Article Image

ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲ ಜಿನಮಂದಿರದ ವಾರ್ಷಿಕೋತ್ಸವ

Article Image

ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲ ಜಿನಮಂದಿರದ ವಾರ್ಷಿಕೋತ್ಸವ

ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲದ ಭಗವಾನ್ ೧೦೦೮ ಶ್ರೀ ಚಂದ್ರನಾಥ ಸ್ವಾಮಿ ಜಿನಮಂದಿರದಲ್ಲಿ ಪ.ಪೂ. ಸ್ವಸ್ತಿಶ್ರೀ ಸೌರಭಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳು ಸಂಸ್ಥಾನ ಮಠ ತಿಜಾರ ರಾಜಸ್ಥಾನ ಇವರ ಪಾವನ ಸಾನ್ನಿಧ್ಯ ಹಾಗೂ ಮಾರ್ಗದರ್ಶನದೊಂದಿಗೆ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ವಿಜೃಂಭಣೆಯಿಂದ ವಾರ್ಷಿಕೋತ್ಸವ ಹಾಗೂ ಶಾಂತಿ ಚಕ್ರ ಆರಾಧನೆ, ಪದ್ಮಾವತಿ ಅಮ್ಮನವರ ಆರಾಭನೆ, ಲಕ್ಷ ಹೂವಿನ ಪೂಜೆ, ೨೪ ಕಲಶಾಭಿಷೇಕ, ಉತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಪ್ರತಿಷ್ಠಾ ಪುರೋಹಿತರಾದ ಜಯರಾಜ್ ಇಂದ್ರ ಮತ್ತು ಅರಹಂತ ಇಂದ್ರ ಹಾಗೂ ತಂಡದವರಿಂದ ಮಾ. 11ರಂದು ಜರುಗಿತು. ಈ ಸಂದರ್ಭದಲ್ಲಿ ವಿಶೇಷ ಸಾಧನೆ ಮಾಡಿದ ಆಡಳಿತ ಮಂಡಳಿ ಸದಸ್ಯರಾದ ಎಚ್. ವಿಜಯ ಕುಮಾರ್, ಮನೋರಮಾ, ವಿಮಲ, ಅಜಿತ್ ಕುಮಾರ್, ಶೋಭಾ, ಚಂದನಾ, ಸುಮಂತ್ ಜೈನ್ ಮುಂತಾದವರನ್ನು ಪೂಜ್ಯ ಸ್ವಾಮೀಜಿಯವರು ಅಭಿನಂದಿಸಿ, ಆಶೀವರ್ದಿಸಿದರು. ಪೂಜ್ಯ ಸ್ವಾಮೀಜಿಗಳವರು ಮಾತನಾಡುತ್ತಾ, ಶ್ರೀ ಕ್ಷೇತ್ರ ಚಂದ್ರಪುರವು ಅತೀ ಪ್ರಾಚೀನವಾದ ಕ್ಷೇತ್ರವಾಗಿದ್ದು, ಈ ಕ್ಷೇತ್ರವು ಅತಿಶಯವಾಗಿರುತ್ತದೆ. ಈ ಕ್ಷೇತ್ರ ದರ್ಶನ ಮಾಡಿದವರ ಪಾಪವು ನಾಶವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ. ಕ್ಷೇತ್ರದಲ್ಲಿ ನಿರಂತರವಾಗಿ ಆರಾಧನೆಗಳು, ಪೂಜೆಗಳು ನಡೆದು ಲೋಕ ಕಲ್ಯಾಣವಾಗಲಿ. ಈ ಕ್ಷೇತ್ರಕ್ಕೆ ಇನ್ನೊಮ್ಮೆ ಬೇಟಿ ನೀಡಿ ಈ ಕ್ಷೇತ್ರದಲ್ಲಿ ಎರಡು ದಿನ ಇದ್ದು ಧಾರ್ಮಿಕ ಕಾರ್ಯಕ್ರಮ ನಡೆಸುವುದಾಗಿ ಆಶೀರ್ವಚನ ನೀಡಿದರು. ಸಮಿತಿಯ ಸಂಚಾಲಕರಾದ ಡಾ.ಕೆ. ಜಯಕೀರ್ತಿ ಜೈನ್ ಕಾರ್ಯಕ್ರಮ ನಿರ್ವಹಿದರು. ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು ಮತ್ತು ರಾಣಿ ಕಾಳಲಾದೇವಿ ಮಹಿಳಾ ಮಂಡಲದ ಪದಾಧಿಕಾರಿಗಳು, ಸದಸ್ಯರು ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಹೂವಿನ ಹಡಗಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಂಪನ್ನ

Article Image

ಹೂವಿನ ಹಡಗಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಂಪನ್ನ

ವಿಜಯನಗರ ಜಿಲ್ಲೆ, ಹೂವಿನ ಹಡಗಲಿ ಪಟ್ಟಣದ ಪಾರ್ಶ್ವನಾಥ ಜಿನ ಮಂದಿರದ ಶ್ರೀ ಪಾರ್ಶ್ವನಾಥ ಸಭಾ ಮಂಟಪದಲ್ಲಿ ಶ್ರೀ ಜ್ವಾಲಾಮಾಲಿನಿ ಮಹಿಳಾ ಸಮಾಜ ಹಾಗೂ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಸಹಭಾಗಿತ್ವದಲ್ಲಿ ಮಾ. 08ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ದೀಪ ಪ್ರಜ್ವಲನಿಯ ಮೂಲಕ ಉದ್ಘಾಟಿಸಲಾಯಿತು. ಶ್ರೀ ಜ್ವಾಲಾಮಾಲಿನಿ ಮಹಿಳಾ ಸಮಾಜದ ಅಧ್ಯಕ್ಷರಾದ ಎಂ.ಡಿ. ಪದ್ಮಾವತಿ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಮಹಿಳಾ ಸಾಧಕೀಯರಾದ ಮಹಾವೀರ ಅಲ್ಪಸಂಖ್ಯಾತರ ಪತಿನ ಸಹಕಾರ ಸಂಘದ ಪುಷ್ಪವತಿ ಪಾರ್ಶ್ವನಾಥ ರೇವಡಿ, ಶಿಲ್ಪ ಸಂತೋಷ ಸೂಗುರು, ನಾಗ ಮಂಜುಳಾ ಜೈನ್‌ರನ್ನು ಸನ್ಮಾನಿಸಲಾಯಿತು. ಚಂಪರಾಯಪ್ಪ ಹೊಳಲು ಸ್ವಾಗತಿಸಿದರು. ಅನುಷಾ ಮಯೂರ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಮೇಘ ಭಾಗೇಶ್ ಜೈನರ್ ವಂದಿಸಿದರು.

ರತ್ನತ್ರಯ ಜೈನ ಮಿಲನ್ ಮಾಸಿಕ ಸಭೆಯ ವರದಿ

Article Image

ರತ್ನತ್ರಯ ಜೈನ ಮಿಲನ್ ಮಾಸಿಕ ಸಭೆಯ ವರದಿ

ದಿನಾಂಕ 07-03-2025 ಶುಕ್ರವಾರದಂದು ರತ್ನತ್ರಯ ಜೈನ ಮಿಲನ್‌ನ ಮಾಸಿಕ ಸಭೆಯನ್ನು ಆನ್‌ಲೈನ್‌ಲ್ಲಿ ನಡೆಸಲಾಯಿತು. ಮುಖ್ಯ ಅತಿಥಿಗಳಾಗಿ ಪ್ರೇಮಕುಮಾರಿ, ಸುಖಾನಂದ, ರತ್ನತ್ರಯ ಜೈನ ಮಿಲನ ಅಧ್ಯಕ್ಷರಾದ ನವೀನ್ ಕುಮಾರ್ ಗುಬ್ಬಿ ಇವರು ಉಪಸ್ಥಿತರಿದ್ದರು. ಪಂಚ ನಮಸ್ಕಾರ ಪಠಣೆ ಮತ್ತು ಆರ್. ಎಸ್. ಭಾಮ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ವೀಣಾ ಅರಿಹಂತ್ ಅವರು ರತ್ನತ್ರಯ ಮಿಲನಿನ ಉದ್ದೇಶವನ್ನು ತಿಳಿಸಿದರು. ಪದ್ಮಸೂರಿ ಅವರು ಹಿಂದಿನ ಸಭೆಯ ವರದಿಯನ್ನು ಮಂಡಿಸಿದರು. ಪೂರ್ಣಿಮಾ ಜಯಂತರವರು ಮಾರ್ಚ್ ತಿಂಗಳ ಪರ್ವವಾಚನ ಮಾಡಿದರು. ಸುನೀತಾ ಸುಂದರರಾಜ್ ಅವರು ಕಳೆದ ತಿಂಗಳಲ್ಲಿ ವಿವಾಹ ವಾರ್ಷಿಕ ಹಾಗೂ ಹುಟ್ಟುಹಬ್ಬ ಆಚರಿಸಿಕೊಂಡ ರತ್ನತ್ರಯ ಮಿಲನ ಸದಸ್ಯರಿಗೆ ಶುಭ ಕೋರಿದರು. ರಾಣಿ ಪ್ರಫುಲ್ಲ ಅವರು ಅತಿಥಿಗಳ ಪರಿಚಯ ಮಾಡಿದರು. ಮುಖ್ಯ ಅತಿಥಿಗಳಾಗಿಭಾಗವಹಿಸಿದ್ದ ಸಿ. ಪಿ. ಉಷಾ ರಾಣಿಯವರು ವೀರ್ ಚಂದ್ ಗಾಂಧಿಯವರ ಬದುಕು ಮತ್ತು ಸಾಧನೆಗಳ ಕುರಿತು ಉಪನ್ಯಾಸ ಮಾಡಿದರು. ನವೀನ್ ಕುಮಾರ್ ಗುಬ್ಬಿಯವರು ಅಧ್ಯಕ್ಷರ ನುಡಿಗಳನ್ನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಅನಂತ ಕುಮಾರಿ ಅವರು ನಡೆಸಿಕೊಟ್ಟರು. ಶೋಭಿತ ನವೀನಕುಮಾರ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ವೇಣೂರು: ಮಹಿಳಾ ದಿನಾಚರಣೆ ಆಚರಣೆ

Article Image

ವೇಣೂರು: ಮಹಿಳಾ ದಿನಾಚರಣೆ ಆಚರಣೆ

ಬೆಳ್ತಂಗಡಿ ತಾಲೂಕು, ವೇಣೂರಿನ ಬ್ರಾಹ್ಮೀ ಜೈನ ಮಹಿಳಾ ಸಂಘದ ವತಿಯಿಂದ ಮಹಿಳಾ ದಿನಾಚರಣೆಯನ್ನು ಮಾರ್ಚ್ 8ರಂದು ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟಣೆಯನ್ನು ಹಿರಿಯರು ಆದ ವೇಣೂರಿನ ಸುನಂದಾದೇವಿ ಬಿ. ಪಿ. ಇಂದ್ರರವರು ನೆರವೇರಿಸಿದರು. ‌ ಮುಖ್ಯ ಭಾಷಣಕಾರರಾಗಿ ಬೆಳ್ತಂಗಡಿಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕರಾದ ಉಷಾ ನಾಯಕ್‌ರವರು ಆಗಮಿಸಿ, ಮಹಿಳೆಯರು ತನ್ನ ಕುಟುಂಬದೊಂದಿಗೆ ಮತ್ತು ಸಮಾಜದಲ್ಲಿ ನಿರ್ವಹಿಸುವ ವಿವಿಧ ಪಾತ್ರಗಳ ಬಗ್ಗೆ ವಿವರಿಸಿದರು. ಮಹಿಳೆ ಎಂದೂ ಕುಗ್ಗಬಾರದು ಸವಾಲುಗಳನ್ನು ತಾಳ್ಮೆಯಿಂದ ಎದುರಿಸಬೇಕು ಎಂದು ಹೇಳಿದರು. ಬ್ರಾಹ್ಮೀ ಜೈನ ಮಹಿಳಾ ಸಂಘದ ಕೋಶಾಧಿಕಾರಿಯಾದ ವಾಣಿಶ್ರೀ ವೃಷಭರಾಜ್‌ರವರು ಮಹಿಳೆಯರ ಉದಾಹರಣೆ ಮೂಲಕ ಮಹಿಳಾ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ನಂತರ ಬ್ರಾಹ್ಮೀ ಜೈನ ಮಹಿಳಾ ಸಂಘದ ಹಿರಿಯ ಸದಸ್ಯರಾದ ಸುನಂದಾ ಭರತ್‌ರಾಜ್‌ ಮತ್ತು ಶಶಿಪ್ರಭಾ ಸುರೇಶ್‌ ಆರಿಗರವರನ್ನು ಮಹಿಳಾ ದಿನಾಚರಣೆ ವಿಶೇಷವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬ್ರಾಹ್ಮೀ ಜೈನ ಮಹಿಳಾ ಸಂಘದ ಅದ್ಯಕ್ಷರು ಮತ್ತು ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ನಿರ್ದೇಶಕಿಯಾಗಿರುವ ಸರೋಜಾ ಗುಣಪಾಲ್‌‌ ಜೈನ್‌ರವರು ಮಹಿಳಾ ದಿನಾಚರಣೆ ಸಂಕ್ಷಿಪ್ತ ಮಾಹಿತಿ ನೀಡಿದರು. ಗೌರವ ಉಪಸ್ಥಿತಿಯನ್ನು ಬ್ರಾಹ್ಮೀ ಜೈನ ಮಹಿಳಾ ಸಂಘದ ಸ್ಥಾಪಕ ಅಧ್ಯಕ್ಷರಾದ ಪ್ರಸನ್ನ ಆರ್.‌ ಹೆಗ್ಡೆರವರು ವಹಿಸಿದ್ದರು. ದೀಪಶ್ರೀ ಕತ್ತೋಡಿ ಮತ್ತು ಪ್ರಿಯಾಲತಾ ಮೂಡುಕೋಡಿರವರು ಪ್ರಾರ್ಥಿಸಿ, ಕಾರ್ಯದರ್ಶಿ ಆಶಾಲತಾ ಜೈನ್‌ ಸ್ವಾಗತಿಸಿದರು. ಮಮತಾ ಪ್ರಸಾದ್‌ ಜೈನ್‌ರವರು ವಂದಿಸಿದರು. ಕಾರ್ಯಕ್ರಮವನ್ನು ಸಂಧ್ಯಾ ಸುಕುಮಾರ್‌ ಜೈನ್‌ರವರು ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ತುಂಗಭದ್ರ ಪ್ರೌಢಶಾಲೆಯಲ್ಲಿ ಎಸ್.ಎಸ್. ಎಲ್. ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿ

