Article Image

ಫೆ. 13: ಶ್ರೀ ಅತಿಶಯ ಕ್ಷೇತ್ರ ಪರುಷಗುಡ್ಡೆ ಬಸದಿಯ ವಾರ್ಷಿಕೋತ್ಸವ

Article Image

ಫೆ. 13: ಶ್ರೀ ಅತಿಶಯ ಕ್ಷೇತ್ರ ಪರುಷಗುಡ್ಡೆ ಬಸದಿಯ ವಾರ್ಷಿಕೋತ್ಸವ

ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮದ ಶ್ರೀ ಅತಿಶಯ ಕ್ಷೇತ್ರ ಪರುಷಗುಡ್ಡೆ ಬಸದಿಯ ಭಗವಾನ್ ಶ್ರೀ ಶಾಂತಿನಾಥ ತೀರ್ಥಂಕರರ ಮತ್ತು ಭಗವಾನ್ ಶ್ರೀ ಪಾರ್ಶ್ವನಾಥ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವದ ಹಾಗೂ ಶ್ರೀ ಪದ್ಮಾವತಿ ಅಮ್ಮನವರ ಬಿಂಬ ಪ್ರತಿಷ್ಠಾ ಮಹೋತ್ಸವದ ವಾರ್ಷಿಕೋತ್ಸವ ಸಮಾರಂಭವು ಮೂಡುಬಿದಿರೆ ಶ್ರೀ ಜೈನ ಮಠದ ಪರಮಪೂಜ್ಯ ಭಾರತಭೂಷಣ ಸ್ವಸ್ತಿಶ್ರೀ ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯದಲ್ಲಿ ಮತ್ತು ಮಾರ್ಗದರ್ಶನದಲ್ಲಿ, ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಫೆ. 13ರಂದು ಜರಗಲಿರುವುದು.

ವೇಣೂರು ಮಹಾಮಸ್ತಕಾಭಿಷೇಕ : ಅಟ್ಟಳಿಗೆ ಪ್ರವೇಶಕ್ಕೆ ಅವಕಾಶ

Article Image

ವೇಣೂರು ಮಹಾಮಸ್ತಕಾಭಿಷೇಕ : ಅಟ್ಟಳಿಗೆ ಪ್ರವೇಶಕ್ಕೆ ಅವಕಾಶ

12 ವರುಷಗಳಿಗೊಮ್ಮೆ ಜರಗುವ ಭಗವಾನ್ ಬಾಹುಬಲಿ ಮೂರ್ತಿಯ ಮಹಾಮಸ್ತಕಾಭಿಷೇಕಕ್ಕೆ ನಿರ್ಮಾಣವಾಗಿರುವ ಅಟ್ಟಳಿಗೆಯನ್ನು ಹತ್ತುವುದು, ದೇವರನ್ನು ಅತೀ ಹತ್ತಿರದಿಂದ ವೀಕ್ಷಿಸುವುದು, ಎತ್ತರದಿಂದ ಪ್ರಕೃತಿಯನ್ನು ನೋಡುವುದು ‌ಅಂದರೆ ಏನೋ ಸಂಭ್ರಮ. ಈ ಸೌಂದರ್ಯ ವೀಕ್ಷಿಸಲು ಭಕ್ತರು ಈಗಾಗಲೇ ವೇಣೂರಿನ ಬಾಹುಬಲಿ ಕ್ಷೇತ್ರಕ್ಕೆ ಆಗಮಿಸುತ್ತಿದ್ದು, ಅಟ್ಟಳಿಗೆ ಪ್ರವೇಶಿಸಲು ನಿಗದಿತ ಶುಲ್ಕದೊಂದಿಗೆ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಅವಕಾಶವಿರುತ್ತದೆ. ಅಟ್ಟಳಿಗೆಯಲ್ಲಿ ಮೊಬೈಲ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮೂರ್ತಿಯನ್ನು ಮುಟ್ಟದೆ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಮಸ್ತಕಾಭಿಷೇಕ ಮಹೋತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಧಾರವಾಡ : ವೇಣೂರು ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಆಹ್ವಾನ

Article Image

ಧಾರವಾಡ : ವೇಣೂರು ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಆಹ್ವಾನ

ಧಾರವಾಡ/ಸತ್ತೂರು: ವೇಣೂರಿನ ಮಹಾಮಸ್ತಕಾಭಿಷೇಕ ಸಮಿತಿಯ ಪದಾಧಿಕಾರಿಗಳು ಇಲ್ಲಿಯ ಎಸ್.ಡಿ.ಎಂ. ಮಹಾವಿದ್ಯಾಲಯದ ಉಪಕುಲಪತಿಗಳಾದ ಡಾ| ನಿರಂಜನ್ ಕುಮಾರ್ ಮತ್ತು ಪದ್ಮಲತಾ ನಿರಂಜನ್ ಕುಮಾರ್ ಧಾರವಾಡ ಇವರನ್ನು ಭೇಟಿ ಮಾಡಿ, ಅವರಿಗೆ ಮಹಾಮಸ್ತಕಾಭಿಷೇಕದ ಶ್ರೀಮುಖ ಪತ್ರಿಕೆಯನ್ನು ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಆ ಸಂದರ್ಭದಲ್ಲಿ ಎಸ್.ಡಿ.ಎಂ. ಸೊಸೈಟಿಯ ಕಾರ್ಯದರ್ಶಿಗಳಾದ ವಿ. ಜೀವಂಧರ್ ಕುಮಾರ್, ಮಸ್ತಕಾಭಿಷೇಕ ಸಮಿತಿಯ ಕೋಶಾಧಿಕಾರಿ ಜಯರಾಜ್ ಕಂಬ್ಳಿ, ಕಾರ್ಯದರ್ಶಿಗಳಾದ ಮಹಾವೀರ ಜೈನ್ ಮೂಡುಕೋಡಿ ಮತ್ತು ಕೆ. ಪ್ರವೀಣ್ ಅಜ್ರಿ ಹಾಗೂ ಪ್ರಸ್ತುಥ್ ಕುಂಡದಬೆಟ್ಟು ಉಪಸ್ಥಿತರಿದ್ದರು.

ಫೆ. 10-15 : ಮೂಡುಬಿದಿರೆಯಲ್ಲಿ ಮಕ್ಕಿಮನೆ ಕಲಾವೃಂದ ಬಳಗ ಸೇರಿದಂತೆ ವಿವಿಧ ತಂಡಗಳ ಸಾಂಸ್ಕೃತಿಕ ವೈಭವ

Article Image

ಫೆ. 10-15 : ಮೂಡುಬಿದಿರೆಯಲ್ಲಿ ಮಕ್ಕಿಮನೆ ಕಲಾವೃಂದ ಬಳಗ ಸೇರಿದಂತೆ ವಿವಿಧ ತಂಡಗಳ ಸಾಂಸ್ಕೃತಿಕ ವೈಭವ

ಮೂಡುಬಿದಿರೆ ಜೈನ್ ಪೇಟೆಯ ಇತಿಹಾಸ ಪ್ರಸಿದ್ಧ ಹೀರೆ ಅಮ್ಮನವರ ಬಸದಿ ಧಾಮ ಸಂಪ್ರೋಕ್ಷಣಾ ಪೂರ್ವಕ ಜಿನಬಿಂಬ ಪ್ರತಿಷ್ಠಾ ಮಹೋತ್ಸವ ಮತ್ತು ವಾರ್ಷಿಕ ರಥೋತ್ಸವು ಫೆ. 10 ರಿಂದ 16ರ ತನಕ ಜರುಗಲಿದ್ದು, ಫೆ. 10ರಂದು ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಂಗಳೂರಿನ ಮಕ್ಕಿಮನೆ ಕಲಾವೃಂದದಿಂದ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ. ಫೆ. 11ರಂದು ಕಾವ್ಯ ವಾಚನ-ವ್ಯಾಖ್ಯಾನ ವೈಭವ (ಪ್ರಸಂಗ : ಭ| ಶ್ರೀ ಶಾಂತಿನಾಥ ಚರಿತೆ), ಫೆ. 12ರಂದು ಜೈನ ಅಂತ್ಯಾಕ್ಷರಿ, ಫೆ. 13ರಂದು ಮುನಿರಾಜ ರೆಂಜಾಳ ಅವರ ಪರಿಕಲ್ಪನೆಯಲ್ಲಿ "ಚಾವಡಿ ಚಿಂತನೆ" ಮತ್ತು ಸಪ್ತವರ್ಣ ಬೆಳುವಾಯಿ ಇವರ ತಂಡದವರಿಂದ "ನಾಟ್ಯ ವೈಭವ, ಫೆ. 14ರಂದು "ಅಭಯಮತಿ, ಅಭಯರುಚಿ" ರೂಪಕ ಕಾರ್ಯಕ್ರಮ, ಫೆ. 15ರಂದು ಯಕ್ಷಗಾನ ಶೈಲಿಯಲ್ಲಿ ಕಾವ್ಯ ವಾಚನ ಪ್ರವಚನ ವೈಭವ (ಪ್ರಸಂಗ : ಶ್ರೀ ಪದ್ಮಾವತಿ ದೇವಿ ಚರಿತೆ) ಕಾರ್ಯಕ್ರಮಗಳು ನಡೆಯಲಿದೆ.

