Article Image

ಮೂಡುಬಿದಿರೆ: ರತ್ನತ್ರಯ ಸೂತ್ರ ಧಾರಣೆ ಮತ್ತು ಬಸದಿಗಳಲ್ಲಿ ವಿಶೇಷ ಪೂಜೆ

Article Image

ಮೂಡುಬಿದಿರೆ: ರತ್ನತ್ರಯ ಸೂತ್ರ ಧಾರಣೆ ಮತ್ತು ಬಸದಿಗಳಲ್ಲಿ ವಿಶೇಷ ಪೂಜೆ

ಮೂಡುಬಿದಿರೆ: ಇಲ್ಲಿಯ ಶ್ರೀ ಜೈನ ಮಠದಲ್ಲಿ ಆ. 09ರಂದು ನೂಲ ಹುಣ್ಣಿಮೆ ಶ್ರಾವಣದ ದಿನ ಆಚರಿಸುವ ರತ್ನತ್ರಯ ಸೂತ್ರ ಧರಿಸುವ ಹಬ್ಬವನ್ನು ಆಚರಿಸಲಾಯಿತು. ಕಾಶಿಯ 18 ಬಸದಿಗಳಲ್ಲಿ ವಿಶೇಷ ಪೂಜೆ, ಹವನ ಮೂಲಕ ಶ್ರಾವಕರು ರತ್ನತ್ರಯ ಸೂತ್ರ ಧರಿಸಿದರು. ಆಚಾರ್ಯ ಗುಲಾಬ್ ಭೂಷಣ ಮುನಿರಾಜ್ ಉಪಸ್ಥಿತರಿದ್ದರು. ಧರ್ಮ ನಿರತರಾದವರಿಗೆ ರಕ್ಷಣೆ ನೀಡುವ ಭಾವನೆ ಮಾಡುವ ದಿನ ಎಂದು ಇಂದು ಶ್ರೀ ಮಠದಲ್ಲಿ ಹವನದ ಬಳಿಕ ಜನಿವಾರ ಧಾರಣೆ ಸಂದರ್ಭದಲ್ಲಿ ಮೂಡುಬಿದಿರೆ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಚಾರ್ಯವರ್ಯ ಮಹಾಸ್ವಾಮೀಜಿ ತಮ್ಮ ಅನುಗ್ರಹ ಆಶೀರ್ವಾದದಲ್ಲಿ ತಿಳಿಸಿದರು. ಅಪರಾಹ್ನ ಶ್ರೀ ಮಠದ ಶಾಂತಿ ಭವನದಲ್ಲಿ ಶಾಂತಿ ಚಕ್ರ ಆರಾಧನೆಯ 16ನೇ ಆರಾಧನೆ ಸಮಾಪನಗೊಂಡಿತು. ಆಚಾರ್ಯರ ಭಟ್ಟಾರಕರ ಪಾದ ಪೂಜೆ ಆರತಿ ಮಾಡಿ ಭಕ್ತವೃಂದ ಧರ್ಮಲಾಭಗಳಿಸಿದರು. ಅಭಯ ಚಂದ್ರ ಜೈನ್, ತಿಲಕ್ ಪ್ರಸಾದ್, ದರ್ಶನ್ ಶೆಟ್ಟಿ, ಸಂಜಯಂತ ಕುಮಾರ್, ಸುದೇಶ್ ಬೆಟ್ ಕೇರಿ, ಶ್ವೇತಾ ಜೈನ್ ಸೂರಜ್, ಮೊದಲಾದವರು ಉಪಸ್ಥಿತರಿದ್ದರು. ಉ.ಪ್ರ, ಮಹಾರಾಷ್ಟ್ರ, ಮ.ಪ್ರ, ಇಂದೂರಿನ ನೂರಾರು ಸಂಖ್ಯೆಯ ಭಕ್ತರು ಶ್ರೀಗಳಿಂದ ಜನಿವಾರ ಹಾಗೂ ರಕ್ಷಾ ಸೂತ್ರ ಪಡೆದರು.

ಮೂಡುಬಿದಿರೆಯಲ್ಲಿ ತೋಟಗಾರಿಕಾ ಬೆಳೆಗಳ ಸಂಸ್ಕರಣೆ, ಯೋಜನೆ, ತರಬೇತಿ, ಚರ್ಚಾ ಗೋಷ್ಠಿ

Article Image

ಮೂಡುಬಿದಿರೆಯಲ್ಲಿ ತೋಟಗಾರಿಕಾ ಬೆಳೆಗಳ ಸಂಸ್ಕರಣೆ, ಯೋಜನೆ, ತರಬೇತಿ, ಚರ್ಚಾ ಗೋಷ್ಠಿ

ಮಂಗಳೂರು ಜಿಲ್ಲಾ ಪಂಚಾಯತ್ ತೋಟಗಾರಿಕಾ ಇಲಾಖೆ, ಮೂಡುಬಿದಿರೆ ಕೃಷಿ ವಿಚಾರ ವಿನಿಮಯ ಕೇಂದ್ರ, ರೈತ ಜನ್ಮಯ ರೈತ ಉತ್ಪಾದಕರ ಕಂಪನಿ, ಮೂಡುಬಿದರೆ ಕೋ ಆಪರೇಟಿವ್ ಸರ್ವಿಸ್ ಸೊಸೈಟಿಗಳ ಜಂಟಿ ಸಹಭಾಗಿತ್ವದಲ್ಲಿ ತೋಟಗಾರಿಕೆ ಪಿತಾಮಹ ದಿ. ಡಾ. ಎಂ.ಎಚ್. ಮರಿಗೌಡ ಜನ್ಮ ದಿನಾಚರಣೆ ಅಂಗವಾಗಿ ತೋಟಗಾರಿಕೆ ಬೆಳೆಗಳಲ್ಲಿ ಸಂಸ್ಕರಣೆ, ಯೋಜನೆ, ತರಬೇತಿ ಹಾಗೂ ಚರ್ಚಾ ಗೋಷ್ಠಿ ಆಗಸ್ಟ್ 8ರಂದು ಮೂಡುಬಿದಿರೆ ಕೋ ಆಪರೇಟಿವ್ ಸರ್ವಿಸ್ ಸೊಸೈಟಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಕಲ್ಪವೃಕ್ಷ ಕ್ಕೆ ನೀರು ಎರೆದು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಎಂಸಿಎಸ್ ಬ್ಯಾಂಕಿನ ಅಧ್ಯಕ್ಷ ಬಾಹುಬಲಿ ಪ್ರಸಾದ್ ಮಾತನಾಡಿ ಕೃಷಿಕರಿಗೆ ನಮ್ಮ ಸೊಸೈಟಿ ಉತ್ತೇಜನವನ್ನು ನೀಡುತ್ತಿದೆ ಆ ಎಲ್ಲಾ ಸೌಲಭ್ಯಗಳನ್ನು ಕೃಷಿಕರು ಉಪಯೋಗಿಸಿಕೊಳ್ಳಬೇಕೆಂದು ಕೇಳಿಕೊಂಡರು. ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಪ್ರವೀಣ್ ಕೆ. ಅವರು ತೋಟಗಾರಿಮೋವಾಬಕೆ ಬೆಳೆಗಳ ಸಂಸ್ಕರಣೆ, ಯೋಜನೆಗಳ ಬಗ್ಗೆ ತರಬೇತಿಯನ್ನು ನೀಡಿದರು. ಆರಂಭದಲ್ಲಿ ಕೃಷಿ ವಿಚಾರ ವಿನಿಮಯ ಕೇಂದ್ರದ ಹಿರಿಯ ಸದಸ್ಯರಾದ ರಾಜವಮ೯ ಬೈಲಂಗಡಿಯವರು ಪ್ರಸ್ಥಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಎಂಸಿಎಸ್ ಬ್ಯಾಂಕಿನ ಕಾಯ೯ನಿವಾಕರಾದ ರಘುವೀರ್ ಕಾಮತ್, ಕೃಷಿ ವಿಚಾರ ಕೇಂದ್ರದ ಅಧ್ಯಕ್ಷ ಅಭಯ ಕುಮಾರ್, ರೈತಜನ್ಯ ಸಂಸ್ಥೆಯ ಅಧ್ಯಕ್ಷ ಲಿಯೋ ವಾಲ್ಟರ್ ನಜ್ರೆತ್, ಹಾಜರಿದ್ದರು. ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಪ್ರವೀಣ್ ಕೆ. ಅವರು ಸ್ವಾಗತಿಸಿ ವಂದಿಸಿದರು. ಸದಾನಂದ ನಾರಾವಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಇನ್ನರ್ ವೀಲ್ ಕ್ಲಬ್ ಮೂಡುಬಿದಿರೆ: ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ

Article Image

ಇನ್ನರ್ ವೀಲ್ ಕ್ಲಬ್ ಮೂಡುಬಿದಿರೆ: ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ

ಮಹಿಳಾ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು( ಗ್ರಾ)ಮತ್ತು ಇನ್ನರ್ ವೀಲ್ ಕ್ಲಬ್ ಇವರ ಸಹಯೋಗದೊಂದಿಗೆ ದ.ಕ.ಜಿ.ಪ. ಉನ್ನತೀಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮೈನ್ ಇದರ ಸಭಾಂಗಣದಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ಪುಚ್ಚೇರಿ ಕಟ್ಟೆ ಅಂಗನವಾಡಿ ಕಾರ್ಯಕರ್ತೆ ವಿಜಯರವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕೆ ಕಾರಿಗಿ ಇವರು ಸ್ತನ್ಯಪಾನ ಸಪ್ತಾಹವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಸ್ತನ್ಯಪಾನದ ಮಹತ್ವ ಹಾಗೂ ಎಲ್ಲಾ ಮಹಿಳೆಯರಿಗೆ ಇದರ ಅರಿವನ್ನು ಮೂಡಿಸುವಲ್ಲಿ ಆರೋಗ್ಯ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಂಘ-ಸಂಸ್ಥೆಗಳ ಜವಾಬ್ದಾರಿಗಳನ್ನು ತಿಳಿಸುತ್ತಾ ಇನ್ನರ್ ವೀಲ್ ಕ್ಲಬ್ ನ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದರು. ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷೆಯಾಗಿರುವ ನೋಟರಿ ನ್ಯಾಯವಾದಿಗಳಾದ ಶ್ವೇತ ಜೈನ್ ಸ್ತನ್ಯಪಾನವು ಹೇಗೆ ಶಿಶುವಿನ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ ಎಂಬುದನ್ನು ತಿಳಿಸಿದರು. ಸಂಪನ್ಮೂಲ ವ್ಯಕ್ತಿ ಸಮುದಾಯ ಆರೋಗ್ಯ ಕೇಂದ್ರ ಮೂಡುಬಿದ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಅಕ್ಷತಾ ನಾಯಕ್ ಎದೆ ಹಾಲಿನಿಂದ ತಾಯಿಗೆ ಮತ್ತೆ ಮಗುವಿಗೆ ಆಗುವ ಪ್ರಯೋಜನಗಳು ಎದೆ ಹಾಲು ಉಣಿಸುವಿಕೆಗೆ ಕುಟುಂಬ ಹಾಗೂ ಸಮಾಜದ ಪ್ರೋತ್ಸಾಹದ ಅಗತ್ಯತೆ, ಸ್ವಚ್ಛತಾ ಕ್ರಮಗಳು, ಪಾಲಿಸಬೇಕಾದ ಆಹಾರ ಕ್ರಮಗಳು ಮುಂತಾದ ಸವಿವರ ಮಾಹಿತಿಯನ್ನು ನೀಡಿದರು. ಪುರಸಭಾ ಸದಸ್ಯರಾದ ಪುರಂದರ ದೇವಾಡಿಗರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷೆತೆ ಇದ್ದ ಪುರಸಭಾ ಸದಸ್ಯರಾದ ಶಕುಂತಲಾ ದೇವಾಡಿಗರವರು ಕಾರ್ಯಕ್ರಮದ ಆಯೋಜನೆ ಹಾಗೂ ಯಶಸ್ಸಿನ ಬಗ್ಗೆ ಸಂತೋಷ ವ್ಯಕ್ತಪಡಿಸಿ ಶುಭ ಹಾರೈಸಿದರು. ಇನ್ನರ್ ವೀಲ್ ಕ್ಲಬ್ ವತಿಯಿಂದ ಆಗಮಿಸಿದ ಎಲ್ಲಾ ತಾಯಂದಿರಿಗೆ ಪ್ರೋತ್ಸಾಹದಾಯಕ ಸ್ಮರಣಿಕೆಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಕ್ಲಬ್ ಕಾರ್ಯದರ್ಶಿ ಅನಿತಾ ಪೃಥ್ವಿರಾಜ್, ಸಂಯೋಜಕಿ ಸುಜಾತ ಜೈನ್, ಶಾಲಿನಿ ನಾಯಕ್, ಪ್ರಕಾಶಿನಿ ಹೆಗ್ಡೆ, ಸುಜಯ ವೇದ ಕುಮಾರ್, ರತ್ನ ಪರಾಡ್ಕರ್, ವೀಣಾ ಜೈನ್, ಸ್ವಾತಿ ಬೋರ್ಕರ್ ಉಪಸ್ಥಿತರಿದ್ದರು. ಹಿರಿಯ ಮೇಲ್ವಿಚಾರಕಿ ಕಾತ್ಯಾಯಿನಿ ಶಾಲಾ ಸಹ ಶಿಕ್ಷಕಿ ಪ್ಲಾವಿಯಾ ಅಂಗನವಾಡಿ ಕಾರ್ಯಕರ್ತೆಯರಾದ ಸುಮತಿ, ವಿಜಯ, ಹೇಮಾವತಿ, ನಿರ್ಮಲ, ಪ್ರಿಯದರ್ಶಿನಿ ಎಸ್ ಜೈನ್, ವಿದ್ಯಾ, ಸಹಾಯಕಿ ಮಂಜವ್ವ, ಆರೋಗ್ಯ ಇಲಾಖೆಯ ಸಿಬ್ಬಂದಿ ಅನ್ನಪೂರ್ಣ ಬಾಲ ವಿಕಾಸ ಸಮಿತಿ ಸದಸ್ಯರು, ತಾಯಂದಿರು, ಪುಟಾಣಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಮೇಲ್ವಿಚಾರಕಿಯಾದ ಕಾತ್ಯಾಯಿನಿಯವರು ಎಲ್ಲರನ್ನು ಸ್ವಾಗತಿಸಿ ಪ್ರಿಯದರ್ಶಿನಿ ಎಸ್ ಜೈನ್ ನಿರೂಪಿಸಿ, ಸುಮತಿ ಧನ್ಯವಾದವಿತ್ತರು.

