Thu, May 15, 2025

Thu, May 15, 2025

ಧರ್ಮಸ್ಥಳ: ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿಯಲ್ಲಿ ವಾರ್ಷಿಕೋತ್ಸವ

Article Image

ಧರ್ಮಸ್ಥಳ: ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿಯಲ್ಲಿ ವಾರ್ಷಿಕೋತ್ಸವ

ಜೈನರ ಶ್ರದ್ಧಾಕೇಂದ್ರಗಳಾದ ಬಸದಿಗಳು ಸಮವಸರಣದ ಪ್ರತೀಕವಾಗಿದ್ದು, ಪರಿಶುದ್ಧ ಮನಸ್ಸಿನಿಂದ ಬಸದಿಗೆ ಹೋಗಿ ಅಷ್ಟದ್ರವ್ಯಗಳಿಂದ ಅಷ್ಟವಿಧಾರ್ಚನೆ ಪೂಜೆ ಮಾಡಿದಾಗ ಅಷ್ಟಕರ್ಮಗಳ ನಾಶವಾಗುತ್ತದೆ. ಸಕಲಕರ್ಮಗಳ ಕ್ಷಯದೊಂದಿಗೆ ಅಕ್ಷಯ ಸುಖವನ್ನೀಯುವ ಮೋಕ್ಷ ಪ್ರಾಪ್ತಿಯೇ ಜೀವನದ ಗುರಿಯಾಗಬೇಕು ಎಂದು ಶ್ರವಣಬೆಳಗೊಳ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಅವರು ಭಾನುವಾರ ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿಯಲ್ಲಿ ವಾರ್ಷಿಕೋತ್ಸವ ಸಂದರ್ಭದಲ್ಲಿ ಆಯೋಜಿಸಿದ ಸಾಮೂಹಿಕ ಋಷಿಮಂಡಲ ಪುಷ್ಪಾರ್ಚನೆಯಲ್ಲಿ ಭಾಗವಹಿಸಿ ಮಂಗಲ ಪ್ರವಚನ ನೀಡಿದರು. ದಾನ ಮತ್ತು ದೇವರ ಪೂಜೆ ಶ್ರಾವಕರ ಧರ್ಮವಾಗಿದೆ. ಗೃಹಸ್ಥರು ದಾನ, ಧರ್ಮಾದಿ ಸತ್ಕಾರ್ಯಗಳಿಂದ ಶೋಭಿಸುತ್ತಾರೆ. ದಾನದಿಂದ ದುರ್ಗತಿಯ ನಾಶವಾಗಿ ಸದ್ಗತಿ ಪ್ರಾಪ್ತವಾಗುತ್ತದೆ. ಪೂಜೆಯಲ್ಲಿ ದ್ರವ್ಯಪೂಜೆ ಮತ್ತು ಭಾವಪೂಜೆ ಎಂಬ ಎರಡು ವಿಧಗಳಿದ್ದು ದ್ರವ್ಯಪೂಜೆಯು ಭಾವಪೂಜೆಗೆ ನಾಂದಿಯಾಗಿದೆ. ಸತ್ಯ, ಧರ್ಮ, ನ್ಯಾಯ, ನೀತಿ ನೆಲೆನಿಂತ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಅನ್ನದಾನ, ವಿದ್ಯಾದಾನ, ಔಷಧಿದಾನ ಮತ್ತು ಅಭಯದಾನ ಎಂಬ ಚತುರ್ವಿಧ ದಾನ ಪರಂಪರೆ ವಿಶ್ವವಿಖ್ಯಾತವಾಗಿದೆ. ಧರ್ಮಾಧಿಕಾರಿಗಳಾದ ಹೆಗ್ಗಡೆಯವರ ಮೂಲಕ ದಾನವೇ ಧರ್ಮವಾಗಿ ಧರ್ಮಸ್ಥಳದಲ್ಲಿ ನೆಲೆನಿಂತಿದೆ. ತೀರ್ಥಂಕರರು ತಮ್ಮ ಆತ್ಮಕಲ್ಯಾಣದೊಂದಿಗೆ ಲೋಕಕಲ್ಯಾಣ ಮಾಡಿದಂತೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಕೂಡಾ ತಮ್ಮ ಅವಿರತ ಸೇವಾಕಾಯಕ ಹಾಗೂ ಲೋಕಕಲ್ಯಾಣ ಕಾರ್ಯಗಳಿಂದ ತೀರ್ಥಂಕರರಾಗುವ ಎಲ್ಲಾ ಯೋಗ್ಯತೆ ಹಾಗೂ ಮಾನ್ಯತೆ ಹೊಂದಿದ್ದಾರೆ ಎಂದು ಸ್ವಾಮೀಜಿ ಬಣ್ಣಿಸಿದರು. ಧರ್ಮಸ್ಥಳಕ್ಕೆ ಬಂದಾಗ ತವರು ಮನೆಗೆ ಬಂದ ಅನುಭವ ತಮಗಾಗಿದೆ. ಹೆಗ್ಗಡೆಯವರು ಮತ್ತು ಕುಟುಂಬದವರ ಸೇವಾವೈಖರಿ ಶ್ಲಾಘಿಸಿ ಅಭಿನಂದಿಸಿದರು. ತಮ್ಮ ಪೂರ್ವಾಶ್ರಮದಲ್ಲಿ ಸಿದ್ಧವನ ಗುರುಕುಲದಲ್ಲಿ ವಿದ್ಯೆಯೊಂದಿಗೆ ತಮಗೆ ದೊರೆತ ಸಂಸ್ಕಾರ, ಶಿಸ್ತು ಮತ್ತು ಮಾರ್ಗದರ್ಶನದಿಂದ ತಮ್ಮ ಇಂದಿನ ಸ್ಥಾನಕ್ಕೆ ಶೋಭೆ ತಂದಿದೆ ಎಂದರು. ಸಿದ್ಧವನ ಗುರುಕುಲದಲ್ಲಿ ತಮ್ಮ ಮುತ್ತಜ್ಜ ನೇಮಿಸಾಗರವರ್ಣೀಜಿಯವರ ಸ್ಮಾರಕವನ್ನು ನಿರ್ಮಿಸಬೇಕೆಂದು ಸ್ವಾಮೀಜಿ ಹೆಗ್ಗಡೆಯವರಿಗೆ ಸಲಹೆ ನೀಡಿದರು. ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಉಪಸ್ಥಿತರಿದ್ದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಪಂಚನಮಸ್ಕಾರ ಮಂತ್ರ ಪಠಣದಿಂದ ಅಪಾರ ಶಕ್ತಿ ದೊರಕಿ ನಮಗೆ ಪುಣ್ಯ ಸಂಚಯವಾಗುತ್ತದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಕೂಡಾ ಪಂಚನಮಸ್ಕಾರ ಮಂತ್ರ ಪಠಣದ ಬಗ್ಗೆ ವಿಶೇಷ ಉಪನ್ಯಾಸ ನೀಡಿರುವುದನ್ನು ಅವರು ಧನ್ಯತೆಯಿಂದ ಸ್ಮರಿಸಿದರು. ಉಭಯ ಸ್ವಾಮೀಜಿಯವರ ಪಾದಪೂಜೆ ಮಾಡಿ, ಧರ್ಮಸ್ಥಳದ ವತಿಯಿಂದ ಗೌರವಿಸಲಾಯಿತು. ಹೇಮಾವತಿ ವೀ. ಹೆಗ್ಗಡೆಯವರು, ಶ್ರದ್ಧಾಅಮಿತ್, ಡಿ. ಹರ್ಷೇಂದ್ರ ಕುಮಾರ್, ಶ್ರುತಾಜಿತೇಶ್, ಸೋನಿಯಾವರ್ಮ ಉಪಸ್ಥಿತರಿದ್ದರು. ಪ್ರಥಮ ಬಾರಿ ಧರ್ಮಸ್ಥಳ ಪುರಪ್ರವೇಶ ಮಾಡಿದ ಶ್ರವಣಬೆಳಗೊಳದ ಪೂಜ್ಯ ಸ್ವಾಮೀಜಿಯವರನ್ನು ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು. ಉಪನ್ಯಾಸಕ ಮಹಾವೀರ ಜೈನ್ ಇಚಿಲಂಪಾಡಿ ಕಾರ್ಯಕ್ರಮ ನಿರ್ವಹಿಸಿದರು. ಶ್ರವಣಬೆಳಗೊಳದ ಸ್ವಾಮೀಜಿಯವರು ಸಿದ್ಧವನ ಗುರುಕುಲಕ್ಕೂ ಭೇಟಿ ನೀಡಿದರು.

ಮಂಗಳೂರು: ರಾಜೇಶ್ ಎಮ್.ರವರು ಅಧ್ಯಕ್ಷರಾಗಿ ಆಯ್ಕೆ

Article Image

ಮಂಗಳೂರು: ರಾಜೇಶ್ ಎಮ್.ರವರು ಅಧ್ಯಕ್ಷರಾಗಿ ಆಯ್ಕೆ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ನ್ಯಾಯಾಂಗ ಇಲಾಖಾ ಅಧಿಕಾರಿಗಳ ಸಹಕಾರ ಸಂಘದ ಅಧ್ಯಕ್ಷರಾಗಿ ಸತತವಾಗಿ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದ ರಾಜೇಶ್ ಎಮ್.ರವರು ಪ್ರಸ್ತುತ ಮಂಗಳೂರು ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಮುಖ್ಯ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಾರ್ಷಿಕೋತ್ಸವ ಸಮಾರಂಭ

Article Image

ವಾರ್ಷಿಕೋತ್ಸವ ಸಮಾರಂಭ

ಧರ್ಮಸ್ಥಳದಲ್ಲಿರುವ ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿಯಲ್ಲಿ ವಾರ್ಷಿಕೋತ್ಸವ ಸಮಾರಂಭವು ಮೇ. 10, 11 ಮತ್ತು 12ರಂದು ನಡೆಯಲಿದೆ. ಮೇ, 10 : ಶನಿವಾರ: ಬೆಳಿಗ್ಗೆ ಗಂಟೆ 8.45ಕ್ಕೆ ತೋರಣಮುಹೂರ್ತ, ವಿಮಾನಶುದ್ಧಿ, ಮುಖವಸ್ತ್ರ ಉದ್ಘಾಟನೆ, ನವಕಲಶ ಅಭಿಷೇಕ. ಸಂಜೆ ಗಂಟೆ 4 ರಿಂದ ನಾಂದಿಮಂಗಲ, ಪೂಜಾವಿಧಾನ, ಮಹಾಮಂಗಳಾರತಿ ಮೇ, 11 : ಭಾನುವಾರ : ಬೆಳಿಗ್ಗೆ ಗಂಟೆ 8.30 ರಿಂದ ವಾಸ್ತುಪೂಜಾ ವಿಧಾನ, ಋಷಿಮಂಡಲ ಯಂತ್ರಾರಾಧನೆ, 16 ಕಲಶಾಭಿಷೇಕ. ಸಂಜೆ ಗಂಟೆ 4 ರಿಂದ ನವಗ್ರಹ ಮಹಾಶಾಂತಿ, ಗ್ರಾಮ ಬಲಿವಿಧಾನ, ಮಹಾಮಂಗಳಾರತಿ ಮೇ, 12: ಸೋಮವಾರ: ಬೆಳಿಗ್ಗೆ ಗಂಟೆ 9 ರಿಂದ ಕಲಿಕುಂಡ ಯಂತ್ರಾರಾಧನೆ ಸಂಜೆ ಗಂಟೆ 5.30ರಿಂದ ಭವ್ಯ ಅಗ್ರೋದಕ ಮೆರವಣಿಗೆ, 108 ಕಲಶ ಮಹಾಭಿಷೇಕ, ಮಹೋತ್ಸವ, ಮಹಾಮಂಗಳಾರತಿ