Article Image

ತುಂಗಭದ್ರ ಪ್ರೌಢಶಾಲೆಯಲ್ಲಿ ಎಸ್.ಎಸ್. ಎಲ್. ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿ

ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ ಮತ್ತು ಶ್ರೀ ಜ್ವಾಲಮಾಲಿನಿ ಮಹಿಳಾ ಸಮಾಜ ಹೂವಿನಡಗಲಿ ಇವರ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ತುಂಗಭದ್ರ ಪ್ರೌಢಶಾಲೆಯಲ್ಲಿ ಎಸ್.ಎಸ್. ಎಲ್. ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿ, ಪರೀಕ್ಷೆ ಹೇಗೆ ಬರೆಯಬೇಕು, ಅದನ್ನು ಹೀಗೆ ಎದುರಿಸಬೇಕು ಎಂಬ ಬಗ್ಗೆ ಸಲಹೆ ಹಾಗೂ ಮಾರ್ಗದರ್ಶನ ನೀಡಲಾಯಿತು. ಪರೀಕ್ಷೆಯಲ್ಲಿ ಫೇಲಾದರೂ ವಿದ್ಯಾರ್ಥಿಗಳಲ್ಲಿರುವ ಸದಾವಕಾಶಗಳು, ಇನ್ನಿತರ ವಿಚಾರಗಳನ್ನು ಹಾಗೂ ಯಾವುದೇ ಅನಾಹುತಗಳಿಗೆ ಎಡೆ ಮಾಡಿಕೊಡದಂತೆ ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಜ್ವಾಲಾಮಾಲಿನಿ ಮಹಿಳಾ ಸಮಾಜದ ಅಧ್ಯಕ್ಷ ಎಂ. ಡಿ. ಪದ್ಮಾವತಿ, ಉಪಾಧ್ಯಕ್ಷರಾದ ಜಯಶ್ರೀ ಮಂಜುನಾಥ್ ಜೈನ, ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಕಾರ್ಯಕಾರಿ ಸಮಿತಿಯ ಸೀಮಾ ಪ್ರಶಾಂತ್ ಹೊಳಲು ಕಾರ್ಯದರ್ಶಿ ಚಂಪಾರಾಯಪ್ಪ ಹೊಳಲು, ಖಜಾಂಚಿ ಮೇಘ ಬಾಗೇಶ ಜೈನರ್, ಸದಸ್ಯರಾದ ಪದ್ಮ ಅಜಿತ್ ಹೊಳಲು, ವೈಶಾಲಿ ಅಮಿತ್ ಹೊಳಲು, ಭಾಗವಹಿಸಿದ್ದರು ಇದೇ ಸಂದರ್ಭದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರುಗಳಿಗೆ ಪೆನ್ಸಿಲ್ ಗಳನ್ನು ವಿತರಿಸಲಾಯಿತು. ಜೆ ರಂಗನಾಥ- ತುಮಕೂರು

ಅಳದಂಗಡಿಯಲ್ಲೊಂದು ಅಪರೂಪದ ಕಾರ್ಯಕ್ರಮ

Article Image

ಅಳದಂಗಡಿಯಲ್ಲೊಂದು ಅಪರೂಪದ ಕಾರ್ಯಕ್ರಮ

ಕರಂಬಾರು ಗುತ್ತು ಪ್ರಸನ್ನ ಹೆಗ್ಡೆ ಹಾಗೂ ನವೀನ್ ಲೋಬೋ ಮಾಲಕತ್ವದ SKY ELECTRICALS SERVICE ಹಾಗೂ PRIME ASSOCIATE ಅಳದಂಗಡಿ ಶಾಖೆ ಉದ್ಘಾಟನೆಯು ಅಳದಂಗಡಿ ಸೋಮನಾಥೇಶ್ವರಿ ದೇವಸ್ಥಾನದ ಬಳಿಯ ಪಾವನಿ ಕಾಂಪ್ಲೆಕ್ಸ್ ನಲ್ಲಿ ಫೆ.28ರಂದು ನಡೆಯಿತು. ಉದ್ಘಾಟನೆಯನ್ನು ಅಳದಂಗಡಿ ಅರಮನೆಯ ಡಾ. ಪದ್ಮಪ್ರಸಾದ್ ಅಜಿಲರು ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಆಸುಪಾಸಿನ ಲೈನ್ ಮೆನ್ ಗಳನ್ನು ಸನ್ಮಾನಿಸುವುದರ ಮೂಲಕ ಮಾಲಕ ಪ್ರಸನ್ನ ಹೆಗ್ಡೆ ಮಾದರಿ ಕಾರ್ಯಕ್ರಮಕ್ಕೆ ನಾಂದಿ ಹಾಡಿದರು. ಸರಿಸುಮಾರು 20 ಮಂದಿ ಮೆಸ್ಕಾಂ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಇದೇ ಕಾರ್ಯಕ್ರಮದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಚಿಂತಕರಾದ ನಿರಂಜನ್ ಜೈನ್ ಕುದ್ಯಾಡಿ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಿವಪ್ರಸಾದ್ ಅಜಿಲರು, ಉದ್ಯಮಿಗಳಾದ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಡಾ. ಶಶಿಧರ್ ಡೋಂಗ್ರೆ, ಯೋಗೀಶ್ ನಡಕ್ಕರ, ಅಶ್ವಿನ್ ಪಿರೇರಾ ಮೂಡುಬಿದಿರೆ, ರವಿಪ್ರಸಾದ್ ಶೆಟ್ಟಿ ಮೂಡುಬಿದಿರೆ, ಸಂದೀಪ್ ಕುಮಾರ್ ಮೆಸ್ಕಾಂ ಇಂಜಿನಿಯರ್, ಗ್ರಾಮಪಂಚಾಯತ್ ಅಧ್ಯಕ್ಷೆ ಸರಸ್ವತಿ, ಗ್ರಾಮ ಪಂಚಾಯತ್ ಅಧಿಕಾರಿ ಪೂರ್ಣಿಮಾ ಜೆ, ನಿತ್ಯಾನಂದ ಶೆಟ್ಟಿ ನೊಚ್ಚ ಭಾಗವಹಿಸಿ ಶುಭಕೋರಿದರು. ಆಮಂತ್ರಣ ವಿಜಯ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಶ್ರೀರಂಗ ಮಯ್ಯ ಸಹಕರಿಸಿದರು.

ಕಾರ್ಕಳ: ಭಗವಾನ್ ೧೦೦೮ ಶ್ರೀ ಆದಿನಾಥ ಸ್ವಾಮಿಯ ನಿರ್ಮಾಣ ಕಲ್ಯಾಣ ಮಹೋತ್ಸವ

Article Image

ಕಾರ್ಕಳ: ಭಗವಾನ್ ೧೦೦೮ ಶ್ರೀ ಆದಿನಾಥ ಸ್ವಾಮಿಯ ನಿರ್ಮಾಣ ಕಲ್ಯಾಣ ಮಹೋತ್ಸವ

ಶ್ರೀ ಕರ್ನಾಟಕ ಜೈನ ಪುರೋಹಿತ ಸಂಘ ಕಾರ್ಕಳ, ಇದರ ವತಿಯಿಂದ ಭಗವಾನ್ ೧೦೦೮ ಶ್ರೀ ಆದಿನಾಥ ಸ್ವಾಮಿಯ ನಿರ್ಮಾಣ ಕಲ್ಯಾಣ ಮಹೋತ್ಸವವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಆ ಸಂದರ್ಭದಲ್ಲಿ ಹಿರಿಯ ಪುರೋಹಿತರಿಗೆ ಗೌರವ ಸಮರ್ಪಣಾ ಸಮಾರಂಭ ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮಗಳು ನಡೆದವು.

ನರಸಿಂಹರಾಜಪುರ: ವಾರ್ಷಿಕ ರಥಯಾತ್ರಾ ಮಹೋತ್ಸವ

Article Image

ನರಸಿಂಹರಾಜಪುರ: ವಾರ್ಷಿಕ ರಥಯಾತ್ರಾ ಮಹೋತ್ಸವ

ಶ್ರೀ ಕ್ಷೇತ್ರ ಸಿಂಹನಗದ್ದೆ ಅತಿಶಯ ಮಹಾಕ್ಷೇತ್ರದಲ್ಲಿ ಭಗವಾನ್ ಶ್ರೀ ೧೦೦೮ ಚಂದ್ರಪ್ರಭ ಸ್ವಾಮಿ ಹಾಗೂ ಮಹಾಮಾತೆ ಶ್ರೀ ಜ್ವಾಲಾಮಾಲಿನಿ ಅಮ್ಮನವರ ವಾರ್ಷಿಕ ರಥಯಾತ್ರಾ ಮಹೋತ್ಸವವು ಪ.ಪೂ. ಸ್ವಸ್ತಿಶ್ರೀ ಲಕ್ಷ್ಮೀಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ನೇತೃತ್ವ, ಮಾರ್ಗದರ್ಶನ ಹಾಗೂ ಪಾವನ ಸಾನ್ನಿಧ್ಯದಲ್ಲಿ ಇದೇ ಬರುವ ದಿನಾಂಕ 21-03-2025ರಿಂದ ಮೊದಲ್ಗೊಂಡು ದಿನಾಂಕ 25-03-2025ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

ಜಿನ ಸಹಸ್ರನಾಮ ಮತ್ತು ಭಕ್ತಾಮರ ಪುಂಜ ಅರ್ಘ್ಯ

Article Image

ಜಿನ ಸಹಸ್ರನಾಮ ಮತ್ತು ಭಕ್ತಾಮರ ಪುಂಜ ಅರ್ಘ್ಯ

ಅಳಿಯೂರು: ಇಲ್ಲಿನ ಆದಿನಾಥ ಸ್ವಾಮಿ ಬಸದಿಯಲ್ಲಿ ನಾಳೆ (ಫೆ. 26) ಮಧ್ಯಾಹ್ನ 2.00ರಿಂದ‌ ಭಗವಾನ್‌ ಶ್ರೀ ಆದಿನಾಥ ಸ್ವಾಮಿಯ ಮೋಕ್ಷ ಕಲ್ಯಾಣ ಪರ್ವ ದಿನದ ಪ್ರಯುಕ್ತ ಶ್ರೀ ಜ್ವಾಲಾಮಾಲಿನಿ ಮಹಿಳಾ ಸಂಘದ ವತಿಯಿಂದ ಜಿನ ಸಹಸ್ರನಾಮ ಮತ್ತು ಭಕ್ತಾಮರ ಪುಂಜ ಅರ್ಘ್ಯ ನಡೆಯಲಿದೆ. ಹಾಗೂ ಸಂಜೆ ಗಂಟೆ 6.30ಕ್ಕೆ ಆರತಿ ಮತ್ತು ಜಿನಭಜನೆ ಕಾ‍ರ್ಯಕ್ರಮ ಜರಗಲಿದೆ.

