ಯಜ್ಞೋಪವಿತ ತಯಾರಿಸುವ ತರಬೇತಿ
Published Date: 24-Aug-2026 Link-Copied
ಶಿಶಿಲ: ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಬಸದಿ ಶ್ರೀ ಕ್ಷೇತ್ರ ಚಂದ್ರಪುರ ಹಾಗೂ ಭಗವಾನ್ 1008 ಶ್ರೀ ಅನಂತನಾಥ ಸ್ವಾಮಿ ಬಸದಿ ಇಚಿಲoಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಜೈನರಲ್ಲಿ ಸಮ್ಯಕ್ ದರ್ಶನ, ಜ್ಞಾನ, ಚಾರಿತ್ರಗಳೆಂಬ ರತ್ನತ್ರಯಗಳ ಸಂಕೇತವಾದ ಯಜ್ಞೋಪವಿತ (ಜನಿವಾರ) ತಯಾರಿಸುವ ತರಬೇತಿಯನ್ನು ಜಿನ ಮಂದಿರದಲ್ಲಿ ನೀಡಲಾಯಿತು. ಈ ಸಂದರ್ಭದಲ್ಲಿ ಡಾ. ಕೆ. ಜಯಕೀರ್ತಿ ಜೈನ್, ಧನ ಕೀರ್ತಿ ಶೆಟ್ಟಿ, ಮಹಾವೀರ್ ಜೈನ್, ಶುಭಕರ ಹೆಗ್ಡೆ, ವಿಜು ಜೈನ್, ಸಿ ಅಶೋಕ್ ಜೈನ್, ಪ್ರವೀಣ್, ರೋಷನ್, ಸುದೇಶ್ ಜೈನ್, ನಮನ್, ಸುವರ್ಣ ಲತಾ, ಜಯಶ್ರೀ, ಶ್ವೇತ, ಸುರಭಿ, ಸುನಿತಾ ದೇವಿ, ಪ್ರತಿಮಾ, ಶಕುಂತಲಾ ಜೈನ್, ಸೂರಜ್, ಪುರೋಹಿತರು ಹಾಗೂ ಆಡಳಿತ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಶ್ರಾವಕ-ಶ್ರಾವಕಿಯರು ಭಾಗವಹಿಸಿದ್ದರು.