ಧರ್ಮಸ್ಥಳ ಮ್ಯೂಸಿಯಂಗೆ ಕಾರ್ ಕೊಡುಗೆ ನೀಡಿದ ಭಟ್ಟಾರಕ ಶ್ರೀಗಳವರು


Logo

Published Date: 19-May-2024 Link-Copied

ಮೂಡುಬಿದಿರೆ: ಇಲ್ಲಿನ ಶ್ರೀ ಜೈನಮಠದ ಪ. ಪೂ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು 2003ರಲ್ಲಿ ಖರೀದಿಸಿದ ಟೊಯೋಟಾ ಕ್ವಾಲಿಸ್ ವಾಹನವನ್ನು ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಕಾರ್ ಮ್ಯೂಸಿಯಂಗೆ ವಾಹನ ವರ್ಗಾವಣೆ ಸಹಿ ಮಾಡಿ ವರ್ಗಾಯಿಸಿದರು. ೧೦೮ ಶಾಂತಿ ಸಾಗರ ಆಚಾರ್ಯ ಪದರೋಹಣ ಶತಾಬ್ಧಿ ಮಹೋತ್ಸವ ಶ್ರೀಮಠದ ವತಿಯಿಂದ ವೇಣೂರು ಮಹಾಮಸ್ತಕಾಭಿಷೇಕ ಸಂದರ್ಭ ನೆರವೇರಿಸಿದ ನೆನಪಿನಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ ದಂಪತಿಯನ್ನು ಸ್ವಾಮೀಜಿಗಳವರು ಗೌರವಿಸಿ, ಅಭಿನಂದನಾ ಪತ್ರ, ಶ್ರೀಫಲ ನೀಡಿ ಹರಸಿದರು. ಹೆಗ್ಗಡೆಯವರು ವಾಹನ ವಸ್ತು ಸಂಗ್ರಹಾಲಯಕ್ಕೆ ಮೋಟಾರ್ ಕಾರ್ ಕೊಡುಗೆ ನೀಡಿದ ಸ್ವಾಮೀಜಿಗಳವರಿಗೆ ಅಭಿನಂದನಾ ಪತ್ರ ನೀಡಿದರು. ಶೈಲೇಂದ್ರ ಜೈನ್, ಎಂ. ಬಾಹುಬಲಿ ಪ್ರಸಾದ್, ಪ್ರವೀಣ್ ಇಂದ್ರ ವೇಣೂರು, ನಾಗವರ್ಮ ಆದಿತ್ಯ ಜೈನ್ ಉಪಸ್ಥಿತರಿದ್ದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img