿಳ್ಕೋಡುಗೆ ಸಮಾರಂಭ

Article Image

ಪ್ರೊ. ಡೇವಿಡ್ ಎ. ಕೋಲಾ ಅವರಿಗೆ ಬಿಳ್ಕೋಡುಗೆ ಸಮಾರಂಭ

ಸತ್ತೂರು, ಧಾರವಾಡ: ಎಸ್.ಡಿ.ಎಂ. ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡೇವಿಡ್ ಎ. ಕೋಲಾ ಅವರಿಗೆ ಏ.16 ರಂದು ಎಸ್.ಡಿ.ಎಂ. ವಿಶ್ವವಿದ್ಯಾಲಯದ ವತಿಯಿಂದ ಬಿಳ್ಕೋಡಲಾಯಿತು. ಸುಮಾರು 13 ವರ್ಷಗಳಿಗಿಂತ ಹೆಚ್ಚು ಕಾಲ ಪ್ರಾಂಶುಪಾಲರು ಮತ್ತು ನರ್ಸಿಂಗ್ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ ಪ್ರೊ. ಡೇವಿಡ್ ಎ. ಕೋಲಾ ಅವರ ಕೊಡುಗೆಗಳನ್ನು ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ ಶ್ಲಾಘಿಸಿದರು ಮತ್ತು ಎಸ್.ಡಿ.ಎಂ. ನರ್ಸಿಂಗ್ ಕಾಲೇಜಿನ ಬೆಳವಣಿಗೆಗೆ ಅವರ ಸೇವೆ ಅಪಾರ ಕೊಡುಗೆ ನೀಡಿದೆ ಎಂದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್, ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ, ಸಹ ಉಪ ಕುಲಪತಿಗಳಾದ ವಿ. ಜೀವಂಧರ ಕುಮಾರ, ಹಣಕಾಸು ಅಧಿಕಾರಿಯಾದ ವಿ.ಜಿ. ಪ್ರಭು, ಉಪ ಕುಲಸಚಿವರಾದ ಡಾ. ಅಜಂತಾ ಜಿ.ಎ ಸ್. ಅವರು ಪ್ರೊ. ಡೇವಿಡ್ ಎ. ಕೋಲಾ ಅವರಿಗೆ ಸನ್ಮಾನ ಪತ್ರ, ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಅಂಗ ಸಂಸ್ಥೆಗಳ ಮುಖ್ಯಸ್ಥರುಗಳು, ವೈದ್ಯಕೀಯ ಅಧೀಕ್ಷಕರು, ಉಪ ವೈದ್ಯಕೀಯ ಅಧೀಕ್ಷಕರು, ಶೂಶ್ರುಷಕ ಅಧೀಕ್ಷಕರು ಮತ್ತು ನರ್ಸಿಂಗ್ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನರ್ಸಿಂಗ್ ಕಾಲೇಜಿನ ಹಿರಿಯ ಪ್ರಾಧ್ಯಾಪಕಿಯವರಾದ ಡಾ. ಗಂಗಾಬಾಯಿ ಕುಲಕರ್ಣಿ ಅವರು ಪ್ರೊ. ಡೇವಿಡ್ ಎ. ಕೋಲಾ ಅವರ ಸಮರ್ಪಣಾ ಸೇವೆ ಮತ್ತು ಅವರು ಕಾಲೇಜಿನಲ್ಲಿ ಅನುಸರಿಸಿದ ಶಿಸ್ತು ಬದ್ದತೆಯನ್ನು ಸ್ಮರಿಸಿದರು. ಡಾ. ನಾಗೇಶ ಅಜ್ಜವಾಡಿಮಠ ಅವರು ಸನ್ಮಾನ ಪತ್ರವನ್ನು ವಾಚಿಸಿದರು. ಡಾ. ಪ್ರಸನ್ನ ದೇಶಪಾಂಡೆ ಅತಿಥಿಗಳನ್ನು ಸ್ವಾಗತಿಸಿದರು. ಡಾ. ತಿಲಕ ಜೋಶಿ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರೊ. ಮೆಟಿಲ್ಡಾ ಬಿಜಾಪುರ ವಂದನಾರ್ಪಣೆ ಸಲ್ಲಿಸಿದರು.

ನಾರಾವಿ ಮಾಗಣೆ ಬಸದಿಯಲ್ಲಿ ಪೂಜಾ ಕಾರ್ಯಕ್ರಮ

Article Image

ನಾರಾವಿ ಮಾಗಣೆ ಬಸದಿಯಲ್ಲಿ ಪೂಜಾ ಕಾರ್ಯಕ್ರಮ

ಬೆಳ್ತಂಗಡಿ ತಾಲೂಕಿನ ನಾರಾವಿ ಮಾಗಣೆ ಭ| ೧೦೦೮ ಶ್ರೀ ಧರ್ಮನಾಥ ಸ್ವಾಮಿ ಬಸದಿಯಲ್ಲಿ ಏ.15(ನಾಳೆ )ರಂದು ಶ್ರೀ ಸ್ವಾಮಿಯ ಜಿನ ಬಿಂಬಕ್ಕೆ "ವಜ್ರ ಲೇಪನಾ "ಪ್ರಕ್ರಿಯೆ ಜರುಗಲಿರುವುದು. ಆ ಪ್ರಯುಕ್ತ ಬೆಳಿಗ್ಗೆ 8 ಗಂಟೆಯಿಂದ "ಚೌವ್ವೀಸ ತೀರ್ಥಂಕರ"ರ ಸಾಮೂಹಿಕ ಆರಾಧನಾ ಪೂಜಾ ವಿಧಾನ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.