ವೇಣೂರು ಭ| ಬಾಹುಬಲಿ ಮಹಾಮಸ್ತಕಾಭಿಷೇಕ: ಬೆಳ್ತಂಗಡಿಯಲ್ಲಿ ಅಧಿಕಾರಿಗಳೊಂದಿಗೆ ಎಸಿ ಸಭೆ

Article Image

ವೇಣೂರು ಭ| ಬಾಹುಬಲಿ ಮಹಾಮಸ್ತಕಾಭಿಷೇಕ: ಬೆಳ್ತಂಗಡಿಯಲ್ಲಿ ಅಧಿಕಾರಿಗಳೊಂದಿಗೆ ಎಸಿ ಸಭೆ

ಫೆ. 22ರಿಂದ ಮಾ. 1ರ ತನಕ ನಡೆಯಲಿರುವ ವೇಣೂರಿನ ಭ| ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಯಶಸ್ಸಿಗಾಗಿ ಪೂರ್ವಸಿದ್ಧತೆ ಸಭೆಯು ಬೆಳ್ತಂಗಡಿಯ ಆಡಳಿತ ಸೌಧದಲ್ಲಿ ಪುತ್ತೂರಿನ ಸಹಾಯಕ ಕಮಿಷನರ್ ಜುಬಿನ್ ಮೊಹಾಪಾತ್ರ ಅವರ ಅಧ್ಯಕ್ಷತೆಯಲ್ಲಿ ಫೆ. 7ರಂದು ನಡೆಯಿತು. ಸಭೆಯನ್ನು ಮುನ್ನಡೆಸಿದ ಸಹಾಯಕ ಕಮಿಷನರ್ ಎಲ್ಲ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರಲ್ಲದೆ, ಅಧಿಕಾರಿಗಳ ಜವಾಬ್ದಾರಿಗಳನ್ನು ಮನವರಿಕೆ ಮಾಡಿದರು. ಸಂಬಂಧಿತ ಎಲ್ಲ ಇಲಾಖೆಗಳ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗೆ ಸಂಬಂಧಿಸಿದಂತೆ ನೋಡಲ್ ಅಧಿಕಾರಿಗಳನ್ನು ನೇಮಿಸಿ, ಅವರ ಹೆಸರು ಮತ್ತು ಮೊಬೈಲ್ ನಂಬರನ್ನು ತಾಲೂಕು ತಹಶೀಲ್ದಾರರಿಗೆ ನೀಡುವಂತೆ ಸೂಚಿಸಿದರು. ಮಹಾಮಸ್ತಕಾಭಿಷೇಕದ ಸಂದರ್ಭ ಬಾಹುಬಲಿ ಬೆಟ್ಟದಲ್ಲಿ ಇಲಾಖಾ ಅಧಿಕಾರಿಗಳಿಗಾಗಿ ಪ್ರತ್ಯೇಕ ಮಾಹಿತಿ ಕೇಂದ್ರ ತೆರೆಯುವಂತೆ ಸೂಚಿಸಿದರು. ಒಟ್ಟಿನಲ್ಲಿ ಮಹಾಮಸ್ತಕಾಭಿಷೇಕದ ಯಶಸ್ಸಿಗೆ ಸರಕಾರದ ಕಡೆಯಿಂದ ಸರ್ವರೀತಿಯ ಸಹಕಾರ ನೀಡಲು ಹಾಗೂ ಎಲ್ಲೂ ಯಾವುದೇ ಪ್ರಮಾದವಾಗದಂತೆ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಿದರು. ಸಭೆಯಲ್ಲಿ ಮಹಾಮಸ್ತಕಾಭಿಷೇಕದ ಸರಕಾರದ ಪರವಾಗಿ ನೋಡಲ್ ಅಧಿಕಾರಿ ಮಾಣಿಕ್ಯ ಎಂ., ಸಹಾಯಕ ನೋಡಲ್ ಅಧಿಕಾರಿ ಡಾ| ಜಯಕೀರ್ತಿ ಜೈನ್, ಬೆಳ್ತಂಗಡಿಯ ತಹಶೀಲ್ದಾರ್ ಪೃಥ್ವಿ ಸಾನಿಕಂ, ಬೆಳ್ತಂಗಡಿ ತಾಲೂಕು ಪಂಚಾಯತ್ ಪ್ರಭಾರ ಕಾರ್ಯ ನಿರ್ವಹಣಾಧಿಕಾರಿ ಭವಾನಿ ಶಂಕರ್ ಎನ್., ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಪ್ರಸಾದ್ ಅಜಿಲ, ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷರಾದ ಅಳದಂಗಡಿ ಅರಮನೆಯ ಡಾ| ಪದ್ಮಪ್ರಸಾದ್ ಅಜಿಲ, ಪ್ರಧಾನ ಕಾರ್ಯದರ್ಶಿಗಳಾದ ಪ್ರವೀಣ್ ಕುಮಾರ್ ಇಂದ್ರ ಉಪಸ್ಥಿತರಿದ್ದು ಅಗತ್ಯ ಸಲಹೆ-ಸೂಚನೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ನಿತಿನ್, ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಶಿವಕುಮಾರ್, ಆರೋಗ್ಯ ಇಲಾಖೆ ತಾಲೂಕು ವೈದ್ಯಾಧಿಕಾರಿ ಡಾ| ಪ್ರಕಾಶ್, ಪೊಲೀಸ್ ಇಲಾಖೆಯ ಸಬ್ ಇನ್ಸ್‌ಪೆಕ್ಟರ್ ಶ್ರೀಶೈಲ, ಅಗ್ನಿಶಾಮಕದಳ ಇಲಾಖೆಯ ಪ್ರಭಾರ ಅಧಿಕಾರಿ ನೀಲಯ್ಯ ಗೌಡ, ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿ ಉದಯ ಶೆಟ್ಟಿ‌, ಎಪಿಎಂಸಿ ಕಾರ್ಯದರ್ಶಿ ರವೀಂದ್ರ, ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕ್ಲಮೆಂಟ್ ಬೆಂಜಮಿನ್, ವೇಣೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಪಾಟೀಲ್, ವೇಣೂರು ಕಂದಾಯ ನಿರೀಕ್ಷಕ ಕುಮಾರ ಸ್ವಾಮಿ, ತಾ.ಪಂ. ಕಚೇರಿ ವ್ಯವಸ್ಥಾಪಕ ಪ್ರಶಾಂತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಪ್ರಿಯಾ ಆಗ್ನೆಸ್ ಸಹಿತ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಫೆ. 10-16: ಮೂಡುಬಿದಿರೆ ಅಮ್ಮನವರ ಬಸದಿ ಧಾಮ ಸಂಪ್ರೋಕ್ಷಣಾ ಪೂರ್ವಕ ಜಿನಬಿಂಬ ಪ್ರತಿಷ್ಠಾ ಮಹೋತ್ಸವ

Article Image

ಫೆ. 10-16: ಮೂಡುಬಿದಿರೆ ಅಮ್ಮನವರ ಬಸದಿ ಧಾಮ ಸಂಪ್ರೋಕ್ಷಣಾ ಪೂರ್ವಕ ಜಿನಬಿಂಬ ಪ್ರತಿಷ್ಠಾ ಮಹೋತ್ಸವ

ಜೈನಕಾಶಿ ಎಂದೇ ಪ್ರಸಿದ್ಧವಾಗಿರುವ ಮೂಡುಬಿದಿರೆಯ ಹದಿನೆಂಟು ಬಸದಿಗಳಲ್ಲಿ ಒಂದಾದ ಭ| ಶ್ರೀ ಶಾಂತಿನಾಥ ಸ್ವಾಮಿ ಮೂಲ ನಾಯಕನಾಗಿರುವ, ಶ್ರೀ ಹಿರೇ ಅಮ್ಮನವರ ಬಸದಿಯ ಹಾಗೂ ಧ್ವಜಸ್ತಂಭದ ಜೀರ್ಣೋದ್ಧಾರದ ಕಾರ್ಯಕ್ರಮಗಳು 28 ಜನವರಿ 2023ರಂದು ಪ್ರಾರಂಭವಾಗಿ, ಇದೀಗ ಸಂಪೂರ್ಣವಾಗಿ ಮುಕ್ತಾಯಗೊಂಡು ಪುನಃ ಪ್ರತಿಷ್ಠಾ ಮಹೋತ್ಸವದ ಪುಣ್ಯ ಕಾರ್ಯಕ್ಕೆ ಸಿದ್ಧವಾಗಿದೆ. ಯುಗಳ ಮುನಿಗಳಾದ ಪರಮಪೂಜ್ಯ ೧೦೮ ಶ್ರೀ ಅಮೋಘಕೀರ್ತಿ ಮುನಿಮಹಾರಾಜರು ಹಾಗೂ ಪರಮಪೂಜ್ಯ ೧೦೮ ಶ್ರೀ ಅಮರಕೀರ್ತಿ ಮುನಿಮಹಾರಾಜರ ಪಾವನ ಸಾನ್ನಿಧ್ಯದಲ್ಲಿ, ಮೂಡುಬಿದಿರೆ ಶ್ರೀ ಜೈನ ಮಠದ ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ ಹಾಗೂ ದಿವ್ಯ ನೇತೃತ್ವದಲ್ಲಿ ಹಾಗೂ ನಾಡಿನ ಸಮಸ್ತ ಭಟ್ಟಾರಕರ ದಿವ್ಯ ಸಾನ್ನಿಧ್ಯದಲ್ಲಿ ಧಾಮ ಸಂಪ್ರೋಕ್ಷಣಾ ಪೂರ್ವಕ ಜಿನಬಿಂಬ ಪ್ರತಿಷ್ಠಾ ಮಹೋತ್ಸವ ಮತ್ತು ವಾರ್ಷಿಕ ರಥೋತ್ಸವ ಕಾರ್ಯಕ್ರಮವು ಫೆ. 10ರಿಂದ ಫೆ. 16ರ ವರೆಗೆ ಜೈನ ಆಗಮೋಕ್ತ ವಿಧಿ-ವಿಧಾನಗಳೊಂದಿಗೆ ಸಂಪನ್ನಗೊಳ್ಳಲಿರುವುದು.

