Article Image

ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ಕೌಸಲ್ಯಾ ಧರಣೇಂದ್ರಯ್ಯರವರು ಆಯ್ಕೆ

Article Image

ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ಕೌಸಲ್ಯಾ ಧರಣೇಂದ್ರಯ್ಯರವರು ಆಯ್ಕೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕೊಡಮಾಡುವ "ದಾನ ಚಿಂತಾಮಣಿ ಅತ್ತಿಮಬ್ಬೆ " ಪ್ರಶಸ್ತಿಗೆ ಕೌಸಲ್ಯಾ ಧರಣೇಂದ್ರಯ್ಯರವರು ಭಾಜನರಾಗಿದ್ದಾರೆ. ಜನವರಿ 31ರಂದು ಸಂಜೆ 6 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ 5 ಲಕ್ಷ ರೂ.ಗಳ ನಗದು ಬಹುಮಾನವನ್ನು ನೀಡಿ ಸನ್ಮಾನಿಸಲಾಗುತ್ತದೆ.

ಚೇತನ್ ಫಣಿರಾಜ್ ಗೆ ಸನ್ಮಾನ

Article Image

ಚೇತನ್ ಫಣಿರಾಜ್ ಗೆ ಸನ್ಮಾನ

ಹಾಸನ: ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಆವರಣದಲ್ಲಿ ಸಹಕಾರ ಭಾರತಿ ಇತ್ತಿಚಿಗೆ ಆಯೋಜಿಸಿದ್ದ ಕ್ರೆಡಿಟ್ ಸೊಸೈಟಿಗಳ ರಾಷ್ಟ್ರೀಯ ಅಧಿವೇಶನದಲ್ಲಿ, 100 ವರ್ಷ ಪೂರೈಸಿರುವ ಕ್ರೆಡಿಟ್ ಸೊಸೈಟಿಗಳ ಸಹಕಾರ ಸನ್ಮಾನ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ಹಾಸನದ ಜೈನ ಮಂಡಳಿ ಪತ್ತಿನ ಸಹಕಾರ ಸಂಘಕ್ಕೆ 103 ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಪಟ್ಟಣ ಸಹಕಾರಿ ಬ್ಯಾಂಕುಗಳು ಮತ್ತು ಕ್ರೆಡಿಟ್ ಸೊಸೈಟಿಗಳ ರಾಷ್ಟ್ರೀಯ ಒಕ್ಕೂಟದ, ವತಿಯಿಂದ ಸಂಘದ ಅದ್ಯಕ್ಷರಾದ ಹೆಚ್.ಪಿ. ಚೇತನ್ ಫಣಿರಾಜ್ರವರನ್ನು ಸನ್ಮಾನಿಸಲಾಯಿತು. ಈ ಸಮಾರಂಭದಲ್ಲಿ ಭಾರತ ಸರ್ಕಾರದ ಕೇಂದ್ರ ಸಚಿವರಾದ ಭಗವತ ಕರಾಢ್, ಪಟ್ಟಣ ಸಹಕಾರಿ ಬ್ಯಾಂಕುಗಳು ಮತ್ತು ಕ್ರೆಡಿಟ್ ಸೊಸೈಟಿಗಳ ರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷರಾದ ಜ್ಯೋತಿಂದರ್ ಮೆಹ್ತಾರವರು ಮತ್ತು ಸಹಕಾರ ಭಾರತಿ ರಾಷ್ಟ್ರೀಯ ಅಧ್ಯಕ್ಷರಾದ ದೀನಾನಾಥ್ ಠಾಕೂರ್ ಇತರರು ಉಪಸ್ಥಿತರಿದ್ದರು.

ಪದ್ಮಾವತಿ ಅಮ್ಮ

Article Image

ಪದ್ಮಾವತಿ ಅಮ್ಮ

ಹಾಸನ ಜಿಲ್ಲೆಯ ಜಾವಗಲ್ ನ ನಿವಾಸಿ ಪದ್ಮಾವತಿ ಅಮ್ಮ (95ವ) ಇವರು ಜ. 8ರಂದು ನಿಧನ ಹೊಂದಿದರು. ಇವರು ಮಕ್ಕಳಾದ ಮರುದೇವಿಯಮ್ಮ, ಧರ್ಮಪಾಲ್ ಎಚ್. ಎ. ಮತ್ತು ಪೂರ್ಣಿಮಾ ಜೈನ್ ಹಾಗೂ ಅಪಾರ ಬಂಧು-ವರ್ಗವನ್ನು ಅಗಲಿದ್ದಾರೆ.

