ಕತ್ತೋಡಿಯ ಹಿರಿಯರಾದ ಕೆ. ಜಗತ್ಪಾಲ ಮುದ್ಯರು ಇನ್ನಿಲ್ಲ
Published Date: 18-Aug-2025 Link-Copied
ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾಮದ ಕತ್ತೋಡಿ ಮನೆಯ ಹಿರಿಯ ಸದಸ್ಯರು, ನಿವೃತ್ತ ಗ್ರಾಮ ಲೆಕ್ಕಾಧಿಕಾರಿ, ಪ್ರಗತಿಪರ ಕೃಷಿಕರು ಆಗಿದ್ದ ಕೆ. ಜಗತ್ಪಾಲ ಮುದ್ಯ (95ವ) ಇವರು ಇಂದು ಮಧ್ಯಾಹ್ನ ನಿಧನ ಹೊಂದಿದರು. ಇವರು ಪತ್ನಿ ಕಮಲಾಜಿ, ಪುತ್ರ ಶ್ರೇಯಾಂಸ, ಪುತ್ರಿಯರಾದ ಶೈಲಶ್ರೀ, ಸೌರಭ ಹಾಗೂ ಸಹೋದರರು ಸಹೋದರಿಯರನ್ನು ಮತ್ತು ಅಪಾರ ಬಂಧು-ವರ್ಗವನ್ನು ಅಗಲಿದ್ದಾರೆ.