ಬೆಳಗಾವಿಯ ಧರ್ಮನಗರಿ ಶಮನೇವಾಡಿಯಲ್ಲಿ ಜೈನ ಸಮ್ಮೇಳನ

Article Image

ಬೆಳಗಾವಿಯ ಧರ್ಮನಗರಿ ಶಮನೇವಾಡಿಯಲ್ಲಿ ಜೈನ ಸಮ್ಮೇಳನ

ಬೆಳಗಾವಿಯ ಧರ್ಮನಗರಿ ಶಮನೇವಾಡಿಯಲ್ಲಿ ಪರಮ ಪೂಜ್ಯ ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರನಂದಿ ಮುನಿಮಹಾರಾಜರ 33ನೆಯ ದೀಕ್ಷಾ ಜಯಂತಿ ನಿಮಿತ್ತ ಇಂದು ಮಧ್ಯಾಹ್ನ 2:00 ಗಂಟೆಗೆ ಬೃಹತ್ ಜೈನ ಸಮ್ಮೇಳನ ನಡೆಯಲಿದೆ. ಜೈನ ಸಮ್ಮೇಳನದ ಉದ್ದೇಶ: ಸರಕಾರವು ಜೈನ ನಿಗಮ ಮಂಡಳಿಯನ್ನು ಸ್ಥಾಪಿಸಬೇಕು, ಮಹಾನಗರಗಳಲ್ಲಿ ಜೈನ್ ಹಾಸ್ಟೆಲ್‌ಗಳ ಸ್ಥಾಪನೆ ಆಗಬೇಕು, ಪ್ರತಿ ಜಿಲ್ಲೆಗಳಲ್ಲಿ ಬಡಜನರ ಉಚಿತ ಚಿಕಿತ್ಸೆಗಾಗಿ ಆಸ್ಪತ್ರೆಗಳ ಸ್ಥಾಪನೆ ಆಗಬೇಕು, ಜೈನ ಸಾಧುಗಳ ಸುರಕ್ಷತೆ ಆಗಬೇಕು, ಜೈನ ಬಡ ವಿದ್ಯಾರ್ಥಿಗಳಿಗೆ ನಿಶುಲ್ಕ (ಉಚಿತ) ವಿದ್ಯಾರ್ಜನೆ ಆಗಬೇಕು, ಪ್ರತಿ ಹಳ್ಳಿ ಹಳ್ಳಿಗೆ ಮುನಿ ನಿವಾಸ ಹಾಗೂ ಮಂಗಲ ಕಾರ್ಯಾಲಯಗಳು ನಿರ್ಮಾಣವಾಗಬೇಕು, ಕರ್ನಾಟಕ ಜೈನ ಸಂಸ್ಕೃತಿಯ ಸಂರಕ್ಷಣೆ ಆಗಬೇಕು. ಸಾಂಸ್ಕೃತಿಕ ಕಾರ್ಯಕ್ರಮ: ಇಂದು ಸಂಜೆ ನಟರಾಜ ಎಂಟಟೈನರ್ಸ್ ಅರ್ಪಿಸುವ ವಿಶ್ವ ಪ್ರಸಿದ್ದ ಕನ್ನಡ ಸಂಗೀತಗಾರ ರಾಜೇಶ್ ಕೃಷ್ಣನ್ ಇವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ವೇಣೂರು: ಎಸ್.ಡಿ.ಎಂ. ಐಟಿಐ ವಿದ್ಯಾರ್ಥಿಗಳಿಂದ ಸ್ವಚ‍್ಛತಾ ಕಾರ್ಯಕ್ರಮ

Article Image

ವೇಣೂರು: ಎಸ್.ಡಿ.ಎಂ. ಐಟಿಐ ವಿದ್ಯಾರ್ಥಿಗಳಿಂದ ಸ್ವಚ‍್ಛತಾ ಕಾರ್ಯಕ್ರಮ

ಬೆಳ್ತಂಗಡಿ ತಾಲೂಕು, ವೇಣೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐಟಿಐ ಸಂಸ್ಥೆಯ ವತಿಯಿಂದ ವೇಣೂರು ಬಾಹುಬಲಿ ಬೆಟ್ಟದ ಪ್ರಾಂಗಣ ಸುತ್ತ ಸ್ವಚ್ಚತೆಗೊಳಿಸುವ ಕಾಯ೯ಕ್ರಮವನ್ನು ಇಂದು (ಫೆ. 3) ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಒಟ್ಟು 80 ಮಂದಿ ವಿದ್ಯಾರ್ಥಿಗಳೊಂದಿಗೆ, ತರಬೇತಿ ಅಧಿಕಾರಿಗಳು ಭಾಗವಹಿಸಿದ್ದರು.

ಅಂಕೋಲ, ಶಿರಗುಂಜಿ : ಭ. ಶ್ರೀ ಪಾರ್ಶ್ವನಾಥ ತೀರ್ಥಂಕರರ ಜನ್ಮ ಕಲ್ಯಾಣ ಮಹೋತ್ಸವ ಮತ್ತು ವಾರ್ಷಿಕ ಪೂಜಾ ಮಹೋತ್ಸವ

Article Image

ಅಂಕೋಲ, ಶಿರಗುಂಜಿ : ಭ. ಶ್ರೀ ಪಾರ್ಶ್ವನಾಥ ತೀರ್ಥಂಕರರ ಜನ್ಮ ಕಲ್ಯಾಣ ಮಹೋತ್ಸವ ಮತ್ತು ವಾರ್ಷಿಕ ಪೂಜಾ ಮಹೋತ್ಸವ

ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರಗುಂಜಿಯ ಶ್ರೀ ಪಾರ್ಶ್ವನಾಥ ಹಾಗೂ ಶ್ರೀ ಜೋಡಿ ಪದ್ಮಾವತಿ ನಾಗರವಳ್ಳಿ ಕ್ಷೇತ್ರದಲ್ಲಿ ಭ|| ೧೦೦೮ ಶ್ರೀ ಪಾರ್ಶ್ವನಾಥ ತೀರ್ಥಂಕರರ ಜನ್ಮ ಕಲ್ಯಾಣ ಮಹೋತ್ಸವ ಮತ್ತು 12ನೇ ವಾರ್ಷಿಕ ಪೂಜಾ ಮಹೋತ್ಸವವು ಶ್ರೀ ಕ್ಷೇತ್ರ ಸ್ವಾದಿ ದಿಗಂಬರ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಜಗದ್ಗುರು ಅಕಲಂಕ ಕೇಸರಿ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಹಾಗೂ ಶ್ರೀ ಕ್ಷೇತ್ರ ಹೊಂಬುಜ ದಿಗಂಬರ ಜೈನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೆಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನಿಧ್ಯ ಹಾಗೂ ದಿವ್ಯ ನೇತೃತ್ವದಲ್ಲಿ ದಿನಾಂಕ 05-02-2024 ಮತ್ತು 06-02-2024ರ ರಂದು ನಡೆಯಲಿದೆ.

ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಸ್ವಾಮಿಗೆ ಪಾದಾಭಿಷೇಕ

Article Image

ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಸ್ವಾಮಿಗೆ ಪಾದಾಭಿಷೇಕ

ಧರ್ಮಸ್ಥಳ : ದೇವರ ಪೂಜೆ, ಆರಾಧನೆ, ಅಭಿಷೇಕದಿಂದ ಪಾಪಗಳ ಕ್ಷಯವಾಗಿ ಪುಣ್ಯ ಸಂಚಯವಾಗುತ್ತದೆ ಎಂದು ಪರಮಪೂಜ್ಯ ದಿವ್ಯಸಾಗರ ಮುನಿಮಹಾರಾಜರು ಹೇಳಿದರು. ಅವರು ಶುಕ್ರವಾರ (ಫೆ. 2) ಧರ್ಮಸ್ಥಳದ ರತ್ನಗಿರಿಯಲ್ಲಿ ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿಗೆ ಪಾದಾಭಿಷೇಕದ ಸಂದರ್ಭ ಮಂಗಲ ಪ್ರವಚನ ನೀಡಿದರು. ನಂತರ ಪ.ಪೂ. ಆದಿಸಾಗರ ಮುನಿಮಹಾರಾಜರು ಮತ್ತು ಕಾರ್ಕಳ ಜೈನಮಠದ ಪರಮಪೂಜ್ಯ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿಗಳವರು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಪರಮಪೂಜ್ಯ ನಿರ್ದೋಷಸಾಗರ ಮುನಿಮಹಾರಾಜರು ಮತ್ತು ಕ್ಷುಲ್ಲಕ ನಿರ್ವಾಣಸಾಗರ ಮಹಾರಾಜರು ಉಪಸ್ಥಿತರಿದ್ದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವೀ. ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಪಾದಾಭಿಷೇಕದಲ್ಲಿ ಭಾಗವಹಿಸಿದರು. ಭವ್ಯ ಅಗ್ರೋದಕ ಮೆರವಣಿಗೆ ಬಳಿಕ ರತ್ನಗಿರಿಯಲ್ಲಿ ೨೧೬ ಕಲಶಗಳಿಂದ ಜಲಾಭಿಷೇಕ ಹಾಗೂ ಎಳನೀರು, ಗಂಧ, ಚಂದನ, ಅಷ್ಟಗಂಧ ಮೊದಲಾದ ಮಂಗಳದ್ರವ್ಯಗಳಿಂದ ಪಾದಾಭಿಷೇಕ ನಡೆಯಿತು.

ನಾರಾವಿ ಧಾಮ ಸಂಪ್ರೋಕ್ಷಣೆ ಪ್ರಯುಕ್ತ ಜೈನ ಶ್ರಾವಕ ಶ್ರಾವಕಿಯರಿಗೆ ರಾಜ್ಯ ಮಟ್ಟದ ಸ್ಪರ್ಧೆ

Article Image

ನಾರಾವಿ ಧಾಮ ಸಂಪ್ರೋಕ್ಷಣೆ ಪ್ರಯುಕ್ತ ಜೈನ ಶ್ರಾವಕ ಶ್ರಾವಕಿಯರಿಗೆ ರಾಜ್ಯ ಮಟ್ಟದ ಸ್ಪರ್ಧೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾರಾವಿ ಗ್ರಾಮದ ಭ| ೧೦೦೮ ಶ್ರೀ ಧರ್ಮನಾಥ ಸ್ವಾಮಿ ಬಸದಿಯ ಧಾಮ ಸಂಪ್ರೋಕ್ಷಣಾ ಪೂರ್ವಕ ಪ್ರತಿಷ್ಠಾ ಮಹೋತ್ಸವವು ಮಾರ್ಚ್ 22ರಿಂದ 24ರ ವರೆಗೆ ನಡೆಯಲಿದ್ದು, ಈ ಪ್ರಯುಕ್ತ ಜೈನ ಶ್ರಾವಕ ಶ್ರಾವಕಿಯರಿಗೆ ರಾಜ್ಯ ಮಟ್ಟದ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಗಳ ವಿವರ ಮತ್ತು ನಿಯಮಗಳು ಈ ಕೆಳಗಿನಂತಿದೆ. 1. ಧರ್ಮನಾಥ ಜಿನ ಸಂಗೀತ ಸ್ಪರ್ಧೆ ಪ್ರಥಮ ಬಹುಮಾನ : 10,000 ನಗದು ಮತ್ತು ಸ್ಮರಣಿಕೆ ದ್ವಿತೀಯ ಬಹುಮಾನ : 8,000 ನಗದು ಮತ್ತು ಸ್ಮರಣಿಕೆ ನಿಯಮಗಳು: * ಧರ್ಮನಾಥ ಸ್ವಾಮಿಯ ಹಾಡು / ಭಜನೆಯನ್ನು ಒಬ್ಬರೇ ಹಾಡಿ, ವಿಡಿಯೋ ಮಾಡಿ ಕಳುಹಿಸಬೇಕು. * ಸಾಹಿತ್ಯ, ಸ್ವರ, ಹಿನ್ನಲೆ ಸಂಗೀತ, ಛಾಯಾಗ್ರಹಣ ಇತ್ಯಾದಿ ಅಂಶಗಳನ್ನು ಪರಿಗಣಿಸಿ ವಿಜೇತರನ್ನು ಆಯ್ಕೆ ಮಾಡಲಾಗುವುದು. * ನೀವು ಕಳುಹಿಸಿದ ಹಾಡು / ಭಜನೆ ಮತ್ತು ಅದರ ವಿಡಿಯೋ ಈ ಹಿಂದೆ ಎಲ್ಲಿಯೂ ಪ್ರಕಟಗೊಂಡಿರಬಾರದು. * ವಿಡಿಯೋದ ಸಮಯ ಕನಿಷ್ಠ 5 ನಿಮಿಷ, ಗರಿಷ್ಠ 8 ನಿಮಿಷಗಳಾಗಿರಬೇಕು. 2. ಪ್ರಬಂಧ ಸ್ಪರ್ಧೆ ಪ್ರಥಮ ಬಹುಮಾನ : 3,000 ನಗದು ಮತ್ತು ಸ್ಮರಣಿಕೆ ದ್ವಿತೀಯ ಬಹುಮಾನ : 2,000 ನಗದು ಮತ್ತು ಸ್ಮರಣಿಕೆ ನಿಯಮಗಳು: * ಪ್ರಬಂಧದ ವಿಷಯ: “ಜೈನ ಧರ್ಮದ ಆಚರಣೆಗಳು ಮತ್ತು ವೈಜ್ಞಾನಿಕತೆ” * ಪ್ರಬಂಧವು 900 ಶಬ್ದಗಳನ್ನು ಮೀರಿರಬಾರದು. * ಪ್ರಬಂಧವನ್ನು ಕನ್ನಡ ನುಡಿಯಲ್ಲಿ ಟೈಪ್ ಮಾಡಿ PDF ಮಾಡಿ ಕಳುಹಿಸತಕ್ಕದು. ವಿಶೇಷ ಸೂಚನೆ : 1. ವಿಡಿಯೋ ಮತ್ತು ಪ್ರಬಂಧಗಳನ್ನು ಕಳುಹಿಸಲು ಕೊನೆಯ ದಿನಾಂಕ 5 ಮಾರ್ಚ್ 2024. 2. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. 3. ವಿಡಿಯೋ ಮತ್ತು ಪ್ರಬಂಧಗಳನ್ನು ಕಳುಹಿಸುವವರು ತಮ್ಮ ಫೋಟೋ, ವಿಳಾಸ ಮತ್ತು ಮೊಬೈಲ್ ನಂಬರ್‌ಗಳನ್ನು ಜೊತೆಗೆ ಕಳುಹಿಸಬೇಕು. ವಿಡಿಯೋ ಮತ್ತು ಪ್ರಬಂಧಗಳನ್ನು naravibasadi24@gmail.comಗೆ ಮೇಲ್ ಮಾಡಬಹುದು ಅಥವಾ 9481016887 ವಾಟ್ಸ್ಯಾಪ್ ನಂಬರ್‌ಗೆ ಕಳುಹಿಸಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗಾಗಿ ಅತುಲ್ ಎಸ್. ಸೇಮಿತ - 9481016887, ಜ್ಞಾನೇಂದ್ರ ಕುಮಾರ್ ಜೈನ್ - 9902799196 ಇವರನ್ನು ಸಂಪರ್ಕಿಸಬಹುದು.

