Tue, Apr 29, 2025
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ವಿವಿಧ ಸ್ಪರ್ಧೆಗಳು
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಹಾಗೂ ಕರಾವಳಿ ಮತ್ತು ಮಲೆನಾಡಿನ ಜೈನ ಸಮಾಜ ಬಾಂಧವರ ಸಹಕಾರದೊಂದಿಗೆ ಭಗವಾನ್ ಶ್ರೀ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವ ಆಚರಣೆ ಪ್ರಯುಕ್ತ ಸರ್ವಧರ್ಮೀಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಏಪ್ರಿಲ್ 20ರ ಭಾನುವಾರದಂದು ಬೆಳಿಗ್ಗೆ 09.30ರಿಂದ ವಿದ್ಯಾಗಿರಿಯ ಕೃಷಿಸಿರಿ ವೇದಿಕೆಯಲ್ಲಿ ಸ್ಪರ್ಧೆಗಳು ನಡೆಯಲಿವೆ. ಸ್ಪರ್ಧೆಗಳ ವಿವರ: ೧) ಚಿತ್ರಕಲಾ ಸ್ಪರ್ಧೆ: • ಪ್ರಾಥಮಿಕ ಶಾಲಾ ವಿಭಾಗ: ವಿಷಯ: ಸುಂದರ ಪ್ರಕೃತಿ • ಪ್ರೌಢಶಾಲಾ ವಿಭಾಗ: ವಿಷಯ: ರಥೋತ್ಸವ ಸಮಯ: 1 ಗಂಟೆ ೨) ಭಾಷಣ ಸ್ಪರ್ಧೆ (ಕನ್ನಡ) • ಪ್ರೌಢಶಾಲಾ ವಿಭಾಗ: ವಿಷಯ: ಕ್ಷಮೆ ಮತ್ತು ಅಹಿಂಸೆಯ ಮಹತ್ವ • ಪಿಯುಸಿ/ಪದವಿ ವಿಭಾಗ: ವಿಷಯ: ವಿಶ್ವಶಾಂತಿ ಮತ್ತು ಜೈನಧರ್ಮ ಸಮಯ: 4+1 ನಿಮಿಷ ೩) ಭಾಷಣ ಸ್ಪರ್ಧೆ (ಇಂಗ್ಲೀಷ್) • ಪ್ರೌಢಶಾಲಾ ವಿಭಾಗ: ವಿಷಯ: ಕ್ಷಮೆ ಮತ್ತು ಅಹಿಂಸೆಯ ಮಹತ್ವ • ಪಿಯುಸಿ/ಪದವಿ ವಿಭಾಗ: ವಿಷಯ: ಜಾಗತಿಕ ಶಾಂತಿ ಹಾಗೂ ಜೈನಧರ್ಮ ಸಮಯ: 4+1 ನಿಮಿಷ ೪) ಪ್ರಬಂಧ ಸ್ಪರ್ಧೆ (ಕನ್ನಡ) • ಪ್ರೌಢಶಾಲಾ ವಿಭಾಗ: ವಿಷಯ: ಬದುಕಿ ಮತ್ತು ಬದುಕಲು ಬಿಡು ಸಮಯ: 30 ನಿಮಿಷಗಳು • ಪಿಯುಸಿ ಮತ್ತು ಪದವಿ ವಿಭಾಗ: ವಿಷಯ: ಭಾರತೀಯ ಸಂಸ್ಕೃತಿಗೆ-ಜೈನಧರ್ಮದ ಕೊಡುಗೆ ಸಮಯ: 45 ನಿಮಿಷಗಳು ೫) ಪ್ರಬಂಧ ಸ್ಪರ್ಧೆ (ಇಂಗ್ಲೀಷ್) • ಪ್ರೌಢಶಾಲಾ ವಿಭಾಗ: ವಿಷಯ: ಬದುಕಿ ಹಾಗೂ ಬದುಕಲು ಬಿಡಿ ಸಮಯ: 30 ನಿಮಿಷಗಳು • ಪಿಯುಸಿ ಮತ್ತು ಪದವಿ ವಿಭಾಗ: ವಿಷಯ: ಭಾರತೀಯ ಸಂಸ್ಕೃತಿಗೆ ಜೈನ ಧರ್ಮದ ಕೊಡುಗೆ ಸಮಯ: 45 ನಿಮಿಷಗಳು ಸ್ಪರ್ಧೆಗಳಲ್ಲಿ ಎಲ್ಲರಿಗೂ ಭಾಗವಹಿಸಲು ಮುಕ್ತ ಅವಕಾಶವಿದ್ದು, ಪ್ರತಿಯೊಂದು ವಿಭಾಗದ ಸ್ಪರ್ಧೆಗೂ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳಿರುತ್ತವೆ. ವಿದ್ಯಾರ್ಥಿಗಳು ಸ್ಪರ್ಧೆಗೆ ಬರುವಾಗ ತಪ್ಪದೇ ಶಾಲೆ ಅಥವಾ ಕಾಲೇಜಿನ ಗುರುತಿನ ಚೀಟಿ ಧರಿಸಿಕೊಂಡು ಬರಬೇಕು. ಒಬ್ಬರು ಒಂದು ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸುವ ಅವಕಾಶವಿದ್ದು, ಸ್ಪರ್ಧೆಯಲ್ಲಿ ಭಾಗವಹಿಸುವವರು ಏಪ್ರಿಲ್15ರ ಒಳಗೆ ತಮ್ಮ ಹೆಸರನ್ನು ಈ ವಾಟ್ಸಾಪ್ ನಂಬರ್ ಮೂಲಕ- 9448625888/ 9480600507 ತಿಳಿಸುವಂತೆ ಕೋರಲಾಗಿದೆ.