ಮೂಡುಬಿದಿರೆ : ಪುರಾತನ ಶ್ರೀ ಆದಿಶಕ್ತಿ ಮಹಾಕಾಳಿ ದೇವಸ್ಥಾನದ ಸಾನ್ನಿಧ್ಯ ಬ್ರಹ್ಮಕಲಶಾಭಿಷೇಕ ಹಾಗೂ ವಾರ್ಷಿಕ ರಾಶಿ ಪೂಜಾ
ಮೂಡುಬಿದಿರೆ ಸ್ವರಾಜ್ಯ ಮೈದಾನದ ಪುರಾತನ ಶ್ರೀ ಆದಿಶಕ್ತಿ ಮಹಾಕಾಳಿ ದೇವಸ್ಥಾನದ ಸಾನ್ನಿಧ್ಯ ಬ್ರಹ್ಮಕಲಶಾಭಿಷೇಕ ಹಾಗೂ ವಾರ್ಷಿಕ ರಾಶಿ ಪೂಜಾ ಮಹೋತ್ಸವವು ಎಡಪದವು ವೇದಮೂರ್ತಿ ವೆಂಕಟೇಶ ತಂತ್ರಿ ಹಾಗೂ ಕುಂಗೂರು ಚಾವಡಿ ಮನೆ ಶಿವಪ್ರಸಾದ್ ಆಚಾರ್ ಅವರ ನೇತೃತ್ವದಲ್ಲಿ ಫೆ. 8ರಿಂದ ಫೆ. 17ರ ವರೆಗೆ ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆಯಲಿದೆ. ಫೆ. 11ರಂದು ಗಂಟೆ 10.50ಕ್ಕೆ ಸಾನ್ನಿಧ್ಯ ಬ್ರಹ್ಮಕಲಶಾಭಿಷೇಕ ಹಾಗೂ ಫೆ. 16ರಂದು ವಾರ್ಷಿಕ ರಾಶಿ ಪೂಜಾ ಮಹೋತ್ಸವವು ನಡೆಯಲಿದೆ. ಫೆ. 16ರಂದು ರಾತ್ರಿ 8ರಿಂದ ಮೂಲ ಮೈಸಂದಾಯ ಹಾಗೂ ಪಿಲಿಚಾಮುಂಡಿ ದೈವಗಳ ಗಗ್ಗರ ಸೇವೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮ: ಫೆ. 8ರಂದು ಸಂಜೆ ಗಂಟೆ 5.30ರಿಂದ ರಾತ್ರಿ 12ರ ತನಕ ಶ್ರೀ ಕ್ಷೇತ್ರ ಕಟೀಲು ಮೇಳದವರಿಂದ ಯಕ್ಷಗಾನ “ಶ್ರೀ ದೇವಿ ಮಹಾತ್ಮೆ”. ಫೆ. 9ರಂದು ಸಂಜೆ 6ರಿಂದ ಪೂರ್ಣಿಮಾ ಶೆಟ್ಟಿ ಮತ್ತು ಶಿಷ್ಯ ವೃಂದದವರಿಂದ “ಭರತನಾಟ್ಯ- ನೃತ್ಯ ಸಂಧ್ಯಾ” ಮತ್ತು ರಾತ್ರಿ 9ರಿಂದ ಶರತ್ ಶೆಟ್ಟಿ, ಕಿನ್ನಿಗೋಳಿ ಮತ್ತು ಅವಿಭಜಿತ ದ.ಕ. ಜಿಲ್ಲಾ ಖ್ಯಾತ ಹಾಸ್ಯ ಕೊಡುವಿಕೆಯಿಂದ ಹಾಸ್ಯಮಯ ತುಳು ನಾಟಕ “ಪಿರಾವುಡು ಒರಿ ಉಲ್ಲೆ”. ಫೆ. 10ರಂದು ರಾತ್ರಿ 7ಕ್ಕೆ ಗೀತ ನರ್ತನ (ರಿ.), ಭರತನಾಟ್ಯ ನೃತ್ಯ ಕೇಂದ್ರ, ಶಿವನಗರ, ಮೂಡುಶೆಡ್ಡೆ ವಿದುಷಿ ರಕ್ಷಿತಾ ಲಕ್ಷ್ಮಿ ನಾರಾಯಣ ಭಟ್ ಇವರ ಶಿಷ್ಯವರ್ಗದಿಂದ “ನೃತ್ಯ ವೈಭವ” ಮತ್ತು ರಾತ್ರಿ 9ಕ್ಕೆ ಝೀ ಕನ್ನಡ ಕಾಮಿಡಿ ಕಿಲಾಡಿಗಳು ಯುವ ಶೆಟ್ಟಿ ಬಳಗ, ಬೆಂಗಳೂರು ಇವರಿಂದ “ಹಾಸ್ಯ ಸಿಂಚನ”. ಫೆ. 11ರಂದು ರಾತ್ರಿ 8.30ಕ್ಕೆ ಸನಾತನ ನಾಟ್ಯಾಲಯ ಮಂಗಳೂರು ಮತ್ತು ಮೂಡುಬಿದಿರೆಯ ನೃತ್ಯ ವಿದ್ಯಾರ್ಥಿಗಳಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಶಿಷ್ಯ ವೃಂದದವರಿಂದ “ಸನಾತನ ನೃತ್ಯಾಂಜಲಿ” (ಭರತನಾಟ್ಯ, ದೇಶಭಕ್ತಿ ಗೀತೆಯ ನೃತ್ಯ ಮತ್ತು ಜಾನಪದ ನೃತ್ಯ) ಮತ್ತು ಅನೀಶ್ ಮತ್ತು ತಂಡ, ಮೂಡುಬಿದಿರೆ ಇವರಿಂದ “ನೃತ್ಯ ವೈವಿಧ್ಯ”. ಫೆ. 16ರಂದು ಮೂಡುಬಿದಿರೆಯ ಸೌಮ್ಯ, ಸರ್ವೇಶ್ ಜೈನ್ ಮತ್ತು ತಂಡ ಜೈನ್ ಬೀಟ್ಸ್ ಸಂಗೀತ ಸಂಸ್ಥಾನ ಇವರಿಂದ “ಸಂಗೀತ ರಸಸಂಜೆ” ಮತ್ತು ಕಲಾಶ್ರೀ ಕುಡ್ಲ ತಂಡದ ಮತ್ತು ಖ್ಯಾತ ಕಲಾವಿದರ ಕೊಡುವಿಕೆಯಿಂದ ಹಾಸ್ಯಮಯ ನಾಟಕ “ಕುಸಲ್ದ ಕುರ್ಲರಿ”.