ಕಾರ್ಕಳ : ಜಿನಭಜನಾ ಸ್ಪರ್ಧೆ ಸೀಸನ್-7ನ ಸೆಮಿಫೈನಲ್ಸ್ ಮತ್ತು ಫೈನಲ್ಸ್ ಸ್ಪರ್ಧೆ

Article Image

ಕಾರ್ಕಳ : ಜಿನಭಜನಾ ಸ್ಪರ್ಧೆ ಸೀಸನ್-7ನ ಸೆಮಿಫೈನಲ್ಸ್ ಮತ್ತು ಫೈನಲ್ಸ್ ಸ್ಪರ್ಧೆ

ಭಾರತೀಯ ಜೈನ್ ಮಿಲನ್, ವಲಯ-8ರ ಆಶ್ರಯದಲ್ಲಿ, ಮಂಗಳೂರು ವಿಭಾಗದ ಕಾರ್ಕಳ ಜೈನ್ ಮಿಲನ್ ಸಹಯೋಗದೊಂದಿಗೆ, ಯುಗಲ ಮುನಿಗಳಾದ ಪರಮಪೂಜ್ಯ ಮುನಿಶ್ರೀ ೧೦೮ ಅಮೋಘ ಕೀರ್ತಿ ಮಹಾರಾಜರು ಮತ್ತು ಪರಮಪೂಜ್ಯ ಮುನಿಶ್ರೀ ೧೦೮ ಅಮರ ಕೀರ್ತಿ ಮಹಾರಾಜರು, ಕಾರ್ಕಳ ಶ್ರೀ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಇವರ ಆಶೀರ್ವಾದಗಳೊಂದಿಗೆ, ಭಾರತೀಯ ಜೈನ್ ಮಿಲನ್‌ನ ಪರಮಸಂರಕ್ಷಕರಾದ ಡಾ|| ಹೇಮಾವತಿ ಹೆಗ್ಗಡೆ ಮತ್ತು ಡಾ|| ವೀರೇಂದ್ರ ಹೆಗ್ಗಡೆಯವರು ಹಾಗೂ ಕುಟುಂಬ ವರ್ಗದವರ ಮಾರ್ಗದರ್ಶನದೊಂದಿಗೆ ಜಿನಭಜನಾ ಸ್ಪರ್ಧೆ ಸೀಸನ್-7ನ ಸೆಮಿಫೈನಲ್ಸ್ ಫೆಬ್ರವರಿ 3ರಂದು ಮತ್ತು ಫೆಬ್ರವರಿ 4ರಂದು ಫೈನಲ್ಸ್ ಸ್ಪರ್ಧೆಯು ಭಗವಾನ್ ಶ್ರೀ ಬಾಹುಬಲಿ ಪ್ರವಚನ ಮಂದಿರ ಕಾರ್ಕಳದಲ್ಲಿ ನಡೆಯಲಿದೆ.

ರಾಜ್ಯ ಬಜೆಟ್‌ನಲ್ಲಿ ಜೈನ ಅಭಿವೃದ್ಧಿ ನಿಗಮ ಸ್ಥಾಪನೆಗೆ ಅನುದಾನ ಮೀಸಲಿಡುವಂತೆ ಸಚಿವ ಡಿ. ಸುಧಾಕರ್‌ ಅವರಿಂದ ಮನವಿ

Article Image

ರಾಜ್ಯ ಬಜೆಟ್‌ನಲ್ಲಿ ಜೈನ ಅಭಿವೃದ್ಧಿ ನಿಗಮ ಸ್ಥಾಪನೆಗೆ ಅನುದಾನ ಮೀಸಲಿಡುವಂತೆ ಸಚಿವ ಡಿ. ಸುಧಾಕರ್‌ ಅವರಿಂದ ಮನವಿ

ಕ್ರಿ.ಪೂ. 3ನೇ ಶತಮಾನದಿಂದ ಜೈನ ಧರ್ಮವು ಐತಿಹಾಸಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯಕ ಕ್ಷೇತ್ರದಲ್ಲಿ ವಿಶಿಷ್ಟ ಕೊಡುಗೆಗಳನ್ನು ನಾಡಿಗೆ ನೀಡಿದ್ದು, ಕರ್ನಾಟಕ ರಾಜ್ಯವನ್ನು ಶ್ರೀಮಂತಗೊಳಿಸಿದೆ. ಪ್ರಸ್ತುತ ರಾಜ್ಯದಲ್ಲಿ 25-30 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಜೈನ ಸಮುದಾಯವು ಆರ್ಥಿಕವಾಗಿ ಹಿಂದುಳಿದಿರುತ್ತದೆ. ಕರ್ನಾಟಕದಾದ್ಯಂತ ಜೈನ ಸಮುದಾಯಕ್ಕೆ ಸೇರಿದ ಬಸದಿಗಳು, ಸ್ಮಾರಕಗಳು ತುಂಬಾ ಶಿಥಿಲಾವಸ್ಥೆಯಲ್ಲಿದ್ದು, ಅವುಗಳ ಜೀರ್ಣೋದ್ದಾರ ಆಗಬೇಕಿದೆ. ಕರುನಾಡಿನ ಇತಿಹಾಸ ಮತ್ತು ಸಾಹಿತ್ಯದ ಪುಟಗಳಲ್ಲಿ ಆನೇಕ ರಾಜರು, ಸಾಮಂತರು ಮತ್ತು ದಂಡನಾಯಕರ ಆಳ್ವಿಕೆಯಲ್ಲಿ ಜೈನ ಧರ್ಮವು ಕನ್ನಡ ನಾಡಿಗೆ ಅತ್ಯಮೂಲ್ಯವಾದ ಕಲೆ ಮತ್ತು ಸಾಹಿತ್ಯಗಳ ಮೂಲಕ ಅಪಾರ ಕೊಡುಗೆಯನ್ನು ನೀಡಿದೆ. ಆದ್ದರಿಂದ, ಜೈನ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ 2024-25ನೇ ಸಾಲಿನ ಆಯವ್ಯಯದಲ್ಲಿ "ಜೈನ ಅಭಿವೃದ್ಧಿ ನಿಗಮ"ವನ್ನು ಸ್ಥಾಪಿಸಲು ಘೋಷಣೆ ಮಾಡಿ ರೂ. 100 ಕೋಟಿಗಳ ಅನುದಾನವನ್ನು ಮೀಸಲಿಡಬೇಕೆಂದು ಹಾಗೂ ಶ್ರೀಕ್ಷೇತ್ರ ಶ್ರವಣಬೆಳಗೊಳವನ್ನು ಸಾಂಸ್ಕೃತಿಕ ಪಾರಂಪರಿಕ ನಗರವನ್ನಾಗಿ ಘೋಷಣೆ ಮಾಡಬೇಕೆಂದು ಜೈನ ಸಮುದಾಯದ ಪರವಾಗಿ ಕರ್ನಾಟಕ ಸರಕಾರದ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಡಿ. ಸುಧಾಕರ್‌ ಅವರು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಮನವಿಯನ್ನು ಜ. 31ರಂದು ಸಲ್ಲಿಸಿದರು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಶ್ರೀ ಮಠದ ವತಿಯಿಂದ ರಾಜೇಶ ಖನ್ನಾ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಉಪಾಧ್ಯಕ್ಷ ಅಶ್ವಿತ್ ಜೈನ್, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ನಿಕಟಪೂರ್ವ ನಿರ್ದೇಶಕ ಸುರೇಶ ತಂಗಾ, ಯೋಜನೆ ಮತ್ತು ಸಾಂಖ್ಯಿಕ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಅಜಿತ್ ಮುರಗುಂಡೆ, ಬೆಳಗಾವಿ ಜೈನ ಸಮಾಜದ ಮುಖಂಡರಾದ ನೇಮಿನಾಥ ಚೌಗಲೆ ಉಪಸ್ಥಿತರಿದ್ದರು.

ಸೂಡಿ ಶಿರ್ಲಾಲು : ಜ. 28 - ಫೆ. 1 - ಪಂಚಕಲ್ಯಾಣ ಪೂರ್ವಕ ನೂತನ ಜಿನಬಿಂಬ ಪ್ರತಿಷ್ಠಾ ಮಹೋತ್ಸವ

Article Image

ಸೂಡಿ ಶಿರ್ಲಾಲು : ಜ. 28 - ಫೆ. 1 - ಪಂಚಕಲ್ಯಾಣ ಪೂರ್ವಕ ನೂತನ ಜಿನಬಿಂಬ ಪ್ರತಿಷ್ಠಾ ಮಹೋತ್ಸವ

ಉಡುಪಿ ಜಿಲ್ಲೆ, ಕಾರ್ಕಳ ತಾಲೂಕಿನ ಸೂಡಿ ಶಿರ್ಲಾಲು ಇಲ್ಲಿಯ ಭ| ಶ್ರೀ ಆದಿನಾಥ ಸ್ವಾಮಿ ಬಸದಿಯ ಪಂಚಕಲ್ಯಾಣ ಪೂರ್ವಕ ನೂತನ ಜಿನಬಿಂಬ ಪ್ರತಿಷ್ಠಾ ಮಹೋತ್ಸವವು ಪರಮಪೂಜ್ಯ ೧೦೮ ಅಮರಕೀರ್ತಿ ಮುನಿ ಮಹಾರಾಜರು ಹಾಗೂ ಪರಮಪೂಜ್ಯ ೧೦೮ ಅಮೋಘಕೀರ್ತಿ ಮುನಿ ಮಹಾರಾಜರ ಪಾವನ ಸಾನ್ನಿಧ್ಯದಲ್ಲಿ ಮತ್ತು ಕಾರ್ಕಳ ದಾನಶಾಲಾ ಶ್ರೀ ಜೈನ ಮಠದ ಪರಮಪೂಜ್ಯ ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ ಹಾಗೂ ಮಾರ್ಗದರ್ಶನದಲ್ಲಿ, ನಾಡಿನ ಎಲ್ಲಾ ಶ್ರೀ ಜೈನ ಮಠದ ಪೂಜ್ಯ ಭಟ್ಟಾರಕ ಸ್ವಾಮೀಜಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ, ಸಮಿತಿಯ ಗೌರವಾಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಜನವರಿ 28ರಿಂದ ಮೊದಲ್ಗೊಂಡು ಫೆಬ್ರವರಿ 1ರ ಪರ್ಯಂತ ಆಗಮೋಕ್ತ ವಿಧಿ ವಿಧಾನಗಳೊಂದಿಗೆ ಸಂಪನ್ನಗೊಳ್ಳಲಿರುವುದು.

