Sun, May 4, 2025

Sun, May 4, 2025


ನೆಲ್ಲಿಕಾರು ಮಹಾರಥಯಾತ್ರಾ ಮಹೋತ್ಸವ


Logo

Published Date: 29-Mar-2025

ಮೂಡುಬಿದಿರೆ: ಅತಿಶಯ ಶ್ರೀ ಕ್ಷೇತ್ರ ನೆಲ್ಲಿಕಾರಿನಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಭಗವಾನ್ ೧೦೦೮ ಶ್ರೀ ಅನಂತನಾಥ ಸ್ವಾಮಿ ಮತ್ತು ಶ್ರೀ ಬ್ರಹ್ಮಯಕ್ಷ ದೇವರ ಮಹಾರಥಯಾತ್ರಾ ಮಹೋತ್ಸವವು 30-03-2025ನೇ ಆದಿತ್ಯವಾರ ಮೊದಲ್ಗೊಂಡು ದಿನಾಂಕ 05-04-2025ನೇ ಶನಿವಾರ ಪರ್ಯಂತ ಜರಗಲಿರುವುದು. ದಿನಾಂಕ 04-04-2025ನೇ ಶುಕ್ರವಾರ ಮಹಾರಥಯಾತ್ರಾ ಮಹೋತ್ಸವವು ಕಾರ್ಕಳ ದಾನಶಾಲೆ ಶ್ರೀ ಜೈನ ಮಠದ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಬೆಳಿಗ್ಗೆ ಗಂಟೆ 8-15ರಿಂದ ಭಗವಾನ್ ಶ್ರೀ ಅನಂತನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕ, ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಗೆ ಕ್ಷೀರಾಭಿಷೇಕ, ಶ್ರೀ ಬ್ರಹ್ಮದೇವರಿಗೆ ಪಂಚಾಮೃತ ಅಭಿಷೇಕ. ಶ್ರೀಬಲಿ ವಿಧಾನ, ರಥ ಸಂಪ್ರೋಕ್ಷಣೆ, ಲಕ್ಷ ಹೂವಿನ ಪೂಜೆ, ರಥಾರೋಹಣಕ್ಕೆ ಪ್ರಸಾದ ಬೇಡಿಕೆ. ಮಧ್ಯಾಹ್ನ ಗಂಟೆ 12-00ಕ್ಕೆ ಮಹಾನೈವೇದ್ಯ ಪೂಜೆ, ಮಹಾಮಂಗಳಾರತಿ, ಶ್ರೀ ಸರ್ವಾಹ್ಣಯಕ್ಷರ ಶ್ರೀವಿಹಾರ, ಗ್ರಾಮ ಬಲಿ ಮಧ್ಯಾಹ್ನ ಗಂಟೆ 12-35ಕ್ಕೆ ಶ್ರೀ ಬ್ರಹ್ಮಯಕ್ಷ ದೇವರ ದರ್ಶನ ಪಾತ್ರಿಯೊಂದಿಗೆ ಭಗವಾನ್‌ ಶ್ರೀ ಅನಂತನಾಥ ಸ್ವಾಮಿಯ ರಥಾರೋಹಣ. ನಂತರ ಸಂಘಸಂತರ್ಪಣೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ. ರಾತ್ರಿ ಗಂಟೆ 7-00ಕ್ಕೆ ಸಮವಸರಣ ಪೂಜೆ. ರಾತ್ರಿ ಗಂಟೆ 10-00ಕ್ಕೆ ರಥೋತ್ಸವ. ನಂತರ ಭಗವಾನ್ ಶ್ರೀ ಅನಂತನಾಥ ಸ್ವಾಮಿಗೆ ೧೦೮ ಕಲಶಗಳಿಂದ ಮಹಾಭಿಷೇಕ, ಉತ್ಸವ. ದಿನಾಂಕ 04-04-2025ನೇ ಶುಕ್ರವಾರ ಸಂಗೀತ ಪೂಜಾಷ್ಟಕ ಶರ್ಮಿಳಾ ಜಿನೇಶ್ ಹಾಸನ ಮತ್ತು ಬಳಗದವರಿಂದ ದಿನಾಂಕ 04-04-2025ನೇ ಶುಕ್ರವಾರ ರಾತ್ರಿ ಗಂಟೆ 11.00ರಿಂದ ತುಳು ತೆಲಿಕೆದ ನಾಟಕ ಕಾಪಿಕಾಡ್‌ ವಾಮಂಜೂರು ಸಾಯಿ ಅಭಿನಯದ ಚಾಪರ್ಕ ಕಲಾವಿದರಿಂದ ತೆಲಿಕೆದ ಬೊಳ್ಳಿ ಡಾ|| ದೇವದಾಸ್ ಕಾಪಿಕಾಡ್‌ರವರ ವಿನೂತನ ಶೈಲಿಯ ತುಳು ಹಾಸ್ಯಮಯ ನಾಟಕ ಏರ್ಲಾ ಗ್ಯಾರಂಟಿ ಅತ್ತ್.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img