ಪಿ. ವೀರೇಂದ್ರ ಕುಮಾರ್ರವರಿಗೆ ಶ್ಲಾಘನೀಯ ಸೇವಾ ಪದಕ
Published Date: 02-Sep-2025 Link-Copied
ಬೆಂಗಳೂರು, ಆ. 30: ರಾಷ್ಟ್ರಪತಿಯವರ ಪದಕ ಪ್ರದಾನ ಸಮಾರಂಭ 2025 ಕಾರ್ಯಕ್ರಮದಲ್ಲಿ ರಾಜ್ಯದ ರಾಜ್ಯಪಾಲರಾದ ಥಾಮರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಹಾಗೂ ಮತ್ತಿತರ ಗಣ್ಯರ ಸಮ್ಮುಖದಲ್ಲಿ ಬೆಂಗಳೂರು ಕೆಎಲ್ಎ ಡಿವೈಎಸ್ಪಿ ಆಗಿರುವ ಪಿ. ವೀರೇಂದ್ರ ಕುಮಾರ್ರವರಿಗೆ ಪೋಲೀಸ್ ಇಲಾಖೆಯಲ್ಲಿ ಅತ್ಯಂತ ದಕ್ಷತೆ, ವೃತ್ತಿ ನಿಷ್ಠೆ, ಪ್ರಾಮಾಣಿಕತೆಯಿಂದ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ರಾಷ್ಟ್ರಪತಿಯವರ ಶ್ಲಾಘನೀಯ ಸೇವಾ ಪದಕ-ಗಣರಾಜ್ಯೋತ್ಸವ ದಿನಾಚರಣೆ-2023ನ್ನು ನೀಡಿ ಗೌರವಿಸಿರುತ್ತಾರೆ.