ಲೋಕ ಕಲ್ಯಾಣಕ್ಕಾಗಿ ಚವ್ವಿಶ ತೀರ್ಥಂಕರರ ಆರಾಧನೆ


Logo

Published Date: 17-Mar-2024 Link-Copied

ಶಿಶಿಲದ ಚಂದ್ರಪುರ ಭಗವಾನ್ ಶ್ರೀ, ಚಂದ್ರನಾಥ ಸ್ವಾಮಿ ಬಸದಿಯ ವಾರ್ಷಿಕೋತ್ಸವ ಸಂದರ್ಭದಲ್ಲಿ ಲೋಕಕಲ್ಯಾಣಕ್ಕಾಗಿ ಚವ್ವಿಶ ತೀರ್ಥಂಕರರ ಆರಾಧನೆ ನಡೆಯಿತು. ಕಾರ್ಕಳ ಜೈನಮಠದ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ, ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಅಮ್ಮನವರ ಮಾರ್ಗದರ್ಶನದೊಂದಿಗೆ ಕಾರ್ಯಕ್ರಮ ನಡೆಯಿತು. ಶಶಿಪ್ರಭ ಉಜಿರೆ, ಚಂಚಲ ಕೃಷ್ಣರಾಜ ಧರ್ಮಸ್ಥಳ, ಶಕುಂತಲಾ ಡಾ. ಜಯಕೀರ್ತಿ ಜೈನ್, ಶೋಭಾ ಸಂತೋಷ್ ಜೈನ್, ಚಂದನ ವೃಷಭ, ವಿಮಲ ವಿಜಯ್ ಕುಮಾರ್, ಶಾಂತಿ ರಾಜೇಂದ್ರ ಕುಮಾರ್ ಮುಡಾರು, ಪ್ರೇಮ ವಸಂತ್ ಕುಮಾರ್ ಉಜಿರೆ, ರೇಷ್ಮಾ ಫಣಿರಾಜ್, ಸುರಭಿ ಶಿರ್ತಾಡಿ ಹಾಗೂ ಆಡಳಿತ ಮಂಡಳಿ ಜಯಕುಮಾರ್ ಮತ್ತಿತರರು ಪೂಜೆ ನೆರವೇರಿಸಿದರು. ಪ್ರಧಾನ ಪುರೋಹಿತರಾಗಿ ಪ್ರತಿಷ್ಠಾಚಾರ್ಯ ಜಯರಾಜ್ ಇಂದ್ರ ಬೆಳ್ತಂಗಡಿ, ಅರಹಂತ ಇಂದ್ರ ಶಿಶಿಲ, ಕೀರ್ತಿ ಇಂದ್ರ ಬೈಲಂಗಡಿ, ಚಿತ್ತರಂಜನ್ ಶಿರ್ತಾಡಿ ಹಾಗೂ ಆಡಳಿತ ಮಂಡಳಿ ಸದಸ್ಯರು ಮತ್ತು ಶಿಶುಗಲಿ ರಾಣಿ ಕಾಳಾಲ ದೇವಿ ಜೈನ ಮಹಿಳಾ ಸಮಾಜದ ಸದಸ್ಯರು ಸಹಕರಿಸಿದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img