ಅಲ್ಪಸಂಖ್ಯಾತ ಜೈನ ಸೇವಾ ಸಂಘ- ಪದಾಧಿಕಾರಿಗಳ ಆಯ್ಕೆ
Published Date: 19-Aug-2026 Link-Copied
ಅಲ್ಪಸಂಖ್ಯಾತ ಜೈನ ಸೇವಾ ಸಂಘ ನವನಗರ ಹುಬ್ಬಳ್ಳಿ ಇದರ 2026-27 ರಿಂದ ಮೂರು ವರ್ಷದ ಅವಧಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು . ಸಂರಕ್ಷಕರಾಗಿ ಬಿ.ಎ. ಪಾಟೀಲ, ಗೌರವಾಧ್ಯಕ್ಷರಾಗಿ ಜೆ.ಎ. ಪಾಟೀಲ ಇವರನ್ನು ನಾಮ ನಿರ್ದೇಶನ ಮಾಡಲಾಯಿತು. ಶಾಂತರಾಜ ಮಲ್ಲಸಮುದ್ರ ಇವರು ಅಧ್ಯಕ್ಷರಾಗಿ ಸತತ ಐದನೇ ಬಾರಿ ಮರು ಆಯ್ಕೆಯಾದರೆ, ಕಾರ್ಯಾಧ್ಯಕ್ಷರಾಗಿ ರವೀಂದ್ರ ಟಿ ರಾಯಪ್ಪನವರ, ಉಪಾಧ್ಯಕ್ಷರಾಗಿ ಅಜಿತ ಎ ಉಪಾಧ್ಯ, ಮಹಿಳಾ ಉಪಾಧ್ಯಕ್ಷರಾಗಿ ಶೋಭಾ ವರೂರ, ಗೌರವ ಕಾರ್ಯದರ್ಶಿಯಾಗಿ ದೇವೇಂದ್ರ ಆರ್ ಚೌದರಿ, ಸಹಕಾರ್ಯದರ್ಶಿಗಳಾಗಿ ಸಂತೋಷ ಹಂಡಗೆ ಮತ್ತು ಅಶೋಕ ಯೋಗಪ್ಪನವರ, ಖಜಾಂಚಿಯಾಗಿ ಯಲ್ಲಪ್ಪ ಆಂಬೊಜಿ ಆಯ್ಕೆಗೊಂಡರು. ಕಾರ್ಯಕಾರಿ ಮಂಡಳಿ ಸದಸ್ಯರಾಗಿ : * ಭೀಮಣ್ಣ ಎಸ್ ವರೂರ * ರತ್ನಾಕರ ಜೆ ಪಾಟೀಲ * ಬಾಹುಬಲಿ ಹೊಂಬಣ್ಣವರ * ಅಶೋಕ ಅಂಬಣ್ಣವರ * ಶ್ರೇಣಿಕ ಡಿ ತೆಲಗಡ್ಡಿ * ವಿಕ್ರಮ್ ಆರ್ ಮಲ್ಲಸಮುದ್ರ * ಶಿರಿಯಪ್ಪ ಟಿ ಪಂಡಿತ ಇವರುಗಳು ಅವಿರೋಧವಾಗಿ ಆಯ್ಕೆಯಾದರು. ಅಲ್ಪಸಂಖ್ಯಾತ ಜೈನ ಸೇವಾ ಸಂಘವು ಕಳೆದ 20 ವರ್ಷಗಳಿಂದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದು ನವನಗರದ ಭಗವಾನ ಮುನಿಸುವೃತ ಜಿನಮಂದಿರದ ಆಡಳಿತ ನಡೆಸುತ್ತಾ ಪೂಜಾ ವಿಧಾನಗಳನ್ನು ಆಯೋಜಿಸುವ ಮೂಲಕ ಆದ್ಯಾತ್ಮಿಕ ಪ್ರಭಾವನೆಯನ್ನು ಮಾಡುತ್ತಿದೆ. ವರದಿ : ರವೀಂದ್ರ ರಾಯಪ್ಪನವರ ಕಾರ್ಯಾಧ್ಯಕ್ಷರು