ಬಳ್ಳಮಂಜ: ಬಸದಿಯಲ್ಲಿ ವಾರ್ಷಿಕೋತ್ಸವ, ವಿಶೇಷ ಪೂಜೆ

Article Image

ಬಳ್ಳಮಂಜ: ಬಸದಿಯಲ್ಲಿ ವಾರ್ಷಿಕೋತ್ಸವ, ವಿಶೇಷ ಪೂಜೆ

ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ಬಳ್ಳಮಂಜ ಗ್ರಾಮದಲ್ಲಿರುವ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯ ಜೀರ್ಣೋದ್ಧಾರ ಪ್ರತಿಷ್ಠಾ ಮಹೋತ್ಸವದ 39ನೆ ವಾರ್ಷಿಕೋತ್ಸವದ ಅಂಗವಾಗಿ ಮೇ. 3ರಂದು ಶನಿವಾರ ಬೆಳಿಗ್ಗೆಯಿಂದ ಭಗವಾನ್ ಪಾರ್ಶ್ವನಾಥ ಸ್ವಾಮಿಗೆ 24 ಕಲಶಾಭಿಷೇಕ, ಅಷ್ಟವಿಧಾರ್ಚನೆ ಪೂಜೆ, ಜಿನಭಜನೆ, ಮಹಾಪೂಜೆ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ನಿವೃತ್ತ ಪ್ರಾಂಶುಪಾಲ ಕೆ. ರಾಜವೀರ ಇಂದ್ರ ತಿಳಿಸಿದ್ದಾರೆ. ಅಳಿಯೂರು ಆದಿರಾಜ ಜೈನ್ ನೇತೃತ್ವದಲ್ಲಿ ಸಂಗೀತ ಮತ್ತು ಭಜನೆಯೊಂದಿಗೆ ಶ್ರಾವಕರು ಮತ್ತು ಶ್ರಾವಕಿಯರಿಂದ ಹನ್ನೆರಡು ವೃತಗಳ ಪೂಜೆ ನಡೆಯಲಿದೆ. ಧಾರ್ಮಿಕ ಸಭೆ: ಭಾರತೀಯ ಜೈನ್ ಮಿಲನ್, ಮಂಗಳೂರು ವಲಯದ ಉಪಾಧ್ಯಕ್ಷ ಸುದರ್ಶನ್ ಜೈನ್ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ನಾರಾವಿ ಅಜಿತ್ ಕುಮಾರ್ ಜೈನ್ ಧಾರ್ಮಿಕ ಉಪಾನ್ಯಾಸ ನೀಡುವರು.

ಮಹಾವೀರ ಜನ್ಮ ಕಲ್ಯಾಣೋತ್ಸವ

Article Image

ಮಹಾವೀರ ಜನ್ಮ ಕಲ್ಯಾಣೋತ್ಸವ

ಧರ್ಮಸ್ಥಳ, ಏಪ್ರಿಲ್ 10: ಇಂದು ಮಹಾವೀರ ಜಯಂತಿಯ ಶುಭ ಸಂದರ್ಭದಲ್ಲಿ, ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಧರ್ಮಸ್ಥಳದ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಮಹಾವೀರ ಜನ್ಮ ಕಲ್ಯಾಣೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ಭವ್ಯ ಮೆರವಣಿಗೆಯೊಂದಿಗೆ ಆರಂಭಗೊಂಡ ಈ ಧಾರ್ಮಿಕ ಕಾರ್ಯಕ್ರಮದಲ್ಲಿ, ತೀರ್ಥಂಕರರಿಗೆ ವಿಶೇಷ ಅಭಿಷೇಕ ಮತ್ತು ಅಷ್ಟವಿಧಾರ್ಚನೆ ಪೂಜೆಗಳನ್ನು ಸಲ್ಲಿಸಲಾಯಿತು. ಬಳಿಕ, ಬಾಲ ತೀರ್ಥಂಕರನಿಗೆ ವೈಭವಯುತವಾದ ನಾಮಕರಣೋತ್ಸವವನ್ನು ಆಚರಿಸಲಾಯಿತು. ಈ ಪವಿತ್ರ ಕಾರ್ಯಕ್ರಮದಲ್ಲಿ ಹೇಮಾವತಿ ವಿ. ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್ ಹಾಗೂ ಸುಪ್ರಿಯಾ ಹರ್ಷೇಂದ್ರ ಕುಮಾರ್ ಅವರು ಉಪಸ್ಥಿತರಿದ್ದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ವಿವಿಧ ಸ್ಪರ್ಧೆಗಳು

Article Image

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ವಿವಿಧ ಸ್ಪರ್ಧೆಗಳು

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಹಾಗೂ ಕರಾವಳಿ ಮತ್ತು ಮಲೆನಾಡಿನ ಜೈನ ಸಮಾಜ ಬಾಂಧವರ ಸಹಕಾರದೊಂದಿಗೆ ಭಗವಾನ್ ಶ್ರೀ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವ ಆಚರಣೆ ಪ್ರಯುಕ್ತ ಸರ್ವಧರ್ಮೀಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಏಪ್ರಿಲ್ 20ರ ಭಾನುವಾರದಂದು ಬೆಳಿಗ್ಗೆ 09.30ರಿಂದ ವಿದ್ಯಾಗಿರಿಯ ಕೃಷಿಸಿರಿ ವೇದಿಕೆಯಲ್ಲಿ ಸ್ಪರ್ಧೆಗಳು ನಡೆಯಲಿವೆ. ಸ್ಪರ್ಧೆಗಳ ವಿವರ: ೧) ಚಿತ್ರಕಲಾ ಸ್ಪರ್ಧೆ: • ಪ್ರಾಥಮಿಕ ಶಾಲಾ ವಿಭಾಗ: ವಿಷಯ: ಸುಂದರ ಪ್ರಕೃತಿ • ಪ್ರೌಢಶಾಲಾ ವಿಭಾಗ: ವಿಷಯ: ರಥೋತ್ಸವ ಸಮಯ: 1 ಗಂಟೆ ೨) ಭಾಷಣ ಸ್ಪರ್ಧೆ (ಕನ್ನಡ) • ಪ್ರೌಢಶಾಲಾ ವಿಭಾಗ: ವಿಷಯ: ಕ್ಷಮೆ ಮತ್ತು ಅಹಿಂಸೆಯ ಮಹತ್ವ • ಪಿಯುಸಿ/ಪದವಿ ವಿಭಾಗ: ವಿಷಯ: ವಿಶ್ವಶಾಂತಿ ಮತ್ತು ಜೈನಧರ್ಮ ಸಮಯ: 4+1 ನಿಮಿಷ ೩) ಭಾಷಣ ಸ್ಪರ್ಧೆ (ಇಂಗ್ಲೀಷ್) • ಪ್ರೌಢಶಾಲಾ ವಿಭಾಗ: ವಿಷಯ: ಕ್ಷಮೆ ಮತ್ತು ಅಹಿಂಸೆಯ ಮಹತ್ವ • ಪಿಯುಸಿ/ಪದವಿ ವಿಭಾಗ: ವಿಷಯ: ಜಾಗತಿಕ ಶಾಂತಿ ಹಾಗೂ ಜೈನಧರ್ಮ ಸಮಯ: 4+1 ನಿಮಿಷ ೪) ಪ್ರಬಂಧ ಸ್ಪರ್ಧೆ (ಕನ್ನಡ) • ಪ್ರೌಢಶಾಲಾ ವಿಭಾಗ: ವಿಷಯ: ಬದುಕಿ ಮತ್ತು ಬದುಕಲು ಬಿಡು ಸಮಯ: 30 ನಿಮಿಷಗಳು • ಪಿಯುಸಿ ಮತ್ತು ಪದವಿ ವಿಭಾಗ: ವಿಷಯ: ಭಾರತೀಯ ಸಂಸ್ಕೃತಿಗೆ-ಜೈನಧರ್ಮದ ಕೊಡುಗೆ ಸಮಯ: 45 ನಿಮಿಷಗಳು ೫) ಪ್ರಬಂಧ ಸ್ಪರ್ಧೆ (ಇಂಗ್ಲೀಷ್) • ಪ್ರೌಢಶಾಲಾ ವಿಭಾಗ: ವಿಷಯ: ಬದುಕಿ ಹಾಗೂ ಬದುಕಲು ಬಿಡಿ ಸಮಯ: 30 ನಿಮಿಷಗಳು • ಪಿಯುಸಿ ಮತ್ತು ಪದವಿ ವಿಭಾಗ: ವಿಷಯ: ಭಾರತೀಯ ಸಂಸ್ಕೃತಿಗೆ ಜೈನ ಧರ್ಮದ ಕೊಡುಗೆ ಸಮಯ: 45 ನಿಮಿಷಗಳು ಸ್ಪರ್ಧೆಗಳಲ್ಲಿ ಎಲ್ಲರಿಗೂ ಭಾಗವಹಿಸಲು ಮುಕ್ತ ಅವಕಾಶವಿದ್ದು, ಪ್ರತಿಯೊಂದು ವಿಭಾಗದ ಸ್ಪರ್ಧೆಗೂ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳಿರುತ್ತವೆ. ವಿದ್ಯಾರ್ಥಿಗಳು ಸ್ಪರ್ಧೆಗೆ ಬರುವಾಗ ತಪ್ಪದೇ ಶಾಲೆ ಅಥವಾ ಕಾಲೇಜಿನ ಗುರುತಿನ ಚೀಟಿ ಧರಿಸಿಕೊಂಡು ಬರಬೇಕು. ಒಬ್ಬರು ಒಂದು ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸುವ ಅವಕಾಶವಿದ್ದು, ಸ್ಪರ್ಧೆಯಲ್ಲಿ ಭಾಗವಹಿಸುವವರು ಏಪ್ರಿಲ್15ರ ಒಳಗೆ ತಮ್ಮ ಹೆಸರನ್ನು ಈ ವಾಟ್ಸಾಪ್ ನಂಬರ್ ಮೂಲಕ- 9448625888/ 9480600507 ತಿಳಿಸುವಂತೆ ಕೋರಲಾಗಿದೆ.

ಪ್ರವಕ್ತಾ ಜಿನಭಜನಾ ಕಲಿಕಾ ಕೇಂದ್ರದ ಉದ್ಘಾಟನಾ ಸಮಾರಂಭ

Article Image

ಪ್ರವಕ್ತಾ ಜಿನಭಜನಾ ಕಲಿಕಾ ಕೇಂದ್ರದ ಉದ್ಘಾಟನಾ ಸಮಾರಂಭ

ವೇಣೂರು: ಪ್ರವಕ್ತಾ ಜಿನಭಜನಾ ಕಲಿಕಾ ಕೇಂದ್ರದ ಉದ್ಘಾಟನಾ ಸಮಾರಂಭವು ಯಾತ್ರಿ ನಿವಾಸದಲ್ಲಿ ಮಾ.3೦ರಂದು ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ವೇಣೂರಿನ ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿಯವರಾದ ವಿ. ಪ್ರವೀಣ್‌ ಕುಮಾರ್‌ ಇಂದ್ರರವರು ನೆರವೇರಿಸಿ, ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಬ್ರಾಹ್ಮೀ ಜೈನ ಮಹಿಳಾ ಸಂಘದ ಸ್ಥಾಪಕಾಧ್ಯಕ್ಷರಾದ ಪ್ರಸನ್ನ ಆರ್.ಹೆಗ್ಡೆ , ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ದ.ಕ. ಜಿಲ್ಲಾ ವಿಭಾಗದ ನಿರ್ದೇಶಕಿ ಮತ್ತು ಬ್ರಾಹ್ಮೀ ಜೈನ ಮಹಿಳಾ ಸಂಘದ ಅಧ್ಯಕ್ಷರು ಆದ ಸರೋಜಾ ಗುಣಪಾಲ್‌ ಜೈನ್‌ ಅಗಮಿಸಿ, ಶುಭ ಹಾರೈಸಿದರು. ಸಂಗೀತಾ ಶಿಕ್ಷಕರಾದ ಮೂಡುಬಿದಿರೆಯ ಭಗೀರಥ ಮಣಕೋಣ್‌ ರವರು ಸಂಗೀತ ಕಲಿಕೆಯ ಬಗ್ಗೆ ಮಾಹಿತಿ ನೀಡಿದರು. ನಂತರ ಸುಮಧುರ ಗಾಯನವನ್ನು ಪ್ರಸ್ತುತ ಪಡಿಸಿದರು. ವೇದಿಕೆಯಲ್ಲಿ ಸುನೀತಾ ಎನ್.ಸಿ.ಬಲ್ಲಾಳ್‌ ಉಪಸ್ಥಿತರಿದ್ದರು. ಸುನೀತಾ ಎನ್.ಸಿ. ಬಲ್ಲಾಳ್‌, ಸುಜಯಭರತ್‌, ದೀಪಶ್ರಿ ಪ್ರಾರ್ಥಿಸಿದರು. ಚಂದ್ರಪ್ರಭ‌ ಜೈನ್ ರವರು ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಶ್ರಾವಕ- ಶ್ರಾವಕಿಯರು , ಮಕ್ಕಳು ಭಾಗವಹಿಸಿದ್ದರು. .ಕಾರ್ಯಕ್ರಮವು ಶಾಂತಿ ಮಂತ್ರದೊಂದಿಗೆ ಮುಕ್ತಾಯವಾಯಿತು.

ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಪ್ರಯುಕ್ತ ಬೃಹತ್ ರಕ್ತದಾನ, ಆರೋಗ್ಯ ತಪಾಸಣೆ, ದಂತ ಚಿಕಿತ್ಸೆ ಶಿಬರಗಳು

Article Image

ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಪ್ರಯುಕ್ತ ಬೃಹತ್ ರಕ್ತದಾನ, ಆರೋಗ್ಯ ತಪಾಸಣೆ, ದಂತ ಚಿಕಿತ್ಸೆ ಶಿಬರಗಳು

ಭಗವಾನ್ ಶ್ರೀ 1008 ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವ ಜೈನ್ ಪೇಟೆ ಮೂಡುಬಿದಿರೆ, ಜೈನ್ ಮಿಲನ್, ಶ್ರೀ ಮಹಾವೀರ ಸಂಘ (ರಿ.), ತೌಳವ ಇಂದ್ರ ಸಮಾಜ (ರಿ.), ತ್ರಿಭುವನ್ ಯೂತ್ ಅಸೋಸಿಯೆಶನ್, ರೋಟರಿ ಕ್ಲಬ್ ಟೆಂಪಲ್ ಟೌನ್, ಡಿ.ಜೆ.ಐ.ಐ ಸಂಘ (ನಿ.), ತ್ರಿಭುವನ್ ಹಾಗೂ ಬೆದ್ರ ಅಟೋ ಸ್ಪೋರ್ಟ್ಸ್ ಕ್ಲಬ್ (TASC-BAC), ತ್ರಿಭುವನ್ ಟ್ರಸ್ಟ್ (ರಿ.) ಬಸದಿ ಸ್ವಚ್ಚತಾ ತಂಡ, ಸರ್ವಮಂಗಳಾ ಮಹಿಳಾ ಸಂಘ, ಜೈನ್ ಮೆಡಿಕಲ್ ಸೆಂಟರ್‌ ಅಸ್ಪತ್ರೆ ಮೂಡುಬಿದಿರೆ ಇವರ ಸಹಭಾಗಿತ್ವದಲ್ಲಿ ಭ| ಶ್ರೀ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಪ್ರಯುಕ್ತ ಎ. ಜೆ ಆಸ್ಪತ್ರೆ, ದಂತ ಕಾಲೇಜು, ಬ್ಲಡ್ ಬ್ಯಾಂಕ್, ಮಂಗಳೂರು ಇವರ ನೇತೃತ್ವದಲ್ಲಿ ಬೃಹತ್ ರಕ್ತದಾನ, ಆರೋಗ್ಯ ತಪಾಸಣೆ, ದಂತ ಚಿಕಿತ್ಸೆ ಶಿಬರಗಳು ದಿನಾಂಕ: 10-04-2025 ಗುರುವಾರ, ಬೆಳಗ್ಗೆ ಗಂಟೆ 9.30ರಿಂದ 1.00ರವರೆಗೆ, ಶ್ರೀ ಧವಳಾ ಕಾಲೇಜು, ಜೈನ್ ಪೇಟೆ, ಮೂಡುಬಿದಿರೆಯಲ್ಲಿ ನಡೆಯಲಿದೆ. ವಿಭಾಗಗಳು • ಬಿಪಿ/ ಬ್ಲಡ್ ಶುಗರ್ (BP ECG, BLOOD SUGAR) • ಕಿವಿ, ಮೂಗು, ಗಂಟಲು (ENT) • ಸಾಮಾನ್ಯ ಅರೋಗ್ಯ ವಿಭಾಗ (GRL MEDICINE) • ನೇತ್ರ ಚಿಕಿತ್ಸೆ (Eye) • ಸ್ತ್ರೀ ರೋಗ (OBG) ಎಲುಬು / ಕೀಲು(ARTHO) • ಚರ್ಮ (SKIN) • ದಂತ ಚಿಕಿತ್ಸೆ (DENTAL) ಮಾಹಿತಿಗಾಗಿ ಸಂಪರ್ಕಿಸಿ : ಡಾ| ಮಹಾವೀರ್ ಜೈನ್, ಮೊ: 9008384865 ಯತಿರಾಜ್ ಶೆಟ್ಟ, ಮೊ: 9448625888 ಪ್ರವೀಣ್ ಜೈನ್ ಬೆಳುವಾಯಿ, ಮೊ: 9886474143

ವೇಣೂರು: ಶ್ರೀ ಬಾಹುಬಲಿ ಬೆಟ್ಟದ ವಾರ್ಷಿಕ ರಥಯಾತ್ರಾ ಮಹೋತ್ಸವ ಸಂಪನ್ನ

Article Image

ವೇಣೂರು: ಶ್ರೀ ಬಾಹುಬಲಿ ಬೆಟ್ಟದ ವಾರ್ಷಿಕ ರಥಯಾತ್ರಾ ಮಹೋತ್ಸವ ಸಂಪನ್ನ

ವೇಣೂರು: ರಥೋತ್ಸವದಂತಹ ಪುಣ್ಯ ಕಾರ್ಯ ಗಳಲ್ಲಿ ನಿಷ್ಠೆ ಯಿಂದ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಲ್ಲಿ ಜಿನೇಂದ್ರ ಭಗವಂತರ ಅನುಗ್ರಹ ನಮಗೆ ಪ್ರಾಪ್ತವಾಗುತ್ತದೆ. ಸಮ್ಯಕ್ ಜ್ಞಾನ, ಸಮ್ತಕ್ ದರ್ಶನ ಮತ್ತು ಸಮ್ಯಕ್ ಚಾರಿತ್ರ್ಯದ ಪ್ರತೀಕವೇ ರಥೋತ್ಸವ. ಇದರಿಂದ ಶ್ರಾವಕ-ಶ್ರಾವಕಿಯರಾದ ನಮ್ಮಲ್ಲಿ ಧಾರ್ಮಿಕ ಪ್ರಜ್ಞೆಯು ಜಾಗೃತವಾಗುತ್ತದೆ ಎಂದು ಮೂಡಬಿದ್ರೆ ಶ್ರೀ ಜೈನಮಠದ ಪ. ಪೂ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರು ನುಡಿದರು. ಅವರು ಬಾಹುಬಲಿ ಬೆಟ್ಟದ ವಾರ್ಷಿಕ ರಥಯಾತ್ರಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನವಿತ್ತರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇಣೂರು ಶ್ರೀ ದಿಗಂಬರ ಜೈನ ತೀರ್ಥ ಕ್ಷೇತ್ರ ಸಮಿತಿಯ ಉಪಾಧ್ಯಕ್ಷರಾದ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು ವಹಿಸಿ, ಮಾತನಾಡಿ ಈ ವರ್ಷದಿಂದ ವೇಣೂರು ಯಾತ್ರಿ ನಿವಾಸದಲ್ಲಿ “ಶ್ರುತ ಭಂಡಾರ” ಸ್ವಾಧ್ಯಾಯ ಕೇಂದ್ರ ಪ್ರಾರಂಭಿಸಿದ್ದು, ಶ್ರಾವಕ-ಶ್ರಾವಕಿಯರು ಇದರ ಸದುಪಯೋಗ ಪಡೆದುಕೊಳ್ಳುವಂತೆ ವಿನಂತಿಸಿದರು. ಮುಖ್ಯ ಅತಿಥಿಗಳಾದ ಕರ್ನಾಟಕ ಸರಕಾರದ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮೂಡುಬಿದಿರೆ ಇವರು “ಶ್ರುತ ಭಂಡಾರ” ಸ್ವಾಧ್ಯಾಯ ಕೇಂದ್ರವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಕಳೆದ ಬಾರಿಯ ಮಹಾಮಸ್ತಕಾಭಿಷೇಕದ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ನೆರವೇರಿರುವುದಕ್ಕೆ ಸಮಿತಿಯ ಪದಾಧಿಕಾರಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು ಹಾಗೂ ವೇಣೂರು ತೀರ್ಥಕ್ಷೇತ್ರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹಾಗೂ ಯಾತ್ರಾರ್ಥಿಗಳ ಅನುಕೂಲಕ್ಕೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ಸರಕಾರದ ಅನುದಾನಕ್ಕೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ: ರಥೋತ್ಸವದ ಧಾರ್ಮಿಕ ಸಭೆಯಲ್ಲಿ 90ವರ್ಷ ದಾಟಿದ ಹಿರಿಯ ಶ್ರಾವಕಿ ಗುಣಾವತಿ ಪಿ.ಎ. ಆಳ್ವ ಪಂಜಾಲ್‌ಬೈಲು, ಹಿರಿಯ ಶ್ರಾವಕ ಜಗತ್ಪಾಲ ಮುದ್ಯ ಕತ್ತೋಡಿ ಹಾಗೂ ಹಿರಿಯ ಶ್ರಾವಕಿ ಗುಣಾವತಿ ಅಮ್ಮ ಬರಮೇಲು ಇವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು. ಇತ್ತೀಚೆಗೆ ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ ಪಡೆದ ಮಾಂಡೋವಿ ಮೋಟರ್ಸ್‌ನ ಚೀಫ್ ಜನರಲ್ ಮೇನೆಜರ್ ನೇರೆಂಕಿ ಪಾರ್ಶ್ವನಾಥ ಜೈನ್, ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದ ದ್ವಿಶಾನ್ ಜೈನ್ ಕಂಚ ಇವರನ್ನು ಗೌರವಿಸಲಾಯಿತು. 2024ರ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯ ಪ್ರತಿಭಾವಂತ ಜೈನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರದ ಪ್ರಾಯೋಜಕರುಗಳಾದ ದಿ. ಅಂತಪ್ಪ ಆಳ್ವರು, ಬಡಕೋಡಿ ದಿ. ಆದಿರಾಜ ಶೆಟ್ಟಿ, ಮಾರಗುತ್ತು ದಿ. ವಿಜಯರಾಜ ಅಧಿಕಾರಿ ಕುಟುಂಬಸ್ಥರನ್ನು ಹಾಗೂ ಅಕ್ಷಯ ಕುಮಾರ್ ಕಂಬಳಿ ಉಜಿರೆ ಮೂಡುಬಿದಿರೆಯ ಎಮ್. ವಿ. ಶೆಟ್ಟಿ ಇವರನ್ನು ಗೌರವಿಸಲಾಯಿತು. ಚಾರ್ವಿ ಪ್ರಾರ್ಥಿಸಿ, ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿ, ವಿ. ಪ್ರವೀಣ್ ಕುಮಾರ್ ಇಂದ್ರ ಸ್ವಾಗತಿಸಿದರು. ಸಮಿತಿ ಕೋಶಾಧಿಕಾರಿ ಪಿ. ಜಯರಾಜ್ ಕಂಬಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಿತಿ ಜೊತೆ ಕಾರ್ಯದರ್ಶಿ ಮಹಾವೀರ್ ಜೈನ್ ಮೂಡುಕೋಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ವೇಣೂರು, ಮೂಡುಬಿದಿರೆ, ಪರುಷಗುಡ್ಡೆ ಜಿನಭಜನಾ ತಂಡಗಳಿಂದ ಜಿನಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಉತ್ಸವ, ಶ್ರೀ ಕೊಡಮಣಿತ್ತಾಯ ದೈವದ ನೇಮ, ಬಾಹುಬಲಿ ಸ್ವಾಮಿಗೆ 24 ಕಲಶಗಳಿಂದ ಪಾದಾಭಿಷೇಕ, ದ್ವಜಾವರೋಹಣದೊಂದಿಗೆ ರಥಯಾತ್ರಾ ಮಹೋತ್ಸವ ಸಂಪನ್ನಗೊಂಡಿತು.

