ಅಬ್ಯಾಕಸ್ ಸ್ಪರ್ಧೆಯಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಷಡ್ಜ


Logo

Published Date: 13-Feb-2025 Link-Copied

ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಬಾಲ್ಯದಲ್ಲಿಯೇ ಅತ್ಯಂತ ಅದ್ಬುತ ಪ್ರತಿಭಾವಂತ ಪುಟ್ಟ ಬಾಲಕ ಷಡ್ಜ ಹುಬ್ಬಳ್ಳಿಯಲ್ಲಿ ಎಜು ಸ್ಮಾರ್ಟ್ ಕೇರ್ "ಅಬ್ಯಾಕಸ್" ( ಅಂಕಗಣಿತದ ಕೌಶಲ್ಯ) ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದುಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಬೆಂಗಳೂರಿನಲ್ಲಿಯೂ ಪ್ರಥಮ ಬಹುಮಾನ ತನ್ನದಾಗಿರಿಸಿಕೊಂಡಿದ್ದಾನೆ. ಇದೀಗ ಮುಂಬೈಯಲ್ಲಿ ಕಳೆದ ವಾರ ನಡೆದ 17ನೇ ರಾಷ್ಟ್ರೀಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದುಕೊಂಡು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ, ಅಬ್ಯಾಕಸ್ ಮತ್ತು ಗ್ರೇಡಿಂಗ್ ಪರೀಕ್ಷೆಯಲ್ಲಿ "ಅಚೀವರ್ " ಪ್ರಶಸ್ತಿ ಪಡೆದ ಈ ಬಾಲಕ ಹುಬ್ಬಳ್ಳಿಯ ಕೇಂದ್ರೀಯ ವಿದ್ಯಾಲಯದಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾನೆ. ಇವನು ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಟ್ರಸ್ಟ್ ನ ಸದಸ್ಯರು ಧರ್ಮನುರಾಗಿಗಳೂ ಆದ ಶಿಲ್ಪಾ ವಿಜಯಕುಮಾರ ಕಾಶಿನ ಅವರ ಮೊಮ್ಮಗ, ಉಪನ್ಯಾಸಕಿ ಭಾಗ್ಯಶ್ರೀ ಮತ್ತು ಭಾರತೀಯ ಅಂಚೆ ಇಲಾಖೆಯ ಉದ್ಯೋಗಿ ಜೀವಂಧರ ಕಾಶಿನರವರ ಪುತ್ರ, ಪ್ರಭಾ ನಾಯಕ್ ಇವರು ಷಡ್ಜನಿಗೆ ಮಾರ್ಗದರ್ಶಕರಾಗಿ ಪ್ರೇರಣೆ ಪ್ರೋತ್ಸಾಹ ನೀಡಿದ್ದಾರೆ. ಶಾಂತರಾಜ ಮಲ್ಲಸಮುದ್ರ

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img