ತುಮಕೂರು: ಮುನಿ ಮಹಾರಾಜರುಗಳ ಆಗಮನ
Published Date: 07-Jul-2026 Link-Copied
ತುಮಕೂರು ನಗರದಲ್ಲಿ 2026 ರ ಚಾತುರ್ಮಾಸವನ್ನು ಆಚರಿಸಲು ದಿಗಂಬರ ಜೈನಾಚಾರ್ಯ 108 ಶ್ರೀ ಪ್ರಮುಖ ಸಾಗರ್ ಜೀ ಮಹಾರಾಜ್ ಮತ್ತು ಅವರ ಮುನಿ ಸಂಘ ದಿನಾಂಕ 6-7-2026 ಸೋಮವಾರ ತುಮಕೂರು ತಾಲ್ಲೂಕು ಪಂಡಿತನ ಹಳ್ಳಿ ಬಳಿ ಇರುವ ಮಂದಾರ ಗಿರಿ ಅತಿಶಯ ಕ್ಷೇತ್ರಕ್ಕೆ ಆಗಮಿಸಿದರು. ಜೈನ ಸಮಾಜದ ಅಧ್ಯಕ್ಷರಾದ ಟಿ ಡಿ ಬಾಹುಬಲಿ ಬಾಬು, ಪದಾಧಿಕಾರಿಗಳು ಮತ್ತು ತುಮಕೂರು ನಗರದ ಶ್ರಾವಕ -ಶ್ರಾವಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.