ನಾರಾವಿ ಧಾಮ ಸಂಪ್ರೋಕ್ಷಣೆ ಪ್ರಯುಕ್ತ ಜೈನ ಶ್ರಾವಕ ಶ್ರಾವಕಿಯರಿಗೆ ರಾಜ್ಯ ಮಟ್ಟದ ಸ್ಪರ್ಧೆ


Logo

Published Date: 01-Feb-2024 Link-Copied

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾರಾವಿ ಗ್ರಾಮದ ಭ| ೧೦೦೮ ಶ್ರೀ ಧರ್ಮನಾಥ ಸ್ವಾಮಿ ಬಸದಿಯ ಧಾಮ ಸಂಪ್ರೋಕ್ಷಣಾ ಪೂರ್ವಕ ಪ್ರತಿಷ್ಠಾ ಮಹೋತ್ಸವವು ಮಾರ್ಚ್ 22ರಿಂದ 24ರ ವರೆಗೆ ನಡೆಯಲಿದ್ದು, ಈ ಪ್ರಯುಕ್ತ ಜೈನ ಶ್ರಾವಕ ಶ್ರಾವಕಿಯರಿಗೆ ರಾಜ್ಯ ಮಟ್ಟದ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಗಳ ವಿವರ ಮತ್ತು ನಿಯಮಗಳು ಈ ಕೆಳಗಿನಂತಿದೆ. 1. ಧರ್ಮನಾಥ ಜಿನ ಸಂಗೀತ ಸ್ಪರ್ಧೆ ಪ್ರಥಮ ಬಹುಮಾನ : 10,000 ನಗದು ಮತ್ತು ಸ್ಮರಣಿಕೆ ದ್ವಿತೀಯ ಬಹುಮಾನ : 8,000 ನಗದು ಮತ್ತು ಸ್ಮರಣಿಕೆ ನಿಯಮಗಳು: * ಧರ್ಮನಾಥ ಸ್ವಾಮಿಯ ಹಾಡು / ಭಜನೆಯನ್ನು ಒಬ್ಬರೇ ಹಾಡಿ, ವಿಡಿಯೋ ಮಾಡಿ ಕಳುಹಿಸಬೇಕು. * ಸಾಹಿತ್ಯ, ಸ್ವರ, ಹಿನ್ನಲೆ ಸಂಗೀತ, ಛಾಯಾಗ್ರಹಣ ಇತ್ಯಾದಿ ಅಂಶಗಳನ್ನು ಪರಿಗಣಿಸಿ ವಿಜೇತರನ್ನು ಆಯ್ಕೆ ಮಾಡಲಾಗುವುದು. * ನೀವು ಕಳುಹಿಸಿದ ಹಾಡು / ಭಜನೆ ಮತ್ತು ಅದರ ವಿಡಿಯೋ ಈ ಹಿಂದೆ ಎಲ್ಲಿಯೂ ಪ್ರಕಟಗೊಂಡಿರಬಾರದು. * ವಿಡಿಯೋದ ಸಮಯ ಕನಿಷ್ಠ 5 ನಿಮಿಷ, ಗರಿಷ್ಠ 8 ನಿಮಿಷಗಳಾಗಿರಬೇಕು. 2. ಪ್ರಬಂಧ ಸ್ಪರ್ಧೆ ಪ್ರಥಮ ಬಹುಮಾನ : 3,000 ನಗದು ಮತ್ತು ಸ್ಮರಣಿಕೆ ದ್ವಿತೀಯ ಬಹುಮಾನ : 2,000 ನಗದು ಮತ್ತು ಸ್ಮರಣಿಕೆ ನಿಯಮಗಳು: * ಪ್ರಬಂಧದ ವಿಷಯ: “ಜೈನ ಧರ್ಮದ ಆಚರಣೆಗಳು ಮತ್ತು ವೈಜ್ಞಾನಿಕತೆ” * ಪ್ರಬಂಧವು 900 ಶಬ್ದಗಳನ್ನು ಮೀರಿರಬಾರದು. * ಪ್ರಬಂಧವನ್ನು ಕನ್ನಡ ನುಡಿಯಲ್ಲಿ ಟೈಪ್ ಮಾಡಿ PDF ಮಾಡಿ ಕಳುಹಿಸತಕ್ಕದು. ವಿಶೇಷ ಸೂಚನೆ : 1. ವಿಡಿಯೋ ಮತ್ತು ಪ್ರಬಂಧಗಳನ್ನು ಕಳುಹಿಸಲು ಕೊನೆಯ ದಿನಾಂಕ 5 ಮಾರ್ಚ್ 2024. 2. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. 3. ವಿಡಿಯೋ ಮತ್ತು ಪ್ರಬಂಧಗಳನ್ನು ಕಳುಹಿಸುವವರು ತಮ್ಮ ಫೋಟೋ, ವಿಳಾಸ ಮತ್ತು ಮೊಬೈಲ್ ನಂಬರ್‌ಗಳನ್ನು ಜೊತೆಗೆ ಕಳುಹಿಸಬೇಕು. ವಿಡಿಯೋ ಮತ್ತು ಪ್ರಬಂಧಗಳನ್ನು naravibasadi24@gmail.comಗೆ ಮೇಲ್ ಮಾಡಬಹುದು ಅಥವಾ 9481016887 ವಾಟ್ಸ್ಯಾಪ್ ನಂಬರ್‌ಗೆ ಕಳುಹಿಸಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗಾಗಿ ಅತುಲ್ ಎಸ್. ಸೇಮಿತ - 9481016887, ಜ್ಞಾನೇಂದ್ರ ಕುಮಾರ್ ಜೈನ್ - 9902799196 ಇವರನ್ನು ಸಂಪರ್ಕಿಸಬಹುದು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img