ದಕ್ಷಿಣ ಭಾರತ ಜೈನ ಸಭಾ ಸಾಂಗ್ಲಿ ಇದರ ಹುಬ್ಬಳ್ಳಿ ವಿಭಾಗೀಯ ನೂತನ ಪದಾಧಿಕಾರಿಗಳು

Article Image

ದಕ್ಷಿಣ ಭಾರತ ಜೈನ ಸಭಾ ಸಾಂಗ್ಲಿ ಇದರ ಹುಬ್ಬಳ್ಳಿ ವಿಭಾಗೀಯ ನೂತನ ಪದಾಧಿಕಾರಿಗಳು

ದಕ್ಷಿಣ ಭಾರತ ಜೈನ ಸಭೆ ಸಾಂಗ್ಲಿ ಇದು ಜೈನ ಸಮುದಾಯದ ಅತ್ಯಂತ ಪ್ರತಿಷ್ಠಿತ ಮತ್ತು ಬಹು ರಾಜ್ಯಗಳ ಜೈನರ ಪ್ರಾತಿನಿಧಿಕ ಸಂಸ್ಥೆ ಎಂದೇ ಕರೆಯಲ್ಪಡುವ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ವಿವಿಧ ರೀತಿಯಲಿ ಸೇವೆಸಲ್ಲಿಸುತ್ತಿರುವ ಶತಮಾನದ ಇತಿಹಾಸ ಹೊಂದಿರುವ ಒಂದು ಬೃಹತ್ ಸಂಸ್ಥೆ. ಈ ಸಂಸ್ಥೆಯು ಹುಬ್ಬಳ್ಳಿ ವಿಭಾಗೀಯ ಆಡಳಿತ ಮಂಡಳಿಯನ್ನು ಹೊಂದಿದೆ. ಹುಬ್ಬಳ್ಳಿಯಲ್ಲಿ ದಿಗಂಬರ ಜೈನ ಬೋರ್ಡಿಂಗ ಶಾಖೆಯ ಮೂಲಕ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡದ್ದು ಇದಕ್ಕಾಗಿ ನೂತನವಾಗಿ ಪದಾಧಿಕಾರಿಗಳ ಆಯ್ಕೆ ಇತ್ತೀಚಿಗೆ ತ್ರೈವಾರ್ಷಿಕ ಅಧಿವೇಶನದಲ್ಲಿ ನಡೆಯಿತು. ಈ ವಿಭಾಗೀಯ ಪದಾಧಿಕಾರಿಗಲ್ಲಿ ಟ್ರಸ್ಟಿಯಾಗಿ ಹುಬ್ಬಳ್ಳಿ ನಗರದ ಖ್ಯಾತ ಚಾರ್ಟರ್ಡ್ ಅಕೌಂಟೆಂಟ್ ಆರ್. ಟಿ. ಅಣ್ಣಿಗೇರಿ, ಉಪಾಧ್ಯಕ್ಷರಾಗಿ ನವಲಗುಂದದ ಸಮಾಜದ ಮುಖಂಡರಾದ ಬಾಹುಬಲಿ ಬಸ್ತಿ, ಮಹಾಮಂತ್ರಿಯಾಗಿ ಹುಬ್ಬಳ್ಳಿಯ ಪ್ರಸಿದ್ದ ವ್ಯಾಪಾರೋದ್ಯಮಿ ಭರತರಾಜ ಆರ್ ಬೀಳಗಿ, ಮಹಿಳಾ ಮಹಾಮಂತ್ರಿಯಾಗಿ ಹಿರಿಯ ಧರ್ಮಾನುರಾಗಿ ಹಿರಿಯ ಶ್ರಾವಕಿ ಪಂಕಜಾ ಎಮ್. ಸೂಜಿ ಇವರು ಆಯ್ಕೆಯಾಗಿದ್ದಾರೆ. ಎಸ್. ಆರ್. ಮಲ್ಲಸಮುದ್ರ

ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ

Article Image

ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ

ಕಡಬ : ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ಚಂದನ ಸಾಹಿತ್ಯ ವೇದಿಕೆ ಸುಳ್ಯ ವತಿಯಿಂದ 2024 ನೇ ಸಾಲಿನ ಚಂದನ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೇದಿಕೆಯ 20ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮ ಆಗಸ್ಟ್ 03 ರಂದು ಸುಳ್ಯ ದಲ್ಲಿ ನಡೆದಿದ್ದು, ಸಾಹಿತ್ಯ ಕೃಷಿಗಾಗಿ ಈ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಇವರು ಕಡಬ ತಾಲೂಕಿನ ಹೊಸಂಗಡಿ ಬಸದಿ ನೂಜಿಬಾಳ್ತಿಲದ ಧರಣೇoದ್ರ ಇಂದ್ರ ಮತ್ತು ಮಂಜುಳಾರವರ ಸುಪುತ್ರರಾಗಿರುತ್ತಾರೆ.

ರಾಜಸ್ಥಾನದ, ಜೈಪುರ: ಮಹಿಳೆಯರ ವಾಲಿಬಾಲ್ ಪಂದ್ಯಾಟದಲ್ಲಿ ರಾಷ್ಟ್ರಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಲಾಸ್ಯರಾಜ್

Article Image

ರಾಜಸ್ಥಾನದ, ಜೈಪುರ: ಮಹಿಳೆಯರ ವಾಲಿಬಾಲ್ ಪಂದ್ಯಾಟದಲ್ಲಿ ರಾಷ್ಟ್ರಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಲಾಸ್ಯರಾಜ್

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ವಿದ್ಯಾರ್ಥಿನಿಯಾದ ಲಾಸ್ಯರಾಜ್ ಇವಳು ರಾಜಸ್ಥಾನದ ಜೈಪುರದಲ್ಲಿ ನಡೆದ ಮಹಿಳೆಯರ ವಾಲಿಬಾಲ್ ಪಂದ್ಯಾಟದಲ್ಲಿ ರಾಷ್ಟ್ರಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿರುತ್ತಾಳೆ. ಇವಳು ವೀರವನ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಎಸ್. ಬಿ. ನರೇಂದ್ರ ಕುಮಾರ್ ಇವರ ಮೊಮ್ಮಗಳು ಹಾಗೂ ಸಿದ್ಧಾಂತ್ ಕೀರ್ತಿರಾಜ್ ಮತ್ತು ಸೌಭಾಗ್ಯ ಇವರ ಪುತ್ರಿ. ಇವರಿಗೆ ಎಸ್. ಡಿ.ಎಂ ಶಿಕ್ಷಣ ಸಂಸ್ಥೆಗಳ ಕ್ರೀಡಾ ಕಾರ್ಯದರ್ಶಿಗಳು ಹಾಗೂ ವಾಲಿಬಾಲ್ ತರಬೇತುದಾರರಾದ ರಮೇಶ್ ಹೆಚ್ ಇವರು ಸಹಕರಿಸಿ ಮಾರ್ಗದರ್ಶನವನ್ನು ನೀಡಿದರು.

ನವನಗರ ಸೇವಾ ಸಂಘಕ್ಕೆ ಕಾರ್ಯಧ್ಯಕ್ಷರ ನೇಮಕ

Article Image

ನವನಗರ ಸೇವಾ ಸಂಘಕ್ಕೆ ಕಾರ್ಯಧ್ಯಕ್ಷರ ನೇಮಕ

ಹುಬ್ಬಳ್ಳಿ ನವನಗರದ ಅಲ್ಪಸಂಖ್ಯಾತ ಜೈನ ಸೇವಾ ಸಂಘದ ಕಾರ್ಯಧ್ಯಕ್ಷರಾಗಿ ಅಶೋಕ ಯೋಗಪ್ಪನವರ ಇವರನ್ನು ಸಂಘದ ಅಧ್ಯಕ್ಷರಾದ ಶಾಂತರಾಜ ಮಲ್ಲಸಮುದ್ರ ಇವರು ನೇಮಕ ಮಾಡಿದ್ದಾರೆ. ಇತ್ತೀಚೆಗೆ ನಡೆದ ಸಂಘದ ವಾರ್ಷಿಕ ಸರ್ವಸಾದಾರಣ ಸಭೆಯಲ್ಲಿ ಸರ್ವನುಮತದಿಂದ ಇವರನ್ನು ಆಯ್ಕೆ ಮಾಡಲಾಗಿದೆ. ಅಶೋಕ ಯೋಗಪ್ಪನವರ ಇವರು ಎರಡು ದಿನಗಳ ಹಿಂದೆ ಸಮಾಜ ಕಲ್ಯಾಣ ಇಲಾಖೆಯಲ್ಲಿ 37 ವರ್ಷ ದಕ್ಷ ಪ್ರಾಮಾಣಿಕವಾಗಿ ಸುದೀರ್ಘ ಸೇವೆ ಸಲ್ಲಿಸಿ ಸಹಾಯಕ ನಿರ್ದೇಶಕರಾಗಿ ವಯೋನಿವೃತ್ತಿ ಹೊಂದಿದರು. ಕಳೆದ 12 ವರ್ಷಗಳಿಂದ ಸಮಾಜದ ಎಲ್ಲ ಕಾರ್ಯಗಳಲ್ಲಿ ಸಂಘದ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದು ಧಾರ್ಮಿಕ ಚಟುವಟಿಕೆಯಲ್ಲಿ ಕ್ರೀಯಾಶೀಲವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಎಸ್ ಆರ್ ಮಲ್ಲಸಮುದ್ರ

