ಎಂ. ಎಂ. ಜಿನೇಂದ್ರರವರ ಜೀವನ ಯಶೋಗಾಥೆ ಕೃತಿ ಶ್ರೀಘ್ರದಲ್ಲಿ ಲೋಕಾರ್ಪಣೆ


Logo

Published Date: 21-Mar-2024 Link-Copied

ಇತ್ತೀಚೆಗೆ ರಚಿತಗೊಂಡಿರುವ ಖ್ಯಾತ ಛಾಯಾಗ್ರಾಹಕ ಚಿತ್ತ ಜಿನೇಂದ್ರರವರ ಜೀವನ ಯಶೋಗಾಥೆಯಾದ "ಸವ್ಯಸಾಚಿ ಕಲಾವಿದ ಜಿನೇಂದ್ರ" ಎಂಬ ಕೃತಿ ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ತುಮಕೂರಿನ ಹಿರಿಯ ಸಾಹಿತಿ ಡಾ. ಎಸ್. ಪಿ. ಪದ್ಮಪ್ರಸಾದ್ ಜೈನ್ ರವರಿಂದ ರಚಿತವಾದ ಈ ಕೃತಿಗೆ ಹಿರಿಯ ಸಾಹಿತಿ, ನಾಡೋಜ ಹಂಪ ನಾಗರಾಜಯ್ಯ (ಹಂಪನಾ) ಮುನ್ನುಡಿ ಬರೆದಿದ್ದು, ಈ ಕೃತಿಯನ್ನು ಬೆಂಗಳೂರಿನ ಕರ್ನಾಟಕ ಪುರಾತತ್ವ ಮತ್ತು ಸಾಹಿತ್ಯ ಪರಿಷತ್ ಹೊರತುರುತ್ತಿದ್ದು ವಿಶಿಷ್ಟ ಕಲ್ಪನೆಯಲ್ಲಿ ಮೂಡಿಬರುತ್ತದೆ. ಕೃತಿಯಲ್ಲಿ ಎಂ.ಎಂ. ಜಿನೇಂದ್ರ ಅವರ ಜೀವನ, ಸವೆಸಿದ ಹಾದಿ, ಬೆಳೆದ ನೋಟ, ಅವರು ರಚಿಸಿದ ಕಲಾಕೃತಿಗಳ ಗುಚ್ಛವೇ ಈ ಕೃತಿಯಲ್ಲಿ ಅಡಗಿದೆ. ಸಾಂಪ್ರದಾಯಿಕ ಚಿತ್ರಕಲೆ, ಶಿಲ್ಪಕಲೆ, ಜಲವರ್ಣ, ವರ್ಣ ಚಿತ್ರಗಳು, ರೇಖಾ ಚಿತ್ರಗಳು, ವ್ಯಕ್ತಿ ಚಿತ್ರಗಳು, ಸ್ತಬ್ಧಚಿತ್ರಗಳು, ಸೆರಾಮಿಕ ಕಲಾಕೃತಿಗಳು ಆಧುನಿಕ ತಂತ್ರಜ್ಞಾನದ ರೂಪದಲ್ಲಿ ಮೂಡಿಬಂದಿವೆ. ಇದರಲ್ಲಿ ಕಲಾವಿದ ಎಂ. ಎಂ. ಜಿನೇಂದ್ರ ಅವರ ಕಲಾ ನೈಪುಣ್ಯತೆ, ಚತುರತೆ, ಸೂಕ್ಷ್ಮತೆ, ಗ್ರಹಿಕೆ, ರಚನಾ ಶೈಲಿ, ರೇಖೆಗಳ ಮೋಡ, ಭಾವನಾ ಲಹರಿ, ವಿಸ್ಮಯಕಾರಿ ಆಲೋಚನೆಗಳು, ಬೃಹತ್ ಮೂರ್ತಿಗಳು ಈ ಕೃತಿಯಲ್ಲಿ ಮೂಡಿ ಬಂದಿವೆ, ಅಲ್ಲದೆ ಸಮಾಜಕ್ಕೆ ಅವರ ಕೊಡುಗೆ, ಅವರಿಗೆ ಸಂದ ಗೌರವಗಳು ಅಡಕವಾಗಿವೆ. ಈ ಕೃತಿಯನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಹೊರ ತರಲಾಗಿದೆ.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img