ಅತ್ಯಾಧುನಿಕ ನೇತ್ರ ಚಿಕಿತ್ಸೆ ಧಾರವಾಡದಲ್ಲಿ


Logo

Published Date: 14-Sep-2025 Link-Copied

ಎಸ್‌ಡಿಎಮ್ ವಿಶ್ವವಿದ್ಯಾಲಯ ಧಾರವಾಡದ, ಎಸ್‌ಡಿಎಮ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ನೇತ್ರ ಚಿಕಿತ್ಸಾ ವಿಭಾಗದಲ್ಲಿ 01.09.2025 ರಂದು ಅತ್ಯಾಧುನಿಕ ಕೋರ್ನಿಯಲ್ ಟೊಪೋಗ್ರಾಫಿ ಯಂತ್ರ ಹಾಗೂ ಸ್ಪೆಕ್ಯುಲರ್ ಮೈಕ್ರೋಸ್ಕೋಪ್ ಉಪಕರಣಗಳನ್ನು ಮಾನ್ಯ ಉಪ ಕುಲಪತಿಗಳಾದ ಹಾಗೂ ಪ್ರಸಿದ್ಧ ಪ್ಲಾಸ್ಟಿಕ್ ಸರ್ಜನ್ ಡಾ. ನಿರಂಜನ್ ಕುಮಾರ್ ಅವರು ಉದ್ಘಾಟಿಸಿದರು. ನೇತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಡಾ. ಅನುಪಮಾ ಎಸ್. ದೇಸಾಯಿ ಅವರು ಉಪಕರಣಗಳ ಉಪಯೋಗಗಳನ್ನು ವಿವರಿಸುತ್ತಾ ಕೋರ್ನಿಯಾ ಮೇಲ್ಮೆöÊ ನಿಖರ ನಕ್ಷೆ ತಯಾರಿಸಲು ನೆರವಾಗುತ್ತವೆ. ಕ್ಯಾರಟೊಕೋನಸ್, ಅಸ್ಟಿಗ್ಮಾಟಿಸಂ, ರೆಫ್ರಾಕ್ಟಿವ್ ಶಸ್ತ್ರಚಿಕಿತ್ಸೆ, ಡ್ರೈ ಐ ರೋಗಗಳ ತಪಾಸಣೆಗೆ ಸಹಾಯಕವಾಗುತ್ತವೆ” ಎಂದರು ತಿಳಿಸಿದರು. ಉಪಕುಲಪತಿಗಳಾದ ಡಾ. ನಿರಂಜನ್ ಕುಮಾರ ಮಾತನಾಡುತ್ತ ಈ ಸೌಲಭ್ಯದಿಂದ ಧಾರವಾಡ ಹಾಗೂ ಸುತ್ತಮುತ್ತಲಿನ ಜನತೆಗೆ ಜಾಗತಿಕ ಮಟ್ಟದ ನೇತ್ರ ಚಿಕಿತ್ಸಾ ಸೇವೆ ಲಭ್ಯವಾಗಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪದ್ಮಲತಾ ನಿರಂಜನ್, ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ, ಹಣಕಾಸು ಅಧಿಕಾರಿಗಳಾದ ವಿ.ಜಿ. ಪ್ರಭು, ಎಸ್.ಡಿ.ಎಮ್. ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಸಿ.ಎಮ್. ಶೆಟ್ಟರ್, ವೈದ್ಯಕೀಯ ಅಧೀಕ್ಷಕರಾದ ಡಾ. ಕಿರಣ್ ಹೆಗಡೆ, ಉಪ ವೈದ್ಯಕೀಯ ಅಧೀಕ್ಷಕರಾದ ಡಾ. ಮಗ್ದುಮ್ ಕಿಲ್ಲೇದಾರ್, ಪ್ರಾಂಶುಪಾಲರಾದ ಡಾ. ವಿಜಯ್ ಕುಲಕರ್ಣಿ, ಡಾ. ಶಂಕರಗೌಡಾ ಪಾಟೀಲ್ ಹಾಗೂ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img