ಮುನಿಶ್ರೀ ಪುಣ್ಯಸಾಗರ ಮಹಾರಾಜರ ಆಶೀರ್ವಾದ ಪಡೆದ ಧರ್ಮಸ್ಥಳದ ಹೆಗ್ಗಡೆ ಸಹೋದರರು


Logo

Published Date: 15-Aug-2024 Link-Copied

ಹುಬ್ಬಳ್ಳಿ ದಿಗಂಬರ ಜೈನ ಬೋರ್ಡಿಂಗಿನಲ್ಲಿ ಚಾತುರ್ಮಾಸ ನಿರತ ಮುನಿಶ್ರೀ ಪುಣ್ಯಸಾಗರ ಮಹಾರಾಜರ ದರ್ಶನಕ್ಕಾಗಿ ಧರ್ಮಸ್ಥಳ ಧರ್ಮಾಧಿಕಾರಿ ರಾಜರ್ಷಿ ಡಾ ವೀರೇಂದ್ರ ಹೆಗ್ಗಡೆ ಮತ್ತು ಶ್ರೀ ಸುರೇಂದ್ರ ಹೆಗಡೆಯವರು ಇಂದು ನಗರಕ್ಕೆ ಆಗಮಿಸಿ ಪೂಜ್ಯರಿಂದ ಆಶೀರ್ವಾದ ಪಡೆದರು. ಈ ಸಂಧರ್ಭದಲ್ಲಿ ಧಾರ್ಮಿಕ ಚರ್ಚೆಗಳನ್ನೂ ಮಾಡಿದ ಹೆಗ್ಗಡೆ ಸಹೋದರರು ಇಲ್ಲಿ ನಡೆದಿರುವ ವರ್ಷಾಯೋಗ ಧಾರ್ಮಿಕ ಪ್ರಭಾವನೆಗೆ ಪ್ರೇರಕವಾಗಿದೆ ಎಂದು ತಿಳಿಸಿ ಅತ್ಯಂತ ಹರ್ಷ ವ್ಯಕ್ತಪಡಿಸಿದರು. ಪೂಜ್ಯ ಶ್ರೀ ಹೆಗ್ಗಡೆ ಸಹೋದರರನ್ನು ದಿಗಂಬರ ಜೈನ ಬೋರ್ಡಿಂಗ ಆಡಳಿತಮಂಡಳಿ ಸದಸ್ಯರು ಸನ್ಮಾನಿಸಿ ಗೌರವಿಸಿದರು, ಈ ಸಂದರ್ಭದಲ್ಲಿ ದಿಗಂಬರ ಜೈನ ಬೋರ್ಡಿಂಗ ಅಧ್ಯಕ್ಷ ವಿದ್ಯಾಧರ್ ಪಾಟೀಲ, ಆರ್ ಟಿ ತವನಪ್ಪನವರ, ದೇವೇಂದ್ರಪ್ಪ ಕಾಗೇನವರ, ಜಿ ಜಿ ಲೋಗೋಳ, ವಿಮಲಚಂದ ಸಂಗಮಿ, ಪ್ರಶಾಂತ್ ಬಿಶೆಟ್ಟಿ, ಮಹಾವೀರ ಮಣಕಟ್ಟಿ, ಸಂತೋಷಕುಮಾರ ಮುರಗಿ ಪಾಟಿಲ, ಭರತ ಬೀಳಗಿ, ಮಹಿಳಾ ಅಧ್ಯಕ್ಷರಾದ ಸ್ಮಿತಾ ವಾಕಳೆ, ಎ ಎಸ್ ಪಾಟೀಲ, ಮನ್ಮತ ಕ್ಯಾಸಾ, ತ್ರಿಶಲಾ ಮಾಲಗತ್ತಿ ಮತ್ತು ಎಸ್ ಡಿ ಎಂನ ಕಾರ್ಯದರ್ಶಿ ಜೀವoದರಕುಮಾರ ಹಾಗೂ ಹಲವಾರು ಶ್ರಾವಕ ಶ್ರಾವಕಿಯರು ಉಪಸ್ಥಿತರಿದ್ದರು. ವರದಿ: ಎಸ್ ಆರ್ ಮಲ್ಲಸಮುದ್ರ

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img