ಆಚಾರ್ಯ ಪದರೋಹಣ ಶತಾಬ್ಧಿ ಮಹೋತ್ಸವ

Article Image

ಆಚಾರ್ಯ ಪದರೋಹಣ ಶತಾಬ್ಧಿ ಮಹೋತ್ಸವ

ಹುಬ್ಬಳ್ಳಿಯ ದಿಗಂಬರ ಜೈನ ಬೋರ್ಡಿಂಗ್ ಆಯೋಜಿಸಿರುವ ಚಾರಿತ್ರ ಚಕ್ರವರ್ತಿ ಪ. ಪೂ. ಪ್ರಥಮಾಚಾರ್ಯ ಶ್ರೀ ೧೦೮ ಶಾಂತಿಸಾಗರ ಮುನಿ ಮಹಾರಾಜರ ಆಚಾರ್ಯ ಪದರೋಹಣ ಶತಾಬ್ಧಿ ಮಹೋತ್ಸವ ಸಮಾರಂಭವು ಪ. ಪೂ. ಅಭಿಕ್ಷಜ್ಞಾನ ಬಾಸ್ಕರ ಶ್ರೀ ೧೦೮ ಪುಣ್ಯಸಾಗರ ಮುನಿಮಹಾರಾಜರ ಪಾವನ ಸಾನ್ನಿಧ್ಯದಲ್ಲಿ, ಶ್ರೀ ಕ್ಷೇತ್ರ ವರೂರು ನವಗ್ರಹ ತೀರ್ಥದ, ಪ. ಪೂ. ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕ ಮಹಾಸ್ವಾಮೀಜಿಗಳವರ ಮತ್ತು ಸೋಂದಾ ಶ್ರೀ ಜೈನ ಮಠದ ಪ. ಪೂ. ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ದಿವ್ಯ ಸಾನಿಧ್ಯದಲ್ಲಿ ಏ. 14 (ನಾಳೆ) ರಂದು ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಸೋಂದಾ: ಶ್ರೀ ಸ್ವಾದಿ ದಿಗಂಬರ ಜೈನ ಮಠದ ಭೂಮಿಪೂಜೆ ಶಿಲಾನ್ಯಾಸ ಕಾರ್ಯಕ್ರಮ

Article Image

ಸೋಂದಾ: ಶ್ರೀ ಸ್ವಾದಿ ದಿಗಂಬರ ಜೈನ ಮಠದ ಭೂಮಿಪೂಜೆ ಶಿಲಾನ್ಯಾಸ ಕಾರ್ಯಕ್ರಮ

ಮಲೆನಾಡಿನ ಶಿರಸಿ ತಾಲೂಕಿನ ಸೋಂದಾದ ಶ್ರೀ ಸ್ವಾದಿ ದಿಗಂಬರ ಜೈನ ಮಠದ ಅತೀ ಪ್ರಾಚೀನ ಬಸದಿಯಾದ ಮುತ್ತಿನಕೆರೆಯ ಶ್ರೀ ಆದಿನಾಥ ಸ್ವಾಮಿ ಬಸದಿಯು ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಈ ಬಸದಿಯನ್ನು 10ನೇ ಶತಮಾನದಲ್ಲಿ ಶ್ರೀ ಜಿನದೇವಣ್ಣ, 16ನೇ ಶತಮಾನದಲ್ಲಿ ಶ್ರೀ ಅರಸಪ್ಪನಾಯಕ, 1996ರಲ್ಲಿ ಹಿಂದಿನ ಭಟ್ಟಾರಕರು ಶಿಥಿಲವಾದ ಬಸದಿಯನ್ನು ಜೀರ್ಣೋದ್ಧಾರ ಮಾಡಿಸಿದ್ದಾರೆ. ಈಗ ಪುನಃ ಶಿಥಿಲಗೊಂಡ ಬಸದಿಯನ್ನು ಸಂಪೂರ್ಣವಾಗಿ ಶಿಲಾಮಯವಾಗಿ ಜೀರ್ಣೋದ್ಧಾರ ಮಾಡಬೇಕೆಂದು ಸಂಕಲ್ಪ ಮಾಡಿ ಭಗವಂತರನ್ನು ಬಾಲಾಲಯದಲ್ಲಿ ಸ್ಥಾಪಿಸಲಾಗಿದೆ. ಈ ಬಸದಿಯ ಭೂಮಿಪೂಜೆ ಶಿಲಾನ್ಯಾಸ ಕಾರ್ಯಕ್ರಮವು ಯುಗಳ ಮುನಿಗಳಾದ ೧೦೮ ಮುನಿಶ್ರೀ ಅಮರಕೀರ್ತಿ ಮಹಾರಾಜರು ಮತ್ತು ೧೦೮ ಮುನಿಶ್ರೀ ಅಮೋಘಕೀರ್ತಿ ಮಹಾರಾಜರ ಪಾವನ ಸಾನಿಧ್ಯದಲ್ಲಿ ಹಾಗೂ ಪ. ಪೂ. ಸ್ವಸ್ತಿಶ್ರೀ ಭಟ್ಟಾಕಲಂಕ ಸ್ವಾಮೀಜಿಗಳವರ ಮಾರ್ಗದರ್ಶನ, ಪ. ಪೂ. ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಗಳವರ ದಿವ್ಯ ಸಾನಿಧ್ಯದಲ್ಲಿ ಏ.12ರಂದು (ನಾಳೆ) ನೆರವೇರಲಿದೆ.

ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ

Article Image

ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ

ಬೆಳ್ತಂಗಡಿ ತಾಲೂಕಿನ ವೇಣೂರಿನ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕವು ಮೂಡುಬಿದಿರೆ ಶ್ರೀ ಜೈನ ಮಠದ ಪ. ಪೂ. “ಭಾರತ ಭೂಷಣ” ಜಗದ್ಗುರು ಡಾ| ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ಏ. 13ರಂದು ಜರಗಲಿರುವುದು. ನಿರೀಕ್ಷಾ ಜೈನ್ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ವಿ. ಸೂ.: ವಿವಿಧ ದ್ರವ್ಯಗಳ ಅಭಿಷೇಕ ಮತ್ತು ಜಲಾಭಿಷೇಕ ಮಾಡಲಿಚ್ಚಿಸುವ ಧರ್ಮ ಬಂಧುಗಳು ಯಾತ್ರಿನಿವಾಸದಲ್ಲಿರುವ ಕಚೇರಿ ದೂರವಾಣಿ: 9606356288ನ್ನು ಸಂಪರ್ಕಿಸಬಹುದು.