ಪೂಜಾ ಕಾರ್ಯಕ್ರಮ

Article Image

ಪೂಜಾ ಕಾರ್ಯಕ್ರಮ

ಮೂಡುಬಿದಿರೆ: ದರೆಗುಡ್ಡೆಯಲ್ಲಿರುವ ಶ್ರೀ 1008 ಅನಂತನಾಥ ಸ್ವಾಮಿ ಬಸದಿಯಲ್ಲಿ ಬೆಳಗ್ಗೆ ಗಂಟೆ 9ರಿಂದ ಶ್ರೀ 1008 ಅನಂತನಾಥ ಸ್ವಾಮಿಗೆ ಕ್ಷೀರಾಭಿಷೇಕ, ಅಷ್ಟಮ ನಂದೀಶ್ವರದ 52 ಜಿನಬಿಂಬಗಳಿಗೆ 54 ಕಲಶಗಳಿಂದ ಮಹಾಭಿಷೇಕವು ಮೂಡುಬಿದಿರೆ ಶ್ರಿ ಜೈನ ಮಠದ ಪ. ಪೂ. ಭಾರತಭೂಷಣ ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ, ನೇತೃತ್ವ ಮತ್ತು ಆ‌ಶೀರ್ವಚನದೊಂದಿಗೆ ಮಾ. 22ರಂದು ನೆರವೇರಲಿರುವುದು.

24 ತೀರ್ಥಂಕರರ ರತ್ನದ ಜಿನಬಿಂಬಗಳಿಗೆ ಕ್ಷೀರ ಅಭಿಷೇಕ ಹಾಗೂ ಮಹಾಪೂಜೆ

Article Image

24 ತೀರ್ಥಂಕರರ ರತ್ನದ ಜಿನಬಿಂಬಗಳಿಗೆ ಕ್ಷೀರ ಅಭಿಷೇಕ ಹಾಗೂ ಮಹಾಪೂಜೆ

ವೇಣೂರು ಭಗವಾನ್ ಶ್ರೀ ಬಾಹುಬಲಿ ಬೆಟ್ಟದ ಬಲ ಭಾಗದಲ್ಲಿರುವ ಬಿನ್ನಾಣಿ ಬಸದಿ ಭ| ಶ್ರೀ ಚಂದ್ರನಾಥ ಸ್ವಾಮಿ ಸನ್ನಿಧಿಯ ಗಂಧಕುಟಿಗೆ, ಎಡ ಭಾಗದಲ್ಲಿರುವ ಅಕ್ಕಂಗಳ ಬಸದಿ ಭ| ಶ್ರೀ ಶಾಂತಿನಾಥ ಸ್ವಾಮಿ ಸನ್ನಿಧಿಯ ಗಂಧಕುಟಿಗೆ ಪರಮಪೂಜ್ಯ ಮುನಿಶ್ರೀ ೧೦೮ ಶ್ರೀ ಆದಿತ್ಯ ಸಾಗರ ಮುನಿ ಮಹಾರಾಜರ ಮಾರ್ಗದರ್ಶನದಲ್ಲಿ ದಾನವಾಗಿ ನೀಡಿದ 24 ತೀರ್ಥಂಕರರ ರತ್ನದ ಜಿನಬಿಂಬಗಳಿಗೆ ಭ| ಶ್ರೀ ಬಾಹುಬಲಿ ಬೆಟ್ಟದ ವಾರ್ಷಿಕ ರಥಯಾತ್ರಾ ಮಹೋತ್ಸವದ ಶುಭ ಸಂದರ್ಭದಲ್ಲಿ ನಾಳೆ (ಮಾ. 14) ಬೆಳಿಗ್ಗೆ 9.00 ಗಂಟೆಗೆ ಕ್ಷೀರ ಅಭಿಷೇಕ ಹಾಗೂ ಮಹಾಪೂಜೆ ನೆರವೇರಲಿರುವುದು.

ವಾರ್ಷಿಕ ರಥಯಾತ್ರ ಮಹೋತ್ಸವದ ಇಂದಿನ ಕಾರ್ಯಕ್ರಮ

Article Image

ವಾರ್ಷಿಕ ರಥಯಾತ್ರ ಮಹೋತ್ಸವದ ಇಂದಿನ ಕಾರ್ಯಕ್ರಮ

ವೇಣೂರು: ಶ್ರೀ ಬಾಹುಬಲಿ ಬೆಟ್ಟದ ವಾರ್ಷಿಕ ರಥಯಾತ್ರ ಮಹೋತ್ಸವವು ದಿನಾಂಕ 14.03.2025ನೇ ಶುಕ್ರವಾರ ಜರುಗಲಿರುವುದು. ಅದರ ಪೂರ್ವಭಾವಿಯಾಗಿ ಇಂದು ಬೆಳಿಗ್ಗೆ ಗಂಟೆ 10:00ಕ್ಕೆ ಬೆಟ್ಟದ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಸನ್ನಿಧಿಯಲ್ಲಿ ಶ್ರೀ ಶಾಂತಿಚಕ್ರ ಆರಾಧನೆ ನೆರವೇರಲಿದೆ. ಇಂದು ಸಾಯಂಕಾಲ ಗಂಟೆ 6:30 ರಿಂದ ರಥಯಾತ್ರ ಮಹೋತ್ಸವದ ಪ್ರಯುಕ್ತ ಶ್ರೀ ರಕ್ಷಾ ಯಂತ್ರಾರಾಧನೆ, ಶ್ರೀ ಬಲಿಪೂಜೆ, ವಸಂತಕಟ್ಟೆ ಪೂಜೆ, ಶ್ರೀ ವಿಹಾರ, ಶ್ರೀ ದೇವರ ಉತ್ಸವ ಹಾಗೂ ಶ್ರೀ ಬಾಹುಬಲಿ ಸ್ವಾಮಿಗೆ ಪಾದಾಭಿಷೇಕ ಜರಗಲಿರುವುದು.

ಶಿಶಿಲ ವಾರ್ಷಿಕೋತ್ಸವ

Article Image

ಶಿಶಿಲ ವಾರ್ಷಿಕೋತ್ಸವ

ಬೆಳ್ತಂಗಡಿ: ತಾಲೂಕಿನ, ಶಿಶಿಲ, ಶ್ರೀ ಕ್ಷೇತ್ರ ಚಂದ್ರಪುರದಲ್ಲಿರುವ ಭ| ಶ್ರೀ ೧೦೦೮ ಚಂದ್ರನಾಥ ಸ್ವಾಮಿ ಜಿನಮಂದಿರದ ವಾರ್ಷಿಕೋತ್ಸವವು ಕಾರ್ಕಳ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಮಾ. 11ರಂದು ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ. ಪೂಜಾ ಕಾರ್ಯಕ್ರಮಗಳು: ತಾ. 11-03-2025ನೇ ಮಂಗಳವಾರ ಬೆಳಿಗ್ಗೆ 7.45ರ ಶುಭ ಲಗ್ನದಲ್ಲಿ ತೋರಣ ಮುಹೂರ್ತ ನಂತರ ವಿಮಾನ ಶುದ್ಧಿ ಪ್ರಾರಂಭ, ಬೆಳಿಗ್ಗೆ 9.19ರ ಶುಭ ಲಗ್ನದಲ್ಲಿ ಮುಖವಸ್ತ್ರ ಉದ್ಘಾಟನೆ, ಬೆಳಿಗ್ಗೆ 9.30ರಿಂದ ಶಾಂತಿ ಚಕ್ರ ಆರಾಧನೆ ಮತ್ತು ಪದ್ಮಾವತಿ ಆರಾಧನೆ, ಮಧ್ಯಾಹ್ನ 12ರಿಂದ 24 ಕಲಶ ಅಭಿಷೇಕ ಮಹೋತ್ಸವ, ಮಧ್ಯಾಹ್ನ 1ಕ್ಕೆ ಮಹಾಪೂಜೆ, ಪಾದಪೂಜೆ, ಶ್ರೀ ಜಿನಗಂಧೋದಕ ವಿತರಣೆ. ವಿ.ಸೂ.: ಪೂಜ್ಯ ಸ್ವಾಮೀಜಿಯವರಿಂದ ಶ್ರೀಕ್ಷೇತ್ರ ಚಂದ್ರಪುರ-ಶಿಶಿಲದ ಸ್ಥಳ ಪರಿಚಯ ಪುಸ್ತಕ ಬಿಡುಗಡೆ

ವೇಣೂರು: ವಾರ್ಷಿಕ ರಥಯಾತ್ರಾ ಮಹೋತ್ಸವ

Article Image

ವೇಣೂರು: ವಾರ್ಷಿಕ ರಥಯಾತ್ರಾ ಮಹೋತ್ಸವ

ವೇಣೂರು: ದಿನಾಂಕ 14.03.2025ನೇ ಶುಕ್ರವಾರ ಶ್ರೀ ಬಾಹುಬಲಿ ಬೆಟ್ಟದ ವಾರ್ಷಿಕ ರಥಯಾತ್ರಾ ಮಹೋತ್ಸವವು ಜರಗಲಿರುವುದು ಅದರ ಪೂರ್ವಭಾವಿಯಾಗಿ ದಿನಾಂಕ 11.03.2025ನೇ ಮಂಗಳವಾರ (ಇಂದು) ಸಾಯಂಕಾಲ ಗಂಟೆ 6.00ಕ್ಕೆ ತೋರಣ ಮುಹೂರ್ತ, ವಿಮಾನ ಶುದ್ಧಿ, ದ್ವಜಾರೋಹಣ, ಪಾದಾಭಿಷೇಕ ಜರಗಲಿರುವುದು. ವಿ.ಸೂ.: ದಿನಾಂಕ 13.03.2025ನೇ ಗುರುವಾರ ರಾತ್ರಿ ಗಂಟೆ 7.00ರಿಂದ ಶ್ರೀ ದೇವರ ಶ್ರೀ ವಿಹಾರ ನೆರವೇರಲಿದೆ.

