ಕಾರ್ಕಳ: ದಶಲಕ್ಷಣ ಪರ್ವ


Logo

Published Date: 02-Sep-2026 Link-Copied

ಶ್ರೀ ಬಾಹುಬಲಿ ಶ್ರಾವಿಕಾಶ್ರಮದಲ್ಲಿ ದಶಲಕ್ಷಣ ಪರ್ವವು ಶ್ರೀ ಜೈನಮಠದ ರಾಜಗುರು “ಧ್ಯಾನಯೋಗಿ” ಪರಮ ಪೂಜ್ಯ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಸಾನ್ನಿಧ್ಯದಲ್ಲಿ ದಿನಾಂಕ 16-9-2026 ರಿಂದ 26-9-2026ರವರೆಗೆ ಜರಗಲಿರುವುದು ಹಾಗೂ ಧಾರ್ಮಿಕ ಪಾಠ ಸ್ಪರ್ಧಾ ವಿಜೇತರಿಗೆ ಪ್ರಮಾಣ ಪತ್ರ ನೀಡಿ ಆಶೀರ್ವಚನ ನೀಡಲಿರುವರು. ಭರತ್ ರಾಜ್ ಜೈನ್ ಮೂಡಾರು ಧಾರ್ಮಿಕ ಚಿಂತಕರು ಇವರು ದಿನಾಂಕ 26-09-2026ನೇ ಶನಿವಾರ ಅಪರಾಹ್ನ ಗಂಟೆ-3.00ಕ್ಕೆ ಪರಮಪೂಜ್ಯ ಜರದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಶ್ರೀ ಜೈನ ಮಠ, ಶ್ರವಣಬೆಳಗೊಳ “ದತ್ತಿನಿಧಿ ಪ್ರಶಸ್ತಿ” ಪ್ರದಾನ ಮಾಡಿ, ಉಪನ್ಯಾಸ ನೀಡಲಿರುವರು. ಪ್ರತಿದಿವಸ ಸಾಯಂಕಾಲ ಗಂಟೆ 6-30ರಿಂದ ಪೂಜೆ, ಭಜನೆ, ಗಣ್ಯರಿಂದ ಪ್ರವಚನ ಇತ್ಯಾದಿ ಕಾರ್ಯಕ್ರಮಗಳು ಜರಗಲಿರುವುದು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img