ಜಾನುವಾರು ಅಧಿಕಾರಿಯವರಾದ ಸುಕೀರ್ತಿ ಜೈನ್ ವಯೋನಿವೃತಿ

Article Image

ಜಾನುವಾರು ಅಧಿಕಾರಿಯವರಾದ ಸುಕೀರ್ತಿ ಜೈನ್ ವಯೋನಿವೃತಿ

ವೇಣೂರು ಪಶು ಚಿಕಿತ್ಸಾಲಯದ ಜಾನುವಾರು ಅಧಿಕಾರಿಯವರಾದ ಸುಕೀರ್ತಿ ಜೈನ್ ಇವರು 39 ವರ್ಷ ಸರ್ಕಾರಿ ಸೇವೆ ನಿರ್ವಹಿಸಿ ವಯೋನಿವೃತಿಯಾದ ಸಂದರ್ಭದಲ್ಲಿ ಸನ್ಮಾನ ಮಾಡಿ ಅಭಿನಂದಿಸಲಾಯಿತು. ‌ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಉಪನಿರ್ದೇಶಕರಾದ ಡಾ. ಅರುಣ ಕುಮಾರ ಶೆಟ್ಟಿ ವಹಿಸಿದ್ದರು. ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ ಇವರು ಆಗಮಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ಪಶು ಚಿಕಿತ್ಸಾಲಯದ ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ) ಡಾ. ರವಿಕುಮಾರ್, ರಾಜ್ಯ ಸರ್ಕಾರಿ ಅಧಿಕಾರಿಗಳ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಡಾ. ಜಯಕೀರ್ತಿ ಜೈನ್, ಬೆಳ್ತಂಗಡಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಜಯರಾಜ್ ಜೈನ್, ಪಶು ವೈದ್ಯಕೀಯ ಪರೀಕ್ಷಕರ ಜಿಲ್ಲಾ ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿ, ಡಾ| ಸಂತೋಷ್ ಗೌಡ, ಡಾ| ಯತೀಶ್, ಡಾ| ವಿನಯ್ ಕುಮಾರ್, ನಿವೃತ್ತ ಜಾನುವಾರು ಅಭಿವೃದ್ಧಿ ಅಧಿಕಾರಿ ಶ್ರೀಧರ್ ಶೆಟ್ಟಿ, ಹಾಗೂ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು., ಜಾನುವಾರು ಅಧಿಕಾರಿಗಳವರಾದ ನಾಗಶಯನ, ಪ್ರಶಾಂತ್ ಕುಮಾರ್ ಮತ್ತು ಪಶು ವೈದ್ಯ ಪರೀಕ್ಷಕ ಸದಾಶಿವ ಭಟ್ ಕಾರ್ಯಕ್ರಮವನ್ನು ನಿರ್ವಹಿಸಿದರು.

ರಾಜರತ್ನ ಕೆ. ನಿಧನ

Article Image

ರಾಜರತ್ನ ಕೆ. ನಿಧನ

ಧಾರ್ಮಿಕ ಮುಖಂಡ, ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮ ಕೊಡಂಗೆ ಮನೆ, ಹಿರಿಯ ಮುತ್ಸದಿ ಶ್ರೀ ರಾಜರತ್ನ ಕೆ (74), ಇವರು 2025ನೇ ಜುಲೈ 24 ರಂದು ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ ರಾಜೇಂದ್ರ ಜೈನ್ ಮತ್ತು ಸೊಸೆ, ಪುತ್ರಿ ಮೂಡುಬಿದಿರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಹಾಗೂ ಅಳಿಯ ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್ ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಮಾನ್ಯರು ಬಂಟ್ವಾಳದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲ್ಯಾಣ ಮಂಟಪದಲ್ಲಿ ಮ್ಯಾನೇಜರ್ ಆಗಿ ಸುಮಾರು 25 ವರ್ಷಗಳ ಕಾಲ ಸಾರ್ಥಕ ಸೇವೆ ಸಲ್ಲಿಸಿದ್ದರು. ಸಮಾಜದ ಎಲ್ಲ ವರ್ಗದ ಜನರ ಧಾರ್ಮಿಕ, ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಪ್ರೀತಿಪಾತ್ರರಾಗಿ ಜನಾನುರಾಗಿಯಾಗಿದ್ದರು. ಬಾಳ್ತಿಲ ಗ್ರಾಮದ ಆದರ್ಶ ಪ್ರಗತಿಪರ ಕೃಷಿಕರಾಗಿ, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿಯೂ ಹಲವಾರು ಜನಪರ ಕಾಳಜಿಯಿಂದ ಸೇವೆ ಸಲ್ಲಿಸಿದ ಅವರು ಮೂಡುಬಿದಿರೆ ಎಕ್ಸಲೆಂಟ್ ಸಂಸ್ಥೆಯ ಟ್ರಸ್ಟಿಯಾಗಿದ್ದರು. ಜೈನ್ ಮಿಲನ್, ಪಂಚಕಲ್ಯಾಣದಂತಹ ಕಾರ್ಯಕ್ರಮಗಳಲ್ಲಿ ಪ್ರೇರಕರಾಗಿ ಕಾರ್ಯನಿರ್ವಹಿಸಿದ್ದರು.

ಮಹಿಳೆಯರ ಸೇವಾ ಸಾಧನೆ ಸ್ತುತ್ಯರ್ಹ- ಅನಿತಾ ಸುರೇಂದ್ರ ಕುಮಾರ್

Article Image

ಮಹಿಳೆಯರ ಸೇವಾ ಸಾಧನೆ ಸ್ತುತ್ಯರ್ಹ- ಅನಿತಾ ಸುರೇಂದ್ರ ಕುಮಾರ್

ಮೂಡುಬಿದಿರೆ: ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಸೇವೆ ಮತ್ತು ಸಾಧನೆಯ ಮೂಲಕ ಸ್ತುತ್ಯರ್ಹ ಕಾರ್ಯ ಮಾಡುತ್ತಿದ್ದಾರೆ. ಇಂತಹ ಸೇವೆ, ಸಾಧನೆಗಳು ನಿರಂತರ ಮುಂದುವರಿಯಲಿ ಎಂದು ಭಾರತೀಯ ಜೈನ್ ಮಿಲನ್ ನ ಉಪಾಧ್ಯಕ್ಷೆಯೂ ಆಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಅನಿತಾ ಸುರೇಂದ್ರ ಕುಮಾರ್ ನುಡಿದರು. ಜು. 21ರಂದು ಸಂಜೆ ವಿದ್ಯಾಗಿರಿಯ ಕೃಷಿಸಿರಿ ವೇದಿಕೆಯಲ್ಲಿ ನಡೆದ ಮೂಡುಬಿದಿರೆ ಇನ್ನರ್ ವೀಲ್ ಕ್ಲಬ್ ನೂತನ ಅಧ್ಯಕ್ಷೆ ನ್ಯಾಯವಾದಿ ಶ್ವೇತಾ ಜೈನ್, ಕಾರ್ಯದರ್ಶಿ ಅನಿತಾ ಪಿ. ಶೆಟ್ಟಿ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಮೂಡುಬಿದಿರೆಯ ಇನ್ನರ್ ವೀಲ್ ಕ್ಲಬ್ ಕಳೆದ 35 ವರ್ಷಗಳಿಂದ ಗೈದಿರುವ ಸೇವೆ ಸಾಧನೆಗಳನ್ನು ಗಮನಿಸುತ್ತಾ ಬಂದಿದ್ದೇನೆ. ವಿದ್ಯಾಗಿರಿ, ನಿಶ್ಮಿತಾ ಟವರ್ ಬಳಿಯ ಬಸ್ ತಂಗುದಾಣ, ಇನ್ನರ್ ವೀಲ್ ಕ್ಲಬ್ ವೃತ್ತಗಳು ಮೂಡುಬಿದಿರೆಯಲ್ಲಿ ಕ್ಲಬ್ ಹಮ್ಮಿಕೊಂಡಿರುವ ಸೇವೆಯ ಪ್ರತೀಕವಾಗಿದ್ದು, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕ್ಲಬ್‌ನ ಎಲ್ಲಾ ಹಿರಿಯ ಸದಸ್ಯೆಯರು ಅಭಿನಂದನೀಯರು ಎಂದು ನುಡಿದರು. ಇನ್ನರ್ ವೀಲ್ ಕ್ಲಬ್ ಜಿಲ್ಲಾ ಉಪಾಧ್ಯಕ್ಷೆ ರಜನಿ ಭಟ್ ಅವರು ಮಾತನಾಡಿ ಒಂದು ಹೆಜ್ಜೆ ಮುಂದೆ ಹೋಗಿ ಮಾದರಿ ನಾಯಕತ್ವ ಈ ವರ್ಷ ಇನ್ನರ್ ವೀಲ್ ಕ್ಲಬ್‌ನ ಧ್ಯೇಯವಾಕ್ಯವಾಗಿದ್ದು ಮೂಡುಬಿದಿರೆ ಇನ್ನರ್ ವೀಲ್ ಕ್ಲಬ್ ನ ನೂತನ ಅಧ್ಯಕ್ಷೆ ಶ್ವೇತಾ ಜೈನ್ ಒಂದು ಹೆಜ್ಜೆ ಮುಂದೆ ಹೋಗಿ 33 ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದನ್ನು ಶ್ಲಾಘಿಸಿ ಶುಭ ಕೋರಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮೂಡುಬಿದಿರೆ ರೋಟರಿ ಕ್ಲಬ್ ಅಧ್ಯಕ್ಷ ನಾಗರಾಜ್ ಹಗಡೆಯವರು ಮಾತನಾಡಿ ಸ್ನೇಹ ಮತ್ತು ಸೇವೆ ಇನ್ನರ್ ವೀಲ್ ಕ್ಲಬ್‌ನ ಧ್ಯೇಯವಾಗಿದ್ದು ಈ ಆಶಯದೊಂದಿಗೆ ನಡೆಯುವ ಕ್ಲಬ್‌ನ ಎಲ್ಲಾ ಚಟುವಟಿಕೆಗಳಿಗೆ ಪೂರ್ಣ ಬೆಂಬಲ ನೀಡುವ ಭರವಸೆಯಿತ್ತರು. ನೂತನ ಅಧ್ಯಕ್ಷೆ ಶ್ವೇತಾ ಜೈನ್ ಅವರು ಮಾತನಾಡಿ ಕ್ಲಬ್‌ನ ಹಿರಿಯ ಸದಸ್ಯೆಯರಾದ ಶಾಲಿನಿ ನಾಯಕ್, ಜಯಶ್ರೀ ಅಮರನಾಥ ಶೆಟ್ಟಿ, ಪ್ರಕಾಶಿನಿ ಹೆಗ್ಡೆ ಮುಂತಾದವರ ಪಾರದರ್ಶಕ ನಾಯಕತ್ವ ತಮಗೆ ಮಾದರಿಯಾಗಿದ್ದು, ತಮ್ಮ ಕಕ್ಷಿದಾರರಿಗೆ ಯಾವುದೇ ತೊಂದರೆಯಾಗದಂತೆ ವಕೀಲ ವೃತ್ತಿಯನ್ನು ಮುಂದುವರಿಸಿ, ಕ್ಲಬ್‌ ಮುಖಾಂತರ ಹಮ್ಮಿಕೊಳ್ಳುವ ಎಲ್ಲಾ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಭರವಸೆಯಿತ್ತರು. ಸೇವಾ ಕಾರ್ಯಕ್ರಮದ ಅಂಗವಾಗಿ ದ್ವಿತೀಯ ಬಿ.ಕಾಂ. ವ್ಯಾಸಂಗ ಮಾಡುತ್ತಿರುವ ಕುಸುಮಾ ಅವರಿಗೆ ರೂ. 15 ಸಾವಿರ ಸಹಾಯಧನ, ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ರೂ. 10 ಸಾವಿರದ ಪುಸ್ತಕಗಳು, ಮೂಡುಬಿದಿರೆ ಪ್ರೆಸ್ ಕ್ಲಬ್ ನೂತನ ಕಟ್ಟಡ ನಿರ್ಮಾಣಕ್ಕೆ ರೂ. 10 ಸಾವಿರ ಕೊಡುಗೆ ಹಾಗೂ ಎಸ್.ಎನ್. ಮೂಡುಬಿದಿರೆ ಪಾಲಿಟೆಕ್ನಿಕ್ ನ ಹಸಿ ಮತ್ತು ಒಣ ಕಸ ಸಂಗ್ರಹಣಾ ವ್ಯವಸ್ಥೆಗೆ ರೂ. 5ಸಾವಿರ ಮೌಲ್ಯದ ಸಾಮಗ್ರಿ ವಿತರಿಸಲಾಯಿತು. ಇನ್ನರ್ ವೀಲ್ ಕ್ಲಬ್ ಜಿಲ್ಲಾ ಸಂಪಾದಕಿ ದೀಪಾ ಭಂಡಾರಿ, ಐ.ಎಸ್.ಒ. ಸಹನಾ ಭಟ್ ಉಪಸ್ಥಿತರಿದ್ದರು. ಬಿಂದಿಯಾ ಶೆಟ್ಟಿ ಸ್ವಾಗತಿಸಿದರು. ಅನಿತಾ ಪ. ಶೆಟ್ಟಿ ಸೇವಾ ಕಾರ್ಯಗಳ ವಿವರ ನೀಡಿದರು. ಅಪೇಕ್ಷಾ ಪೂರ್ಣಚಂದ್ರ ಜೈನ್ ಪ್ರಾರ್ಥಿಸಿದರು. ತರೀನಾ ಪಿಂಟೋ ನಿರೂಪಿಸಿದ ಕಾರ್ಯಕ್ರಮದಲ್ಲಿ ನಿಶ್ಮಿತಾ ನಾಗರಾಜ್ ವಂದಿಸಿದರು.