ಶ್ರೀ ಕ್ಷೇತ್ರ ಕತ್ತೋಡಿಯಲ್ಲಿ ಸಂಕ್ರಮಣ

Article Image

ಶ್ರೀ ಕ್ಷೇತ್ರ ಕತ್ತೋಡಿಯಲ್ಲಿ ಸಂಕ್ರಮಣ

ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾಮದ ಶ್ರೀ ಕ್ಷೇತ್ರ ಕತ್ತೋಡಿಯ ಶಿವಭುವನೇಶ್ವರಿ ದೇಗುಲದಲ್ಲಿ ಮೇಷ ಸಂಕ್ರಮಣವು ಏ.13ರಂದು ನಡೆಯಲಿದೆ. ವಿ. ಸೂ.: ತುಪ್ಪದ ಸೇವೆ, ಹೂವಿನ ಪೂಜೆ ಹಾಗೂ ಮತ್ತಿತರ ಸೇವೆಗಳು ಇರಲಿದೆ. ಈ ಎಲ್ಲಾ ಸೇವೆಗಳನ್ನು ಮಾಡಲಿಚ್ಚಿಸುವವರು ಧರ್ಮದರ್ಶಿಗಳು: 94449714337 ನ್ನು ಸಂಪರ್ಕಿಸಬಹುದು.

ಭಾರತೀಯ ಜೈನ್ ಮಿಲನ್ ಕಾರ್ಕಳ ಇದರ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

Article Image

ಭಾರತೀಯ ಜೈನ್ ಮಿಲನ್ ಕಾರ್ಕಳ ಇದರ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

ಕಾರ್ಕಳ : ಭಾರತೀಯ ಜೈನ್ ಮಿಲನ್ ಕಾರ್ಕಳ ಇದರ 2024-25 ನೇ ಸಾಲಿನ ನೂತನ ಅಧ್ಯಕ್ಷರಾಗಿ ಬಾಹುಬಲಿ ಅರ್ಥ್ ಮೂವರ್ಸ್ ಮಾಲಕ ಅಶೋಕ್ ಎಚ್. ಎಂ., ಕಾರ್ಯದರ್ಶಿಯಾಗಿ ವಕೀಲ ವಿಖ್ಯಾತ್ ಜೈನ್ ಆಯ್ಕೆಯಾಗಿದ್ದಾರೆ. ಎ. 7ರಂದು ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅರ್ಥ್ ಮೂವರ್ಸ್ ಯೂನಿಯಾನ್ ಕಾರ್ಯದರ್ಶಿಯಾಗಿರುವ ಅಶೋಕ್ ಅವರು ಈ ಹಿಂದೆ ಜೈನ್ ಮಿಲನ್ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದರು. ವಿಖ್ಯಾತ್ ಅವರು ಜೈನ್ ಯುವ ಬ್ರಿಗೇಡ್ ಸಂಚಾಲಕರಾಗಿದ್ದಾರೆ. ಉಪಾಧ್ಯಕ್ಷರಾಗಿ ಪ್ರಮತ್ ಕುಮಾರ್ ಬಂಗ ಹಾಗೂ ಖಜಾಂಚಿಯಾಗಿ ಸುರೇಶ್ ಇಂದ್ರ ಆಯ್ಕೆಯಾಗಿದ್ದಾರೆ. ಸಭೆಯಲ್ಲಿ ಜೈನ ಜೀರ್ಣೋದ್ದಾರ ಸಂಘದ ಅಧ್ಯಕ್ಷ ಎಂ. ಎನ್. ರಾಜೇಂದ್ರ ಕುಮಾರ್, ಕಾರ್ಯದರ್ಶಿ ಎಂ. ಕೆ. ವಿಜಯ ಕುಮಾರ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಶ್ರೀ ಅನಂತನಾಥಸ್ವಾಮಿ ಮತ್ತು ಶ್ರೀ ಬ್ರಹ್ಮಯಕ್ಷ ದೇವರ ಮಹಾರಥಯಾತ್ರಾ ಮಹೋತ್ಸವ

Article Image

ಶ್ರೀ ಅನಂತನಾಥಸ್ವಾಮಿ ಮತ್ತು ಶ್ರೀ ಬ್ರಹ್ಮಯಕ್ಷ ದೇವರ ಮಹಾರಥಯಾತ್ರಾ ಮಹೋತ್ಸವ

ಅತಿಶಯ ಶ್ರೀ ಕ್ಷೇತ್ರ ನೆಲ್ಲಿಕಾರು ಬಸದಿ ಭಗವಾನ್ ೧೦೦೮ ಶ್ರೀ ಅನಂತನಾಥಸ್ವಾಮಿ ಮತ್ತು ಶ್ರೀ ಬ್ರಹ್ಮಯಕ್ಷ ದೇವರ ಮಹಾರಥಯಾತ್ರಾ ಮಹೋತ್ಸವ 09-04-2024ನೇ ಮಂಗಳವಾರ ಮೊದಲ್ಗೊಂಡು 15-04-2024ನೇ ಸೋಮವಾರ ಪರ್ಯಂತ ನಡೆಯಲಿದೆ. 14-04-2024ನೇ ಭಾನುವಾರ ಮಹಾರಥಯಾತ್ರಾ ಮಹೋತ್ಸವ ಜರಗಲಿರುವುದು.