ಸವಣಾಲು : ಬಸದಿಯಲ್ಲಿ ಧಾಮ ಸಂಪ್ರೋಕ್ಷಣ ಮಹೋತ್ಸವ

Article Image

ಸವಣಾಲು : ಬಸದಿಯಲ್ಲಿ ಧಾಮ ಸಂಪ್ರೋಕ್ಷಣ ಮಹೋತ್ಸವ

ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ಸವಣಾಲು ಗ್ರಾಮದಲ್ಲಿರುವ ಭಗವಾನ್ ಶ್ರೀ ಆದಿನಾಥ ಸ್ವಾಮಿ ಬಸದಿಯು ಊರ ಹಾಗೂ ಪರವೂರ ದಾನಿಗಳಿಂದ ಜೀರ್ಣೋದ್ಧಾರಗೊಂಡಿದ್ದು, ಧಾಮ ಸಂಪ್ರೋಕ್ಷಣ ಮಹೋತ್ಸವವು ಫೆ. 28 (ಶುಕ್ರವಾರ) ಹಾಗೂ ಮಾರ್ಚ್ 1 (ಶನಿವಾರ) ಮತ್ತು 2 ರಂದು (ಭಾನುವಾರ) ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆಯಲಿದೆ ಎಂದು ಬಸದಿಯ ಆಡಳಿತ ಮಂಡಳಿ ಅಧ್ಯಕ್ಷರಾದ ಕಿಶೋರ್ ಹೆಗ್ಡೆ, ಎರ್ಮೆದೋಡಿ ಗುತ್ತು ಮತ್ತು ಕಾರ್ಯದರ್ಶಿ ಸುರೇಶ್ ಕುಮಾರ್, ಉಜಿರೆ ತಿಳಿಸಿದ್ದಾರೆ. ಫೆ:28: ಶುಕ್ರವಾರ: ಬೆಳಿಗ್ಗೆ ಗಂಟೆ 8 ರಿಂದ ಇಂದ್ರಪ್ರತಿಷ್ಠೆ, ತೋರಣಮುಹೂರ್ತ, ವಿಮಾನಶುದ್ಧಿ, ಮುಖವಸ್ತ್ರ ಉದ್ಘಾಟನೆ. ಅಪರಾಹ್ನ ಗಂಟೆ 2.30ರಿಂದ ನಾಂದಿಮಂಗಲ ಪೂಜಾವಿಧಾನ, ಕ್ಷೇತ್ರಪಾಲ ಪ್ರತಿಷ್ಠೆ, ನಾಗಪ್ರತಿಷ್ಠೆ, ಭಗವಾನ್ ಆದಿನಾಥ ಸ್ವಾಮಿಗೆ 24 ಕಲಶ ಅಭಿಷೇಕ, ಮಹಾಪೂಜೆ ಮಾ. 1: ಶನಿವಾರ: ಬೆಳಿಗ್ಗೆ 8 ಗಂಟೆಯಿಂದ ನಿತ್ಯವಿಧಿ ಸಹಿತ ವಾಸ್ತು ಪೂಜಾವಿಧಾನ, ನವಗ್ರಹ ಶಾಂತಿ, ಅಪರಾಹ್ನ ಗಂಟೆ 2 ರಿಂದ ಪದ್ಮಾವತಿ ದೇವಿಗೆ ರಜತಕವಚ ಸಮರ್ಪಣೆ, ಆರಾಧನೆ, ಲಕ್ಷ ಹೂವಿನ ಪೂಜೆ, ಭಗವಾನ್ ಆದಿನಾಥ ಸ್ವಾಮಿಗೆ ೫೪ ಕಲಶ ಅಭಿಷೇಕ, ಮಹಾಪೂಜೆ ಮಾ. 2: ಭಾನುವಾರ: ಬೆಳಿಗ್ಗೆ ಗಂಟೆ 8 ರಿಂದ ಧಾಮ ಸಂಪ್ರೋಕ್ಷಣೆ, ಭಗವಾನ್ ಆದಿನಾಥ ಸ್ವಾಮಿ ಪ್ರತಿಷ್ಠೆ, ಶಿಖರಾರೋಹಣ. ಅಪರಾಹ್ನ ಗಂಟೆ 3.30 ರಿಂದ ಭಕ್ತಾಮರ ಆರಾಧನೆ. ಭಗವಾನ್ ಆದಿನಾಥ ಸ್ವಾಮಿಗೆ 108 ಕಲಶ ಅಭಿಷೇಕ, ಮಹಾಪೂಜೆ, ತೋರಣ ವಿಸರ್ಜನೆ. ಸೇವಾಕರ್ತೃಗಳು: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರು ಹಾಗೂ ಕುಟುಂಬಸ್ಥರು. ಪ್ರತಿಷ್ಠಾಚಾರ್ಯ ಬೆಳ್ತಂಗಡಿ ಜಯರಾಜ ಇಂದ್ರರು, ಪುಷ್ಪರಾಜ ಇಂದ್ರರು ಮತ್ತು ಸ್ಥಳ ಪುರೋಹಿತ ವೃಷಭರಾಜ ಇಂದ್ರರು ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸುವರು. ಧಾರ್ಮಿಕ ಸಭೆ: ಮಾ. 2 ರಂದು ಭಾನುವಾರ ಸಂಜೆ 5 ಗಂಟೆಯಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡುವರು. ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲ ಅಧ್ಯಕ್ಷತೆ ವಹಿಸುವರು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಕಿಶೋರ್ ಹೆಗ್ಡೆ: ಮೊ: 9148659620

ಬಂಟ್ವಾಳ ಜೈನ್ ಮಿಲನ್ ಮತ್ತು ಶ್ರೀ ಅನಂತಪಾರ್ಶ್ವ ಜೈನ್ ಮಿಲನ್, ಕುಪ್ಪೆಪದವು ಇವುಗಳ ಜಂಟಿ ಮಾಸಿಕ ಸಭೆ

Article Image

ಬಂಟ್ವಾಳ ಜೈನ್ ಮಿಲನ್ ಮತ್ತು ಶ್ರೀ ಅನಂತಪಾರ್ಶ್ವ ಜೈನ್ ಮಿಲನ್, ಕುಪ್ಪೆಪದವು ಇವುಗಳ ಜಂಟಿ ಮಾಸಿಕ ಸಭೆ

ಭಾರತೀಯ ಜೈನ್ ಮಿಲನ್ ವಲಯ 8, ಮಂಗಳೂರು ವಿಭಾಗ ಇದರ ಆಶ್ರಯದಲ್ಲಿ ಬಂಟ್ವಾಳ ಜೈನ್ ಮಿಲನ್ ಮತ್ತು ಶ್ರೀ ಅನಂತಪಾರ್ಶ್ವ ಜೈನ್ ಮಿಲನ್, ಕುಪ್ಪೆಪದವು ಇವುಗಳ ಜಂಟಿ ಮಾಸಿಕ ಸಭೆ ಹಾಗೂ ಜಿನ ಭಜನ ವಿಜೇತ ತಂಡಗಳಿಗೆ ಪುರಸ್ಕಾರ ಸಮಾರಂಭ ಮತ್ತು ಮಾಹಿತಿ ಕಾರ್ಯಕ್ರಮವು ದಿನಾಂಕ 23- 2 -2025 ಆದಿತ್ಯವಾರ ಅಪರಾಹ್ನ 3.30ಕ್ಕೆ ಸರಿಯಾಗಿ ಕುಪ್ಪೆಪದವು ಅನಂತರಾಜ್ ಸಭಾಭವನದಲ್ಲಿ ನಡೆಯಿತು. ಪ್ರಾರಂಭದಲ್ಲಿ ನೇರೆಂಕಿ ಪಾರ್ಶ್ವನಾಥ್ ಮೂಡಬಿದ್ರೆ ಇವರು ಜೈನ ಬಸದಿಗಳ ದಾಖಲೀಕರಣದ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿವರಣೆಯೊಂದಿಗೆ ನಡೆಸಿಕೊಟ್ಟರು. ಬಳಿಕ ನಡೆದ ಮಾಸಿಕ ಸಭೆಯಲ್ಲಿ ನೇರಂಕಿ ಪಾರ್ಶ್ವನಾಥ್ ಇವರನ್ನು ಸನ್ಮಾನಿಸಲಾಯಿತು . ವಿಜೇತ ಜಿನಭಜನಾ ತಂಡಗಳಾದ ಅನಂತ ಶ್ರೀ ಜನಭಜನಾ ತಂಡ ಬಜಗೋಳಿ, ಬ್ರಾಹ್ಮಿ ಜಿನಭಜನಾ ತಂಡ ಮೂಡಬಿದ್ರೆ , ಸಮ್ಯಕ್ತ ಜಿನಭಜನಾ ತಂಡ, ಬಂಟ್ವಾಳ, ಅನಂತಪಾರ್ಶ್ವ ಜಿನಭಜನಾ ತಂಡ ಕುಪ್ಪೆ ಪದವು ಇದರ ಸದಸ್ಯರನ್ನು ಹಾಗೂ ಡಾಕ್ಟರೇಟ್ ಪದವಿ ಪಡೆದ ಡಾ. ಉಜ್ವಲ ಕಂಬಳಿ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿಭಾಗ 8ರ ಉಪಾಧ್ಯಕ್ಷರಾದ ಸುದರ್ಶನ್ ಜೈನ್ ವಹಿಸಿದ್ದರು. ಮಧ್ವರಾಜ್ ಜೈನ್ ಅಧ್ಯಕ್ಷರು ಬಂಟ್ವಾಳ ಜೈನ್ ಮಿಲನ್, ಸ್ವರ್ಣ ಲತಾ ಅಜಿತ್ ಕುಮಾರ್ ಅಧ್ಯಕ್ಷರು ಅನಂತಪಾರ್ಶ್ವ ಜೈನ್ ಮಿಲನ್ ಕುಪ್ಪೆ ಪದವು ಉಪಸ್ಥಿತರಿದ್ದರು. ಜೈನ್ ಮಿಲನ್ ವಲಯ 8ರ ನಿಕಟ ಪೂರ್ವ ಅಧ್ಯಕ್ಷರಾದ ಪುಷ್ಪರಾಜ್ ಜೈನ್ ಜಿನಭಜನಾ ತಂಡಗಳಿಗೆ ಪುರಸ್ಕಾರ ನೀಡಿ ಅಭಿನಂದಿಸಿದರು. ವಲಯ ನಿರ್ದೇಶಕರಾದ ಸೋಮಶೇಖರ್ ಶೆಟ್ಟಿ, ಪ್ರಮೋದ್ ಕುಮಾರ್, ಶ್ರೀವರ್ಮ ಅಜ್ರಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಡಾ. ಸುದೀಪ್ ಕುಮಾರ್ ಮಾಜಿ ಅಧ್ಯಕ್ಷರು, ಜೈನ್ ಮಿಲನ್ ಬಂಟ್ವಾಳ, ಭೋಜರಾಜ ಜೈನ್ ಸ್ಥಾಪಕ ಅಧ್ಯಕ್ಷರು ಅನಂತಪಾರ್ಶ್ವ ಜೈನ್ ಮಿಲನ್ ಕುಪ್ಪೆಪದವು ಸಭೆಯನ್ನುದ್ದೇಶಿಸಿ ಮಾತನಾಡಿದರು. ಮಿಲನ್ ಕಾರ್ಯದರ್ಶಿಗಳಾದ ಭರತ್ ಕುಮಾರ್, ಹರ್ಷ ಲತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅನ್ವಿತಾ ಜೈನ್ ಸ್ವಾಗತಿಸಿ, ಸುಪ್ರಿಯಾ ಭರತ್ ಧನ್ಯವಾದ ನೀಡಿದರು. ಕಾಂಚನಶ್ರೀ, ನಿಶ್ಚಿತಾ ಜೈನ್ ಸನ್ಮಾನ ಪತ್ರವನ್ನು ಓದಿದರು. ಮಂಗಳೂರು ವಿಭಾಗ ಕಾರ್ಯದರ್ಶಿ, ವೀರ್ ಸುಭಾಶ್ಚಂದ್ರ ಜೈನ್ ಕಾರ್ಯಕ್ರಮವನ್ನು ಸಂಘಟಿಸಿ ನಿರೂಪಿಸಿದರು. ಜೈನ್ ಮಿಲನ್ ಕುಪ್ಪೆಪದವು ಆತಿಥ್ಯವನ್ನು ವಹಿಸಿದ್ದರು.

ಮೈಸೂರು: ವಾರ್ಷಿಕ ಪೂಜಾ ಮಹೋತ್ಸವ

Article Image

ಮೈಸೂರು: ವಾರ್ಷಿಕ ಪೂಜಾ ಮಹೋತ್ಸವ

ಮೈಸೂರು: ಇಲ್ಲಿಯ ಶ್ರೀ ಆದಿನಾಥ ತೀರ್ಥಂಕರ ಸೇವಾ ಸಮಿತಿಯವರ ಆಶ್ರಯದಲ್ಲಿ ಶ್ರೀ ೧೦೦೮ ಆದಿನಾಥ ತೀರ್ಥಂಕರರ ಮೋಕ್ಷ ಕಲ್ಯಾಣ ಜಿನರಾತ್ರಿ ವಾರ್ಷಿಕ ಪೂಜಾ ಮಹೋತ್ಸವ ಆಚರಣೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವು ಆದಿನಾಥ ಸಭಾಂಗಣ ಶ್ರೀ ಕ್ಷೇತ್ರ ಶ್ರೀರಂಗ ಪಟ್ಟಣದಲ್ಲಿ ದಿನಾಂಕ 27-02-2025ನೇ ಗುರುವಾರದಂದು ನಡೆಯಲಿದೆ. ಪಾವನ ಸಾನ್ನಿಧ್ಯ, ಆಶೀರ್ವಚನ: ಪ.ಪೂ. ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಶ್ರೀ ಕ್ಷೇತ್ರ ಕನಕಗಿರಿ ಅಧ್ಯಕ್ಷತೆ: ಬಿ.ಎಸ್. ಸಂತೋಷ್ ಕುಮಾರ, ಅಧ್ಯಕ್ಷರು, ಶ್ರೀ ಆದಿನಾಥ ಸೇವಾ ಟ್ರಸ್ಟ್, ಮೈಸೂರು ಉಪನ್ಯಾಸ: ಪಂಪ ಮಹಾಕವಿ ವಿರಚಿತ ಆದಿ ಪುರಾಣ ಉಪನ್ಯಾಸಕರು: ಡಾ. ಹೆಚ್.ಪಿ. ಮೋಹನ ಕುಮಾರ ಶಾಸ್ತ್ರಿ, ಕುಲಸಚಿವರು, ಆಚಾರ್ಯ ಗುರುಕುಲ, ಮೈಸೂರು ದಿವ್ಯ ಉಪಸ್ಥಿತಿ: ಪ್ರತಿಷ್ಟಾಚಾರ್ಯ ಎಸ್. ಎಂ. ಸನ್ಮತಿಕುಮಾರ ಶಾಸ್ತ್ರಿ, ಶ್ರೀರಂಗ ಪಟ್ಟಣ ಕ್ಷೇತ್ರ ಸಂರಕ್ಷಕರು ಮತ್ತು ಶ್ರಾವಿಕಭೂಷಣೆ ಪದ್ಮಲತಾ ಸನ್ಮತಿಕುಮಾರ, ಶ್ರೀ ಕ್ಷೇತ್ರ ಶ್ರೀ ರಂಗ ಪಟ್ಟಣ, ಮಂಡ್ಯ ಜಿಲ್ಲೆ.