ಮೂಡುಬಿದಿರೆ: ವಿಶೇಷ ಅಭಿಷೇಕ ಹಾಗೂ ಕರ್ಮ ದಹನ ಆರಾಧನೆ

Article Image

ಮೂಡುಬಿದಿರೆ: ವಿಶೇಷ ಅಭಿಷೇಕ ಹಾಗೂ ಕರ್ಮ ದಹನ ಆರಾಧನೆ

ಧರ್ಮ ಬಂಧು, ಶ್ರೀ ದಿಗಂಬರ ಜೈನ ಮಠದಲ್ಲಿ ಪ.ಪೂ ಆಚಾರ್ಯ ೧0೮ ಗುಲಾಬ್ ಭೂಷಣ ಮುನಿ ಮಹಾರಾಜ್ ಉಪಸ್ಥಿತಿ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾ ಚಾರ್ಯವರ್ಯ ಮಹಾಸ್ವಾಮೀಜಿ ಮಾರ್ಗದರ್ಶನದಲ್ಲಿ ಇಂದು ಮಧ್ಯಾಹ್ನ ಗಂಟೆ 2.00 ರಿಂದ 20.07.2025 ವಿಶೇಷ ಅಭಿಷೇಕ ಹಾಗೂ ಕರ್ಮ ದಹನ ಆರಾಧನೆ ಜರುಗಿತು. ಆಚಾರ್ಯರ ಉಪಸ್ಥಿತಿಯಲ್ಲಿ ಪ್ರವಚನ ನೀಡಿದ ಪ.ಪೂ ಸ್ವಸ್ತಿಶ್ರೀ ಚಾರುಕೀರ್ತಿ ಸ್ವಾಮೀಜಿ ಪ್ರತಿ ಸಂಸಾರಿ ಜೀವಿಗಳು ದರ್ಶನಾವರಣಿಯ ಜ್ಞಾನಾವರಣಿಯ ವೇದನಿಯ, ಮೋಹನೀಯ, ಆಯು, ನಾಮ,ಗೋತ್ರ ಅಂತರಾಯ ಎಂಬ ಎಂಟು ಕರ್ಮಗಳನ್ನು ನಾಶ ಮಾಡ ದ ಹೊರತು ಮುಕ್ತಿ ಸಿಗದು ಮುಕ್ತಿ ಸಿಗಲು ಉತ್ತಮ ಮನಸ್ಸು ರತ್ನತ್ರಯ ಅವಲಂಬನೆ ಮುಖ್ಯ ಇಂದಿನ ಆರಾಧನೆ ಮೂಲ ಎಂಟು ಕರ್ಮ ದ ಭೇದ ಗಳಾದ 148 ಕರ್ಮ ನಾಶ ಪಡಿಸಿದ ಸಿದ್ದ ಭಗವಂತರ ಗುಣಗಾನ ಎಂದು ಆಶೀರ್ವಾದ ನೀಡಿದರು ಬಳಿಕ ಆಚಾರ್ಯರ ಸ್ವಾಮೀಜಿ, ಗಳ ಪಾದಪೂಜೆ, ಆರತಿ ಜರುಗಿತು.

ಡಾ. ಅಭೀಷ್ ಹೆಗ್ಡೆಯರಿಗೆ ಪ್ರಥಮ ಬಹುಮಾನ

Article Image

ಡಾ. ಅಭೀಷ್ ಹೆಗ್ಡೆಯರಿಗೆ ಪ್ರಥಮ ಬಹುಮಾನ

ಮಂಗಳೂರು: ಏಪ್ರಿಲ್ 2025ರಲ್ಲಿ ಕೋಲ್ಕತ್ತಾದಲ್ಲಿ ನಡೆದ ವಾರ್ಷಿಕ ಯುರೊಲಿಥಿಯಾಸಿಸ್ ಸಮ್ಮೇಳನದಲ್ಲಿ ಸಲಹೆಗಾರರ ರಸಪ್ರಶ್ನೆಯಲ್ಲಿ ಮಂಗಳೂರಿನ ಮೂತ್ರ ಶಾಸ್ತ್ರತಜ್ಞ ಡಾ. ಅಭೀಷ್ ಹೆಗ್ಡೆರವರು ಪ್ರಥಮ ಬಹುಮಾನ ಪಡೆದಿರುತ್ತಾರೆ. ಇವರು ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ವೈದ್ಯಕೀ ಯ ಕಾಲೇಜಿನ ಮೂತ್ರ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುತ್ತಾರೆ.

ಶ್ರೀ ದಿಗಂಬರ ಜೈನ ಮಠದಲ್ಲಿ ಕರ್ಮ ದಹನ ಆರಾಧನಾ ಕಾರ್ಯಕ್ರಮ

Article Image

ಶ್ರೀ ದಿಗಂಬರ ಜೈನ ಮಠದಲ್ಲಿ ಕರ್ಮ ದಹನ ಆರಾಧನಾ ಕಾರ್ಯಕ್ರಮ

ಮೂಡಬಿದಿರೆ: ಶ್ರೀ ದಿಗಂಬರ ಜೈನ ಮಠದಲ್ಲಿ ನಾಳೆ (ಜು.20) ಪ.ಪೂ ಆಚಾರ್ಯ ೧0೮ ಗುಲಾಬ್ ಭೂಷಣ ಮುನಿ ಮಹಾರಾಜ್‌ರ ಸಾನ್ನಿಧ್ಯದಲ್ಲಿ, ಜಗದ್ಗುರು ಪ.ಪೂ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ಉಪಸ್ಥಿತಿಯಲ್ಲಿ ಮಧ್ಯಾಹ್ನ 2.00 ರಿಂದ ವಿಶೇಷ ಅಭಿಷೇಕ ಕರ್ಮ ದಹನ ಆರಾಧನೆ, ಆಚಾರ್ಯರ ಪ್ರವಚನ, ಸ್ವಾಮೀಜಿಗಳವರ ಆಶೀರ್ವಚನ ಆಚಾರ್ಯರ ಪಾದಪೂಜೆ, ಆರತಿ ಈ ಎಲ್ಲಾ ಕಾರ್ಯಕ್ರಮಗಳು ಜರುಗಲಿದೆ.

ವೇಣೂರು: ನೂತನ ಪದಾಧಿಕಾರಿಗಳ ಪದಗ್ರಹಣ

Article Image

ವೇಣೂರು: ನೂತನ ಪದಾಧಿಕಾರಿಗಳ ಪದಗ್ರಹಣ

ಬ್ರಾಹ್ಮಿ ಜೈನ ಮಹಿಳಾ ಸಮಾಜದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಯಾತ್ರಿ ನಿವಾಸದಲ್ಲಿ ಜು. 13ರಂದು ನಡೆಯಿತು. ಸಭಾ ಕಾರ್ಯಕ್ರಮ ಪ್ರಾರಂಭವಾಗುವ ಮೊದಲು ಪಾರ್ಶ್ವನಾಥ ಸ್ವಾಮಿ ಬಸದಿಯಲ್ಲಿ ಭ| ಶ್ರೀ ೧೦೦೮ ಪಾರ್ಶ್ವನಾಥ ಸ್ವಾಮಿಗೆ ಕ್ಷೀರಾಭಿಷೇಕ ಮತ್ತು ಪದ್ಮಾವತಿ ಅಮ್ಮನವರಿಗೆ ವಿಶೇಷ ಪೂಜೆ ಜರುಗಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾರ್ಕಳ ಜಿನವಾಣಿ ಮಹಿಳಾ ಸಮಾಜದ ಅಧ್ಯಕ್ಷರಾದ ಸುಮನಾಜಿ ಡಿ. ಅಧಿಕಾರಿ ಹಾಗೂ ಮೂಡಬಿದ್ರಿ ಸರ್ವಮಂಗಳ ಜೈನ ಮಹಿಳಾ ಸಮಾಜದ ಅಧ್ಯಕ್ಷರಾದ ಮಂಜುಳಾ ಯಶೋಧರ್ ಕಾರ್ಯಕ್ರಮವನ್ನು ಉದ್ಘಾಟಿಸಿ, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ನೂತನ ಅಧ್ಯಕ್ಷರಾಗಿ ಸುನೀತಾ ಶಾಂತಿಪ್ರಸಾದ್ ಹಾಗೂ ಕಾರ್ಯದರ್ಶಿಯಾಗಿ ದೀಪಶ್ರೀ ಜೈನ್ ಮತ್ತು ಕೋಶಾಧಿಕಾರಿಯಾಗಿ ಸುಕನ್ಯ ಬಲ್ಲಾಳ್ ಆಯ್ಕೆಯಾದರು. ಸಮಾರಂಭದ ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಮಹಿಳಾ ಒಕ್ಕೂಟದ ನಿರ್ದೇಶಕರಾದ ಸರೋಜ ಗುಣಪಾಲ್ ಜೈನ್ ವಹಿಸಿದ್ದರು. ಗೌರವ ಉಪಸ್ಥಿತಿಯನ್ನು ಬ್ರಾಹ್ಮಿ ಜೈನ ಮಹಿಳಾ ಸಮಾಜದ ಸ್ಥಾಪಕ ಅಧ್ಯಕ್ಷರಾದ ಪ್ರಸನ್ನ ಆರ್. ಹೆಗ್ಡೆ ಹಾಗೂ ರಾಜೇಶ್ವರಿ ವಿ.ಅಧಿಕಾರಿ ವಹಿಸಿದ್ದರು. ವಾರ್ಷಿಕ ಗತ ಸಭೆಯ ವರದಿಯನ್ನು ನಿರ್ಗಮಿತ ಕಾರ್ಯದರ್ಶಿಗಳಾದ ಆಶಾಲತಾ ಮಂಡಿಸಿದರು. ಹಾಗೆಯೇ ನಿರ್ಗಮಿತ ಕೋಶಾಧಿಕಾರಿ ವಾಣಿ ವೃಷಭರಾಜ್ ಲೆಕ್ಕ ಪತ್ರ ಮಂಡಿಸಿದರು. ನಿರ್ಗಮಿತ ಅಧ್ಯಕ್ಷರಾದ ಸರೋಜಾ ಗುಣಪಾಲ್ ಜೈನ್ ನೂತನ ಅಧ್ಯಕ್ಷರಾದ ಸುನೀತಾ ಶಾಂತಿಪ್ರಸಾದ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಪದ್ಮಲತಾ ಮತ್ತು ಸುನೀತಾ ಬಲ್ಲಾಳ್ ಪ್ರಾರ್ಥಿಸಿ, ನಿರ್ಗಮಿತ ಜತೆ ಕಾರ್ಯದಶಿಗಳಾದ ಮಮತಾ ಪ್ರಸಾದ್ ಸ್ವಾಗತಿಸಿದರು. ನೂತನ ಕಾರ್ಯದರ್ಶಿಗಳಾದ ದೀಪಶ್ರೀ ಜೈನ್ ಧನ್ಯವಾದವಿತ್ತರು. ಸಂಧ್ಯಾ ಸುಕುಮಾರ್, ಆಶಾಲತಾ ಜೈನ್‌ರವರು ಕಾರ್ಯಕ್ರಮ ನಿರೂಪಿಸಿದರು.

