Article Image

ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Article Image

ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

2025-26ನೇ ಶೈಕ್ಷಣಿಕ ಸಾಲಿನಲ್ಲಿ ಕರ್ನಾಟಕ ರಾಜ್ಯದ ಅರ್ಹ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಂದ ಮೆಟ್ರಿಕ್ ಪೂರ್ವ (1 ರಿಂದ 8ನೇ ತರಗತಿ) ವಿದ್ಯಾರ್ಥಿವೇತನಕ್ಕೆ SSP ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಕೊನೆಯ ದಿನಾಂಕ: 30.09.2025 ಅರ್ಜಿಗಳನ್ನು SSP ಪೋರ್ಟಲ್ https://ssp.postmatric.karnataka.gov.in/ssppre/ ಮೂಲಕ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಿರ್ದೇಶನಾಲಯದ ಅಧಿಕೃತ ವೆಬ್‌ಸೈಟ್ https://dom.karnataka.gov.in/

ವಿದ್ಯಾರ್ಥಿವೇತನಕ್ಕಾಗಿ‌ ಆನ್‌ಲೈನ್ ಅರ್ಜಿ ಆಹ್ವಾನ

Article Image

ವಿದ್ಯಾರ್ಥಿವೇತನಕ್ಕಾಗಿ‌ ಆನ್‌ಲೈನ್ ಅರ್ಜಿ ಆಹ್ವಾನ

2025-26ನೇ ಶೈಕ್ಷಣಿಕ ಸಾಲಿನಲ್ಲಿ QS Top 500 ಪಟ್ಟಿಯಲ್ಲಿ ಸ್ಥಾನ ಪಡೆದ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್ ವ್ಯಾಸಂಗ ಮಾಡುತ್ತಿರುವ ಕರ್ನಾಟಕ ರಾಜ್ಯದ ಅರ್ಹ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿವೇತನಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30.09.2025 ಹೆಚ್ಚಿನ ಮಾಹಿತಿಗಾಗಿ ನಿರ್ದೇಶನಾಲಯದ ಅಧಿಕೃತ ವೆಬ್‌ಸೈಟ್ https://dom.karnataka.gov.in/ ಅರ್ಜಿಗಳನ್ನು ಸೇವಾಸಿಂಧು ಪೋರ್ಟಲ್ https://sevasindhu.karnataka.gov.in/ Sevasindhu/DepartmentService ಮೂಲಕ ಸಲ್ಲಿಸಬೇಕು.

ಡಾ. ಅಭೀಷ್ ಹೆಗ್ಡೆಯರಿಗೆ ಪ್ರಥಮ ಬಹುಮಾನ

Article Image

ಡಾ. ಅಭೀಷ್ ಹೆಗ್ಡೆಯರಿಗೆ ಪ್ರಥಮ ಬಹುಮಾನ

ಮಂಗಳೂರು: ಏಪ್ರಿಲ್ 2025ರಲ್ಲಿ ಕೋಲ್ಕತ್ತಾದಲ್ಲಿ ನಡೆದ ವಾರ್ಷಿಕ ಯುರೊಲಿಥಿಯಾಸಿಸ್ ಸಮ್ಮೇಳನದಲ್ಲಿ ಸಲಹೆಗಾರರ ರಸಪ್ರಶ್ನೆಯಲ್ಲಿ ಮಂಗಳೂರಿನ ಮೂತ್ರ ಶಾಸ್ತ್ರತಜ್ಞ ಡಾ. ಅಭೀಷ್ ಹೆಗ್ಡೆರವರು ಪ್ರಥಮ ಬಹುಮಾನ ಪಡೆದಿರುತ್ತಾರೆ. ಇವರು ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ವೈದ್ಯಕೀ ಯ ಕಾಲೇಜಿನ ಮೂತ್ರ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುತ್ತಾರೆ.

ಶ್ರೀ ದಿಗಂಬರ ಜೈನ ಮಠದಲ್ಲಿ ಕರ್ಮ ದಹನ ಆರಾಧನಾ ಕಾರ್ಯಕ್ರಮ

Article Image

ಶ್ರೀ ದಿಗಂಬರ ಜೈನ ಮಠದಲ್ಲಿ ಕರ್ಮ ದಹನ ಆರಾಧನಾ ಕಾರ್ಯಕ್ರಮ

ಮೂಡಬಿದಿರೆ: ಶ್ರೀ ದಿಗಂಬರ ಜೈನ ಮಠದಲ್ಲಿ ನಾಳೆ (ಜು.20) ಪ.ಪೂ ಆಚಾರ್ಯ ೧0೮ ಗುಲಾಬ್ ಭೂಷಣ ಮುನಿ ಮಹಾರಾಜ್‌ರ ಸಾನ್ನಿಧ್ಯದಲ್ಲಿ, ಜಗದ್ಗುರು ಪ.ಪೂ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ಉಪಸ್ಥಿತಿಯಲ್ಲಿ ಮಧ್ಯಾಹ್ನ 2.00 ರಿಂದ ವಿಶೇಷ ಅಭಿಷೇಕ ಕರ್ಮ ದಹನ ಆರಾಧನೆ, ಆಚಾರ್ಯರ ಪ್ರವಚನ, ಸ್ವಾಮೀಜಿಗಳವರ ಆಶೀರ್ವಚನ ಆಚಾರ್ಯರ ಪಾದಪೂಜೆ, ಆರತಿ ಈ ಎಲ್ಲಾ ಕಾರ್ಯಕ್ರಮಗಳು ಜರುಗಲಿದೆ.

ಮೆಟ್ರಿಕ್ ನಂತರದ ಶುಲ್ಕ ಮರುಪಾವತಿಗೆ ಆನ್‌ಲೈನ್ ಅರ್ಜಿ ಆಹ್ವಾನ

Article Image

ಮೆಟ್ರಿಕ್ ನಂತರದ ಶುಲ್ಕ ಮರುಪಾವತಿಗೆ ಆನ್‌ಲೈನ್ ಅರ್ಜಿ ಆಹ್ವಾನ

2025-26ನೇ ಶೈಕ್ಷಣಿಕ ಸಾಲಿನಲ್ಲಿ ಪಿಯುಸಿ, ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ, ಪಿ ಹೆಚ್ ಡಿ ತಾಂತ್ರಿಕ & ವೃತ್ತಿಪರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕದ ಅರ್ಹ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ಶುಲ್ಕ ಮರುಪಾವತಿ ಯೋಜನೆಯಡಿ SSP ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30.09.2025 ಅರ್ಜಿಗಳನ್ನು SSP ಪೋರ್ಟಲ್ https://ssp.postmatric.karnataka.gov. in/post_sa/signin.aspx ಮೂಲಕ ಸಲ್ಲಿಸಬೇಕು ಹೆಚ್ಚಿನ ಮಾಹಿತಿಗಾಗಿ ನಿರ್ದೇಶನಾಲಯದ ಅಧಿಕೃತ ವೆಬ್‌ಸೈಟ್: https://dom.karnataka.gov.in/

ತಿಮ್ಮಣಬೆಟ್ಟು ಶಾಲೆಯಲ್ಲಿ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ

Article Image

ತಿಮ್ಮಣಬೆಟ್ಟು ಶಾಲೆಯಲ್ಲಿ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ

ವೇಣೂರು: ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳು ನಿಜವಾಗಿಯೂ ಸಂಸ್ಕಾರಯುತ ಶಿಕ್ಷಣವನ್ನು ನೀಡುವ ಕೇಂದ್ರಗಳಾಗಿವೆ ಇಂತಹ ಶಾಲೆಗಳ ವಿದ್ಯಾರ್ಥಿಗಳನ್ನು ಹಾಗೂ ಅವರಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ಸಮಾಜದ ಸರ್ವರ ಪ್ರೋತ್ಸಾಹ ಅಗತ್ಯವಿದೆ. ಶಾಲಾ ಎಸ್.ಡಿ.ಎಂ.ಸಿ, ಮುಖ್ಯಶಿಕ್ಷಕರು ಮತ್ತು ಶಿಕ್ಷಕ ವೃಂದ ಹಾಗೂ ಪೋಷಕರು ಸಹಕಾರವಿದ್ದಾಗ ಮಾತ್ರ ಗ್ರಾಮೀಣ ಪ್ರದೇಶಗಳ ಶಾಲೆಗಳ ಉನ್ನತಿ ಸಾಧ್ಯ ಎಂದು ಮರೋಡಿ ಬೆಳ್ಳಿಬೀಡು ಬಸದಿಯ ಅನುವಂಶಿಕ ಆಡಳಿತ ಮೊಕೇಸ್ತರ ಹಾಗೂ ಮೂಡುಬಿದಿರೆ ಶ್ರೀ ದಿಗಂಬರ ಜೈನ ವಿದ್ಯಾವರ್ಧಕ ಸಂಘದ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ. ಹೇಮರಾಜ್ ಬೆಳ್ಳಿಬೀಡು ಹೇಳಿದರು. ಅವರು ಕರಿಮಣೇಲು ಗ್ರಾಮದ ತಿಮ್ಮಣಬೆಟ್ಟು ಸರಕಾರಿ ಉ.ಹಿ.ಪ್ರಾ ಶಾಲಾ ಮಕ್ಕಳಿಗೆ ತಮ್ಮ ವೈಯಕ್ತಿಕ ನಿಧಿಯಿಂದ ಒಂದರಿಂದ ಏಳನೇ ತರಗತಿವರೆಗಿನ ಮಕ್ಕಳಿಗೆ ಇಡೀ ಶೈಕ್ಷಣಿಕ ವರ್ಷಕ್ಕೆ ಅಗತ್ಯವಿರುವ ನೋಟ್ ಪುಸ್ತಕಗಳನ್ನು ಮತ್ತು ಇತರ ಪರಿಕರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದರು. ಕಾರ್ಯಕ್ರಮವನ್ನು ದೀಪಪ್ರಜ್ವಲಿಸಿ ಉದ್ಘಾಟಿಸಿದ ಅವರು ಈ ದಿನದಂದು ವಿತರಿಸಿದ ಪುಸ್ತಕಗಳನ್ನು ಸದುಪಯೋಗ ಪಡಿಸಿಕೊಂಡು ತಾವು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ, ನಿಮ್ಮೊಂದಿಗೆ ನಿಮ್ಮ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕವೃಂದ, ಪೋಷಕರು ಬೆಂಬಲವಾಗಿ ಇರುತ್ತಾರೆ, ಕಲಿಕೆಯಲ್ಲಿ ಉತ್ತಮ ಆಸಕ್ತಿಯನ್ನು ವಹಿಸಿ ತಮ್ಮ ಸಾಧನೆಯ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಶಾಲೆಗೆ, ಊರಿಗೆ ಮತ್ತು ನಿಮ್ಮ ಹೆತ್ತವರಿಗೆ ಕೀರ್ತಿ ತರಬೇಕೆಂದರು. ಮುಖ್ಯ ಅತಿಥಿಗಳಾಗಿ ಮೂಡುಬಿದಿರೆ ಜೈನ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಮಹಾವೀರ ಜೈನ್‌ ಮೂಡುಕೋಡಿ ಭಾಗವಹಿಸಿ ಶುಭಹಾರೈಸಿದರು. ವೇದಿಕೆಯಲ್ಲಿ ಶಾಲಾ ಎಸ್.ಡಿ.ಎಂ.ಸಿ ಹಾಗೂ ಗ್ರಾಮ ಪಂಚಾಯತ್ ಸದಸ್ಯೆ ಸುಮ, ಮರಾಠಿ ಸೇವಾ ಸಂಘದ ಅಧ್ಯಕ್ಷ ವಿಠಲ ನಾಯ್ಕ, ಮಾಜಿ ಅಧ್ಯಕ್ಷ ಲಕ್ಷ್ಮಣ ನಾಯ್ಕ, ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಸಚಿನ್ ಬೇಗೂರ್ ಸ್ವಾಗತಿಸಿ, ಶಾಲಾ ಶಿಕ್ಷಕಿ ಗಾಯತ್ರಿ ಪ್ರಶಾಂತ್ ಅತಿಥಿಗಳಾದ ಕೆ. ಹೇಮರಾಜ್ ರವರನ್ನು ಸಭೆಗೆ ಪರಿಚಯಿಸಿದರು. ಶಿಕ್ಷಕಿ ಕವಿತಾ ಕಾರ್ಯಕ್ರಮ ನಿರೂಪಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ರಾಜುನಾಯ್ಕ ವಂದಿಸಿದರು.