ಕಾರ್ಕಳ: ಭಾರತೀಯ ಜೈನ್‌ ಮಿಲನಿನ ಮಾಸಿಕ ಸಭೆ

Article Image

ಕಾರ್ಕಳ: ಭಾರತೀಯ ಜೈನ್‌ ಮಿಲನಿನ ಮಾಸಿಕ ಸಭೆ

ಕಾರ್ಕಳ: ಇಲ್ಲಿಯ ಭಾರತೀಯ ಜೈನ್‌ ಮಿಲನಿನ ಫೆಬ್ರವರಿ ತಿಂಗಳ ಮಾಸಿಕ ಸಭೆಯು ನಾಳೆ (ಫೆ.23) ಹಿರಿಯಂಗಡಿಯಲ್ಲಿರುವ ಶ್ರೀ ಮಹಾವೀರ ಭವನದಲ್ಲಿ ನಡೆಯಲಿದೆ. ಚಾವಡಿ ಚರ್ಚೆ: ವಿಷಯ: ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಆಧುನಿಕತೆ ನಡೆಸಿಕೊಡುವವರು: ಮುನಿರಾಜ ರೆಂಜಾಳ ಭಾಗವಹಿಸುವವರು: ಮಹಾವೀರ ಜೈನ್‌ ಇಚಲಂಪಾಡಿ, ನಿರಂಜನ್‌ ಅಳಿಯೂರು, ಅಜಿತ್‌ ಕುಮಾರ್‌ ಜೈನ್‌ ಕೊಕ್ರಾಡಿ, ಶ್ವೇತಾ ಜೈನ್‌ ಮೂಡುಬಿದಿರೆ.

ವಿಟ್ಲ: ಶ್ರೀ ಚಂದ್ರನಾಥ ತೀರ್ಥಂಕರರ ಪಂಚಕಲ್ಯಾಣ ವೈಭವ

Article Image

ವಿಟ್ಲ: ಶ್ರೀ ಚಂದ್ರನಾಥ ತೀರ್ಥಂಕರರ ಪಂಚಕಲ್ಯಾಣ ವೈಭವ

ಶ್ರೀ ಕ್ಷೇತ್ರ ವಿಟ್ಲದಲ್ಲಿ ಫೆಬ್ರವರಿ 13 ರಿಂದ ಫೆ. 17ರವರೆಗೆ ನಡೆಯುತ್ತಿರುವ ಭ|| 1008 ಚಂದ್ರನಾಥ ಸ್ವಾಮಿ ಬಸದಿಯ ಪಂಚಕಲ್ಯಾಣ ಮಹೋತ್ಸವದಲ್ಲಿ ದಿನಾಂಕ 16-02-2025ರ ಭಾನುವಾರದಂದು ಸಂಜೆ 7.00 ಗಂಟೆಗೆ ಮಂಗಳೂರು ಜೈನ ಸಮಾಜ ಅರ್ಪಿಸುವ “ ಶ್ರೀ ಚಂದ್ರನಾಥ ತೀರ್ಥಂಕರರ ಪಂಚಕಲ್ಯಾಣ ವೈಭವ” ಜರುಗಲಿದೆ. ಸಾಹಿತ್ಯ ಮತ್ತು ನಿರ್ದೇಶನ: ಸುಕುಮಾರ್ ಬಲ್ಲಾಳ್ ಮಂಗಳೂರು ನೃತ್ಯ ನಿರ್ದೇಶನ: ವಿಧುಷಿ ಶಾಶ್ವತಿ ಸಚಿನ್ ಮಂಗಳೂರು ರಂಗ ನಿರ್ವಹಣೆ ಹಾಗೂ ಸಂಯೋಜನೆ: ಸಚಿನ್ ಜೈನ್ ಮಂಗಳೂರು ಸಂಗೀತ: ಜಿನಗಾನ ವಿಶಾರದೆ ಜಯಶ್ರೀ ಡಿ. ಜೈನ್ ಹೊರನಾಡು ವಿಶೇಷ ಆಕರ್ಷಣೆ: ನವಿಲು ಬಸದಿಯಲ್ಲಿ ನವಿಲು ನೃತ್ಯ ಪುಟ್ಟ ಮಕ್ಕಳಿಂದ ಸಮವಸರಣ ನಿರ್ಮಾಣ ಒಂದೇ ವೇದಿಕೆಯಲ್ಲಿ ನೂರು ಶ್ರಾವಕ-ಶ್ರಾವಕಿಯರ ಅಭೂತಪೂರ್ವ ಪ್ರದರ್ಶನ.

ಬಜಿರೆ: ಬಸದಿಯಲ್ಲಿ ವಾರ್ಷಿಕ ಪೂಜಾ ಮಹೋತ್ಸವ

Article Image

ಬಜಿರೆ: ಬಸದಿಯಲ್ಲಿ ವಾರ್ಷಿಕ ಪೂಜಾ ಮಹೋತ್ಸವ

ಉಜಿರೆ: ವೇಣೂರು ಬಳಿ ಇರುವ ಬಜಿರೆ ಗ್ರಾಮದ ಹಲ್ಲಂದೋಡಿ ಬಸದಿ ಭಗವಾನ್ ವರ್ಧಮಾನ ಸ್ವಾಮಿ ಸನ್ನಿಧಿಯಲ್ಲಿ ಇದೇ 26 ರಂದು ಭಾನುವಾರ ವಾರ್ಷಿಕ ಪೂಜಾಮಹೋತ್ಸವ ನಡೆಯಲಿದೆ ಎಂದು ಬಸದಿಯ ಬಿ. ಶಶಿಕುಮಾರ್ ಇಂದ್ರ ತಿಳಿಸಿದ್ದಾರೆ. ಮೂಡಬಿದ್ರೆ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಭಾನುವಾರ ಬೆಳಿಗ್ಗೆ ಏಳು ಗಂಟೆಯಿಂದ ವಿಮಾನಶುದ್ಧಿ, ಶಾಂತಿ ಹೋಮದ ಬಳಿಕ 108 ಕಲಶ ಅಭಿಶೇಕ ನಡೆಯಲಿದೆ. ಅಪರಾಹ್ನ ಎರಡು ಗಂಟೆಯಿಂದ ಕಲಿಕುಂಡಯಂತ್ರಾರಾಧನೆ, ಅಷ್ಟಾವಧಾನ ಪೂಜೆ ನಡೆಯಲಿದೆ. ಸಂಜೆ ಗಂಟೆ 5.30 ರಿಂದ ಪದ್ಮಾವತಿ ಅಮ್ಮನವರಿಗೆ ಲಕ್ಷಹೂವಿನ ಪೂಜೆ ನಡೆಯಲಿದೆ. ಬಳಿಕ ಮೂಡಬಿದ್ರೆಯ ಪೂಜ್ಯ ಚಾರುಕೀರ್ತಿ ಭಟ್ಟಾರಕಸ್ವಾಮೀಜಿ ಮಂಗಲಪ್ರವಚನ ನೀಡುವರು.

10ನೇ ವರ್ಷದ ಹೊನಲು ಬೆಳಕಿನ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ

Article Image

10ನೇ ವರ್ಷದ ಹೊನಲು ಬೆಳಕಿನ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ

ವೇಣೂರು: ಇಲ್ಲಿನ ಶ್ರೀ ಬಾಹುಬಲಿ ಫ್ರೆಂಡ್ಸ್ ಇವರ ಆಶ್ರಯದಲ್ಲಿ ಜೈನ ಭಾಂಧವರಿಗಾಗಿ 10ನೇ ವರ್ಷದ ಹೊನಲು ಬೆಳಕಿನ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟವು “ಶ್ರೀ ಬಾಹುಬಲಿ ಟ್ರೋಫಿ 2025” ಬಾಹುಬಲಿ ಬೆಟ್ಟದ ಬಳಿ ಇರುವ “ಇಂದ್ರ ಗ್ರೌಂಡ್”ನಲ್ಲಿ ಜ. 04ರಂದು ನಡೆಯಿತು. ಮೂಡುಬಿದಿರೆ ಶ್ರೀ ಜೈನ ಮಠದ ಭಾರತಭೂಷಣ ಪ. ಪೂ. ಡಾ| ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಪಾವನ ಸಾನ್ನಿಧ್ಯವಹಿಸಿ, ಕ್ರೀಡೆಯ ಬಗ್ಗೆ ಇರುವ ಅಭಿಮಾನವನ್ನು ವ್ಯಕ್ತಪಡಿಸಿ ಆಶೀರ್ವಚನವನ್ನಿತ್ತರು. ಕಾರ್ಯಕ್ರಮದ ಉದ್ಘಾಟನೆಯನ್ನು ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ಅಧ್ಯಕ್ಷರಾದ ಸುಮಂತ್ ಜೈನ್ ನೆರವೇರಿಸಿ, ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ, ದ.ಕ, ಜೈನ್ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷರಾದ ವಿನಯ್ ಹೆಗ್ಡೆ ನಾರಾವಿ ವಹಿಸಿದ್ದರು. ಮುಖ್ಯ ಅತಿಥಿಗಳಾದ ವೇಣೂರಿನ ಪದ್ಮಾಂಬ ಸಮೂಹ ಸಂಸ್ಥೆಗಳ ಮಾಲಕರಾದ ಜಿನರಾಜ್ ಜೈನ್, ಜೈನ್ ಮಿಲನ್ ಅಧ್ಯಕ್ಷರಾದ ಸುಕುಮಾರ್ ಜೈನ್, ಬಾಹುಬಲಿ ಯುವಜನ ಸಂಘದ ಅಧ್ಯಕ್ಷರಾದ ಪ್ರಭಾಚಂದ್ರ ಜೈನ್, ಶಮಂತ್ ಕುಮಾರ್ ಜೈನ್ ಕಳೆಂಜಿರೋಡಿ ಪಡಂಗಡಿ, ಸತ್ಯಪ್ರಸಾದ್ ವಿ. ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಡಾ| ಕೆ. ರವೀಂದ್ರನಾಥ್ ಪ್ರಸಾದ್, ಡಾ. ಜಯಕೀರ್ತಿಜೈನ್, ಸತೀಶ್ ಕೊಂಬ, ಜಿನರಾಜ್ ಜೈನ್ ಅವರನ್ನು ಸನ್ಮಾನಿಸಲಾಯಿತು. ನಿಧಿ, ಸುಶ್ಮಿತಾ, ಋತ್ವಿರವರು ಪ್ರಾರ್ಥಿಸಿದರು. ನಿಧಿರವರು ಸ್ವಾಗತಿಸಿ, ಮಹಾವೀರ ಜೈನ್ ಮೂಡುಕೋಡಿಗುತ್ತುರವರು ವಂದಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ಹೊನಲು ಬೆಳಕಿನ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟವು ನಡೆದು. ಜ. 05ರಂದು ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ವಿನಯ ಕುಮಾರ್ ಜೈನ್‌ರವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಪ್ರಶಾಂತ್ ಕರಿಮುಗೇರು, ಸಂಭಾಷಣೆ ಉದಯಕುಮಾರ್, ಜಿನರಾಜ್ ಜೈನ್, ಸುದತ್ ಜೈನ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸನ್ಮತ್‌ರಾಜ್ ನಿರೂಪಿಸಿದರು. ವಿಜೇತರ ಪಟ್ಟಿ: ಪ್ರಥಮ ಬಹುಮಾನ: ಬಳಂಜ ಟೀಮ್ ದ್ವಿತೀಯ ಬಹುಮಾನ: ಜೈನ್ ಫ್ರೆಂಡ್ಸ್ ಮೂಡುಬಿದಿರೆ ತೃತೀಯ ಬಹುಮಾನ: ಶ್ರೀ ಬಾಹುಬಲಿ ವೇಣೂರು ಚತುರ್ಥ ಬಹುಮಾನ: ಅರ್ವ ಟೀಮ್