ಬೈಪಾಡಿ : ಭಗವಾನ್ 1008 ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ಧಾಮಸಂಪ್ರೋಕ್ಷಣೆ

Article Image

ಬೈಪಾಡಿ : ಭಗವಾನ್ 1008 ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ಧಾಮಸಂಪ್ರೋಕ್ಷಣೆ

ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಬೈಪಾಡಿಯಲ್ಲಿರುವ ಭಗವಾನ್ 1008 ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ಧಾಮಸಂಪ್ರೋಕ್ಷಣೆ ಮತ್ತು ನೂತನ ಏಕಶಿಲಾ ಮಾನಸ್ತಂಭೋಪರಿ ಚತುರ್ಮುಖ 1008 ಶ್ರೀ ಶಾಂತಿನಾಥ ತೀರ್ಥಂಕರರ ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾ ಮಹೋತ್ಸವವು ಕಾರ್ಕಳ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ ಮತ್ತು ನೇತೃತ್ವದಲ್ಲಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವೀ. ಹೆಗ್ಗಡೆಯವರ ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ಜೈನ ಆಗಮೋಕ್ತ ವಿಧಿ-ವಿಧಾನಗಳೊಂದಿಗೆ ಎ. 1 ರಂದು ಪ್ರಾರಂಭಗೊಂಡು ಎ.3ರ ತನಕ ನೆರವೇರಲಿರುವುದು.

ವಾರ್ಷಿಕ ರಥಯಾತ್ರಾ ಮಹೋತ್ಸವ

Article Image

ವಾರ್ಷಿಕ ರಥಯಾತ್ರಾ ಮಹೋತ್ಸವ

ನರಸಿಂಹರಾಜಪುರ, ಶ್ರೀಕ್ಷೇತ್ರ ಸಿಂಹನಗದ್ದೆ ಬಸ್ತಿಮಠದ ಭಗವಾನ್ ಶ್ರೀ 1008 ಚಂದ್ರಪ್ರಭ ಸ್ವಾಮಿ ಹಾಗೂ ಮಹಾಮಾತೆ ಶ್ರೀ ಜ್ವಾಲಾಮಾಲಿನಿ ಅಮ್ಮನವರ ವಾರ್ಷಿಕ ರಥಯಾತ್ರಾ ಮಹೋತ್ಸವವು ಪ.ಪೂ. ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯದಲ್ಲಿ ಮಾ.31ರಂದು ಪ್ರಾರಂಭಗೊಂಡು ಎ. 4ರವರೆಗೆ ಜರಗಲಿದೆ.

ಹೊಂಬುಜ: ವಾರ್ಷಿಕ ರಥಯಾತ್ರಾ ಮಹೋತ್ಸವ

Article Image

ಹೊಂಬುಜ: ವಾರ್ಷಿಕ ರಥಯಾತ್ರಾ ಮಹೋತ್ಸವ

ಶ್ರೀ ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ ಪರಂಪರಾನುಗತವಾಗಿ ನಡೆದು ಬಂದಿರುವ ಭಗವಾನ್ ಶ್ರೀ ೧೦೦೮ ಪಾರ್ಶ್ವನಾಥ ಸ್ವಾಮಿ, ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರ ವಾರ್ಷಿಕ ರಥಯಾತ್ರಾ ಮಹೋತ್ಸವವು ಪ. ಪೂ. ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ, ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಇಂದಿನಿಂದ (ಮಾ. 29) ಮೊದಲ್ಗೊಂಡು ಏ.3ರವರೆಗೆ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಜರಗಲಿರುವುದು.

ವಾಲ್ಪಾಡಿ ಗ್ರಾಮದ ಭಗವಾನ್ ೧೦೦೮ ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ಧಾಮಸಂಪ್ರೋಕ್ಷಣಾ ಪೂರ್ವಕ ಪುನಃಪ್ರತಿಷ್ಠಾ ಮಹೋತ್ಸವ

Article Image

ವಾಲ್ಪಾಡಿ ಗ್ರಾಮದ ಭಗವಾನ್ ೧೦೦೮ ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ಧಾಮಸಂಪ್ರೋಕ್ಷಣಾ ಪೂರ್ವಕ ಪುನಃಪ್ರತಿಷ್ಠಾ ಮಹೋತ್ಸವ

ದ.ಕ ಜಿಲ್ಲೆಯ ಮೂಡಬಿದಿರೆ ತಾಲೂಕಿನ ವಾಲ್ಪಾಡಿ ಗ್ರಾಮದ ಭಗವಾನ್ ೧೦೦೮ ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ಧಾಮಸಂಪ್ರೋಕ್ಷಣಾ ಪೂರ್ವಕ ಪುನಃಪ್ರತಿಷ್ಠಾ ಮಹೋತ್ಸವವು ಮೂಡಬಿದಿರೆ ಶ್ರೀ ಜೈನ ಮಠದ ಸ್ವಸ್ತಿಶ್ರೀ ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಮಾರ್ಗದರ್ಶನ, ನೇತೃತ್ವ ಮತ್ತು ಪಾವನ ಸಾನ್ನಿಧ್ಯದಲ್ಲಿ, ಮಂಡ್ಯ ಶ್ರೀ ಕ್ಷೇತ್ರ ಆರತಿಪುರದ ಸ್ವಸ್ತಿಶ್ರೀ ಸಿದ್ಧಾಂತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಗೌರವ ಉಪಸ್ಥಿತಿಯೊಂದಿಗೆ ಮಾ.28ರಿಂದ ಮೊದಲ್ಗೊಂಡು ಮಾ.30ರವರೆಗೆ ಜೈನ ಆಗಮೋಕ್ತ ವಿಧಿ-ವಿಧಾನಗಳೊಂದಿಗೆ ಜರಗಲಿರುವುದು.

