ಮುಕುಟಸಪ್ತಮಿ ಆಚರಣೆ


Logo

Published Date: 21-Aug-2026 Link-Copied

ಹುಬ್ಬಳ್ಳಿ: ಛಬ್ಬಿ ಗ್ರಾಮದ ಭಗವಾನ್ ಶ್ರೀ 1008 ಶಾಂತಿನಾಥ ತೀರ್ಥಂಕರ ಜಿನ ಮಂದಿರದಲ್ಲಿ ಸ್ಥಳೀಯ ಸಮಸ್ತ ಜೈನ್ ಸಮಾಜದ ವತಿಯಿಂದ ಮುಕುಟಸಪ್ತಮಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ನಿರ್ವಾಣ ಲಾಡು ಸಮರ್ಪಣೆ ಕಾರ್ಯಕ್ರಮದಲ್ಲಿ ಪಾವನ ಸಾನಿಧ್ಯವನ್ನು ಪರಮ ಪೂಜ್ಯ ಡಾ 108 ಶ್ರೀ ಬಾಲಾಚಾರ್ಯ ಸಿದ್ಧಸೇನ ಮುನಿ ಮಹಾರಾಜರು ವಹಿಸಿದ್ದರು. ಪಾರಿಶ್ವನಾಥ ತೀರ್ಥಂಕರರ ಮೋಕ್ಷ ಹೊಂದಿದ ಪವಿತ್ರ ದಿನ, ತನ್ನಿಮಿತ್ತ ಜಿನ ಮಂದಿರದಲ್ಲಿ ಪಂಚಾಮೃತ ಅಭಿಷೇಕ ಮಹಾ ಶಾಂತಿ ಮಂತ್ರ ನಂತರ ಸಭಾ ಮಂಟಪದಲ್ಲಿ 150 ಮಕ್ಕಳಿಂದ ಪಾರಿಶ್ವನಾಥ ತೀರ್ಥಂಕರಿಗೆ ಅಭಿಷೇಕ ಪೂಜಾ ವಿಧಿವಿದಾನ ನಡೆದವು. ನಂತರ ಮಹಾವೀರ ಯುವಕ ಮಂಡಳದವರಿಂದ ಸಮ್ಮೇದ ಶಿಖರ್ಜಿಯಲ್ಲಿ ಇರುವ 24 ಕೂಟ (ಮಂದಿರ) ಸ್ತಬ್ದ ಚಿತ್ರ ರಚನೆ ಮಾಡಿ ತೀರ್ಥಂಕರರಿಗೆ ನಿರ್ವಾಣ ಲಾಡು ಸಮರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮುನಿಮಹಾರಾಜರು ಮಾನವ ಜನ್ಮ ಸಿಕ್ಕಿದು ಮಹಾಪುಣ್ಯ ಕಾರಣ ಎಲ್ಲರು ದೇವರ ದರ್ಶನ ಸ್ವಾಧ್ಯಾಯ ಜಪ ಮಾಡಬೇಕು. ಮುಕುಟ ಅಂದರೆ ಕಿರೀಟ ಇದ್ದಹಾಗೆ ಮೋಕ್ಷ ಮಾರ್ಗದ ಕಡೆ ಹೋಗುವ ಹಾಗೆ ಆದಕಾರಣ ತಾವುಗಳು ತನು ಮನ ಧನದಿಂದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಮರ್ಪಣಾ ಭಾವದಿಂದ ಭಾಗವಹಿಸಿ ಪುಣ್ಯವನ್ನು ಸಂಪಾದಿಸಿಕೊಳ್ಳಿ ಎಂದು ಪ್ರವಚನದಲ್ಲಿ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶ್ರಾವಕ ಶ್ರಾವಕಿಯರು ಭಾಗವಹಿಸಿದ್ದರು. ವರದಿ : ಎಸ್ ಆರ್ ಮಲ್ಲಸಮುದ್ರ

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img