ಬೆಂಗಳೂರು : ಜಿನಸಮ್ಮಿಲನ ಸೀಸನ್‌ -09 ಥ್ರೋ ಬಾಲ್‌ ಪಂದ್ಯಾಟ

Article Image

ಬೆಂಗಳೂರು : ಜಿನಸಮ್ಮಿಲನ ಸೀಸನ್‌ -09 ಥ್ರೋ ಬಾಲ್‌ ಪಂದ್ಯಾಟ

ಬೆಂಗಳೂರಿನ ಸುಹಾಸ್ತಿ ಜೈನ್‌ ಮಿಲನ್‌ನ ಪ್ರತಿಷ್ಠಿತ ಹೆಮ್ಮೆಯ ಕಾರ್ಯಕ್ರಮ ಜಿನಸಮ್ಮಿಲನ-2025 ಸೀಸನ್-09‌ ಪ್ರತಿವರ್ಷದಂತೆ ಈ ವರ್ಷವೂ ಹಲವು ಕ್ರೀಡೆ ಹಾಗೂ ಇನ್ನಿತರ ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮಕ್ಕೆ ನೋಂದಾಯಿಸಿಕೊಳ್ಳಲು ಲಿಂಕ್: https://forms.gle/SkmFayT6oLUS1iso6 ಏ. 06ರಂದು ಥ್ರೋ ಬಾಲ್‌ ಪಂದ್ಯಾಟವನ್ನು ಹಮ್ಮಿಕೊಳ್ಳಲಾಗಿದೆ. ತಂಡದ ದಾಖಲಾತಿ ಮತ್ತು ಕ್ರೀಡಾ ನಿಯಮಗಳು * ಪ್ರತಿ ತಂಡದಲ್ಲಿ ಏಳು ಜನ ಆಟಗಾರರನ್ನು ಮತ್ತು ಮೂರು ಜನ ಬದಅ ಆಟಗಾರರನ್ನು ಹೊಂದಿರಬೇಕು. * ತಂಡವನ್ನು ದಿನಾಂಕ 30 ಮಾರ್ಚ್ 2025 ರ ಒಳಗೆ ನೋಂದಣಿ ಮಾಡಿಕೊಳ್ಳಬೇಕು. * ಒಂದು ತಂಡಕ್ಕೆ ಪ್ರವೇಶ ಶುಲ್ಕ 1000/- ರೂ ಅಗಿರುತ್ತದೆ. * ಒಬ್ಬ ಆಟಗಾರರಿಗೆ ಒಂದು ತಂಡದಲ್ಲಿ ಮಾತ್ರ ಅಡಲು ಅವಕಾಶವಿರುತ್ತದೆ. * ವಿಜೇತ ತಂಡಗಳಿಗೆ ವಿಶೇಷ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ಏರುತ್ತದೆ. * ನಿರ್ಣಾಯಕರ ಮತ್ತು ಆಯೋಜಕರ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ. ಸ್ಥಳ : ಸೇರೆಂಟ್ಸ್ ಅಸೋಸಿಯೇಷನ್ ಕಾಲೇಜು ರಾಜಾಜನಗರ, ಬೆಂಗಳೂರು, ಸಂಯೋಜಕರು: ಅರ್ಹನ್ ಜೈನ್, ತನುಜ ಜೈನ್, ಕವಿತ ಮಂಜಯ್ಯ ಜೈನ್, ವೃಷಭ್ ಜೈನ್ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: 9481252358, 9036109108

ಅತ್ರಿಜಾಲು ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಾನದಲ್ಲಿ ವರ್ಷಂಪ್ರತಿ ಜರಗುವ ಆಯನ ಮತ್ತು ಸಿರಿಗಳ ಜಾತ್ರೆ

Article Image

ಅತ್ರಿಜಾಲು ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಾನದಲ್ಲಿ ವರ್ಷಂಪ್ರತಿ ಜರಗುವ ಆಯನ ಮತ್ತು ಸಿರಿಗಳ ಜಾತ್ರೆ

ಬೆಳ್ತಂಗಡಿ ತಾಲೂಕಿನ ಕೊಕ್ರಾಡಿಯ ಅತ್ರಿಜಾಲು ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಾನದಲ್ಲಿ ವರ್ಷಂಪ್ರತಿ ಜರಗುವ ಆಯನ ಮತ್ತು ಸಿರಿಗಳ ಜಾತ್ರೆಯು ಇಂದಿನಿಂದ ಪ್ರಾರಂಭಗೊಂಡು ದಿನಾಂಕ 13-03-2025ನೇ ಗುರುವಾರದವರೆಗೆ ಜರಗಲಿರುವುದು. ದಿನಾಂಕ 13-03-2025ನೇ ಗುರುವಾರ ರಾತ್ರಿ ಗಂಟೆ 9.00ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಅತ್ರಿಜಾಲು ಶ್ರೀ ಮಹಾಲಿಂಗೇಶ್ವರ ಸಂಚಾರಿ ಚಿಕ್ಕಮೇಳದ ಸಹಯೋಗದೊಂದಿಗೆ ಊರ-ಪರವೂರ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ "ಕದಂಬ ಕೌಶಿಕ" ಎಂಬ ಕನ್ನಡ ಯಕ್ಷಗಾನ ಬಯಲಾಟ ಜರಗಲಿದೆ.

ವೇಣೂರು: ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿ ಬೆಟ್ಟದ ವಾರ್ಷಿಕ ರಥಯಾತ್ರಾ ಮಹೋತ್ಸವ

Article Image

ವೇಣೂರು: ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿ ಬೆಟ್ಟದ ವಾರ್ಷಿಕ ರಥಯಾತ್ರಾ ಮಹೋತ್ಸವ

ವೇಣೂರು: ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿ ಬೆಟ್ಟದ ವಾರ್ಷಿಕ ರಥಯಾತ್ರಾ ಮಹೋತ್ಸವವು ದಿನಾಂಕ 11-03-2025 ಮಂಗಳವಾರದಿಂದ ಮೊದಲ್ಗೊಂಡು 15-03-2025ರ ಶನಿವಾರದವರೆಗೆ ಜರುಗಲಿದೆ. ದಿನಾಂಕ 14-03-2025ರ ಶುಕ್ರವಾರ ರಾತ್ರಿ ಗಂಟೆ 7-00ರಿಂದ ಭಗವಾನ್‌ ಶ್ರೀ ೧೦೦೮ ಬಾಹುಬಲಿ ಸ್ವಾಮಿ ಸನ್ನಿಧಿಯಲ್ಲಿ ರಥಯಾತ್ರಾ ಮಹೋತ್ಸವವು ಮೂಡುಬಿದಿರೆ ಶ್ರೀ ಜೈನ ಮಠದ ಪ. ಪೂ. ಭಾರತಭೂಷಣ ಡಾ| ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯದಲ್ಲಿ ಜರಗಲಿರುವುದು. ರಾತ್ರಿ ಗಂಟೆ 7-30ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ: ಆಶೀರ್ವಚನ: ಪ. ಪೂ. ಭಾರತಭೂಷಣ ಡಾ| ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಶ್ರೀ ಜೈನ ಮಠ ಮೂಡುಬಿದಿರೆ ಅಧ್ಯಕ್ಷತೆ: ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್‌ ಅಜಿಲರು ಅಳದಂಗಡಿ ಅರಮನೆ, ಉಪಾಧ್ಯಕ್ಷರು, ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ, ವೇಣೂರು ಮುಖ್ಯ ಅತಿಥಿಗಳು: ಕೆ. ಅಭಯಚಂದ್ರ ಜೈನ್‌, ಮಾಜಿ ಸಚಿವರು, ಕರ್ನಾಟಕ ಸರಕಾರ ಪ್ರತಿಭಾ ಪುರಸ್ಕಾರ: 2024ರ ಎಸ್.ಎಸ್.‌ಎಲ್‌.ಸಿ. ಮತ್ತು ಪಿ.ಯು.ಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಅಭಿನಂದನೆ: 90 ವರ್ಷ ದಾಟಿದ ಹಿರಿಯ ಶ್ರಾವಕ/ಶ್ರಾವಕಿಯರಿಗೆ. ಯಾತ್ರಿ ನಿವಾಸದಲ್ಲಿ ನೂತನ ಶ್ರುತ ಭಂಡಾರ (ಸ್ವಾಧ್ಯಾಯ ಕೇಂದ್ರ) ಉದ್ಘಾಟನಾ ಸಮಾರಂಭ: ಸಂಜೆ ಗಂಟೆ 6-00ಕ್ಕೆ ಪಾವನ ಸಾನ್ನಿಧ್ಯ: ಪ. ಪೂ. ಭಾರತಭೂಷಣ ಡಾ| ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಶ್ರೀ ಜೈನ ಮಠ ಮೂಡುಬಿದಿರೆ ಉಪಸ್ಥಿತಿ: ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್‌ ಅಜಿಲರು ಅಳದಂಗಡಿ ಅರಮನೆ ಉದ್ಘಾಟನೆ: ಕೆ. ಅಭಯಚಂದ್ರ ಜೈನ್‌, ಮಾಜಿ ಸಚಿವರು, ಕರ್ನಾಟಕ ಸರಕಾರ

ವೇಣೂರು: ಬಾಹುಬಲಿ ಬೆಟ್ಟದ ರಥೋತ್ಸವದಂದು ವಿದ್ಯಾರ್ಥಿವೇತನ

Article Image

ವೇಣೂರು: ಬಾಹುಬಲಿ ಬೆಟ್ಟದ ರಥೋತ್ಸವದಂದು ವಿದ್ಯಾರ್ಥಿವೇತನ

ವೇಣೂರು: ಬೆಳ್ತಂಗಡಿ ತಾಲೂಕು, ವೇಣೂರು ಭ| ಶ್ರೀ ಬಾಹುಬಲಿ ಬೆಟ್ಟದ ವಾರ್ಷಿಕ ರಥಯಾತ್ರಾ ಮಹೋತ್ಸವವು ಮಾ.14ರಂದು ಜರಗಲಿರುವುದು. ಅಂದು ರಾತ್ರಿ 7.30ರಿಂದ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ.ಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಜೈನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ, ದಿ| ಡಾ| ಪಿ. ಅಂತಪ್ಪ ಆಳ್ವ ರವರ ಸ್ಮರಣಾರ್ಥ ಪತ್ನಿ ಮತ್ತು ಮಕ್ಕಳು ಪಂಜಾಲಬೈಲು ವೇಣೂರು ಹಾಗೂ ಬಡಕೋಡಿ ಹೊಸಮನೆ ದಿ| ಪಿ. ಆದಿರಾಜ ಶೆಟ್ಟಿ ಹಾಗೂ ಶ್ರೀಮತಿ ದಿ| ಶಾರದಾದೇವಿಯವರ ಸ್ಮರಣಾರ್ಥ ಮಕ್ಕಳಿಂದ ಹಾಗೂ ಮಾರಗುತ್ತು ದಿ|ವಿಜಯರಾಜ ಅಧಿಕಾರಿಯವರ ಸ್ಮರಣಾರ್ಥ ಪತ್ನಿ ರಾಜೇಶ್ವರಿ ವಿ.ಅಧಿಕಾರಿ ಹಾಗೂ ಶ್ರೀ ಅಕ್ಷಯ ಕುಮಾರ್ ಕಂಬಳಿ ಮತ್ತು ಮಕ್ಕಳು ಜಿನಪದ ಬೆಳಾಲುರಸ್ತೆ ಉಜಿರೆ ಇವರಿಂದ ವಿದ್ಯಾರ್ಥಿ ವೇತನ ನೀಡಲಾಗುವುದು. ಅರ್ಹ ಪ್ರತಿಭಾವಂತ ಜೈನ ವಿದ್ಯಾರ್ಥಿಗಳು 2024ನೇ ಸಾಲಿನ ಪಿ.ಯು.ಸಿ. ಹಾಗೂ ಎಸ್.ಎಸ್.ಎಲ್.ಸಿ. ಅಂಕಪಟ್ಟಿಯ ಜೆರಾಕ್ಸ್‌ ನೊಂದಿಗೆ ಅರ್ಜಿಯನ್ನು ಕಾರ್ಯದರ್ಶಿ ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ಯಾತ್ರಿ ನಿವಾಸ ಶ್ರೀ ಮಹಾವೀರ ನಗರ ವೇಣೂರು-574242 ಇವರಿಗೆ ಕಳುಹಿಸಿಕೊಡುವಂತೆ ವಿನಂತಿಸಲಾಗಿದೆ. ಅರ್ಜಿದಾರರು ಸರಿಯಾದ ವಿಳಾಸ ಹಾಗೂ ಮೊಬೈಲ್ ನಂಬರ್ ನಮೂದಿಸಬೇಕು. ಮಾರ್ಚ್ 10 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಕಛೇರಿ ಮೊಬೈಲ್ ನಂ: 9606356288