ಮಲೆನಾಡು ಜೈನ್ ಮಿಲನ್ ಆಶ್ರಯದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಶೃಂಗೇರಿ ಚಿನಿವಾರ್ ರಾಜಶೇಖರಯ್ಯ ಜನ್ಮ ಶತಮಾನೋತ್ಸವ

Article Image

ಮಲೆನಾಡು ಜೈನ್ ಮಿಲನ್ ಆಶ್ರಯದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಶೃಂಗೇರಿ ಚಿನಿವಾರ್ ರಾಜಶೇಖರಯ್ಯ ಜನ್ಮ ಶತಮಾನೋತ್ಸವ

ನ.16: ಮೇಲ್ಕಂಡ ಸಂಸ್ಥೆಯ ಆಶ್ರಯದಲ್ಲಿ ಶೃಂಗೇರಿ ಸ್ವಾತಂತ್ರ್ಯ ಹೋರಾಟಗಾರ ಶೃಂಗೇರಿ ಚಿನಿವಾಶ್ ರಾಜಶೇಖರಯ್ಯನವರ ಜನ್ಮ ಶತಮಾನೋತ್ಸವವನ್ನು ಶೃಂಗೇರಿ ಬಸದಿ ಆವರಣದಲ್ಲಿ ಆಚರಿಸಲಾಯಿತು. ಚಿನಿವಾಶ್ ರಾಜಶೇಖರಯ್ಯನವರ ಮಗಳು ಕೀರ್ತಿಲತಾ ಮಲ್ಲಪ್ರಸಾದ್ ಶ್ರೀಯುತರ ಸ್ಮರಣಾರ್ಥ ಹತ್ತು ಜನ ಫಲಾನುಭವಿಗಳಿಗೆ ತಲಾ ಹತ್ತು ಸಾವಿರ ರೂ. ಸಹಾಯಧನ ನೀಡಿದರು. ಮಿಲನ್‌ನ ಅಧ್ಯಕ್ಷ ಶ್ರೇಣಿಕ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಶಿಲ್ಪಾರವಿ ಹಾಗೂ ಪ್ರವೀಣ್ ಪೂಜಾರಿ ಅತಿಥಿಗಳಾಗಿ ಆಗಮಿಸಿದ್ದರು. ಜೇಸಿ ಟ್ರೈನರ್ ಎನ್. ಪಿ. ಪಾಂಡುರಂಗ ರಾಜಶೇಖರಯ್ಯನವರ ಗುಣಗಾನ ಮಾಡಿದರು. ಕೀರ್ತಿಲತಾ ಪ್ರಾಸ್ತಾವಿಕ ಭಾಷಣ ಮಾಡಿದರು. ಡಾ| ನಿರಂಜನ್ ಸ್ವಾಗತಿಸಿ ಶುಭಾಶ್ಚಂದ್ರ ವಂದಿಸಿದರು ನಂತರ ಜೈನ ಬಸದಿಯಲ್ಲಿ ಮಿಲನ್ ಸದಸ್ಯರು ಶ್ರದ್ಧಾಭಕ್ತಿಯೊಂದಿಗೆ ದೀಪೋತ್ಸವ ಆಚರಿಸಿದು. ಶಶಿಪ್ರಭಾ ಶಾಂತಕುಮಾರ್ ನೇತೃತ್ವದಲ್ಲಿ ಭಜನಾ ಕಾರ್ಯಕ್ರಮವನ್ನು ಶ್ರಾವಕಿಯರು ನಡೆಸಿಕೊಟ್ಟರು.

ಮಂಗಳೂರು ವಿಭಾಗ ಮಟ್ಟದ ಜಿನಭಜನಾ ಸ್ಪರ್ಧೆ

Article Image

ಮಂಗಳೂರು ವಿಭಾಗ ಮಟ್ಟದ ಜಿನಭಜನಾ ಸ್ಪರ್ಧೆ

ಉಜಿರೆ: ಸಾಹಿತ್ಯಕ್ಕೂ ಸಂಗೀತಕ್ಕೂ ಅವಿನಾಭಾವ ಸಂಬಂಧವಿದ್ದು, ಅಂತರಾತ್ಮದಲ್ಲಿ ದೇವರನ್ನು ಸ್ಮರಿಸಿ ಧ್ಯಾನ ಮಾಡಿ ರಾಗ, ತಾಳ, ಲಯ ಬದ್ಧವಾಗಿ ಭಜನೆ ಹಾಡಿದರೆ ಮಾನಸಿಕ ಶಾಂತಿ, ನೆಮ್ಮದಿ ಸಿಗುತ್ತದೆ. ಮಕ್ಕಳಿಗೂ, ನಿತ್ಯವೂ ಭಜನೆ ಹಾಡುವ ಸಂಸ್ಕಾರವನ್ನು ನೀಡಿದರೆ ಅವರು ಧರ್ಮದ ಹಾದಿಯಲ್ಲಿ ಮುನ್ನಡೆಯಲು ಪ್ರೇರಣೆ ನೀಡಿದಂತಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಭಾನುವಾರ ಬೆಳ್ತಂಗಡಿಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದಲ್ಲಿ ಭಾರತೀಯ ಜೈನ್‌ಮಿಲನ್ ನೇತೃತ್ವದಲ್ಲಿ ಬೆಳ್ತಂಗಡಿ ಜೈನ್‌ಮಿಲನ್ ಶಾಖೆಯ ಸಹಯೋಗದೊಂದಿಗೆ ಆಯೋಜಿಸಿದ ಮಂಗಳೂರು ವಿಭಾಗಮಟ್ಟದ ಜಿನಭಜನಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಭಜನೆಯನ್ನು ಸ್ಪರ್ಧೆಗಾಗಿ ಕಲಿಯದೆ ಮನೆಯಲ್ಲಿ ನಿತ್ಯವೂ ಸಹಜವಾಗಿ ಭಜನೆ ಹಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಸೋಲು-ಗೆಲುವಿನ ಬಗ್ಯೆ ಚಿಂತಿಸದೆ ಎಲ್ಲರೂ ಸ್ಪರ್ಧೆಯಲ್ಲಿ ಭಾಗವಹಿಸಿ ಭಜನಾ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು ಎಂದು ಹೆಗ್ಗಡೆಯವರು ಹೇಳಿದರು. ಸಾಧ್ಯವಾದರೆ ಮಕ್ಕಳೆ ಸಾಹಿತ್ಯ ರಚನೆ ಮಾಡಿ ರಾಗ, ಭಾವ, ತಾಳ ಸಂಯೋಜನೆಯೊAದಿಗೆ ಭಜನೆ ಹಾಡುವ ಅಭ್ಯಾಸ ಮಾಡಬೇಕು ಎಂದು ಅವರು ಸಲಹೆ ನೀಡಿದರು. ಇಂದು(ಸೋಮವಾರ) ಹೆಗ್ಗಡೆಯವರ 76ನೆ ಜನ್ಮದಿನ ಆಚರಣೆಗಾಗಿ ನಿರೀಕ್ಷಾ ಹೊಸ್ಮಾರು ಜನ್ಮದಿನದ ಶುಭಾಶಯ ಕೋರುವ ಹಾಡೊಂದನ್ನು ಸುಶ್ರಾವ್ಯವಾಗಿ ಹಾಡಿದರು. ಜೈನ್‌ಮಿಲನ್ ವತಿಯಿಂದ ಹೆಗ್ಗಡೆಯವರಿಗೆ ಜನ್ಮದಿನದ ಶುಭಾಶಯಗಳನ್ನು ಗೌರವಪೂರ್ವಕವಾಗಿ ಅರ್ಪಿಸಲಾಯಿತು. ಭಾರತೀಯ ಜೈನ್‌ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರಾದ ಅನಿತಾ ಸುರೇಂದ್ರಕುಮಾರ್, ಉಜಿರೆಯ ಸೋನಿಯಾ ಯಶೋವರ್ಮ, ಪೂರನ್‌ವರ್ಮ, ಪೆರಿಂಜೆ ಪಡ್ಯಾರಬೆಟ್ಟು ಕೊಡಮಣಿತ್ತಾಯ ದೈವಸ್ಥಾನದ ಆಡಳಿತಮೊಕ್ತೇಸರ ಜೀವಂಧರಕುಮಾರ್, ಭಾರತೀಯ ಜೈನ್‌ಮಿಲನ್ ವಲಯ 8 ರ ಕಾರ್ಯಾಧ್ಯಕ್ಷ ಪ್ರಸನ್ನಕುಮಾರ್, ಮೂಡಬಿದ್ರೆಯ ನೋಟರಿ ಶ್ವೇತಾ ಜೈನ್, ಕಾರ್ಕಳದ ಶಶಿಕಲಾ ಹೆಗ್ಡೆ, ವೇಣೂರು ಜೈನತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿ ಪ್ರವೀಣಕುಮಾರ್ ಇಂದ್ರ ಮತ್ತು ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ಸುಮಂತ್‌ಕುಮಾರ್ ಜೈನ್ ಹಾಗೂ ಬೆಳ್ತಂಗಡಿ ಜೈನ್‌ಮಿಲನ್ ಅಧ್ಯಕ್ಷ ಡಾ. ನವೀನ್ ಕುಮಾರ್ ಜೈನ್ ಉಪಸ್ಥಿತರಿದ್ದರು. ಸುದರ್ಶನ್‌ಜೈನ್ ಬಂಟ್ವಾಳ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಉಜಿರೆಯ ಬಿ. ಸೋಮಶೇಖರ ಶೆಟ್ಟಿ ಧನ್ಯವಾದವಿತ್ತರು. ಉಜಿರೆಯ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ಉಪನ್ಯಾಸಕಿ ದಿವ್ಯಾ ಕುಮಾರಿ ಕಾರ್ಯಕ್ರಮ ನಿರ್ವಹಿಸಿದರು. ಭಜನಾ ಸ್ಪರ್ಧೆಯಲ್ಲಿ ಹಿರಿಯರ ವಿಭಾಗದಲ್ಲಿ ೪೫ ತಂಡಗಳು ಹಾಗೂ ಕಿರಿಯರ ವಿಭಾಗದಲ್ಲಿ 32 ತಂಡಗಳು ಸೇರಿದಂತೆ ಒಟ್ಟು ಐದುನೂರಕ್ಕೂ ಮಿಕ್ಕಿ ಸ್ಪರ್ಧಿಗಳು ಭಾಗವಹಿಸಿದರು.

ಅತಿಶಯ ಶ್ರೀ ಕ್ಷೇತ್ರ ಹೊಂಬುಜ ಇಂದ್ರಧ್ವಜ ಮಹಾಮಂಡಲ ಆರಾಧನಾ ಮಹೋತ್ಸವ: ಮಕ್ಕಿಮನೆ ಕಲಾವೃಂದದಿಂದ ಸಾಂಸ್ಕ್ರತಿಕ ಕಾರ್ಯಕ್

Article Image

ಅತಿಶಯ ಶ್ರೀ ಕ್ಷೇತ್ರ ಹೊಂಬುಜ ಇಂದ್ರಧ್ವಜ ಮಹಾಮಂಡಲ ಆರಾಧನಾ ಮಹೋತ್ಸವ: ಮಕ್ಕಿಮನೆ ಕಲಾವೃಂದದಿಂದ ಸಾಂಸ್ಕ್ರತಿಕ ಕಾರ್ಯಕ್

ರಿಪ್ಪನ್ ಪೇಟೆ: ಅತಿಶಯ ಶ್ರೀ ಕ್ಷೇತ್ರ ಹೊಂಬುಜದ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರ ಮಹಾ ಸನ್ನಿಧಿಯಲ್ಲಿ ಪರಮಪೂಜ್ಯ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಯವರ ನೇತೃತ್ವದಲ್ಲಿ ಇಂದ್ರಧ್ವಜ ಮಹಾಮಂಡಲ ಆರಾಧನಾ ಮಹೋತ್ಸವದ ಪ್ರಯುಕ್ತ ಸುದೇಶ್ ಜೈನ್ ಮಕ್ಕಿಮನೆ ಸಂಯೋಜನೆಯಲ್ಲಿ ಶನಿವಾರ (16-11-2024) ಮಕ್ಕಿಮನೆ ಕಲಾವೃಂದ ಬಳಗದಿಂದ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು ಎಲ್ಲರ ಮೆಚ್ಚುಗೆ ಪಡೆಯಿತು. ಅನನ್ಯ ರಂಜನಿ, ನೀಶ್ಮಾ ಜೈನ್, ದೀಪ್ತಿ ಜೈನ್, ಅರೀಕಾ ಜೈನ್, ಜಯಂತಿ ಜೈನ್, ಅನಘ ಜೈನ್, ಅವನಿ ಜೈನ್, ಅರುಹ ಜೈನ್, ಈಯಾ ಜೈನ್ ಭಾಗವಹಿಸಿದರು. ವಾಣಿಶ್ರೀ ಜೈನ್ ಕಾರ್ಯಕ್ರಮ ನಿರೂಪಿಸಿದರು. ರತ್ವಿಕ್ ಜೈನ್, ಪ್ರಪುಲ್ಲ ಜೈನ್, ಸನ್ಮತ್ ರಾಜ್ ಜೈನ್ ಸಹಕರಿಸಿದರು. ಈ ಸಂದರ್ಭದಲ್ಲಿ 105 ಶಿವಮತಿ ಮಾತಾಜಿ ಮತ್ತು ಶ್ರೀ ಕ್ಷೇತ್ರ ಹೊಂಬುಜ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿ ಹಾಗೂ ಶ್ರೀ ಕ್ಷೇತ್ರ ಸೋಂದಾ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮಿಯವರು ಉಪಸ್ಥಿತರಿದ್ದು ಎಲ್ಲ ಕಲಾವಿದರನ್ನು ಆಶಿರ್ವದಿಸಿ ಗೌರವಿಸಿದರು .