ಶ್ರೀ ಚಕ್ರೇಶ್ವರಿ ಮಹಿಳಾ ಸಮಾಜದ ವತಿಯಿಂದ ಸಂತೆ ಆಯೋಜನೆ

Article Image

ಶ್ರೀ ಚಕ್ರೇಶ್ವರಿ ಮಹಿಳಾ ಸಮಾಜದ ವತಿಯಿಂದ ಸಂತೆ ಆಯೋಜನೆ

ಬೆಂಗಳೂರಿನ ಶ್ರೀ ಚಕ್ರೇಶ್ವರಿ ಮಹಿಳಾ ಸಮಾಜದ ವತಿಯಿಂದ ಜಯನಗರದಲ್ಲಿ ಮಾ.31 ರಂದು ಸಂತೆ ಆಯೋಜನೆ ಮಾಡಲಾಗಿದೆ. ಈ ಸಂತೆಯಲ್ಲಿ ಕರಕುಶಲ ವಸ್ತುಗಳು, ರುಚಿಕರವಾದ ತಿಂಡಿ ತಿನಿಸುಗಳು (ಜೈನ ತಿಂಡಿ ತಿನಿಸುಗಳು), ವಿವಿಧ ವಸ್ತುಗಳು, ಸೀರೆಗಳು, ಇತರ ಯಾವದಾದರೂ ವಸ್ತುಗಳನ್ನು ಮಾರಾಟ ಮಾಡಲು ಮಳಿಗೆಯನ್ನು ಹಾಕಬಹುದು. ಒಂದು ಮಳಿಗೆಗೆ 200 ರೂಪಾಯಿ ಆಗಿರುತ್ತದೆ. ನೊಂದಾಯಿಸಲು ಕೊನೆಯ ದಿನಾಂಕ 29-03-2024. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9008817766, 9980875624

ಮಹಾವೀರ ತೀರ್ಥಂಕರರ 2550ನೇ ಜನ್ಮಕಲ್ಯಾಣದ ನಿಮಿತ್ತವಾಗಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ

Article Image

ಮಹಾವೀರ ತೀರ್ಥಂಕರರ 2550ನೇ ಜನ್ಮಕಲ್ಯಾಣದ ನಿಮಿತ್ತವಾಗಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ

ತೇರದಾಳ ಶ್ರೀ ವಾಸುಪೂಜ್ಯ ವೀತರಾಗ ದಿಗಂಬರ ಜೈನ ಮಂದಿರದ ವತಿಯಿಂದ ಭಗವಾನ ಶ್ರೀ 1008 ಮಹಾವೀರ ತೀರ್ಥಂಕರರ 2550ನೇ ಜನ್ಮಕಲ್ಯಾಣದ ನಿಮಿತ್ತವಾಗಿ ಪ.ಪೂ. ಸಂತ ಶಿರೋಮಣಿ ಆಚಾರ್ಯ ಶ್ರೀ ವಿದ್ಯಾಸಾಗರ ಮಹಾರಾಜರ ಜೀವನ, ತಪ, ತ್ಯಾಗ ಮತ್ತು ಪ್ರೇರಣಾ ಕಾರ್ಯಗಳು ಎಂಬ ವಿಷಯದ ಕುರಿತು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವನ್ನು ಒಳಗೊಂಡಿರುತ್ತದೆ. ಸೂಚನೆಗಳು:- * ಪ್ರಬಂಧವನ್ನು A4 ಸೀಟ್‌ನಲ್ಲಿ ಒಂದೇ ಮಗ್ಗುಲಿನಲ್ಲಿ ಬರೆಯಬೇಕು. 10 ಪುಟ ಮೀರದಂತೆ ಇರಬೇಕು. * ಶುದ್ಧ ಕೈ ಬರಹ ಅಥವಾ ಟೈಪ್ ಮಾಡಬಹುದು. * ಪ್ರಬಂಧ ಬರೆಯಲು ವಯಸ್ಸಿನ ಮಿತಿ ಇಲ್ಲ. * ಪ್ರಬಂಧ ಬರೆಯುವವರ ಹೆಸರು, ವಿಳಾಸ, ವಾಟ್ಸ್ಆಪ್ ನಂಬರ್ ಕಡ್ಡಾಯವಾಗಿ ನಮೂದಿಸಬೇಕು. * ಪ್ರಬಂಧವನ್ನು ಕನ್ನಡ ಭಾಷೆಯಲ್ಲಿ ಮಾತ್ರ ಬರೆಯಬೇಕು. * ಆಯೋಜಕರ ತೀರ್ಮಾನ ಅಂತಿಮವಾಗಿರುತ್ತದೆ. * ಪ್ರಬಂಧ ಕಳುಹಿಸುವ ಕೊನೆಯ ದಿನಾಂಕ 16-04-2024 * ಪ್ರಬಂಧ ಕಳುಹಿಸುವ ವಿಳಾಸ- ಸಂತೋಷ ಶೆಟ್ಟಿ, ಗುರುಕುಲ ರೋಡ್, ಟೀಚರ್ ಕಾಲೋನಿ, A/Po ತೇರದಾಳ, 587315 ತಾ: ರಬಕವಿ-ಬನಹಟ್ಟಿ ಜಿ: ಬಾಗಲಕೋಟ * ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ- 9164896108, 7019326565, 8951742543 * ಪ್ರಬಂಧದಲ್ಲಿ ಭಾಗವಹಿಸುವ ಎಲ್ಲರಿಗೂ ಬಹುಮಾನ ನೀಡಲಾಗುವುದು.

ವೇಣೂರು : ಮಾ. 25ರಂದು ಭಗವಾನ್‌ ಬಾಹುಬಲಿ ಸ್ವಾಮಿಗೆ ಪಾದಾಭಿಷೇಕ, ಮಹೋತ್ಸವ ಹಾಗೂ ಮಹಾಪೂಜೆ

Article Image

ವೇಣೂರು : ಮಾ. 25ರಂದು ಭಗವಾನ್‌ ಬಾಹುಬಲಿ ಸ್ವಾಮಿಗೆ ಪಾದಾಭಿಷೇಕ, ಮಹೋತ್ಸವ ಹಾಗೂ ಮಹಾಪೂಜೆ

ಬೆಳ್ತಂಗಡಿ ತಾಲೂಕಿನ ವೇಣೂರಿನ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕವು ಇತ್ತೀಚೆಗೆ ಸಂಪನ್ನಗೊಂಡಿದ್ದು, ಇದೀಗ ಮಾ. 25ರಂದು ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಬೆಟ್ಟದ ವಾರ್ಷಿಕ ರಥಯಾತ್ರಾ ಮಹೋತ್ಸವದ ದಿನವಾಗಿದ್ದು, ಆ ಪ್ರಯುಕ್ತ ನಾಳೆ (ಮಾ. 25)ರಂದು ಸಾಯಂಕಾಲ ಗಂಟೆ 6.00ರಿಂದ ಭ|| ಶ್ರೀ ಬಾಹುಬಲಿ ಸ್ವಾಮಿಗೆ ೫೪ ಕಲಶಗಳಿಂದ ಪಾದಾಭಿಷೇಕ, ಮಹೋತ್ಸವ ಹಾಗೂ ಮಹಾಪೂಜೆಯು ನೆರವೇರಲಿದೆ ಎಂದು ಶ್ರೀ ದಿಗಂಬರ ಜೈನ ತೀಥ೯ಕ್ಷೇತ್ರ ಸಮಿತಿಯ ಪ್ರಕಟಣೆ ತಿಳಿಸಿದೆ.

