ಭರತೇಶ ವೈಭವ ಕಾವ್ಯ ವಾಚನ ಪ್ರವಚನ ಸಪ್ತಾಹ ಸಂಭ್ರಮ
Published Date: 03-Oct-2025 Link-Copied
ಮಂಗಳೂರು: ಬಹುಜನರ ಅಪೇಕ್ಷೆಯ ಮೇರೆಗೆ ಮಂಗಳೂರು ನಗರದಲ್ಲಿ ದ್ವಿತೀಯ ಬಾರಿಗೆ ಲಾರ್ಡ್ ಮಹಾವೀರ ಜೈನ್ ಬೋರ್ಡಿಂಗ್ ಪ್ರಸ್ತುತ ಪಡಿಸುವ ವಿಶೇಷ ಕಾರ್ಯಕ್ರಮ ಮಹಾಕವಿ ರತ್ನಾಕರ ವರ್ಣಿವಿರಚಿತ ಮಹಾಕಾವ್ಯ ಭರತೇಶ ವೈಭವ ಕಾವ್ಯ ವಾಚನ - ಪ್ರವಚನ ಸಪ್ತಾಹ ಸಂಭ್ರಮವು ದಿನಾಂಕ 05-10-2025 ರಿಂದ ತಾ. 12-10-2025ರ ವರೆಗೆ ಪ್ರತಿದಿನ ಸಂಜೆ ಗಂಟೆ 6.00 ರಿಂದ 8.00ರ ವರೆಗೆ ವರ್ಧಮಾನ ಸಿದ್ದಾರ್ಥ ಭವನ, ಲಾರ್ಡ್ ಮಹಾವೀರ ಜೈನ್ ಬೋರ್ಡಿಂಗ್ ಇಲ್ಲಿ ಜರುಗಲಿದೆ. ಉದ್ಘಾಟನೆ : ಶ್ರೀ ಅಭಿಷೇಕ್ ಬಿ.ಎಸ್., BE, MBA ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್, ಮೆಸ್ಕಾಂ ಸಬ್ಡಿಸನ್, ಕಾವೂರು, ಮಂಗಳೂರು ಕಾವ್ಯವಾಚನ : ಶ್ರೀ ಸಾತ್ವಿಕ್ ಜೈನ್ ಎನ್., ಬಜಗೋಳಿ ಎಂ.ಸಿ.ಎ. ವಿದ್ಯಾರ್ಥಿ, ಎನ್.ಐ.ಟಿ.ಕೆ. ಪ್ರವಚನ : ಶ್ರೀ ಮುನಿರಾಜ ರೆಂಜಾಳ, ಕಾರ್ಕಳ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು