ರತ್ನತ್ರಯ ಜೈನ ಮಿಲನ್ ಮಾಸಿಕ ಸಭೆ


Logo

Published Date: 09-Sep-2024 Link-Copied

ಬೆಂಗಳೂರು: ರತ್ನತ್ರಯ ಜೈನ ಮಿಲನ್ ಮಾಸಿಕ ಸಭೆಯು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲ್ಯಾಣ ಮಂಟಪ, ಬೆಂಗಳೂರಿನಲ್ಲಿ ಇತ್ತೀಚೆಗೆ ಜರುಗಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎ.ವಿ. ಪದ್ಮನಿಯವರು "ಲೇಶ್ಯಗಳ" ಬಗ್ಗೆ ಉಪನ್ಯಾಸ ನೀಡಿದರು. ಶೋಭಿತ ನವೀನ್ ಅವರು ಪರ್ವವಾಚನ ಮಾಡಿದರು. ಸುಗುಣರವರು ರತ್ನತ್ರಯ ಮಿಲನದ ಉದ್ದೇಶಗಳನ್ನು ತಿಳಿಸಿದರು. ಪದ್ಮಾ ಸೂರಿಯವರು. ವಿವಾಹ ವಾರ್ಷಿಕ ಹಾಗೂ ಹುಟ್ಟುಹಬ್ಬ ಆಚರಿಸಿಕೊಂಡ ರತ್ನತ್ರಯ ಮಿಲನ ಸದಸ್ಯರಿಗೆ ಶುಭ ಕೋರಿದರು. ಶೋಭಾ ಪಾಟೀಲ್, ತ್ರಿಕಾಲ ತೀರ್ಥಂಕರರ ಹೆಸರುಗಳನ್ನು ವಾಚಿಸಿದರು. ಮಹಾವೀರ ಕುಮಾರವರು ರತ್ನತ್ರಯ ಮಿಲನಿನ ನಡಾವಳಿಯನ್ನು ವಾಚಿಸಿದರು. ರಾಣಿ ಪ್ರಫುಲ್ಲ ಅವರು ಅತಿಥಿಗಳನ್ನು ಪರಿಚಯ ಮಾಡಿದರು. ಅನಂತಕುಮಾರಿಯವರು, ಅಗಲಿದ ಕಮಲಾ ಹಂಪನಾ ಅವರ ಕುರಿತಾದ ಸ್ವರಚಿತ ಕವನ ವಾಚನ ಮಾಡುವುದರ ಮುಖೇನ ಶ್ರದ್ಧಾಂಜಲಿ ಅರ್ಪಿಸಿದರು. ನವೀನ್ ಕುಮಾರ್ ಗುಬ್ಬಿಯವರು ಅಧ್ಯಕ್ಷರ ನುಡಿಗಳನ್ನಾಡಿದರು. ಚಂದನ ಸುರೇಂದ್ರ ಅವರು ಕಾರ್ಯಕ್ರಮದ ಆತಿಥ್ಯವನ್ನು ವಹಿಸಿಕೊಂಡಿದ್ದರು. ಚಂದನಾದೇವಿ ಅವರು ಪಾರ್ಥಿಸಿ, ಶಿಲ್ಪಾ ಸುರೇಂದ್ರ ಅವರು ಸ್ವಾಗತಿಸಿದರು, ಉಷಾ ಮಹಾವೀರ್ ಅವರು ವಂದಿಸಿದರು. ಅನಂತಕುಮಾರಿ ಅವರು ಕಾರ್ಯಕ್ರಮ ನಿರೂಪಿಸಿದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img