ಸವಣಾಲು: ಧಾಮ ಸಂಪ್ರೋಕ್ಷಣ ವೈಭವ

Article Image

ಸವಣಾಲು: ಧಾಮ ಸಂಪ್ರೋಕ್ಷಣ ವೈಭವ

ಉಜಿರೆ: ಆಧ್ಯಾತ್ಮವೇ ಭಾರತದ ಆತ್ಮವಾಗಿದ್ದು ಪರಿಶುದ್ಧ ಶ್ರದ್ಧಾ-ಭಕ್ತಿಯಿಂದ ದೇವರ ಸೇವೆ ಮಾಡಿದಾಗ ಸರ್ವಶಕ್ತನಾದ ಭಗವಂತನು ನಮ್ಮ ಎಲ್ಲಾ ಕಷ್ಟಗಳನ್ನು ಪರಿಹರಿಸುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಹೇಳಿದರು. ಅವರು ಬೆಳ್ತಂಗಡಿ ತಾಲ್ಲೂಕಿನ ಸವಣಾಲು ಗ್ರಾಮದಲ್ಲಿರುವ ಭಗವಾನ್ ಆದಿನಾಥಸ್ವಾಮಿ ಬಸದಿಯಲ್ಲಿ ಭಾನುವಾರ ಧಾಮ ಸಂಪ್ರೋಕ್ಷಣ ಸಂದರ್ಭದಲ್ಲಿ ಆಯೋಜಿಸಿದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಎಲ್ಲರಲ್ಲಿಯೂ ದೇವರನ್ನು ಕಂಡು ಗೌರವಿಸುವ ಸಂಸ್ಕೃತಿ ನಮ್ಮದಾಗಿದೆ. ನಂಬಿಕೆಗಿಂತಲೂ ಜಿಜ್ಞಾಸೆ ಹಾಗೂ ಅನ್ವೇಷಣಾ ಪ್ರವೃತ್ತಿಯಿಂದಾಗಿ ಕಷ್ಟ ಬಂದಾಗ ಆರ್ತರಾಗಿ ಪರಿಹಾರಕ್ಕಾಗಿ ನಾವು ದೇವರ ಭಕ್ತಿ ಮಾಡುತ್ತೇವೆ. ದೇವರ ಅನುಗ್ರಹದಿಂದ ನಮ್ಮ ಇಷ್ಟಾರ್ಥಗಳು ಈಡೇರುತ್ತವೆ. ಕರ್ಮ ಸಿದ್ಧಾಂತವನ್ನು ನಂಬುವ ನಾವು ತಾಳ್ಮೆಯಿಂದ ಧರ್ಮದ ಮರ್ಮವನ್ನರಿತು ಆಚರಿಸಿದಾಗ ಜೀವನ ಪಾವನವಾಗುತ್ತದೆ. ನಮ್ಮ ಹಿರಿಯರು, ಸಾಧು-ಸಂತರು ಇದನ್ನು ಸಾಧಿಸಿ ತೋರಿಸಿದ್ದಾರೆ ಎಂದು ಹೇಳಿದ ಅವರು ಜೈನರ ತ್ಯಾಗ, ಅಹಿಂಸೆ, ಅಪರಿಗ್ರಹ ಮೊದಲಾದ ತತ್ವ-ಸಿದ್ಧಾಂತಗಳಿಂದ ಶಾಂತಿ-ಸಾಮರಸ್ಯದ ಬದುಕು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಪಡುಬಿದ್ರೆ ಬೀಡು ರತ್ನಾಕರ ರಾಜ್ ಅರಸು, ರಕ್ಷಿತ್ ಶಿವರಾಂ, ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಶುಭಾಶಂಸನೆ ಮಾಡಿದರು. ವಿಶಿಷ್ಠ ಸೇವೆ-ಸಾಧನೆ ಮಾಡಿದ ವೇಣೂರಿನ ಪ್ರವೀಣಕುಮಾರ್ ಇಂದ್ರ ಮತ್ತು ಉಜಿರೆಯ ಸುರೇಶ್‌ಕುಮಾರ್ ಅವರನ್ನು ಗೌರವಿಸಲಾಯಿತು. ಪ್ರತಿಷ್ಠಾಚಾರ್ಯರಾದ ಬೆಳ್ತಂಗಡಿಯ ಕೆ. ಜಯರಾಜ ಇಂದ್ರ, ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಬಿ. ರಾಜಶೇಖರ ಅಜ್ರಿ, ಬಸದಿ ಸಮಿತಿಯ ಕೋಶಾಧಿಕಾರಿ ಚಾಮರಾಜ ಸೇಮಿತ, ವೃಷಭರಾಜ ಇಂದ್ರ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ ಅಳದಂಗಡಿ ಅರಮನೆಯ ಡಾ. ಪದ್ಮಪ್ರಸಾದ ಅಜಿಲ ಮಾತನಾಡಿ, ಸ್ವಧರ್ಮದಲ್ಲಿ ಜೀವಿಸಿ, ಪರಧರ್ಮವನ್ನು ಪ್ರೀತಿಸುವ ಜೈನರು ಗುಣಗಳ ಆರಾಧಕರಾಗಿದ್ದು ಸರ್ವಧರ್ಮೀಯರೊಂದಿಗೂ ಶಾಂತಿ-ಸಾಮರಸ್ಯದ ಜೀವನ ನಡೆಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಬಸದಿಯ ಸೇವೆಯಲ್ಲಿ ಜನರ ಶ್ರದ್ಧಾ-ಭಕ್ತಿಯ ಪರಿಶ್ರಮವನ್ನು ಶ್ಲಾಘಿಸಿ, ಅಭಿನಂದಿಸಿದರು. ಕಿಶೋರ್‌ಹೆಗ್ಡೆ ಎರ್ಮೆತ್ತೋಡಿಗುತ್ತು ಸ್ವಾಗತಿಸಿದರು. ಮುಂಡೂರುಗುತ್ತು ಆಕರ್ಷ್ ಜೈನ್ ಧನ್ಯವಾದವಿತ್ತರು. ಅಜಿತ್ ಕೊಕ್ರಾಡಿ ಕಾರ್ಯಕ್ರಮ ನಿರ್ವಹಿಸಿದರು. ಧಾರ್ಮಿಕ ವಿಧಿ-ವಿಧಾನಗಳು: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವೀ. ಹೆಗ್ಗಡೆಯವರು ಹಾಗೂ ಕುಟುಂಬಸ್ಥರು ಭಾನುವಾರದ ಪೂಜೆಯ ಸೇವಾಕರ್ತೃಗಳಾಗಿ ಪುಣ್ಯಭಾಗಿಗಳಾದರು. ಭಗವಾನ್ ಆದಿನಾಥ ಸ್ವಾಮಿಯ ಪ್ರತಿಷ್ಠೆ, ಶಿಖರಾರೋಹಣ, ಭಕ್ತಾಮರ ಆರಾಧನೆ, ೧೦೮ ಕಲಶ ಅಭಿಷೇಕದ ಬಳಿಕ ಮಹಾಪೂಜೆ ನಡೆಯಿತು. ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆಯವರು ಮತ್ತು ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ನಿರೀಕ್ಷಾ ಜೈನ್ ಹೊಸ್ಮಾರು ಇವರು ಸುಶ್ರಾವ್ಯ ಗಾಯನ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿತು.

ಬೆಂಗಳೂರಿನ ಕುಬೇರ ಜೈನ್ ಮಿಲನ್ ನ 180ನೇ ವಾರ್ಷಿಕ ಸಭೆ

Article Image

ಬೆಂಗಳೂರಿನ ಕುಬೇರ ಜೈನ್ ಮಿಲನ್ ನ 180ನೇ ವಾರ್ಷಿಕ ಸಭೆ

ಇಂದಿನ ಜಾಗತೀಕರಣ ಹಾಗೂ ಉಧಾರಿಕರಣದ ಕಾಲಘಟ್ಟದಲ್ಲಿ ಸಂಸ್ಕೃತಿ, ಸಂಸ್ಕಾರ, ಶಾಂತಿ ಮತ್ತು ಅಹಿಂಸೆಗಳ ಸಂರಕ್ಷಣೆಯ ಹಿನ್ನೆಲೆಯಲ್ಲಿ ಕಾಲಕ್ಕೆ ತಕ್ಕಂತೆ ನಾವು ಬದಲಾವಣೆ ಕಾಣುವುದು ಅಗತ್ಯವಾಗಿದೆ ಎಂದು ಧಾರವಾಡದ ಎಸ್‌.ಡಿ.ಎಂ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ನಿರಂಜನ್ ಕುಮಾರ್ ತಿಳಿಸಿದರು. ಅವರು ಆಂಧ್ರ ಪ್ರದೇಶದ ಸತ್ಯ ಸಾಯಿ ಜಿಲ್ಲೆ, ಪೆನುಗೊಂಡೇ ಪಟ್ಟಣದ ಶ್ರೀ ಅಜಿತನಾಥ ತೀರ್ಥಂಕರ ಬಸದಿ ಆವರಣದಲ್ಲಿ ನಡೆದ ಬೆಂಗಳೂರಿನ ಕುಬೇರ ಜೈನ್ ಮಿಲನ್ ನ 180ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದರು. ಶ್ರೀ ಧರ್ಮಸ್ಥಳ ಧರ್ಮೊತ್ತನ ಟ್ರಸ್ಟ ನಿಂದ ಶ್ರೀ ಅಜಿತನಾಥ ಬಸದಿ ಜೀರ್ಣೋದ್ಧಾರಗೊoಡು ಹೊಸ ರೂಪ ಕಂಡಿದೆ, ಜೈನ ಧರ್ಮ ಚಿಕ್ಕ ಧರ್ಮವಾದರೂ ಸುರಕ್ಷಿತ ಹಾಗೂ ವಿಶಿಷ್ಟ ಧರ್ಮವಾಗಿದೆ, ನಮ್ಮ ಧರ್ಮ ಶ್ರಮಣ ಪರಂಪರೆ ಹೊಂದಿದೆ, ಇತ್ತೀಚಿನ ದಿನಗಳಲ್ಲಿ ವಿಶ್ವದಲ್ಲಿ ಅಶಾಂತಿ, ಹಿಂಸೆ, ರಕ್ತಪಾತ, ತಾಂಡವ ಮಾಡುತ್ತಿದ್ದು ಯುದ್ಧದ ಕಾರ್ಮೋಡ ಕವಿದಿದೆ. ಬದಲಾವಣೆ ಇಂದು ಅಗತ್ಯವಾಗಿದ್ದು ಇವಕ್ಕೆಲ್ಲ ಶಾಂತಿ ಮತ್ತು ಅಹಿಂಸೆಗೆ ಪೂರಕವಾಗಿರುವ ಜೈನ ಧರ್ಮದ ಸಿದ್ಧಾಂತಗಳು ಅಗತ್ಯ ಎಂದರು. ಯಾವುದೇ ಕಾರ್ಯಕ್ಕೆ ನಾವು ಹೊಂದಿಕೊಳ್ಳುವ ಭಾವನೆ, ಭೂಮಿಯ ಮೇಲೆ ಬದುಕುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು. ಡಾ ಪದ್ಮಲತ ನಿರಂಜನ್ ಮಾತನಾಡಿ ಎಲ್ಲರಿಗೂ ಪ್ರೀತಿಸುವ ಶಕ್ತಿ ನೀಡಲಿ ಎಂದು ಹಾರೈಸಿ ಭಕ್ತಿಗೀತೆ ಹಾಡಿದರು. ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಮಾಜಿ ಅಧ್ಯಕ್ಷೇ ಪದ್ಮಿನಿ ಪದ್ಮರಾಜ್ ಮಾತನಾಡಿ ಭಾರತೀಯ ಜೈನ ಮಿಲನ್ ಹಾಗೂ ಜೈನ ಮಹಿಳಾ ಒಕ್ಕೂಟಗಳು ಧರ್ಮಸ್ಥಳದ ಧರ್ಮಕಾರ್ಯಗಳು ಪ್ರಶಂಸನಿಯ, ಧರ್ಮ ಸಂಸ್ಕಾರ ಕಾರ್ಯಗಳನ್ನು ಅಳವಡಿಸಿಕೊಳ್ಳುವಂತೆ ಸಮಾಜ ಬಂದುಗಳಿಗೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಉದ್ಯಮಿ ಹಾಗೂ ಅಮರಾಪುರ ಜೈನ ಸಮಾಜದ ಅಧ್ಯಕ್ಷ ಪದ್ಮರಾಜ್, ತ್ಯಾಗಿ ಸೇವಾ ಸಮಿತಿಯ ಅಧ್ಯಕ್ಷ ಕೆ. ಜೆ. ಎ. ಮಂಜುನಾಥ್ ಯುವರಾಜ್, ನಾಗಕುಮಾರ್ ಸಂಜು, ಮಂಜು, ಅಮರಾಪುರ ಚಂದ್ರಿಕೀರ್ತಿ, ಅಮರಾಪುರ ಅನಿಲ್, ಬೆಂಗಳೂರಿನ ಕುಬೇರ ಜೈನ್ ಮಿಲನ್ ಅಧ್ಯಕ್ಷರು, ಪದಾಧಿಕಾರಿಗಳು, ಅಮರಾಪುರ, ಪೆನಗೊಂಡೆ, ಜೈನ್ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಜೈನ ಸಮಾಜದ ಮುಖಂಡರುಗಳು, ವಿವಿಧ ಮಹಿಳಾ ಸಮಾಜದ ಮುಖಂಡರುಗಳು ಭಾಗವಹಿಸಿದ್ದರು. ಇಸ್ರೋ ಅಜಿತ್ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಪುರೋಹಿತ್ ಕೋಮಲ್ ಕುಮಾರ್ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಜೆ ರಂಗನಾಥ- ತುಮಕೂರು