ವೇಣೂರು: ನೂತನ ಪದಾಧಿಕಾರಿಗಳ ಪದಗ್ರಹಣ

Article Image

ವೇಣೂರು: ನೂತನ ಪದಾಧಿಕಾರಿಗಳ ಪದಗ್ರಹಣ

ಬ್ರಾಹ್ಮಿ ಜೈನ ಮಹಿಳಾ ಸಮಾಜದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಯಾತ್ರಿ ನಿವಾಸದಲ್ಲಿ ಜು. 13ರಂದು ನಡೆಯಿತು. ಸಭಾ ಕಾರ್ಯಕ್ರಮ ಪ್ರಾರಂಭವಾಗುವ ಮೊದಲು ಪಾರ್ಶ್ವನಾಥ ಸ್ವಾಮಿ ಬಸದಿಯಲ್ಲಿ ಭ| ಶ್ರೀ ೧೦೦೮ ಪಾರ್ಶ್ವನಾಥ ಸ್ವಾಮಿಗೆ ಕ್ಷೀರಾಭಿಷೇಕ ಮತ್ತು ಪದ್ಮಾವತಿ ಅಮ್ಮನವರಿಗೆ ವಿಶೇಷ ಪೂಜೆ ಜರುಗಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾರ್ಕಳ ಜಿನವಾಣಿ ಮಹಿಳಾ ಸಮಾಜದ ಅಧ್ಯಕ್ಷರಾದ ಸುಮನಾಜಿ ಡಿ. ಅಧಿಕಾರಿ ಹಾಗೂ ಮೂಡಬಿದ್ರಿ ಸರ್ವಮಂಗಳ ಜೈನ ಮಹಿಳಾ ಸಮಾಜದ ಅಧ್ಯಕ್ಷರಾದ ಮಂಜುಳಾ ಯಶೋಧರ್ ಕಾರ್ಯಕ್ರಮವನ್ನು ಉದ್ಘಾಟಿಸಿ, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ನೂತನ ಅಧ್ಯಕ್ಷರಾಗಿ ಸುನೀತಾ ಶಾಂತಿಪ್ರಸಾದ್ ಹಾಗೂ ಕಾರ್ಯದರ್ಶಿಯಾಗಿ ದೀಪಶ್ರೀ ಜೈನ್ ಮತ್ತು ಕೋಶಾಧಿಕಾರಿಯಾಗಿ ಸುಕನ್ಯ ಬಲ್ಲಾಳ್ ಆಯ್ಕೆಯಾದರು. ಸಮಾರಂಭದ ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಮಹಿಳಾ ಒಕ್ಕೂಟದ ನಿರ್ದೇಶಕರಾದ ಸರೋಜ ಗುಣಪಾಲ್ ಜೈನ್ ವಹಿಸಿದ್ದರು. ಗೌರವ ಉಪಸ್ಥಿತಿಯನ್ನು ಬ್ರಾಹ್ಮಿ ಜೈನ ಮಹಿಳಾ ಸಮಾಜದ ಸ್ಥಾಪಕ ಅಧ್ಯಕ್ಷರಾದ ಪ್ರಸನ್ನ ಆರ್. ಹೆಗ್ಡೆ ಹಾಗೂ ರಾಜೇಶ್ವರಿ ವಿ.ಅಧಿಕಾರಿ ವಹಿಸಿದ್ದರು. ವಾರ್ಷಿಕ ಗತ ಸಭೆಯ ವರದಿಯನ್ನು ನಿರ್ಗಮಿತ ಕಾರ್ಯದರ್ಶಿಗಳಾದ ಆಶಾಲತಾ ಮಂಡಿಸಿದರು. ಹಾಗೆಯೇ ನಿರ್ಗಮಿತ ಕೋಶಾಧಿಕಾರಿ ವಾಣಿ ವೃಷಭರಾಜ್ ಲೆಕ್ಕ ಪತ್ರ ಮಂಡಿಸಿದರು. ನಿರ್ಗಮಿತ ಅಧ್ಯಕ್ಷರಾದ ಸರೋಜಾ ಗುಣಪಾಲ್ ಜೈನ್ ನೂತನ ಅಧ್ಯಕ್ಷರಾದ ಸುನೀತಾ ಶಾಂತಿಪ್ರಸಾದ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಪದ್ಮಲತಾ ಮತ್ತು ಸುನೀತಾ ಬಲ್ಲಾಳ್ ಪ್ರಾರ್ಥಿಸಿ, ನಿರ್ಗಮಿತ ಜತೆ ಕಾರ್ಯದಶಿಗಳಾದ ಮಮತಾ ಪ್ರಸಾದ್ ಸ್ವಾಗತಿಸಿದರು. ನೂತನ ಕಾರ್ಯದರ್ಶಿಗಳಾದ ದೀಪಶ್ರೀ ಜೈನ್ ಧನ್ಯವಾದವಿತ್ತರು. ಸಂಧ್ಯಾ ಸುಕುಮಾರ್, ಆಶಾಲತಾ ಜೈನ್‌ರವರು ಕಾರ್ಯಕ್ರಮ ನಿರೂಪಿಸಿದರು.

ಸತ್ತೂರು, ಧಾರವಾಡ: ಡಾ. ನಿರಂಜನ್ ಕುಮಾರ್ ಅವರಿಗೆ ಜಾಗತಿಕ ಶ್ರೇಷ್ಠತೆ ಮತ್ತು ಗೌರವ ಪ್ರಧಾನ

Article Image

ಸತ್ತೂರು, ಧಾರವಾಡ: ಡಾ. ನಿರಂಜನ್ ಕುಮಾರ್ ಅವರಿಗೆ ಜಾಗತಿಕ ಶ್ರೇಷ್ಠತೆ ಮತ್ತು ಗೌರವ ಪ್ರಧಾನ

ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ್ ಅವರಿಗೆ ಟೈಮ್ಸ್ ಆಫ್ ಇಂಡಿಯಾ ಮತ್ತು ವಿಜಯ ಕರ್ನಾಟಕ ಸಮೂಹ ಮಾಧ್ಯಮಗಳು, ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಡಾ. ನಿರಂಜನ್ ಕುಮಾರ್ ಅವರ ಮಹತ್ವದ ಕೊಡುಗೆಗಳನ್ನು ಪರಿಗಣಿಸಿ ಜಾಗತಿಕ ಶ್ರೇಷ್ಠತೆಯ ಪ್ರಮಾಣಪತ್ರವನ್ನು ನೀಡಿ ಗೌರವಿಸಿವೆ. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ ಅವರು ಡಾ. ನಿರಂಜನ್ ಕುಮಾರ್ ಅವರ ಪರವಾಗಿ ಈ ಪ್ರತಿಷ್ಠಿತ ಜಾಗತಿಕ ಶ್ರೇಷ್ಠತೆಯ ಗೌರವವನ್ನು ಮಲೇಷ್ಯಾದ ಮ್ಯಾಪ್ಸ್ ಗ್ರುಪ್‌ನ ಸಂಸ್ಥಾಪಕರಾದ ದಾತುಕ್ ಎಂ.ಎ.ಪಿ. ಸಿಗರನ್ ಮತ್ತು ಇತರ ಗಣ್ಯರಿಂದ ಸ್ವೀಕರಿಸಿದರು. ಈ ಪ್ರಶಸ್ತಿಯನ್ನು ಜುಲೈ 13, 2025 ರಂದು ಮಲೇಷ್ಯಾದ ಕೌಲಾಲಂಪುರದ ರಾಯಲ್ ಚುಲಾನ್‌ನಲ್ಲಿ ನಡೆದ ಕರ್ನಾಟಕ ಜಾಗತಿಕ ಸಾಧಕರ ಅಂತರರಾಷ್ಟ್ರೀಯ ಆಚರಣೆಯ ಸಂದರ್ಭದಲ್ಲಿ ನೀಡಲಾಯಿತು.

ಶೀಘ್ರದಲ್ಲಿಯೇ ಧಾರ್ಮಿಕ ಪಾಠಶಾಲೆ ಪ್ರಾರಂಭ

Article Image

ಶೀಘ್ರದಲ್ಲಿಯೇ ಧಾರ್ಮಿಕ ಪಾಠಶಾಲೆ ಪ್ರಾರಂಭ

ಕೊಪ್ಪಳ: ಜೈನ ಕಾಶಿ ಕೊಪ್ಪಳ ತಾಲೂಕಿನ ಹುಲಗಿಯಲ್ಲಿ ಜೈನ ಧರ್ಮದ ತತ್ವಗಳನ್ನು ತಿಳಿಸುವ, ಮುಂದಿನ ಪಿಳಿಗೆಯು ಜೈನ ಧರ್ಮದ ಅಸ್ತಿತ್ವವನ್ನು ಉಳಿಸುವ ಉದ್ದೇಶದಿಂದ ಧಾರ್ಮಿಕ ಪಾಠಶಾಲೆ ಮಾಡಲು ಪ್ರಕ್ರೀಯೆ ಪ್ರಾರಂಭವಾಗಿದೆ. ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರ ನೇಮಕವನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿ ಅದನ್ನು ಪ್ರಾರಂಭ ಮಾಡಲಾಗುವುದು ಎಂದು ಶ್ರಾವಕ ಸುಹಾಸ ಇಜಾರೆ ಹುಲಗಿ ಅವರು ತಿಳಿಸಿದ್ದಾರೆ. ಕೊಪ್ಪಳದಲ್ಲಿ ಸುಮಾರು ಏಳು ನೂರು ಜೈನ ಬಸದಿಗಳು ಅಸ್ತಿತ್ವದಲ್ಲಿದ್ದವು, ಕಾಲಕ್ರಮೇಣ ಅವು ಇತಿಹಾಸದ ಪುಟ ಸೇರಿದವು. ಮೂಲ ಇದು ಜೈನ ಸ್ಥಳವಾಗಿದ್ದು, ಅದರ ಪುನರ್ ಸ್ಥಾಪನೆ ಇದರ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಕಟ್ಟ ಕಡೆಯ ಗ್ರಾಮ ಅಂಠರಣಾದಲ್ಲಿ ಆದಿನಾಥರ ವಿಗ್ರಹ ವಿದ್ದು, ಅಲ್ಲಿ ಜೈನರ ಉಪಸ್ಥಿತಿ ಇಲ್ಲದ ಕಾರಣ ಗ್ರಾಮಸ್ಥರು ಅದರ ಪೂಜೆ ಪುನಸ್ಕಾರ ಮಾಡುತ್ತಿದ್ದಾರೆ, ಅದನ್ನು ಕೊಪ್ಪಳ ಜೈನ ಬಸದಿಗೆ ಹಸ್ತಾಂತರ ಮಾಡಬೇಕು, ಹಾಗೇಯೇ ತಾಲೂಕಿನ ಜಬ್ಬಲಗುಡ್ಡದಲ್ಲಿ ಜೈನ ಬಸದಿಯ ಜಿರ್ಣೋದ್ಧಾರ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಬೇಕು ಎಂದು ಅವರು ತಿಳಿಸಿದರು. ಧಾರ್ಮಿಕ ಪಾಠಶಾಲೆಗೆ ಅಭಿನಂದನ ಗೋಗಿ, ಸಮೇದ ಜೈನ ಪದ್ಮ ಗೌಡ ಹೀರೆಗೌಡ್ರ, ಭುಜಬಲಿ ಪಾಟೀಲ್, ಉದಯರಾಜ ಕಾರಟಗಿ, ಉದಯ ಕುಮಾರ್ ಕಂಪಸಾಗರ, ಪಾಯಸಾಗರ, ಪದ್ಮಾವತಿ ಆನಂದ ಬಸ್ತಿ ನಿಲೋಗಲ್, ಗುರುರಾಜ್ ದೇಸಾಯಿ,ಅನಿಲ್ ಕುಮಾರ್ ಕಲ್ಯಾವಿ, ವಿನಯ ತುಂಬಳ, ಪುಷ್ಪದಂತ ಪಾಟೀಲ್‌, ಸನ್ಮತಿ ಇಜಾರೆ, ಶ್ರೀಕರ ಇಜಾರೆ, ಅನಿಲ್ ಕುಮಾರ್ ರೋಗೆ ಹೊಸಪೇಟೆ ಇವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದ್ದು, ಆಸಕ್ತ ಶ್ರಾವಕ, ಶ್ರಾವಕಿಯರು ಇದರ ಸದಸ್ಯತ್ವ ಪಡೆಯಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತೋವಿನಕೆರೆ ಜೈನ ಮಂದಿರದಲ್ಲಿ ಚಾತುರ್ಮಾಸ

Article Image

ತೋವಿನಕೆರೆ ಜೈನ ಮಂದಿರದಲ್ಲಿ ಚಾತುರ್ಮಾಸ

ತೋವಿನಕೆರೆ: ಗ್ರಾಮದ ಚಂದ್ರನಾಥ ದೇವಾಲಯದಲ್ಲಿ ದಿಗಂಬರ ಜೈನ ಮುನಿ ಪಾಯಸಾಗರ ಮುನಿ ಚಾತುರ್ಮಾಸ ಕೈಗೊಂಡಿದ್ದು, ಇಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಜುಲೈ 14ರಿಂದ ಇಲ್ಲಿ ಚಾತುರ್ಮಾಸ ಆಚರಣೆ ಕೈಗೊಂಡಿದ್ದಾರೆ. ಅಕ್ಟೋಬರ್ 21ರವರೆಗೆ ಮುಂದುವರೆಯುತ್ತದೆ. 20ರಂದು ಮಂಗಳ ಕಳಸ ಪ್ರತಿಷ್ಠಾಪನೆ ಸಲುವಾಗಿ ವಿಶೇಷ ಸಮಾರಂಭ ದೇವಾಲಯದ ಅವರಣದಲ್ಲಿ ನಡೆಯುತ್ತದೆ ಎಂದು ಚಂದ್ರನಾಥ ಸ್ವಾಮಿ ದಿಗಂಬರ ಜೈನ ಸಂಘದವರು ತಿಳಿಸಿದ್ದಾರೆ. ಪ್ರತಿ ದಿನ ಸಂಜೆ 6ರಿಂದ ಮುನಿಗಳಿಂದ ಉಪನ್ಯಾಸ ಹಾಗೂ ಭಕ್ತರಿಂದ ಅರತಿ ಕಾರ್ಯಕ್ರಮ ನಡೆಯುತ್ತದೆ.

