ಶಿಲಾನ್ಯಾಸ ಪೂಜಾ ಕಾರ್ಯಕ್ರಮ
Published Date: 29-May-2025 Link-Copied
ಪಾಣೆಮಂಗಳೂರು: ಶ್ರೀ ಕ್ಷೇತ್ರ ಪಾಣೇರ್ ಭ। ೧೦೦೮ ಶ್ರೀ ಅನಂತನಾಥ ತೀರ್ಥಂಕರ ಜಿನ ಚೈತ್ಯಾಲಯ, ಭ। ೧೦೦೮ ಶ್ರೀ ಚಂದ್ರನಾಥ ತೀರ್ಥಂಕರ ಶ್ರೀ ಮಹಾಮಾತೆ ಪದ್ಮಾವತಿ ಅಮ್ಮನವರ ಜಿನ ಚೈತ್ಯಾಲಯದಲ್ಲಿ ಪರಮಪೂಜ್ಯ ಮುನಿಶ್ರೀ ೧೦೮ ಚಂದ್ರ ಸಾಗರ ಮುನಿ ಮಹಾರಾಜರ ಪುಣ್ಯಸ್ಮರಣೆಯೊಂದಿಗೆ, ಪರಮಪೂಜ್ಯ ಆಚಾರ್ಯ ೧೦೮ ಶ್ರೀ ಚಂದ್ರಪ್ರಭ ಸಾಗರ ಮುನಿ ಮಹಾರಾಜರ ಪರಮಶಿಷ್ಯರಾದ ಯುವಸಂತ ಪರಮಪೂಜ್ಯ ಮುನಿಶ್ರೀ ೧೦೮ ವೀರ ಸಾಗರ ಮುನಿ ಮಹಾರಾಜರು ಮತ್ತು ಪರಮಪೂಜ್ಯ ಮುನಿಶ್ರೀ ೧೦೮ ಪರಮ ಸಾಗರ ಮುನಿ ಮಹಾರಾಜರ ಶುಭಾಶೀರ್ವಾದಗಳೊಂದಿಗೆ, ಸೀಮೆಯ ಗುರುಗಳಾದ ಪರಮಪೂಜ್ಯ ಭಾರತಭೂಷಣ ಡಾ| ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ಶ್ರೀ ಜೈನ ಮಠ ಮೂಡಬಿದಿರೆ ಇವರ ಮಾರ್ಗದರ್ಶನ ಮತ್ತು ದಿವ್ಯ ಉಪಸ್ಥಿತಿಯಲ್ಲಿ, ಕಾರ್ಯಕಾರಿ ಸಮಿತಿಯ ಗೌರವಾದ್ಯಕ್ಷರಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಮುಂದಾಳತ್ವ ಹಾಗೂ ಸಹಕಾರದೊಂದಿಗೆ ತ್ಯಾಗಿ ನಿವಾಸ, ಸಭಾಭವನ, ಭೋಜನ ಶಾಲೆ, ತಡೆಗೋಡೆ ನಿರ್ಮಾಣದ ಶಿಲಾನ್ಯಾಸ ಪೂಜಾ ಕಾರ್ಯಕ್ರಮವು 30-5-2025ನೇ ಶುಕ್ರವಾರದಂದು ಜರಗಲಿರುವುದು.