ಪ್ರತಿಷ್ಠಿತ ಜಿನಸಮ್ಮಿಲನ ಕಾರ್ಯಕ್ರಮ


Logo

Published Date: 27-Aug-2026 Link-Copied

ಸುಹಾಸ್ತಿ ಯುವ ಜೈನ್ ಮಿಲನ್, ಬೆಂಗಳೂರು ವತಿಯಿಂದ ಆಯೋಜಿಸಲಾಗುತ್ತಿರುವ ಪ್ರತಿಷ್ಠಿತ ಜಿನಸಮ್ಮಿಲನ ಕಾರ್ಯಕ್ರಮವು ಇದೇ ಬರುವ ಡಿಸೆಂಬರ್ 11, 12 & 13ರಂದು ಸಮ್ಮೇದ ಶಿಖರ್ಜಿಯಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಜಿನಸಮ್ಮಿಲನದ ವಿಶೇಷ ಲೋಗೋವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಲೋಕಾರ್ಪಣೆ ಮಾಡಿದರು. ಡಾ. ಹೆಗ್ಗಡೆಯವರು ಮುಂಬರುವ ಜಿನಸಮ್ಮಿಲನ ಕಾರ್ಯಕ್ರಮಕ್ಕೆ ಶುಭಹಾರೈಸಿ, ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಲಿ ಹಾಗೂ ಯುವಜನರಿಗೆ ಮತ್ತಷ್ಟು ಪ್ರೇರಣೆಯಾಗಲಿ ಎಂದು ಆಶೀರ್ವದಿಸಿದರು. ನಂತರ ಹೇಮಾವತಿ ವೀ. ಹೆಗ್ಗಡೆಯವರನ್ನು ಭೇಟಿ ಮಾಡಲಾಯಿತು. ಅವರು ಜಿನಸಮ್ಮಿಲನವು ಯಶಸ್ವಿಯಾಗಿ ನೆರವೇರಲಿ, ಯುವ ಜನರನ್ನು ಮತ್ತಷ್ಟು ಒಗ್ಗೂಡಿಸಿ ಸಮಾಜದಲ್ಲಿ ಸಕರಾತ್ಮಕ ಚಟುವಟಿಕೆಗಳಿಗೆ ಪ್ರೇರಣೆಯಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸುಹಾಸ್ತಿ ಯುವ ಜೈನ್ ಮಿಲನ್ ಅಧ್ಯಕ್ಷರಾದ ದರ್ಶನ್ ಜೈನ್ ಮಾರಲಗೋಡು, ಚಿತ್ತ ಜಿನೇಂದ್ರ, ಮಾಜಿ ಅಧ್ಯಕ್ಷರಾದ ಪುಟ್ಟುಸ್ವಾಮಿ, ಮಾಜಿ ಕಾರ್ಯದರ್ಶಿ ಅಭಿನಂದನ್ ಜೈನ್ ಬಿದರೂರು ಹಾಗೂ ಅಭಿಷೇಕ್ ಉಪಸ್ಥಿತರಿದ್ದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img