ದರೆಗುಡ್ಡೆ: ಶ್ರೀ ೧೦೦೮ ಅನಂತನಾಥ ಸ್ವಾಮಿ ಬಸದಿಯಲ್ಲಿ ಶ್ರೀ ಸಿದ್ಧರ ಪಂಚಾಮೃತ ಅಭಿಷೇಕ

Article Image

ದರೆಗುಡ್ಡೆ: ಶ್ರೀ ೧೦೦೮ ಅನಂತನಾಥ ಸ್ವಾಮಿ ಬಸದಿಯಲ್ಲಿ ಶ್ರೀ ಸಿದ್ಧರ ಪಂಚಾಮೃತ ಅಭಿಷೇಕ

ದ.ಕ.ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಕೆಲ್ಲಪುತ್ತಿಗೆ- ದರೆಗುಡ್ಡೆ ಗ್ರಾಮದ ಭಗವಾನ್ ಶ್ರೀ ೧೦೦೮ ಅನಂತನಾಥ ಸ್ವಾಮಿ ಬಸದಿಯಲ್ಲಿ ಶ್ರೀ ಸಿದ್ಧರ ಪಂಚಾಮೃತ ಅಭಿಷೇಕ ಮತ್ತು ಅಷ್ಟಮ ನಂದೀಶ್ವರದ ಐವತ್ತೆರಡು ನೂತನ ಜಿನ ಬಿಂಬಗಳಿಗೆ ಮಹಾಭಿಷೇಕವು ಮೂಡುಬಿದಿರೆ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ, ನೇತೃತ್ವ ಮತ್ತು ಆಶೀರ್ವಚನದೊಂದಿಗೆ ಮಾ.24 ರಂದು ನೆರವೇರಲಿರುವುದು.