ಸತ್ತೂರು, ಧಾರವಾಡ: ಡಾ. ನಿರಂಜನ್ ಕುಮಾರ್ ಅವರಿಗೆ ಜಾಗತಿಕ ಶ್ರೇಷ್ಠತೆ ಮತ್ತು ಗೌರವ ಪ್ರಧಾನ

Article Image

ಸತ್ತೂರು, ಧಾರವಾಡ: ಡಾ. ನಿರಂಜನ್ ಕುಮಾರ್ ಅವರಿಗೆ ಜಾಗತಿಕ ಶ್ರೇಷ್ಠತೆ ಮತ್ತು ಗೌರವ ಪ್ರಧಾನ

ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ್ ಅವರಿಗೆ ಟೈಮ್ಸ್ ಆಫ್ ಇಂಡಿಯಾ ಮತ್ತು ವಿಜಯ ಕರ್ನಾಟಕ ಸಮೂಹ ಮಾಧ್ಯಮಗಳು, ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಡಾ. ನಿರಂಜನ್ ಕುಮಾರ್ ಅವರ ಮಹತ್ವದ ಕೊಡುಗೆಗಳನ್ನು ಪರಿಗಣಿಸಿ ಜಾಗತಿಕ ಶ್ರೇಷ್ಠತೆಯ ಪ್ರಮಾಣಪತ್ರವನ್ನು ನೀಡಿ ಗೌರವಿಸಿವೆ. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ ಅವರು ಡಾ. ನಿರಂಜನ್ ಕುಮಾರ್ ಅವರ ಪರವಾಗಿ ಈ ಪ್ರತಿಷ್ಠಿತ ಜಾಗತಿಕ ಶ್ರೇಷ್ಠತೆಯ ಗೌರವವನ್ನು ಮಲೇಷ್ಯಾದ ಮ್ಯಾಪ್ಸ್ ಗ್ರುಪ್‌ನ ಸಂಸ್ಥಾಪಕರಾದ ದಾತುಕ್ ಎಂ.ಎ.ಪಿ. ಸಿಗರನ್ ಮತ್ತು ಇತರ ಗಣ್ಯರಿಂದ ಸ್ವೀಕರಿಸಿದರು. ಈ ಪ್ರಶಸ್ತಿಯನ್ನು ಜುಲೈ 13, 2025 ರಂದು ಮಲೇಷ್ಯಾದ ಕೌಲಾಲಂಪುರದ ರಾಯಲ್ ಚುಲಾನ್‌ನಲ್ಲಿ ನಡೆದ ಕರ್ನಾಟಕ ಜಾಗತಿಕ ಸಾಧಕರ ಅಂತರರಾಷ್ಟ್ರೀಯ ಆಚರಣೆಯ ಸಂದರ್ಭದಲ್ಲಿ ನೀಡಲಾಯಿತು.

ತೋವಿನಕೆರೆ ಜೈನ ಮಂದಿರದಲ್ಲಿ ಚಾತುರ್ಮಾಸ

Article Image

ತೋವಿನಕೆರೆ ಜೈನ ಮಂದಿರದಲ್ಲಿ ಚಾತುರ್ಮಾಸ

ತೋವಿನಕೆರೆ: ಗ್ರಾಮದ ಚಂದ್ರನಾಥ ದೇವಾಲಯದಲ್ಲಿ ದಿಗಂಬರ ಜೈನ ಮುನಿ ಪಾಯಸಾಗರ ಮುನಿ ಚಾತುರ್ಮಾಸ ಕೈಗೊಂಡಿದ್ದು, ಇಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಜುಲೈ 14ರಿಂದ ಇಲ್ಲಿ ಚಾತುರ್ಮಾಸ ಆಚರಣೆ ಕೈಗೊಂಡಿದ್ದಾರೆ. ಅಕ್ಟೋಬರ್ 21ರವರೆಗೆ ಮುಂದುವರೆಯುತ್ತದೆ. 20ರಂದು ಮಂಗಳ ಕಳಸ ಪ್ರತಿಷ್ಠಾಪನೆ ಸಲುವಾಗಿ ವಿಶೇಷ ಸಮಾರಂಭ ದೇವಾಲಯದ ಅವರಣದಲ್ಲಿ ನಡೆಯುತ್ತದೆ ಎಂದು ಚಂದ್ರನಾಥ ಸ್ವಾಮಿ ದಿಗಂಬರ ಜೈನ ಸಂಘದವರು ತಿಳಿಸಿದ್ದಾರೆ. ಪ್ರತಿ ದಿನ ಸಂಜೆ 6ರಿಂದ ಮುನಿಗಳಿಂದ ಉಪನ್ಯಾಸ ಹಾಗೂ ಭಕ್ತರಿಂದ ಅರತಿ ಕಾರ್ಯಕ್ರಮ ನಡೆಯುತ್ತದೆ.

ರಚನಾ ಎಸ್.ಡಿ. ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣ

Article Image

ರಚನಾ ಎಸ್.ಡಿ. ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣ

ಕಾರ್ಕಳ: ಹೊಸದಿಲ್ಲಿ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ಮೇ 2025ರಲ್ಲಿ ನಡೆಸಿದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಡಾ.ಎನ್. ಎಸ್.ಎ.ಎಮ್. ಪ್ರಥಮದರ್ಜೆ ಕಾಲೇಜಿನ 2017-2020 ನೇ ಸಾಲಿನ ಬಿಕಾಂ ವಿದ್ಯಾರ್ಥಿನಿ ರಚನಾ ಎಸ್.ಡಿ. ತೇರ್ಗಡೆಯಾಗಿದ್ದಾರೆ. ಇವರು ಮೂಡಬಿದ್ರೆಯ ಧೀರಜ್ ಎಸ್.ಎಮ್. ಮತ್ತು ಪದ್ಮಜಾ ಶೆಟ್ಟಿಯವರ ಪುತ್ರಿ, ರಚನಾ ಎಸ್.ಡಿ. ಮಂಗಳೂರಿನ ಕೆಎನ್‌ಡಿಸಿ ಆಂಡ್ ಅಸೋಸಿಯೆಶನ್‌ನಲ್ಲಿ ಸಿಎ ಪ್ರಾಯೋಗಿಕ ತರಬೇತಿಯನ್ನು ಪಡೆದಿರುತ್ತಾರೆ.

ತುಮಕೂರು ವಿಶ್ವ ವಿದ್ಯಾಲಯದಿಂದ ನಾಡೋಜ ಹಂಪಾನಾ ಸರ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

Article Image

ತುಮಕೂರು ವಿಶ್ವ ವಿದ್ಯಾಲಯದಿಂದ ನಾಡೋಜ ಹಂಪಾನಾ ಸರ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

ಸಂಶೋಧಕ ನಾಡೋಜ, ಹಂ.ಪ ನಾಗರಾಜಯ್ಯ ಭಾಷಾ ವಿಜ್ಞಾನಿ, ಗ್ರಂಥ ಸಂಪಾದಕ, ಶ್ರೇಷ್ಠವಾಗ್ಮಿ, ಅಧ್ಯಾಪಕರಾಗಿ ಸೇವೆ ಸಲ್ಲಿಸಿದವರು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದವರು. 1936ರ ಅಕ್ಟೋಬರ್ 7ರಂದು ಕೋಲಾರ ಜಿಲ್ಲೆ (ಚಿಕ್ಕಬಳ್ಳಾಪುರ ಜಿಲ್ಲೆ) ಗೌರಿಬಿದನೂರು ತಾಲೂಕಿನ ಹಂಪಸಂದ್ರದಲ್ಲಿ ಜನನ. ಪ್ರಾಥಮಿಕ ವಿದ್ಯಾಭ್ಯಾಸ ಹಂಪಸಂದ್ರದಲ್ಲಿ, ಪ್ರೌಢ ಹಾಗೂ ಕಾಲೇಜು ಶಿಕ್ಷಣ ಗೌರಿಬಿದನೂರಿನಲ್ಲಿ, ಪಡೆದ ಇವರು ಕಲಾ ಪದವಿ ಹಾಗೂ ಕಲಾ ಸ್ನಾತಕೋತ್ತರ ಪದವಿಗಳನ್ನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪಡೆದರು. ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಇವರು ಅಂದಿನಿಂದಲೂ ಮೈಸೂರು ದಸರಾ ಬಗ್ಗೆ ವಿಶೇಷವಾದ ಗೌರವ, ಪ್ರೀತಿ. ನಾಡೋಜ ಹಂ.ಪ ನಾಗರಾಜಯ್ಯ ಸಾಹಿತ್ಯ ಲೋಕದ ವಿಶೇಷ ಆಸ್ತಿ, ಹಂಪನ ಎಂಬ ಕಾವ್ಯ ನಾಮದಿಂದ ಹೆಸರಾಗಿರುವ ಇವರು, ನಾಡೋಜ ಎಂಬ ಕೀರ್ತಿ ಭಾಷಾ ವಿಜ್ಞಾನಿ, ಕಾದಂಬರಿ ಕಾರ, ಕಾವ್ಯ, ಇತಿಹಾಸ, ಭಾಷಾ ಶಾಸ್ತ್ರ, ಜೈನ ಸಾಹಿತ್ಯ ಇನ್ನಿತರ ಕೃತಿಗಳನ್ನು ರಚಿಸಿರುವವರು ಕನ್ನಡ ಸಾಹಿತ್ಯ ಹಾಗೂ ಜೈನ ಸಾಹಿತ್ಯಕ್ಕೆ ಇವರ ಕೊಡುಗೆ ಅಪಾರ. (ಜೆ.ರಂಗನಾಥ ತುಮಕೂರು)

ಶ್ರೀ ಜ್ವಾಲಾಮಾಲಿನಿದೇವಿ ಅತಿಶಯ ಕ್ಷೇತ್ರದಲ್ಲಿ ಶ್ರಾವಣ ಮಾಸದ ಪೂಜಾ ಕಾರ್ಯಕ್ರಮಗಳು

Article Image

ಶ್ರೀ ಜ್ವಾಲಾಮಾಲಿನಿದೇವಿ ಅತಿಶಯ ಕ್ಷೇತ್ರದಲ್ಲಿ ಶ್ರಾವಣ ಮಾಸದ ಪೂಜಾ ಕಾರ್ಯಕ್ರಮಗಳು

ಚಿಕ್ಕಮಗಳೂರು: ಶ್ರೀ ಜ್ವಾಲಾಮಾಲಿನಿದೇವಿ ಅತಿಶಯ ಕ್ಷೇತ್ರ ಪೆನುಗೊಂಡ ದಿಗಂಬರ ಜೈನ ಮಹಾಸಂಸ್ಥಾನ ಮಠ ಶ್ರೀ ಕ್ಷೇತ್ರ ಸಿಂಹನಗದ್ದೆ ಬಸ್ತಿಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಪ್ರತೀ ಭಾನುವಾರ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ. ಪೂಜಾ ವಿವರ ಬೆಳಿಗ್ಗೆ 8-00 ಕ್ಕೆ : ಜಿನೇಶ್ವರರ ಪಂಚಾಮೃತ ಅಭಿಷೇಕ, 09-30 ಕ್ಕೆ : ಶ್ರೀ ಜ್ವಾಲಾಮಾಲಿನಿ ಅಮ್ಮನವರ ಪಂಚಾಮೃತ ಅಭಿಷೇಕ ಮತ್ತು ಆರಾಧನೆ, ಸಂಜೆ 6-30 ಕ್ಕೆ : ಅಷ್ಠಾವದಾನ ಸೇವೆ, ಷೋಡಶೋಪಚಾರ ಪೂಜೆ, 7-30 ಕ್ಕೆ : ಮಹಾಮಂಗಳಾರತಿ ನಡೆಯಲಿದೆ.