ರಶ್ಮಿತಾ ಜೈನ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

Article Image

ರಶ್ಮಿತಾ ಜೈನ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್ ಅವರಿಗೆ 2024 ನೇಯ ಸಾಲಿನ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಾಪ್ತವಾಗಿದೆ. ಸಾಮಾಜಿಕ, ಸಾಂಸ್ಕೃತಿಕ, ಪರಿಸರ ಹಾಗೂ ಮುಖ್ಯವಾಗಿ ಶಿಕ್ಷಣ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಅನುಪಮ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಿ ಗೌರವಿಸಿಲಾಗಿದೆ. ನವೆಂಬರ್ ಒಂದರಂದು ಕರ್ನಾಟಕ ರಾಜ್ಯೋತ್ಸವದ ಶುಭಾವಸರದಲ್ಲಿ ಮಂಗಳೂರಿನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಈ ಪುರಸ್ಕಾರವನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಸಂಸದರಾದ ಬ್ರಿಜೇಶ್ ಚೌಟ ಹಾಗೂ ಶಾಸಕರಾದ ವೇದವ್ಯಾಸ್ ಕಾಮತ್ ಹಾಗೂ ಡಾ.ಭರತ್ ಶೆಟ್ಟಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಇತ್ತೀಚೆಗೆ ಅಗಲಿದ ಟಾಟಾ ಸಮೂಹ ಸಂಸ್ಥೆಗಳ ಮಾಜಿ ಮುಖ್ಯಸ್ಥ ರತನ್ ಟಾಟಾ ಅವರಿಗೆ ನುಡಿ ನಮನ

Article Image

ಇತ್ತೀಚೆಗೆ ಅಗಲಿದ ಟಾಟಾ ಸಮೂಹ ಸಂಸ್ಥೆಗಳ ಮಾಜಿ ಮುಖ್ಯಸ್ಥ ರತನ್ ಟಾಟಾ ಅವರಿಗೆ ನುಡಿ ನಮನ

ಮೂಡುಬಿದಿರೆ, ಶ್ರೀ ದಿಗಂಬರ ಜೈನ ವಿದ್ಯಾವರ್ಧಕ ಸಂಘ(ರಿ.) ಇದರ ಆಡಳಿತಕ್ಕೆ ಒಳಪಟ್ಟ ಜೈನ ಪದವಿಪೂರ್ವ ಕಾಲೇಜಿನಲ್ಲಿ ದಿನಾಂಕ 21-10-2024 ನೇ‌ ಸೋಮವಾರದಂದು ಇತ್ತೀಚೆಗೆ ಅಗಲಿದ ಯಶಸ್ವಿ ಹಿರಿಯ ಉದ್ಯಮಿ, ಟಾಟಾ ಸಮೂಹ ಸಂಸ್ಥೆಗಳ ಮಾಜಿ ಮುಖ್ಯಸ್ಥ ರತನ್ ಟಾಟಾ ಅವರಿಗೆ ನುಡಿ ನಮನವನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಡಿ.ಜೆ.ವಿ.ಸಂಘ(ರಿ.) ಹಾಗೂ ಕಾಲೇಜಿನ ಗೌರವಾನ್ವಿತ ಸಂಚಾಲಕರಾದ ಕೆ. ಹೇಮರಾಜ್ ಇವರು ಜ್ಯೋತಿಯನ್ನು ಬೆಳಗಿಸುವ ಮೂಲಕ ರತನ್ ಟಾಟಾ ಅವರಿಗೆ ಗೌರವವನ್ನು ಸಮರ್ಪಿಸಿದರು. ನಂತರ ಮಾತನಾಡುತ್ತಾ " ದೇಶ ಕಂಡ ಅಪರೂಪದ, ಅಗ್ರಗಣ್ಯ ವಾಣಿಜ್ಯೋದ್ಯಮಿ ಹಾಗೂ ಮಾನವತಾವಾದಿಗಳಲ್ಲಿ ರತನ್ ಟಾಟಾ ಒಬ್ಬರಾಗಿದ್ದಾರೆ. ನನ್ನ ಬದುಕು ಎಂದಿಗೂ ಭಾರತದ ಅಭಿವೃದ್ಧಿಗಾಗಿ ಮುಡಿಪು ಎಂದು ಹೇಳುತ್ತಾ ತಮ್ಮ ಲಾಭದ ಅರುವತ್ತು ಶೇಕಡಾ ಸಂಪತ್ತನ್ನು ಚಾರಿಟೇಬಲ್ ಟ್ರಸ್ಟ್ ಗಳಿಗಾಗಿ ಖರ್ಚು ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಸೇವಾ ಮನೋಭಾವವನ್ನು ಮೆರೆದವರು ಇವರಾಗಿದ್ದಾರೆ. ಆದುದರಿಂದ ವಿದ್ಯಾರ್ಥಿಗಳೆಲ್ಲರೂ ರತನ್ ಟಾಟಾ ಅವರ ಸರಳ ಜೀವನ, ಸಾಧನೆ ಹಾಗೂ ಗೈದ ಸೇವೆಯನ್ನು ತಮ್ಮ ಜೇವನದಲ್ಲಿ ಅಳವಡಿಸಿಕೊಂಡು, ಅವರನ್ನು ಮಾದರಿಯಾಗಿ ಇಟ್ಟುಕೊಂಡು ಅವರಂತೆ ಆಗಲು ಕನಸನ್ನು ಕಂಡು ಅದಕ್ಕಾಗಿ ಪ್ರಯತ್ನಿಸಬೇಕು ಎಂದು ಕರೆ ನೀಡಿದರು. ಕಾಲೇಜಿನ ಪ್ರಾಚಾರ್ಯರಾದ ಡಾI ಪ್ರಭಾತ್ ಬಲ್ನಾಡು ಇವರು ರತನ್ ಟಾಟಾ ಇವರ ಸಾಧನೆಯನ್ನು ವಿವರಿಸುತ್ತಾ ಸುಮಾರು 150 ದೇಶಗಳಲ್ಲಿ ತಮ್ಮ ಕಂಪೆನಿಯನ್ನು ಸ್ಥಾಪಿಸಿ, ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗದಾತರಾಗಿ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ವಿದ್ಯಾರ್ಥಿಗಳಾದ ನೀವೂ ಕೂಡ ಇನ್ನೊಬ್ಬರಿಗೆ ಉದ್ಯೋಗ ನೀಡುವ ಮಟ್ಟದಲ್ಲಿ ಬೆಳೆಯಬೇಕು. ರತನ್ ಟಾಟಾ ಅವರು ತಮ್ಮ ಆದಾಯದ ನೂರಕ್ಕೆ ನೂರು ಶೇಕಡಾ ತೆರಿಗೆ ಕಟ್ಟುವ ಮೂಲಕ ಬಹಳ ಶುಭ್ರ ಹಾಗೂ ಪ್ರಾಮಾಣಿಕವಾಗಿ ಧ್ರುವ ನಕ್ಷತ್ರದಂತೆ ಬೆಳಗಿದ್ದಾರೆ ಹಾಗೂ ಭಾರತದ ಕೀರ್ತಿಯನ್ನು ಬಾನೆತ್ತರಕ್ಕೆ ಏರಿಸಿದ್ದಾರೆ ಎಂದು ಹೇಳುತ್ತಾ ನುಡಿ ನಮನವನ್ನು ಸಮರ್ಪಿಸಿದರು. ನಂತರ ಸಭೆಯಲ್ಲಿ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಡಿ.ಜೆ ಅನುದಾನಿತ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶಶಿಕಾಂತ್ ವೈ, ಡಿ. ಜೆ. ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿಯಾದ ವೀಣಾ, ಕಾಲೇಜಿನ ನಿಕಟಪೂರ್ವ ಪ್ರಾಚಾರ್ಯರಾದ ಮಧುಕರ್ ಸಾಲಿನ್ಸ್, ಸಹ ಸಂಸ್ಥೆಗಳ ಉಪನ್ಯಾಸಕರು, ಕಾಲೇಜಿನ ಉಪನ್ಯಾಸಕರು - ಉಪನ್ಯಾಸಕೇತರ ವೃಂದದವರು ಹಾಗೂ ವಿದ್ಯಾರ್ಥಿ ನಾಯಕರು ಶ್ರೀ ರತನ್ ಟಾಟಾ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥನೆಗೈದರು ಹಾಗೂ ಕಾಲೇಜಿನ ರಾಜ್ಯ ಶಾಸ್ತ್ರ ಉಪನ್ಯಾಸಕರಾದ ಮಹಾವೀರ್ ಎಂ. ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

ಹಿರಿಯ ಕಲಾವಿದರಾದ ಎಮ್. ಆರ್. ಬಾಳಿಕಾಯಿ ಇವರಿಗೆ ಗೌರವ ಪಿಆರ್‌ಟಿ ಕಲಾಪ್ರಶಸ್ತಿ

Article Image

ಹಿರಿಯ ಕಲಾವಿದರಾದ ಎಮ್. ಆರ್. ಬಾಳಿಕಾಯಿ ಇವರಿಗೆ ಗೌರವ ಪಿಆರ್‌ಟಿ ಕಲಾಪ್ರಶಸ್ತಿ

ಹಿರಿಯ ಕಲಾವಿದರಿಗೆ ಪಿ ಆರ್ ತಿಪ್ಪೇಸ್ವಾಮಿ ಪ್ರತಿಷ್ಠಾನ (ರಿ), ಮೈಸೂರು ಇವರು ಕೊಡಮಾಡುವ “ಗೌರವ ಪಿಆರ್‌ಟಿ ಕಲಾಪ್ರಶಸ್ತಿ” ಗೆ ಧಾರವಾಡದ ಹಿರಿಯ ಕಲಾವಿದರಾದ ಮಹಾವೀರ ರಾಯಪ್ಪ ಬಾಳಿಕಾಯಿ ಇವರು ಭಾಜನರಾಗಿದ್ದಾರೆ. ಮೈಸೂರಿನ ಶ್ರೀ ಕಲಾನಿಕೇತನ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ದಿನಾಂಕ 20-09-2024ರಂದು ಜರುಗಿದ ಹಿರಿಯ ಕಲಾವಿದ ಶ್ರೀ ಪಿ.ಆರ್. ತಿಪ್ಪೇಸ್ವಾಮಿ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ಮಹಾವೀರ ರಾಯಪ್ಪ ಬಾಳಿಕಾಯಿ ಇವರಿಗೆ ಪ್ರದಾನ ಮಾಡಿದರು. ಈ ಪ್ರಶಸ್ತಿಯು 10 ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿದೆ. ಇವರಿಗೆ 1995ರಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯ ಗೌರವ ಪ್ರಶಸ್ತಿ, 2007ರಲ್ಲಿ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, 2017ರಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತು ನೀಡುವ ಜೀವಮಾನ ಸಾಧಕ ಸನ್ಮಾನ, 2012-13ರ ನಾಡೋಜ ಆರ್. ಎಮ್. ಹಡಪದ ಪ್ರಶಸ್ತಿ, 2010ರಲ್ಲಿ ಕಲಾಗುರು ಶ್ರೀ ಡಿ. ವಿ. ಹಾಲಭಾವಿ ಗೌರವ ಪ್ರಶಸ್ತಿ, 2016ರಲ್ಲಿ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಇಂತಹ ವ್ಯಕ್ತಿತ್ವವನ್ನು ಹೊಂದಿರುವ ಎಮ್. ಆರ್. ಬಾಳಿಕಾಯಿ ಅವರ ಕಲಾ ಸೇವೆಯನ್ನು ಗುರುತಿಸಿ ಧಾರವಾಡದ ಚಿತ್ರಕಲಾ ಶಿಲ್ಪಿ ಶ್ರೀ ಡಿ. ವಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಚಿತ್ರಕಲಾ ಪ್ರಪಂಚದಲ್ಲಿ ಜೀವಮಾನ ಸಾಧನೆಗಾಗಿ ಪ್ರತಿಷ್ಠಿತ “ಕುಂಚ ಕಲಾ ತಪಸ್ವಿ ರಾಷ್ಟ್ರೀಯ ಪ್ರಶಸ್ತಿ 2023” ನ್ನು ದಿನಾಂಕ 28-11-2023ರಂದು ನೀಡಿ ಗೌರವಿಸಲಾಗಿದೆ.