ಮರುಕಳಿಸಿದ ಹಂತೂರಿನ ಗತವೈಭವ: ಸರ್ವಧರ್ಮ ಸಮನ್ವಯತೆಯ ಕ್ಷೇತ್ರ

Article Image

ಮರುಕಳಿಸಿದ ಹಂತೂರಿನ ಗತವೈಭವ: ಸರ್ವಧರ್ಮ ಸಮನ್ವಯತೆಯ ಕ್ಷೇತ್ರ

ಮೂಡಿಗೆರೆ, ಮಾ. 22: ಹೊಯ್ಸಳ ಸಾಮ್ರಾಜ್ಯದ ನಾಡದ ಹಂತೂರು ವೈಭವದಿಂದ ಮೆರೆದ ನಾಡಾಗಿತ್ತು, ಶಿಲ್ಪಕಲೆಗೆ ಹೆಸರಾಗಿತ್ತು, ಹೊಯ್ಸಳ ಸಾಮ್ರಾಜ್ಯದ ಉಗಮ ಸ್ಥಾನ ಸಮೀಪದ ಅಂಗಡಿ ಗ್ರಾಮವೇ ಆಗಿತ್ತು, ಅಹಿಂಸಾ ವೈಭವದಿಂದ ಮೆರೆದ ನಾಡು, ಕಾಲಚಕ್ರಕ್ಕೆ ಸಿಲುಕಿ ಅವನತಿಯಾಯಿತು, ಸರ್ವಧರ್ಮ ಜನರ ಸಹಕಾರ, ಧಾರ್ಮಿಕ ಮನೋಭಾವ, ಶಾಂತಿ ಅಹಿಂಸೆ ಫಲವಾಗಿ ಇಂದು ಶಿಲ್ಪಕಲಾ ಬಸದಿಯ ಪುನರ್ ನಿರ್ಮಾಣದಿಂದ ಈ ಹಿಂದಿನ ಗತವೈಭವ ಮರುಕಳಿಸಿದೆ ಎಂದು ಶ್ರೀ ಕ್ಷೇತ್ರ ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಹೇಳಿದರು. ಅವರಿಂದು ಹಂತೂರಿನ ಶ್ರೀ ಪಾರ್ಶ್ವನಾಥ ಜಿನ ಮಂದಿರದ ಧಾಮಸಂಪ್ರೋಕ್ಷಣಾಪೂರ್ವಕ ಪಂಚಕಲ್ಯಾಣ ಮಹೋತ್ಸವ ಸಹಿತ ಮಾನಸ್ತಂಭೋಪರಿ ಚತುರ್ಮುಖ ಬಿಂಬ ಪ್ರತಿಷ್ಠಾಪನ ಮಹೋತ್ಸವ ಕಾರ್ಯಕ್ರಮದಲ್ಲಿ ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇಲ್ಲಿನ ಜನ, ಧರ್ಮ ಕಾರ್ಯಕ್ಕೆ ಆದ್ಯತೆ ನೀಡುತ್ತಿದ್ದು, ಯಾವುದೇ ತಪ್ಪು ಒಪ್ಪುಗಳಿಗೆ ಜಟ್ಟಿಂಗರಾಯನ ಆಶ್ರಯಿಸುತ್ತಾರೆ. ಇಂತಹ ಧರ್ಮಭೂಮಿಯಲ್ಲಿ ಬಿಟ್ಟಿದೇವ, ಶಾಂತಲೆ, ಹರಿಯಲೇ, ಶಿಲ್ಪಕಲಾ ಬಸದಿ ಕಟ್ಟಿಸಿದರು, ಈ ಬಸದಿ ಸಂರಕ್ಷಣೆಯಲ್ಲಿ ಸ್ಥಳೀಯ ಗ್ರಾಮಸ್ಥರ ಕೊಡುಗೆ ಅಪಾರ. ಸ್ಥಳೀಯ ಜನರು ಹಾಗೂ ಕಳಸ ಭಾಗದ 8 ಸೀಮೆಯ ಜನರ ಸಹಕಾರದಿಂದ ಈ ಬಸದಿ ಜೀರ್ಣೋದ್ಧಾರಗೊಂಡಿದೆ ಎಂದರು. ಇಲ್ಲಿಯ ಜನ ಶ್ರೀಮಂತಿಕೆ ಜನರು ಇಲ್ಲಿನ ಪದ್ಮಾವತಿ ಮೂರ್ತಿ ಮನಮೋಹಕವಾಗಿದೆ. ಈ ಗತ ವೈಭವಕ್ಕೆ ಜನಸಾಗರವೇ ಹರಿದು ಬರುತ್ತಿದೆ ಎಂದು ಹೇಳಿದರು. ಬಳಿಕ ಕಂಬದಹಳ್ಳಿ ಶ್ರೀ ಜೈನ ಮಠದ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹೆಚ್.ಏನ್.ಸುಬ್ಬೆ ಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮೂಡಿಗೆರೆ ಹಂತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾನಾಗರಾಜ್, ಮಾಜಿ ಶಾಸಕ ಬಿ. ಬಿ. ನಿಂಗಯ್ಯ, ಅಶೋಕ್ ಗೌಡ, ಕೆ. ಸಿ. ಧರಣೇಂದ್ರಯ್ಯ, ವಿಮಲ್ ತಾಳಿಕೋಟೆ, ಶ್ರೀಪಾಲಯ್ಯ, ಎಚ್. ಕೆ. ಸುದರ್ಶನ್, ಪ್ರಶಾಂತ್ ಚಿತ್ರಗುತ್ತಿ, ತೇಜು ಕುಮಾರ್ ಕಟೋರಿಯ, ಪಾಶ್ವನಾಥ, ಜಿ. ಬಿ. ಸನ್ಮತಿ ಕುಮಾರ್, ಶೈಲಾ ಹರೀಶ್, ಭರತ್‌ರಾಜು, ಎಳನೀರು ಕೀರ್ತಿ ಜೈನ್, ಬಿ. ಎಲ್. ಜಿನರಾಜ ಇಂದ್ರ, ಬ್ರಹ್ಮಣ್ಣ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕ್ಷೇತ್ರದ ಏಳಿಗೆಗೆ ಸಹಕರಿಸಿದ ಸ್ಥಳೀಯರನ್ನು, ಹಲವಾರು ಗಣ್ಯರನ್ನು ಸನ್ಮಾನಿಸಲಾಯಿತು. ಹೊರನಾಡು ಅರ್ಕಕೀರ್ತಿರವರು ಪ್ರಾರ್ಥಿಸಿದರು. ಎಚ್. ಸಿ. ಅಣ್ಣಯ್ಯ ಸ್ವಾಗತಿಸಿದರು. ಪ್ರದೀಪ್ ಕುಮಾರ್ ತಡಪಾಲು ಪ್ರಾಸ್ತಾವಿಕ ನುಡಿಗಳನ್ನಾಡಿದರು. -ಜೆ. ರಂಗನಾಥ, ತುಮಕೂರು

ಮಾ. 24 : ಕಣ್ಣಿನ ಉಚಿತ ತಪಾಸಣೆ - ಪೊರೆ ಶಸ್ತ್ರಚಿಕಿತ್ಸಾ ಶಿಬಿರ

Article Image

ಮಾ. 24 : ಕಣ್ಣಿನ ಉಚಿತ ತಪಾಸಣೆ - ಪೊರೆ ಶಸ್ತ್ರಚಿಕಿತ್ಸಾ ಶಿಬಿರ

ಕಾರ್ಕಳ : ಜಿನವಾಣಿ ಮಹಿಳಾ ಸಂಘ ದಾನಶಾಲೆ ಮತ್ತು ಶ್ರೀ ಬಾಹುಬಲಿ ಸೌಹಾರ್ದ ಪತ್ತಿನ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಪ್ರಸಾದ್ ನೇತ್ರಾಲಯ, ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಮಾ. 24ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಕಾರ್ಕಳ ಜೈನ ಮಠದ ಬಳಿಯಿರುವ ಸಭಾಂಗಣದಲ್ಲಿ ಕಣ್ಣಿನ ಉಚಿತ ತಪಾಸಣೆ ಹಾಗೂ ಪೊರೆ ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ: 9880015655 (ಸುಮನಾಜಿ), 9844511211 (ಹರ್ಷ) ಅಥವಾ 9591918216 (ವಿಶುಕುಮಾರ್) ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಂ. ಎಂ. ಜಿನೇಂದ್ರರವರ ಜೀವನ ಯಶೋಗಾಥೆ ಕೃತಿ ಶ್ರೀಘ್ರದಲ್ಲಿ ಲೋಕಾರ್ಪಣೆ