ಅನಂತ ಪಾರ್ಶ್ವ ಜೈನ್ ಮಿಲನ್ ಪದಗ್ರಹಣ ಮತ್ತು ಬಸ್ ನಿಲ್ದಾಣ ಉದ್ಘಾಟನೆ

Article Image

ಅನಂತ ಪಾರ್ಶ್ವ ಜೈನ್ ಮಿಲನ್ ಪದಗ್ರಹಣ ಮತ್ತು ಬಸ್ ನಿಲ್ದಾಣ ಉದ್ಘಾಟನೆ

ಕುಪ್ಪೆ ಪದವು:- ಅನಂತ ಪಾರ್ಶ್ವ ಜೈನ್ ಮಿಲನಿನ ಪದಗ್ರಹಣ ಮತ್ತು ನಮ್ಮ ಮಿಲನ ಸದಸ್ಯರಾದ ಅಜಿತ್ ಕುಮಾರ್ ಜೈನ್ ರವರು ಸಾರ್ವಜನಿಕರಿಗೆ ಬಸ್ ನಿಲ್ದಾಣವನ್ನು ನಿರ್ಮಿಸಿದರು, ಮಂಗಳೂರು ವಲಯ -8 ರ ನಿಕಟ ಪೂರ್ವ ಅಧ್ಯಕ್ಷರಾದ ಪುಷ್ಪರಾಜ್‌ ಜೈನ್‌ರವರು ಉದ್ಘಾಟಿಸಿದರು. ಅನಂತ್ ರಾಜ ಸಭಾಭವನದಲ್ಲಿ ದಿನಾಂಕ 29-6-2025 ಸಂಜೆ 3 ಗಂಟೆಗೆ ಪದಗ್ರಹಣ ಸಮಾರಂಭ ನಡೆಯಿತು. ಜಯರಾಜ್ ಕಂಬಳಿ, ವಲಯ ನಿರ್ದೇಶಕರು ಹೊಸ ಪದಾಧಿಕಾರಿಗಳಿಗೆ ಪ್ರಮಾಣ ವಚನವನ್ನು ಮಾಡಿದರು. ಸುದರ್ಶನ್ ಜೈನ್, ಉಪಾಧ್ಯಕ್ಷರು ಮಂಗಳೂರು ವಲಯ-8. ಕುಪ್ಪೆಪದ ಜೈನ್ ಮಿಲನ್ ಸಣ್ಣದಾದರು ಅಚ್ಚುಕಟ್ಟಾಗಿ ಎಲ್ಲಾ ಕೆಲಸಗಳನ್ನು ಒಳ್ಳೆಯ ರೀತಿಯಲ್ಲಿ ನಿರ್ವಹಿಸುತ್ತಾ ಒಳ್ಳೆ ಹೆಸರನ್ನು ಗಳಿಸಿದ್ದಾರೆ ಎಂದು ಶ್ಲಾಘಿಸಿದರು. ವೇದಿಕೆಯಲ್ಲಿ ಪುಷ್ಪರಾಜ್ ಜೈನ್, ಸುಭಾಷ್ ಚಂದ್ರ ಜೈನ್, ಶ್ವೇತಾ ಜೈನ್, ಡಾ। ಸುದೀಪ್ ಜೈನ್, ಭೋಜರಾಜ್ ಜೈನ್, ಅಧ್ಯಕ್ಷ ಸ್ವರ್ಣ ಲತಾ ಅಜಿತ್, ಹರ್ಷ ಲತಾ, ವನಿತಾ ಭೋಜರಾಜ ಜೈನ ಹಾಗೂ ಪದಗ್ರಹಣ ಸ್ವೀಕರಿಸಿದ ಧೀರಜ್ ಜೈನ ಮತ್ತು ಕಾರ್ತಿಕ್ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪೂರ್ವಿತಾ ಪ್ರಾರ್ಥನೆ ಮಾಡಿದರು. ಅನ್ವಿತ ಜೈನ್ ಕಾರ್ಯಕ್ರಮವನ್ನು ನಿರೂಪಿಸಿದರು. ಅದ್ವಿತ ಮತ್ತು ಅಶ್ವಿತ ಶಾಂತಿ ಮಂತ್ರವನ್ನು ಪಟಿಸಿ ಸಭೆಯನ್ನು ಮುಕ್ತಾಯ ಗೊಳಿಸಿದರು.

ಗಾನವಿ ಡಿ. ಅವರಿಗೆ ಪಿಎಚ್.ಡಿ ಪದವಿ

Article Image

ಗಾನವಿ ಡಿ. ಅವರಿಗೆ ಪಿಎಚ್.ಡಿ ಪದವಿ

ಉಜಿರೆಯ ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಗಾನವಿ ಡಿ. ಅವರು “ಸಿಂಥೆಸಿಸ್ ಅಂಡ್ ಬೈಯೋಲಾಜಿಕಲ್ ಆಕ್ಟಿವಿಟಿ ಸ್ಟಡೀಸ್ ಆಫ್ ಸಮ್ ಸಿಂಪಲ್ ಅಂಡ್ ಫ್ಯೂಸ್‌ಡ್ ನೈಟ್ರೋಜನಸ್ ಹೆಟೆರೋಸೈಕ್ಲಸ್”(Synthesis and Biological Activity Studies of Some Simple and Fused Nitrogenous Heterocycles) ಎಂಬ ಶೀರ್ಷಿಕೆಯಲ್ಲಿ ಮಹಾಪ್ರಬಂಧವನ್ನು ಯಶಸ್ವಿಯಾಗಿ ಮಂಡಿಸಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯ ರಸಾಯನಶಾಸ್ತ್ರ ವಿಭಾಗದ ಅಧ್ಯಕ್ಷರು ಹಾಗೂ ಮಾರ್ಗದರ್ಶಕರಾದ ಪ್ರೊ. ಭೋಜ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಈ ಮಹಾಪ್ರಬಂಧ ಮಂಡಿಸಿದ್ದಾರೆ. ಸಮರ್ಥ ಶೋಧನಾ ಕಾರ್ಯಕ್ಕೆ ಬೆಂಗಳೂರು ಸಿಟಿ ಯುನಿವರ್ಸಿಟಿಯ ರಸಾಯನ ಶಾಸ್ತ್ರ ವಿಭಾಗದ ಸೀನಿಯರ್ ಪ್ರೊಪೆಸರ್ ಡಾ. ಹರಿಪ್ರಸಾದ್ ಎಸ್. ಇವರ ಸಮ್ಮುಖದಲ್ಲಿ ಡಾ. ಗಾನವಿ ಡಿ. ಅವರಿಗೆ ದಿನಾಂಕ 11 ಜುಲೈ 2025 ರಂದು ಪಿಎಚ್.ಡಿ ಪದವಿ ನೀಡಲಾಯಿತು. ಉಜಿರೆಯ ಲಲಿತನಗರದ ನಿವಾಸಿಯಗಿರುವ ಇವರು ಧರ್ಮಸ್ಥಳದ ದೇವಸ್ಥಾನ ಕಚೇರಿಯ ಮುಖ್ಯ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಉದಯ ಜೈನ್ ಅವರ ಧರ್ಮಪತ್ನಿ.

ಭಾರತೀಯ ಜೈನ್ ಮಿಲನ್ ವಲಯ-8 ಸಭೆ

Article Image

ಭಾರತೀಯ ಜೈನ್ ಮಿಲನ್ ವಲಯ-8 ಸಭೆ

ತಾ. 22.06.2025ನೇ ಭಾನುವಾರ ಜೈನ್ ಮಿಲನ್ ಪುತ್ತೂರು ಶಾಖೆ ಮತ್ತು ಜೈನ್ ಮಿಲನ್ ಇಚ್ಲಂಪಾಡಿ ಶಾಖೆ ಜಂಟಿಯಾಗಿ ಪುತ್ತೂರು ಭ. ಶಾಂತಿನಾಥ ಸ್ವಾಮಿ ಬಸದಿಯಲ್ಲಿ ಪುತ್ತೂರು ಮಿಲನ್ ಅತಿಥೇಯತ್ವದಲ್ಲಿ ಜರಗಿತು. ಜಂಟಿ ಮಿಲನ್ ಸಭೆಯು ಸತೀಶ್ ಪಡಿವಾಳ್ ಅಧ್ಯಕ್ಷತೆಯಲ್ಲಿ ನಡೆಯಿತು. ವೇದಿಕೆಯಲ್ಲಿ ವಲಯ ನಿರ್ದೇಶಕರಾದ ರಾಜಶ್ರೀ ಎಸ್. ಹೆಗ್ಡೆ, ಮುಖ್ಯ ಅತಿಥಿಯಾಗಿ ಡಾ| ಮಹಾವೀರ್ ಜೈನ್, ಡಾ| ಅಶೋಕ್ ಪಡಿವಾಳ್, ಅಜಿತ್ ಪ್ರಸಾದ್ ರೈ, ಕಾರ‍್ಯದರ್ಶಿ ರಾಜೇಶ್ ಕುಮಾರ್ ವಿ. ಇಚ್ಲಂಪಾಡಿ ಜೈನ್ ಮಿಲನ್ ಅಧ್ಯಕ್ಷರು ಹೇಮಾವತಿ ಮಹವೀರ್, ಕಾರ‍್ಯದರ್ಶಿ ದೀವಿಕ ರವೀಂದ್ರ ಜೈನ್ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳು ಬಸದಿ ದರ್ಶನ ಕ್ರಮ ಮತ್ತು ಮಹತ್ವವನ್ನು ಅರ್ಥಪೂರ್ಣವಾಗಿ ಸಭೆಗೆ ತಿಳಿಸಿದರು. ಪುತ್ತೂರು ಜೈನ ಮಿಲನ್ ವತಿಯಿಂದ ಡಾಕ್ಟರೇಟ್ ಪದವಿ ಮಹಾವೀರ್ ಜೈನ್ ಇಚ್ಲಂಪಾಡಿ ಹಾಗೂ ಪ್ರಗತಿಪರ ಕೃಷಿಕರಾದ ಅಜಿತ್ ಪ್ರಸಾದ್ ರೈ ಅವರನ್ನು ಗೌರವಿಸಲಾಯಿತು. ಪುತ್ತೂರು ಹಾಗೂ ಇಚ್ಲಂಪಾಡಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮದುವೆ ದಿನ ಹಾಗೂ ಹುಟ್ಟುಹಬ್ಬ ಆಚರಿಸಿಕೊಂಡವರಿಗೆ ಹೂ ನೀಡಿ ಗೌರವಿಸಲಾಯಿತು. ಕಾರ‍್ಯಕ್ರಮವು ಬೆಳಿಗ್ಗೆ 10ರಿಂದ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ಮದ್ಯಾಹ್ನ 2.00 ಗಂಟೆಗೆ ಶಾಂತಿಮಂತ್ರದೊಂದಿಗೆ ಮುಕ್ತಾಯವಾಯಿತು.