ವೇಣೂರು: ಮುನಿಮಹಾರಾಜರ ಪುರಪ್ರವೇಶ

Article Image

ವೇಣೂರು: ಮುನಿಮಹಾರಾಜರ ಪುರಪ್ರವೇಶ

ಪರಮ ಪೂಜ್ಯ ವಾತ್ಸಲ್ಯಮೂರ್ತಿ ಗಣಾಧರ ಆಚಾರ್ಯ ಶ್ರೀ 108 ಕುಂಥುಸಾಗರ ಮಹಾರಾಜರು ಸತ್ಗಂಗ ಸಮೇತರಾಗಿ ವೇಣೂರು ಶ್ರೀ ಬಾಹುಬಲಿ ಕ್ಷೇತ್ರಕ್ಕೆ ಇಂದು ಬೆಳಿಗ್ಗೆ 8.00ಗಂಟೆಗೆ ಪುರಪ್ರವೇಶ ಗೈದಿರುತ್ತಾರೆ. ಈ ಸಂದರ್ಭದಲ್ಲಿ ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಉಪಾಧ್ಯಕ್ಷರಾದ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲರು, ಕಾರ್ಯದರ್ಶಿಗಳಾದ ವಿ. ಪ್ರವೀಣ್‌ ಕುಮಾರ್‌ ಇಂದ್ರ, ಕೋಶಾಧಿಕಾರಿಗಳಾದ ಜಯರಾಜ್‌ ಕಂಬಳಿ ಮತ್ತು ಸಮಿತಿಯ ಎಲ್ಲಾ ಸದಸ್ಯರು ಹಾಗೂ ಸಮಸ್ತ ಶ್ರಾವಕ-ಶ್ರಾವಕಿಯರು ಪಾಲ್ಗೊಂಡಿದ್ದರು. ಮುನಿಮಹಾರಾಜರುಗಳು ಇಂದು ಸಂಜೆ 4.00ಗಂಟೆಗೆ ವೇಣೂರಿನಿಂದ ಪೆರಿಂಜೆ ಬಸದಿಗೆ ವಿಹಾರ ಹೊರಡಲಿದ್ದಾರೆ.

ಸವಣಾಲು: ಧಾಮ ಸಂಪ್ರೋಕ್ಷಣ ಮಹೋತ್ಸವ

Article Image

ಸವಣಾಲು: ಧಾಮ ಸಂಪ್ರೋಕ್ಷಣ ಮಹೋತ್ಸವ

ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ಸವಣಾಲು ಗ್ರಾಮದಲ್ಲಿರುವ ಭಗವಾನ್ ಆದಿನಾಥಸ್ವಾಮಿ ಬಸದಿಯು ಜೀಣೋದ್ಧಾರಗೊಂಡಿದ್ದು ಶುಕ್ರವಾರ ಬೆಳಿಗ್ಗೆ ಇಂದ್ರಪ್ರತಿಷ್ಠೆ ಹಾಗೂ ತೋರಣ ಮುಹೂರ್ತದೊಂದಿಗೆ ಧಾಮಸಂಪ್ರೋಕ್ಷಣೆಯ ವಿಧಿ-ವಿಧಾನಗಳು ಶುಭಾರಂಭಗೊಂಡವು. ಪ್ರತಿಷ್ಠಾಚಾರ್ಯರಾದ ಬೆಳ್ತಂಗಡಿಯ ಜಯರಾಜ ಇಂದ್ರರು ಇಂದ್ರಪ್ರತಿಷ್ಠೆಯ ವಿಧಿ-ವಿಧಾನಗಳ ಮಹತ್ವವನ್ನು ವಿವರಿಸಿದರು. ಶುಕ್ರವಾರದಿಂದ ಮೂರು ದಿನಗಳಲ್ಲಿ ನಡೆಯುವ ಪೂಜಾಕಾರ್ಯಕ್ರಮಗಳಲ್ಲಿ ಪುರೋಹಿತರು, ಸೇವಾಕರ್ತರು ಹಾಗೂ ಶ್ರಾವಕರು ಮತ್ತು ಶ್ರಾವಕಿಯರು ಮನ, ವಚನ, ಕಾಯದಿಂದ ತ್ರಿಕರಣಪೂರ್ವಕವಾಗಿ ಪರಿಶುದ್ಧರಾಗಿದ್ದು ಶ್ರದ್ಧಾ-ಭಕ್ತಿಯಿಂದ, ವೃತ-ನಿಯಮಗಳ ಪಾಲನೆಯೊಂದಿಗೆ ಭಾಗವಹಿಸಿ ಪುಣ್ಯ ಸಂಚಯ ಮಾಡಿಕೊಳ್ಳಬೇಕು ಎಂದು ಹೇಳಿದರು. ಪ್ರತಿಷ್ಠಾಚಾರ್ಯರುಗಳಾದ ಜಯರಾಜಇಂದ್ರರು ಮತ್ತು ಪುಷ್ಪರಾಜಇಂದ್ರರು, ಸ್ಥಳ ಪುರೋಹಿತರುಗಳಾದ ವೃಷಭರಾಜಇಂದ್ರರ ನೇತೃತ್ವದಲ್ಲಿ ಸಹಪುರೋಹಿತರ ಸಹಭಾಗಿತ್ವದೊಂದಿಗೆ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು. ವಿಮಾನಶುದ್ಧಿ, ಮುಖವಸ್ತ್ರ ಉದ್ಘಾಟನೆ, ನಾಂದಿಮಂಗಲ ಪೂಜಾವಿಧಾನ, ಕ್ಷೇತ್ರಪಾಲ ಪ್ರತಿಷ್ಠೆ, ನಾಗಪ್ರತಿಷ್ಠೆ ಹಾಗೂ ಭಗವಾನ್ ಆದಿನಾಥಸ್ವಾಮಿಗೆ ೨೪ ಕಲಶ ಅಭಿಷೇಕ ಹಾಗೂ ಮಹಾಪೂಜೆ ನಡೆಯಿತು. ಕಿಶೋರ್ ಹೆಗ್ಡೆ, ಎರ್ಮೆತ್ತೋಡಿಗುತ್ತು , ಉಜಿರೆಯ ಸುರೇಶ್ ಕುಮಾರ್ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಇಂದು ಶನಿವಾರ ವಾಸ್ತುಪೂಜಾ ವಿಧಾನ, ನವಗ್ರಹಶಾಂತಿ, ಪದ್ಮಾವತಿದೇವಿಗೆ ರಜತಕವಚ ಸಮರ್ಪಣೆ, ಲಕ್ಷ ಹೂವಿನಪೂಜೆ, ಭಗವಾನ್ ಆದಿನಾಥಸ್ವಾಮಿಗೆ ೫೪ ಕಲಶ ಅಭಿಷೇಕ ಮತ್ತು ಮಹಾಪೂಜೆ ನಡೆಯುತ್ತದೆ. ನಾಳೆ, ಭಾನುವಾರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರು ಹಾಗೂ ಕುಟುಂಬಸ್ಥರು ಸೇವಾಕರ್ತೃಗಳಾಗಿದ್ದು ಭಗವಾನ್ ಆದಿನಾಥ ಸ್ವಾಮಿ ಪ್ರತಿಷ್ಠೆ ಹಾಗೂ ೧೦೮ ಕಲಶ ಅಭಿಷೇಕ, ಶಿಖರಾರೋಹಣ, ಭಕ್ತಾಮರ ಆರಾಧನೆ, ಮಹಾಪೂಜೆ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ. ಧಾರ್ಮಿಕ ಸಭೆ: ಸಂಜೆ 5 ಗಂಟೆಗೆ ಅಳದಂಗಡಿ ಅರಮನೆಯ ಡಾ. ಪದ್ಮಪ್ರಸಾದ ಅಜಿಲರ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕಸಭೆಯಲ್ಲಿ ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡುವರು. ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್, ಶಾಸಕರುಗಳಾದ ಹರೀಶ್ ಪೂಂಜ ಮತ್ತು ಕೆ. ಪ್ರತಾಪಸಿಂಹ ನಾಯಕ್, ಮಾಜಿ ಶಾಸಕ ಕೆ. ಹರೀಶ್ ಕುಮಾರ್, ರಕ್ಷಿತ್‌ಶಿವರಾಂ, ಸುಮಂತ್ ಕುಮಾರ್, ಸಂದೀಪ್ ಜೈನ್, ಪ್ರವೀಣ ಕುಮಾರ್ ಇಂದ್ರ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಮೂಡುಬಿದಿರೆ: ಪ್ರಥಮ ವಾರ್ಷಿಕೋತ್ಸವ

Article Image

ಮೂಡುಬಿದಿರೆ: ಪ್ರಥಮ ವಾರ್ಷಿಕೋತ್ಸವ

ಮೂಡಬಿದಿರೆ: ಸಂಪೂರ್ಣ ಜೀರ್ಣೋದ್ಧಾರಗೊಂಡ ಶ್ರೀ ಶಾಂತಿನಾತ ಸ್ವಾಮಿ ಬಸದಿ, ಹಿರೇ ಅಮ್ಮನವರ ಬಸದಿ ಹಾಗೂ ಮೇಗಿನ ನೆಲೆಯ ಚತುರ್ವಿಂಶತಿ ತೀರ್ಥಂಕರರ ಬಸದಿ, ದ್ವಜಾಸ್ತಂಭ ಮತ್ತು ಚಂದ್ರಶಾಲೆ ಇದರ ಧಾಮ ಸಂಪ್ರೋಕ್ಷಣೆ ಹಾಗೂ ಪ್ರತಿಷ್ಠಾ ಮಹೋತ್ಸವವು ತಾ. 10.02.2024 ರಿಂದ 16.02.2024ರ ಪರ್ಯಂತ ವೈಭವಯುತವಾಗಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಸಂಪನ್ನಗೊಂಡ ಮಹೋತ್ಸವದ ಪ್ರಥಮ ವಾರ್ಷಿಕೋತ್ಸವವು ಮೂಡಬಿದಿರೆ ಶ್ರೀ ಜೈನ ಮಠದ ಪ. ಪೂ. ಭಾರತ ಭೂಷಣ ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯದಲ್ಲಿ ನಾಳೆ (ಫೆ. 26) ಧಾಮ‍್ಕ ವಿಧಿವಿಧಾನಗಳೊಂದಿಗೆ ಜರಗಲಿರುವುದು.

