ಕೈಬೀಸಿ ಕರೆಯುತ್ತಿದೆ ವೈಭವೋಪೇತ ವಿಟ್ಲದ ಬಸದಿ


Logo

Published Date: 12-Feb-2025 Link-Copied

ತುಳುನಾಡಿನ ಜೈನರಿಗೆ ಈಗ ಧಾರ್ಮಿಕವಾಗಿ ಸುವರ್ಣಯುಗ. ಹಲವಾರು ಬಸದಿಗಳು ಅಳಿವಿನಂಚಿನಲ್ಲಿದ್ದರೂ ಕಲ್ಲರಳಿ ಹೂವಾಗಿ ಧರ್ಮೀಯರ ಧರ್ಮದ ಪ್ರಭಾವನೆಯನ್ನು ಬಿತ್ತಿ, ಅಂಕುರವನ್ನಾಗಿಸಿ, ಸಸಿಯಾಗಿ, ಹೆಮ್ಮರವಾಗಲು ನಿಮಿತ್ತವಾಗಿದೆ. ಭವ್ಯಾತಿಭವ್ಯ ಬಸದಿಗಳು ಜೀರ್ಣೋದ್ಧಾರಗೊಂಡು ಜಿನಧರ್ಮದ ಸಾರತತ್ವವಾದ ಬದುಕು ಬದುಕಲು ಬಿಡು, ಅಹಿಂಸಾ ಪರಮೋ ಧರ್ಮಃ ಎಂದು ಸಾರಿ ಸಾರಿ ಮಾರ್ದನಿಸುತ್ತಿದೆ. ಇದೀಗ ಬಂಟ್ವಾಳದ ತಾಲ್ಲೂಕಿನ ವಿಟ್ಲದ ಚಂದ್ರನಾಥ ಸ್ವಾಮಿ ಬಸದಿಗೆ ಎಂಟು ಶತಮಾನಗಳ ಭವ್ಯ ಇತಿಹಾಸವಿದೆ. ಧರ್ಮಸ್ಥಳದ ಅಂದಿನ ಸ್ವರ್ಗೀಯ ಧರ್ಮಾಧಿಕಾರಿಗಳಾದ ಮಂಜಯ್ಯ ಹೆಗ್ಗಡೆಯವರು ಹಾಗೂ ಪುಟ್ಟಸ್ವಾಮಿ ಸಹೋದರರು ಜೊತೆಸೇರಿ ಜೀರ್ಣೋದ್ಧಾರವಾಗಿದ್ದ ಬಸದಿ ಇಂದು ಪುನಃ ಶಿಥಿಲಾವಸ್ಥೆಗೆ ತಲುಪಿದಾಗ ಪುಟ್ಟಸ್ವಾಮಿಯವರ ಪುತ್ರ ವಿನಯ ಕುಮಾರ್ ಅವರು ಮುಂದಡಿ ಇಟ್ಟಾಗ ಎಡಬಲಗಳಲ್ಲಿ ಜೋಡೆತ್ತಿನಂತೆ ಭುಜಕ್ಕೆ ಭುಜ ಕೊಟ್ಟು, ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟವರು ವಿನಯಕುಮಾರ್ ಅವರ ಸುಪುತ್ರ ಎಂ. ಜಿತೇಶ್ ಜೈನ್ ಹಾಗೂ ಇವರ ಆಪ್ತ ಸ್ನೇಹಿತ ದರ್ಶನ್ ಜೈನ್ ಅವರುಗಳು. ಧರೆಗೆ ಅತಿಶಯವೆನಿಪ ಭವ್ಯ ಜಿನಮಂದಿರದ ನಿರ್ಮಾಣಕ್ಕೆ ಕಾರಣೀಭೂತರಾಗಿ ಭವ್ಯ ಧಾರ್ಮಿಕ ಪರಂಪರೆಗೆ ನಾಂದಿ ಹಾಡಿ ಅಸಂಖ್ಯಾತ ಯುವಪಡೆಗೆ ಮಾದರಿಯಾದರು. ಸ್ವರ್ಗ ಲೋಕದ ಅಕೃತ್ರಿಮ ಚೈತ್ಯಾಲಯದಂತೆ ವಿಟ್ಲ ಬಸದಿ ಈಗ ಕಂಗೊಳಿಸುತ್ತಿದೆ. ಅಸದಳವಾದ ಶಿಲ್ಪ ಕೆತ್ತನೆಗಳು, ಕಾಷ್ಠದ ಕೆತ್ತನೆಗಳು , ಕನ್ನಡಿಯಂತೆ ಜಗಮಗಿಸುವ ನೆಲ, ನವಿಲಿನಿಂತೆ ಶೋಭಸುವ ತಾಮ್ರ ಕವಚವನ್ನು ಹೊಂದಿದ ಮಾಡು ( ಸೂರು ) , ಇದು ಸಾಕ್ಷಾತ್ ಮಯೂರವೊಂದು ತನ್ನ ರೆಕ್ಕೆಯನ್ನು ಹರಡಿ ಜಿನಭಕ್ತಿಯಲ್ಲಿ ಲೀನವಾದಂತೆ ತೋರುತ್ತಿದೆ. ಹಸಿರ ಹೊದಿಕೆಯನ್ನು ಹೊಂದಿದ ಬಸದಿಯ ಸೂರು ಜಿನಧರ್ಮದ ಪ್ರಗತಿಯನ್ನು ಸೂಚಿಸುತ್ತಿದೆ. ತಿಳಿ ಮೆಂತ್ಯ ಬಣ್ಣದ ಗೋಡೆಗಳು, ಅದರಲ್ಲಿ ಸುಂದರವಾದ ಕೆತ್ತನೆಗಳು, ಪ್ರವೇಶದ್ವಾರದಲ್ಲೇ ಮೇಲ್ಗಡೆ ಹುಲಿ ದನ ಒಂದೇ ಹೊಂಡದಿಂದ ನೀರು ಕುಡಿಯವ ಅದ್ಭುತ ಮೈತ್ರಿಯ ಸಂದೇಶ ಸಾರುವ ಚಿತ್ರ ಪಟ್ಟಿಕೆಗಳು ಕಾಷ್ಠದಲ್ಲಿ ಅರಳಿ ಸೊಬಗ ಬೀರಿದೆ. ಮುಂದಕ್ಕೆ ಅಡಿ ಇಟ್ಟಂತೆ ಎದುರಲ್ಲಿ ಮರದ ಕೆತ್ತನೆಯ ಅರಹಂತ ದೇವನ ಪ್ರತಿಮೆ ಗೋಚರವಾಗಿ ಇಗೋ ನಿನ್ನ ಮನದ ಕಷಾಯವನ್ನು ತೊರೆದು ಭಗವಂತನ ದರ್ಶನ ಮಾಡು ಎಂಬಂತೆ ಸಾರುತ್ತಿದೆ. ಮುಂದಕ್ಕೆ ಅಡಿ ಇಟ್ಟಂತೆ ಭಗವಾನ್ ಚಂದ್ರನಾಥ ಸ್ವಾಮಿ, ಭಗವಾನ್ ಮಹಾವೀರ ಸ್ವಾಮಿಯ ದರ್ಶನವಾಗುತ್ತದೆ. ಇಡೀ ಬಸದಿಯೇ ಸಮವಸರಣದ ರೂಪ ಪಡೆದು ಜಿನಭಗವಂತನು ಸಮವಸರಣದಲ್ಲಿ ದಿವ್ಯಧ್ವನಿ ನೀಡುತ್ತಿರುವಂತೆ ಭಾಸವಾಗಿ ನಮ್ಮ ಕಿವಿಗಳೆರಡು ಆ ದಿವ್ಯಧ್ವನಿಯನ್ನು ಆಘ್ರಾಣಿಸಲು ಹೊತೊರೆಯುವಂತೆ ಭಾಸವಾಗುತ್ತದೆ. ನೋಡಲು ಬನ್ನಿರಿ ಚಂದ್ರೇಶನ ಓ ವಿಟ್ಲದಲಿ ನಿಂತಿಹ ದೇವನ ಸುಮತಿಯ ಬೋಧಿಪ ಮಹಾವೀರನ ಸುಮತಿಯ ಬೋಧಿಪ ಮಹಾವೀರನ ಹಾಗಾದರೆ ತಡವೇಕೆ ಬಂಧುಗಳೇ, ವಿಟ್ಲದತ್ತ ಧಾವಿಸೋಣ. ದಿನಾಂಕ 13.02.2025 ರಿಂದ 17.02.2025 ರವರೆಗಿನ ಪಂಚಕಲ್ಯಾಣವೆಂಬ ಜಲದಲ್ಲಿ ಮಿಂದೇಳೋಣ. ಧನ್ಯರಾಗೋಣ. ನಿರಂಜನ್ ಜೈನ್ ಕುದ್ಯಾಡಿ

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img