ವೇಣೂರಿನ ಮಹಾವೀರ ನಗರದ ಪ್ರಸಾದ್‌ ಕ್ಲಿನಿಕ್‌ ನ ಖ್ಯಾತ ವೈದ್ಯರಾದ ಡಾ. ಕೆ. ಆರ್.‌ ಪ್ರಸಾದ್‌ರವರು ನಿಧನ

Article Image

ವೇಣೂರಿನ ಮಹಾವೀರ ನಗರದ ಪ್ರಸಾದ್‌ ಕ್ಲಿನಿಕ್‌ ನ ಖ್ಯಾತ ವೈದ್ಯರಾದ ಡಾ. ಕೆ. ಆರ್.‌ ಪ್ರಸಾದ್‌ರವರು ನಿಧನ

ಬೆಳ್ತಂಗಡಿ ತಾಲೂಕಿನ ಪೆರಿಂಜೆ, ಬಡಕೋಡಿಗುತ್ತು ನಿವಾಸಿ, ವೇಣೂರಿನ ಮಹಾವೀರ ನಗರದ "ಪ್ರಸಾದ್‌ ಕ್ಲಿನಿಕ್‌" ನ ಖ್ಯಾತ ವೈದ್ಯರಾದ ಡಾ. ಕೆ. ಆರ್.‌ ಪ್ರಸಾದ್‌ (75ವ) ಇವರು ಜು.04ರಂದು ನಿಧನ ಹೊಂದಿದರು. ಇವರು ಪತ್ನಿ, ಇಬ್ಬರು ಪುತ್ರರನ್ನು ಹಾಗೂ ಅಪಾರ ಬಂಧು- ವರ್ಗವನ್ನು ಅಗಲಿದ್ದಾರೆ. ಇವರು ಕೃಷಿಕರಾಗಿದ್ದು, ವೇಣೂರಿನಲ್ಲಿ ಹಲವು ದಶಕಗಳಿಂದ ವೈದ್ಯಕೀಯ ಸೇವೆ ನೀಡಿ, ಜನಪ್ರಿಯ ವೈದ್ಯರಾಗಿ ಜನರ ಪ್ರೀತಿ - ವಿಶ್ವಾಸಕ್ಕೆ ಪಾತ್ರರಾಗಿದ್ದರು. ಅಲ್ಲದೇ ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು

ಮಹಾವೀರ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳಿಗೆ ಗೌರವ ಸನ್ಮಾನ

Article Image

ಮಹಾವೀರ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳಿಗೆ ಗೌರವ ಸನ್ಮಾನ

ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಟ್ರಸ್ಟ್ ಹುಬ್ಬಳ್ಳಿ- ಧಾರವಾಡ, ಕರ್ನಾಟಕ ವಿಶ್ವವಿದ್ಯಾಲಯದ ಜೈನ ಅಧ್ಯಯನ ಪೀಠ ಸಲಹಾ ಸಮಿತಿ ಇವುಗಳ ಸಂಯುಕ್ತ ಸಹಯೋಗದಲ್ಲಿ ಮಾಸಿಕ ಉಪನ್ಯಾಸ ಮಾಲಿಕೆ ದಿವ್ಯವಾಣಿ ೪ ಜೈನ ದರ್ಶನದಲ್ಲಿ ಅನೇಕಾಂತವಾದಕುರಿತು ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಪ್ರಚಾರ್ಯ ಡಾ. ಭರಮಪ್ಪ ಭಾವಿ ಇವರಿಂದ ಉಪನ್ಯಾಸ ಜರುಗಿತು. ಇದೇ ಸಂಧರ್ಭದಲ್ಲಿ ಮಹಾವೀರ ಶಿಕ್ಷಣ ಸಂಸ್ಥೆಗೆ ನೂತನವಾಗಿ ಇತ್ತೀಚಿಗೆ ಆಯ್ಕೆಯಾದ ಪದಾಧಿಕಾರಿಗಳನ್ನು ಹಾಗೂ ಧಾರವಾಡ ಜೈನ ಮಿಲನ್ ಅಧ್ಯಕ್ಷರಾಗಿ ಆಯ್ಕೆಯಾದ ಜಿನ್ನಪ್ಪ ಕುಂದಗೋಳ ಇವರನ್ನು ನವನಗರದ ನವಗ್ರಹ ಸಭಾ ಭವನದಲ್ಲಿ ಗೌರವ ಸನ್ಮಾನಮಾಡಿ ಅಭಿನಂದಿಸಲಾಯಿತು. ನವನಗರದ ಅಲ್ಪಸಂಖ್ಯಾತ ಜೈನ ಸೇವಾ ಸಂಘ ಈ ಸಂಸ್ಥೆಯೂ ಕೂಡಾ ಸನ್ಮಾನಿಸಿ ಗೌರವಿಸಿದರು. ಐದು ದಶಕಗಳಿಂದ ಹುಬ್ಬಳ್ಳಿಯಲ್ಲಿ ಸಮಾಜದ ಪ್ರತಿಷ್ಠಿತ ಈ ಸಂಸ್ಥೆ ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರವಾದ ಸಾಧನೆ ಮಾಡಿದೆ, ಪ್ರಸಕ್ತ ಅವಧಿಯಲ್ಲಿ ಅಧ್ಯಕ್ಷರಾದ ಆರ್ ಟಿ ತವನಪ್ಪನವರ, ಉಪಾಧ್ಯಕ್ಷರಾದ ಆರ್ ಟಿ ಅಣ್ಣಿಗೇರಿ ಕಾರ್ಯದರ್ಶಿ ವಿಮಲ ತಾಳಿಕೋಟಿ ಹಾಗೂ ಇತರರು ಅವಿರೋಧವಾಗಿ ಆಯ್ಕೆಯಾಗಿದ್ದು ಇವರ ಅವಧಿಯಲ್ಲಿ ಸಂಸ್ಥೆ ಸರ್ವತೋಮುಖ ಅಭಿವೃದ್ಧಿ ಹೊಂದಲಿ ಇನ್ನು ಹೆಚ್ಚು ಹೆಚ್ಚು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲಿ ಮತ್ತು ಧಾರವಾಡ ಜೈನ ಮಿಲನ್ ಜೈನ ಸಂಸ್ಕೃತಿ ಪರಂಪರೆಗೆ ಧರ್ಮಪ್ರಭಾವನೆ ಕೊಡುಗೆ ನೀಡಲಿ ಎಂದು ಶುಭ ಹಾರೈಸಿ ಸತ್ಕರಿಸಲಾಯಿತು. ಸತ್ಕಾರ ಸಮಾರಂಭದಲ್ಲಿ ಟ್ರಸ್ಟ್ ಅಧ್ಯಕ್ಷ ಡಾ. ಜಿನದತ್ತ ಹಡಗಲಿ, ಉಪಾಧ್ಯಕ್ಷ ಡಾ. ಭರಮಪ್ಪ ಭಾವಿ, ಕಾರ್ಯದರ್ಶಿ ಶಾಂತರಾಜ ಮಲ್ಲಸಮುದ್ರ, ನಿರ್ದೇಶಕರಾದ ಧರಣೇoದ್ರ ಜವಳಿ, ಡಾ ಆರ್ ಎ ಬಾಳಿಕಾಯಿ, ತನುಜಾ ರೋಖಡೆ, ಶ್ರೀಧರ ಬಸ್ತಿ, ಡಾ. ಪ್ರತಿಭಾ ಹಳಿಂಗಳಿ, ಸಂಘಟನಾ ಕಾರ್ಯದರ್ಶಿಗಳಾದ ಶಾಂತರಾಜ ಹದಳಗಿ, ಸುಜಾತಾ ಹಡಗಲಿ, ಅಜಿತ್ ಹವಳಣ್ಣವರ, ನವನಗರ ಜೈನ ಸೇವಾ ಸಂಘದ ಉಪಾಧ್ಯಕ್ಷ ಅಜಿತ್ ಉಪಾಧ್ಯ ಕಾರ್ಯದರ್ಶಿ ಜೆ ಎ ಪಾಟೀಲ್ ಖಜಾಂಚಿ ರವಿ ರಾಯಪ್ಪನವರ ಸದಸ್ಯರಾದ ಬಿ ಎಸ್ ವರೂರ, ಡಿ ಆರ್ ಚೌದರಿ ಪ್ರಭು ಹಜಾರೆ, ಶುಭಮ್ ಬಸ್ತಿ, ಬಾಹುಬಲಿ ಹೊಂಬಣ್ಣವರ, ಆಂಬೊಜಿ, ರತ್ನಾಕರ ಪಾಟೀಲ ಮತ್ತು ಬಹುರೂಪಿಣಿ ಮಹಿಳಾ ಮಂಡಳದ ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ನವನಗರದ ಬಹುರೂಪಿಣಿ ಮಹಿಳಾಮಂಡಲದ ಮತ್ತು ಗೋಕುಲ ರಸ್ತೆಯ ಸನ್ಮತಿ ಮಹಿಳಾ ಮಂಡಳದ ತಂಡಗಳಿಂದ ಜಿನಭಜನೆ ಜರುಗಿತು ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಶ್ರೀಪಾಲ ಬೋಗಾರ ಇವರು ತಾವು ರಚಿಸಿದ "ಪಿಂಛಿ" ಕವನ ಸಂಕಲದ ಪುಸ್ತಕದ ವಿತರಿಸಿದರು. ಪ್ರಾರಂಭದಲ್ಲಿ ಶೋಭಾ ವರೂರ ಇವರಿಂದ ಪ್ರಾರ್ಥನೆ ಶಾಂತರಾಜ ಮಲ್ಲಸಮುದ್ರ ಇವರಿಂದ ಸ್ವಾಗತ ಕೊನೆಯಲ್ಲಿ ಮಹಾವೀರ ದೊದ್ದಮನಿ ಇವರು ವಂದಿಸಿದರು ತನುಜಾ ರೋಖಡೆ ಕಾರ್ಯಕ್ರಮ ನಿರೂಪಿಸಿದರು. ವರದಿ : ಶಾಂತರಾಜ ಮಲ್ಲಸಮುದ್ರ

ಪರಾಗ್ ಜೈನ್ ರಾ ಹೊಸ ಮುಖ್ಯ

Article Image

ಪರಾಗ್ ಜೈನ್ ರಾ ಹೊಸ ಮುಖ್ಯ

ಹೊಸದಿಲ್ಲಿ: ‘ಆಪರೇಷನ್ ಸಿಂದೂರ’ ಸೇನಾ ಕಾರ್ಯಾಚರಣೆ ಯಶಸ್ಸಿನಲ್ಲಿ ಮಹತ್ವದ ಪಾತ್ರವಹಿಸಿದ್ದ ಹಿರಿಯ ಐಪಿಎಸ್ ಅಧಿಕಾರಿ ಪರಾಗ್ ಜೈನ್ ಅವರನ್ನು ಗುಪ್ತಚರ ಸಂಸ್ಥ ‘ರಾ’ ಮುಖ್ಯಸ್ಥರನ್ನಾಗಿ ಕೇಂದ್ರ ಸರಕಾರ ನೇಮಿಸಿದೆ. ‘ರಾ’ ಹಾಲಿ ಮುಖ್ಯಸ್ಥ ರವಿ ಸಿನ್ಹಾ ಅವರು ಜೂನ್ 30ರಂದು ನಿವೃತ್ತಿ ಹೊಂದಲಿದ್ದಾರೆ. ಸದ್ಯ ‘ರಾ’ದ ವೈಮಾನಿಕ ಸಂಶೋಧನಾ ಕೇಂದ್ರದ ಮುಖ್ಯಸ್ಥರಾಗಿರುವ ಪರಾಗ್ ಅವರು ಜುಲೈ 1ರಂದು ‘ರಾ’ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಇವರ ಅಧಿಕಾರ ಅವಧಿ ಎರಡು ವರ್ಷ ಇರಲಿದೆ. ಪರಾಗ್ 1989ನೇ ಸಾಲಿನ ಪಂಜಾಬ್ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿದ್ದು, ಗುಪ್ತಚರ ಇಲಾಖೆಯಲ್ಲಿ ಮಾನವ ಬುದ್ಧಿಮತ್ತೆ ಹಾಗೂ ಕೃತಕ ಬುದ್ಧಿಮತ್ತೆಯನ್ನು ಪರಿಣಾಮಕಾರಿಯಾಗಿ ಸಂಯೋಜಿಸಿ ಬಳಸುವಲ್ಲಿ ಪರಿಣತಿ ಹೊಂದಿದ್ದಾರೆ.