ಶ್ರೀ ಕ್ಷೇತ್ರ ನವಗ್ರಹ ತೀರ್ಥದಲ್ಲಿ ನವರಾತ್ರಿಯ ವೈಭವ

Article Image

ಶ್ರೀ ಕ್ಷೇತ್ರ ನವಗ್ರಹ ತೀರ್ಥದಲ್ಲಿ ನವರಾತ್ರಿಯ ವೈಭವ

ಪರಮ ಪೂಜ್ಯ ಆಚಾರ್ಯ ಶ್ರೀ 108 ಗುಣಧರನಂದಿ ಮಹಾರಾಜರ ಮಾರ್ಗದರ್ಶನದಲ್ಲಿ, ಆರ್ಯಿಕಾ ಸಂಘ ಉಪಸ್ಥಿತಿಯಲ್ಲಿ, ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕರ ನಿರ್ದೇಶನದಲ್ಲಿ ವರೂರು ನವಗ್ರತೀರ್ಥದಲ್ಲಿ ಲೋಕಕಲ್ಯಾಣ ಭಾವನೆಯಿಂದ ನವರಾತ್ರಿಯ ಶುಭ ಸಂದರ್ಭದಲ್ಲಿ ವಿವಿಧ ಹವನ, ಶ್ರೀ ಜಿನರ ಆರಾಧನೆ,, ವಿಶೇಷ ಪೂಜೆ, ಅಭಿಷೇಕ, ಮಾತೆ ಪದ್ಮಾವತಿ ಅಮ್ಮನವರ ವಿಶೇಷ ಅಲಂಕಾರ, ಷೋಡಶೋಪಚಾರ ಪೂಜೆಗಳು ವೈಭವದಿಂದ ನಡೆಯುತ್ತಿದ್ದು ಜನ ಶ್ರದ್ಧೆ ಭಕ್ತಿಗಳಿಂದ ಭಾಗವಹಿಸುತ್ತಿದ್ದಾರೆ. ನವದಿನಗಳ ಸಂಭ್ರಮಕ್ಕೆ ಮೊದಲ ದಿನದಂದು ಹುಬ್ಬಳ್ಳಿ ಜೈನ ಸಮಾಜ ಅಧ್ಯಕ್ಷ ರಾಜೇಂದ್ರ ಬೀಳಗಿ,ಉಪಾಧ್ಯಕ್ಷ ವಿಮಲ್ ತಾಳಿಕೋಟಿ, ಜೈನ ಬೋರ್ಡಿಂಗ್ ಅಧ್ಯಕ್ಷ ವಿದ್ಯಾಧರ ಪಾಟೀಲ ಬಸ್ತಿ ಪರಿವಾರ ದೇವೇಂದ್ರ ಕಾಗಿನವರು ಮತ್ತಿತರರು ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಿದರು.

ಸರ್ವಮಂಗಳ ಜೈನ ಮಹಿಳಾ ಸಂಘ (ರಿ.) ನ ಮಾಸಿಕ ಸಭೆ

Article Image

ಸರ್ವಮಂಗಳ ಜೈನ ಮಹಿಳಾ ಸಂಘ (ರಿ.) ನ ಮಾಸಿಕ ಸಭೆ

ಮೂಡಬಿದಿರೆ: ಸರ್ವಮಂಗಳ ಜೈನ ಮಹಿಳಾ ಸಂಘ (ರಿ.) ನ ಮಾಸಿಕ ಸಭೆಯು ಅ. 2 ರಂದು ಶೆಟ್ರ ಬಸದಿ ಭಗವಾನ್ ಶ್ರೀ ಮಹಾವೀರ ಸ್ವಾಮಿಯ ಸನ್ನಿಧಿಯಲ್ಲಿ ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಕ್ಷೀರಾಭಿಷೇಕ ಮತ್ತು ಮಹಾಮಾತೆ ಪದ್ಮಾವತಿ ಅಮ್ಮನವರ ಪೂಜೆಯೊಂದಿಗೆ ಪ್ರಾರಂಭವಾಯಿತು. ತದನಂತರ ಮಹಾತ್ಮಾ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಬಗ್ಗೆ ಮಾತ್ರವಲ್ಲದೆ ಜೈನ ಧರ್ಮದ ತತ್ವಗಳನ್ನು ಪಾಲಿಸಿದ್ದರಿಂದ ಅವರು ಮಹಾತ್ಮಾರಾದರು ಎನ್ನುವುದನ್ನು ಸುಧಾ ಪಾರ್ಶ್ವನಾಥ್ ಅವರು ಮನಮುಟ್ಟುವಂತೆ ತಿಳಿಸಿಕೊಟ್ಟರು. ನಂತರ ಆದಿನಾಥ ವೈಭವ ವಿಶ್ವ ದಾಖಲೆಯ ಸಂದರ್ಭದಲ್ಲಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದವರಿಗೆ ಆದಿನಾಥ ವೈಭವದ ಕವಯತ್ರಿ ಮೂಡಬಿದಿರೆಯ ವೀಣಾ ರಘಚಂದ್ರ ಶೆಟ್ಟಿಯವರು ಸ್ಮರಣಿಕೆ ವಿತರಣೆ ಮಾಡಿದರು. ಸರ್ವಮಂಗಳದ ಅಧ್ಯಕ್ಷೆಯಾದ ಮಂಜುಳ ಯಶೋಧರ್ ರವರು ಎಲ್ಲರನ್ನು ಪ್ರೀತಿ ಪೂರ್ವಕವಾಗಿ ಸ್ವಾಗತಿಸಿ, ಕಾರ್ಯದರ್ಶಿ ಆರತಿ ಮಹಾವೀರ್ ವಂದನಾರ್ಪಣೆ ಗೈದರು

ಪುತ್ತೂರು: ಮಂಗಳೂರು ವಿಭಾಗದ ಮಿಲನ್ ಪದಾಧಿಕಾರಿಗಳ ಕಾರ್ಯಗಾರ

Article Image

ಪುತ್ತೂರು: ಮಂಗಳೂರು ವಿಭಾಗದ ಮಿಲನ್ ಪದಾಧಿಕಾರಿಗಳ ಕಾರ್ಯಗಾರ

ಪುತ್ತೂರು: ಭಾರತೀಯ ಜೈನ್ ಮಿಲನ್ ವಲಯ - 8 ಮಂಗಳೂರು ಇದರ ಆಶ್ರಯದಲ್ಲಿ ಮಂಗಳೂರು ವಿಭಾಗದ ಎಲ್ಲಾ ಮಿಲನ್ ಪದಾಧಿಕಾರಿಗಳ ಕಾರ್ಯಗಾರವು ಪುತ್ತೂರು ಜೈನ್ ಮಿಲನ್ ಆತಿಥೇಯದಲ್ಲಿ ಮಹಾವೀರ ವೆಂಚರ್‌ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸೋನಿಯ ಯಶೋವರ್ಮ ಉದ್ಘಾಟಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಭಾರತೀಯ ಜೈನ್ ಮಿಲನ್ ವಲಯ - 8 ರ ಕಾರ್ಯಾಧ್ಯಕ್ಷ ಪ್ರಸನ್ನಕುಮಾರ್ ಉಡುಪಿ, ಉಪಾಧ್ಯಕ್ಷ ಸುದರ್ಶನ್ ಜೈನ್ ಬಂಟ್ವಾಳ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಇಂಜಿನಿಯರ್ ಹಾಗೂ ಉದ್ಯಮಿ ವಿ.ಕೆ ಜೈನ್ ಪುತ್ತೂರು, ಭಾರತೀಯ ಜೈನ್ ಮಿಲನ್ ವಲಯ -8 ರ ಉಪಾಧ್ಯಕ್ಷ ಜಿತೇಶ್ ಜೈನ್ ಮಂಗಳೂರು ಭಾಗವಹಿಸಿದ್ದರು. ವೇದಿಕೆಯಲ್ಲಿ ಮಂಗಳೂರು ವಲಯದ ಎಲ್ಲಾ ನಿರ್ದೇಶಕರುಗಳು, ಸುಭಾಶ್ಚಂದ್ರ ಜೈನ್ ಕಾರ್ಯದರ್ಶಿ ವಲಯ-8 ಮತ್ತು ಪುತ್ತೂರು ಜೈನ್ ಮಿಲನ್ ಅಧ್ಯಕ್ಷ ಸತೀಶ್ ಪಡಿವಾಳ್, ಕಾರ್ಯದರ್ಶಿ ರಾಜೇಶ್ ಕುಮಾರ್ ಪಿ, ಕೋಶಾಧಿಕಾರಿ ನರೇಂದ್ರ ಪಡಿವಾಳ್ ಆಸೀನರಾಗಿದ್ದರು.. ವಲಯ - 8ರ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್ ಕಾರ್ಯಕ್ರಮ ನಿರೂಪಿಸಿ, ಜೈನ್ ಮಿಲನ್ ಪುತ್ತೂರು ಅಧ್ಯಕ್ಷ ಸತೀಶ್ ಪಡಿವಾಳ್ ಸ್ವಾಗತಿಸಿ, ಕಾರ್ಯದರ್ಶಿ ರಾಜೇಶ್ ಕುಮಾರ್ ಪಿ. ವಂದಿಸಿದರು. ಕಾರ್ಯಕ್ರಮದಲ್ಲಿ ಸುಮಾರು 125 ಜಿನ ವೀರ, ವೀರಾಂಗನೆಯವರು ಭಾಗವಹಿಸಿದ್ದರು.

ಹೊಂಬುಜ: ಶರನ್ನವರಾತ್ರಿ ವಿಜಯದಶಮಿ ಉತ್ಸವ

Article Image

ಹೊಂಬುಜ: ಶರನ್ನವರಾತ್ರಿ ವಿಜಯದಶಮಿ ಉತ್ಸವ

ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ನೇತೃತ್ವ, ಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ದಿನವನ್ನು ಪರಂಪರೆಯಂತೆ ಧಾರ್ಮಿಕ ವಿಧಿಪೂರ್ವಕವಾಗಿ ನೆರವೇರಿಸಲಾಗುವುದು. ನಿನ್ನೆ (ಅ. 03) ಗುರುವಾರದಂದು-ಶರನ್ನವರಾತ್ರಿ ಪ್ರಾರಂಭಗೊಂಡು (ಘಟಸ್ಥಾಪನೆ) ಅ. 09 ಬುಧವಾರ- ಸರಸ್ವತಿ ಪೂಜೆ, (ಮೂಲಾ ನಕ್ಷತ್ರ) ಅ. 10 ಗುರುವಾರ-ಜೀವದಯಾಷ್ಟಮಿ ಪೂಜೆ, ಅ. 11 ಶುಕ್ರವಾರ-ಮಹಾನವಮಿ (ಆಯುಧಪೂಜೆ) ಅ. 12 ಶನಿವಾರ-ವಿಜಯದಶಮಿ, ಬನ್ನಿಮಂಟಪಕ್ಕೆ ಶ್ರೀದೇವಿ, ಪಲ್ಲಕ್ಕಿ ಉತ್ಸವ, ಸ್ವಸ್ತಿಶ್ರೀಗಳವರ ಸಿಂಹಾಸನಾರೋಹಣ ಹಾಗೂ ಶ್ರೀಗಳವರ ಪಾದಪೂಜೆ ನೆರವೇರಲಿದೆ. ಹೊಂಬುಜ ಜೈನ ಮಠದ ಅಧೀನ ಕ್ಷೇತ್ರಗಳಾದ ಶ್ರೀಕ್ಷೇತ್ರ ಕುಂದಾದ್ರಿ, ವರಂಗ ಹಾಗೂ ಹಟ್ಟಿಯಂಗಡಿ ಜಿನಮಂದಿರಗಳಲ್ಲಿ ಶರನ್ನವರಾತ್ರಿ ಧಾರ್ಮಿಕ ಪೂಜಾ ವಿಧಿ-ವಿಧಾನಗಳು ನೆರವೇರಲಿವೆ. ಭಕ್ತವೃಂದದವರು ಶರನ್ನವರಾತ್ರಿ ಉತ್ಸವಗಳಲ್ಲಿ ಪಾಲ್ಗೊಂಡು ಪುಣ್ಯಭಾಗಿಗಳಾಗುವಂತೆ ಆಡಳಿತಾಧಿಕಾರಿಗಳು ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಮೊ: 9481453653, 9483801460.