ವೇಣೂರು ಅಕ್ಕಂಗಳ ಬಸದಿ : ಜ. 31 - ಫೆ. 2 - ಧಾಮ ಸಂಪ್ರೋಕ್ಷಣಾ ಪೂರ್ವಕ ಪ್ರತಿಷ್ಠಾ ಮಹೋತ್ಸವ

Article Image

ವೇಣೂರು ಅಕ್ಕಂಗಳ ಬಸದಿ : ಜ. 31 - ಫೆ. 2 - ಧಾಮ ಸಂಪ್ರೋಕ್ಷಣಾ ಪೂರ್ವಕ ಪ್ರತಿಷ್ಠಾ ಮಹೋತ್ಸವ

ಐತಿಹಾಸಿಕ ಪ್ರಸಿದ್ಧ ವೇಣೂರಿನ ಭ| ಶ್ರೀ ಬಾಹುಬಲಿ ಸ್ವಾಮಿ ಬೆಟ್ಟದ ಎಡಭಾಗದಲ್ಲಿರುವ ಅಕ್ಕಂಗಳ ಬಸದಿ, ಭ| ೧೦೦೮ ಶ್ರೀ ಶಾಂತಿನಾಥ ಸ್ವಾಮಿ ಜಿನಮಂದಿರದ ಧಾಮ ಸಂಪ್ರೋಕ್ಷಣಾ ಪೂರ್ವಕ ಪ್ರತಿಷ್ಠಾ ಮಹೋತ್ಸವವು ಮೂಡುಬಿದಿರೆ ಶ್ರೀ ಜೈನಮಠದ ಪರಮಪೂಜ್ಯ ‘ಭಾರತಭೂಷಣ' ಸ್ವಸ್ತಿಶ್ರೀ ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರ ದಿವ್ಯ ಸಾನ್ನಿಧ್ಯ ಮತ್ತು ಮಾರ್ಗದರ್ಶನದಲ್ಲಿ ಹಾಗೂ ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದೊಂದಿಗೆ, ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್‌ ಅಜಿಲರ ಉಪಸ್ಥಿತಿಯಲ್ಲಿ ಜನವರಿ 31ರಂದು ಮೊದಲ್ಗೊಂಡು ಫೆಬ್ರವರಿ 2ರ ಪರ್ಯಂತ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ.

ಸುಮ್ಮಗುತ್ತು, ಬಂಡಶಾಲೆ: ಭ| ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವ

Article Image

ಸುಮ್ಮಗುತ್ತು, ಬಂಡಶಾಲೆ: ಭ| ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವ

ಕಾರ್ಕಳ ತಾಲೂಕಿನ ಬಜಗೋಳಿ ಸುಮ್ಮಗುತ್ತು, ಬಂಡಶಾಲೆಯ ಐತಿಹಾಸಿಕ ಪರಮ ಪುನೀತ ಧರ್ಮಶಾಲೆ ತೀರ್ಥ, ಭಗವಾನ್ ಶ್ರೀ ಶ್ರೀ ಶ್ರೀ ಮುನಿಸುವ್ರತ ತೀರ್ಥಂಕರರ ವಾರ್ಷಿಕ ಮಹೋತ್ಸವ ಹಾಗೂ ೧೦೦೮ ಭಗವಾನ್ ಶ್ರೀ ಶ್ರೀ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವವು ಮೂಡುಬಿದಿರೆ ಶ್ರೀ ಜೈನಮಠದ ಜಗದ್ಗುರು ಡಾ| ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಮಾರ್ಗದರ್ಶನ, ದಿವ್ಯ ಉಪಸ್ಥಿತಿ, ನೇತೃತ್ವದಲ್ಲಿ ಜನವರಿ 27ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.

ವೇಣೂರು ಕಲ್ಲು ಬಸದಿ: ಫೆ. 4 - ವಾರ್ಷಿಕ ಮಹೋತ್ಸವ

Article Image

ವೇಣೂರು ಕಲ್ಲು ಬಸದಿ: ಫೆ. 4 - ವಾರ್ಷಿಕ ಮಹೋತ್ಸವ

ವೇಣೂರು ಕಲ್ಲುಬಸದಿ ಸಮುಚ್ಚಯದ ಭ| ೧೦೦೮ ಶ್ರೀ ಶಾಂತಿನಾಥ ಸ್ವಾಮಿ, ಭ| ೧೦೦೮ ಶ್ರೀ ಆದಿನಾಥ ಸ್ವಾಮಿ, ಶ್ರೀ 24 ತೀರ್ಥಂಕರರ ಬಸದಿಗಳ ವಾರ್ಷಿಕ ಮಹೋತ್ಸವವು ಫೆಬ್ರವರಿ 4ರಂದು ಕಾರ್ಕಳ, ದಾನಶಾಲೆ ಶ್ರೀ ಜೈನಮಠದ ಪರಮಪೂಜ್ಯ ‘ಧ್ಯಾನಯೋಗಿ' ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ, ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್‌ ಅಜಿಲರ ನೇತೃತ್ವದಲ್ಲಿ ಜರಗಲಿರುವುದು ಎಂದು ಶ್ರೀ ದಿಗಂಬರ ಜೈನ ತೀಥ೯ಕ್ಷೇತ್ರ ಸಮಿತಿ (ರಿ.) ಪ್ರಕಟಣೆಯಲ್ಲಿ ತಿಳಿಸಿದೆ.

ಧರ್ಮಸ್ಥಳ: ಭ| ಬಾಹುಬಲಿ ಮೂರ್ತಿಯ ಪ್ರತಿಷ್ಠಾ ಮಹೋತ್ಸವದ 42ನೇ ವರ್ಧಂತ್ಯುತ್ಸವ

Article Image

ಧರ್ಮಸ್ಥಳ: ಭ| ಬಾಹುಬಲಿ ಮೂರ್ತಿಯ ಪ್ರತಿಷ್ಠಾ ಮಹೋತ್ಸವದ 42ನೇ ವರ್ಧಂತ್ಯುತ್ಸವ

ಶ್ರೀ ಕ್ಷೇತ್ರ ಧರ್ಮಸ್ಥಳದ ಭ| ಶ್ರೀ ಬಾಹುಬಲಿ ಮೂರ್ತಿಯ ಪ್ರತಿಷ್ಠಾ ಮಹೋತ್ಸವದ 42ನೇ ವರ್ಧಂತ್ಯುತ್ಸವ ನಿಮಿತ್ತ ಅಗ್ರೋದಕ ಮೆರವಣಿಗೆ ಮತ್ತು 216 ಕಲಶಗಳಿಂದ ಭ| ಶ್ರೀ ಬಾಹುಬಲಿ ಸ್ವಾಮಿಯ ಪಾದಾಭಿಷೇಕ ಕಾರ್ಯಕ್ರಮವು ಕಾರ್ಕಳ ಶ್ರೀ ಜೈನ ಮಠದ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ಪಾವನ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ವಿಧಿ- ವಿಧಾನಗಳೊಂದಿಗೆ ದಿನಾಂಕ 01-02-2024 ರಿಂದ ದಿನಾಂಕ 02-02-2024ರವರೆಗೆ ನೆರವೇರಲಿದೆ.

ಬೆಂಗಳೂರು: ರಾಜ್ಯ ಮಟ್ಟದ ಅಂಚೆ ಚೀಟಿಗಳ ಪ್ರದರ್ಶನ ಕರ್ನಾಪೆಕ್ಸ್ 2024

Article Image

ಬೆಂಗಳೂರು: ರಾಜ್ಯ ಮಟ್ಟದ ಅಂಚೆ ಚೀಟಿಗಳ ಪ್ರದರ್ಶನ ಕರ್ನಾಪೆಕ್ಸ್ 2024

ವೇಣೂರು ಭ|| ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಶುಭ ಸಂದರ್ಭದಲ್ಲಿ ಭಾರತೀಯ ಅಂಚೆ ಇಲಾಖೆಯು ಕರ್ನಾಟಕದಲ್ಲಿನ 10 ಶ್ರೀ ಬಾಹುಬಲಿ ಸ್ವಾಮಿಯ ಮೂರ್ತಿಗಳ ಪಿಕ್ಚರ್ ಪೋಸ್ಟ್ ಕಾರ್ಡ್ ಹಾಗೂ ಜೈನ ಧರ್ಮದ ಮಹತ್ವ ಸಾರುವ ವಿಶ್ವ ಶಾಂತಿ, ಬದುಕು ಮತ್ತು ಬದುಕಲು ಬಿಡು, ಸತ್ಯ ಅಹಿಂಸೆಯ ಸಂದೇಶದ ವಿಶೇಷ ಸರಕಾರಿ ಅಂಚೆ ಮುದ್ರೆಗಳನ್ನು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಅಂಚೆ ಚೀಟಿಗಳ ಪ್ರದರ್ಶನ ಕರ್ನಾಪೆಕ್ಸ್ 2024ನಲ್ಲಿ ಲೋಕಾರ್ಪಣೆಗೊಳಿಸಲಾಯಿತು. ನಂತರ ಕರ್ನಾಟಕದ ಐತಿಹಾಸಿಕ ಭವ್ಯ ಸಂಸ್ಕೃತಿ, ಪರಂಪರೆ ಸಾರುವ ಪ್ರಮುಖ ಸ್ಥಳಗಳ ಕುರಿತು ಭಾರತೀಯ ಅಂಚೆ ಇಲಾಖೆ ಶಾಶ್ವತ ಮುದ್ರೆಗಳನ್ನು ಲೋಕಾರ್ಪಣೆ ಮಾಡುವ ಕಾರ್ಯದಲ್ಲಿ ವಿಶೇಷ ಶ್ರಮ ವಹಿಸಿದ ಹಿನ್ನಲೆಯಲ್ಲಿ ಹುಬ್ಬಳ್ಳಿಯ ಸಂಸ್ಕಾರ ಸ್ಕೂಲ್ ಅಧ್ಯಕ್ಷ ಮಹಾವೀರ ಕುಂದೂರ ಅವರನ್ನು ಕರ್ನಾಟಕ ಅಂಚೆ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ ಅವರು ಗೌರವಿಸಿದರು.

