Sat, May 10, 2025
ಕಾರ್ಕಳ, ಹಿರಿಯಂಗಡಿ: ವಿದ್ಯಾರ್ಥಿಗಳ ನೋಂದಾವಣೆ ಆರಂಭ
ಕಾರ್ಕಳ ತಾಲೂಕಿನ ಹಿರಿಯಂಗಡಿಯಲ್ಲಿರುವ ಶ್ರೀ ಭುಜಬಲಿ ಬ್ರಹ್ಮಚರ್ಯಾಶ್ರಮ ಮತ್ತು ಇದರ ಆಡಳಿತಕ್ಕೊಳಪಟ್ಟ ಎಸ್ ಎನ್ ವಿ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ 2025-26 ನೇ ಸಾಲಿಗೆ ವಿದ್ಯಾರ್ಥಿಗಳ ನೋಂದಾವಣೆ ಆರಂಭಗೊಂಡಿದೆ. ನಿಲಯದಲ್ಲಿ 6ನೇ ತರಗತಿಯಿಂದ ಪಿಯುಸಿ ತರಗತಿವರೆಗೆ ಪ್ರವೇಶ ನೀಡಲಾಗುತ್ತದೆ. ಕಳೆದ 80 ವರ್ಷಗಳಿಂದ ಗುರುಕುಲ ಪದ್ಧತಿಯೊಂದಿಗೆ ಸಂಸ್ಕಾರಯುತ ಜೀವನದ ಮೌಲ್ಯಗಳನ್ನು ಸಾವಿರಾರು ವಿದ್ಯಾರ್ಥಿಗಳಿಗೆ ದಯಪಾಲಿಸಿ ನಾಡಿನಾದ್ಯಂತ ಉತ್ತಮ ಶಿಕ್ಷಣ ಸಂಸ್ಥೆ ಎಂದು ಗುರುತಿಸಲ್ಪಟ್ಟಿರುತ್ತದೆ. ಗುಣಮಟ್ಟದ ಶಾಲಾ ಶಿಕ್ಷಣದೊಂದಿಗೆ ಕಡ್ಡಾಯ ಧಾರ್ಮಿಕ ಶಿಕ್ಷಣ, ನೈತಿಕತೆ, ಕ್ರೀಡೆ, ಭಾಷಣ ಕಲೆ, ಭಜನೆ, ಸಮಾಜ ಸೇವೆ, ಪೌರೋಹಿತ್ಯ ಅಧ್ಯಯನದ ಬಗ್ಗೆಯೂ ಗಮನಕೊಡಲಾಗುವುದು. ಉತ್ತಮ ವಸತಿ, ಊಟ – ತಿಂಡಿ, ಸ್ನಾನಕ್ಕೆ ಬಿಸಿನೀರು, ಶುದ್ಧ ಕುಡಿಯುವ ನೀರು, ಸುಸಜ್ಜಿತ ರೂಮಿನ ವ್ಯವಸ್ಥೆ, ಕ್ರೀಡೆ ಮತ್ತು ಮನೋರಂಜನ ಚಟುವಟಿಕೆಗಳೊಂದಿಗೆ ಪ್ರಶಾಂತ ವಾತಾವರಣದಲ್ಲಿ ಜ್ಞಾನಾರ್ಜನೆಗೆ ಸರ್ವ ರೀತಿಯ ಪ್ರೋತ್ಸಾಹ ನೀಡಲಾಗುತ್ತದೆ. ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಸ್ವಸ್ತಿ ಶ್ರೀ ನೇಮಿಸಾಗರ ವರ್ಣೀಜಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳಲ್ಲಿ ಪ್ರಸ್ತುತ ಸಾಲಿನ ಪ್ರವೇಶಕ್ಕಾಗಿ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಆಸಕ್ತ ಪೋಷಕರು ವಿದ್ಯಾರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ದಿನಾಂಕ 20.05.2025 ರೊಳಗೆ ಕಚೇರಿಯನ್ನು ದೂರವಾಣಿ ಸಂಖ್ಯೆ 8197500498 ಮೂಲಕ ಸಂಪರ್ಕಿಸಲು ಕೋರಲಾಗಿದೆ.