ನಾರಾವಿ: ಸನ್ಮಾನ ಕಾರ್ಯಕ್ರಮ

Article Image

ನಾರಾವಿ: ಸನ್ಮಾನ ಕಾರ್ಯಕ್ರಮ

ನಾರಾವಿ ಜೈನ್‌ ಮಿಲನ್‌ ವತಿಯಿಂದ ಹೊಸ್ಮಾರು ಸಿದ್ಧರವನ ಕೂಟ ಬಸದಿಯಲ್ಲಿ ಕರಿಮಣೇಲು ಗುತ್ತು, ಕೆ. ಸನತ್‌ ಕುಮಾರ್‌ ಸೇಮಿತ, ಮರೋಡಿ ಗಾಳಿವನ ಎನ್.‌ ಕೆ. ಆರಿಗ, ರತ್ನರಾಜ್‌ ಆರಿಗ ಮತ್ತು ಲಲಿತಮ್ಮ (ಹೊಸ್ಮಾರು ಪ್ರೇಮ್‌ ಕುಮಾರ್‌ರವರ ತಾಯಿ) ಹಾಗೂ ಅಳಿಯೂರಿನ 102 ವರ್ಷದ ಹಿರಿಯ ಜೈನ ಮಹಿಳೆ, ನಾರಾವಿ ನಿರೀಕ್ಷಾ ಜಯವರ್ಮ ಇವರುಗಳನ್ನು ಊರಿನ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಕಾರ್ಕಳ: ಪೂಜಾ ಕಾರ್ಯಕ್ರಮ

Article Image

ಕಾರ್ಕಳ: ಪೂಜಾ ಕಾರ್ಯಕ್ರಮ

ಕಾರ್ಕಳ: ಅತಿಶಯ ಶ್ರೀ ಕ್ಷೇತ್ರ ನೆಲ್ಲಿಕಾರಿನ ಭ| 1008 ಶ್ರೀ ಅನಂತನಾಥ ಸ್ವಾಮಿ ಸನ್ನಿಧಿಯಲ್ಲಿ ನಾಳೆ (ಜೂ.24) ಮಂಗಳವಾರದಂದು ವರ್ಷಂಪ್ರತಿ ನಡೆಯುವ ಶ್ರೀ ಬ್ರಹ್ಮಯಕ್ಷ ದೇವರ ಸ್ಥಂಭಾರೋಹನ ಪೂಜಾ ಕಾರ್ಯಕ್ರಮವು ಜರಗಲಿರುವುದು ಕಾರ್ಯಕ್ರಮ: ದಿನಾಂಕ 24-06-2025ನೇ ಮಂಗಳವಾರ ಬೆಳಿಗ್ಗೆ ಗಂಟೆ 9.15ರಿಂದ ವಿಮಾನಶುದ್ಧಿ ಬೆಳಿಗ್ಗೆ ಗಂಟೆ 11.55ರಿಂದ ಶ್ರೀ ಬ್ರಹ್ಮಯಕ್ಷ ದೇವರಿಗೆ ಕಲಾರೋಪಣೆ ಮಧ್ಯಾಹ್ನ ಗಂಟೆ 12.30ಕ್ಕೆ ಲಕ್ಷ ಹೂವಿನ ಪೂಜೆ ಮಧ್ಯಾಹ್ನ ಗಂಟೆ 1.00ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ ರಾತ್ರಿ ಗಂಟೆ 9.00ಕ್ಕೆ ವಿಶೇಷ ಮಂಗಳಾರತಿ, ಸ್ಥಂಭಾರೋಹಣ.

ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ಮಾಹಿತಿ ಶಿಬಿರ ಕಾರ್ಯಕ್ರಮದಲ್ಲಿ ಡಾ. ಕೆ. ಜಯಕೀರ್ತಿ ಜೈನ್ ರವರಿಗೆ ಅಭಿನಂದನೆ

Article Image

ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ಮಾಹಿತಿ ಶಿಬಿರ ಕಾರ್ಯಕ್ರಮದಲ್ಲಿ ಡಾ. ಕೆ. ಜಯಕೀರ್ತಿ ಜೈನ್ ರವರಿಗೆ ಅಭಿನಂದನೆ

ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಯವರು ಮೂಡಬಿದ್ರಿ ಶ್ರೀ ದಿಗಂಬರ ಜೈನ ಮಠದಲ್ಲಿ ನಡೆದ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ಮಾಹಿತಿ ಶಿಬಿರ ಕಾರ್ಯಕ್ರಮದಲ್ಲಿ ಸಂಘಟನಾ ಕಾರ್ಯದರ್ಶಿಗಳು ಕರ್ನಾಟಕ ಸರಕಾರಿ ನಿವೃತ್ತಿ ನೌಕರರ ಸಂಘ ಬೆಂಗಳೂರು ಹಾಗೂ ಬೆಳ್ತಂಗಡಿ ತಾಲೂಕು ರಾಜ್ಯ ಸರಕಾರಿ ಅಧಿಕಾರಿಗಳ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರು ಆದ ಡಾ. ಕೆ. ಜಯಕೀರ್ತಿ ಜೈನ್ ರವರಿಗೆ ಅಭಿನಂದಿಸಿದರು. ಈ ಸಂದರ್ಭದಲ್ಲಿ ರಾಜ್ಯ ಅಲ್ಪ ಸಂಖ್ಯಾತ ಆಯೋಗದ ಸದಸ್ಯರಾದ ಪರಿಮಳ, ಬಾಹುಬಲಿ ಪ್ರಸಾದ್, ಉಪಸ್ಥಿತರಿದ್ದರು.

ದ ಕ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಮಾಹಿತಿ ಶಿಬಿರ

Article Image

ದ ಕ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಮಾಹಿತಿ ಶಿಬಿರ

ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು ಶ್ರೀ ದಿಗಂಬರ ಜೈನ ಮಠ ಮೂಡುಬಿದ್ರೆ ಇವರ ಪಾವನ ಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಮಾಹಿತಿ ಶಿಬಿರವು ಮೂಡಬಿದ್ರೆ ಜೈನ್ ಮಠದ ಶ್ರೀ ಭಟ್ಟಾರಕರ ಭವನದಲ್ಲಿ ಜರಗಿತು. ಕಾರ್ಯಕ್ರಮವನ್ನು ಪೂಜ್ಯ ಸ್ವಾಮೀಜಿಯವರು ಉದ್ಘಾಟಿಸಿದರು. ಶಿಬಿರದಲ್ಲಿ ರಾಜ್ಯ ಅಲ್ಪಸಂಖ್ಯಾತ ಆಯೋಗದ ಸದಸ್ಯರಾದ ಪರಿಮಳ ಅವರು ದ ಕ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಗಳಾದ ಜಿನೇಂದ್ರ ಕೋಟ್ಯಾನ್, ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲ ಬಸದಿಯ ಆಡಳಿತ ಮಂಡಳಿಯ ಸಂಚಾಲಕರು ಡಾ. ಕೆ. ಜಯಕೀರ್ತಿ ಜೈನ್, ಶ್ರೀ ಜೈನ್ ಮಠದ ಸಲಹಾ ಸಮಿತಿ ಅಧ್ಯಕ್ಷರಾದ ಬಾಹುಬಲಿ ಪ್ರಸಾದ್, ಜಿಲ್ಲಾ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧಿಕಾರಿಗಳು ಭಾಗವಸಿದ್ದರು. ರಾಜ್ಯ ಅಲ್ಪ ಸಂಖ್ಯಾತ ಆಯೋಗದ ಸದಸ್ಯರಾದ ಪರಿಮಳರವರನ್ನು ಪೂಜ್ಯ ಸ್ವಾಮೀಜಿಯವರು ಸನ್ಮಾನಿಸಿದರು, ಜಿನೇಂದ್ರ ಕೋಟ್ಯಾನ್, ಡಾ. ಕೆ. ಜಯಕೀರ್ತಿ ಜೈನ್ ರವರನ್ನು ಪೂಜ್ಯ ಸ್ವಾಮೀಜಿಯವರು ಅಭಿನಂದಿಸಿದರು. ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪುರೋಹಿತರು ಹಾಗೂ ಶ್ರಾವಕ ಶ್ರಾವಕಿಯರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪುರೋಹಿತರುಗಳಿಗೆ ಧಾರ್ಮಿಕ ಪ್ರಮಾಣ ಪತ್ರವನ್ನು ನೀಡಲಾಯಿತು. ಡಾ. ಕೆ. ಜಯಕೀರ್ತಿ ಜೈನ್ ಸ್ವಾಗತಿಸಿ, ಬಾಹುಬಲಿ ಪ್ರಸಾದ್ ವಂದನಾರ್ಪಣೆ ಸಲ್ಲಿಸಿ, ಸೌಮ್ಯಶ್ರೀ ಪ್ರಾoಶುಪಾಲರು ಸ್ವಸ್ತಿಶ್ರೀ ಪದವಿ ಪೂರ್ವ ವಸತಿ ಕಾಲೇಜು ಮೂಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು.

ತುಮಕೂರು ಟಿ.ಎನ್. ಅಜಿತ್ ಜೈನ್ ರವರು ನಿಧನ

Article Image

ತುಮಕೂರು ಟಿ.ಎನ್. ಅಜಿತ್ ಜೈನ್ ರವರು ನಿಧನ

ತುಮಕೂರು ನಗರ ಅಗ್ರಹಾರದಲ್ಲಿ ವಾಸವಾಗಿದ್ದ ತುಮಕೂರಿನ ಹೆಸರಾಂತ ಸನ್ಮತಿ ಪೇಂಟ್ಸ್ ಮಾಲೀಕರಾದ, ಹಿರಿಯ ವಾಣಿಜ್ಯೋದ್ಯಮಿ ಟಿ.ಎನ್. ಅಜಿತ್ ಜೈನ್ ರವರು ಇಂದು (ಜೂ.13) ಶುಕ್ರವಾರ ಬೆಳಿಗ್ಗೆ ನಿಧನ ಹೊಂದಿದರು. ಇವರು ಪತ್ನಿ ಶಾಂತಲಾ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಪರಮಪೂಜ್ಯ ಯುಗಳ ಮನಿ ಮಹಾರಾಜರ ಸಂಘಪತಿಗಳಾಗಿದ್ದ ಇವರು ಧಾರ್ಮಿಕ, ಸಾಮಾಜಿಕ ವ್ಯವಹಾರಿಕ, ಇಂಜಿನಿಯರಿಂಗ್, ಶೈಕ್ಷಣಿಕ ಹಾಗೂ ಧರ್ಮ ಪ್ರಭಾವನೆಗೆ ಮಾಡಿದ ಶ್ರೇಷ್ಠ ಸೇವೆ ಹಾಗೂ ಸತ್ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

First Previous

Showing 3 of 8 pages

Next Last