ದಶಲಕ್ಷಣ ಮಹಾಪರ್ವ: ಉತ್ತಮ ಮಾರ್ದವ


Logo

Published Date: 30-Aug-2025 Link-Copied

ವೇಣೂರು: ದಶಲಕ್ಷಣ ಮಹಾಪರ್ವದ ಎರಡನೇ ದಿನದಂದು ಉತ್ತಮ ಮಾರ್ದವ ಧರ್ಮದ ಬನ್ನಿ ಉಪಾನ್ಯಾಸ ಕಾರ್ಯಕ್ರಮವು ಯಾತ್ರಿ ನಿವಾಸದಲ್ಲಿ ಆ. 29ರಂದು ನಡೆಯಿತು. ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರದಾನ ಮಂತ್ರಿಯವರ ಅಲ್ಪಸಂಖ್ಯಾತ 15 ಅಂಶಗಳ ಕಾರ್ಯಕ್ರಮ ಅನುಷ್ಠಾನದ ಜಿಲ್ಲಾ ಸಮಿತಿಯ ನಿರ್ದೇಶಕರು, ಕೆಲ್ಲಪುತ್ತಿಗೆ ಗುತ್ತು ದರೆಗುಡ್ಡೆಯ ಸುಭಾಶ್ಚಂದ್ರ ಚೌಟರವರು ಗಣ್ಯರೊಂದಿಗೆ ಸೇರಿ ಉದ್ಘಾಟಿಸಿ ಮಾತನಾಡುತ್ತಾ, ಧರ್ಮವನ್ನು ಉಳಿಸಿ, ಬೆಳೆಸಬೇಕು ಧಾರ್ಮಿಕ ಪ್ರವಚನಗಳಿಗೆ ಚಿಕ್ಕ ಮಕ್ಕಳಿಂದ ದೊಡ್ಡವರವರೆಗೆ ಕರೆದುಕೊಂಡು ಬಂದು ಧರ್ಮದ ಬಗ್ಗೆ ಇನ್ನಷ್ಟು ತಿವಳಿದುಕೊಳ್ಳುವ ಹಾಗೆ ಮಾಡಬೇಕು. ಧರ್ಮದ ಬಗ್ಗೆ ಒಲವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಭರತ್‌ರಾಜ್‌ ಜೈನ್‌ ಮುಡಾರು ಇವರು ಉತ್ತಮ ಮಾರ್ದವ ಧರ್ಮದ ಬಗ್ಗೆ ಉಪನ್ಯಾಸ ನೀಡಿದರು. ದಶಧರ್ಮಗಳು ನಮ್ಮನ್ನು ಧರ್ಮಾತ್ಮರನ್ನಾಗಿ ಮಾಡುವುದರ ಜೊತೆಗೆ ನಮ್ಮ ಆತ್ಮವನ್ನು ಕೇವಲ ಧರ್ಮಾತ್ಮರಲ್ಲಿ ಪರಮಾತ್ಮನಾಗಲು ಯೋಗ್ಯತೆ ಹೊಂದಿದೆ ಎನ್ನುವುದನ್ನು ಕೂಡ ಸೂಚಿಸುತ್ತದೆ. ಧರ್ಮಾತ್ಮನಾಗಲು ಅವಕಾಶವಿರುವುದು ಮನುಷ್ಯರಿಗೆ ಮಾತ್ರ. ನಾವೆಲ್ಲರೂ ನಮ್ಮ ಜೀವನದಲ್ಲಿ ದಶಧರ್ಮಗಳನ್ನು ಅಳವಡಿಸಿಕೊಂಡು ಪಾಲಿಸೋಣ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ದಿಗಂಬರ ತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿಯವರಾದ ವಿ. ಪ್ರವೀಣ್‌ ಕುಮಾರ್‌ ಇಂದ್ರ ಕಾರ್ಯಕ್ರಮದ ಅತಿಥೇಯರಾದ ಗುಣಪಾಲ ಅತಿಕಾರಿ ಕಡಂಬಿಲ, ಪ್ರಸನ್ನಾ ಆರ್‌. ಹೆಗ್ಡೆ, ಅರುಣ ಅಜಿತ್‌ ಕುಮಾರ್‌, ಪ್ರಿಯಕಾರಿಣಿ, ಸಂಭಾಷಿಣಿ ಉದಯ ಕುಮಾರ್‌ ಹಾಗೂ ಅಪಾರ ಸಂಖ್ಯೆಯಲ್ಲಿ ಶ್ರಾವಕ-ಶ್ರಾವಕಿಯು ಉಪಸ್ಥಿತರಿದ್ದರು. ಸಂಭಾಷಿಣಿ ಉದಯಕುಮಾರ್‌ ಪ್ರಾರ್ಥಿಸಿ, ಸಮಿತಿಯ ಕಾರ್ಯದರ್ಶಿ ವಿ. ಪ್ರವೀಣ್‌ ಕುಮಾರ್‌ ಇಂದ್ರ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸಮಿತಿಯ ಜೊತೆ ಕಾರ್ಯದರ್ಶಿ ಮಹಾವೀರ ಜೈನ ಮೂಡುಕೋಡಿಗುತ್ತುರವರು ನಿರೂಪಿಸಿ, ಧನ್ಯವಾದವಿತ್ತರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img