ಆದಿನಾಥ ಉಪಾಧ್ಯೆಗೆ ಪಿಎಚ್.ಡಿ

Article Image

ಆದಿನಾಥ ಉಪಾಧ್ಯೆಗೆ ಪಿಎಚ್.ಡಿ

ಬೆಳಗಾವಿ: ಗುಲ್ಬರ್ಗಾ ವಿಶ್ವವಿದ್ಯಾಲಯವು ಗಣಿತಶಾಸ್ತ್ರ ವಿಷಯದಲ್ಲಿ ‘ನ್ಯೂಮರಿಕಲ್ ಸ್ಟಡಿ ಆಫ್ ಸ್ಲೈಡರ್ ಆ್ಯಂಡ್ ಸ್ಕ್ವೀಝ್ ಫಿಲ್ಮ್ ಬೇರಿಂಗ್ಸ್ ಲೂಬ್ರಿಕೇಟೆಡ್ ವಿಥ್ ನಾನ್- ನ್ಯೂಟೋನಿಯನ್ ಪ್ಲೂಯಿಡ್’ ಎಂಬ ವಿಷಯದ ಕುರಿತು ಸಂಶೋಧನಾ ಮಹಾಪ್ರಬಂಧಕ್ಕೆ ಆದಿನಾಥ ಚಂದ್ರನಾಥ ಉಪಾಧ್ಯೆ ಅವರಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಿದೆ. ಮೂಲತಃ ಬಿಜಾಪುರ ಜಿಲ್ಲೆಯ ತಾಳಿಕೋಟೆಯ ಆದಿನಾಥ ಉಪಾಧ್ಯೆ ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಕಲಬುರ್ಗಿಯ ಜಿಲ್ಲೆಯ ಸೇಡಂನ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕ ಡಾ| ಕಾಶೀನಾಥ ಬಿರಾದಾರ ಮಾರ್ಗದರ್ಶಕರಾಗಿದ್ದರು. ಇವರು ತಾಳಿಕೋಟೆಯ ಚಂದ್ರನಾಥ ಜೆ. ಉಪಾಧ್ಯ ಮತ್ತು ವಿಜಯಮಾಲಾ ಚಂದ್ರನಾಥ ಉಪಾಧ್ಯ ದಂಪತಿಗಳ ಪುತ್ರ.

ಆಕರ್ಷಣಿ ಶೈಲೆಂದ್ರ ಕುಮಾರ್

Article Image

ಆಕರ್ಷಣಿ ಶೈಲೆಂದ್ರ ಕುಮಾರ್

ಅಜ್ಜಿಬೆಟ್ಟು ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ನ ಸಮೃದ್ಧಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾಗಿರುವ ಆಕರ್ಷಣಿ ಶೈಲೆಂದ್ರ ಕುಮಾರ್ ಇವರು ಬಂಟ್ವಾಳ ತಾಲೂಕು ಸಂಜೀವಿನಿ ಒಕ್ಕೂಟದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗಿರುತ್ತಾರೆ.

ಎಂ. ಬಾಹುಬಲಿ ಪ್ರಸಾದ್ ಇವರು ಪುನರ್ ಆಯ್ಕೆ

Article Image

ಎಂ. ಬಾಹುಬಲಿ ಪ್ರಸಾದ್ ಇವರು ಪುನರ್ ಆಯ್ಕೆ

ಮೂಡುಬಿದಿರೆ ಕೋ-ಓಪರೇಟಿವ್ ಸರ್ವಿಸ್ ಸೊಸೈಟಿ ಲಿ., ಇದರ ಅಧ್ಯಕ್ಷರಾಗಿ “ಸಹಕಾರ ರತ್ನ” ಎಂ. ಬಾಹುಬಲಿ ಪ್ರಸಾದ್ ನ್ಯಾಯವಾದಿ ಇವರು ಎರಡನೇ ಬಾರಿಗೆ ಸರ್ವಾನುಮತದಿಂದ ಪುನರ್ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಕೆ. ಅಭಯಚಂದ್ರ ಜೈನ್, ಅಶೋಕ ಕಾಮತ್ ಎಂ.ಪಿ., ಎಂ. ಜ್ಞಾನೇಶ್ವರ ಕಾಳಿಂಗ ಪೈ, ಜಯರಾಮ ಕೋಟ್ಯಾನ್, ಮನೋಜ್ ಕುಮಾರ್ ಶೆಟ್ಟಿ ಸಿ. ಎಚ್. ಅಬ್ದುಲ್ ಗಫೂರ್ ಆಯ್ಕೆಯಾಗಿದ್ದಾರೆ. ಈಗಾಗಲೇ ಎಂ. ಗಣೇಶ್ ನಾಯಕ್, ಜಾರ್ಜ್ ಮೋನಿಸ್, ಎಂ. ಪದ್ಮನಾಭ ಹಾಗೂ ದಯಾನಂದ ನಾಯ್ಕ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಡಾ. ಅಜಿತ ಮುರುಗುಂಡೆ

Article Image

ಡಾ. ಅಜಿತ ಮುರುಗುಂಡೆ

ಡಾ. ಅಜಿತ ಮುರುಗುಂಡೆ ಅವರ ಕೃತಿ ಕೆ. ಸಾ. ಪ. ದತ್ತಿನಿಧಿ ಪ್ರಶಸ್ತಿಗೆ ಆಯ್ಕೆ. ಕನ್ನಡ ಸಾಹಿತ್ಯ ಪರಿಷತ್ತು ೨೦೨೦ ಎರಡನೇ ಸಾಲಿನ ವಿವಿಧ ದತ್ತಿ ಪ್ರತಿ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಬೆಂಗಳೂರಿನ ಡಾ. ಅಜಿತ ಮುರಗುಂಡೆ ಇವರು ಬರೆದ ‘ರತ್ನಾಕರ ವರ್ಣಿಯ ಹಾಡುಗಳು, ಸಾಹಿತ್ಯ ಮತ್ತು ತಾತ್ವಿಕತೆ’ ಈ ಕೃತಿ ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲ ಶೆಟ್ಟಿ ಡಾ. ಮದನಕೇಸರಿ ಜೈನ ಸಾಹಿತ್ಯ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಸ್ತುತ ಇವರು ಯೋಜನೆ ಮತ್ತು ಸಾಂಖ್ಯಿಕ ಸಚಿವರ ವಿಶೇಷ ಅಧಿಕಾರಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ

First Previous

Showing 9 of 9 pages

Next Last