ರತ್ನತ್ರಯ ಜೈನ ಮಿಲನ್: ಮಾಸಿಕ ಸಭಾ ವರದಿ
Published Date: 22-Sep-2025 Link-Copied
ರತ್ನತ್ರಯ ಜೈನ ಮಿಲನ ಮಾಸಿಕ ಸಭೆಯು ಇತ್ತೀಚೆಗೆ ನಡೆಯಿತು. ಕಾರ್ಯಕ್ರಮವು ಅತಿಥಿಗಳಿಂದ ದೀಪಪ್ರಜ್ವಲನೆ ಪ್ರಾರಂಭಗೊಂಡು ಮುಖ್ಯ ಅತಿಥಿಗಳಾದ ನೀರಜ ನಾಗೇಂದ್ರ ಕುಮಾರ ದಶಲಕ್ಷಣಗಳ (ಕ್ಷಮಾ, ಮಾರ್ದವ, ಆರ್ಜವ, ಶೌಚ, ಸತ್ಯ, ಸಂಯಮ, ತಪ, ತ್ಯಾಗ, ಅಕಿಂಚನ್ಯ ಮತ್ತು ಬ್ರಹ್ಮಚರ್ಯ) ಮಹತ್ವದ ಕುರಿತು ಉಪನ್ಯಾಸ ನೀಡಿದರು. ಉಷಾರಾಣಿ ‘ಉತ್ತಮ ಕ್ಷಮಾ’ ಎಂಬ ವಿಷಯದ ಕುರಿತು ವಿಶದವಾದ ಭಾಷಣ ಮಾಡಿದರು. ಸುಖಾನಂದ ಅವರು, ನಡೆಯಲಿರುವ ಜಾತಿಗಣತಿಯ ಸಂದರ್ಭದಲ್ಲಿ ‘ಜೈನ - ದಿಗಂಬರ’ ಎಂದು ನಮೂದಿಸಲು ಸದಸ್ಯರಿಗೆ ಸಲಹೆ ನೀಡಿದರು. ಅನಂತಕುಮಾರಿ ಪದ್ಮರಾಜ್ ಅವರು ಆತ್ಮೀಯ ಸ್ವಾಗತ ಭಾಷಣ ಮಾಡಿದರು. ಬಳಿಕ ಮಾಲಿನಿ ಬ್ರಹ್ಮಣ್ಣ ರತ್ನತ್ರಯ ಮಿಲನದ ಉದ್ದೇಶವನ್ನು ವಿವರಿಸಿದರು. ಪೂರ್ಣಿಮಾ ಜಯಂತ್ ಪರ್ವವಾಚನ ಮಾಡಿದರು. ಸೆಪ್ಟೆಂಬರ್ ತಿಂಗಳಲ್ಲಿ ವಿವಾಹ ವಾರ್ಷಿಕೋತ್ಸವ ಹಾಗು ಹುಟ್ಟುಹಬ್ಬ ಆಚರಿಸಿಕೊಂಡ ಸದಸ್ಯರಿಗೆ ಮಹಾವೀರ ಕುಮಾರ್ ಅವರು ಹಾರ್ದಿಕ ಶುಭಾಶಯ ಕೋರಿದರು. ರಾಣಿ ಪ್ರಫುಲ್ಲ ಅವರು ಅತಿಥಿಗಳ ಪರಿಚಯ ಮಾಡಿಕೊಟ್ಟರು. ಬಳಿಕ ಸಭಾಧ್ಯಕ್ಷರಾದ ನವೀನ್ ಕುಮಾರ್ ಗುಬ್ಬಿ ಅಧ್ಯಕ್ಷರ ನುಡಿಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಆತಿಥ್ಯವನ್ನು ಪದ್ಮ ಸೂರಿಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಷಾರಾಣಿ, ನೀರಜ ನಾಗೇಂದ್ರ ಕುಮಾರ, ಪ್ರೇಮ, ಸುಖಾನಂದ ಹಾಗು ರತ್ನತ್ರಯ ಜೈನ ಮಿಲನ ಅಧ್ಯಕ್ಷರಾದ ನವೀನ್ ಕುಮಾರ್ ಗುಬ್ಬಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅನಂತಕುಮಾರಿಯವರು ನಿರೂಪಿಸಿ. ಶ್ವೇತಾ ನವೀನ್ ಕುಮಾರ್ ಅವರ ವಂದನಾರ್ಪಣೆಯೊಂದಿಗೆ ಸಭೆ ಸಮಾರೋಪಗೊಂಡಿತು.