Article Image

ಎಂ. ಎಂ. ಜಿನೇಂದ್ರರವರ ಜೀವನ ಯಶೋಗಾಥೆ ಕೃತಿ ಶ್ರೀಘ್ರದಲ್ಲಿ ಲೋಕಾರ್ಪಣೆ

ಇತ್ತೀಚೆಗೆ ರಚಿತಗೊಂಡಿರುವ ಖ್ಯಾತ ಛಾಯಾಗ್ರಾಹಕ ಚಿತ್ತ ಜಿನೇಂದ್ರರವರ ಜೀವನ ಯಶೋಗಾಥೆಯಾದ "ಸವ್ಯಸಾಚಿ ಕಲಾವಿದ ಜಿನೇಂದ್ರ" ಎಂಬ ಕೃತಿ ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ತುಮಕೂರಿನ ಹಿರಿಯ ಸಾಹಿತಿ ಡಾ. ಎಸ್. ಪಿ. ಪದ್ಮಪ್ರಸಾದ್ ಜೈನ್ ರವರಿಂದ ರಚಿತವಾದ ಈ ಕೃತಿಗೆ ಹಿರಿಯ ಸಾಹಿತಿ, ನಾಡೋಜ ಹಂಪ ನಾಗರಾಜಯ್ಯ (ಹಂಪನಾ) ಮುನ್ನುಡಿ ಬರೆದಿದ್ದು, ಈ ಕೃತಿಯನ್ನು ಬೆಂಗಳೂರಿನ ಕರ್ನಾಟಕ ಪುರಾತತ್ವ ಮತ್ತು ಸಾಹಿತ್ಯ ಪರಿಷತ್ ಹೊರತುರುತ್ತಿದ್ದು ವಿಶಿಷ್ಟ ಕಲ್ಪನೆಯಲ್ಲಿ ಮೂಡಿಬರುತ್ತದೆ. ಕೃತಿಯಲ್ಲಿ ಎಂ.ಎಂ. ಜಿನೇಂದ್ರ ಅವರ ಜೀವನ, ಸವೆಸಿದ ಹಾದಿ, ಬೆಳೆದ ನೋಟ, ಅವರು ರಚಿಸಿದ ಕಲಾಕೃತಿಗಳ ಗುಚ್ಛವೇ ಈ ಕೃತಿಯಲ್ಲಿ ಅಡಗಿದೆ. ಸಾಂಪ್ರದಾಯಿಕ ಚಿತ್ರಕಲೆ, ಶಿಲ್ಪಕಲೆ, ಜಲವರ್ಣ, ವರ್ಣ ಚಿತ್ರಗಳು, ರೇಖಾ ಚಿತ್ರಗಳು, ವ್ಯಕ್ತಿ ಚಿತ್ರಗಳು, ಸ್ತಬ್ಧಚಿತ್ರಗಳು, ಸೆರಾಮಿಕ ಕಲಾಕೃತಿಗಳು ಆಧುನಿಕ ತಂತ್ರಜ್ಞಾನದ ರೂಪದಲ್ಲಿ ಮೂಡಿಬಂದಿವೆ. ಇದರಲ್ಲಿ ಕಲಾವಿದ ಎಂ. ಎಂ. ಜಿನೇಂದ್ರ ಅವರ ಕಲಾ ನೈಪುಣ್ಯತೆ, ಚತುರತೆ, ಸೂಕ್ಷ್ಮತೆ, ಗ್ರಹಿಕೆ, ರಚನಾ ಶೈಲಿ, ರೇಖೆಗಳ ಮೋಡ, ಭಾವನಾ ಲಹರಿ, ವಿಸ್ಮಯಕಾರಿ ಆಲೋಚನೆಗಳು, ಬೃಹತ್ ಮೂರ್ತಿಗಳು ಈ ಕೃತಿಯಲ್ಲಿ ಮೂಡಿ ಬಂದಿವೆ, ಅಲ್ಲದೆ ಸಮಾಜಕ್ಕೆ ಅವರ ಕೊಡುಗೆ, ಅವರಿಗೆ ಸಂದ ಗೌರವಗಳು ಅಡಕವಾಗಿವೆ. ಈ ಕೃತಿಯನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಹೊರ ತರಲಾಗಿದೆ.

ಹಂತೂರಿನ ಭಗವಾನ್ ಶ್ರೀ ೧೦೦೮ ಪಾರ್ಶ್ವನಾಥ ಸ್ವಾಮಿ ಬಸದಿಯ ಧಾಮಸಂಪ್ರೋಕ್ಷಣಾ ಪೂರ್ವಕ ಪಂಚಕಲ್ಯಾಣ ಮಹೋತ್ಸವ

Article Image

ಹಂತೂರಿನ ಭಗವಾನ್ ಶ್ರೀ ೧೦೦೮ ಪಾರ್ಶ್ವನಾಥ ಸ್ವಾಮಿ ಬಸದಿಯ ಧಾಮಸಂಪ್ರೋಕ್ಷಣಾ ಪೂರ್ವಕ ಪಂಚಕಲ್ಯಾಣ ಮಹೋತ್ಸವ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರಕೃತಿ ಸೌಂದರ್ಯದಿಂದ ಕೂಡಿದ ಮಲೆನಾಡ ಮಡಿಲಿನ ಹಂತೂರಿನ ಭಗವಾನ್ ಶ್ರೀ ೧೦೦೮ ಪಾರ್ಶ್ವನಾಥ ಸ್ವಾಮಿ ಬಸದಿಯ ಧಾಮಸಂಪ್ರೋಕ್ಷಣಾ ಪೂರ್ವಕ ಪಂಚಕಲ್ಯಾಣ ಮಹೋತ್ಸವ ಸಹಿತ ಮಾನಸ್ಥಂಭೋಪರಿ ಚತುರ್ಮುಖ ಬಿಂಬದ ಪ್ರತಿಷ್ಠಾಪನೆಯು ನರಸಿಂಹರಾಜಪುರ, ಸಿಂಹನಗದ್ದೆ ಬಸ್ತಿಮಠದ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಮತ್ತು ಸಮಸ್ತ ಭಟ್ಟಾರಕ ಸ್ವಾಮೀಜಿಗಳವರ ಪಾವನ ಸಾನ್ನಿಧ್ಯದಲ್ಲಿ ಹಾಗೂ ಶೃಂಗೇರಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶ್ರೀ ಶ್ರೀ ಗುಣನಾಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ದಿನಾಂಕ 22.03.2024 ರಿಂದ ಪ್ರಾರಂಭಗೊಂಡು 24.03.2024 ರವರೆಗೆ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆಯಲಿದೆ.

First Previous

Showing 3 of 5 pages

Next Last