ಕಾರ್ಕಳ: ದತ್ತಿನಿಧಿ ಪ್ರಶಸ್ತಿ ಪ್ರದಾನ ಶ್ರೀ ಬಾಹುಬಲಿ ಶ್ರಾವಿಕಾಶ್ರಮ ದಾನಶಾಲೆ
Published Date: 15-Sep-2025 Link-Copied
2025 - 26ನೇ ಸಾಲಿನಲ್ಲಿ ಜರುಗಿದ ಧಾರ್ಮಿಕ ಪಾಠ ಪರೀಕ್ಷೆ, ಶೈಕ್ಷಣಿಕದಲ್ಲಿ ಉನ್ನತ ಸ್ಥಾನ ಹೊಂದಿದ, ನಾಯಕತ್ವ ಗುಣವುಳ್ಳ, ಹೊಂದಾಣಿಕೆ ಹೊಂದಿದ ಒಬ್ಬ ವಿದ್ಯಾರ್ಥಿನಿಯನ್ನು ಹೇಮಾವತಿ ಅಮ್ಮನವರ ನೇತೃತ್ವದ ಆಡಳಿತ ಮಂಡಳಿಯ ಸದಸ್ಯರು ಆಯ್ಕೆ ಮಾಡಿ ದತ್ತಿನಿಧಿ ಪ್ರಶಸ್ತಿಯನ್ನು ನೀಡಲಾಗುತ್ತದೆ.ಈ ಪ್ರಯುಕ್ತ ಶ್ರೀ ಬಾಹುಬಲಿ ಶ್ರಾವಿಕಾಶ್ರಮ ದಾನ ಶಾಲೆ, ಕಾರ್ಕಳ ಇಲ್ಲಿಯ ಅಂತಿಮ ಬಿ.ಕಾಂ ವಿದ್ಯಾರ್ಥಿನಿ ಪದ್ಮಮಾಲಿನಿ ಕೆ.ಎ., ಇಡಕಿಣಿ, ಕಳಸ ಇವರಿಗೆ ಶ್ರವಣಬೆಳಗೊಳ ಪ.ಪೂ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಧತ್ತಿನಿಧಿ ಪ್ರಶಸ್ತಿ ನೀಡಲಾಯಿತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾದ ಅಜಿತ್ ಕುಮಾರ್ ಕೊಕ್ರಡಿ, ಆಶ್ರಮದ ಆಡಳಿತ ಮಂಡಳಿಯ ಮಾಲತಿ ವಸಂತ್ ರಾಜ್, ಸುಮಾಲಿನಿ ವಿಜಯ್ ಕುಮಾರ್ ಅಜ್ರಿ, ಕಾರ್ಯದರ್ಶಿಗಳಾದ ಶಿಶುಪಾಲ್ ಪುವಣಿ ಹಾಗೂ ಜಯಲಕ್ಷ್ಮಿ ಅಜಿತ್ ಕುಮಾರ್ ರವರು, ಕಾರ್ಕಳ ಜೈನಮಠದ ವ್ಯವಸ್ಥಾಪಕರಾದ ಧನಕೀರ್ತಿ ಕಡಂಬರವರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ವೇದಿಕೆಯಲ್ಲಿರುವವರು ಪದ್ಮಮಾಲಿನಿಯವರಿಗೆ, ದತ್ತಿನಿಧಿ ಪ್ರಶಸ್ತಿ ಪತ್ರ, ಶಾಲು, ಹಾರ ಮತ್ತು ನಗದು ಬಹುಮಾನ ನೀಡಿ ಗೌರವಿಸಲಾಯಿತು. ಹಾಗೆಯೇ ದಶಲಕ್ಷಣ ಪರ್ವದ ಆರಂಭದಂದು ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ದಾನಶಾಲೆ, ಕಾರ್ಕಳ ಇವರ ಪಾವನ ಸಾನಿಧ್ಯದಲ್ಲಿ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟನೆಗೊಂಡಿತು ಹಾಗೆಯೇ ಮಂಗಲ ಪ್ರವಚನವನ್ನು ದಯಪಾಲಿಸಿದರು. ಶೈಕ್ಷಣಿಕ ಮತ್ತು ಧಾರ್ಮಿಕ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಪೂಜ್ಯ ಸ್ವಾಮೀಜಿಯವರಿಂದ ನೀಡಲಾಯಿತು ಈ ಸುಸಂದರ್ಭದಲ್ಲಿ ಪರಮಪೂಜ್ಯ 108 ಮುನಿಶ್ರೀ ಮಹಿಮಾ ಸಾಗರ ಮುನಿ ಮಹಾರಾಜರು ಮಕ್ಕಳ ಮೇಲಿನ ಅಭಿಮಾನದಿಂದ ಹತ್ತು ದಿನದ ಭೋಜನ ವ್ಯವಸ್ಥೆಯನ್ನು ಮಾಡಿಸಿರುತ್ತಾರೆ.