ಫೆ.29 : ಮಹಾಮಸ್ತಕಾಭಿಷೇಕದ 8ನೇ ದಿನದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ


Logo

Published Date: 29-Feb-2024 Link-Copied

ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವದ ಇಂದಿನ (9ನೇ ದಿನ) ಸೇವಾಕರ್ತರುಗಳಾದ ಶ್ರೀ ಕ್ಷೇತ್ರ ಧರ್ಮಸ್ಥಳದ ರಾಜರ್ಷಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವೀ. ಹೆಗ್ಗಡೆಯವರು ಹಾಗೂ ಕುಟುಂಬಸ್ಥರು ಮಾಡಿಸುವ ನಿತ್ಯವಿಧಿ ಸಹಿತ, ಆಹಾರ ದಾನ ವಿಧಿ, ಗಂಧ ಯಾಂತ್ರಾರಾಧನಾ ವಿಧಾನ, ಬೆಳಿಗ್ಗೆ 11.28ರಿಂದ 11.40ರ ವೃಷಭ ಲಗ್ನದಲ್ಲಿ ಮಂತ್ರನ್ಯಾಸ ಪೂರ್ವಕ ಶ್ರೀ ಕೇವಲಜ್ಞಾನ ಕಲ್ಯಾಣ, ಮುಖವಸ್ತ್ರ ಉದ್ಘಾಟನೆ ಮಧ್ಯಾಹ್ನ ಗಂಟೆ 3.00ರಿಂದ ಸಮವಸರಣ ಪೂಜೆಯು ಯುಗಳ ಮುನಿಶ್ರೀಗಳಾದ ಪ.ಪೂ. 108 ಶ್ರೀ ಅಮೋಘಕೀರ್ತಿ ಮಹಾರಾಜರು ಹಾಗೂ ಪ.ಪೂ. 108 ಶ್ರೀ ಅಮರಕೀರ್ತಿ ಮಹಾರಾಜರುಗಳ ಪಾವನ ಸಾನ್ನಿಧ್ಯ ಮತ್ತು ಧರ್ಮೋಪದೇಶಗಳೊಂದಿಗೆ ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರು, ಕಾರ್ಕಳ ಜೈನ ಮಠದ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ದಿವ್ಯ ಸಾನ್ನಿಧ್ಯದಲ್ಲಿ ನಡೆದು ಬಳಿಕ ಅಗ್ರೋದಕ ಮೆರವಣಿಗೆ. ಸಂಜೆ ಗಂಟೆ 7.00ರಿಂದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ 504 ಕಲಶಗಳಿಂದ ಮಹಾಮಸ್ತಕಾಭಿಷೇಕ, ಮಹಾಪೂಜೆ, ಮಹಾಮಂಗಳಾರತಿ ಜರಗಲಿದೆ. ಭರತೇಶ ಸಮುದಾಯ ಭವನದ ಮುಖ್ಯ ವೇದಿಕೆಯಲ್ಲಿ ರಾತ್ರಿ 7.30 ರಿಂದ ಉಜಿರೆ ಶ್ರೀ ಧ.ಮಂ.ಶಿಕ್ಷಣ ಸಂಸ್ಥೆಗಳು (ರಿ.) ನ ಎಸ್.ಡಿ.ಎಮ್. ಕಲಾ ಕೇಂದ್ರದ ಕಲಾವಿದರಿಂದ ಕಲಾ ವೈಭವ, ರಾತ್ರಿ 9.30ರಿಂದ ಕಾರ್ಕಳದ ಶ್ರೀ ಲಲಿತಕೀರ್ತಿ ಯಕ್ಷಗಾನ ಕಲಾ ಮಂಡಳಿ ಇವರಿಂದ ಯಕ್ಷಗಾನ- ಕಮಠೋಪಸರ್ಗ ವಿಜಯಿ, ವಸ್ತು ಪ್ರದರ್ಶನ ವೇದಿಕೆಯಲ್ಲಿ ರಾತ್ರಿ 7.00ರಿಂದ ಗುಂಡೂರಿ ಸ್ಪೂರ್ತಿ ಭಟ್ ಬಳಗದವರಿಂದ ಭಕ್ತಿಗೀತೆ ಹಾಗೂ ಭಾವಗೀತೆ, ವೇಣೂರು ಶಿವಾಂಜಲಿ ಡ್ಯಾನ್ಸ್ ಇನ್‌ಸ್ಟಿಟ್ಯೂಟ್ ಇವರಿಂದ ನೃತ್ಯ ಪ್ರದರ್ಶನ ನಡೆಯಲಿದೆ

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img