ರಚನಾ ಎಸ್.ಡಿ. ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣ

Article Image

ರಚನಾ ಎಸ್.ಡಿ. ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣ

ಕಾರ್ಕಳ: ಹೊಸದಿಲ್ಲಿ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ಮೇ 2025ರಲ್ಲಿ ನಡೆಸಿದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಡಾ.ಎನ್. ಎಸ್.ಎ.ಎಮ್. ಪ್ರಥಮದರ್ಜೆ ಕಾಲೇಜಿನ 2017-2020 ನೇ ಸಾಲಿನ ಬಿಕಾಂ ವಿದ್ಯಾರ್ಥಿನಿ ರಚನಾ ಎಸ್.ಡಿ. ತೇರ್ಗಡೆಯಾಗಿದ್ದಾರೆ. ಇವರು ಮೂಡಬಿದ್ರೆಯ ಧೀರಜ್ ಎಸ್.ಎಮ್. ಮತ್ತು ಪದ್ಮಜಾ ಶೆಟ್ಟಿಯವರ ಪುತ್ರಿ, ರಚನಾ ಎಸ್.ಡಿ. ಮಂಗಳೂರಿನ ಕೆಎನ್‌ಡಿಸಿ ಆಂಡ್ ಅಸೋಸಿಯೆಶನ್‌ನಲ್ಲಿ ಸಿಎ ಪ್ರಾಯೋಗಿಕ ತರಬೇತಿಯನ್ನು ಪಡೆದಿರುತ್ತಾರೆ.

ತುಮಕೂರು ವಿಶ್ವ ವಿದ್ಯಾಲಯದಿಂದ ನಾಡೋಜ ಹಂಪಾನಾ ಸರ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

Article Image

ತುಮಕೂರು ವಿಶ್ವ ವಿದ್ಯಾಲಯದಿಂದ ನಾಡೋಜ ಹಂಪಾನಾ ಸರ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

ಸಂಶೋಧಕ ನಾಡೋಜ, ಹಂ.ಪ ನಾಗರಾಜಯ್ಯ ಭಾಷಾ ವಿಜ್ಞಾನಿ, ಗ್ರಂಥ ಸಂಪಾದಕ, ಶ್ರೇಷ್ಠವಾಗ್ಮಿ, ಅಧ್ಯಾಪಕರಾಗಿ ಸೇವೆ ಸಲ್ಲಿಸಿದವರು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದವರು. 1936ರ ಅಕ್ಟೋಬರ್ 7ರಂದು ಕೋಲಾರ ಜಿಲ್ಲೆ (ಚಿಕ್ಕಬಳ್ಳಾಪುರ ಜಿಲ್ಲೆ) ಗೌರಿಬಿದನೂರು ತಾಲೂಕಿನ ಹಂಪಸಂದ್ರದಲ್ಲಿ ಜನನ. ಪ್ರಾಥಮಿಕ ವಿದ್ಯಾಭ್ಯಾಸ ಹಂಪಸಂದ್ರದಲ್ಲಿ, ಪ್ರೌಢ ಹಾಗೂ ಕಾಲೇಜು ಶಿಕ್ಷಣ ಗೌರಿಬಿದನೂರಿನಲ್ಲಿ, ಪಡೆದ ಇವರು ಕಲಾ ಪದವಿ ಹಾಗೂ ಕಲಾ ಸ್ನಾತಕೋತ್ತರ ಪದವಿಗಳನ್ನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪಡೆದರು. ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಇವರು ಅಂದಿನಿಂದಲೂ ಮೈಸೂರು ದಸರಾ ಬಗ್ಗೆ ವಿಶೇಷವಾದ ಗೌರವ, ಪ್ರೀತಿ. ನಾಡೋಜ ಹಂ.ಪ ನಾಗರಾಜಯ್ಯ ಸಾಹಿತ್ಯ ಲೋಕದ ವಿಶೇಷ ಆಸ್ತಿ, ಹಂಪನ ಎಂಬ ಕಾವ್ಯ ನಾಮದಿಂದ ಹೆಸರಾಗಿರುವ ಇವರು, ನಾಡೋಜ ಎಂಬ ಕೀರ್ತಿ ಭಾಷಾ ವಿಜ್ಞಾನಿ, ಕಾದಂಬರಿ ಕಾರ, ಕಾವ್ಯ, ಇತಿಹಾಸ, ಭಾಷಾ ಶಾಸ್ತ್ರ, ಜೈನ ಸಾಹಿತ್ಯ ಇನ್ನಿತರ ಕೃತಿಗಳನ್ನು ರಚಿಸಿರುವವರು ಕನ್ನಡ ಸಾಹಿತ್ಯ ಹಾಗೂ ಜೈನ ಸಾಹಿತ್ಯಕ್ಕೆ ಇವರ ಕೊಡುಗೆ ಅಪಾರ. (ಜೆ.ರಂಗನಾಥ ತುಮಕೂರು)

ಶ್ರೀ ಜ್ವಾಲಾಮಾಲಿನಿದೇವಿ ಅತಿಶಯ ಕ್ಷೇತ್ರದಲ್ಲಿ ಶ್ರಾವಣ ಮಾಸದ ಪೂಜಾ ಕಾರ್ಯಕ್ರಮಗಳು

Article Image

ಶ್ರೀ ಜ್ವಾಲಾಮಾಲಿನಿದೇವಿ ಅತಿಶಯ ಕ್ಷೇತ್ರದಲ್ಲಿ ಶ್ರಾವಣ ಮಾಸದ ಪೂಜಾ ಕಾರ್ಯಕ್ರಮಗಳು

ಚಿಕ್ಕಮಗಳೂರು: ಶ್ರೀ ಜ್ವಾಲಾಮಾಲಿನಿದೇವಿ ಅತಿಶಯ ಕ್ಷೇತ್ರ ಪೆನುಗೊಂಡ ದಿಗಂಬರ ಜೈನ ಮಹಾಸಂಸ್ಥಾನ ಮಠ ಶ್ರೀ ಕ್ಷೇತ್ರ ಸಿಂಹನಗದ್ದೆ ಬಸ್ತಿಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಪ್ರತೀ ಭಾನುವಾರ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ. ಪೂಜಾ ವಿವರ ಬೆಳಿಗ್ಗೆ 8-00 ಕ್ಕೆ : ಜಿನೇಶ್ವರರ ಪಂಚಾಮೃತ ಅಭಿಷೇಕ, 09-30 ಕ್ಕೆ : ಶ್ರೀ ಜ್ವಾಲಾಮಾಲಿನಿ ಅಮ್ಮನವರ ಪಂಚಾಮೃತ ಅಭಿಷೇಕ ಮತ್ತು ಆರಾಧನೆ, ಸಂಜೆ 6-30 ಕ್ಕೆ : ಅಷ್ಠಾವದಾನ ಸೇವೆ, ಷೋಡಶೋಪಚಾರ ಪೂಜೆ, 7-30 ಕ್ಕೆ : ಮಹಾಮಂಗಳಾರತಿ ನಡೆಯಲಿದೆ.

ಮೀನಾಕ್ಷಿ ಜೈನ್ ರಾಜ್ಯಸಭೆಗೆ ರಾಷ್ಟ್ರಪತಿಯಿಂದ ನೇಮಕ

Article Image

ಮೀನಾಕ್ಷಿ ಜೈನ್ ರಾಜ್ಯಸಭೆಗೆ ರಾಷ್ಟ್ರಪತಿಯಿಂದ ನೇಮಕ

ರಾಷ್ಟ್ರಪತಿಯವರು ಹೊಸದಾಗಿ ನಾಲ್ಕು ಜನರನ್ನು ರಾಜ್ಯಸಭಾ ಸದಸ್ಯರನ್ನು ನೇಮಕ ಮಾಡಿದ್ದು ಅವರಲ್ಲಿ ಮೀನಾಕ್ಷಿ ಜೈನ್ ಕೂಡ ಒಬ್ಬರಾಗಿದ್ದಾರೆ. ಮೀನಾಕ್ಷಿ ಜೈನ್ ( 23ನೇ ಮಾರ್ಚ್ 1943 )ರವರು ದೆಹಲಿಯ ಗಾರ್ಗಿ ಕಾಲೇಜಿನಲ್ಲಿ ಇತಿಹಾಸದ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಭಾರತೀಯ ವಿಜ್ಞಾನಿ ಮತ್ತು ಇತಿಹಾಸಕಾರರು. 2014 ರಲ್ಲಿ ಅವರು ಭಾರತ ಸರ್ಕಾರದಿಂದ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್‌ನ ಸದಸ್ಯರಾಗಿ ನಾಮನಿರ್ದೇಶನಗೊಂಡರು. 2020 ರಲ್ಲಿ ಅವರು ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಕೆಲಸಕ್ಕಾಗಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಗುರು ಪೂರ್ಣಿಮೆಯ ಅಂಗವಾಗಿ ಸನ್ಮಾನ ಕಾರ್ಯಕ್ರಮ

Article Image

ಗುರು ಪೂರ್ಣಿಮೆಯ ಅಂಗವಾಗಿ ಸನ್ಮಾನ ಕಾರ್ಯಕ್ರಮ

ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ವತಿಯಿಂದ ಗುರುಪೂರ್ಣಿಮೆ ಹಾಗೂ ಆಷಾಡ ಮಾಸದ ವಿಶೇಷತೆಯ ಕುರಿತು ಕಾರ್ಯಕ್ರಮ ಪೆರ್ವಾಜೆ ಶಾಲೆಯಲ್ಲಿ ನಡೆಯಿತು. ವಸುಧಾ ಶೆಣೈಯವರು ಆಷಾಡ ಮಾಸದ ವಿಶೇಷತೆಯ ಕುರಿತು ಮಾತನಾಡಿದರು. ಗುರು ಪೂರ್ಣಿಮೆಯ ಕುರಿತು ಸಾವಿತ್ರಿ ಮನೋಹರ ಮಾತನಾಡಿದರು. ಗುರು ಪೂರ್ಣಿಮೆಯ ಅಂಗವಾಗಿ ಡಾಕ್ಟರೇಟ್ ಪದವಿಯನ್ನು ಪಡೆದ ಸದಸ್ಯೆಯರಾದ ಡಾ. ಸುಮತಿ ಪ್ರಭು ಹಾಗೂ ಡಾ. ಮಾಲತಿ ಜಿ. ಪೈಯವರನ್ನು ಸನ್ಮಾನಿಸಲಾಯಿತು. ರೂಪ ಚಿಪ್ಲೂಂಕರ್ ಪ್ರಾರ್ಥಿಸಿ, ಜಾಗೃತಿಯ ಅಧ್ಯಕ್ಷೆ ಪ್ರೊ. ಮಿತ್ರಪ್ರಭಾ ಹೆಗ್ಡೆ ಸ್ವಾಗತಿಸಿ, ಸುಲೋಚನ ಬಿ.ವಿ. ಧನ್ಯವಾದವನ್ನಿತ್ತರು. ಶೈಲಜಾ ಹೆಗ್ಡೆ ನಿರೂಪಿಸಿದರು.

ಅನಂತ ಪಾರ್ಶ್ವ ಜೈನ್ ಮಿಲನ್ ಪದಗ್ರಹಣ ಮತ್ತು ಬಸ್ ನಿಲ್ದಾಣ ಉದ್ಘಾಟನೆ

Article Image

ಅನಂತ ಪಾರ್ಶ್ವ ಜೈನ್ ಮಿಲನ್ ಪದಗ್ರಹಣ ಮತ್ತು ಬಸ್ ನಿಲ್ದಾಣ ಉದ್ಘಾಟನೆ

ಕುಪ್ಪೆ ಪದವು:- ಅನಂತ ಪಾರ್ಶ್ವ ಜೈನ್ ಮಿಲನಿನ ಪದಗ್ರಹಣ ಮತ್ತು ನಮ್ಮ ಮಿಲನ ಸದಸ್ಯರಾದ ಅಜಿತ್ ಕುಮಾರ್ ಜೈನ್ ರವರು ಸಾರ್ವಜನಿಕರಿಗೆ ಬಸ್ ನಿಲ್ದಾಣವನ್ನು ನಿರ್ಮಿಸಿದರು, ಮಂಗಳೂರು ವಲಯ -8 ರ ನಿಕಟ ಪೂರ್ವ ಅಧ್ಯಕ್ಷರಾದ ಪುಷ್ಪರಾಜ್‌ ಜೈನ್‌ರವರು ಉದ್ಘಾಟಿಸಿದರು. ಅನಂತ್ ರಾಜ ಸಭಾಭವನದಲ್ಲಿ ದಿನಾಂಕ 29-6-2025 ಸಂಜೆ 3 ಗಂಟೆಗೆ ಪದಗ್ರಹಣ ಸಮಾರಂಭ ನಡೆಯಿತು. ಜಯರಾಜ್ ಕಂಬಳಿ, ವಲಯ ನಿರ್ದೇಶಕರು ಹೊಸ ಪದಾಧಿಕಾರಿಗಳಿಗೆ ಪ್ರಮಾಣ ವಚನವನ್ನು ಮಾಡಿದರು. ಸುದರ್ಶನ್ ಜೈನ್, ಉಪಾಧ್ಯಕ್ಷರು ಮಂಗಳೂರು ವಲಯ-8. ಕುಪ್ಪೆಪದ ಜೈನ್ ಮಿಲನ್ ಸಣ್ಣದಾದರು ಅಚ್ಚುಕಟ್ಟಾಗಿ ಎಲ್ಲಾ ಕೆಲಸಗಳನ್ನು ಒಳ್ಳೆಯ ರೀತಿಯಲ್ಲಿ ನಿರ್ವಹಿಸುತ್ತಾ ಒಳ್ಳೆ ಹೆಸರನ್ನು ಗಳಿಸಿದ್ದಾರೆ ಎಂದು ಶ್ಲಾಘಿಸಿದರು. ವೇದಿಕೆಯಲ್ಲಿ ಪುಷ್ಪರಾಜ್ ಜೈನ್, ಸುಭಾಷ್ ಚಂದ್ರ ಜೈನ್, ಶ್ವೇತಾ ಜೈನ್, ಡಾ। ಸುದೀಪ್ ಜೈನ್, ಭೋಜರಾಜ್ ಜೈನ್, ಅಧ್ಯಕ್ಷ ಸ್ವರ್ಣ ಲತಾ ಅಜಿತ್, ಹರ್ಷ ಲತಾ, ವನಿತಾ ಭೋಜರಾಜ ಜೈನ ಹಾಗೂ ಪದಗ್ರಹಣ ಸ್ವೀಕರಿಸಿದ ಧೀರಜ್ ಜೈನ ಮತ್ತು ಕಾರ್ತಿಕ್ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪೂರ್ವಿತಾ ಪ್ರಾರ್ಥನೆ ಮಾಡಿದರು. ಅನ್ವಿತ ಜೈನ್ ಕಾರ್ಯಕ್ರಮವನ್ನು ನಿರೂಪಿಸಿದರು. ಅದ್ವಿತ ಮತ್ತು ಅಶ್ವಿತ ಶಾಂತಿ ಮಂತ್ರವನ್ನು ಪಟಿಸಿ ಸಭೆಯನ್ನು ಮುಕ್ತಾಯ ಗೊಳಿಸಿದರು.

