ಮೂಡುಬಿದ್ರೆ: ಗುರುಗಳ ಬಸದಿಯ ಎಂಟನೇಯ ವಾರ್ಷಿಕೋತ್ಸವ


Logo

Published Date: 19-Mar-2024 Link-Copied

ಮೂಡುಬಿದ್ರೆ ಗುರುಗಳ ಬಸದಿ ಭಗವಾನ್ ಶ್ರೀ 1008 ಪಾರ್ಶ್ಶ್ವನಾಥ ಸ್ವಾಮಿ ತೀರ್ಥಂಕರ ಬಸದಿಯ ಎಂಟನೇಯ ವಾರ್ಷಿಕೋತ್ಸವವು ಜಗದ್ಗುರು ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯವರ್ಯ ಮಹಾಸ್ವಾಮೀಜಿಗಳವರ ಮಾರ್ಗದರ್ಶನ, ನೇತೃತ್ವ, ಪಾವನ ಸಾನಿಧ್ಯದಲ್ಲಿ ಮಾ.16 ಜರುಗಿತು. ಕಾರ್ಯಕ್ರಮದ ಅಂಗವಾಗಿ ತೋರಣ ಮಹೂರ್ತ, ನಾಗ ಕ್ಷೇತ್ರಪಾಲ ಪೂಜೆ, ಶ್ರೀ ಸರಸ್ವತಿ ಪೂಜೆ, ಪದ್ಮಾವತಿ ಯಕ್ಷಿ ಷೋಡಶೋಪಚಾರ ಪೂಜೆ, ಬ್ರಹ್ಮ ದೇವರ ಪೂಜೆ, ವಿವಿಧ ಧಾರ್ಮಿಕ ವಿಧಿ-ವಿಧಾನಗಳು ನೆರವೇರಿತು. ಆಶೀರ್ವಚನ ನೀಡಿದ ಪ.ಪೂ ಸ್ವಾಮೀಜಿಗಳವರು ಇಂದಿನಿಂದ ಜೈನರ ಎಂಟು ದಿನಗಳ ಪಾಲ್ಗುಣ ಮಾಸದ ಪರ್ವ ಅಷ್ಟಮ ನಂದಿಶ್ವರ ದ್ವೀಪಗಳ ಐವತ್ತ ಎರಡು ಜಿನಲಾಯಗಳ ಅಕೃತಿಮ ಜಿನ ಮಂದಿರ ಪೂಜೆ ನೆರವೇರಲಿದೆ. ಪ್ರಾರಂಭದ ದಿನ ಗುರು ಬಸದಿ ವಾರ್ಷಿಕೋತ್ಸವದ ನಿಮಿತ್ತ ಜಿನ ಭಗವಂತರ ಕೇವಲ ಜ್ಞಾನದಿಂದ ಪಡೆದ ದಿವ್ಯ ಸಂದೇಶ ತಿಳಿದುಕೊಳ್ಳಲು ಪ್ರಯತ್ನ ಮಾಡುವ ದಿನ ಲೋಕಕಲ್ಯಾಣ ಭಾವನೆಯಿಂದ ಜಿನ ಭಗವಂತ ನೀಡಿದ ಸಂದೇಶ ಅಳವಡಿಸಿ ಜೀವನ ಪಾವನವಾಗುವುದು ಎಂದರು ಹಾಗೂ ಪೂಜಾ ಸೇವಾದಾತರನ್ನು ಹರಸಿ ಆಶೀರ್ವಾದ ಮಾಡಿದರು. ಬಸದಿ ಮೋಕ್ತೆಸರರಾದ ಪಟ್ಣ ಶೆಟ್ಟಿ ಸುದೇಶ್ ಕುಮಾರ್, ದಿನೇಶ್ ಕುಮಾರ್, ಆದರ್ಶ್, ಮಂಜುಳಾ ಅಭಯ ಚಂದ್ರ ಜೈನ್, ವೀಣಾ ರಘುಚಂದ್ರ ಶೆಟ್ಟಿ, ಬಿ.ವಿಮಲ್ ಕುಮಾರ್, ವೀರೇಂದ್ರ ಕುಮಾರ್, ವೀರೇಂದ್ರ ಇಂದ್ರ, ಶ್ರೀನಾಥ್ ಬಲ್ಲಾಳ್, ಎಸ್. ಪಿ. ವಿದ್ಯಾಕುಮಾರ್, ಜ್ಞಾನ ಚಂದ್ರ, ಅಜಿತ್ ಪ್ರಸಾದ್, ನವೀನ್ ಲಂಡನ್ ಉಪಸ್ಥಿತರಿದ್ದರು. ವ್ಯವಸ್ಥಾಪಕ ಸಂಜಯಂತ ಕುಮಾರ್ ವಂದಿಸಿದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img