ವೇಣೂರು: ಶ್ರೀ ಬಾಹುಬಲಿ ಬೆಟ್ಟದ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ

Article Image

ವೇಣೂರು: ಶ್ರೀ ಬಾಹುಬಲಿ ಬೆಟ್ಟದ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ

ವೇಣೂರು, ಅ. 2: ಗಾಂಧಿ ಜಯಂತಿ ಪ್ರಯುಕ್ತ ಭ| ಶ್ರೀ ಬಾಹುಬಲಿ ಬೆಟ್ಟದ ಪರಿಸರದಲ್ಲಿ ವೇಣೂರು ವಲಯ ಅರಣ್ಯ ಇಲಾಖೆ ವತಿಯಿಂದ ಶ್ರೀ ದಿಗಂಬರ ಜೈ ತೀರ್ಥ ಕ್ಷೇತ್ರ ಸಮಿತಿ ವೇಣೂರು ಇವರ ಸಹಭಾಗಿತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಯಾತ್ರಿ ನಿವಾಸದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ವೇಣೂರು ವಲಯ ಅರಣ್ಯ ಅಧಿಕಾರಿ ಸುಬ್ರಮಣ್ಯ ಆಚಾರ್ ತಮ್ಮ ಮನೆ ಅಲ್ಲದೆ ತಾವಿರುವ ತಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಮಹಾಮಸ್ತಕಾಭಿಷೇಕದಲ್ಲಿ ಅರಣ್ಯ ಇಲಾಖೆ ವತಿಯಿಂದ ಇವರು ನೀಡಿದ ಸಹಕಾರವನ್ನು ಸ್ಮರಿಸುತ್ತಾ ಇವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಶ್ರೀ ದಿಗಂಬರ ಜೈನ ತೀರ್ಥ ಕ್ಷೇತ್ರ ಸಮಿತಿ ವತಿಯಿಂದ ಕಾರ್ಯದರ್ಶಿಗಳಾದ ವಿ. ಪ್ರವೀಣ್ ಕುಮಾರ್ ಇಂದ್ರ ಸನ್ಮಾನಿಸಿದರು. ವಲಯದ ಎಲ್ಲ ಉಪ ಅರಣ್ಯಾಧಿಕಾರಿಗಳಾದ ಸುನಿಲ್, ಹರಿಪ್ರಸಾದ್, ಇಬ್ರಾಹಿಂ, ಸುರೇಶ್ ಮತ್ತು ಅರಣ್ಯ ಪಾಲಕರು, ಅರಣ್ಯ ವೀಕ್ಷಕರು ಹಾಗೂ ಸಿಬ್ಬಂದಿಗಳು ಮತ್ತು ತೀರ್ಥಕ್ಷೇತ್ರ ಸಮಿತಿಯ ಸಿಬ್ಬಂದಿಗಳಾದ ವೈ. ಜಯರಾಜ್, ದೀಪಶ್ರೀ ಉಪಸ್ಥಿತರಿದ್ದರು. ವಿ. ಪ್ರವೀಣ್ ಕುಮಾರ್ ಇಂದ್ರರವರು ಸ್ವಾಗತಿಸಿದರು. ತೀರ್ಥಕ್ಷೇತ್ರ ಸಮಿತಿಯ ಜೊತೆ ಕಾರ್ಯದರ್ಶಿಗಳಾದ ಮಹಾವೀರ್ ಜೈನ್ ಮೂಡುಕೋಡಿ ಗುತ್ತು ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಗೈದರು.

ಬೆಳ್ತಂಗಡಿ ಬಸದಿಯಲ್ಲಿ ವಿಶೇಷ ಆರಾಧನೆ, ವಿದ್ಯಾರ್ಥಿ ಪ್ರೋತ್ಸಾಹಧನ ವಿತರಣೆ

Article Image

ಬೆಳ್ತಂಗಡಿ ಬಸದಿಯಲ್ಲಿ ವಿಶೇಷ ಆರಾಧನೆ, ವಿದ್ಯಾರ್ಥಿ ಪ್ರೋತ್ಸಾಹಧನ ವಿತರಣೆ

ಉಜಿರೆ: ವಿದ್ಯಾರ್ಥಿಗಳು ವಿದ್ಯೆಯ ಜೊತೆ ಉತ್ತಮ ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೊಂಬುಜ ಜೈನಮಠದ ಪೂಜ್ಯ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಅವರು ಶನಿವಾರ ಬೆಳ್ತಂಗಡಿ ಜೈನಪೇಟೆಯಲ್ಲಿರುವ ರತ್ನತ್ರಯ ತೀರ್ಥಕ್ಷೇತ್ರದಲ್ಲಿ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ 733 ವಿದ್ಯಾರ್ಥಿಗಳಿಗೆ 20,29,000 ರೂ. ವಿದ್ಯಾರ್ಥಿ ಪ್ರೋತ್ಸಾಹಧನವನ್ನು ಕಿನ್ಯಮ್ಮ ಯಾನೆ ಗುಣಾವತಿ ಅಮ್ಮ ಸ್ಮಾರಕ ಟ್ರಸ್ಟ್ ವತಿಯಿಂದ ವಿತರಿಸಿ ಆಶೀರ್ವಚನ ನೀಡಿದರು. ಇಂದಿನ ಅತ್ಯಂತ ವೇಗ ಮತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳು ಒತ್ತಡದಲ್ಲೇ ಬದುಕುತ್ತಿದ್ದಾರೆ. ಗುರುಹಿರಿಯರಿಂದಲೂ ಮಕ್ಕಳಿಗೆ ಸಕಾಲಿಕ ಮಾರ್ಗದರ್ಶನ ಸಿಗುತ್ತಿಲ್ಲ. ಹಣ, ಉದ್ಯೋಗ, ಆಸ್ತಿ, ಕೀತಿ- ಯಾವುದೂ ಶಾಶ್ವತವಲ್ಲ. ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ವಿನಯ, ಪರೋಪಕಾರ, ಕರುಣೆ, ಅನುಕಂಪ ಮೊದಲಾದ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು. ಬಸದಿಯ ಅನುವಂಶಿಕ ಆಡಳಿತ ಮೊಕ್ತೇಸರ ಕೆ. ಜಯವರ್ಮರಾಜ ಬಳ್ಳಾಲ್ ಸ್ವಾಗತಿಸಿದರು. ಕೆ. ರಾಜವರ್ಮ ಬಳ್ಳಾಲ್, ಡಾ. ಜೀವಂಧರ ಬಳ್ಳಾಲ್, ಕೆ. ಪ್ರಸನ್ನ ಕುಮಾರ್, ಪ್ರೇಮ್ ಕುಮಾರ್ ಹೊಸ್ಮಾರು, ವಿಜಯಾ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಎಂ. ಜಿನರಾಜ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಬಸದಿಯಲ್ಲಿ 24 ತೀರ್ಥಂಕರರ ಆರಾಧನೆ ಮತ್ತು ವಿಶೇಷ ಪೂಜೆ ನಡೆಯಿತು. ಕಾರ್ಯಕ್ರಮ ನಿರ್ವಹಿಸಿದ ಶಿಕ್ಷಕ ಧರಣೇಂದ್ರ ಕುಮಾರ್ ಧನ್ಯವಾದವಿತ್ತರು.

ವಿಶ್ವಶಾಂತಿ ಯುವಸೇವಾ ಸಮಿತಿ (ರಿ) ಬೆಂಗಳೂರು ಶ್ರೀ ಆದಿನಾಥ ವೈಭವ ಕಾರ್ಯಕ್ರಮ

Article Image

ವಿಶ್ವಶಾಂತಿ ಯುವಸೇವಾ ಸಮಿತಿ (ರಿ) ಬೆಂಗಳೂರು ಶ್ರೀ ಆದಿನಾಥ ವೈಭವ ಕಾರ್ಯಕ್ರಮ

ವಿಶ್ವಶಾಂತಿ ಯುವಸೇವಾ ಸಮಿತಿ (ರಿ) ಬೆಂಗಳೂರು “ಶ್ರೀ ಆದಿನಾಥ ವೈಭವ” ವಿಶ್ವದ ಮೊದಲ ಬೃಹತ್ ಜಿನಸಹಸ್ರನಾಮ ಸ್ತುತಿ ವಿಶ್ವ ದಾಖಲೆ ಕಾರ್ಯಕ್ರಮವು ಸಾವಿರಕಂಬ ಬಸದಿಯಲ್ಲಿ ಪೂಜ್ಯ ಸ್ವಾಮೀಜಿಯವರ ಚಾಲನೆ ಮೂಲಕ ಸೆ. 22ರಂದು ಪ್ರಾತಃಕಾಲ 3.15ಕ್ಕೆ ನಡೆಯಲಿದೆ. ಕಾರ್ಯಕ್ರಮದ ಸಮಾರೋಪ ಸಮಾರಂಭವು ಮೂಡುಬಿದಿರೆ ಶ್ರೀ ಜೈನ ಮಠದ ಭಾರತಭೂಷಣ ಜಗದ್ಗುರು ಸ್ವಸ್ತಿಶ್ರೀ ಡಾ| ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರ ಪಾವನ ಸಾನ್ನಿಧ್ಯದಲ್ಲಿ, ಮೂಡುಬಿದಿರೆ ಎಕ್ಸಲೆಂಟ್ ಕಾಲೇಜಿನಲ್ಲಿ ಸಂಜೆ 6.15ರಿಂದ ನಡೆಯಲಿದ್ದು, ಧರ್ಮಸ್ಥಳದ ಮಾತೃಶ್ರೀ ಹೇಮಾವತಿ ವೀರೇಂದ್ರ ಹೆಗ್ಗಡೆಯವರ ಗೌರವ ಅಧ್ಯಕ್ಷತೆಯಲ್ಲಿ, ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರೀಯಾ ಹರ್ಷೇಂದ್ರ ಕುಮಾರ್ ಇವರ ಗೌರವ ಅತಿಥೇಯದಲ್ಲಿ, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಮತ್ತು ಕಾರ್ಯದರ್ಶೀಯಾದ ರಶ್ಮಿತಾ ಯುವರಾಜ್ ಜೈನ್ ಮತ್ತು ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಅಭಯಚಂದ್ರ ಜೈನ್ ಇವರ ವಿಶೇಷ ಅತಿಥೇಯದಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಪ್ರೊ. ಅಜಿತ್ ಪ್ರಸಾದ್ ನಿವೃತ್ತ ಉಪ ಪ್ರಾಂಶುಪಾಲರು ಮತ್ತು ವಿಭಾಗ ಮುಖ್ಯಸ್ಥರು ಮತ್ತು ವೀಣಾ ಬಿ. ಆರ್. ಶೆಟ್ಟಿ ಸಾಹಿತಿಗಳು ಮೂಡುಬಿದಿರೆ ಇವರು ಆಗಮಿಸಲಿದ್ದಾರೆ.

ಬಜಿಲಕೇರಿ ಶ್ರೀ ಆದಿನಾಥ ಬಸದಿ: ದಶಲಕ್ಷಣ ಪರ್ವ

Article Image

ಬಜಿಲಕೇರಿ ಶ್ರೀ ಆದಿನಾಥ ಬಸದಿ: ದಶಲಕ್ಷಣ ಪರ್ವ

ಬಜಲಕೇರಿ, ಸೆ. 21: ಭಾರತೀಯ ಜೈನ್ ಮಿಲನ್ ಆಶ್ರಯದಲ್ಲಿ ಬಜಿಲಕೇರಿಯ ಶ್ರೀ ಆದಿನಾಥ ಬಸದಿಯಲ್ಲಿ ದಶಲಕ್ಷಣ ಪರ್ವದ ಹಿನ್ನೆಲೆಯಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು. ಮೂಡುಬಿದಿರೆಯ ಶ್ರೀ ಜೈನ ಮಠದ ಸ್ವಸ್ತಿಶ್ರೀ ಡಾ। ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು ಆಶೀರ್ವಚನಗೈದರು. ಬಸದಿಯ ಮೊಕ್ತೇಸರರಾದ ಸುರೇಶ್ ಬಲ್ಲಾಳ್ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯ ಬಸ್ ಮಾಲಕರ ಸಂಘದ ಅಧ್ಯಕ್ಷರಾದ ರಾಜವರ್ಮ ಬಳ್ಳಾಲ್ ಮುಖ್ಯ ಅತಿಥಿಯಾಗಿದ್ದರು. ಈ ಸಂದರ್ಭ ವಿದ್ವಾಂಸ ಮುನಿರಾಜ ರೆಂಜಾಳ ಕಾರ್ಕಳ ಅವರನ್ನು ಸಮ್ಮಾನಿಸಲಾಯಿತು. ಭಾರತೀಯ ಜೈನ್ ಮಿಲನ್ ನ ಮಂಗಳೂರು ವಲಯ ಅಧ್ಯಕ್ಷರಾದ ರತ್ನಾಕರ್ ಜೈನ್ ಸ್ವಾಗತಿಸಿದರು. ವೈಶಾಲಿ ಪಡಿವಾಲ್ ವಂದಿಸಿದರು. ಪ್ರಿಯಾ ಸುದೇಶ್ ನಿರೂಪಿಸಿದರು. ಸನತ್ ಕುಮಾರ್ ಜೈನ್ ಸಹಕರಿಸಿದರು. ದಿ। ಎಂ. ಶ್ರೀಧರ ಪಾಂಡಿ ವಿರಚಿತ ಜಿನಕಾವ್ಯ 'ಶ್ರೀ ಜ್ವಾಲಾಮಾಲಿನಿ ದೇವಿ ಚರಿತೆ' ಯಕ್ಷಗಾನದ ಶೈಲಿಯ ಕಾವ್ಯವಾಚನ ಕಾರ್ಯಕ್ರಮದಲ್ಲಿ ಕಾವ್ಯಶ್ರೀ ಅಜೇರು ಅವರಿಂದ ಹಾಡುಗಾರಿಕೆ ಹಾಗೂ ಮುನಿರಾಜ ರೆಂಜಾಳ ಕಾರ್ಕಳ ಅವರಿಂದ ಪ್ರವಚನ ನಡೆಯಿತು. ಚೆಂಡೆಯಲ್ಲಿ ಶ್ರೀಪತಿ ನಾಯಕ್ ಅಜೇರು, ಮದ್ದಳೆಯಲ್ಲಿ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ ಸಹಕರಿಸಿದರು.

First Previous

Showing 3 of 4 pages

Next Last