ಕಾರ್ಕಳ: ದಶಲಕ್ಷಣ ಪರ್ವ
Published Date: 02-Sep-2026 Link-Copied
ಶ್ರೀ ಬಾಹುಬಲಿ ಶ್ರಾವಿಕಾಶ್ರಮದಲ್ಲಿ ದಶಲಕ್ಷಣ ಪರ್ವವು ಶ್ರೀ ಜೈನಮಠದ ರಾಜಗುರು “ಧ್ಯಾನಯೋಗಿ” ಪರಮ ಪೂಜ್ಯ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಸಾನ್ನಿಧ್ಯದಲ್ಲಿ ದಿನಾಂಕ 16-9-2026 ರಿಂದ 26-9-2026ರವರೆಗೆ ಜರಗಲಿರುವುದು ಹಾಗೂ ಧಾರ್ಮಿಕ ಪಾಠ ಸ್ಪರ್ಧಾ ವಿಜೇತರಿಗೆ ಪ್ರಮಾಣ ಪತ್ರ ನೀಡಿ ಆಶೀರ್ವಚನ ನೀಡಲಿರುವರು. ಭರತ್ ರಾಜ್ ಜೈನ್ ಮೂಡಾರು ಧಾರ್ಮಿಕ ಚಿಂತಕರು ಇವರು ದಿನಾಂಕ 26-09-2026ನೇ ಶನಿವಾರ ಅಪರಾಹ್ನ ಗಂಟೆ-3.00ಕ್ಕೆ ಪರಮಪೂಜ್ಯ ಜರದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಶ್ರೀ ಜೈನ ಮಠ, ಶ್ರವಣಬೆಳಗೊಳ “ದತ್ತಿನಿಧಿ ಪ್ರಶಸ್ತಿ” ಪ್ರದಾನ ಮಾಡಿ, ಉಪನ್ಯಾಸ ನೀಡಲಿರುವರು. ಪ್ರತಿದಿವಸ ಸಾಯಂಕಾಲ ಗಂಟೆ 6-30ರಿಂದ ಪೂಜೆ, ಭಜನೆ, ಗಣ್ಯರಿಂದ ಪ್ರವಚನ ಇತ್ಯಾದಿ ಕಾರ್ಯಕ್ರಮಗಳು ಜರಗಲಿರುವುದು.