Tue, May 13, 2025
ಬಂಟ್ವಾಳ: ಜೈನ್ ಮಿಲನ್ ಮಾಸಿಕ ಸಭೆ
ಬಂಟ್ವಾಳ: ಜೈನ್ ಮಿಲನ್ ಮಾಸಿಕ ಸಭೆಯು ದಿನಾಂಕ 23.03.2025ನೇ ಭಾನುವಾರ ಶ್ರೀ ಆದಿನಾಥ ತೀರ್ಥ0ಕರ ಜಿನಚೈತ್ಯಾಲಯದ ವಾರ್ಷಿಕೋತ್ಸವದಂದು ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಿಲನ್ ಅಧ್ಯಕ್ಷರಾದ ಮಧ್ವರಾಜ್ ಜೈನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜೈನ್ ಮಿಲನ್ ವಲಯ ಉಪಾಧ್ಯಕ್ಷರಾದ ಸುದರ್ಶನ್ ಜೈನ್, ಮಂಗಳೂರು ವಿಭಾಗ ಕಾರ್ಯದರ್ಶಿಗಳಾದ ಸುಭಾಶ್ಚಂದ್ರ ಜೈನ್,ವಲಯ ನಿರ್ದೇಶಕರಾದ ಪ್ರಮೋದ್ ಕುಮಾರ್ ಉಜಿರೆ ಸಭೆಯನ್ನುದ್ದೇಶಿಸಿ ಮಾತನಾಡಿದರು. ಮಂಗಳೂರು ವಿಭಾಗ ನಿರ್ದೇಶಕರಾದ ಸುಕುಮಾರ ಬಲ್ಲಾಳ್ ಧಾರ್ಮಿಕ ಚೌಕಟ್ಟಿನಲ್ಲಿ ಜೈನ ಸಮಾಜದ ಸಂಘಟನೆ ಎಂಬ ವಿಷಯದ ಬಗ್ಗೆ ಮಾತನಾಡುತ್ತಾ ಸಮಾಜದ ಯುವ ಜನರಲ್ಲಿ ಸಂಘಟನೆ, ಸಂಸ್ಕಾರ, ಸಂಸ್ಕೃತಿ ಮತ್ತು ಪರಂಪರೆ ಉಳಿಸುವ ಹಾಗೂ ಬೆಳೆಸುವ ಕೆಲಸಗಳು ಆಗಬೇಕು ಆಗ ಸಮಾಜ ಜಾಗೃತವಾಗುತ್ತದೆ ಎಂದು ತಿಳಿಸಿದರು . ಕಾರ್ಯಕ್ರಮದಲ್ಲಿ ಯಾವುದೇ ಪ್ರಚಾರವಿಲ್ಲದೆ ಸಮಾಜದ ಸೇವೆಯನ್ನು ಮಾಡುತ್ತಿರುವ ಪ್ರವೀಣ್ ಕುಮಾರ್ ಬಸ್ತಿಪಡ್ಫು , ಸಪ್ನ ಚಂದ್ರಪ್ರಭ ಬೈಪಾಸ್ ಬಂಟ್ವಾಳ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ವೇದಿಕೆಯಲ್ಲಿ ಜೈನ್ ಮಿಲನ್ ಕಾರ್ಯದರ್ಶಿಗಳಾದ ಭರತ್ ಕುಮಾರ್, ಕೋಶಾಧಿಕಾರಿ ಗೀತಾ ಜಿನಚಂದ್ರ ಉಪಸ್ಥಿತರಿದ್ದರು. ಕಾಂಚನಶ್ರೀಮದ್ವರಾಜ್ ಮತ್ತು ಮಮತಾ ಸುಭಾಶ್ಚಂದ್ರ ಜೈನ್ ಸನ್ಮಾನಿತರ ಪರಿಚಯವನ್ನು ಮಾಡಿದರು. ಶೈಲಜಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಿವಪ್ರಕಾಶ್ ಜೈನ್ ಸ್ವಾಗತಿಸಿ, ಗೀತಾ ಜಿನಚಂದ್ರ ಧನ್ಯವಾದವಿತ್ತರು. ವಿಭಾಗ ಕಾರ್ಯದರ್ಶಿಗಳಾದ ಸುಭಾಶ್ಚಂದ್ರ ಜೈನ್ ಕಾರ್ಯಕ್ರಮವನ್ನು ನಿರೂಪಿಸಿದರು.