ಗಾನವಿ ಡಿ. ಅವರಿಗೆ ಪಿಎಚ್.ಡಿ ಪದವಿ

Article Image

ಗಾನವಿ ಡಿ. ಅವರಿಗೆ ಪಿಎಚ್.ಡಿ ಪದವಿ

ಉಜಿರೆಯ ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಗಾನವಿ ಡಿ. ಅವರು “ಸಿಂಥೆಸಿಸ್ ಅಂಡ್ ಬೈಯೋಲಾಜಿಕಲ್ ಆಕ್ಟಿವಿಟಿ ಸ್ಟಡೀಸ್ ಆಫ್ ಸಮ್ ಸಿಂಪಲ್ ಅಂಡ್ ಫ್ಯೂಸ್‌ಡ್ ನೈಟ್ರೋಜನಸ್ ಹೆಟೆರೋಸೈಕ್ಲಸ್”(Synthesis and Biological Activity Studies of Some Simple and Fused Nitrogenous Heterocycles) ಎಂಬ ಶೀರ್ಷಿಕೆಯಲ್ಲಿ ಮಹಾಪ್ರಬಂಧವನ್ನು ಯಶಸ್ವಿಯಾಗಿ ಮಂಡಿಸಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯ ರಸಾಯನಶಾಸ್ತ್ರ ವಿಭಾಗದ ಅಧ್ಯಕ್ಷರು ಹಾಗೂ ಮಾರ್ಗದರ್ಶಕರಾದ ಪ್ರೊ. ಭೋಜ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಈ ಮಹಾಪ್ರಬಂಧ ಮಂಡಿಸಿದ್ದಾರೆ. ಸಮರ್ಥ ಶೋಧನಾ ಕಾರ್ಯಕ್ಕೆ ಬೆಂಗಳೂರು ಸಿಟಿ ಯುನಿವರ್ಸಿಟಿಯ ರಸಾಯನ ಶಾಸ್ತ್ರ ವಿಭಾಗದ ಸೀನಿಯರ್ ಪ್ರೊಪೆಸರ್ ಡಾ. ಹರಿಪ್ರಸಾದ್ ಎಸ್. ಇವರ ಸಮ್ಮುಖದಲ್ಲಿ ಡಾ. ಗಾನವಿ ಡಿ. ಅವರಿಗೆ ದಿನಾಂಕ 11 ಜುಲೈ 2025 ರಂದು ಪಿಎಚ್.ಡಿ ಪದವಿ ನೀಡಲಾಯಿತು. ಉಜಿರೆಯ ಲಲಿತನಗರದ ನಿವಾಸಿಯಗಿರುವ ಇವರು ಧರ್ಮಸ್ಥಳದ ದೇವಸ್ಥಾನ ಕಚೇರಿಯ ಮುಖ್ಯ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಉದಯ ಜೈನ್ ಅವರ ಧರ್ಮಪತ್ನಿ.

ಭಾರತೀಯ ಜೈನ್ ಮಿಲನ್ ವಲಯ-8 ಸಭೆ

Article Image

ಭಾರತೀಯ ಜೈನ್ ಮಿಲನ್ ವಲಯ-8 ಸಭೆ

ತಾ. 22.06.2025ನೇ ಭಾನುವಾರ ಜೈನ್ ಮಿಲನ್ ಪುತ್ತೂರು ಶಾಖೆ ಮತ್ತು ಜೈನ್ ಮಿಲನ್ ಇಚ್ಲಂಪಾಡಿ ಶಾಖೆ ಜಂಟಿಯಾಗಿ ಪುತ್ತೂರು ಭ. ಶಾಂತಿನಾಥ ಸ್ವಾಮಿ ಬಸದಿಯಲ್ಲಿ ಪುತ್ತೂರು ಮಿಲನ್ ಅತಿಥೇಯತ್ವದಲ್ಲಿ ಜರಗಿತು. ಜಂಟಿ ಮಿಲನ್ ಸಭೆಯು ಸತೀಶ್ ಪಡಿವಾಳ್ ಅಧ್ಯಕ್ಷತೆಯಲ್ಲಿ ನಡೆಯಿತು. ವೇದಿಕೆಯಲ್ಲಿ ವಲಯ ನಿರ್ದೇಶಕರಾದ ರಾಜಶ್ರೀ ಎಸ್. ಹೆಗ್ಡೆ, ಮುಖ್ಯ ಅತಿಥಿಯಾಗಿ ಡಾ| ಮಹಾವೀರ್ ಜೈನ್, ಡಾ| ಅಶೋಕ್ ಪಡಿವಾಳ್, ಅಜಿತ್ ಪ್ರಸಾದ್ ರೈ, ಕಾರ‍್ಯದರ್ಶಿ ರಾಜೇಶ್ ಕುಮಾರ್ ವಿ. ಇಚ್ಲಂಪಾಡಿ ಜೈನ್ ಮಿಲನ್ ಅಧ್ಯಕ್ಷರು ಹೇಮಾವತಿ ಮಹವೀರ್, ಕಾರ‍್ಯದರ್ಶಿ ದೀವಿಕ ರವೀಂದ್ರ ಜೈನ್ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳು ಬಸದಿ ದರ್ಶನ ಕ್ರಮ ಮತ್ತು ಮಹತ್ವವನ್ನು ಅರ್ಥಪೂರ್ಣವಾಗಿ ಸಭೆಗೆ ತಿಳಿಸಿದರು. ಪುತ್ತೂರು ಜೈನ ಮಿಲನ್ ವತಿಯಿಂದ ಡಾಕ್ಟರೇಟ್ ಪದವಿ ಮಹಾವೀರ್ ಜೈನ್ ಇಚ್ಲಂಪಾಡಿ ಹಾಗೂ ಪ್ರಗತಿಪರ ಕೃಷಿಕರಾದ ಅಜಿತ್ ಪ್ರಸಾದ್ ರೈ ಅವರನ್ನು ಗೌರವಿಸಲಾಯಿತು. ಪುತ್ತೂರು ಹಾಗೂ ಇಚ್ಲಂಪಾಡಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮದುವೆ ದಿನ ಹಾಗೂ ಹುಟ್ಟುಹಬ್ಬ ಆಚರಿಸಿಕೊಂಡವರಿಗೆ ಹೂ ನೀಡಿ ಗೌರವಿಸಲಾಯಿತು. ಕಾರ‍್ಯಕ್ರಮವು ಬೆಳಿಗ್ಗೆ 10ರಿಂದ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ಮದ್ಯಾಹ್ನ 2.00 ಗಂಟೆಗೆ ಶಾಂತಿಮಂತ್ರದೊಂದಿಗೆ ಮುಕ್ತಾಯವಾಯಿತು.

ಬೆಳ್ತಂಗಡಿ : ಜೈನ ವಿದ್ಯಾರ್ಥಿ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

Article Image

ಬೆಳ್ತಂಗಡಿ : ಜೈನ ವಿದ್ಯಾರ್ಥಿ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜೈನ ಧರ್ಮೀಯ ವಿದ್ಯಾರ್ಥಿಗಳಿಗೆ ಕೆಲ್ಲಗುತ್ತು ಸಬ್ರಬೈಲು ಕಿನ್ಯಮ್ಮ ಯಾನೆ ಗುಣಾವತಿ ಅಮ್ಮ ಮೆಮೋರಿಯಲ್ ಟ್ರಸ್ಟ್ (ರಿ) ಹಾಗೂ ಶ್ರಾವಕ ಬಂಧುಗಳ ಸರ್ವ ಸಹಕಾರದಿಂದ ವಿದ್ಯಾರ್ಥಿ ಪ್ರೋತ್ಸಾಹ ಧನವನ್ನು ಕಳೆದ ಹಲವಾರು ವರ್ಷಗಳಿಂದ ನೀಡುತ್ತಾ ಬರಲಾಗುತ್ತಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಉತ್ತೇಜನವನ್ನು ನೀಡಲಾಗುತ್ತಿದೆ. ಅದೇ ರೀತಿ 2025-26 ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಜೈನ ಧರ್ಮೀಯ ವಿದ್ಯಾರ್ಥಿಗಳನ್ನು 2025 ನೇ ಸೆಪ್ಟಂಬರ್ 21ರಂದು ಶ್ರೀಕ್ಷೇತ್ರ ಹೊಂಬುಜ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಶ್ರೀಮದ್ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ವಿದ್ಯಾರ್ಥಿ ಪ್ರೋತ್ಸಾಹ ಧನವನ್ನು ನೀಡಿ ಪ್ರೋತ್ಸಾಹಿಸಲಾಗುವುದು. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ SSLC, ಗಿಂತ ಮೇಲ್ಪಟ್ಟು ಪಿಯುಸಿ, ಪದವಿ, ಐಟಿಐ, ಪಾಲಿಟೆಕ್ನಿಕ್, ಬಿಬಿಎಂ, ಎಂಬಿಎ, ಇಂಜಿನಿಯರಿಂಗ್, ವೈದ್ಯಕೀಯ ಇನ್ನಿತರ ವ್ಯಾಸಂಗವನ್ನು ಮುಂದುವರಿಸುತ್ತಿರುವ ವಿದ್ಯಾರ್ಥಿಗಳು ಮಾತ್ರ ನಿಗದಿತ ಅರ್ಜಿ ನಮೂನೆಯಲ್ಲಿಯೇ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರದ ಕಚೇರಿಯಲ್ಲಿ ಪಡೆದುಕೊಳ್ಳುವುದು ಮತ್ತು ಅರ್ಜಿಯೊಂದಿಗೆ ಪ್ರಸ್ತುತ ಕಲಿಯುತ್ತಿರುವ ಸಂಸ್ಥೆಯಿಂದ ವ್ಯಾಸಂಗ ಪ್ರಮಾಣ ಪತ್ರ, ಕಳೆದ ವರ್ಷ ಕಲಿತು ತೇರ್ಗಡೆ ಆಗಿರುವ ಬಗ್ಗೆ ಅಂಕಪಟ್ಟಿಯ ಯಥಾಪ್ರತಿ, ವಿದ್ಯಾರ್ಥಿಯ ಪ್ರಸ್ತುತ ಮನೆಯ ವಿಳಾಸ, ವಿದ್ಯಾರ್ಥಿಯ ಆಧಾರ್ ಕಾರ್ಡ್ ಯಥಾಪ್ರತಿ, ಸಂಪರ್ಕ ಸಂಖ್ಯೆ, ತಂದೆ ಮತ್ತು ತಾಯಿಯ ಹೆಸರು ನಮೂದಿಸಿ ಇವರಿಬ್ಬರಲ್ಲಿ ಒಬ್ಬರ ಸಹಿಯೊಂದಿಗೆ ಆಗಸ್ಟ್ 31ರ ಒಳಗೆ ಕೆ. ಜಯವರ್ಮರಾಜ್ ಬಳ್ಳಾಲ್, ಮ್ಯಾನೇಜಿಂಗ್ ಟ್ರಸ್ಟಿ, ಕೆಲ್ಲಗುತ್ತು ಸಬ್ರಬೈಲು ಕಿನ್ಯಮ್ಮ ಯಾನೆ ಗುಣಾವತಿ ಅಮ್ಮ ಮೆಮೋರಿಯಲ್ ಟ್ರಸ್ಟ್ (ರಿ,) ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರ, ಜೈನ್ ಪೇಟೆ, ಬೆಳ್ತಂಗಡಿ,-574214 ದಕ್ಷಿಣ ಕನ್ನಡ ಈ ವಿಳಾಸಕ್ಕೆ ತಲುಪುವಂತೆ ಕಳುಹಿಸಿಕೊಡಬೇಕು. ಅದೇ ರೀತಿ ಉಭಯ ಜಿಲ್ಲೆಗಳಲ್ಲಿ ತೀವ್ರತರದ ಕಾಯಿಲೆಗಳಾದ ಕ್ಯಾನ್ಸರ್, ಕಿಡ್ನಿ, ಹೃದಯ ಸಂಬಂಧಿ ಇನ್ನಿತರ ಕಾಯಿಲೆಗಳಿಂದ ಬಳಲುತ್ತಿರುವ ಜೈನ ಸಮಾಜದ ಅರ್ಹ ಬಂಧುಗಳು ಕೂಡ ಈ ಬಗ್ಗೆ ಈ ಕೆಳಗಿನ ವಿಳಾಸದಾರರನ್ನು ಸಂಪರ್ಕಿಸಿದ್ದಲ್ಲಿ ಪರಿಶೀಲಿಸಿ ಅಗತ್ಯ ನೆರವು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 08256-233577 ಅಥವಾ 9448180439,8310381962 ಸಂಖ್ಯೆಯ ದೂರವಾಣಿಯನ್ನು ಸಂಪರ್ಕಿಸಬಹುದೆಂದು ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಕೆ. ಜಯವರ್ಮರಾಜ್ ಬಳ್ಳಾಲ್ ರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

