ಅಥಣಿಯಲ್ಲಿ ಭವ್ಯ ಶಾಂತಿ ಕಳಸ ರಥಯಾತ್ರೆಗೆ ನಾಂದಣಿ ಭಟ್ಟಾರಕರಿಂದ ಚಾಲನೆ


Logo

Published Date: 03-Sep-2026 Link-Copied

ಬೆಳಗಾವಿ: ದಿಗಂಬರ ಜೈನ ಪರಂಪರೆಯ ಪುನರುಜ್ಜೀವಕ, 20ನೇ ಶತಮಾನದ ಪ್ರಥಮಾಚಾರ್ಯ ಪ.ಪೂ. ಚಾರಿತ್ರ ಚಕ್ರವರ್ತಿ ಆಚಾರ್ಯ 108 ಶ್ರೀ ಶಾಂತಿಸಾಗರ ಮಹಾರಾಜರ 71ನೇ ಪುಣ್ಯತಿಥಿ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಭವ್ಯ ಶಾಂತಿ ಕಳಸ ರಥಯಾತ್ರೆಗೆ ಅಥಣಿ ನಗರದ ಶ್ರೀ ಶಿವಯೋಗಿ (ಹಲ್ಯಾಳ) ಸರ್ಕಲ್ ನಲ್ಲಿ ನಾಂದಣಿ ಸಂಸ್ಥಾನ ಮಠದ ಪ.ಪೂ. ಜಗದ್ಗುರು ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿಗಳವರು, ವಿಧಿವತ್ತಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿಯವರು, "ಆಚಾರ್ಯ ಶಾಂತಿಸಾಗರರು ಕೇವಲ ಒಬ್ಬ ಮುನಿಯಲ್ಲ, ಒಂದು ಯುಗ. ಅವರು ತೋರಿದ ತ್ಯಾಗ, ಸಂಯಮದ ಹಾದಿಯಲ್ಲೇ ಇಂದಿನ ಸಮಾಜಕ್ಕೆ ಶಾಂತಿ ಇದೆ. ಈ ಶಾಂತಿ ಕಳಸ ರಥವು ಕೇವಲ ರಥವಲ್ಲ, ಅದು ಶಾಂತಿ, ಕರುಣೆ ಮತ್ತು ಅಹಿಂಸೆಯ ಸಂದೇಶವನ್ನು ಮನೆ ಮನೆಗೆ ತಲುಪಿಸುವ ಸಂಕಲ್ಪ. ಅಥಣಿಯ ಶ್ರಾವಕರ ಭಕ್ತಿ ಅತ್ಯಂತ ಶ್ಲಾಘನೀಯ" ಎಂದು ನುಡಿದರು. ಶಾಂತಿ ಕಲಶದ ಸವಾಲವನ್ನು ಜಿನನಗೌಡ ಪಾಟೀಲ್, ಮತ್ತು ಭಾರಮೂ ಪಾಟೀಲ ದಮಾತಿಗಳು ಪಡೆದಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಇಂಜಿನೀಯರ್ ಅರುಣ ಯಲಗುದ್ರಿ, ಸಾತಗೌಡ ಅಥಣಿ, ನಾಗರಾಜ್ ಘೋಂಗಡಿ, ಪ್ರಫುಲ್ ಪಡನಾಡ, ರಾಜು ಕರ್ಪೂರಶೆಟ್ಟಿ, ಅಶೋಕ ಪಡನಾಡ, ಪ್ರಶಾಂತ ಇಜಾರೆ, ಮಹಾವೀರ ಜಕನೂರ, ಸಂತೋಷ ಬೊಮ್ಮಣ್ಣವರ, ನಿತಿನ ಘೊಂಗಡಿ, ಚಕ್ರವರ್ತಿ ಕಿನಿಂಗೆ ಸೇರಿದಂತೆ ಶ್ರಾವಕ-ಶ್ರಾವಕಿಯರು ಭಾಗವಹಿಸಿದ್ದರು. ಆಚಾರ್ಯ ಶ್ರೀ ಶಾಂತಿಸಾಗರ ಮಹಾರಾಜರ ಕುರಿತು: ಆಚಾರ್ಯ ಶ್ರೀ ಶಾಂತಿಸಾಗರ ಮಹಾರಾಜರು 1872ರಲ್ಲಿ ಬೆಳಗಾವಿ ಜಿಲ್ಲೆಯ ಭೋಜ ಗ್ರಾಮದಲ್ಲಿ ಜನಿಸಿದರು. ಸುಮಾರು 700 ವರ್ಷಗಳ ಕಾಲ ನಿಂತು ಹೋಗಿದ್ದ ದಿಗಂಬರ ಮುನಿ ಪರಂಪರೆಯನ್ನು 20ನೇ ಶತಮಾನದಲ್ಲಿ ಪುನಃ ಆರಂಭಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಹಿಂಸೆ, ಅಪರಿಗ್ರಹ ಮತ್ತು ಅನೇಕಾಂತವಾದದ ತತ್ವಗಳನ್ನು ತಮ್ಮ ಕಟ್ಟುನಿಟ್ಟಿನ ತಪಸ್ಸಿನ ಮೂಲಕ ಜಗತ್ತಿಗೆ ಸಾರಿದ ಇವರು, 18-09-1955 ರಂದು ಮಹಾರಾಷ್ಟ್ರದ ಕುಂಥಲಗಿರಿಯಲ್ಲಿ ಸಲ್ಲೇಖನ ವ್ರತದ ಮೂಲಕ ಸಮಾಧಿ ಹೊಂದಿದರು. ಇವರ ಪುಣ್ಯತಿಥಿ ಮಹೋತ್ಸವವು ದಿ.13-09-2026 ರಂದು ನಾಂದಣಿಯಲ್ಲಿ ನಡೆಯಲಿದೆ.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img