ನಾರಾವಿ: ಉಚಿತ ನೇತ್ರ ತಪಾಸಣಾ ಶಿಬಿರ


Logo

Published Date: 12-Aug-2026 Link-Copied

ನಾರಾವಿ ಮಾಗಣೆ ಭ। ಧರ್ಮನಾಥ ಸ್ವಾಮಿ ಬಸದಿಯ ಶ್ರೀ ಅನಂತನೋಂಪಿಯ ವ್ರತಧಾರಿಗಳ ಮುಂದಾಳತ್ವದಲ್ಲಿ 15ನೇ ವರ್ಷದ ಶ್ರೀ ಅನಂತನೋಂಪಿ ಆರಾಧನಾ ಪ್ರಯುಕ್ತ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಸ್ಟ್ ಆಸ್ಪತ್ರೆ ಮಂಗಳೂರು - ಮೂಡಬಿದ್ರೆ ಮತ್ತು ನವಜ್ಯೋತಿ ಚಾರಿಟೇಬಲ್ ಟ್ರಸ್ಟ್ ಡಾ| ಪಿ. ದಯಾನಂದ ಪೈ ಮತ್ತು ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ (ರಿ.), ಸೆಂಚೂರಿ ಗ್ರೂಪ್, ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಅಂಧತ್ವ ನಿವರಣಾ ವಿಭಾಗ) ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವು ದಿನಾಂಕ 23-08-2026ನೇ ರವಿವಾರದಂದು ಧರ್ಮಶ್ರೀ ಸಭಾಭವನದಲ್ಲಿ ಬೆಳಿಗ್ಗೆ ಗಂ. 9-00ರಿಂದ ಮಧ್ಯಾಹ್ನ ಗಂ. 1-00ರವರೆಗೆ ನಡೆಯಲಿದೆ. ಶಿಖರದ ವಿಶೇಷತೆ: ಶಿಬಿರದಲ್ಲಿ ಕಣ್ಣಿನ ಸಂಪೂರ್ಣ ತಪಾಸಣೆ ನಡೆಸಲಾಗುವುದು. ಅಗತ್ಯವುಳ್ಳವರಿಗೆ ಉಚಿತವಾಗಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಯಶಸ್ವಿನಿ, ಸಂಪೂರ್ಣ ಸುರಕ್ಷಾ, E.S.I. ಮತ್ತು ಎಲ್ಲಾ ನಗದು ರಹಿತ ಯೋಜನೆಗಳು ಲಭ್ಯ. ತಮ್ಮ ಕಣ್ಣಿನ ಹಾಗೂ ಇತರ ಆರೋಗ್ಯ ಸಮಸ್ಯೆಯನ್ನು ತಪಾಸಣಾ ಸಮಯದಲ್ಲಿ ವೈದ್ಯರಿಗೆ ತಿಳಿಸತಕ್ಕದ್ದು. ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದವರಿಗೆ ಗೊತ್ತುಪಡಿಸಿದ ದಿನಾಂಕದಂದು ಮಂಗಳೂರು ಪ್ರಸಾದ್ ನೇತ್ರಾಲಯ ಕಣ್ಣಿನ ಆಸ್ಪತ್ರೆಗೆ ವಾಹನದಲ್ಲಿ ಕರೆದುಕೊಂಡು ಹೋಗಿ ಉಚಿತ ಶಸ್ತ್ರಚಿಕಿತ್ಸೆ ಮಾಡಿಸಿ ವಾಪಾಸು ಕರೆದು ತಂದು ಬಿಡಲಾಗುವುದು. ಅಗತ್ಯವುಳ್ಳವರಿಗೆ ರಿಯಾಯಿತಿ ದರದಲ್ಲಿ ಕನ್ನಡಕವನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ. ಶಿಶುಪಾಲ್ ಜೈನ್-9449449967, ಅಶೋಕ್ ಕುಮಾರ್ - 6361293020, ಜಯವರ್ಮ ಜೈನ್- 9902213650, ಹರ್ಷೇಂದ್ರ ಕುಮಾರ್ - 9901862308, ಶೀತಲ್ ಕುಮಾರ್- 9901296744, ಯಶೋಧರ ಜೈನ್- 9900902239 ಮಧುಕರ್ ಕನ್ನಾರ್, ಸಾರ್ವಜನಿಕ ಸಂಪರ್ಕ ಅಧಿಕಾರಿ, ಪ್ರಸಾದ್ ನೇತ್ರಾಲಯ ಉಡುಪಿ- 9844761421 ವಿಶೇಷ ಸೂಚನೆ :- ಹೆಸರು ನೋಂದಾವಣೆಯು ಬೆಳಗ್ಗೆ ಗಂ. 8-45ಕ್ಕೆ ಆರಂಭವಾಗುತ್ತದೆ. 15 ನಿಮಿಷ ಮುಂಚಿತವಾಗಿ ಆಗಮಿಸುವುದು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img