ಕಾರ್ಕಳ: ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ಧಾಮ ಸಂಪ್ರೋಕ್ಷಣೆ ಮತ್ತು ಶ್ರೀ ಜೈನ ಮಠದ ನೂತನ ಕಟ್ಟಡದ ಪ್ರವೇಶೋತ್ಸವ

Article Image

ಕಾರ್ಕಳ: ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ಧಾಮ ಸಂಪ್ರೋಕ್ಷಣೆ ಮತ್ತು ಶ್ರೀ ಜೈನ ಮಠದ ನೂತನ ಕಟ್ಟಡದ ಪ್ರವೇಶೋತ್ಸವ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪ್ರಾಚೀನ ಕಾರ್ಕಳ ಶ್ರೀ ಜೈನ ಮಠವು ಬೈರವದೇವ ಅರಸರಿಂದ ಸ್ಥಾಪನೆಯಾಗಿದ್ದು, ಇದೀಗ ಶಿಥಿಲಗೊಂಡ ಕಾರಣ ಪೀಠಾಧೀಶರಾಗಿರುವ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಅಪೇಕ್ಷೆಯನ್ನು ಸಾಕಾರಗೊಳಿಸುವ ದೃಷ್ಠಿಯಿಂದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆ ಹಾಗೂ ನೇತೃತ್ವದಲ್ಲಿ ಮತ್ತು ಸಮಾಜ ಬಾಂಧವರ ಸಹಕಾರದೊಂದಿಗೆ ಸುಂದರವಾದ, ವಿಶಾಲವಾದ ಹಾಗೂ ಆಗಮೋಕ್ತ ಪದ್ಧತಿಯಂತೆ ವಾಸ್ತುವಿನ್ಯಾಸ ಹೊಂದಿರುವ ಮಠದ ನೂತನ ಕಟ್ಟಡದ ನಿರ್ಮಾಣ ಕಾರ್ಯವು ದಿನಾಂಕ 20-08-2022ರಂದು ಶಿಲಾನ್ಯಾಸ ಪೂರ್ವಕ ಪ್ರಾರಂಭಗೊಂಡು ಇದೀಗ ಲೋಕಾರ್ಪಣೆಗೆ ಸಿದ್ಧವಾಗಿದೆ. ಪ.ಪೂ. ೧೦೮ ಶ್ರೀ ಅಮೋಘಕೀರ್ತಿ ಮುನಿಮಹಾರಾಜರು ಮತ್ತು ಪ.ಪೂ. ೧೦೮ ಶ್ರೀ ಅಮರಕೀರ್ತಿ ಮುನಿಮಹಾರಾಜರ ಪಾವನ ಸಾನ್ನಿಧ್ಯದಲ್ಲಿ, ಕಾರ್ಕಳ ಶ್ರೀ ಜೈನ ಮಠದ ಪ.ಪೂ. ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ಮತ್ತು ಸಮಸ್ತ ಭಟ್ಟಾರಕರ ದಿವ್ಯ ಉಪಸ್ಥಿತಿಯಲ್ಲಿ ಭ| ಶ್ರೀ ಚಂದ್ರನಾಥ ಸ್ವಾಮಿ ಬಸದಿ ಧಾಮ ಸಂಪ್ರೋಕ್ಷಣಾ ಮತ್ತು ಶ್ರೀ ಮಠದ ನೂತನ ಕಟ್ಟಡದ ಪ್ರವೇಶೋತ್ಸವ ಕಾರ್ಯಕ್ರಮವು ದಿನಾಂಕ 24-01-2024ನೇ ಬುಧವಾರದಿಂದ ಮೊದಲ್ಗೊಂಡು ದಿನಾಂಕ 26-01-2024ನೇ ಶುಕ್ರವಾರದ ಪರ್ಯಂತ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಜರಗಲಿದೆ.

ಆನೆಕೆರೆ ಚತುರ್ಮುಖ ಕೆರೆ ಬಸದಿ ಪಂಚಕಲ್ಯಾಣ ಮಹೋತ್ಸವವು ಇಂದಿನಿಂದ ಪ್ರಾರಂಭ

Article Image

ಆನೆಕೆರೆ ಚತುರ್ಮುಖ ಕೆರೆ ಬಸದಿ ಪಂಚಕಲ್ಯಾಣ ಮಹೋತ್ಸವವು ಇಂದಿನಿಂದ ಪ್ರಾರಂಭ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಐತಿಹಾಸಿಕ ಆನೆಕೆರೆ ಚತುರ್ಮುಖ ಕೆರೆ ಬಸದಿಯ ಪಂಚಕಲ್ಯಾಣ ಮಹೋತ್ಸವವು ಇಂದಿನಿಂದ ಪ್ರಾರಂಭಗೊಂಡು ಜ. 22ರ ವರೆಗೆ ನಡೆಯಲಿದೆ. ಸುಮಾರು 5 ಶತಮಾನಗಳಷ್ಟು ಪ್ರಾಚೀನ ಆನೆಕೆರೆ ಬಸದಿ ಐವರು ತೀರ್ಥಂಕರರ ಭವ್ಯ ಬಿಂಬಗಳಿಂದ ಕೂಡಿದೆ. ಚತುರ್ಮುಖ ಬಸದಿಯ ವಾಸ್ತು ಶೈಲಿಯನ್ನು ಹೊಂದಿರುವ ಕೆರೆ ಬಸದಿಯನ್ನು ಭೈರವರಸರ ವಂಶಸ್ಥ ಪಾಂಡ್ಯನಾಥ ಪಾಂಡ್ಯಪ್ಪೊಡೆಯ 16.05.1545ರಲ್ಲಿ ಕಟ್ಟಿಸಿದರು ಎಂದು ಇತಿಹಾಸ ಹೇಳುತ್ತದೆ. 2022ರಲ್ಲಿ ಜೀರ್ಣೋದ್ಧಾರ ಕಾರ್ಯವನ್ನು ಆರಂಭಿಸಿದ್ದು, ಸುಮಾರು 26 ಎಕರೆ ವಿಸ್ತೀರ್ಣದಲ್ಲಿ ಆನೆಕೆರೆ ಬಸದಿಯು ಶೋಭಿಸುತ್ತಿದೆ. ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಶ್ರೀ ಜೈನಮಠ, ದಾನಶಾಲಾ ಕಾರ್ಕಳ ಇವರ ನೇತೃತ್ವದಲ್ಲಿ ಮತ್ತು ಸಮಸ್ತ ಭಟ್ಟಾರಕರ ಪಾವನ ಸಾನಿಧ್ಯದಲ್ಲಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಮತ್ತು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಡಾ.ಎಂ.ಎನ್. ರಾಜೇಂದ್ರ ಕುಮಾರ್ ರವರ ಸಹಕಾರದೊಂದಿಗೆ ಶ್ರೀ ಪಾರ್ಶ್ವನಾಥ ಸ್ವಾಮಿಗೆ ಪಂಚಕಲ್ಯಾಣ ಮಹೋತ್ಸವವು ನೂತನ ಶಿಲಾಮಂದಿರಲ್ಲಿ ಆಗಮೋಕ್ತ ವಿಧಿ- ವಿಧಾನಗಳೊಂದಿಗೆ ಸಂಪನ್ನಗೊಳ್ಳಲಿದೆ. ನೂತನ ಆನೆಕೆರೆ ಬಸದಿಯು ಸುಂದರವಾದ ಕೆತ್ತನೆಯಲ್ಲಿ ಶಿಲಾಮಯವಾಗಿ ರೂಪುಗೊಂಡ ದ್ವಾರಪಾಲಕರು, ತಿರುಗಿಸಬಹುದಾದಂತಹ ಕಂಬಗಳು, ಪಾಣಿಪೀಠದ ಬುಡದಲ್ಲಿ ಸೂಕ್ಷ್ಮವಾದ ಕೆತ್ತನೆಗಳು, ಶಾಶ್ವತ ವಿದ್ಯುತ್ ದೀಪಾಲಂಕಾರ ಹೀಗೆ ಅನೇಕ ವಿಶೇಷತೆಗಳೊಂದಿಗೆ ಲೋಕಾರ್ಪಣೆಗೆ ಸಿದ್ದವಾಗಿದೆ.