ಧಾರವಾಡ ಜೈನ ಮಿಲನದ ಕಾರ್ಯಗಳು ಜನರ ಮನಸಿನಲ್ಲಿ ಅಚ್ಚಳಿಯದೆ ಉಳಿದಿವೆ : ಡಾ. ಅಜಿತಪ್ರಸಾದ

Article Image

ಧಾರವಾಡ ಜೈನ ಮಿಲನದ ಕಾರ್ಯಗಳು ಜನರ ಮನಸಿನಲ್ಲಿ ಅಚ್ಚಳಿಯದೆ ಉಳಿದಿವೆ : ಡಾ. ಅಜಿತಪ್ರಸಾದ

ಒಂದು ಸಂಸ್ಥೆ ಅದು ಮಾಡುವ ಅತ್ಯುನ್ನತ ಕಾರ್ಯಗಳಿಂದಲೇ ಸಮಾಜದಲ್ಲಿ ವಿಶಿಷ್ಟ ಸ್ಥಾನ ಪಡೆದು ವಿಶೇಷವಾಗಿ ಗುರುತಿಸಿಕೊಳ್ಳುತ್ತದೆ ಮತ್ತು ಅದು ಧರ್ಮಪ್ರಭಾವನೆಗೆ ಕಾರಣವಾಗುತ್ತದೆ ಎಂದು ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿಗಳು ಹಾಗೂ ಧಾರವಾಡ ಜೈನ ಮಿಲನ ಸಂಸ್ಥಾಪಕ ಕಾರ್ಯದರ್ಶಿಗಳೂ ಆದ ಡಾ. ಅಜಿತಪ್ರಸಾದ ಹೇಳಿದರು, ಅವರು ಧಾರವಾಡ ಜೈನ ಮಿಲನ್ ಅಯೋಜಿಸಿದ್ದ ವನಮಹೋತ್ಸವ, ಪ್ರಸಕ್ತ ಸಾಲಿನ ಪದಾಧಿಕಾರಿಗಳ ಪದಗ್ರಹಣ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಮುಂದುವರೆದ ಅವರು ಕಳೆದ 33 ವರ್ಷಗಳಿಂದ ಧಾರವಾಡ ಜೈನ ಮಿಲನ್ ಇಂಥ ಹಲವಾರು ಜನೋಪಯೋಗಿ ಕಾರ್ಯಕ್ರಮ ಮಾಡುವಲ್ಲಿ ತನ್ನದೇ ಆದ ಛಾಪು ಮೂಡಿಸಿದೆ ಎಂದರು. ಪ್ರಾರಂಭದಲ್ಲಿ ಜೆ ಎಸ್ ಎಸ್ ಸಂಸ್ಥೆಯ ಆವರಣದಲ್ಲಿ ಗಿಡ ನೆಡುವ ಮೂಲಕ ಸಾಂಕೇತಿಕವಾಗಿ ವನಮಹೋತ್ಸವ ಆಚರಿಸಲಾಯಿತು ಮುಂದಿನ ಒಂದು ವಾರದಲ್ಲಿ ನೂರಕ್ಕೂ ಹೆಚ್ಚು ಸಸಿಗಳನ್ನು ನೆಡುವ ಮೂಲಕ ಅರ್ಥಪೂರ್ಣವಾಗಿ ವನಮಹೋತ್ಸವವನ್ನು ರಚನಾತ್ಮಕವಾಗಿ ಆಯೋಜಿಸಲಾಯಿತು. ಸಂಸ್ಥೆಯ ಐವತ್ತಕ್ಕೂ ಹೆಚ್ಚು ಪ್ರತಿಭಾವಂತ ಅರ್ಹ ವಿದ್ಯಾರ್ಥಿಗಳಿಗೆ ನೋಟ ಬುಕ್ ವಿತರಿಸಿ ಅವರ ವಿದ್ಯಾರ್ಜನೆಗೆ ಉತ್ಸಾಹ ಪ್ರೋತ್ಸಾಹ ತುಂಬಲಾಯಿತು. ಮಿಲನದ ನೂತನ ಅಧ್ಯಕ್ಷ ಜಿನ್ನಪ್ಪ ಕುಂದಗೋಳ, ಕಾರ್ಯದರ್ಶಿ ರತ್ನಾಕರ ಹೋಳಗಿ ಮತ್ತು ಖಜಾಂಚಿ ಮೋಹನಕುಮಾರ ಗೋಗಿ ಇವರುಗಳಿಗೆ ಬ್ಯಾಡ್ಜ್ ವಿತರಿಸಿ ಪ್ರಮಾಣ ವಚನವನ್ನು ಡಾ. ಅಜಿತಪ್ರಸಾದ ಬೋಧಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಟ್ರಸ್ಟಿನ ಕಾರ್ಯದರ್ಶಿ ಶಾಂತರಾಜ ಮಲ್ಲಸಮುದ್ರ ಇವರು ವಹಿಸಿದ್ದರು. ಇದೇ ಸಂದರ್ಭದಲ್ಲಿ ಮಿಲನದ ನಿಕಟಪೂರ್ವಅಧ್ಯಕ್ಷಿಣಿ ಸುಜಾತಾ ಹಡಗಲಿ ಹಾಗೂ ಇತರ ಪದಾಧಿಕಾರಿಗಳಾದ ಸಂಗೀತಾ ಉಪಾಧ್ಯ, ಸುನಂದಾ ವರದಿ ಜೈನ ಅಧ್ಯಯನ ಪೀಠದ ಸಂಯೋಜಕರಾದ ಡಾ. ಜಿನದತ್ತ ಹಡಗಲಿ, ಗಣ್ಯರಾದ ಮಹಾವೀರ ಉಪಾಧ್ಯ, ಎ ಎ ಬಾಳಿಕಾಯಿ, ಕೆ.ಜೆ. ರಪಾಟಿ ಹಾಗೂ ಬ್ರಹ್ಮಪ್ರಕಾಶ, ಡಿ.ಸಿ. ನಾಯಕ, ಅಮಿತ್ ಡೊರ್ಲೆ ಹಾಗೂ ಮಿಲನದ ಸದಸ್ಯರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಇದೇ ಸಂಧರ್ಭದಲ್ಲಿ ಕಾರ್ಯಕ್ರಮದಲ್ಲಿ ಆಥಿತ್ಯವನ್ನು ನೀಡಿದ ವಾಣಿಪ್ರಸಾದ ಇವರನ್ನು ಗೌರವಿಸಿ ಸತ್ಕಾರಿಸಲಾಯಿತು. ಣಮೋಕಾರ ಮಂತ್ರದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಶಿಕ್ಷಕಿ ರಾಜೇಶ್ವರಿ ಶೆಟ್ಟಿ ಇವರು ಸ್ವಾಗತ ಗೀತೆ ಹಾಡಿದರು, ಡಾ. ಸೂರಜ ಜೈನ ಇವರು ಸಮಾರಂಭದಲ್ಲಿ ಭಾಗವಹಿಸಿದ ಸರ್ವರನ್ನು ಸ್ವಾಗತಿಸಿದರು. ಕೊನೆಯಲ್ಲಿ ವೈಶಾಲಿ ಹೊನ್ನಪ್ಪನವರ ಇವರು ವಂದಿಸಿದರು. ಕಾರ್ಯಕ್ರಮವನ್ನು ಸುನಂದಾ ವರೂರ ಅತ್ಯಂತ ಅಚ್ಚುಕಟ್ಟಾಗಿ ನಿರೂಪಿಸಿದರು. ವರದಿ: ಶಾಂತರಾಜ ಮಲ್ಲಸಮುದ್ರ

