ದಕ್ಷಿಣ ಭಾರತ ಜೈನ ಸಭಾ ಸಾಂಗ್ಲಿ ಇದರ ಹುಬ್ಬಳ್ಳಿ ವಿಭಾಗೀಯ ನೂತನ ಪದಾಧಿಕಾರಿಗಳು
Published Date: 07-Aug-2025 Link-Copied
ದಕ್ಷಿಣ ಭಾರತ ಜೈನ ಸಭೆ ಸಾಂಗ್ಲಿ ಇದು ಜೈನ ಸಮುದಾಯದ ಅತ್ಯಂತ ಪ್ರತಿಷ್ಠಿತ ಮತ್ತು ಬಹು ರಾಜ್ಯಗಳ ಜೈನರ ಪ್ರಾತಿನಿಧಿಕ ಸಂಸ್ಥೆ ಎಂದೇ ಕರೆಯಲ್ಪಡುವ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ವಿವಿಧ ರೀತಿಯಲಿ ಸೇವೆಸಲ್ಲಿಸುತ್ತಿರುವ ಶತಮಾನದ ಇತಿಹಾಸ ಹೊಂದಿರುವ ಒಂದು ಬೃಹತ್ ಸಂಸ್ಥೆ. ಈ ಸಂಸ್ಥೆಯು ಹುಬ್ಬಳ್ಳಿ ವಿಭಾಗೀಯ ಆಡಳಿತ ಮಂಡಳಿಯನ್ನು ಹೊಂದಿದೆ. ಹುಬ್ಬಳ್ಳಿಯಲ್ಲಿ ದಿಗಂಬರ ಜೈನ ಬೋರ್ಡಿಂಗ ಶಾಖೆಯ ಮೂಲಕ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡದ್ದು ಇದಕ್ಕಾಗಿ ನೂತನವಾಗಿ ಪದಾಧಿಕಾರಿಗಳ ಆಯ್ಕೆ ಇತ್ತೀಚಿಗೆ ತ್ರೈವಾರ್ಷಿಕ ಅಧಿವೇಶನದಲ್ಲಿ ನಡೆಯಿತು. ಈ ವಿಭಾಗೀಯ ಪದಾಧಿಕಾರಿಗಲ್ಲಿ ಟ್ರಸ್ಟಿಯಾಗಿ ಹುಬ್ಬಳ್ಳಿ ನಗರದ ಖ್ಯಾತ ಚಾರ್ಟರ್ಡ್ ಅಕೌಂಟೆಂಟ್ ಆರ್. ಟಿ. ಅಣ್ಣಿಗೇರಿ, ಉಪಾಧ್ಯಕ್ಷರಾಗಿ ನವಲಗುಂದದ ಸಮಾಜದ ಮುಖಂಡರಾದ ಬಾಹುಬಲಿ ಬಸ್ತಿ, ಮಹಾಮಂತ್ರಿಯಾಗಿ ಹುಬ್ಬಳ್ಳಿಯ ಪ್ರಸಿದ್ದ ವ್ಯಾಪಾರೋದ್ಯಮಿ ಭರತರಾಜ ಆರ್ ಬೀಳಗಿ, ಮಹಿಳಾ ಮಹಾಮಂತ್ರಿಯಾಗಿ ಹಿರಿಯ ಧರ್ಮಾನುರಾಗಿ ಹಿರಿಯ ಶ್ರಾವಕಿ ಪಂಕಜಾ ಎಮ್. ಸೂಜಿ ಇವರು ಆಯ್ಕೆಯಾಗಿದ್ದಾರೆ. ಎಸ್. ಆರ್. ಮಲ್ಲಸಮುದ್ರ