ಭಾರತೀಯ ಜೈನ್ ಮಿಲನ್ ಮಾಸಿಕ ಸಭೆ

Article Image

ಭಾರತೀಯ ಜೈನ್ ಮಿಲನ್ ಮಾಸಿಕ ಸಭೆ

ಬೆಂಗಳೂರು: ಇಲ್ಲಿಯ ರತ್ನತ್ರಯ ಜೈನ್ ಮಿಲನಿನ ಮಾಸಿಕ ಸಭೆಯು ಶ್ರೀ ಮಂಜುನಾಥೇಶ್ವರ ಕಲ್ಯಾಣ ಮಂಟಪದಲ್ಲಿ ಜ. 6ರಂದು ಜರುಗಿತು. ಮುಖ್ಯ ಅತಿಥಿಗಳಾಗಿ ಹಿರಿಯ ವಕೀಲರಾದ ನಾಗಶ್ರೀ ಮುಪ್ಪಾನೆ ಆಗಮಿಸಿದ್ದರು. ಗಣ್ಯರೆಲ್ಲರೂ ಸೇರಿ ದೀಪ ಪ್ರಜ್ವಲನೆ ಮಾಡುವುದರ ಮುಖಾಂತರ ಕಾರ್ಯಕ್ರಮ ಪ್ರಾರಂಭವಾಯಿತು. ಪೂರ್ಣಿಮಾರವರು ಡಿಸೆಂಬರ್ ತಿಂಗಳಲ್ಲಿ ವಿವಾಹ ವಾರ್ಷಿಕೋತ್ಸವ ಹಾಗೂ ಹುಟ್ಟುಹಬ್ಬವನ್ನು ಅಚರಿಸಿಕೊಂಡ ಮಿಲನ್ ಸದಸ್ಯರಿಗೆ ಶುಭಕೋರಿದರು. ಪದ್ಮಾ ಸೂರಿರವರು ಮಿಲನಿನ ನಡಾವಳಿಯನ್ನು ವಾಚಿಸಿದರು. ನಂತರ ಬೆಂಗಳೂರು ವಿಭಾಗದ ಜಿನಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಬಹುಮಾನ ಪಡೆದ ಮಿಲನಿನ ಸದಸ್ಯರನ್ನು ಅಭಿನಂದಿಸಲಾಯಿತು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಾಗಶ್ರೀ ಮುಪ್ಪಾನೆಯವರು, “ಜೈನ ಧರ್ಮದಲ್ಲಿ ಭಟ್ಟಾರಕ ಮಹತ್ವ, ಜೈನ ಮಠ ಮತ್ತು ಆಸ್ತಿ ಸಂರಕ್ಷಸಿಕೊಳ್ಳುವಲ್ಲಿ ನಮ್ಮ ಪಾತ್ರ” ಎಂಬ ವಿಷಯದ ಬಗ್ಗೆ ಕೂಲಂಕುಷವಾಗಿ ಮಾತನಾಡಿ ಅರಿವು ಮೂಡಿಸಿದರು. ನವೀನ್ ಕುಮಾರ್ ಗುಬ್ಬಿರವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಪ್ರೇಮಾ ಸುಖಾನಂದ ಉಪಸ್ಥಿತರಿದ್ದರು. ಅನಂತಕುಮಾರಿರವರು ಸ್ವಾಗತಿಸಿ, ಶ್ವೇತಾ ನವೀನ್ ವಂದಿಸಿದರು. ಧೀರಜ್ ಜೈನ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಅತಿಥ್ಯವನ್ನು ಪದ್ಮರಾಜ್ ಹಾಗೂ ಅನಂತ ಕುಮಾರಿರವರು ವಹಿಸಿಕೊಂಡಿದ್ದರು.

ಫೆ. 22ರಿಂದ ಮಾ. 1: ವೇಣೂರು ಭ| ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ

Article Image

ಫೆ. 22ರಿಂದ ಮಾ. 1: ವೇಣೂರು ಭ| ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ

ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವವು ಪರಮಪೂಜ್ಯ ಯುಗಳ ಮುನಿವರ್ಯರಾದ ೧೦೮ ಅಮೋಘಕೀರ್ತಿ ಮುನಿ ಮಹಾರಾಜರು ಹಾಗೂ ೧೦೮ ಅಮರಕೀರ್ತಿ ಮುನಿ ಮಹಾರಾಜರ ಪಾವನ ಸಾನಿಧ್ಯ-ಶುಭಾಶೀರ್ವಾದಗಳೊಂದಿಗೆ, ಮೂಡುಬಿದಿರೆ ಶ್ರೀ ದಿಗಂಬರ ಜೈನ ಮಠದ ಡಾ| ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ʼರಾಜರ್ಷಿʼ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ, ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರ ಕಾರ್ಯಾಧ್ಯಕ್ಷತೆಯಲ್ಲಿ ಫೆ. 22ರಿಂದ ಮಾ. 1ರ ತನಕ ಜರಗಲಿದೆ.

ಧರ್ಮದ ಕಾಲಂನಲ್ಲಿ ಜೈನ ಎಂದು ಸೇರಿಸಿ

Article Image

ಧರ್ಮದ ಕಾಲಂನಲ್ಲಿ ಜೈನ ಎಂದು ಸೇರಿಸಿ

ಪಾವಗಡ: ಜೈನ ಧರ್ಮ ವಿಶ್ವಧರ್ಮವಾಗಿದೆ. ವಿಶ್ವದ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಜೈನಪೀಠಗಳಿವೆ. ಇದೊಂದು ಶ್ರೇಷ್ಠ ಅಹಿಂಸಾ ಧರ್ಮವಾಗಿದೆ. ಹಿಂದಿನ ಜನಸಂಖ್ಯೆಗಿಂತ ಈಗ ಜೈನ ಧರ್ಮೀಯರ ಜನಸಂಖ್ಯೆ ಕ್ಷೀಣಿಸುತ್ತಿದೆ. ಧರ್ಮದ ಕಾಲಂನಲ್ಲಿ ಜೈನ ಎಂದು ಬರೆಯುವಂತೆ ಜೈನ ಸಮಾಜದ ಹಿರಿಯ ಮುಖಂಡ ಬ್ರಹ್ಮದೇವಯ್ಯ ಮನವಿ ಮಾಡಿದರು. ತಾಲ್ಲೂಕಿನ ನಿಡಗಲ್ ಬೆಟ್ಟದಲ್ಲಿ ಶ್ರೀಕೃಷ್ಣಹರಣ ಪಾರ್ಶ್ವನಾಥ ತೀರ್ಥಂಕರರ ಜನುಮ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ವಾರ್ಷಿಕ ಪೂಜಾ ಮಹೋತ್ಸವದಲ್ಲಿ ಅವರು ಮಾತನಾಡಿದರು. ಶಳ್ಳಕ್ಕಿರೆ ದಿಗಂಬರ ಜೈನ ಸಮಾಜದ ಅಧ್ಯಕ್ಷ, ಉದ್ಯಮಿ ಹಂಬಣ್ಣನವರು ಕಾರ್ಯಕ್ರಮ ಉದ್ಘಾಟಿಸಿದರು. ನಿಡಗಲ್ ಕಷ್ಟ ಹರಣ ಪಾರ್ಶ್ವನಾಥ ಜನುಮ ದಿನದ ಸಮಿತಿ ಅಧ್ಯಕ್ಷ ಪಿ.ಸುಂದರ ರಾಜಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಮಿತಿಯ ಕಾರ್ಯದರ್ಶಿ ಆರ್. ಬಿ. ಜಯಣ್ಣ, ಗೌರಿಪುರ ಪಾರ್ಶ್ವನಾಥ್ ಕುಜ ನಾಗಭೂಷಣ್, ಟ್ರಸ್ಟಿ ಆರ್. ಎಸ್ ಕುಬೇರಪ್ಪ, ಭರತ್, ರಾಜು, ಪ್ರದೀಪ್, ಜೈನ್, ಶೈನ್ ಜೈನ್, ತುಮಕೂರು ಜೈನ ಸಮಾಜದ ನಿರ್ದೇಶಕರಾದ ಬ್ರಹ್ಮ ಪ್ರಕಾಶ್, ಮಂಡಿ ನಾಗರಾಜ್, ಸುನಿಲ್ ಅಮರಾಪುರ ಸೇರಿದಂತೆ ಜೈನ ಮಹಿಳಾ ಮಂಡಳಿಗಳು ಭಾಗವಹಿಸಿದ್ದವು. ನಂತರ ದ್ರವ್ಯ ಅಭಿಷೇಕ ಹರಾಜುಗಳ ಪ್ರಕ್ರಿಯೆ ನಡೆಯಿತು.

First Previous

Showing 5 of 5 pages

Next Last