ಜೈನ ಸಮಾಜದ ಅಪರೂಪದ ರಾಜಕಾರಿಣಿ

Article Image

ಜೈನ ಸಮಾಜದ ಅಪರೂಪದ ರಾಜಕಾರಿಣಿ

ಶ್ರೀ ತವನಪ್ಪ ಅಷ್ಟಗಿ ಅವರ ೬೪ ನೇ ಜನ್ಮ ದಿನದ ಸಂಭ್ರಮ ಇಂದು ವಿಧಾನ ಪರಿಷತ್ ಸ್ಥಾನಕ್ಕೆ ನಾಮಕರಣಕ್ಕೆ ಸೂಕ್ತ ಅಭ್ಯರ್ಥಿ. ಜಾತಿ ಆಧಾರವೇ ನಿರ್ಣಾಯಕವಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಅಲ್ಪಸಂಖ್ಯಾತರಲ್ಲಿಯೇ ಅಲ್ಪಸಂಖ್ಯಾತ ಜೈನ ಸಮುದಾಯದ ನಾಯಕ ಧಾರವಾಡ ತಾಲೂಕು ಉಪ್ಪಿನ ಬೆಟಗೇರಿ ಗ್ರಾಮದ ಸ್ನೇಹ ಜೀವಿ ಶ್ರೀ ತವನಪ್ಪ ಅಷ್ಟಗಿಯವರು. ಸಾರ್ವಜನಿಕ ಕ್ಷೇತ್ರದಲ್ಲಿ ಇವರ ಜನಪರ ಕಾಳಜಿ, ಮೌಲ್ಯಾಧಾರಿತ ರಾಜಕೀಯ ಸಿದ್ದಾಂತ,ಸಾಮಾನ್ಯ ಜನರೊಂದಿಗೆ ನಿರಂತರ ಸಂಪರ್ಕ ಮತ್ತು ಸಮಸ್ಯೆ ಪರಿಹಾರದ ಬಗ್ಗೆ ಸ್ಪಂದನೆ ಪ್ರಾಮಾಣಿಕ ಪ್ರಯತ್ನ ಶುದ್ಧ ಚಾರಿತ್ಯ ಇವರ ಹುಟ್ಟುಗುಣ. ಈ ಕಾರಣದಿಂದಲೇ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಬಹಳ ಜನಪ್ರೀಯ ನಾಯಕರಾಗಿ ಹೊರಹೊಮ್ಮಿದ್ದಾರೆ ಹಾಗೂ ಒಂದೂ ವಿವಾದ ಇಲ್ಲದ ಅಪ್ಪಟ ನಾಯಕರು ಎನ್ನಬಹುದು. ಧಾರವಾಡ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದಲ್ಲಿ ಅಪಾರ ಜನ ಬೆಂಬಲ ಇದ್ದು ಅಪಾರವಾದ ಅಭಿಮಾನಿಗಳನ್ನು, ಹಿತ ಚಿಂತಕರನ್ನು ಹೊoದಿ ಅವರ ಆಶಯದಂತೆ ಜನರ ಸೇವೆಗಾಗಿ ರಾಜಕೀಯವನ್ನು ಬಳಸಿಕೊಳ್ಳುತ್ತಿವ ಅಪರೂಪದ ರಾಜಕಾರಣಿ ಇವರು. ಜೊತೆಗೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ಹಿಂದಿನ ಶಕ್ತಿ ಇವರೇ ಆಗಿದ್ದಾರೆ. ಹಿನ್ನಲೆ, ಕಾರ್ಯಾವಲೋಕನ ಮತ್ತು ಸಂಕ್ಷಿಪ್ತ ಪರಿಚಯ : ಶ್ರೀ ತವನಪ್ಪಾ ಅಷ್ಟಗಿಯವರು ಗ್ರಾಮೀಣ ಹಿನ್ನೆಲೆಯುಳ್ಳವರು ಧಾರವಾಡ ತಾಲೂಕು ಉಪ್ಪಿನ ಬೆಟಗೇರಿ ಗ್ರಾಮದ ರೈತ ಕುಟುಂಬದ ಶ್ರೀ ಪಾಯಪ್ಪ ಮತ್ತು ದ್ಯಾಮವ್ವ ದಂಪತಿಗಳ ಉದರದಲ್ಲಿ ಜನಿಸಿದ್ದು ದಿ 6-7-1961ರಲ್ಲಿ ಪಿಯುಸಿವರೆಗೆ ಶಿಕ್ಷಣ ಪಡೆದ ಇವರು ಸಮಾಜ ಸೇವೆಯನ್ನೇ ಗುರಿಯಾಗಿಟ್ಟುಕೊಂಡು ರಾಜಕೀಯ ಜೀವನವನ್ನು ಪ್ರಾರಂಭಿಸಿದರು ಮತ್ತು ಅದರಲ್ಲಿ ಸಾರ್ಥಕತೆಯನ್ನು ಕಂಡಿದ್ದಾರೆ. ಸಾರ್ವಜನಿಕ ಸೇವೆಯ ಮನೋಭಾವನೆಯಿಂದ ರಾಜಕೀಯ ಪ್ರವೇಶಿಸಿದ ಇವರು 2005 ರ ಜಿಲ್ಲಾ ಪಂಚಾಯತು ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾಯಿತರಾದರು ಹಾಗೂ 2008 - 2009 ರ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿಯ ಶಿಕ್ಷಣ ಮತ್ತು ಅರೋಗ್ಯ ಸಂಘಟನೆಯ ಅಧ್ಯಕ್ಷರಾಗಿ ಅತ್ಯಂತ ಸಮರ್ತವಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಧರ್ಮಪತ್ನಿ ಶ್ರೀಮತಿ ಕಸ್ತೂರಿ ಅಷ್ಟಗಿ ಕೂಡ ರಾಜಕೀಯದಲ್ಲಿ ಒಳ್ಳೆಯ ಹೆಸರು ಮಾಡಿದ್ದು ಇವರು ಕೂಡ ಉಪ್ಪಿನ ಬೆಟಗೇರಿ ಕ್ಷೇತ್ರದಿಂದ ಜಿಲ್ಲಾ ಪಂಚಾಯತಿ ಸದಸ್ಯರಾಗಿ 2011-2016 ರ ಅವಧಿಗೆ ಆಯ್ಕೆಯಾಗಿ 2016ರಲ್ಲಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. "ಇದುವರೆಗೂ ಎಲ್ಲಿಯೂ ಒಂದು ಪೈಸೆಯೂ ಭ್ರಷ್ಟಾಚಾರದ ಮಾಡಿದವನಲ್ಲ ಹಣಕ್ಕಾಗಿ ನನ್ನ ನಿಷ್ಠೆ ಹಾಗೂ ಕರ್ತವ್ಯ ಮರೆತವನಲ್ಲ" ಎಂದು ಶ್ರೀ ತವನಪ್ಪ ಹಲವಾರು ಬಾರಿ ಹೇಳಿಕೊಂಡಿದ್ದಾರೆ. ಇವರ ಮೂಲತ ಕೃಷಿ ಕುಟುಂಬದವರಾಗಿದ್ದು ಅತ್ಯಂತ ಪ್ರಗತಿಪರ ರೈತ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಜೊತೆಗೆ ರೈತರಲ್ಲಿ ಆತ್ಮಸ್ಥರ್ಯ ತುಂಬಿ ಅವರನ್ನು ಸ್ವಾವಲಂಬರನ್ನಾಗಿ ಮಾಡಿ ಹೆಮ್ಮೆಯಿಂದ ಬದುಕಲು ಪ್ರೇರೇಪಿಸುತ್ತಾ ಅವರಿಗೆ ಪ್ರೀತಿ ಪಾತ್ರರಾಗಿದ್ದು ಉತ್ತಮ ಮಾರ್ಗದರ್ಶಕರಾಗಿದ್ದಾರೆ. ಇವರ ಕ್ಷೇತ್ರದಲ್ಲಿ ಸಣ್ಣವರಿರಲಿ ದೊಡ್ಡವರಲಿ ಪ್ರತಿಯೊಬ್ಬರ ಮನೆ ಮನೆಯಲ್ಲಿ ನಡೆಯುವ ಯಾವದೇ ಕಾರ್ಯಕ್ರಮವಿರಲಿ ಅಲ್ಲಿಗೆ ಬಿಡುವು ಮಾಡಿಕೊಂಡು ತಪ್ಪದೇ ಭಾಗವಹಿಸಿ ಅವರೊಂದಿಗೆ ಸ್ಪಂದಿಸುತ್ತಾರೆ ಇದೇ ಇವರ ದೊಡ್ಡಗುಣ. ಇವರದೇ ಮೇಲ್ವಿಚಾರಣೆಯಲ್ಲಿ ಧಾರವಾಡದಲ್ಲಿ ಕೃಷಿಗೆ ಪೂರಕ ಉದ್ದಿಮೆಯಾಗಿ ಪದ್ಮಾವತಿ ಕಾಟನ್ ಇಂಡಸ್ಟ್ರೀಸ್ ಫ್ಯಾಕ್ಟರಿಯನ್ನು ಪ್ರಾರಂಭಿಸಿ ರೈತರ ಆಶಾಕಿರಣವಾಗಿದ್ದಾರೆ. ಜನ್ಮ ದಿನದ ವಿಶೇಷ : ತವನಪ್ಪ ಅಷ್ಟಗಿ ಇವರಿಗೆ ಅಭಿಮಾನಿಗಳು ಸ್ನೇಹಿತರು, ಕಾರ್ಯಕರ್ತರ, ಹಿತೈಸಿಗಳ ದೊಡ್ಡ ಬಳಗವೇ ಇದೆ. ಇವರೆಲ್ಲರೂ ಸೇರಿ ಇವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಸಲು ರವಿವಾರ ದಿನಾಂಕ ೬ ರಂದು ಇಡೀ ದಿನ ರಕ್ತದಾನ ಶಿಬಿರ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಲವಾರು ಪೂಜ್ಯರ ಆಶೀರ್ವಚನ, ಅನ್ನಸಂತರ್ಪಣೆ ಮುಂತಾದ ಜನಸ್ನೇಹಿ ಕಾರ್ಯಕ್ರಗಳನ್ನು ಸವದತ್ತಿ ರಸ್ತೆಯಲ್ಲಿ ರುವ ಪದ್ಮಾವತಿ ಕಾಟನ್ ಇಂಡಸ್ಟ್ರಿ ಯಲ್ಲಿ ಆಯೋಜಿಸಿದ್ದಾರೆ. ಮುಂದಿನ ಚಿಂತನೆಗಳು : ಕ್ಷೇತ್ರ ಸರ್ವಾoಗೀನ ಅಭಿವೃದ್ಧಿಗೆ ಶ್ರಮಿಸುವುದು, ಜನರ ಆಶೋತ್ತರಗಳಿಗೆ ಸದಾ ಸ್ಪಂದಿಸುವುದು. ಯುವಕರಲ್ಲಿ ನವೋತ್ಸಾಹ ತುಂಬಿ ಸ್ವಯಂ ಉದ್ಯೋಗಕ್ಕೆ ಪ್ರೇರೇಪಿಸುವುದು ನಿರುದ್ಯೋಗ ನಿವಾರಣೆ, ರಾಜಕೀಯದಲ್ಲಿ ಪ್ರಾಮಾಣಿಕ ಮೌಲ್ಯ ಆಧಾರಿತ ಕ್ರಮವನ್ನು ಅನುಸರಿಸುವುದು. ಇಂಥ ಒಬ್ಬ ನಿಷ್ಠಾವಂತ ರಾಜಕಾರಿಣಿಯನ್ನು ಈಗ ಖಾಲಿ ಇರುವ ವಿಧಾನ ಪರಿಷತ್ ಸ್ಥಾನಕ್ಕೆ ಸರಕಾರ ನಾಮಕರಣ ಮಾಡಬೇಕೆಂದು ಈ ಸಂಧರ್ಭದಲ್ಲಿ ಸರಕಾರವನ್ನು ಒತ್ತಾಯಿಸುತ್ತೇವೆ. ಇವರ ರಾಜಕೀಯ ಭವಿಷ್ಯ ಉಜ್ವಲವಾಗಲಿ ಈ ನಾಡಿಗೆ ಇವರ ಸೇವೆ ಮಾರ್ಗದರ್ಶನ ಸದಾ ಲಭಿಸಲಿ ಇವರ ಆದರ್ಶ ನಡೆ ನುಡಿ ಇತರರಿಗೆ ಮಾದರಿಯಾಗಲಿ ಎನ್ನುವ ಹಾರೈಕೆಗಳೊಂದಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಶಾಂತರಾಜ ಮಲ್ಲಸಮುದ್ರ ಲೇಖಕರು

ಕ ವಿ ವಿ ಕುಲಪತಿಯವರಿಗೆ ಗೌರವ ಸನ್ಮಾನ

Article Image

ಕ ವಿ ವಿ ಕುಲಪತಿಯವರಿಗೆ ಗೌರವ ಸನ್ಮಾನ

ಕರ್ನಾಟಕ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ ಡಾ. ಎ ಎಮ್ ಖಾನ್ ಇವರನ್ನು ಇಂದು ಕ ವಿ ವಿ ಜೈನ ಅಧ್ಯಯನ ಪೀಠ ಮತ್ತು ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಟ್ರಸ್ಟ್ ವತಿಯಿಂದ ಅಭಿನಂದಿಸಿ ಸತ್ಕರಿಸಲಾಯಿತು. ಪೀಠದ ಸಂಯೋಜಕರು ಹಾಗೂ ಟ್ರಸ್ಟಿನ ಅಧ್ಯಕ್ಷರೂ ಆದ ಡಾ. ಜಿನದತ್ತ ಹಡಗಲಿ, ಜೈನ ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯರಾದ ಶಾಂತರಾಜ ಮಲ್ಲಸಮುದ್ರ,ದನಪಾಲ ಜೆ ಮುನ್ನೊಳ್ಳಿ, ಧರಣೇoದ್ರ ಜವಳಿ, ಡಾ. ಆರ್.ಎ. ಬಾಳಿಕಾಯಿ ಮುಂತಾದವರು ಭಾಗವಹಿಸಿದ್ದರು. ಕುಲಪತಿಗಳು ಜೈನ ಅಧ್ಯಯನ ಪೀಠದ ಅಭಿವೃದ್ಧಿಗೆ ಮತ್ತು ಕಾರ್ಯಾಚಟುವಟಿಕೆಗೆ ನನ್ನ ಸಹಾಯ ಸಹಕಾರ ನೀಡುವುದಾಗಿ ಹೇಳಿದರು. ವರದಿ : ಶಾಂತರಾಜ ಮಲ್ಲಸಮುದ್ರ

ವೇಣೂರಿನ ಮಹಾವೀರ ನಗರದ ಪ್ರಸಾದ್‌ ಕ್ಲಿನಿಕ್‌ ನ ಖ್ಯಾತ ವೈದ್ಯರಾದ ಡಾ. ಕೆ. ಆರ್.‌ ಪ್ರಸಾದ್‌ರವರು ನಿಧನ

Article Image

ವೇಣೂರಿನ ಮಹಾವೀರ ನಗರದ ಪ್ರಸಾದ್‌ ಕ್ಲಿನಿಕ್‌ ನ ಖ್ಯಾತ ವೈದ್ಯರಾದ ಡಾ. ಕೆ. ಆರ್.‌ ಪ್ರಸಾದ್‌ರವರು ನಿಧನ

ಬೆಳ್ತಂಗಡಿ ತಾಲೂಕಿನ ಪೆರಿಂಜೆ, ಬಡಕೋಡಿಗುತ್ತು ನಿವಾಸಿ, ವೇಣೂರಿನ ಮಹಾವೀರ ನಗರದ "ಪ್ರಸಾದ್‌ ಕ್ಲಿನಿಕ್‌" ನ ಖ್ಯಾತ ವೈದ್ಯರಾದ ಡಾ. ಕೆ. ಆರ್.‌ ಪ್ರಸಾದ್‌ (75ವ) ಇವರು ಜು.04ರಂದು ನಿಧನ ಹೊಂದಿದರು. ಇವರು ಪತ್ನಿ, ಇಬ್ಬರು ಪುತ್ರರನ್ನು ಹಾಗೂ ಅಪಾರ ಬಂಧು- ವರ್ಗವನ್ನು ಅಗಲಿದ್ದಾರೆ. ಇವರು ಕೃಷಿಕರಾಗಿದ್ದು, ವೇಣೂರಿನಲ್ಲಿ ಹಲವು ದಶಕಗಳಿಂದ ವೈದ್ಯಕೀಯ ಸೇವೆ ನೀಡಿ, ಜನಪ್ರಿಯ ವೈದ್ಯರಾಗಿ ಜನರ ಪ್ರೀತಿ - ವಿಶ್ವಾಸಕ್ಕೆ ಪಾತ್ರರಾಗಿದ್ದರು. ಅಲ್ಲದೇ ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು

ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ

Article Image

ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ

ಸತ್ತೂರು, ಧಾರವಾಡ: ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ಜುಲೈ 1, 2025 ರಂದು ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು. ಪಶ್ಚಿಮ ಬಂಗಾಳದ ಖ್ಯಾತ ವೈದ್ಯ ಮತ್ತು ಮುಖ್ಯಮಂತ್ರಿಯವರಾದ ಡಾ. ಬಿ. ಸಿ. ರಾಯ್ ಅವರ ಜನ್ಮದಿನವನ್ನು ಸ್ಮರಿಸಲು ಮತ್ತು ದೇಶದಲ್ಲಿ ವೈದ್ಯರನ್ನು ಸ್ಮರಿಸಲು ವೈದ್ಯರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಅವರ ಮನುಕುಲಕ್ಕೆ ನೀಡಿದ ಅಪಾರ ಸೇವೆಯನ್ನು ಪರಿಗಣಿಸಿ ಈ ದಿನವನ್ನು ಆಚರಿಸಲಾಗುತ್ತದೆ. ವೈದ್ಯರ ದಿನಾಚರಣೆಯ ಸಂದರ್ಭದಲ್ಲಿ, ಎಸ್.ಡಿ.ಎಂ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ 3 ಖ್ಯಾತ ವೈದ್ಯರನ್ನು ಸನ್ಮಾನಿಸಲಾಯಿತು ಡಾ. ಪ್ರಕಾಶ ಜಿ. ಮಹಾಲಿಂಗಶೆಟ್ಟಿ, ಹಿರಿಯ ಶಸ್ತ್ರಚಿಕಿತ್ಸಾ ಪ್ರಾಧ್ಯಾಪಕರು ಡಾ. ಚಿದೇಂದ್ರ ಶೆಟ್ಟರ್, ಹಿರಿಯ ಎಲಬು ಮತ್ತು ಕೀಲು ಚಿಕಿತ್ಸಕರು ಮತ್ತು ಕುಲಸಚಿವರು ಡಾ. ಶೀಲಾ ಎಸ್. ಕುದರಿ, ನುರಿತ ವೈದ್ಯಕೀಯ ಚಿಕಿತ್ಸಕರು ಉಪಕುಲಪತಿಗಳಾದ ಡಾ. ನಿರಂಜನ್ ಕುಮಾರ್ ಅವರು ಅಧ್ಯಕ್ಷತೆಯನ್ನು ವಹಿಸಿ, ಮೂವರು ವೈದ್ಯರನ್ನು ಸನ್ಮಾನಿಸಿದರು. ವೈದ್ಯರ ದಿನದ ಪ್ರಶಸ್ತಿಯನ್ನು ಸ್ವೀಕರಿಸಿದ ಹಿರಿಯ ಶಸ್ತ್ರಚಿಕಿತ್ಸಾ ಪ್ರಾಧ್ಯಾಪಕರಾದ ಡಾ. ಪ್ರಕಾಶ ಜಿ. ಮಹಾಲಿಂಗಶೆಟ್ಟಿ ಅವರು ಮಾತನಾಡುತ್ತಾ ವೈದ್ಯರು ರೋಗಿಗಳ ಆರೋಗ್ಯ ಮತ್ತು ಸಾಮಾಜಿಕ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ಚಿಕಿತ್ಸೆ ನೀಡಬೇಕು. ರೋಗಿಗಳ ಸಂತೃಪ್ತಿಯೇ ವೈದ್ಯರುಗಳ ತೃಪ್ತಿಯ ಮೂಲವಾಗಿರಬೇಕು. ಹೊಸವಿಷಯಗಳ ಅಧ್ಯಯನದೊಂದಿಗೆ ಉತ್ತಮ ಸಮಯ ಪಾಲನೆ ವೈದ್ಯರ ಜ್ಞಾನವನ್ನು ಹೆಚ್ಚಿಸುತ್ತದೆ. ಸರಳತೆ ಮತ್ತು ಕೃತಜ್ಞತಾ ಮನೋಭಾವ ಜೀವನದಲ್ಲಿ ಬಹಳ ಯಶಸ್ಸನ್ನು ತಂದುಕೊಡುತ್ತದೆ. ಎಸ್.ಡಿ.ಎಂ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ವಿಜಯ್ ಕುಲಕರ್ಣಿ ಅವರು ಅಭಿನಂದನಾ ಭಾಷಣ ಮಾಡಿದರು. ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್, ಸಹ ಉಪ ಕುಲಪತಿಗಳಾದ ಜೀವಂಧರ್ ಕುಮಾರ, ಹಣಕಾಸು ಅಧಿಕಾರಿಗಳಾದ ವಿ.ಜಿ. ಪ್ರಭು, ಆಡಳಿತ ನಿರ್ದೇಶಕರಾದ ಸಾಕೇತ ಶೆಟ್ಟಿ ಮತ್ತು ಇತರ ವಿಶ್ವವಿದ್ಯಾಲಯದ ಅಧಿಕಾರಿಗಳು, ಸಂಸ್ಥೆಯ ಮುಖ್ಯಸ್ಥರು, ಎಲ್ಲಾ ವೈದ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಎಸ್.ಡಿ.ಎಂ ವೈದ್ಯಕೀಯ ಮಹಾವಿಧ್ಯಾಲಯದ ಉಪ ಪ್ರಾಂಶುಪಾಲರಾದ ಡಾ. ವಿದ್ಯಾ ಪಾಟೀಲ ಅವರು ಅತಿಥಿಗಳನ್ನು ಸ್ವಾಗತಿಸಿದರು. ಡಾ. ಸುರೇಶ ಬಡಿಗೇರ, ಡಾ. ಸುನಿಲ್ ಎಂ. ಮತ್ತು ಡಾ. ಕಿರಣ ಐತಾಳ್ ಮೂವರು ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಡಾ. ಪ್ರಿಯಾಂಕಾ ಮೋತಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಾಧ್ಯಾಪಕರಾದ ಡಾ. ಆಶಾ ನೆರವಿ ವಂದನಾರ್ಪಣೆ ಸಲ್ಲಿಸಿದರು.

ಚಾಮರಾಜನಗರ: 17ನೇ ವರ್ಷದ ವಾರ್ಷಿಕೋತ್ಸವ

Article Image

ಚಾಮರಾಜನಗರ: 17ನೇ ವರ್ಷದ ವಾರ್ಷಿಕೋತ್ಸವ

ದಿಗಂಬರ ಪಾರ್ಶ್ವನಾಥ ಜೈನ ಬಸದಿಯ ಜೀರ್ಣೋದ್ಧಾರದ 17ನೇ ವರ್ಷದ ವಾರ್ಷಿಕೋತ್ಸವದ ಪೂಜಾ ಕಾರ್ಯಕ್ರಮದಲ್ಲಿ ಕನಕಗಿರಿ ಜೈನ ಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿಗಳವರು ಪಾವನ ಸಾನ್ನಿಧ್ಯ ವಹಿಸಿ, ಮಾತನಾಡಿದ ಅವರು ಧರ್ಮ, ರಾಜಕೀಯ, ಸಂಸ್ಕೃತಿಗೆ ಚಾಮರಾಜನಗರ ಪ್ರಸಿದ್ಧಿಯಾಗಿದ್ದು ಕರ್ನಾಟಕಕ್ಕೆ ಅದರ್ಶಪ್ರಾಯವಾಗಿದೆ. ಇಲ್ಲಿರುವ ಹರಳುಕೋಟೆ ಹಾಗೂ ಹರದವಹಳ್ಳಿಯಲ್ಲಿರುವ ದೇವಸ್ಥಾನಗಳು ಪುರಾತನವಾಗಿವೆ. ವಿಜಯ ಪಾರ್ಶ್ವನಾಥ ಸ್ವಾಮಿ ದೇವಸ್ಥಾನ 1116ರಲ್ಲಿ ನಿರ್ಮಾಣವಾಗಿರುವುದು ಇತಿಹಾಸದಿಂದ ತಿಳಿದು ಬರುತ್ತದೆ. ಜನಪದ ಕಲೆಗೂ ಜಿಲ್ಲೆ ಪ್ರಸಿದ್ಧಿ ಪಡೆದಿದೆ ಎಂದು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಜಿ. ಆರ್. ಆಶ್ವಥ್ ನಾರಾಯಣ್ ಮತ್ತು ವೆಂಕಟನಾಗಪ್ಪ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜೈನ ಸಮಾಜದ ಅಧ್ಯಕ್ಷ ನಿರ್ಮಲ್ ಕುಮಾರ್ ಜೈನ್, ಜೈಶಾಮಾದೇವಿ ಸಂಘದ ಅಧ್ಯಕ್ಷೆ ಪದ್ಮಶ್ರೀ ಬ್ರಹ್ಮೇಶ್ ಉಪಸ್ಥಿತರಿದ್ದರು.

ಮಹಾವೀರ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳಿಗೆ ಗೌರವ ಸನ್ಮಾನ

Article Image

ಮಹಾವೀರ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳಿಗೆ ಗೌರವ ಸನ್ಮಾನ

ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಟ್ರಸ್ಟ್ ಹುಬ್ಬಳ್ಳಿ- ಧಾರವಾಡ, ಕರ್ನಾಟಕ ವಿಶ್ವವಿದ್ಯಾಲಯದ ಜೈನ ಅಧ್ಯಯನ ಪೀಠ ಸಲಹಾ ಸಮಿತಿ ಇವುಗಳ ಸಂಯುಕ್ತ ಸಹಯೋಗದಲ್ಲಿ ಮಾಸಿಕ ಉಪನ್ಯಾಸ ಮಾಲಿಕೆ ದಿವ್ಯವಾಣಿ ೪ ಜೈನ ದರ್ಶನದಲ್ಲಿ ಅನೇಕಾಂತವಾದಕುರಿತು ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಪ್ರಚಾರ್ಯ ಡಾ. ಭರಮಪ್ಪ ಭಾವಿ ಇವರಿಂದ ಉಪನ್ಯಾಸ ಜರುಗಿತು. ಇದೇ ಸಂಧರ್ಭದಲ್ಲಿ ಮಹಾವೀರ ಶಿಕ್ಷಣ ಸಂಸ್ಥೆಗೆ ನೂತನವಾಗಿ ಇತ್ತೀಚಿಗೆ ಆಯ್ಕೆಯಾದ ಪದಾಧಿಕಾರಿಗಳನ್ನು ಹಾಗೂ ಧಾರವಾಡ ಜೈನ ಮಿಲನ್ ಅಧ್ಯಕ್ಷರಾಗಿ ಆಯ್ಕೆಯಾದ ಜಿನ್ನಪ್ಪ ಕುಂದಗೋಳ ಇವರನ್ನು ನವನಗರದ ನವಗ್ರಹ ಸಭಾ ಭವನದಲ್ಲಿ ಗೌರವ ಸನ್ಮಾನಮಾಡಿ ಅಭಿನಂದಿಸಲಾಯಿತು. ನವನಗರದ ಅಲ್ಪಸಂಖ್ಯಾತ ಜೈನ ಸೇವಾ ಸಂಘ ಈ ಸಂಸ್ಥೆಯೂ ಕೂಡಾ ಸನ್ಮಾನಿಸಿ ಗೌರವಿಸಿದರು. ಐದು ದಶಕಗಳಿಂದ ಹುಬ್ಬಳ್ಳಿಯಲ್ಲಿ ಸಮಾಜದ ಪ್ರತಿಷ್ಠಿತ ಈ ಸಂಸ್ಥೆ ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರವಾದ ಸಾಧನೆ ಮಾಡಿದೆ, ಪ್ರಸಕ್ತ ಅವಧಿಯಲ್ಲಿ ಅಧ್ಯಕ್ಷರಾದ ಆರ್ ಟಿ ತವನಪ್ಪನವರ, ಉಪಾಧ್ಯಕ್ಷರಾದ ಆರ್ ಟಿ ಅಣ್ಣಿಗೇರಿ ಕಾರ್ಯದರ್ಶಿ ವಿಮಲ ತಾಳಿಕೋಟಿ ಹಾಗೂ ಇತರರು ಅವಿರೋಧವಾಗಿ ಆಯ್ಕೆಯಾಗಿದ್ದು ಇವರ ಅವಧಿಯಲ್ಲಿ ಸಂಸ್ಥೆ ಸರ್ವತೋಮುಖ ಅಭಿವೃದ್ಧಿ ಹೊಂದಲಿ ಇನ್ನು ಹೆಚ್ಚು ಹೆಚ್ಚು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲಿ ಮತ್ತು ಧಾರವಾಡ ಜೈನ ಮಿಲನ್ ಜೈನ ಸಂಸ್ಕೃತಿ ಪರಂಪರೆಗೆ ಧರ್ಮಪ್ರಭಾವನೆ ಕೊಡುಗೆ ನೀಡಲಿ ಎಂದು ಶುಭ ಹಾರೈಸಿ ಸತ್ಕರಿಸಲಾಯಿತು. ಸತ್ಕಾರ ಸಮಾರಂಭದಲ್ಲಿ ಟ್ರಸ್ಟ್ ಅಧ್ಯಕ್ಷ ಡಾ. ಜಿನದತ್ತ ಹಡಗಲಿ, ಉಪಾಧ್ಯಕ್ಷ ಡಾ. ಭರಮಪ್ಪ ಭಾವಿ, ಕಾರ್ಯದರ್ಶಿ ಶಾಂತರಾಜ ಮಲ್ಲಸಮುದ್ರ, ನಿರ್ದೇಶಕರಾದ ಧರಣೇoದ್ರ ಜವಳಿ, ಡಾ ಆರ್ ಎ ಬಾಳಿಕಾಯಿ, ತನುಜಾ ರೋಖಡೆ, ಶ್ರೀಧರ ಬಸ್ತಿ, ಡಾ. ಪ್ರತಿಭಾ ಹಳಿಂಗಳಿ, ಸಂಘಟನಾ ಕಾರ್ಯದರ್ಶಿಗಳಾದ ಶಾಂತರಾಜ ಹದಳಗಿ, ಸುಜಾತಾ ಹಡಗಲಿ, ಅಜಿತ್ ಹವಳಣ್ಣವರ, ನವನಗರ ಜೈನ ಸೇವಾ ಸಂಘದ ಉಪಾಧ್ಯಕ್ಷ ಅಜಿತ್ ಉಪಾಧ್ಯ ಕಾರ್ಯದರ್ಶಿ ಜೆ ಎ ಪಾಟೀಲ್ ಖಜಾಂಚಿ ರವಿ ರಾಯಪ್ಪನವರ ಸದಸ್ಯರಾದ ಬಿ ಎಸ್ ವರೂರ, ಡಿ ಆರ್ ಚೌದರಿ ಪ್ರಭು ಹಜಾರೆ, ಶುಭಮ್ ಬಸ್ತಿ, ಬಾಹುಬಲಿ ಹೊಂಬಣ್ಣವರ, ಆಂಬೊಜಿ, ರತ್ನಾಕರ ಪಾಟೀಲ ಮತ್ತು ಬಹುರೂಪಿಣಿ ಮಹಿಳಾ ಮಂಡಳದ ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ನವನಗರದ ಬಹುರೂಪಿಣಿ ಮಹಿಳಾಮಂಡಲದ ಮತ್ತು ಗೋಕುಲ ರಸ್ತೆಯ ಸನ್ಮತಿ ಮಹಿಳಾ ಮಂಡಳದ ತಂಡಗಳಿಂದ ಜಿನಭಜನೆ ಜರುಗಿತು ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಶ್ರೀಪಾಲ ಬೋಗಾರ ಇವರು ತಾವು ರಚಿಸಿದ "ಪಿಂಛಿ" ಕವನ ಸಂಕಲದ ಪುಸ್ತಕದ ವಿತರಿಸಿದರು. ಪ್ರಾರಂಭದಲ್ಲಿ ಶೋಭಾ ವರೂರ ಇವರಿಂದ ಪ್ರಾರ್ಥನೆ ಶಾಂತರಾಜ ಮಲ್ಲಸಮುದ್ರ ಇವರಿಂದ ಸ್ವಾಗತ ಕೊನೆಯಲ್ಲಿ ಮಹಾವೀರ ದೊದ್ದಮನಿ ಇವರು ವಂದಿಸಿದರು ತನುಜಾ ರೋಖಡೆ ಕಾರ್ಯಕ್ರಮ ನಿರೂಪಿಸಿದರು. ವರದಿ : ಶಾಂತರಾಜ ಮಲ್ಲಸಮುದ್ರ