ಬೆಳ್ತಂಗಡಿ: ವಾರ್ಷಿಕ ಸಮಾರಂಭ

Article Image

ಬೆಳ್ತಂಗಡಿ: ವಾರ್ಷಿಕ ಸಮಾರಂಭ

ಶ್ರೀ ಅತಿಶಯ ಕ್ಷೇತ್ರ ಪರುಷಗುಡ್ಡೆ ಬಸದಿಯ 1008 ಭ|| ಶ್ರೀ ಪಾಶ್ವ೯ನಾಥ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವದ ಹಾಗೂ ಶ್ರೀ ಪದ್ಮಾವತೀ ಅಮ್ಮನವರ ಬಿಂಬ ಪ್ರತಿಷ್ಠಾ ಮಹೋತ್ಸವದ ವಾರ್ಷಿಕೋತ್ಸವ ಸಮಾರಂಭವು ಮೂಡುಬಿದಿರೆ ಶ್ರೀ ಜೈನ ಮಠದ ಪ.ಪೂ ಭಾರತಭೂಷಣ ಸ್ವಸ್ತಿಶ್ರೀ ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ ಮಾರ್ಗದರ್ಶನ ಮತ್ತು ಆಶೀರ್ವಾದಗಳೊಂದಿಗೆ ಜರಗಲಿರುವುದು ಹಾಗೂ ಬೆಳಿಗ್ಗೆ 10.00ಗಂಟೆಗೆ ಚತುರ್ವಿಂಶತಿ ತೀರ್ಥಂಕರರ ಚರಣ ಕೂಟಗಳ ದರ್ಶನದ ದಾರಿಯನ್ನು ಲೋಕಾರ್ಪಣೆ ಮಾಡಲಿರುವರು ಹಾಗೂ ಶಾಸಕರ ಅನುದಾನದಿಂದ ಬಸದಿಗೆ ಪ್ರವೇಶಿಸುವ ಕಾಂಕ್ರೀಟ್ ರಸ್ತೆಯ ಲೋಕಾರ್ಪಣೆಯನ್ನು ಶಾಸಕರಾದ ಹರೀಶ್ ಪೂಂಜಾರವರು ನೆರವೇರಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.

ನಲ್ಲೂರು ಜಗತ್ಪಾಲ ಕಡಂಬರಿಗೆ ಸನ್ಮಾನ

Article Image

ನಲ್ಲೂರು ಜಗತ್ಪಾಲ ಕಡಂಬರಿಗೆ ಸನ್ಮಾನ

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ 'ಹಿರಿಯ ರೆಡೆಗೆ ಸಾಹಿತ್ಯ ನಡಿಗೆ' ಕಾರ್ಯಕ್ರಮದಲ್ಲಿ ಬಜಗೋಳಿ ನಲ್ಲೂರು ಜಗತ್ಪಾಲ ಕಡಂಬರಿಗೆ ಕನ್ನಡ ನಾಡು ನುಡಿಗೆ ಸಲ್ಲಿಸಿದ ಸೇವೆಗಾಗಿ ನಲ್ಲೂರು ಗುಣಲಲಿತ ನಿವಾಸದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ಕಾರ್ಕಳ ತಾಲೂಕು ಸಮ್ಮೇಳನದ ಸಭಾಧ್ಯಕ್ಷರಾದ ಕೆ ಗುಣಪಾಲ ಕಡಂಬ, ಕ.ಸಾ.ಪ. ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಉದ್ಯಮಿ ಬಜಗೋಳಿ ಡಾ ರವೀಂದ್ರ ಶೆಟ್ಟಿ, ನಿತ್ಯಾನಂದ ಪೈ, ಹಿರಿಯ ಸಾಹಿತಿ ಉಪೇಂದ್ರ ಸೋಮಯಾಜಿ, ರೂಪ ರವೀಂದ್ರ ಶೆಟ್ಟಿ, ನಲ್ಲೂರು ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ನಾಗೇಶ್, ದೇವದಾಸ ಕೆರೆಮನೆ ಮತ್ತಿತರರು ಈ ಸಂದರ್ಭದಲ್ಲಿದ್ದರು.

ವರಂಗ: ವಾರ್ಷಿಕ ರಥಯಾತ್ರಾ ಮಹೋತ್ಸವ

Article Image

ವರಂಗ: ವಾರ್ಷಿಕ ರಥಯಾತ್ರಾ ಮಹೋತ್ಸವ

ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ವರಂಗದಲ್ಲಿರುವ ಭಗವಾನ್ ಶ್ರೀ 1008 ನೇಮಿನಾಥ ಸ್ವಾಮಿ ಬಸದಿಯ ವಾರ್ಷಿಕ ರಥಯಾತ್ರಾ ಮಹೋತ್ಸವವು ಪರಮ ಪೂಜ್ಯ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ನೇತೃತ್ವ ಮತ್ತು ಪಾವನ ಸಾನ್ನಿಧ್ಯದಲ್ಲಿ ನಾಳೆ (ಫೆ.13) ಯಿಂದ ಪ್ರಾರಂಭಗೊಂಡು ಫೆ.17ರವರೆಗೆ ನೆರವೇರಲಿದೆ.

ಪಾಣೆಮಂಗಳೂರು: 72ನೇ ವಾರ್ಷಿಕೋತ್ಸವ

Article Image

ಪಾಣೆಮಂಗಳೂರು: 72ನೇ ವಾರ್ಷಿಕೋತ್ಸವ

ಶ್ರೀ ಕ್ಷೇತ್ರ ಪಾಣೇರ್ ಭ|| 1008 ಶ್ರೀ ಅನಂತನಾಥ ತೀರ್ಥಂಕರ ಜಿನ ಚೈತ್ಯಾಲಯದ 72ನೇ ವಾರ್ಷಿಕೋತ್ಸವವು ಮೂಡುಬಿದಿರೆ ಶ್ರೀ ಜೈನ ಮಠದ ಪ. ಪೂ. ಡಾ|| ಭಾರತ ಭೂಷಣ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಮಾರ್ಗದರ್ಶನ ಹಾಗೂ ಶುಭಾಶೀರ್ವಾದಗಳೊಂದಿಗೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಸಹಕಾರದೊಂದಿಗೆ ದಿನಾಂಕ 14-02-2025ನೇ ಶುಕ್ರವಾರದಂದು ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಾರ್ಷಿಕ ಮಹೋತ್ಸವ

Article Image

ವಾರ್ಷಿಕ ಮಹೋತ್ಸವ

ಬೆಳ್ತಂಗಡಿ ತಾಲೂಕಿನ ಪೆರಿಂಜೆಯಲ್ಲಿರುವ ಶ್ರೀ ಪುಷ್ಪದಂತ ಸ್ವಾಮಿ ಬಸದಿಯ ವಾರ್ಷಿಕ ಮಹೋತ್ಸವವು ಮೂಡುಬಿದಿರೆ ಶ್ರೀ ಜೈನಮಠದ ಪ. ಪೂ. ಭಾರತಭೂಷಣ ಸ್ವಸ್ತಿಶ್ರೀ ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಜಿಯವರ ದಿವ್ಯ ಸಾನ್ನಿಧ್ಯದಲ್ಲಿ ತೋರಣ ಮುಹೂರ್ತ, ವಿಮಾನಶುದ್ಧಿ, ನವಗ್ರಹ ಶಾಂತಿ 24 ಕಲಶ ಅಭಿಷೇಕ ಹಾಗೂ ಮಹೋತ್ಸವದೊಂದಿಗೆ ಫೆ. 14ರಂದು ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಾರ್ಷಿಕೋತ್ಸವ ಕಾರ್ಯಕ್ರಮ

Article Image

ವಾರ್ಷಿಕೋತ್ಸವ ಕಾರ್ಯಕ್ರಮ

ಕಾರ್ಕಳ: ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಧ್ಯಾನಯೋಗಿ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯದಲ್ಲಿ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಮತ್ತು ಸಮಾಜ ಬಾಂಧವರ ಸಹಕಾರದೊಂದಿಗೆ ನಿರ್ಮಾಣಗೊಂಡ ಶ್ರೀ ಜೈನ ಮಠದ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ವಾರ್ಷಿಕೋತ್ಸವ ಕಾರ್ಯಕ್ರಮವು ನಾಳೆ(ಜ.26) ಜರುಗಲಿದೆ. ನರಸಿಂಹರಾಜಪುರ, ಶ್ರೀ ಸಿಂಹನಗದ್ದೆ ಬಸ್ತಿಮಠದ ಪ.ಪೂ. ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ದಿವ್ಯ ಉಪಸ್ಥಿತಿ ವಹಿಸಲಿದ್ದಾರೆ.

ವಾರ್ಷಿಕ ಪೂಜಾ ಮಹೋತ್ಸವ ಮತ್ತು ಕಲಿಕುಂಡ ಯಂತ್ರಾರಾಧನೆ, ಅಷ್ಟಾವಧಾನ ಪೂಜೆ ಹಾಗೂ ಧಾರ್ಮಿಕ ಪ್ರವಚನ

Article Image

ವಾರ್ಷಿಕ ಪೂಜಾ ಮಹೋತ್ಸವ ಮತ್ತು ಕಲಿಕುಂಡ ಯಂತ್ರಾರಾಧನೆ, ಅಷ್ಟಾವಧಾನ ಪೂಜೆ ಹಾಗೂ ಧಾರ್ಮಿಕ ಪ್ರವಚನ

ವೇಣೂರು: ಬಜಿರೆ ಹಲ್ಲಂದೋಡಿ ಬಸದಿ ಭಗವಾನ್ 1008 ಶ್ರೀ ವರ್ಧಮಾನ ಸ್ವಾಮಿ ಸನ್ನಿಧಿಯಲ್ಲಿ ವರ್ಷಂಪ್ರತಿ ಜರಗುವ ವಾರ್ಷಿಕ ಪೂಜಾ ಮಹೋತ್ಸವವು ಮೂಡುಬಿದಿರೆ ಶ್ರೀ ಜೈನ ಮಠದ “ಭಾರತಭೂಷಣ” ಡಾ| ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ ಮತ್ತು ಮಾರ್ಗದರ್ಶನದಲ್ಲಿ ಆಶೀರ್ವಚನಗಳೊಂದಿಗೆ 108 ಕಲಶ ಮಹಾಭಿಷೇಕ, ಕಲಿಕುಂಡ ಯಂತ್ರಾರಾಧನೆ, ಶ್ರೀ ಸರ್ವಾಹ್ಣಯಕ್ಷ ಅಷ್ಟಾವಧಾನ ಪೂಜೆ, ಮಹೋತ್ಸವ, ಮಹಾಪೂಜೆ ಹಾಗೂ ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರ ಲಕ್ಷ ಹೂವಿನ ಪೂಜೆ ಮುಂತಾದ ಧರ್ಮಕಾರ್ಯಗಳೊಂದಿಗೆ ನಾಳೆ(ಜ.26) ನೆರವೇರಲಿದೆ.

First Previous

Showing 1 of 6 pages

Next Last