ಉಜಿರೆ ಎಸ್. ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ

Article Image

ಉಜಿರೆ ಎಸ್. ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆಯನ್ನು ಜು.1 ರಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ವೈದ್ಯರ ಸೇವೆ ಮತ್ತು ತ್ಯಾಗ ಅಮೂಲ್ಯವಾದದ್ದು, ರೋಗಿಗಳ ಸೇವೆಗಾಗಿ ತನ್ನ ಹೆಚ್ಚಿನ ಸಮಯವನ್ನು ಮುಡಿಪಾಗಿಡುವ ವೈದ್ಯರದ್ದು ಒತ್ತಡದ ಜೀವನ. ಇಂತಹ ಗ್ರಾಮೀಣ ಪ್ರದೇಶದ ಆಸ್ಪತ್ರೆಯಲ್ಲಿ ವೈದ್ಯಕೀಯ ವೃತ್ತಿ ಮಾಡುತ್ತಾ, ರೋಗಿಗಳ ಸೇವೆಯ ವಿಷಯ ಬಂದಾಗ ಎಲ್ಲರು ಒಗ್ಗಟ್ಟಿನಿಂದ ರೋಗಿಯ ಸೇವೆಗೆ ಮುಂದಾಗುವ ನಮ್ಮ ಆಸ್ಪತ್ರೆಯ ವೈದ್ಯರ ಸೇವೆ ನಿಜವಾಗಿಯೂ ಶ್ಲಾಘನೀಯ ಎಂದರು. ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಹೇಮಾವತಿ ವಿ. ಹೆಗ್ಗಡೆಯವರ ಆಶೀರ್ವಾದ ಮತ್ತು ಆದೇಶದಂತೆ, ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯ ಹರ್ಷೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಮ್ಮ ಆಸ್ಪತ್ರೆಯ ವೈದ್ಯಕೀಯ ತಂಡ ಅತ್ಯುತ್ತಮ ವೈದ್ಯಕೀಯ ಸೇವೆ ನೀಡುತ್ತಿದ್ದು, ಸ್ವತಃ ರೋಗಿಗಳೇ ವೈದ್ಯರ ಮತ್ತು ಆಸ್ಪತ್ರೆಯ ಸೇವೆಯನ್ನು ಶ್ಲಾಘಿಸುತ್ತಿದ್ದಾರೆ. ನಮ್ಮ ಆಸ್ಪತ್ರೆಯಲ್ಲಿ ಶೀಘ್ರದಲ್ಲಿ ಎಂ.ಆರ್.ಐ ‌ಸ್ಕ್ಯಾನಿಂಗ್ ಸೇವೆ ದೊರೆಯಲಿದ್ದು, ದೇಶದಲ್ಲಿಯೇ ಈ ಅತ್ಯಾಧುನಿಕ ಯಂತ್ರ ಹೊಂದಲಿರುವ 2ನೆಯ ಆಸ್ಪತ್ರೆ ನಮ್ಮದಾಗಲಿದೆ ಎಂದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್ ಮಾತನಾಡಿ ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಸೇವೆ ನೀಡಲು ಹಗಲಿರುಳು ದುಡಿಯುತ್ತಿರುವ ಎಲ್ಲಾ ವೈದ್ಯರಿಗೆ ಶುಭ ಹಾರೈಸಿದರು. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಸಾತ್ವಿಕ್ ಜೈನ್ ಮಾತನಾಡಿ, ಎಲ್ಲರಿಗೂ ವೈದ್ಯರ ದಿನಾಚರಣೆಯ ಶುಭಾಶಯ ತಿಳಿಸುತ್ತಾ, ಹಿರಿಯ ಅನುಭವಿ ವೈದ್ಯರೊಂದಿಗೆ ಯುವ ಮತ್ತು ಉತ್ಸಾಹಭರಿತ ವೈದ್ಯರ ತಂಡವೇ ಈ ಆಸ್ಪತ್ರೆಯಲ್ಲಿ ರೋಗಿಗಳ ಸೇವೆಗೆ ಸದಾ ಸಿದ್ಧವಾಗಿದೆ ಎಂದರು. ಈ ಸಂದರ್ಭದಲ್ಲಿ ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ಎಲ್ಲಾ ವೈದ್ಯರನ್ನು ಸನ್ಮಾನಿಸಲಾಯಿತು. ವಿವಿಧ ಮನರಂಜನಾ ಹಾಗೂ ಫನ್ನಿ ಗೇಮ್ಸ್‌ಗಳಲ್ಲಿ ಆಸ್ಪತ್ರೆಯ ವೈದ್ಯರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಖುಷಿಪಟ್ಟರು. ಆಸ್ಪತ್ರೆಯ ವೈದ್ಯರು, ಎಲ್ಲಾ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು. ಜಗನ್ನಾಥ ಎಂ ಮತ್ತು ಸೃಜನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಪರಾಗ್ ಜೈನ್ ರಾ ಹೊಸ ಮುಖ್ಯ

Article Image

ಪರಾಗ್ ಜೈನ್ ರಾ ಹೊಸ ಮುಖ್ಯ

ಹೊಸದಿಲ್ಲಿ: ‘ಆಪರೇಷನ್ ಸಿಂದೂರ’ ಸೇನಾ ಕಾರ್ಯಾಚರಣೆ ಯಶಸ್ಸಿನಲ್ಲಿ ಮಹತ್ವದ ಪಾತ್ರವಹಿಸಿದ್ದ ಹಿರಿಯ ಐಪಿಎಸ್ ಅಧಿಕಾರಿ ಪರಾಗ್ ಜೈನ್ ಅವರನ್ನು ಗುಪ್ತಚರ ಸಂಸ್ಥ ‘ರಾ’ ಮುಖ್ಯಸ್ಥರನ್ನಾಗಿ ಕೇಂದ್ರ ಸರಕಾರ ನೇಮಿಸಿದೆ. ‘ರಾ’ ಹಾಲಿ ಮುಖ್ಯಸ್ಥ ರವಿ ಸಿನ್ಹಾ ಅವರು ಜೂನ್ 30ರಂದು ನಿವೃತ್ತಿ ಹೊಂದಲಿದ್ದಾರೆ. ಸದ್ಯ ‘ರಾ’ದ ವೈಮಾನಿಕ ಸಂಶೋಧನಾ ಕೇಂದ್ರದ ಮುಖ್ಯಸ್ಥರಾಗಿರುವ ಪರಾಗ್ ಅವರು ಜುಲೈ 1ರಂದು ‘ರಾ’ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಇವರ ಅಧಿಕಾರ ಅವಧಿ ಎರಡು ವರ್ಷ ಇರಲಿದೆ. ಪರಾಗ್ 1989ನೇ ಸಾಲಿನ ಪಂಜಾಬ್ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿದ್ದು, ಗುಪ್ತಚರ ಇಲಾಖೆಯಲ್ಲಿ ಮಾನವ ಬುದ್ಧಿಮತ್ತೆ ಹಾಗೂ ಕೃತಕ ಬುದ್ಧಿಮತ್ತೆಯನ್ನು ಪರಿಣಾಮಕಾರಿಯಾಗಿ ಸಂಯೋಜಿಸಿ ಬಳಸುವಲ್ಲಿ ಪರಿಣತಿ ಹೊಂದಿದ್ದಾರೆ.

ಇನ್ನರ್ ವೀಲ್ ಕ್ಲಬ್ ಮೂಡುಬಿದಿಯ ಜೈನ್ ಪೇಟೆಯಲ್ಲಿ ಸೋಲಾರ್ ಸ್ಟ್ರೀಟ್ ಲೈಟ್ ಅಳವಡಿಕೆ

Article Image

ಇನ್ನರ್ ವೀಲ್ ಕ್ಲಬ್ ಮೂಡುಬಿದಿಯ ಜೈನ್ ಪೇಟೆಯಲ್ಲಿ ಸೋಲಾರ್ ಸ್ಟ್ರೀಟ್ ಲೈಟ್ ಅಳವಡಿಕೆ

ಇನ್ನರ್ ವೀಲ್ ಕ್ಲಬ್ ಮೂಡುಬಿದಿರೆ ಯವರು ಸಾರ್ವಜನಿಕರಿಗೆ ಉಪಯೋಗ ಆಗುವಂತೆ ಸೋಲಾರ್ ಸ್ಟ್ರೀಟ್ ಲೈಟ್ ಅನ್ನು ಸಾವಿರ ಕಂಬದ ಬಸದಿಯ ಹತ್ತಿರ ಅಳವಡಿಸಿದರು. ಮೂಡುಬಿದಿರೆ ಜೈನ ಮಠದ ಪರಮಪೂಜ್ಯ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿಯವರು ಉದ್ಘಾಟಿಸಿ ಇನ್ನರ್ ವೀಲ್ ಕ್ಲಬ್ ಇನ್ನಷ್ಟು ಸಮಾಜ ಮುಖಿಯಾಗಿ ತೊಡಗಿಸಿಕೊಳ್ಳಲಿ ಎಂದು ಹಾಗೂ ನೂತನ ಅಧ್ಯಕ್ಷರಾದ ಶ್ವೇತಾ ಜೈನ್ ಹಾಗೂ ಕಾರ್ಯದರ್ಶಿ ಅನಿತಾರವರಿಗೆ ಶುಭವನ್ನು ಹಾರೈಸಿ ಆರ್ಶೀವದಿಸಿದರು. ಎಂ.ಸಿ.ಎಸ್ ಬ್ಯಾಂಕಿನ ಅಧ್ಯಕ್ಷರು ಹಾಗೂ ರೋಟರಿ ಕ್ಲಬ್‌ ಪೂರ್ವಾಧ್ಯಕ್ಷರಾದ ಎಂ ಬಾಹುಬಲಿ ಪ್ರಸಾದ್ ರವರು ಎಲ್ಲರಿಗೂ ಉಪಯೋಗವಾಗುವಂತಹ ಸಮಾಜಮುಖಿ ಕಾರ್ಯಕ್ರಮ ಇದಾಗಿದ್ದು ಸಾರ್ವಜನಿಕರಿಗೆ ಅತ್ಯಂತ ಉಪಯುಕ್ತವಾಗಿದೆ. ಇತಿಹಾಸ ಪ್ರಸಿದ್ಧ ಸಾವಿರ ಕಂಬದ ಬಸದಿಯ ಪಕ್ಕದಲ್ಲಿ ಇರುವಂತಹ ಈ ರಸ್ತೆಯಲ್ಲಿ ಸ್ಥಳೀಯರು ಮಾತ್ರವಲ್ಲದೆ ಹೊರ ಪ್ರದೇಶದಿಂದ ಬರುವವರು ಕೂಡ ಸಂಚರಿಸುತ್ತಾರೆ. ಇನ್ನರ್ ವೀಲ್ ಕ್ಲಬ್ ಕಳೆದ 33 ವರ್ಷಗಳಿಂದ ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ವರ್ಷವು ಸಾರ್ವಜನಿಕರಿಗೆ ಉಪಯೋಗವಾಗುವಂತಹ ಕೆಲಸವನ್ನು ಮುಂದುವರಿಸಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ್ ಎಮ್., ಮಾಜಿ ಸಚಿವರಾದ ಕೆ. ಅಭಯ ಚಂದ್ರ ಜೈನ್, ಪುರಸಭಾ ಸದಸ್ಯ ಶ್ವೇತಾ ಪ್ರವೀಣೆ, ರೋಟರಿ ಕ್ಲಬ್‌ ಪೂರ್ವಾಧ್ಯಕ್ಷರಾದ ಡಾ| ಹರೀಶ್ ನಾಯಕ್, ಡಾ| ವಿನಯ್ ಕುಮಾರ್ ಹೆಗ್ಡೆ, ರೋ. ಜಯರಾಜ್ ಕಂಬಳಿ, ಇನ್ನರ್ ವೀಲ್ ಕ್ಲಬ್‌ ಸದಸ್ಯರಾದ ಪ್ರಕಾಶಿನಿ ಹೆಗ್ಡೆ, ಸುಜಯ ವೇದ ಕುಮಾರ, ವೀಣಾ, ರೇಷ್ಮಾ, ರಮ್ಯಾ, ಅಪೇಕ್ಷೆ, ದಿವ್ಯಾ ಹಾಗೂ ಜೈನ್ ಮಿಲನ್‌ನ ಪದಾಧಿಕಾರಿಗಳು ಭಾಗವಹಿಸಿದ್ದರು.

ನಾರಾವಿ: ಸನ್ಮಾನ ಕಾರ್ಯಕ್ರಮ

Article Image

ನಾರಾವಿ: ಸನ್ಮಾನ ಕಾರ್ಯಕ್ರಮ

ನಾರಾವಿ ಜೈನ್‌ ಮಿಲನ್‌ ವತಿಯಿಂದ ಹೊಸ್ಮಾರು ಸಿದ್ಧರವನ ಕೂಟ ಬಸದಿಯಲ್ಲಿ ಕರಿಮಣೇಲು ಗುತ್ತು, ಕೆ. ಸನತ್‌ ಕುಮಾರ್‌ ಸೇಮಿತ, ಮರೋಡಿ ಗಾಳಿವನ ಎನ್.‌ ಕೆ. ಆರಿಗ, ರತ್ನರಾಜ್‌ ಆರಿಗ ಮತ್ತು ಲಲಿತಮ್ಮ (ಹೊಸ್ಮಾರು ಪ್ರೇಮ್‌ ಕುಮಾರ್‌ರವರ ತಾಯಿ) ಹಾಗೂ ಅಳಿಯೂರಿನ 102 ವರ್ಷದ ಹಿರಿಯ ಜೈನ ಮಹಿಳೆ, ನಾರಾವಿ ನಿರೀಕ್ಷಾ ಜಯವರ್ಮ ಇವರುಗಳನ್ನು ಊರಿನ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

First Previous

Showing 6 of 21 pages

Next Last